BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಸಮ ಸಮಾಜದ ಕನಸು ಹೊತ್ತು ದುಡಿದವರು ಬ್ರಹ್ಮರ್ಷಿ ನಾರಾಯಣಗುರುಗಳು: ಅಪರ ಜಿಲ್ಲಾಧಿಕಾರಿ ಹೇಳಿಕೆ
  • ನ್ಯಾಯ ಇರುವಡೆ ಶಾಂತಿ, ಸಾಮರಸ್ಯದ ಬದುಕು ಸಾಧ್ಯ
  • ರಾಜ್ಯದಲ್ಲೇ ವಿಶಿಷ್ಟ ಮನೆಬಾಗಿಲಿಗೆ ಮನೆಮಗ ಕಾರ್ಯಕ್ರಮದಲ್ಲಿ ಜನರ ವಾಸ್ತವ ಸಮಸ್ಯೆಗಳ ಅರಿವು: ಶಾಸಕ ಸಿ. ಬಿ. ಸುರೇಶ್ ಬಾಬು
  • ಸಮಾಜದ ಕಟ್ಟಕಡೆಯ ವ್ಯಕ್ತಿಗೂ ವಿದ್ಯುತ್ ಅವಶ್ಯಕ
  • ಆಚಾರ ವಿಚಾರಗಳು ಉಳಿಯಬೇಕಾದರೆ ಗ್ರಾಮದಲ್ಲಿ ದೇವಾಲಯ, ಧಾರ್ಮಿಕ ಕ್ಷೇತ್ರಗಳು ನಿರ್ಮಾಣಗೊಳ್ಳಬೇಕು
  • ಭಾರತ ಅದರಲ್ಲೂ ಕರ್ನಾಟಕದಲ್ಲಿ ಇರುವಂತಹ ಪ್ರತಿಭಾನ್ವಿತರು ಬೇರೆಲ್ಲಿಯೂ ಸಹ ನೋಡಲು ಸಾಧ್ಯವಿಲ್ಲ – ಶಾಸಕ ಟಿ.ಬಿ. ಜಯಚಂದ್ರ.
  • ಮುಸ್ಲಿಮರನ್ನು ತಪ್ಪು ದಾರಿಗೆಳೆಯುವ, ಭದ್ರತಾ ಆತಂಕ
  • ಕೆ.ಎನ್.ರಾಜಣ್ಣ ವಜಾ ಖಂಡಿಸಿ ಧರಣಿ ಸತ್ಯಾಗ್ರಹ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ನ್ಯಾಯ ಇರುವಡೆ ಶಾಂತಿ, ಸಾಮರಸ್ಯದ ಬದುಕು ಸಾಧ್ಯ
ತುಮಕೂರು

