
ತುಮಕೂರು: ಹಣ,ಅಂತಸ್ತಿನ ಬೆನ್ನಟ್ಟಿರುವ ನಾವು ಮೌಲ್ಯಾಧಾರಿತ ಜೀವನವನ್ನು ಮರೆತಿದ್ದೇವೆ, ಕನಕದ ದಾಸರಾಗುವ ಬದಲು ಕನಕದಾಸರಾಗೋಣ ಎಂದು ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಡಾ. ಶ್ರೀನಿವಾಸ್ ಎಸ್ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಶನಿವಾರ ಶ್ರೀ ಕನಕದಾಸ ಜಯಂತಿಯನ್ನು ಆ ಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಇವರು “ಕನಕದಾಸರ ವಿಚಾರಧಾರೆಗಳು ಅಪಾರ, ಅವರ ಕೀರ್ತನೆಗಳ ಉದ್ದೇಶ ಸಮಾಜದ ಅಂಕುಡೊAಕುಗಳನ್ನು ತಿದ್ದುವುದಾಗಿದೆ” ಎಂದರು.
ಸ0ಪನ್ಮೂಲ ವ್ಯಕ್ತಿಗಳಾದ ಕನ್ನಡ ವಿಭಾಗದ ಸಹಪ್ರಾಧ್ಯಾಪಕ ಡಾ. ನಾಗಭೂಷಣ ಬಗ್ಗನಡು ಮಾತನಾಡಿ ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಇಂದಿಗೂ ನೆನಪಿಸಿಕೊಳ್ಳಲು ಅವರು ಸಮಾಜಕ್ಕೆ ನೀಡಿದ ಸಂದೇಶಗಳೇ ಕಾರಣ, ಕನಕದಾಸರ ಕೀರ್ತನೆಗಳು ಸಾಮಾಜಿಕ ಶ್ರೇಣಿಕರಣವನ್ನು ದೇವರ ಮೂಲಕ ತಿದ್ದಿಸುವುದಾಗಿದೆ. ಇಲ್ಲಿ ಯಾರು ಶ್ರೇಷ್ಠರಲ್ಲ, ಕನಿಷ್ಠರು ಅಲ್ಲ. ಅಹಂ ಇಲ್ಲದ ಸರಳ ಜೀವನ ಒಳ್ಳೆಯದು ಎಂಬುದು ದಾಸರ ಒಳನೋಟವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ ದಾಕ್ಷಾಯಿಣಿ, ಪ್ರತಿ ಬಾರಿಯೂ ಕನಕದಾಸರ ಜಯಂತಿಯನ್ನು ವಿಶ್ವವಿದ್ಯಾನಿಲಯ ಆಚರಿಸುತ್ತಿದೆ ಅದರ ಉದ್ದೇಶ ಏನು ಎಂಬುದನ್ನು ಚಿಂತಿಸುವ ಅಗತ್ಯವಿದೆ. ಶ್ರೇಷ್ಠ ವ್ಯಕ್ತಿಯ ಸಿದ್ಧಾಂತವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ನಮ್ಮ ಬದುಕು ಸರಳ ಮತ್ತು ಸುಖಕರವಾಗಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯ ಸಂಯೋಜಕರಾದ ಡಾ. ಎ.ಎಂ ಮಂಜುನಾಥ, ಚೇತನ್ ಪ್ರತಾಪ್, ವಿದ್ಯಾರ್ಥಿಗಳೊಂದಿಗೆ ವಿಶ್ವವಿದ್ಯಾನಿಲಯದ ಎಲ್ಲಾ ಭದ್ರತಾ ಸಿಬ್ಬಂದಿ ಹಾಗೂ ಕಾರ್ಮಿಕ ಸಿಬ್ಬಂದಿ ಉಪಸ್ಥಿತರಿದ್ದರು.





