
ಕುಣಿಗಲ್/ಕೆ.ಜಿ. ದೇವಪಟ್ಟಣ: ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕೆ.ಜಿ. ದೇವಪ ಟ್ಟಣದ (ಹಂಗರಹಳ್ಳಿ) ಶ್ರೀ ಶೃಂಗೇರಿ ಶಾರದಾ ಪೀಠದ ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರ ಪುಣ್ಯಕ್ಷೇತ್ರದಲ್ಲಿ ಇಂದು ಅದ್ಧೂರಿ ‘ವರ್ಧಂತಿ ಮಹೋತ್ಸವ’ ಜರುಗಲಿದ್ದು, ಕಾರ್ಯಕ್ರಮದ ಅಂಗವಾಗಿ ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾ ಪೀಠದ ಜಗದ್ಗುರುಗಳ ಆಶೀರ್ವಾದ ಪಡೆಯಲಾಗಿದೆ.
ಶೃಂಗೇರಿ ಶ್ರೀಗಳ ಅನುಗ್ರಹ: ಶ್ರೀ ಶೃಂಗೇರಿ ಶಾರದಾ ಪೀಠದ ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮ ನವರ ವರ್ಧಂತಿ ಮಹೋತ್ಸವದ ಪ್ರಯುಕ್ತ, ಶೃಂಗೇರಿ ಶಾರದಾ ಪೀಠಕ್ಕೆ ಭೇಟಿ ನೀಡಿದ ಶ್ರೀ ಬಾಲ ಮಂಜುನಾಥ ಸ್ವಾಮೀಜಿರವರು ಜಗದ್ಗುರುಗಳಾದ ಶ್ರೀ ಶ್ರೀ ವಿದುಶೇಖರ ಭಾರತಿ ಸನ್ನಿಧಾನಂಗಳವರಿಗೆ ಆಮಂತ್ರಣ ಪತ್ರಿಕೆ ಸಮರ್ಪಿಸಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಜಗದ್ಗುರುಗಳು ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರಿಗೆ ಶ್ರೀಮಠದ ವತಿ ಯಿಂದ ಪವಿತ್ರ ವಸ್ತ್ರವನ್ನು ಸಮರ್ಪಣೆ ಮಾಡಿ, ಕಾರ್ಯಕ್ರಮ ಯಶಸ್ವಿಯಾಗಲೆಂದು ಹರಸಿದರು.
ಧಾರ್ಮಿಕ ಕಾರ್ಯಕ್ರಮಗಳ ವಿವರ (ಜ. ೭ ರಿಂದ ಜ. ೧೭ ರವರೆಗೆ) ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರ ಪುಣ್ಯಕ್ಷೇತ್ರದಲ್ಲಿ ಬೆಳಿಗ್ಗೆ ೬:೩೦ಕ್ಕೆ ಗಣಪತಿ ಪೂಜೆ, ಶತಚಂಡಿ ಪಾರಾಯಣ, ಚಂಡಿಹೋಮ ಮತ್ತು ಕುಮಾರಿಕಾ ಪೂಜೆ ನೆರವೇರಲಿದೆ. ಸಂಜೆ ೪:೩೦ಕ್ಕೆ ದುರ್ಗಾ ಸಪ್ತ ಶತಿ ಪಾರಾಯಣ, ಲಲಿತಾ ಸಹಸ್ರನಾಮ ಕುಂಕುಮಾರ್ಚನೆ ಹಾಗೂ ದೀಪೋತ್ಸವ ಜರುಗಲಿದೆ.
ಜ. ೧೭ರಂದು ‘ಅಮ್ಮನವರ ವೈಭವೋತ್ಸವ’ ಹಾಗೂ ವಿಶೇಷ ಸಮರ್ಪಣೆ: ವರ್ಧಂತಿ ಮಹೋತ್ಸವದ ಕಡೆಯ ದಿನವಾದ ಇಂದು ‘ಶತಚಂಡಿ ಮಹಾಯಾಗ’ದ ಪೂರ್ಣಾಹುತಿ ನಡೆಯಲಿದೆ. ಈ ಪವಿತ್ರ ದಿನದಂದು ಕ್ಷೇ ತ್ರಕ್ಕೆ ಎರಡು ಮಹತ್ವದ ಕೊಡುಗೆಗಳನ್ನು ಸಮರ್ಪಿಸಲಾಗುತ್ತಿದೆ.





