Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಕಲ್ವತರುನಾಡಿನಲ್ಲಿ ಸಡಗರ ಸಂಭ್ರಮದ ಗೌರಿ-ಗಣೇಶ ಆಚರಣೆ
  • ಬರಗಾಲ ಪೀಡಿತ ರಾಜ್ಯವನ್ನಾಗಿ ಘೋಷಿಸಲು ಸಿಪಿಐ(ಎಂ) ಅಗ್ರಹ
  • ನÀಗರದಾದ್ಯಂತ ಸ್ವಚ್ಛತಾ ಕಾರ್ಯಕ್ರಮ : ಅಶ್ವಿಜ
  • ಸೆ.೧೫ ಸಂವಿಧಾನ ಓದು ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ
  • ಬಡತನ ನಿರ್ಮೂಲನೆ ನಮ್ಮ ಉದ್ದೇಶ : ಶಶಿಧರ್
  • ಸಾಹಿತ್ಯ, ಕಾವ್ಯಗಳ ತೌಲನಿಕ ಅಧ್ಯಯನ ಅಗತ್ಯ: ನಾಡೋಜ ಹಂಪನಾ
  • ಜನಸಂಖ್ಯಾವಾರು ಮೀಸಲಾತಿ ಹೆಚ್ಚಳವಾಗಲು ಹೋರಾಟ ಅಗತ್ಯ
  • ಜೀವಿಗಳ ಸಮೃದ್ದಿಯಾಗಿ ಪರಿಸರದ ಸಂರಕ್ಷಣೆ ಅತ್ಯಗತ್ಯ : ಜೆ. ಪ್ರಭು
Facebook Twitter Instagram YouTube RSS
Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Benkiyabale
Home » ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಮಹತ್ವ
Trending

