ಹುಳಿಯಾರು: ಚಿಕ್ಕನಾಯಕನಹಳ್ಳಿ ತಾಲೂಕು ತೋಟಗಾರಿಗೆ ಇಲಾಖೆ ಸರ್ಕಾರದ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ರೈತರಿಗೆ ತಲುಪಿಸದಿದ್ದರೆ ರೈತ ಸಂಘದಿAದ ತೋಟಗಾರಿಗೆ ಇಲಾಖೆ ಮುಂದೆ ಲೆಕ್ಕ ಕೊಡಿ ಚಳುವಳಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಎಚ್ಚರಿಕೆ ನೀಡಿದ್ದಾರೆ.
ಹುಳಿಯಾರು ರೈತ ಸಂಪರ್ಕ ಕೇಂದ್ರದ ಬಳಿ ತೋಟಗಾರಿಗೆ ಹಾಗೂ ಕೃಷಿ ಇಲಾಖೆಯ ವಿರುದ್ಧ ಹೊಸಹಳ್ಳಿ ಚಂದ್ರಣ್ಣ ಬಣ ರಾಜ್ಯ ರೈತ ಸಂಘ ಹಮ್ಮಿಕೊಂಡಿದ್ದ ಸಾಂಕೇತಿಕ ಪ್ರತಿಭಟನೆಯಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ತೆಂಗಿಗೆ ಬಿಳಿ ಕೀಟದ ಕಾಟ ಹೆಚ್ಚಾಗಿ ತೆಂಗನ್ನೇ ನಂಬಿದ್ದ ಸಾವಿರಾರು ರೈತರು ಚಿಂತಾಕ್ರಾAತರಾಗಿದ್ದಾರೆ. ಅಧಿಕಾರಿಗಳು ಕಛೇರಿ ಬಿಟ್ಟು ರೈತರ ತೋಟಗಳಿಗೆ ಭೇಟಿ ನೀಡಿ ಕೀಟ ಹತೋಟಿಗೆ ಮಾರ್ಗೋಪಾಯ ಹೇಳುತ್ತಿಲ್ಲ. ಸರ್ಕಾರಕ್ಕೆ ವರದಿ ಕಳುಹಿಸಿ ಉಚಿತ ಔಷಧಿ ಹಾಗೂ ಪರಿಹಾರ ತರಿಸುತ್ತಿಲ್ಲ ಎಂದು ಆರೋಪಿಸಿದರು.
ಹೊಸದಾಗಿ ತೆಂಗು, ಬಾಳೆ, ಮಾವು, ಪಪ್ಪಾಯಿ ದಾಳಿಂಬೆ, ಗೋಡಂಬಿ, ಸೀಬೆ, ಹಲಸು, ಸಪೋಟ ಹೀಗೆ ತೋಟಗಾರಿಗೆ ಬೆಳೆಗಳ ನಾಟಿ ಮಾಡಲು ಸಹಾಯಧನ ನೀಡುವುದಾಗಿ ಕಳೆದ ಹತ್ತನ್ನೆರಡು ವರ್ಷಗಳಿಂದ ಪತ್ರಿಕೆಗಳಲ್ಲಿ ಪ್ರಚಾರ ಮಾಡುತ್ತರಾದರೂ ಯಾವ ರೈತನಿಗೂ ಈ ಸೌಲಭ್ಯ ತಲುಪಿಸುತ್ತಿಲ್ಲ. ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿ ವಾರ್ಷಿಕ ಕನಿಷ್ಟ ೧೦೦ ರೈತರಿಗೆ ಈ ಸೌಲಭ್ಯ ಕಲ್ಪಿಸಿದ್ದರೆ ಇಷ್ಟೊತ್ತಿಗೆ ಸಾವಿರಾರು ರೈತರು ಹಣ್ಣಿನ ಬೆಳೆ ಬೆಳೆದು ತೆಂಗಿನ ಜೊತೆ ಹಣ್ಣು ಬೆಳೆಯುವ ತಾಲೂಕಾಗಿ ಮಾರ್ಪಾಡಾಗುತ್ತಿತ್ತು ಎಂದು ಅಭಿಪ್ರಾಯಪಟ್ಟರು.
