ತುಮಕೂರು: ಭಾರತ ಸರಕಾರ ಹಣಕಾಸು ಇಲಾಖೆಯ ಅಡಿಯಲ್ಲಿ ಬರುವ ಹಣಕಾಸು ಸಾಕ್ಷರತೆ ಯೋಜನೆಯಲ್ಲಿ ಜನರಿಗೆ ಡಿಜಿಟಲೀಕರಣದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಮೊಬೈಲ್ ಡಿಜಿಟಲ್ ವಾಹನಕ್ಕೆ ಚಾಲನೆ ನೀಡಲಾಗಿದೆ. ಇದರ ಸದುಪಯೋಗವನ್ನು ಗ್ರಾಮೀಣ ಜನರು ಪಡೆದುಕೊಳ್ಳಬೇಕೆಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಪ್ರವಾಸಿ ಮಂದಿರದಲ್ಲಿ ಇರುವ ತಮ್ಮ ಕಚೇರಿಯಲ್ಲಿ ತುಮಕೂರು ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಸಂಚರಿಸಿ, ಜನಸಾಮಾನ್ಯರಿಗೆ ಅಗತ್ಯವಿರುವ ಡಿಜಿಟಲ್ ಸೇವೆ ಒದಗಿಸುವ ಮೊಬೈಲ್ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು,ಈ ಮೊಬೈಲ್ ಸಿಎನ್ಸಿ ಸೆಂಟರ್ನಿ0ದ ಕೇಂದ್ರ ಮತ್ತು ರಾಜ್ಯ ಸರಕಾರಗಳ ಎಲ್ಲಾ ಯೋಜನೆಗಳ ಫಲಾನುಭವಿಗಳಿಗೆ ಅನುಕೂಲವಾಗಲಿದೆ.sÀಸಲ್ ಭೀಮಾದಿಂದ ಹಿಡಿದು,ಕೃಷಿಕ ಸನ್ಮಾನ್ ಸೇರಿದಂತೆ ಎಲ್ಲಾ ನೇರ ನಗದು ವರ್ಗಾವಣೆ ಯೋಜನೆಗಳ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ ಎಂದರು.
ತುಮಕೂರು ಜಿಲ್ಲೆಯ ಸರ್ವಾಂಗೀಣ ಅಭಿವೃದ್ದಿಯಲ್ಲಿ ದಾಪುಗಾಲು ಇಡುವ ನಿಟ್ಟಿನಲ್ಲಿ ಆಗಿಂದಾಗ್ಗೆ ಹಿರಿಯ ಮಂತ್ರಿಗಳು, ಅಧಿಕಾರಿಗಳನ್ನು ಭೇಟಿಯಾಗುವುದು ಸಾಮಾನ್ಯವಾಗಿದೆ.ಕೆ,ಎನ್.ರಾಜಣ್ಣ ಅವರ ಸೆಪ್ಟಂಬರ್ ಕ್ರಾಂತಿ ಕುರಿತು ಮಾತನಾಡಿದ ವಿ.ಸೋಮಣ್ಣ, ಸಿದ್ದರಾಮಯ್ಯ ನೇತೃತ್ವದ ಸರಕಾರದ ಸಂಪೂರ್ಣ ಆಡಳಿತ ಕುಸಿದಿದೆ.ಆಡಳಿತ ಪಕ್ಷದ ಶಾಸಕರೇ ಮಾತನಾಡುತಿದ್ದಾರೆ.ಕೆ.ಎನ್.ರಾಜಣ್ಣನವರು ಯಾವ ಅರ್ಥದಲ್ಲಿ ಇದನ್ನು ಹೇಳಿದ್ದಾರೋ ಗೊತ್ತಿಲ್ಲ. ಆದರೆ ಸರಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಈ ಹೇಳಿಕೆ ಸಾಕ್ಷಿಯಾಗಿದೆ.ಜನರ ನೋವು ಹೆಚ್ಚಾದಾಗ ಅದು ಸ್ಪೋಟಗೊಳ್ಳತ್ತದೆ. ಸರಕಾರ ಎಚ್ಚೆತ್ತುಕೊಳ್ಳದಿರುವುದು ದುರದೃಷ್ಟಕರ ಎಂದರು.