ನ್ಯಾಯ ಇರುವಡೆ ಶಾಂತಿ, ಸಾಮರಸ್ಯದ ಬದುಕು ಸಾಧ್ಯ

By News Desk BenkiyabaleUpdated:September 08, 2025 3:00 pm

ತುಮಕೂರು: ನ್ಯಾಯ ಇರುವಡೆ ಶಾಂತಿ, ನೆಮ್ಮದಿ, ಸಮಾಧಾನ,ಸೌಹಾರ್ಧತೆ,ಸಾಮರಸ್ಯದ ಬದುಕು ಸಾಧ್ಯ ಎಂದು ಹಿರಿಯ ಪ್ರಾಧ್ಯಾಪಕ ಹಾಗು ಪ್ರವಾಚಕ ಲಾಲ್ ಹುಸೇನ್ ಕುಂದಗಲ್ ತಿಳಿಸಿದ್ದಾರೆ.
ನಗರದ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಜಮಾಆತೆ ಇಸ್ಲಾಮಿ ಹಿಂದ್ ವತಿಯಿಂದ ಆಯೋಜಿಸಿದ್ದ ನ್ಯಾಯದ ಹರಿಕಾರ ಪ್ರವಾದಿ ಮಹಮದ್(ಸ), ಸಿರತ್ ಅಭಿಯಾನದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು,ನಿಜವಾದ ಧರ್ಮನಿಷ್ಠೆ ಎಂದರೆ ದೇವರ ಆರಾಧನೆಯಲ್ಲಿ ತೊಡಗುವುದಲ್ಲ,ನ್ಯಾಯದ ಪರ ನಿಲ್ಲುವುದು.ಇದನ್ನು ಪ್ರವಾದಿ ಮಹಮದ(ಸ)ಅವರು ಬದುಕಿನ ಲ್ಲಿಯೂ ಕಾಣಬಹುದಾಗಿದೆ ಎಂದರು.
ನ್ಯಾಯ ನೀಡುವಾಗ ಬಡವರು,ಶ್ರೀಮಂತರು, ಮೇಲು, ಕೀಳು ಎಂಬ ಭಾವನೆ ಬಂದರೆ ಅದು ಅರಾಜಕತೆಗೆ ದಾರಿ ಮಾಡಿಕೊಡುತ್ತದೆ.ತನ್ನ ಹೆತ್ತವರು,ಒಡಹುಟ್ಟಿದವರು ತಪ್ಪು ಮಾಡಿದ್ದರೆ ಅದಕ್ಕೆ ಶಿಕ್ಷೆ ವಿಧಿಸುವುದೇ ನಿಜವಾದ ನ್ಯಾಯ ಎಂದು ಪ್ರವಾದಿ ಮಹಮದ್(ಸ) ಅವರು ಪ್ರತಿಪಾದಿಸಿದ್ದಾರೆ. ಧರ್ಮ, ಜಾತಿ ಮೀರಿ ನ್ಯಾಯ ಕೆಲಸ ಮಾಡಬೇಕು.ನಿನ್ನೆಲ್ಲಾ ತಪ್ಪುಗಳ ಲೆಕ್ಕ ಭಗವಂತನ ಬಳಿ ಇವೆ.ಅವನಿಂದ ಎನ್ನನ್ನು ಮುಚ್ಚಿಡಲು ಸಾಧ್ಯವಿಲ್ಲ ಎನ್ನುವ ಮೂಲಕ ೧೨ನೇ ಶತಮಾನದಲ್ಲಿ ಬಸವಣ್ಣವರು ಪ್ರತಿಪಾದಿಸಿದ ದೇವರ ಕಲ್ಪನೆಯನ್ನು ೧೫೦೦ ವರ್ಷಗಳ ಹಿಂದೆ ಪ್ರವಾದಿ ಮಹಮದ್(ಸ)ರವರು ಮನಗಾಣುವಂತೆ ತಿಳಿಸಿದ್ದರು ಎಂದು ಲಾಲ್ ಹುಸೇನ್ ಕಂದಗಲ್ ತಿಳಿಸಿದರು.
ಪ್ರವಾದಿ ಮಹಮದ್(ಸ)ರ ಜನ್ಮ ದಿನಾಚರಣೆ ಮಿಲಾದುನ್ನಿ ಎಂದರೆ ಅದ್ದೂರಿ ಮೆರವಣಿಗೆ ಮಾತ್ರವಲ್ಲ.ಮನುಷ್ಯನ ಸಂಕಷ್ಟಕ್ಕೆ ಮಿಡಿಯುವುದು.ಹಬ್ಬ ಹರಿದಿನಗಳು ಮನುಷ್ಯರನ್ನು ಒಂದುಗೂಡಿಸಬೇಕೇ ಹೊರತು ವಿಘಟಿಸುವ ಕೆಲಸ ಆಗಬಾರದು.ಭಾರತ ಬಹುತ್ವಗಳ ರಾಷ್ಟç.ಕರ್ನಾಟಕ ಸರ್ವಜನಾಂಗಗಳ ಶಾಂತಿಯ ತೋಟ.ಇನ್ನೊಬ್ಬರ ಸ್ವಾರ್ಥಕ್ಕೆ ಬಲಿಯಾಗುವುದು ಬೇಡ.ಒಬ್ವ ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು,ಧರ್ಮಗ್ರಂಥಗಳ ಬಗ್ಗೆ ಪೂರ್ವಾಗ್ರಹ ಪೀಡಿತ ವ್ಯಾಖ್ಯಾನ ತಪ್ಪಬೇಕು. ಪರಸ್ವರ ಕಲೆತು ಭಾರತದ ಏಕತೆ ಮತ್ತು ಸಮಗ್ರತೆಗೆ ಕೆಲಸ ಮಾಡುವ ಸೌಹಾರ್ಧ ವಾತಾವರಣ ಸೃಷ್ಟಿಯಾಗಬೇಕೆಂದು ಲಾಲ್ ಹುಸೇನ್ ಕಂದಗಲ್ ನುಡಿದರು.