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಮಹತ್ವ

By News Desk BenkiyabaleUpdated:April 04, 2023 4:49 pm

ಮತದಾನ ಕೇವಲ ಪ್ರತಿಯೋರ್ವ ನಾಗರೀಕನ ಹಕ್ಕು ಅಷ್ಟೇ ಅಲ್ಲ, ಪ್ರತಿಯೊಬ್ಬ ವಯಸ್ಕ ಪ್ರಜೆಯ ಕರ್ತವ್ಯವೂ ಕೂಡ. ಮತದಾನ ಭಾರತೀಯರಿಗೆ ನೀಡಿರುವ ಹಕ್ಕಾಗಿದ್ದು, ಭವ್ಯ ಭಾರತ ಹಾಗೂ ಸದೃಢ ಸಮಾಜ ಕಟ್ಟಲು ಪೂರಕ ವ್ಯವಸ್ಥೆಯಾಗಿದೆ. ನಮ್ಮ ದೇಶದಲ್ಲಿ ಸಾಮಾಜಿಕ ಅಂತಸ್ತು, ಜಾತಿಬೇಧ, ಲಿಂಗ ತಾರತಮ್ಯಗಳಾವುದನ್ನು ಲೆಕ್ಕಿಸದೇ ಎಲ್ಲರಿಗೂ ಸರ್ವಸಮಾನವಾಗಿ ನೀಡಿರುವ ಹಕ್ಕಾಗಿರುವುದೇ ಈ ಮತದಾನ. ಮತದಾನವು ಜನತೆಯು ಅಭ್ಯರ್ಥಿಗಳ ಆಯ್ಕೆ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸೂಚಿಸಲು ಅನುವು ಮಾಡಿಕೊಂಡಿರುವ ಒಂದು ಸುಲಭ ಪ್ರಕ್ರಿಯೆ ಎನ್ನಬಹುದು.
ಈ ಹಿಂದಿನ ಕಾಲದಲ್ಲೆಲ್ಲಾ ರಾಜಮಹಾರಾಜರು ತಮ್ಮ ತಮ್ಮ ಪ್ರಾಂತ್ಯಗಳಲ್ಲಿ ಆಳುತ್ತಿದ್ದರು. ಆಗೆಲ್ಲಾ ಜನರು ರಾಜರನ್ನು ಆರಿಸುತ್ತಿರಲಿಲ್ಲ. ರಾಜರೇ ಅವರ ತೋಳ್ಬಲದಿಂದ, ವೀರತ್ವದಿಂದ, ಶೌರತ್ವದಿಂದ ಹೋರಾಡಿ ಗೆದ್ದು ಆಳುತ್ತಿದ್ದರು. ಕೆಲ ರಾಜರನ್ನು ನೋಡಿದ ಕೂಡಲೆ ಅವನು ನಮ್ಮನ್ನು ಆಳಲು ಸೂಕ್ತ ಎಂದು ಎನಿಸಿಬಿಡುತ್ತಿತ್ತಂತೆ. ಆದರೆ ಪ್ರಸ್ತುತ ದಿನಮಾನದಲ್ಲಿ ಒಬ್ಬ ವ್ಯಕ್ತಿಯ ಬಾಹ್ಯರೂಪದಿಂದ, ಮೈಕಟ್ಟಿನಿಂದ ಆತ ನಮ್ಮನ್ನು ಆಳಲು ಮತ್ತು ನಮಗೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಮರ್ಥನೋ? ಇಲ್ಲವೆ ಅಸಮರ್ಥನೋ? ಕಳಂಕಿತನೋ? ಎಂದು ಪರಿಗಣಿಸಿ ಆರಿಸಲು ಸಾಧ್ಯವಿಲ್ಲ. ಕಾರಣ ಈಗ ಪ್ರಾಮಾಣಿಕವಾಗಿ ಬದುಕುತ್ತಿರುವುದನ್ನು ಕಾಣಲಾಗದು. ಈಗೇನಿದ್ದರೂ ಮುಖವಾಡ ಧರಿಸಿಕೊಂಡು ಜೀವಿಸುತ್ತಿರುವವರೇ ಹೆಚ್ಚು ಎಂದರೆ ಅತಿಶಯೋಕ್ತಿ ಎನಿಸದು! ಯಾರನ್ನೂ ನಂಬಲಾಗದ ಈ ಜಗತ್ತಿನಲ್ಲಿ ಚುನಾವಣಾ ಪ್ರಕ್ರಿಯೆಯಿಲ್ಲದೆ ಆರಿಸಿ ನಮ್ಮನ್ನು ಆಳಲು ಬಿಡಲು ಸಾಧ್ಯವೇ ಇಲ್ಲ. ಆದ್ದರಿಂದ ಈ ಮತದಾನ ಪ್ರಕ್ರಿಯೆಯನ್ನು ಹೊರತುಪಡಿಸಿ ಜನನಾಯಕನನ್ನು ಆರಿಸಲು ಸೂಕ್ತ ಪ್ರಕ್ರಿಯೆ ಯಾವುದೂ ಇಲ್ಲ.
ಈ ಮತದಾನ ವ್ಯವಸ್ಥೆ ಪ್ರಜೆಗಳಿಗೆ ಪರೋಕ್ಷವಾಗಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡಲು ಅವಕಾಶ ನೀಡಿದೆ. ಇದರಿಂದಲೇ ಭ್ರಷ್ಠ ಸರ್ಕಾರಗಳನ್ನು ಶಾಂತಿಯುತವಾಗಿಯೇ ಕಿತ್ತೊಗೆಯಲು ಸಾಧ್ಯವಾಗುವುದು. ಆದ್ದರಿಂದಲೇ ಮತದಾನವನ್ನು ‘ಪ್ರಜಾಪ್ರಭುತ್ವ’ದ ಆಧಾರಸ್ತಂಭ ಎಂದಿರುವುದು. ಚುನಾವಣಾ ಸಮಯದಲ್ಲಿ ಜನರು ಆಸೆ-ಆಮಿಷಗಳಿಗೆ ಬಲಿಯಾಗುವುದು ಸಹಜ. ಆದರೆ ಇದರ ಬಗ್ಗೆ ಅರಿವು ಮೂಡಿಸಿದರೆ ಅವರಾಗಿಯೇ ಬದಲಾಗುತ್ತಾರೆ. ಇನ್ನು ಮತದಾನವನ್ನು ಕಡ್ಡಾಯಗೊಳಿಸದೇ ಇದ್ದಲ್ಲಿ ರಾಮರಾಜ್ಯವಾಗಬೇಕಿದ್ದ ಭಾರತ ರಾವಣನ ಲಂಕೆಯಾಗಿ ಭ್ರಷ್ಠರ ಕೋಟೆಯಾಗುವುದರಲ್ಲಿ ಯಾವುದೇ ಸಂದೇಹವೇ ಇಲ್ಲ. ಆದ್ದರಿಂದ ಮತದಾನ ಎಲ್ಲರ ಹಕ್ಕಾಗಿ ಮತ್ತು ಕರ್ತವ್ಯವಾಗಿ ಹೊರಹೊಮ್ಮಿ ದೇಶೋದ್ಧಾರಕ್ಕೆ ಮುನ್ನುಡಿ ಬರೆಯಬೇಕಿದೆ.
ಗಂಭೀರ ಅಪರಾಧಗಳನ್ನು ಎಸಗಿದ ಅಭ್ಯರ್ಥಿಯನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಅನರ್ಹಗೊಳಿಸಬೇಕೆ?
ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಲು ಚುನಾವಣೆಯೇ ಹೆಬ್ಬಾಗಿಲು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯ ಪಾತ್ರ ಹಿರಿದು. ಚುನಾವಣೆಯ ಪ್ರಕ್ರಿಯೆ ಕಟ್ಟುನಿಟ್ಟಾಗಿದ್ದಷ್ಟೂ ಜೊಳ್ಳುಗಳನ್ನು ಜರಡಿ ಹಿಡಿದು ಗಟ್ಟಿ ಕಾಳುಗಳನ್ನು ಆರಿಸಲು ಸಾಧ್ಯವಾಗುತ್ತದೆ. ಆದರೆ ಭ್ರಷ್ಟಾಚಾರ ಇಂದಿನ ಜೀವನ ವಿಧಾನವಾಗಿದೆ. ರಾಜಕಾರಣದಲ್ಲಿ ಇದು ಗರಿಷ್ಠ ಪ್ರಮಾಣದಲ್ಲಿದೆ ಎಂದರೆ ಅಚ್ಚರಿಯೇನಲ್ಲ.
