
ತುರುವೇಕೆರೆ: ಎಸ್.ಐ.ಆರ್ ಬಗ್ಗೆ ಗೊಂದಲ, ತಪುö್ಪ ತಿಳುವಳಿಯಿಂದ ವಿರೋಧ ಪಕ್ಷಗಳು ಆರೋಪಗಳನ್ನು ಮಾಡುತ್ತಿವೆ ಎಂದು ಬಿಜೆಪಿ ಮುಖಂಡ ಸಚ್ಚಿದಾನ ಮೂರ್ತಿ ತಿಳಿಸಿದರು.
ಪಟ್ಟಣದ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ತಾಲ್ಲೂಕು ಬಿಜೆಪಿ ಘಟಕದಿಂದ ಆಯೋಜಿಸಿದ ಭೂತ್ ಮಟ್ಟದ ಅದ್ಯಕ್ಷರು, ಎಸ್.ಐ.ಆರ್ ಬಗ್ಗೆ ಕಾರ್ಯಗಾರ ಹಾಗೂ ಬಿಎಲ್.ಒ ೨ ಸಮಾವೇಶ ಸಭೆಯಲ್ಲಿ ಮಾತನಾಡಿದ ಅವರು ಕ್ಷೇತ್ರದ ಬಿಎಲ್.ಓ ೨ ಗಳ ಮೇಲೆ ಗುರುತರವಾದ ಜವಬ್ದಾರಿ ಇದೆ. ೨೦೨೩ಚುನಾವಣೆಯಲ್ಲಿ ಮಾಡಿದ ತಪುö್ಪ ೨೦೨೮ ರ ಚುನಾವಣೆಯಲ್ಲಿ ಕಾರ್ಯಕರ್ತರು ಮಾಡಬಾರದು ಎಂದರು.
ಎಸ್.ಐ.ಆರ್ ಜಾರಿಯಿಂದ ನೈಜ ಮತದಾರರನ್ನು ತೆಗೆಯುವ ಸಾದ್ಯವಿಲ್ಲ. ಇದರ ಬಗ್ಗೆ ಜನರಿಗೆ ತಿಳಿಸಬೇಕಿದೆ. ಈಗಾಗಲೇ ರಾಜ್ಯದಲ್ಲಿ ೧೩ ಸಲ ಮತದಾನ ಪರೀಕ್ಷರಣೆ ಅಂದರೆ ಎಸ್.ಐ.ಆರ್ ಹಾಗಿದೆ. ಯಾವುದೇ ಅಂತAಕ ಬೇಡ. ದೇಶದಲ್ಲಿ ೧೩ರಾಜ್ಯಗಳಲ್ಲಿ ಎಸ್.ಐ.ಆರ್ ಮಾಡಲಾಗಿದೆ ಉಳಿದ ೧೨ರಾಜ್ಯಗಳಲ್ಲಿ ಪ್ರಾರಂಭವಾಗಿದ್ದು ಕರ್ನಾಟಕದಲ್ಲಿ ಇದೇ ತಿಂಗಳ ೩೦ರಿಂದ ಎಸ್.ಐ.ರ್ ಅಧಿಕಾರಿಗಳು ಪ್ರಾರಂಭಿಸಲಿದ್ದು ಈಗಾಗಲೇ ತರಬೇತಿ ನೀಡಲಾಗಿದೆ. ತಾಲೂಕಿನ ೨೨೪ ಭೂತ್ ಗಳಲ್ಲಿ ಸರ್ಕಾರಿ ಅಧಿಕಾರಿ ನೇಮಿಸಿದ್ದು ಅವರಿಗೆ ನಿಮ್ಮ ಭೂತ್ ನಲ್ಲಿ ಮತದಾರರ ಬಗ್ಗೆ ಸರಿಯಾದ ಮಾಹಿತಿ ನೀಡಿ ಅರ್ಹ ಮತದಾರರನ್ನು ಉಳಿಸಿ. ಮ್ಯಾಪಿಂಗ್ ಮಾಡಿರುವ ಮತದಾರರು ಹೊಸದಾಗಿ ಪಾರಂ ಭರ್ತಿ ಮಾಡಕೊಡಬೇಕು ಎಂದರು.
