
ತುಮಕೂರು: ರಾಜ್ಯ ಚುನಾವಣಾ ಆಯೋಗ ನಡೆಸುತ್ತಿರುವ ಎಸ್.ಐ.ಆರ್.ನಲ್ಲಿ ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಜಿಲ್ಲಾಡಳಿತ, ಚುನಾವಣಾ ಆಯೋಗದ ಸಹಕಾರದಿಂದ ಉತ್ತಮವಾಗಿ ಮತದಾರರ ನೊಂದಣಿ ನಡೆದಿದ್ದು, ಶೇ೯೯.೭೨ರಷ್ಟು ಮತದಾರರಿಗೆ ಎನ್ಮರೇಷನ್ ಫಾರಂ ಹಂಚುವ ಮೂಲಕ ಬಿಎಲ್ಓಗಳು ಉತ್ತಮ ಕೆಲಸ ಮಾಡಿದ್ದಾರೆ ಎಂದು ಮಾಜಿ ಶಾಸಕ ಡಾ.ಎಸ್.ರಫೀಕ್ ಅಹಮದ್ ಶ್ಲಾಘೀಸಿದ್ದಾರೆ.
ನಗರದ ೭ನೇ ವಾರ್ಡಿನ ಜಿ.ಸಿ.ಆರ್. ಕಾಲೋನಿಯ ಕೆಲ ಬಡಾವಣೆಗಳಿಗೆ ಭೇಟಿ ನೀಡಿ,ಎಸ್.ಐ.ಆರ್. ಪ್ರಕ್ರಿಯೆ ಕಾರ್ಯವನ್ನು ವೀಕ್ಷಿಸಿದ ನಂತರ,ಅಲ್ಲಿನ ಮತದಾರರು ಮತ್ತು ಬಿ.ಎಲ್.ಓ ಗಳಿಂದ ಮಾಹಿತಿ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಚುನಾವಣಾ ಆಯೋಗದಿಂದ ನೇಮಕ ವಾಗಿರುವ ಬಿಎಲ್ಓಗಳು ಪ್ರತಿ ಮನೆ ಮನೆಗೆ ಭೇಟಿ ನೀಡಿ ಫಾರಂ ನೀಡುವ ಮೂಲಕ ಎಸ್ಐಆರ್ ಪ್ರಕ್ರಿಯೆಗೆ ಒಳ್ಳೆಯ ಸಾಥ್ ನೀಡಿದ್ದಾರೆ ಎಂದರು.
ಕಳೆದ ೨೯ ರಿಂದ ಎಸ್.ಐ.ಆರ್.ಪ್ರಕ್ರಿಯೆ ರಾಜ್ಯದಲ್ಲಿ ಆರಂಭವಾಗಿದ್ದು, ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಎಸ್.ಐ.ಆರ್. ಬಹಳ ತ್ವರಿತಗತಿಯಲ್ಲಿ ನಡೆಯುತ್ತಿದೆ.ತುಮಕೂರು ನಗರ ೧೩೨ನೇ ವಿಧಾನಸಭಾ ಕ್ಷೇತ್ರದಲ್ಲಿ ೨೪೭ಬೂತ್ ಗಳಿದ್ದು, ೨,೮೩,೮೦೦ ಮತದಾರರಿದ್ದು,ಈಗಾಗಲೇ ಬಿಎಲ್ಓಗಳು ೨,೭೩ಲಕ್ಷ ಎನ್ಮರೇಷನ್ ಫಾರಂನ್ನು ತಲುಪಿಸಿದ್ದು,೯೯.೭೨ ಜನರಿಗೆ ಫಾರಂಗಳು ತಲುಪಿವೆ.ಇವುಗಳಲ್ಲಿ ೮೦೫೦೦ ಫಾರಂಗಳು ಡಿಜಿಟೈಜೇಷನ್ ಆಗಿವೆ. ಬಾಕಿ ಫಾರಂಗಳು ಅಪ್ ಲೊಡ್ ನಡೆಯುತ್ತಿದೆ.ಎಲ್ಲಾ ಬಿಎಲ್ಓಗಳು ಮನೆ ಮನೆ ಭೇಟಿಯ ಜೊತೆಗೆ, ಫಾರಂ ತುಂಬಲು ಸಹ ಸಹಕಾರ ನೀಡುತ್ತಿದ್ದಾರೆ. ಹಾಗಾಗಿ ನಾಗರಿಕರ ಪರವಾಗಿ ಅಧಿಕಾ ರಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ನುಡಿದರು.