ಶಾಂತಿ ಪ್ರಕಾಶನ ಹೊರತಂದಿರುವ ಪ್ರವಾದಿ ಮಹ ಮದ್(ಸ) ಅರಿಯಿರಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಇತಿಹಾಸ ಪ್ರಾಧ್ಯಾಪಕ ಡಾ.ಸಿದ್ದಲಿಂಗಯ್ಯ,ಪ್ರವಾದಿಗಳು ಜ್ಞಾನಕ್ಕೆ ಹೆಚ್ಚು ಮಹತ್ವ ನೀಡಿದವರು. ಹಾಗಾಗಿ ಅವರ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಅಗತ್ಯವಿದೆ.ನಮ್ಮಲ್ಲಿ ಅರಿಯುವಲ್ಲಿ ಅಂತರವಿಲ್ಲ.ಆದರೆ ಅರಿತವರ ನಡುವೆ ಅಂತರವಿದೆ.ಪ್ರವಾದಿಗಳು ಶಾಂತಿ, ಕರುಣೆ, ಪ್ರೀತಿಯ ಸಂಕೇತ.ಧರ್ಮ ಗ್ರಂಥಗಳನ್ನು ಪೂರ್ವಾಗ್ರಹ ಪೀಡಿತರಾಗಿ ನೋಡುವ ಮನಸ್ಥಿತಿ ಬದಲಾಗಬೇಕು. ದಾರಿ ತಪ್ಪಿಸುವ ಕೆಲಸ ಆಗಬಾರದು.ಬಹುತ್ವದ ನಡುವೆ ನಾವು ಬದುಕುತಿದ್ದೇವೆ ಎಂಬ ಅರಿವು ನಮಗಿರಬೇಕು ಎಂದರು.
ಭಾರತೀಯ ಸಮಾಜದಲ್ಲಿ ಪ್ರವಾದಿ ಮಹಮದ್(ಸ)ಆದರ್ಶದ ಔಚಿತ್ಯ ಎಂಬ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಪ್ರೊ.ಚಂದ್ರಕಾAತ್,ಪ್ರವಾದಿ ಮಹ ಮದ್(ಸ) ಅವರು ತಮ್ಮ ಜೀವನದಲ್ಲಿ ಇಡೀ ಪ್ರಪಂಚಕ್ಕೆ ಅಗತ್ಯವಾದ ಮಾರ್ಗದರ್ಶನ ನೀಡಿದ್ದಾರೆ.ಈ ಪುಸ್ತಕ ವಾಟ್ಸಫ್ ವಿವಿಗಳ ಅರೆತಿಳುವಳಿಕೆಗೆ ಉತ್ತರವಾಗಿ ಮೂಡಿ ಬಂದಿದೆ.ಪ್ರತಿಯೊಬ್ಬರು ಓದುವ ಮೂಲಕ ಇಸ್ಲಾಂ ಧರ್ಮದ ಬಗ್ಗೆ ಇರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಪ್ರೊ,ರಿಜ್ವಾನ್ ಖಾಲಿದ್,ಸತ್ಯ ನುಡಿಯುವ ಮೂಲಕ ನ್ಯಾಯ ಸ್ಥಾಪಿಸಲು ಸಾಧ್ಯ ಎಂದು ಪ್ರವಾದಿ ಮಹಮದ(ಸ) ತೊರಿಸಿಕೊಟ್ಟಿದ್ದಾರೆ.ಸತ್ಯನಿಷ್ಠೆ ಮತ್ತು ಪ್ರಾಮಾಣಿಕತೆಗೆ ಮತ್ತೊಂದು ಹೆಸರು ಪ್ರವಾದಿಗಳು. ಈ ಬಗ್ಗೆ ಜನರಿಗೆ ಅರಿವು ಮೂಡಿಸಲು ಜಮಾಆತೆ ಇಸ್ಲಾಮಿ ಹಿಂದ್ ಪ್ರವಾದಿಗಳ ಜನನದ ಮಾಸದಲ್ಲಿ ಈ ರೀತಿಯ ಉಪನ್ಯಾಸಗಳ ಮೂಲಕ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಆತೆ ಇಸ್ಲಾಮಿ ಹಿಂದ್‌ನ ಸ್ಥಾನಿಯ ಅಧ್ಯಕ್ಷರಾದ ಅಸ್ರಾರ್ ಅಹಮದ್ ವಹಿಸಿದ್ದರು.ಜಮಾಆತೆ ಇಸ್ಲಾಮಿ ಹಿಂದಿನ ಪದಾಧಿಕಾರಿಗಳು, ವಿವಿಧ ಸಮುದಾಯದ ನಾಗರಿಕರು ಪಾಲ್ಗೊಂಡಿದ್ದರು.