ಭಾರತದ ನಿವೃತ್ತ ಮುಖ್ಯ ಚುನಾವಣಾ ಆಯುಕ್ತರೋರ್ವರು “ರಾಜಕಾರಣಿಗಳನ್ನು ಸಮಾಜಕ್ಕಂಟಿದ ಕ್ಯಾನ್ಸರ್” ಎಂದು ಕರೆದಾಗ ಒಬ್ಬಿಬ್ಬರು ದುರ್ಬಲ ಪ್ರತಿಕ್ರಿಯೆ ವ್ಯಕ್ತಪಡಿಸಿದರಷ್ಟೇ. ಅಲ್ಲ ಎಂದು ಹೇಳಲು ಯಾವ ರಾಜಕಾರಣಿಗೂ ನೈತಿಕ ಧೈರ್ಯವಿಲ್ಲ. ಪಕ್ಷವು ಅಭ್ಯರ್ಥಿಗಳಿಗೆ ಟಿಕೆಟ್ ನೀಡುವಾಗ ಅವರ ಅಪರಾಧದ ಹಿನ್ನೆಲೆಯಲ್ಲಿ ಪರಿಶೀಲಿಸುವ ಕ್ರಮ ಈಚೆಗೆ ಬಳಕೆಗೆ ಬರುತ್ತಿದೆ. ಆದರೇನಂತೆ ಒಬ್ಬ ಆಪಾದಿತನು ಅಪರಾಧಿಯೆಂದು ಸಾಬೀತಾಗುವವರೆಗೂ ಅಪರಾಧಿಯಲ್ಲ ಎನ್ನುತ್ತದೆ ನ್ಯಾಯಾಲಯ. ಇದರ ಪರಿಣಾಮವಾಗಿ ಕೊಲೆ, ಸುಲಿಗೆ, ಡಕಾಯಿತಿ, ಅತ್ಯಾಚಾರದಂಥ ಗಂಭೀರ ಗುರುತರ ಅಪರಾಧದ ಆಪಾದನೆ ಹೊತ್ತವರೂ, ಕೋಟ್ಯಂತರ ರೂಪಾಯಿ ಸಾರ್ವಜನಿಕರ ಹಣವನ್ನು ಗುಳುಂ ಮಾಡಿದವರು ಹಗರಣಗಳ ಆಪಾದನೆ ಹೊತ್ತು ಜೈಲು ಸೇರಿದವರೂ ಚುನಾವಣೆಗೆ ನಿಲ್ಲುವಂತಹ ಅಭಾಸಕರ ಪ್ರಸಂಗಗಳು ಹೆಚ್ಚಾಗಿಯೇ ನಡೆಯುತ್ತಿವೆ. ಸೆರೆಮನೆಯಲ್ಲಿದ್ದೇ ಅನುಕಂಪದ ಅಲೆಯೇರಿ ಗೆದ್ದು ಬಂದವರ ಉದಾಹರಣೆಗಳೂ ಸಾಕಷ್ಟಿವೆ.
ತಾವು ಚುನಾವಣೆಗೆ ನಿಲ್ಲುತ್ತೇವೆ ಎಂದು ಅಭ್ಯರ್ಥಿಗಳು ಮುಂದೆ ಬಂದಾಗ ಅವರ ಆರ್ಥಿಕ ಪರಿಸ್ಥಿತಿಯನ್ನು ಪರಿಶೀಲಿಸುವಂತೆಯೇ ಅವರ ಸಚ್ಚಾರಿತ್ರ್ಯ, ಗುಣಾವಗುಣ, ನಡತೆಗಳನ್ನು ಪರಿಶೀಲಿಸುವುದು ಅವಶ್ಯಕ. ಕಾರಣ ‘ಯಥಾರಾಜ ತಥಾ ಪ್ರಜಾ’ ಎಂಬಂತೆ ನಮ್ಮನ್ನು ಆಳುವ ರಾಜನು ಸರ್ವಗುಣಗಳನ್ನು ತನ್ನಲ್ಲಿ ರೂಢಿಸಿಕೊಂಡಿರಬೇಕಾದ ಅವಶ್ಯಕತೆಯಿದೆ. ಅದನ್ನೂ ಬಿಟ್ಟು ಆ ರಾಜನೇ (ನಾಯಕ) ಕ್ರೂರಿ, ಹಂತಕ, ಪ್ರಜಾಪೀಡಕನಾದರೆ (ಬೇಲಿಯೇ ಎದ್ದು ಹೊಲವನ್ನು ಮೆಯ್ದಡೆ ರಕ್ಷಿಪರಾರುಂಟು ಸರ್ವಜ್ಞ) ಆತನಿಂದ ಪ್ರಜೆಗಳಿಗಿನ್ನೇನು ಲಾಭವಿದೆ ಸ್ವಲ್ಪ ಆಲೋಚಿಸಿ…??