ಅಧಿಕಾರಿಗಳ ಮಾಹಿತಿ ಪ್ರಕಾರ ಒಂದು ದಿನಕ್ಕೆ ೪೫ ರಿಂದ ೫೦ ಫಾರಂಗಳನ್ನು ಮಾತ್ರ ಡಿಜಿಟಲೈಜೇಷನ್ ಮಾಡಲು ಸಾಧ್ಯ. ಹಾಗಾಗಿ ಚುನಾವಣಾ ಆಯೋಗವೂ ಜುಲೈ ೩೦ಕ್ಕೆ ಇದ್ದ ಕೊನೆಯ ದಿನಾಂಕವನ್ನು ಆಗಸ್ಟ್ ೦೮ರವರೆಗೆ ಮುಂದೂಡಿದೆ. ಅಷ್ಟರೊಳಗೆ ಎಲ್ಲರೂ ತಮ್ಮ ಬಳಿ ಇರುವ ಫಾರಂನ್ನು ಬಿಎಲ್ಓ ಅವರಿಗೆ ನೀಡಿ, ಅವರಿಂದ ಸ್ವೀಕೃತಿ ಪಡೆದು, ಅದನ್ನು ಭದ್ರಪಡಿಸಿ ಇಟ್ಟುಕೊಂಡು, ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಎಂದು ಖಚಿತ ಪಡಿಸಿ ಕೊಳ್ಳುವಂತೆ ಸಲಹೆ ನೀಡಿದರು.
ಎನ್ಮರೇಷನ್ ಫಾರಂ ತುಂಬುವ ವೇಳೆ ಮತದಾರರ ಬಳಿ ೨೦೦೨ರ ಮತದಾರರ ಪಟ್ಟಿಯ ಮಾಹಿತಿ ಇದ್ದರೆ ತುಂಬಿ ಇಲ್ಲವೇ, ನಿಮ್ಮ ಇತ್ತೀಚಿನ ಮಾಹಿತಿ ತುಂಬಿ ಸಹಿ ಮಾಡಿ ಬಿಎಲ್ಓ ಗಳಿಗೆ ತಲುಪಿಸಿ,ಕರಡು ಪಟ್ಟಿಯಲ್ಲಿ ನಿಮ್ಮ ಹೆಸರು ಬಂದ ನಂತರ ನೊಟೀಷ್ ನೀಡಿ, ಸಂಬAಧಪಟ್ಟ ದಾಖಲೆ ಪಡೆದು ಅಂತಿಮ ಪಟ್ಟಿಗೆ ಸೇರಿಸುವ ಪ್ರಕ್ರಿಯೆ ನಡೆಯಲಿದೆ.ಅಧಿಕಾರಿಗಳ ಪ್ರಕಾರ, ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಇನ್ನೂ ಕೇವಲ ೩೦೦೦ ಜನರಿಗೆ ಮಾತ್ರ ಎನ್ಮರೇಷನ್ ಫಾರಂ ನೀಡುವುದು ಬಾಕಿ ಇದೆ.ಹಾಗಾಗಿ ಅಧಿಕಾರಿಗಳು ಶೇ೧೦೦ ರಷ್ಟು ಗುರಿ ಸಾಧಿಸುತ್ತಾರೆ ಎಂಬ ನಂಬಿಕೆ ನಮಗಿದೆ.ಪಾಲಿಕೆಯ ಚುನಾವಣಾ ಘಟಕ ತುಂಬ ಚನ್ನಾಗಿ ಕೆಲಸ ಮಾಡಿದೆ. ಹಾಗಾಗಿ ಇದರಲ್ಲಿ ಭಾಗಿಯಾಗಿರುವ ಪಾಲಿಕೆಯ ಅಧಿಕಾರಿಗಳಿಗೂ ಅಭಿನಂದನೆ ಸಲ್ಲಿಸುವುದಾಗಿ ಡಾ.ರಫೀಕ್ ಅಹಮದ್ ತಿಳಿಸಿದರು.
ಈ ವೇಳೆ ಬಿಎಲ್ಓ ಆದ ದೀಪಿಕಾ, ಬಿಎಲ್ಎ೦೨ಗಳಾದ ಜಾಕೀರ್ ಪಾಷ, ಹುಸ್ಮಾನ್ ಖಾನ್, ಫೈರೋಜ್ ಫಾರೂಕ್ ಮೆಹಬೂಬ್ ಪಾಷ, ಹಸ್ಮತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