(Visited 1 times, 1 visits today)
tumkur
Previous Articleರಾಜ್ಯದಲ್ಲೇ ವಿಶಿಷ್ಟ ಮನೆಬಾಗಿಲಿಗೆ ಮನೆಮಗ ಕಾರ್ಯಕ್ರಮದಲ್ಲಿ ಜನರ ವಾಸ್ತವ ಸಮಸ್ಯೆಗಳ ಅರಿವು: ಶಾಸಕ ಸಿ. ಬಿ. ಸುರೇಶ್ ಬಾಬು
Next Article ಸಮ ಸಮಾಜದ ಕನಸು ಹೊತ್ತು ದುಡಿದವರು ಬ್ರಹ್ಮರ್ಷಿ ನಾರಾಯಣಗುರುಗಳು: ಅಪರ ಜಿಲ್ಲಾಧಿಕಾರಿ ಹೇಳಿಕೆ
News Desk Benkiyabale

Related Posts

ರಾಜ್ಯದಲ್ಲೇ ವಿಶಿಷ್ಟ ಮನೆಬಾಗಿಲಿಗೆ ಮನೆಮಗ ಕಾರ್ಯಕ್ರಮದಲ್ಲಿ ಜನರ ವಾಸ್ತವ ಸಮಸ್ಯೆಗಳ ಅರಿವು: ಶಾಸಕ ಸಿ. ಬಿ. ಸುರೇಶ್ ಬಾಬು

August 30, 2025 3:01 pm ತುಮಕೂರು

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ವಿದ್ಯುತ್ ಅವಶ್ಯಕ

August 30, 2025 2:44 pm ತುಮಕೂರು

ಆಚಾರ ವಿಚಾರಗಳು ಉಳಿಯಬೇಕಾದರೆ ಗ್ರಾಮದಲ್ಲಿ ದೇವಾಲಯ, ಧಾರ್ಮಿಕ ಕ್ಷೇತ್ರಗಳು ನಿರ್ಮಾಣಗೊಳ್ಳಬೇಕು

August 30, 2025 2:39 pm ತುಮಕೂರು
ತಾಜಾ ಸುದ್ಧಿಗಳು
ಇತರೆ ಸುದ್ಧಿಗಳು

ಸಮ ಸಮಾಜದ ಕನಸು ಹೊತ್ತು ದುಡಿದವರು ಬ್ರಹ್ಮರ್ಷಿ ನಾರಾಯಣಗುರುಗಳು: ಅಪರ ಜಿಲ್ಲಾಧಿಕಾರಿ ಹೇಳಿಕೆ

September 08, 2025 3:08 pm
ತುಮಕೂರು

ನ್ಯಾಯ ಇರುವಡೆ ಶಾಂತಿ, ಸಾಮರಸ್ಯದ ಬದುಕು ಸಾಧ್ಯ

September 08, 2025 3:00 pm
ತುಮಕೂರು

ರಾಜ್ಯದಲ್ಲೇ ವಿಶಿಷ್ಟ ಮನೆಬಾಗಿಲಿಗೆ ಮನೆಮಗ ಕಾರ್ಯಕ್ರಮದಲ್ಲಿ ಜನರ ವಾಸ್ತವ ಸಮಸ್ಯೆಗಳ ಅರಿವು: ಶಾಸಕ ಸಿ. ಬಿ. ಸುರೇಶ್ ಬಾಬು

