BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಫ್ಲೋರೈಡ್ ಮುಕ್ತ ಪಾವಗಡಕ್ಕೆ ಕಾರಣಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ: ಶಾಸಕ ಎಚ್. ವಿ. ವೆಂಕಟೇಶ್ ಹೇಳಿಕೆ
  • ‘ಉತ್ತಮ ಚಿಂತನೆಯಿAದ ದೊಡ್ಡ ಸಾಧನೆ ಸಾಧ್ಯ’
  • ತುಮಕೂರು ರೈಲು ನಿಲ್ದಾಣ ರೀಮಾಡೆಲಿಂಗ್
  • ಕೃಷಿ ಇಲಾಖೆಯ ಸೌಲಭ್ಯಗಳನ್ನು ಸದ್ಬಳಕೆಮಾಡಿಕೊಳ್ಳಿ
  • ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆಯ ಸಂಭ್ರಮಾಆಚರಣೆ
  • ಜಿಲ್ಲೆಯಲ್ಲಿ ಮಾದಕ ವಸ್ತುಗಳ ಮಾರಾಟ ಜಾಲ ಹಾವಳಿ
  • ಅನಧಿಕೃತ ರಸಗೊಬ್ಬರ ಸಾಗಾಣಿಕೆ: ಲಾರಿ ಜಪ್ತಿ
  • ತಿರುಪತಿಗೆ ತುಪ್ಪ ಕೊಂಡೊಯ್ಯುವ ಟ್ಯಾಂಕರ್‌ಗೆ ಚಾಲನೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಗುಬ್ಬಿ : ಶಾಸಕ ಎಸ್.ಆರ್.ಶ್ರೀನಿವಾಸ್ ರಿಂದ ಗುಬ್ಬಿಕೆರೆಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ!!
Trending

ಗುಬ್ಬಿ : ಶಾಸಕ ಎಸ್.ಆರ್.ಶ್ರೀನಿವಾಸ್ ರಿಂದ ಗುಬ್ಬಿಕೆರೆಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ!!

By News Desk BenkiyabaleUpdated:November 25, 2019 6:08 pm

ಗುಬ್ಬಿ :

      ತಾಲ್ಲೂಕಿನ ಪ್ರಮುಖ ಕೆರೆಗಳಾದ ಕಡಬ ಮತ್ತು ಗುಬ್ಬಿ ಅಮಾನಿಕೆರೆಗೆ ನಿರಂತರವಾಗಿ ಒಂದು ತಿಂಗಳು ಕಾಲ ಹೇಮಾವತಿ ನೀರು ಹರಿಸಿಕೊಳ್ಳಲು ಜಲ ನಿಗಮ ಮತ್ತು ಜಿಲ್ಲಾಡಳಿತದೊಂದಿಗೆ ಚರ್ಚಿಸಿದ್ದೇನೆ ಎಂದು ಮಾಜಿ ಸಚಿವ ಹಾಗೂ ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.

      ತಾಲ್ಲೂಕಿನ ಗಡಿಭಾಗದ ಸಿಂಗಿಪುರ ಎಸ್ಕೇಪ್ ಗೇಟ್ ತೆರೆದು ಎಂ.ಎಚ್.ಪಟ್ಟಣ ಮತ್ತು ಗುಬ್ಬಿಕೆರೆಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಜನವರಿ ಮಾಹೆಯವರೆಗೆ ಹೇಮೆ ಹರಿಯಲಿದೆ. ನಮ್ಮ ತಾಲ್ಲೂಕಿನ ಉಳಿದ ಕೆರೆಗಳಿಗೆ ಬೇಕಿರುವ 1.50 ಟಿಎಂಸಿ ನೀರನ್ನು ಹರಿಸಿಕೊಳ್ಳಲು ಚಿಂತಿಸಲಾಗಿದೆ. ಡಿಸೆಂಬರ್ ಅಂತ್ಯಕ್ಕೆ ಕಡಬ ಮತ್ತು ಗುಬ್ಬಿಕೆರೆ ಭಾಗಶಃ ತುಂಬಿಸುವ ಕೆಲಸ ಮಾಡಲಾಗುವುದು ಎಂದರು.