ಜೇನು ಪೆಟ್ಟಿಗೆಗೆ ಅರ್ಜಿ ಹಾಕಿದರೂ ಜೇನು ಪೆಟ್ಟಿಗೆಗಳು ಸಿಗುತ್ತಿಲ್ಲ ಎಂದು ರೈತರು ಆರೋಪಿಸುತ್ತಿದ್ದಾರೆ. ಹಾಗಾದರೆ ತಾಲೂಕಿಗೆ ಬರುವ ಜೇನು ಪೆಟ್ಟಿಗೆಗಳು ಯಾವ ತಾಲೂಕಿಗೆ ಹೋಗುತ್ತಿವೆ ತಿಳಿಯದಾಗಿದೆ. ಅಲ್ಲದೆ ಉದ್ಯೋಗ ಖಾತ್ರಿ ಯೋಜನೆಯಡಿ ಅನೇಕ ಕೆಲಸಕಾರ್ಯಗಳನ್ನು ಮಾಡಬಹುದಾಗಿದ್ದರೂ ಸಹ ಅಧಿಕಾರಿಗಳ ನಿರ್ಲಕ್ಷö್ಯತೆಯಿಂದ ತಾಲೂಕಿನಲ್ಲಿ ಗುರಿ ಸಾಧಿಸಲಾಗುತ್ತಿಲ್ಲ. ಕೆಲಸ ಮಾಡಿದರೂ ಎನ್ಎಂಆರ್ ತೆಗೆಯದೆ ನಿತ್ಯ ಅಲೆಸುತ್ತಿದ್ದಾರೆ. ಈ ರೀತಿಯ ನಿರ್ಲಕ್ಷö್ಯದೋರಣೆಯಿಂದ ಹೊರಬಂದು ರೈತರಿಗೆ ಕೆಲಸಕಾರ್ಯ ಮಾಡಿಕೊಡದಿದ್ದರೆ ಪ್ರತಿಭಟನೆಯ ಹಾದಿ ತುಳಿಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಸೋಮಜ್ಜನಪಾಳ್ಯದ ಪುಟ್ಟಯ್ಯ, ಹುಳಿಯಾರು ತಿಮ್ಮಯ್ಯ, ತಮ್ಮಡಿಹಳ್ಳಿ ಗೊಲ್ಲರಹಟ್ಟಿ ನಿಂಗಪ್ಪ, ಶ್ರೀನಿವಾಸ್, ಚಂದ್ರಶೇಖರರಾವ್, ಪುಷ್ಟಬಾಯಿ, ಚಂದ್ರಯ್ಯ, ಎಚ್.ಬಿ.ಕೃಷ್ಣಮೂರ್ತಿ, ಪೆದ್ದಾಬೋವಿ, ನೀರಾಈರಣ್ಣ, ನಂದಿಹಳ್ಳಿ ರೇವಣ್ಣ, ಜಯಣ್ಣ, ಮೆಕಾನಿಕ್ ಜಗದೀಶ್, ಎನ್.ಆರ್.ಗಂಗಣ್ಣ, ಎನ್.ಶಿವಣ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸಹಕಾರ ಸಂಘದಲ್ಲಿ ಗೊಬ್ಬರ ಸ್ಟಾಕ್ ಮಾಡಿ
ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ರಾಗಿ ಬೆಳೆ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಈ ಬೆಳೆಗೆ ಅಗತ್ಯವಾದ ಬೀಜ ಮತ್ತು ಗೊಬ್ಬರವನ್ನು ಸಹಕಾರ ಸಂಘದಲ್ಲಿ ಸ್ಟಾಕ್ ಮಾಡಿಟ್ಟುಕೊಳ್ಳಲು ಕೃಷಿ ಇಲಾಖೆಯ ಅಧಿಕಾರಿಗಳು ಸೂಚನೆ ನೀಡಬೇಕು. ಈಗ ಪಂಚಾಯ್ತಿಗೊAದು ಸಹಕಾರ ಸಂಘಗಳಿರುವುದರಿAದ ಆಯಾ ಪಂಚಾಯ್ತಿಯ ರೈತರು ಇದರ ಸೌಲಭ್ಯ ಪಡದುಕೊಂಡರೆ ಪಟ್ಟಣಕ್ಕೆ ಬಂದೋಗುವ ಸಮಯ ಹಾಗೂ ಹಣ ಎರಡೂ ಉಳಿಯುತ್ತದೆ. ಇಲ್ಲವಾದರೆ ಪಟ್ಟಣಕ್ಕೆ ಬಂದು ಹೆಚ್ಚು ಬೆಲೆಗೆ ಗೊಬ್ಬರ ಖರೀದಿಸುವ ಅನಿವಾರ್ಯತೆ ನಿರ್ಮಾಣವಾಗುತ್ತದೆ.
> ಹೊಸಹಳ್ಳಿ ಚಂದ್ರಣ್ಣ, ರಾಜ್ಯಾಧ್ಯಕ್ಷ, ರೈತ ಸಂಘ