
ತುಮಕೂರು: ನಗರದ ಎಸ್ಎಸ್ಐಟಿಯ ಎಂಬಿಎ ಆಡಿಟೋರಿಯಂನಲ್ಲಿ ಜು.೫ರಂದು ರೋಟರಿ ತುಮಕೂರು ಪ್ರೇರಣಾ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ರೊ. ರಘು ಎಸ್. ರವರ ಮತ್ತು ಕಾರ್ಯದರ್ಶಿ ರೊ. ಶ್ರೀನಿವಾಸ ಮೂರ್ತಿ ಜಿ. ರವರ ಹೊಸ ತಂಡ ಪದವಿ ಸ್ವೀಕಾರ ಸಮಾರಂಭ ನಡೆಯಿತು.
ಈ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರು, ಕಾರ್ಯದರ್ಶಿ ಹಾಗು ನೂತನ ಸದಸ್ಯರುಗಳಿಗೆ ಮಾಜಿ ಜಿಲ್ಲಾ ಪಾಲಕರಾದ ರೊ. ಕೆ.ಎಸ್. ನಾಗೇಂದ್ರ ರವರು ಎಲ್ಲರಿಗೂ ರೋಟರಿ ಪಿನ್ ಹಾಕಿ ರೋಟರಿಯ ಧ್ಯೇಯೋದ್ದೇಶಗಳ ಪ್ರತಿಜ್ಞಾ ವಿಧಿ ಭೋದಿಸಿದರು, ಇವರು ಮಾತನಾಡುತ್ತಾ ಸೇವೆಯನ್ನು ಮಾಡುವಾಗ ಎಷ್ಟು ಕೊಟ್ಟೆ ಎಂಬುದು ಮುಖ್ಯವಲ್ಲ ಯಾರಿಗೆ ಕೊಟ್ಟೆ, ಯಾವ ಸಂದರ್ಭದಲ್ಲಿ ನೀಡಿದೆ ಎಂಬುದು ಮುಖ್ಯ, ಸೇವೆಯ ಸಾರ್ಥಕತೆ ದೊರಕುವುದು ಆಗ ಮಾತ್ರ, ನಾನು ಜಿಲ್ಲಾ ಪಾಲಕನಾದ ಸಂಧರ್ಭದಲ್ಲಿ ಒಂದು ಡಯಾಲಿಸಿಸ್ ಸೆಂಟರ್ ಸ್ವಾಪನೆ ಮಾಡಿದ್ದು ಅದರ ಲಾಭವನ್ನು ಒಂದು ಲಕ್ಷ ಮುವತ್ತೂ ಸಾವಿರ ಜನ ಪಡೆದಿದ್ದರು ಅವರೆಲ್ಲರು ರೋಟರಿ ಸಂಸ್ಥೆಯನ್ನು ನೆನಪಿಸಿಕೊಳ್ಳುತ್ತಿದ್ದಾರೆ ಅದು ಸಂತೋಷ ತಂದಿತ್ತು ಎಂದರು.
ರೋಟರಿ ಸಂಸ್ಥೆ ಒಂದು ಅಂತರಾಷ್ಟಿಯ ಸಂಸ್ಥೆಯಾಗಿದ್ದು, ಶಿಕ್ಷಣ, ಸಾಕ್ಷರತೆ, ಹೆಣ್ಣುಮಕ್ಕಳ ಸ್ವಾವಲಂಭನೆ, ಪರಿಸರ, ವೈಧ್ಯಕೀಯ ಉದ್ಯೋಗಾದಾರಿತ ತರಬೇತಿಗಳಿಗೆ ಹೆಚ್ಚು ಹೆಚ್ಚು ಗಮನ ನೀಡಿ ಪ್ರಪಂಚದಾದ್ಯ0ತ ಸೇವಾ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ, ರೋಟರಿ ಸಂಸ್ಥೆ ಪ್ರಪಂಚದ ಅತಿದೊಡ್ಡ ಸೇವಾಕಾರ್ಯಗಳನ್ನು ಮಾಡುವ ಸರ್ಕಾರೇತರ ಸಂಸ್ಥೇಯಾಗಿರುವುದು ನಮ್ಮ ಹೆಮ್ಮೆ ಎಂದರು, ನಾವುಗಳು ಅದರ ಭಾಗವಾಗಿರುವುದು ನಮ್ಮ ಅದೃಷ್ಠ ಎಂದರು, ಯುವಜನರು ಸೇವೆಯ ಕಡೆ ಹೆಚ್ಚು ಆಸಕ್ತಿ ತೋರಬೇಕು ಎಂದರು ರೋಟರಿ ತುಮಕೂರು ಪ್ರೇರಣಾ ಕ್ಲಬ್ ನಲ್ಲಿ ಹೆಚ್ಚು ಯುವಕರು ಪಾಲ್ಗೊಂಡಿರುವುದು ಖುಷಿ ತಂದಿದೆ ಎಂದರು ನುಡಿದರು,
ಈ ಪದಗ್ರಹಣ ಸಮಾರಂಭದಲ್ಲಿ ರೊ. ರಘು ಎಸ್, ರವರು ಅಧ್ಯಕ್ಷ ಪದವಿ ಸ್ವೀಕಾರವನ್ನು ಪಡೆದು ೨೦೨೬-೨೭ನೇ ಸಾಲಿಗೆ ನನ್ನನ್ನು ರೋಟರಿ ಪ್ರೇರಣಾ ಎಲ್ಲಾ ಸದಸ್ಯರುಗಳಿಗೆ ಧನ್ಯವಾದಗಳನ್ನು ತಿಳಿಸುತ್ತಾ, ನಾನು ನನ್ನ ಅವಧಿಯಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ದಿ, ಪರಿಸರದ ಬಗ್ಗೆ ಹೆಚ್ಚು ಹೊತ್ತು ನೀಡಿ ಸೇವಾ ಕಾರ್ಯಗಳನ್ನು ಕೈಗೊಳ್ಳುತ್ತೇನೆ. ಪ್ರತಿಯೊಬ್ಬ ಸದಸ್ಯರ ಅಭಿಪ್ರಾಯಕ್ಕೆ ಗೌರವನ್ನು ಕೊಡುತ್ತಾ ಎಲ್ಲರನ್ನು ವಿಸ್ವಾಸಕ್ಕೆ ತೆಗೆದುಕೊಂಡು ಎಲ್ಲರನ್ನು ಜೊತೆಗೂಡಿಸಿಕೊಂಡು ಪ್ರತಿಯೊಬ್ಬ ಸದಸ್ಯರಿಗೂ ಸೇವೆ ಮಾಡುವ ಅವಕಾಶವನ್ನು ನೀಡುತ್ತೇನೆ. ನಿಮ್ಮೆಲ್ಲರ ಸೇವಕನಾಗಿ ಕೆಲಸ ಮಾಡುತ್ತೇನೆ, ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನನ್ನ ಕೈಲಾದಷ್ಟು ಸಹಾಯ ಮಾಡುತ್ತೇನೆ ಎಂದರು. ನನ್ನನ್ನು ರೋಟರಿಗೆ ಪರಿಚಯಿಸಿದ ರೊ. ಮಲ್ಲಿಕಾರ್ಜುನ ಮೆಳೇಹಳ್ಳಿ, ಮತ್ತು ರೊ. ರಾಜಶೇಖರ್ ರವರಿಗೆ ಧನ್ಯವಾದ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ತುಮಕೂರಿನ ಉದ್ಶಮಿ, ರೋಟರಿಯ ಮಾಜಿ ಜಿಲ್ಲಾ ಪಾಲಕರಾದ ರೊ. ಆಶಾ ಪ್ರಸನ್ನ ಕುಮಾರ್ ರವರಿಗೆ ರೋಟರಿ ತುಮಕೂರು ಪ್ರೇರಣಾದ ವತಿಯಿಂದ “ಅತ್ಯುನ್ನತ ಸೇವಾ ನಾಗರೀಕ ಪ್ರಶಸ್ತಿ” ಪ್ರಶಸ್ತಿ ನೀಡಿ ಗೌರವಿಸಲಾಯಿತು, ಪ್ರಶಸ್ತಿ ಸ್ವೀಕರಿಸಿ ಇಂದು ಪ್ರೇರಾಣಾ ತಂಡ ನನ್ನನ್ನು ಕರೆಯಿಸಿ ಬಹುದೊಡ್ಡ ಪ್ರಶ್ತಿಯನ್ನು ನೀಡಿ ಇನ್ನು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ ಸೇವೆ ಯಾವುಧೇ ಪ್ರತಿಪಲಾಕ್ಷೇ ಇಲ್ಲದೆ ಮಾಡಬೇಕು ತನ್ನ ಯಾವುದೇ ಬೇಕುಗಳಿಗೆ ಸೇವೆ ಇರಬಾರದು ಅದು ಬೆರೆಯವರಿಗೂ ಮಾದರಿಯಾಗಿರಬೇಕು ಎಂದು ತಿಳಿಸಿದರು. ಮತ್ತು ರೋಟರಿ ತುಮಕೂರು ಪ್ರೇರಣಾ ಒಂದು ಯುವ ತಂಡವಾಗಿ ಜಿಲ್ಲೆಯಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡುತ್ತಾ ವಿಶಿಷ್ಟ ಹೆಸರನ್ನು ಪಡೆದುಕೊಂಡಿದೆ ಅದನ್ನು ಹಾಗೇಯೇ ಉಳಿಸಿಕೊಂಡು ಹೋಗಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಸಭೆಯನ್ನು ಉದ್ದೇಶಿಸಿ ವ್ಯಕ್ತಿತ್ವ ವಿಕಸನ ತರಬೇತಿದಾರರಾದ ಶ್ರೀ ಯೋಗಿ ಅನೀಷ್ ಮಾತನಾಡುತ್ತಾ ನಾವೆಲ್ಲರು ಜೀವನದಲ್ಲಿ ಕುಳಿತುಕೊಳ್ಳುವುದನ್ನು ಕಲಿತಿದ್ದೇವೆ, ಆದರೆ ಸಾಧಿಸುವ ಕಾರ್ಯಗಳಿಗೆ ಎದ್ದು ನಿಲ್ಲುವುದನ್ನು ಕಲಿಯಬೇಕು, ಸಾಕಷ್ಟು ಹೃದಯ ಮುಟ್ಟುವಂತ ಸೇವಾ ಕಾರ್ಯಗಳನ್ನು ಮಾಡುವುದು ಒಳಿತು. ರೋಟರಿ ಅನೇಕ ಜನರನ್ನು ಗುರುತಿಸಿದೆ ಅದರಲ್ಲಿ ನಾನು ಒಬ್ಬ, ನಾನು ಕೂಡ ರೋಟರಿ ಮಾಜಿ ಸದಸ್ಯ, ಹೊಸ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಘು ರವರನ್ನು ಅಭಿನಂದಿಸಿದರು.
ಸಮಾರAಭದಲ್ಲಿ ಶಿರಾ ತಾಲ್ಲೂಕಿನ ಮುದಿಮಡು ಸರ್ಕಾರಿ ಶಾಲೆಗೆ ೩೦೦೦ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ವಿತರಿಸಲಾಯಿತು, ಹಾಗೆ ಸಿದ್ದಾರ್ಥ ಪತ್ರಿಕೋಧ್ಯಮ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡಲಾಯಿತು, ಪ್ರೆಸ್ ಕ್ಲಬ್ ಗೆ ೨೦ ಲೀಟರ್ ಸಾಮರ್ಥ್ಯದ ವಾಟರ್ ಫಿಲ್ಟರ್ ನೀಡಲಾಯಿತು.
ಕಾರ್ಯಕ್ರಮದಲ್ಲಿ ೯ ಜನ ರೋಟರಿ ತುಮಕೂರು ಪ್ರೇರಣಾಕ್ಕೆ ಹೊಸ ಸದಸ್ಯರಾಗಿ ಸೇರ್ಪಡೆಯಾಗಿದ್ದಾರೆ. ಒಟ್ಟು ೩೬ ಜನ ನಿರ್ದೆಶಕರಾಗಿ ಪದವಿ ಸ್ವಿಕಾರ ಪಡೆದರು,
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ಪ್ರಸನ್ನಕುಮಾರ್, ವಲಯ ಪಾಲಕಾರಾದ ರೊ. ಪ್ರಮೀಳ ಶಿವಕುಮಾರ್, ಸಹಾಯಕ ಪಾಲಕರಾದ ರೊ. ಸರೋಜಮ್ಮ, ಪ್ರೇರಣಾ ಸಂಸ್ಥಾಪಕ ಅದ್ಯಕ್ಷ ರೊ. ರಾಜಶೇಖರ್, ರೊ. ಶಿವಕುಮಾರ್ ಕೆ.ಜಿ., ಮಾಜಿ ವಲಯಪಾಲಕರಾದ ರೊ. ಪ್ರಕಾಶ್ ಎಂ.ಎಸ್., ಪ್ರೇರಣಾ ಛಾರಿಟೇಬಲ್ ಅಧ್ಯಕ್ಷ ರೊ. ಮಲ್ಲಿಕಾರ್ಜುನ ಮೆಳೇಹಳ್ಳಿ, ರೊ. ಜನಾರ್ದನ್, ರೋಟರಿ ಪ್ರೇರಣಾ ಎಲ್ಲಾ ಸದಸ್ಯರುಗಳು ಭಾಗಿಯಾಗಿದ್ದರು.