       ನೀರಿನ ರಾಜಕಾರಣ ನಾನು ಎಂದೂ ನಡೆಸಿಲ್ಲ. ಕಳೆದ 20 ವರ್ಷದಿಂದ ಹೇಮಾವತಿ ನೀರು ಹರಿಸಿಕೊಳ್ಳಲು ಹೋರಾಟವನ್ನು ನಡೆಸಿದ್ದೇನೆ. ಜತೆಗೆ ಕಾನೂನಾತ್ಮಕವಾಗಿ ಕೂಡಾ ನೀರು ಹರಿಸಿಕೊಂಡಿದ್ದೇನೆ. ಚುನಾವಣಾ ಸಂದರ್ಭದಲ್ಲಿ ನೀರಿನ ಹೋರಾಟವನ್ನು ಬಳಸಿಕೊಳ್ಳುವ ಕೊಳಕು ರಾಜಕಾರಣ ನಾನು ಮಾಡುವುದಿಲ್ಲ. ನಾಲೆ ಮೇಲೆ ಉಳಿದುಕೊಂಡು ಹಗಲಿರುಳು ಅಲ್ಲಿಯೇ ಅಡುಗೆ ತಯಾರಿಸಿ ನೀರು ಹರಿಸಿಕೊಂಡ ಬಗ್ಗೆ ಜನರಿಗೆ ತಿಳಿದಿದೆ. ಪ್ರಚಾರಕ್ಕೆ ನಾನು ಎಂದೂ ಹೇಮೆ ನೀರು ಬಳಸಿಕೊಂಡಿಲ್ಲ. ಗಂಗೆಶಾಪ ಎಂದಿಗೂ ತಟ್ಟಿಲ್ಲ. ಕಳೆದ ವರ್ಷ ಮಳೆಯೇ ಬಾರದೇ ಡ್ಯಾಂನಲ್ಲಿ ನೀರು ಇರಲಿಲ್ಲ. ಅಂತಹ ಬರಗಾಲದಲ್ಲೂ ತಾಲ್ಲೂಕಿನ ಪ್ರಮುಖ ಕೆರೆಗಳಿಗೆ ನೀರು ಹರಿಸಿದ್ದೆ. ಉಳಿದ ಕೆರೆಗಳು ಭಾಗಶಃ ತುಂಬಿಸಿಕೊಂಡಿದ್ದೆ ಎಂದು ತಿಳಿಸಿದರು.

      ಸಣ್ಣಪುಟ್ಟ ಕೆರೆಗಳಾದ ಹೊದಲೂರು, ಬಾಗೂರು. ಕಿಟ್ಟದಕುಪ್ಪೆ, ದೊಡ್ಡನೆಟ್ಟಗುಂಟೆ, ಲಕ್ಕೇನಹಳ್ಳಿ ಕೆರೆಗಳಿಗೆ ನೀರು ಹರಿದಿದೆ. ಕೆಲವು ಈ ವಾರದಲ್ಲಿ ಭರ್ತಿಯಾಗಲಿದೆ. ಉಳಿದಂತೆ ಕಡಬ ಕೆರೆಗೆ ಈ ದಿನ ಕಾರೇಹಳ್ಳಿ ಎಸ್ಕೇಪ್ ಗೇಟ್ ಎತ್ತಲಾಗಿದೆ. ಶಿರಾ ತಾಲ್ಲೂಕಿಗೆ ಹೋಗುವ ನೀರಿನ ಪ್ರಮಾಣ ಅರಿತು ಗೇಟ್ ತೆರೆದು ಕಡಬದತ್ತ ಹರಿಸಲಾಗುತ್ತಿದೆ. ಯಾವ ಭಾಗದಿಂದ ನೀರು ಹರಿಸಿಕೊಳ್ಳಬೇಕು ಎಂಬುದು ಚೆನ್ನಾಗಿ ತಿಳಿದಿದ್ದು, ಎಲ್ಲಾ ಗೇಟ್‍ಗಳ ಕೀ ನನ್ನ ಬಳಿ ಇದೆ. ಯಾವ ಕೆರೆಗೆ ಯಾವ ಹಂತದಲ್ಲಿ ನೀರು ಹರಿಸಿಕೊಳ್ಳಬೇಕು. ಎಲ್ಲಿಂದ ಹೇಗೆ ನೀರು ಹರಿಯುತ್ತದೆ ಎಂಬ ಅರಿವು ನನಗಿದೆ. ವಿನಾಕಾರಣ ಕಳೆದ ವರ್ಷ ಒರ್ವನನ್ನು ನಾಲೆಗೆ ಬಲಿ ನೀಡಲಾಗಿತ್ತು. ನೀರಿಗಾಗಿ ಯಾರೇ ಹೋರಾಟ ಮಾಡಿದರೂ ಪ್ರಯೋಜನವಿಲ್ಲ. ಖುದ್ದು ನಾನು ಹಾಜರಾಗಿ ಗೇಟ್ ತೆರೆದು ನೀರು ಹರಿಸುತ್ತೇನೆ ಎಂದು ನೀರಿನ ರಾಜಕಾರಣ ಮಾಡುವರಿಗೆ ಟಾಂಗ್ ಕೊಟ್ಟರು.

