ಶಿರಾ: ರೈತರು ಭೂಮಿಯನ್ನು ಹೊಂದಿರುವುದಷ್ಟೇ ಅಲ್ಲ, ತಮ್ಮ ಜಮೀನುಗಳ ಬಗ್ಗೆ ಕಾನೂನು ಅರಿವು ಅವಶ್ಯಕವಾಗಿದೆ. ಹಕ್ಕುಗಳು ಮತ್ತು ದಾಖಲಾತಿಗಳ ಬಗ್ಗೆ ಸರ್ಕಾರ ಕೈಗೊಂಡಿರುವ ಯೋಜನೆಗಳ ಭೂ ಸುಧಾರಣೆ ಬಗ್ಗೆ ರೈತರು ತಿಳಿದುಕೊಳ್ಳುವುದಲ್ಲದೆ, ತಮ್ಮ ಹಕ್ಕನ್ನು ತಾವೇ ಪಡೆಯುವ ಜ್ಞಾನವನ್ನು ಪಡೆದಾಗ ಮಾತ್ರ ಭೂ ಒಡೆತನ ಹೊಂದಿದ್ದಕ್ಕೆ ಸಾರ್ಥಕವಾಗುತ್ತದೆ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಕೆ.ಎನ್.ಲಿಂಗಪ್ಪ ತಿಳಿಸಿದರು.
ಶಿರಾ ತಾಲ್ಲೂಕಿನ ಗುಮ್ಮನಹಳ್ಳಿಯ ಲೋಹಿಯಾ ಸಮಾತಾ ವಿದ್ಯಾಲಯದಲ್ಲಿ ರೈತರಿಗಾಗಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ನಾಯಕತ್ವದ ಶಿಬಿರದಲ್ಲಿ ಭೂಮಿ ಮತ್ತು ಭೂ ಕಂದಾಯ ಕಾನೂನುಗಳು, ರೈತರ ಹಕ್ಕಗಳು ಮತ್ತು ಪರಿಹಾರ ವಿಷಯ ಕುರಿತು ಮಾತನಾಡಿದ ಅವರು, ಭೂಕಂದಾಯ ಇತಿಹಾಸವು ಕೇವಲ ತೆರಿಗೆಗಳ ಸಂಗ್ರಹಣೆಯ ಕಥಾನಕವಲ್ಲ ಅದು ಸಮಾಜದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ವಿಕಾಸಗೊಂಡಿದ್ದರ ಪ್ರತಿಬಿಂಬವಾಗಿದೆ. ಭೂಮಿ ಎಂಬ ಸಂಪತ್ತು ಮಾನವ ಸಂಸ್ಕೃತಿಯಲ್ಲಿ ಮಹತ್ವ ಹೊಂದಿದೆ. ಪ್ರಾಚೀನ ಕೃಷಿ ಆರ್ಥಿಕತೆಯಿಂದ ಪ್ರಸ್ತುತ ಆಡಳಿತ ವ್ಯವಸ್ಥೆಗಳವರೆಗೆ ಭೂಮಿ ಮತ್ತು ಭೂಕಂದಾಯ ವ್ಯವಸ್ಥೆಗಳ ನಿರ್ವಹಣೆ, ಆಳ್ವಿಕೆ, ನೀತಿಗಳು ಮತ್ತು ವ್ಯಕ್ತಿಗಳ ಜೀವನವನ್ನು ಶಾಶ್ವತವಾಗಿ ರೂಪಿಸುತ್ತವೆ ಎಂದರು.
ಇ-ಜಮಾಬಂದಿ ಜಾರಿ: ಮಾ.೧೨, ೨೫ ರಂದು ವಿಧಾನ ಪರಿಷತ್‌ನಲ್ಲಿ ಪ್ರಶೋತ್ತರ ಸಮಯದಲ್ಲಿ ಕಂದಾಯ ಸಚಿವರು, ಇ-ಜಮಾ ಬಂಧಿ ಜಾರಿಯ ಬಗ್ಗೆ, ಗ್ರಾಮ, ತಾಲ್ಲೂಕು ಮಟ್ಟದ ಭೂದಾಖಲೆಗಳನ್ನು ತಾಳೆ ಮಾಡಿ ಕ್ರಮಬದ್ದಗೊಳಿಸುವ ವಿಧಾನದ ಪ್ರತಿಕ್ರಿಯೆಯನ್ನು ವೇಗವಾಗಿ ನಿರ್ವಹಿಸಲು ಇ-ಜಮಾಬಂದಿ ತಂತ್ರಾAಶವನ್ನೂ ಒಂದು ವರ್ಷದೊಳಗೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. ಇದು ಜನರಿಂದ ನಡೆಯುವ ಗ್ರಾ.ಪಂನ ವಾರ್ಷಿಕ ಆದಾಯ ಮತ್ತು ವೆಚ್ಚಗಳ ಭೌತಿಕ ಮತ್ತು ಆರ್ಥಿಕ ಲೆಕ್ಕ ಪರಿಶೀಲನೆಯಾಗಿದೆ. ಇ ಜಮಾಬಂದಿ ಎಂದರೆ ಜಮಾಬಂದಿಯ ಆನ್‌ಲೈನ್ ಆವೃತ್ತಿ ಆಗಿದ್ದು, ಇದು ಹಕ್ಕುಗಳ ದಾಖಲೆ ಅಥವಾ ಭೂ ಮಾಲೀಕತ್ವದ ದಾಖಲೆಗಳಿಗೆ ಅಧಿಕೃತ ದೃಢೀಕರಣವನು ನೀಡುತ್ತದೆ ಎಂದು ಹೇಳಿದರು.
ಶಿರಾ ತಹಶೀಲ್ದಾರ್ ಆನಂದ್ ಕುಮಾರ್ ಮಾತನಾಡಿ, ೮ ಸಾವಿರಕ್ಕೂ ಹೆಚ್ಚು ಜನರಿಗೆ ಕಂದಾಯ ಇಲಾಖೆಯ ಭೂ ಒಡತನಕ್ಕೆ ಸಂಬAಧಿಸಿದೆ, ಖಾತೆ, ಸಾಗುವಳಿ ಚೀಟಿ, ಪೌತಿ ಖಾತೆಗಳನ್ನು ಸಮಸ್ಯೆಗಳನ್ನು ಪರಿಹಾರ ಮಾಡಿ ರೈತರಿಗೆ ನೆರವು ನೀಡಿರುವುದಾಗಿ ತಿಳಿಸಿದರು.
ಶಿಬಿರದಲ್ಲಿ ರೈತ ಹೋರಾಟಗಾರರಾದ ಅನುಸೂಯಮ್ಮ, ದೊ.ರಂಗನಾಥಗೌಡ, ಪೂಜಾರಪ್ಪ, ಕೆ.ಟಿ.ಗಂಗಾಧರ್, ರಾಮಕೃಷ್ಣ ನೀರಕಲ್ಲು, ಚುಕ್ಕಿ ನಂಜುAಡಸ್ವಾಮಿ, ಹೊನ್ನೂರು ಪ್ರಕಾಶ್, ಸಮತಾ ವಿದ್ಯಾಲಯದ ವ್ಯವಸಾಪಕ ಗೋವಿಂದರಾಜು ಎನ್., ಸಂದೀಪ್ ಕೆ.ಆರ್., ಭಾಗವಹಿಸಿದ್ದರು.

(Visited 1 times, 1 visits today)