ಮಾಜಿ ಶಾಸಕ ಮಸಾಲಜಯರಾಮ್ ಮಾತನಾಡಿ ಬಿಜೆಪಿ ಕಾರ್ಯಕರ್ತರು ಪಕ್ಷದ ಸಂಘಟನೆಯಲ್ಲಿ ತೊಡಗಬೇಕಿದೆ.ಮುಂದಿನ ೨೦೨೮ರ ಚುನಾವಣೆಯಲ್ಲಿ ೧೫೦ ಸೀಟು ಗೆಲ್ಲುವ ಮೂಲಕ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲಿದೆ. ತಾಲ್ಲೂಕಿನಲ್ಲಿ ಯೂ ಬಿಜೆಪಿ ಎಂಎಲ್.ಎ ಆಯ್ಕೆಯಾಗಲಿದ್ದಾರೆ. ಕಾರ್ಯಕರ್ತರು ಯಾವುದೇ ಅಪಪ್ರಚಾರಕ್ಕೆ, ಗೊಂದಲಕ್ಕೆ ಒಳಗಾಗದೆ ಸಂಘಟನೆ ಮಾಡಬೇಕು. ನಾನು ಸೋತರು ಕ್ಷೇತ್ರದಲ್ಲಿ ಜನರ ಜೊತೆ ಓಡನಾಡದಲ್ಲಿದ್ದೇನೆ. ಎಸ್.ಐ.ಆರ್.ಬಗ್ಗೆ ಜನರಿಗೆ ಸರಿಯಾದ ಮಾಹಿತಿ ನಕಲಿ ಮತದಾರನ್ನು ತೆಗೆದುಹಾಕಿ ಅರ್ಹ ಮತದಾರರು ಉಳಿಯುವಂತೆಮಾಡಬೇಕು. ನಾನು ಸಹ ಸದಾ ಜೊತೆಯಲ್ಲಿದ್ದು ಭೂತ್ ಗಳಿಗೂ ಬೇಟಿ ನೀಡುತ್ತೇನೆ ಎಂದರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ತಾಲ್ಲೂಕು ಬಿಜೆಪಿ ಮಂಡಳ ಅದ್ಯಕ್ಷ ಪ್ರಕಾಶ್ ವಹಿಸಿದ್ದರು. ಮಾಜಿ ಶಾಸಕ ಎಂ.ಡಿ.ಲಕ್ಷಿ÷್ಮÃನಾರಾಯಣ್, ಜಿಲ್ಲಾ ಬಿಜೆಪಿ ಅದ್ಯಕ್ಷ ಹೆಬ್ಬಾಕರವಿ, ಜಿಲ್ಲಾ ಉಪಾಧ್ಯಕ್ಷ ರಾದ ರುದ್ರೇಶ್, ಬಸವರಾಜು, ಎಂ.ಎಲ್.ಸಿ ಅಭ್ಯರ್ಥಿ ಕೆ.ಎನ್.ಸುರೇಶ್, ಬಿಎಲ್.ಓ ೧ ದುಂಡನವೀನ್ ಮುಖಂಡರಾದ ಕೊಂಡಜ್ಜಿ ವಿಶ್ವನಾಥ್, ಅನಿತಾ, ಪದ್ಮಾ, ಎಂ.ಡಿ.ಮೂರ್ತಿ, ವಿ.ಟಿ.ವೆಂಕಟೇಶ್, ಸಿದ್ದೇಗೌಡ, ಕೆಂಪೇಗೌಡ, ಮಂಜೇಗೌಡ, ಶಿವಲಿಂಗೇಗೌಡ, ಸಂತೋಷ್ ಕಂಟ್ಲಿ, ಸಿದ್ದಪ್ಪ, ಪ್ರಸಾದ್, ಮಹೇಶ್, ಯೋಗಾನಂದ್, ನವೀನ್ ಬಾಬು ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಇದ್ದರು.

