ತುಮಕೂರು: ಸೋದರತ್ವದ ಸಾರುವ, ಬಾಂಧವ್ಯ ಬೆಸೆಯುವ, ಭ್ರಾತೃತ್ವದ ಮಹತ್ವ ತಿಳಿಸುವ ರಕ್ಷಾ ಬಂಧನ ಹಬ್ಬವನ್ನು ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಶನಿವಾರ ನಗರದ ವಿವಿಧೆಡೆ ಸಂಭ್ರಮದಿAದ ಆಚರಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಭೇಟಿ ಮಾಡಿ ಅವರಿಗೆ ರಾಕಿ ಕಟ್ಟಿ ಅವರ ಆಯುಷು, ಆರೋಗ್ಯ, ಯಶಸು ವೃದ್ಧಿಯಾಗಲೆಂದು ಕೋರಿ ಸೋದರತ್ವದ ಶ್ರೇಷ್ಠತೆ ಸಾರಿದರು.
ಇದಕ್ಕೂ ಮೊದಲು ಅಶೋಕ ನಗರದ ಆಜಾದ್ ಪಾರ್ಕಿನಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಮುಖಂಡರು ನಗರ ಪಾಲಿಕೆಯ ಪೌರಕಾರ್ಮಿಕರಿಗೆ ರಕ್ಷಾ ಬಂಧನ ಕಟ್ಟಿ, ಸಿಹಿ ತಿನ್ನಿಸಿ ಶುಭಕೋರಿದರು. ೨೬ನೇ ವಾರ್ಡಿನ ನಗರ ಪಾಲಿಕೆ ಮಾಜಿ ಸದಸ್ಯ ಹೆಚ್.ಮಲ್ಲಿಕಾರ್ಜುನ್, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ವಿರೂಪಾಕ್ಷಪ್ಪ, ವೆಂಕಟೇಶ್ ಮತ್ತಿತರ ಮುಖಂಡರು ಮಹಿಳಾ ಮೋರ್ಚಾದ ರಕ್ಷಾ ಬಂಧನ ಆಚರಣೆಯಲ್ಲಿ ಭಾಗಿಯಾಗಿದ್ದರು.
ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಚೈತ್ರ ಮಂಜುನಾಥ್, ನಗರ ಅಧ್ಯಕ್ಷೆ ವಸಂತ ಬಿ.ಹೆಚ್. ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಲತಾ ಬಾಬು, ಮಹಿಳಾ ಮೋರ್ಚಾ ನಗರ ಪ್ರಧಾನ ಕಾರ್ಯದರ್ಶಿ ಶೋಭಾ ಅಭಿಲಾಷ್, ಮುಖಂಡರಾದ ರೇಖಾ ಕುಮಾರ್, ಮಂಜುಳಾ ಲೋಕೇಶ್, ರೂಪಾ ಶಿವಮಾಧು, ನಳಿನಾ, ಪವಿತ್ರಾ ಮೊದಲಾದವರು ಪೌರ ಕಾರ್ಮಿಕರಿಗೆ ತಿಲಕವಿಟ್ಟು, ರಾಕಿಕಟ್ಟಿ, ಸಿಹಿ ತಿನ್ನಿಸಿ ರಾಕಿ ಹಬ್ಬದ ಶುಭಕೋರಿದರು. ಇದರ ಅಂಗವಾಗಿ ಪೌರಕಾರ್ಮಿಕರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಇದಲ್ಲದೆ ನಗರದ ವಿವಿಧ ಕಚೇರಿಗಳಲ್ಲಿ ಅಧಿಕಾರಿ ಸಿಬ್ಬಂದಿಗೆ, ನಾನಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಭೇಟಿ ಮಾಡಿ ಅವರಿಗೆ ರಾಕಿ ಕಟ್ಟಿ, ಸಾಮಾಜಿಕ ಸಾಮರಸ್ಯ, ಭಾವೈಕ್ಯತೆಯ ರಕ್ಷಾ ಬಂಧನ ಹಬ್ಬದ ಮಹತ್ವ ತಿಳಿಸಿ, ಸೋದರ ಬಾಂಧವ್ಯ ಸಾರಿದರು.
(Visited 1 times, 1 visits today)





