ತುಮಕೂರು: ಗ್ರಾಮೀಣ ಭಾಗದ ಮಹಿಳೆಯರ ಆರ್ಥಿಕ ಸಬಲೀಕರಣ ಹಾಗೂ ಜೀವನೋಪಾಯದ ಅವಕಾಶಗಳನ್ನು ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಜಾರಿಗೆ ತಂದಿರುವ ‘ಮತ್ಸö್ಯ ಸಂಜೀವಿನಿ’ ಯೋಜನೆಯಡಿ ತುಮಕೂರು ತಾಲ್ಲೂಕಿನ ಬಳ್ಳಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡೇರಪುರ ಗ್ರಾಮದಲ್ಲಿರುವ ಶ್ರೀ ಮಾರುತಿ ಸ್ವಸಹಾಯ ಗುಂಪಿನ ಸದಸ್ಯರಿಂದ ಕೃಷಿ ಹೊಂಡಗಳಿಗೆ ೫೦೦೦ ಕಾಟ್ಲ ಮೀನು ಮರಿಗಳನ್ನು ಬಿಡುಗಡೆ ಮಾಡಲಾಯಿತು.
ಸ್ವಸಹಾಯ ಗುಂಪಿನ ಸದಸ್ಯರಿಗೆ ಆರ್ಥಿಕವಾಗಿ ಲಾಭದಾಯಕವಾಗಿರುವ ಹಾಗೂ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಹೊಂದಿರುವ ಕಾಟ್ಲ ಮೀನು ಮರಿಗಳನ್ನು ಮೀನುಗಾರಿಕೆ ಇಲಾಖೆಯಿಂದ ವಿತರಿಸಲಾಯಿತು.
ಮಹಿಳಾ ಸ್ವಸಹಾಯ ಗುಂಪಿನ ಸದಸ್ಯರಿಗೆ ಮೀನು ಸಾಕಾಣಿಕೆಯ ಮೂಲಕ ಹೆಚ್ಚುವರಿ ಆದಾಯ ಗಳಿಸಲು ಹಾಗೂ ಅವರ ಜೀವನೋಪಾಯವನ್ನು ಬಲಪಡಿಸಲು ಈ ಯೋಜನೆ ಸಹಕಾರಿಯಾಗಲಿದೆ. ಕೃಷಿ ಹೊಂಡಗಳ ಸದ್ಬಳಕೆ ಮೂಲಕ ಗ್ರಾಮೀಣ ಮಹಿಳೆಯರಿಗೆ ಸ್ವಾವಲಂಬಿ ಜೀವನ ನಡೆಸಲು ಅವಕಾಶ ಕಲ್ಪಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಈ ವೇಳೆ ಬಳ್ಳಗೆರೆ ಪಂಚಾಯv ï ಅಭಿವೃದ್ಧಿ ಅಧಿಕಾರಿ ಆರ್.ಲಕ್ಷಿö್ಮ, ಬಳ್ಳಗೆರೆ ಶ್ರೀ ಬೆಳಕು ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಅಧ್ಯಕ್ಷೆ ಜಯಲಕ್ಷö್ಮಮ್ಮ, ಕಾರ್ಯದರ್ಶಿ ವೆಂಕಟಲಕ್ಷö್ಮಮ್ಮ, ಖಜಾಂಚಿ ಯಶೋಧಮ್ಮ, ಸಂಜೀವಿನಿ ತುಮಕೂರು ತಾಲ್ಲೂಕು ಅಭಿಯಾನ ನಿರ್ವಹಣಾ ಘಟಕದ ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕ ರಮೇಶ್ ಕೆ.ಆರ್., ಕೃಷಿ ಜೀವನೋಪಾಯ ತಾಲ್ಲೂಕು ವ್ಯವಸ್ಥಾಪಕ ನಂದಿನಿ ಯು, ಕೃಷಿಯೇತರ ಜೀವನೋಪಾಯ ತಾಲ್ಲೂಕು ವ್ಯವಸ್ಥಾಪಕ ಮಧುಸಾಗರ್ ಎ.ಆರ್., ವಲಯ ಮೇಲ್ವಿಚಾರಕ ಕಾಂತರಾಜು ಸಿ.ಎಸ್., ಬಾಬು ಆರ್.ಎಲ್. ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರು(ಎಂಬಿಕೆ), ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ(ಎಲ್.ಸಿ.ಆರ್.ಪಿ) ತನುಜಾ, ಹೇಮಾವತಿ, ಪಶು ಸಖಿ ಕುಮಾರಿ ವೈ, ಕೃಷಿ ಸಖಿ ಮಹಾದೇವಮ್ಮ ಮತ್ತು ಸ್ವಸಹಾಯ ಗುಂಪಿನ ಸದಸ್ಯರು ಇದ್ದರು.
(Visited 1 times, 1 visits today)