August 30, 2025 3:01 pm
ತುಮಕೂರು

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ವಿದ್ಯುತ್ ಅವಶ್ಯಕ

August 30, 2025 2:44 pm
ತುಮಕೂರು

ಆಚಾರ ವಿಚಾರಗಳು ಉಳಿಯಬೇಕಾದರೆ ಗ್ರಾಮದಲ್ಲಿ ದೇವಾಲಯ, ಧಾರ್ಮಿಕ ಕ್ಷೇತ್ರಗಳು ನಿರ್ಮಾಣಗೊಳ್ಳಬೇಕು

August 30, 2025 2:39 pm
ತುಮಕೂರು

ಭಾರತ ಅದರಲ್ಲೂ ಕರ್ನಾಟಕದಲ್ಲಿ ಇರುವಂತಹ ಪ್ರತಿಭಾನ್ವಿತರು ಬೇರೆಲ್ಲಿಯೂ ಸಹ ನೋಡಲು ಸಾಧ್ಯವಿಲ್ಲ – ಶಾಸಕ ಟಿ.ಬಿ. ಜಯಚಂದ್ರ.

August 30, 2025 2:36 pm
Our Youtube Channel
Our Picks

ಸಮ ಸಮಾಜದ ಕನಸು ಹೊತ್ತು ದುಡಿದವರು ಬ್ರಹ್ಮರ್ಷಿ ನಾರಾಯಣಗುರುಗಳು: ಅಪರ ಜಿಲ್ಲಾಧಿಕಾರಿ ಹೇಳಿಕೆ

September 08, 2025 3:08 pm

ಮುಸ್ಲಿಮರನ್ನು ತಪ್ಪು ದಾರಿಗೆಳೆಯುವ, ಭದ್ರತಾ ಆತಂಕ

August 25, 2025 2:24 pm

ಕೆ.ಎನ್.ರಾಜಣ್ಣ ವಜಾ ಖಂಡಿಸಿ ಧರಣಿ ಸತ್ಯಾಗ್ರಹ

August 25, 2025 2:14 pm

ಸೆ.೨೨ ರಿಂದ ದಸರಾ ಉತ್ಸವ

August 20, 2025 3:26 pm

ಶೋಷಿತರು, ಹಿಂದುಳಿದ ವರ್ಗದವರು ಹಾಗೂ ಬಡ ಜನರ ಆಶಾಕಿರಣ ಡಿ. ದೇವರಾಜು ಅರಸು

August 20, 2025 3:03 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ಇತರೆ ಸುದ್ಧಿಗಳು

ಸಮ ಸಮಾಜದ ಕನಸು ಹೊತ್ತು ದುಡಿದವರು ಬ್ರಹ್ಮರ್ಷಿ ನಾರಾಯಣಗುರುಗಳು: ಅಪರ ಜಿಲ್ಲಾಧಿಕಾರಿ ಹೇಳಿಕೆ

By News Desk BenkiyabaleSeptember 08, 2025 3:08 pm

ತುಮಕೂರು: ತುಳಿತಕ್ಕೆ ಒಳಗಾದ ಸಮಾಜಗಳ ಜನರ ಏಳಿಗೆಗಾಗಿ, ಸಮ ಸಮಾಜದ ಕನಸು ಹೊತ್ತು ದುಡಿದ ಮಹನೀಯರಲ್ಲಿ ಬ್ರಹ್ಮರ್ಷಿ ನಾರಾಯಣಗುರುಗಳು ಅಗ್ರಗಣ್ಯರು…

ನ್ಯಾಯ ಇರುವಡೆ ಶಾಂತಿ, ಸಾಮರಸ್ಯದ ಬದುಕು ಸಾಧ್ಯ

September 08, 2025 3:00 pm

ರಾಜ್ಯದಲ್ಲೇ ವಿಶಿಷ್ಟ ಮನೆಬಾಗಿಲಿಗೆ ಮನೆಮಗ ಕಾರ್ಯಕ್ರಮದಲ್ಲಿ ಜನರ ವಾಸ್ತವ ಸಮಸ್ಯೆಗಳ ಅರಿವು: ಶಾಸಕ ಸಿ. ಬಿ. ಸುರೇಶ್ ಬಾಬು

August 30, 2025 3:01 pm

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ವಿದ್ಯುತ್ ಅವಶ್ಯಕ

August 30, 2025 2:44 pm
News by Date
September 2025
M T W T F S S
1234567
891011121314
15161718192021
22232425262728
2930  
« Aug    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.