      ಉಪಚುನಾವಣೆ ಬಗ್ಗೆ ನನಗೆ ಅರಿವಿಲ್ಲ. ಚುನಾವಣಾ ಕ್ಷೇತ್ರಗಳಿಗೆ ನನ್ನನ್ನು ಉಸ್ತುವಾರಿಯಾಗಿ ನೇಮಿಸಿಲ್ಲ. ನಾನು ಪ್ರಬುದ್ದ ರಾಜಕಾರಣಿ ಅಲ್ಲ. ಯೋಗ್ಯತೆ ನೋಡಿ ಚುನಾವಣಾ ನಿರ್ವಹಣೆ ಜವಾಬ್ದಾರಿ ನೀಡುತ್ತಾರೆ. ನಾನು ನನ್ನ ಕ್ಷೇತ್ರ ಬಿಟ್ಟು ಎಲ್ಲೂ ಹೋಗಿಲ್ಲ. ಯಾವ ಕ್ಷೇತ್ರದಲ್ಲಿ ಹೇಗೆ ಚುನಾವಣೆ ನಡೆದಿದೆ ನನಗೆ ತಿಳಿದಿಲ್ಲ ಎಂದು ಉಪಚುನಾವಣೆ ಬಗ್ಗೆ ನಿರಾಸಕ್ತಿ ತೋರಿದ ಶಾಸಕರು ದೊಡ್ಡ ರಾಜಕಾರಣಿ ಎಂದು ಬಿಂಬಿಸಿಕೊಂಡಿದ್ದರೆ ನಾನು ರೈತರ ಮಧ್ಯೆ ನೀರು ಹರಿಸುವ ಕೆಲಸ ಮಾಡುತ್ತಿರಲಿಲ್ಲ. ಈ ನಿಟ್ಟಿನಲ್ಲಿ ಚುನಾವಣಾ ವಿಶ್ಲೇಷಣೆ ನೀಡುವ ಪ್ರಬುದ್ದ ನಾನಲ್ಲ. ಯಾರು ಗೆಲ್ಲುತ್ತಾರೆ ಭವಿಷ್ಯ ನಾನು ಹೇಳೋದಿಲ್ಲ ಎಂದರು.

      ಈ ಸಂದರ್ಭದಲ್ಲಿ ಮುಖಂಡರಾದ ಕೆ.ಆರ್.ವೆಂಕಟೇಶ್, ಎಚ್.ಡಿ.ರಂಗಸ್ವಾಮಿ, ಯು.ರಾಜಣ್ಣ, ಸಿ.ಜಿ.ಲೋಕೇಶ್, ಎಂ.ಎಚ್.ಪಟ್ಟಣ ವೆಂಕಟೇಶ್, ಕೇಬಲ್‍ರಾಜು, ಶಂಕರೇಗೌಡ, ಲಕ್ಷ್ಮೀಕಾಂತ್, ಪಪಂ ಸದಸ್ಯ ಕುಮಾರ್ ಇತರರು ಇದ್ದರು.

 

(Visited 72 times, 1 visits today)
Previous Articleಬುಗುಡನಹಳ್ಳಿ ಕೆರೆ : ಹೂಳೆತ್ತುವ ಕಾಮಗಾರಿಯನ್ನು ಸ್ಥಗಿತಗೊಳಿಸಲು ಸಂಸದರ ಸೂಚನೆ
Next Article  ತುಮಕೂರು : ಪೊಲೀಸರ ವಶದಲ್ಲಿದ್ದ ಕಳ್ಳನ ಪರಾರಿಯ ಹಿಂದೆ ಅನುಮಾನ..?
News Desk Benkiyabale

Related Posts

ಕೃಷಿ ಇಲಾಖೆಯ ಸೌಲಭ್ಯಗಳನ್ನು ಸದ್ಬಳಕೆಮಾಡಿಕೊಳ್ಳಿ

July 16, 2025 3:26 pm ತುಮಕೂರು

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆಯ ಸಂಭ್ರಮಾಆಚರಣೆ

July 16, 2025 3:25 pm ತುಮಕೂರು

ಜಿಲ್ಲೆಯಲ್ಲಿ ಮಾದಕ ವಸ್ತುಗಳ ಮಾರಾಟ ಜಾಲ ಹಾವಳಿ

July 16, 2025 3:24 pm ತುಮಕೂರು
ತಾಜಾ ಸುದ್ಧಿಗಳು
ಇತರೆ ಸುದ್ಧಿಗಳು

ಫ್ಲೋರೈಡ್ ಮುಕ್ತ ಪಾವಗಡಕ್ಕೆ ಕಾರಣಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ: ಶಾಸಕ ಎಚ್. ವಿ. ವೆಂಕಟೇಶ್ ಹೇಳಿಕೆ