ಭಾರತೀಯ ಜನತಾ ಪಾರ್ಟಿಗೆ ವಿ.ಸೋಮಣ್ಣ ಅವರಾಗಲಿ, ಮಾಧುಸ್ವಾಮಿ ಯಾರು ಮುಖ್ಯರಲ್ಲ. ಯಾರು ಇಲ್ಲದಿದ್ದರೂ ಪಕ್ಷ ನಡೆದುಕೊಂಡು ಹೋಗುತ್ತದೆ. ನಾನು ಕೇಂದ್ರದ ಮಂತ್ರಿಯಾಗಿದ್ದೇನೆ ಅಷ್ಟೇ ಗೊತ್ತು, ಬಿಜೆಪಿ ರಾಜ್ಯಾಧ್ಯಕ್ಷ ಮತ್ತಿತರರ ಹುದ್ದೆಗಳ ಬಗ್ಗೆ ನನಗೆ ಗೊತ್ತಿಲ್ಲ.ಅದೆಲ್ಲಾ ಪಕ್ಷದ ಹೈಕಮಾಂಡ್ಗೆ ಬಿಟ್ಟ ವಿಚಾರ ಎಂದು ವಿ.ಸೋಮಣ್ಣ ನುಡಿದರು.
ಬೆಳ್ಳಾವಿ ಸಿ.ಎಸ್.ಸಿ ಬೆಳ್ಳಾವಿಯ ದೀಪಕ್.ಪಿ. ಮಾತನಾಡಿ, ಕೇಂದ್ರ ಸರಕಾರದ ಡಿಜಿಟಲ್ ತಂತ್ರಜ್ಞಾನ ಇಲಾಖೆಯಿಂದ ಸಂಚಾರಿ ಸೇವಾ ಕೇಂದ್ರವನ್ನು ನಮ್ಮ ಸಂಸ್ಥೆಗೆ ನೀಡಿದೆ.ಇದರ ಉದ್ಘಾಟನೆಯನ್ನು ಇಂದು ಕೇಂದ್ರ ಸಚಿವರಾದ ವಿ.ಸೋಮಣ್ಣ ನೆರವೇರಿಸಿದ್ದು,ಬೆಳ್ಳಾವಿ ಹೋಬಳಿಯ ಎಲ್ಲಾ ಹಳ್ಳಿಗಳಿಗೂ ಸಂಚಾರಿ ಸೇವಾ ಕೇಂದ್ರ ಸಂಚರಿಸಲಿದೆ.ಕೇ0ದ್ರ ಮತ್ತು ರಾಜ್ಯ ಸರಕಾರದ ಎಲ್ಲಾ ಡಿಜಿಟಲ್ ಯೋಜನೆಗಳನ್ನು ಜನರ ಮನೆ ಬಾಗಿಲಿನಲ್ಲಿಯೇ ಒದಗಿಸಲಿದ್ದೇವೆ ಎಂದರು.
ಈ ವೇಳೆ ಶಾಸಕರಾದ ಜಿ.ಬಿ.ಜೋತಿಗಣೇಶ್,ಸಿ.ಎಸ್.ಸಿ ಜಿಲ್ಲಾ ವ್ಯವಸ್ಥಾಪಕ ಲೋಕೇಶ್,ದೀಪಕ ಅಖಿಲ ಭಾರತ ವೀರಶೈವ ಮಹಾಸಭಾದ ಯುವ ಘಟಕದ ಅಧ್ಯಕ್ಷ ಡಾ.ದರ್ಶನ್.ಕೆ.ಎಸ್, ಬ್ಯಾಟರಂಗೇಗೌಡ, ಧನಿಯಕುಮಾರ್,ಶಿವಪ್ರಸಾ ದ್,ಭೈರಣ್ಣ ಮತ್ತಿತರರ ಮುಖಂಡರು ಉಪಸ್ಥಿತರಿದ್ದರು.
(Visited 1 times, 1 visits today)