July 18, 2025 3:15 pm
ಇತರೆ ಸುದ್ಧಿಗಳು

‘ಉತ್ತಮ ಚಿಂತನೆಯಿAದ ದೊಡ್ಡ ಸಾಧನೆ ಸಾಧ್ಯ’

July 18, 2025 3:13 pm
ಇತರೆ ಸುದ್ಧಿಗಳು

ತುಮಕೂರು ರೈಲು ನಿಲ್ದಾಣ ರೀಮಾಡೆಲಿಂಗ್

July 18, 2025 3:13 pm
ತುಮಕೂರು

ಕೃಷಿ ಇಲಾಖೆಯ ಸೌಲಭ್ಯಗಳನ್ನು ಸದ್ಬಳಕೆಮಾಡಿಕೊಳ್ಳಿ

July 16, 2025 3:26 pm
ತುಮಕೂರು

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆಯ ಸಂಭ್ರಮಾಆಚರಣೆ

July 16, 2025 3:25 pm
ತುಮಕೂರು

ಜಿಲ್ಲೆಯಲ್ಲಿ ಮಾದಕ ವಸ್ತುಗಳ ಮಾರಾಟ ಜಾಲ ಹಾವಳಿ

July 16, 2025 3:24 pm
Our Youtube Channel
Our Picks

ಫ್ಲೋರೈಡ್ ಮುಕ್ತ ಪಾವಗಡಕ್ಕೆ ಕಾರಣಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ: ಶಾಸಕ ಎಚ್. ವಿ. ವೆಂಕಟೇಶ್ ಹೇಳಿಕೆ

July 18, 2025 3:15 pm

‘ಉತ್ತಮ ಚಿಂತನೆಯಿAದ ದೊಡ್ಡ ಸಾಧನೆ ಸಾಧ್ಯ’

July 18, 2025 3:13 pm

ತುಮಕೂರು ರೈಲು ನಿಲ್ದಾಣ ರೀಮಾಡೆಲಿಂಗ್

July 18, 2025 3:13 pm

ಪತ್ರಿಕೋದ್ಯಮ ವಿದ್ಯರ‍್ಥಿಗಳು ಪತ್ರಿಕೋದ್ಯಮದ ಆಸ್ತಿಗಳಾಗಲಿ

July 01, 2025 3:52 pm

೧೭ ಮಹಿಳೆಯರು ಸೇರಿ ೩೨ ಮಂದಿಗೆ ಗಾಯ

June 30, 2025 3:48 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ಇತರೆ ಸುದ್ಧಿಗಳು

ಫ್ಲೋರೈಡ್ ಮುಕ್ತ ಪಾವಗಡಕ್ಕೆ ಕಾರಣಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ: ಶಾಸಕ ಎಚ್. ವಿ. ವೆಂಕಟೇಶ್ ಹೇಳಿಕೆ

By News Desk BenkiyabaleJuly 18, 2025 3:15 pm

ಪಾವಗಡ: ಪಾವಗಡದ ಜನರ ದಹ ನೀಗಿಸಿದ ಭಗೀರಥ ಸಿಎಂ ಸಿದ್ದರಾಮಯ್ಯನವರು ಎಂದು ಪಾವಗಡ ಶಾಸಕ ಹೆಚ್. ವಿ. ವೆಂಕಟೇಶ್ ತಿಳಿಸಿದ್ದಾರೆ…

‘ಉತ್ತಮ ಚಿಂತನೆಯಿAದ ದೊಡ್ಡ ಸಾಧನೆ ಸಾಧ್ಯ’

July 18, 2025 3:13 pm

ತುಮಕೂರು ರೈಲು ನಿಲ್ದಾಣ ರೀಮಾಡೆಲಿಂಗ್

July 18, 2025 3:13 pm

ಕೃಷಿ ಇಲಾಖೆಯ ಸೌಲಭ್ಯಗಳನ್ನು ಸದ್ಬಳಕೆಮಾಡಿಕೊಳ್ಳಿ

July 16, 2025 3:26 pm
News by Date
July 2025
M T W T F S S
 123456
78910111213
14151617181920
21222324252627
28293031  
« Jun    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.