(Visited 1 times, 1 visits today)
jc madhuswamy tumkur
Previous Articleಸಚಿವ ಜೆಸಿಎಂ ವಿರುದ್ಧ ತಿರುಗಿಬಿದ್ದ ವೀರಶೈವ ನಾಯಕರು
Next Article ನ್ಯಾಯಕ್ಕಾಗಿ ಹೋರಾಡಿದ ಧೀಮಂತ ವ್ಯಕ್ತಿ ಡಾ.ಬಾಬು ಜಗಜೀವನರಾಮ್
News Desk Benkiyabale

Related Posts

ಕಲ್ವತರುನಾಡಿನಲ್ಲಿ ಸಡಗರ ಸಂಭ್ರಮದ ಗೌರಿ-ಗಣೇಶ ಆಚರಣೆ

September 20, 2023 5:12 pm ತುಮಕೂರು

ಬರಗಾಲ ಪೀಡಿತ ರಾಜ್ಯವನ್ನಾಗಿ ಘೋಷಿಸಲು ಸಿಪಿಐ(ಎಂ) ಅಗ್ರಹ

September 20, 2023 5:11 pm ಇತರೆ ಸುದ್ಧಿಗಳು

ನÀಗರದಾದ್ಯಂತ ಸ್ವಚ್ಛತಾ ಕಾರ್ಯಕ್ರಮ : ಅಶ್ವಿಜ

September 20, 2023 5:10 pm ತುಮಕೂರು
ತಾಜಾ ಸುದ್ಧಿಗಳು
ತುಮಕೂರು

ಕಲ್ವತರುನಾಡಿನಲ್ಲಿ ಸಡಗರ ಸಂಭ್ರಮದ ಗೌರಿ-ಗಣೇಶ ಆಚರಣೆ

September 20, 2023 5:12 pm
ಇತರೆ ಸುದ್ಧಿಗಳು

ಬರಗಾಲ ಪೀಡಿತ ರಾಜ್ಯವನ್ನಾಗಿ ಘೋಷಿಸಲು ಸಿಪಿಐ(ಎಂ) ಅಗ್ರಹ

September 20, 2023 5:11 pm
ತುಮಕೂರು

ನÀಗರದಾದ್ಯಂತ ಸ್ವಚ್ಛತಾ ಕಾರ್ಯಕ್ರಮ : ಅಶ್ವಿಜ

September 20, 2023 5:10 pm
ತುಮಕೂರು

ಸೆ.೧೫ ಸಂವಿಧಾನ ಓದು ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ

September 12, 2023 4:16 pm
ತುಮಕೂರು

ಬಡತನ ನಿರ್ಮೂಲನೆ ನಮ್ಮ ಉದ್ದೇಶ : ಶಶಿಧರ್

September 12, 2023 4:13 pm
ತುಮಕೂರು

ಸಾಹಿತ್ಯ, ಕಾವ್ಯಗಳ ತೌಲನಿಕ ಅಧ್ಯಯನ ಅಗತ್ಯ: ನಾಡೋಜ ಹಂಪನಾ

September 11, 2023 4:38 pm
Our Youtube Channel
Our Picks

ಬರಗಾಲ ಪೀಡಿತ ರಾಜ್ಯವನ್ನಾಗಿ ಘೋಷಿಸಲು ಸಿಪಿಐ(ಎಂ) ಅಗ್ರಹ

September 20, 2023 5:11 pm

ಮಾಹಿತಿ ಶಿಕ್ಷಣ ಸಂವಹನ ವಿಶೇಷ ಕಾರ್ಯಕ್ರಮ

August 22, 2023 5:18 pm

ಹೋಬಳಿ ಮಟ್ಟದ ಜನಸಂಪರ್ಕ ಸಭೆ ಮೂಲಕ ಸಮಸ್ಯೆ ಬಗೆಹರಿಸಲು ಕೆ.ಎನ್.ರಾಜಣ್ಣ ಸೂಚನೆ

August 17, 2023 4:52 pm

ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕದಿದ್ದರೆ ಶಿಸ್ತುಕ್ರಮ ಶಾಸಕ ಬಿ.ಸುರೇಶಗೌಡ ಎಚ್ಚರಿಕೆ

August 10, 2023 5:08 pm

ವಿದ್ಯಾರ್ಥಿ ಜೀವನದಲ್ಲೇ ದೊಡ್ಡ ಕನಸುಗಳಿರಬೇಕು

August 08, 2023 5:03 pm
News Tags
Accident Ambedkar Araga jnanendra BJP Bommai Ceo Chikkanayakanahalli Congress corona Cpim crime DC dss epaper gs basavaraju Gubbi jc madhuswamy Jds jyothiganesh Kn rajanna kodigenahalli Koratagere kumaraswamy kunigal madhugiri Mla Mla jyothiganesh mla shrinivas mlc r.rajendra Parameshwar pavagada Police police naveen Protest r.ashok R. Rajendra tumakur tumkur Tumkur dc yspatil Tumkur mahanagara palike tumur turuvekere University Vasanna YSpatil
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm

ಯೌವನಕ್ಕೆ “ವಿವೇಕಾನಂದದೀಕ್ಷೆ’’ ಕೊಡಿ

September 19, 2020 6:23 pm
Don't Miss
ತುಮಕೂರು

ಕಲ್ವತರುನಾಡಿನಲ್ಲಿ ಸಡಗರ ಸಂಭ್ರಮದ ಗೌರಿ-ಗಣೇಶ ಆಚರಣೆ

By News Desk BenkiyabaleSeptember 20, 2023 5:12 pm

ತುಮಕೂರು ಬರ, ಮಳೆ ಕೊರತೆ ನಡುವೆಯೂ ಗೌರಿ-ಗಣೇಶ ಹಬ್ಬವನ್ನು ಕಲ್ವತರುನಾಡಿನಲ್ಲಿ ಸಡಗರ ಸಂಭ್ರಮ ಹಾಗೂ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಮುಂಜಾನೆಯೇ…

ಬರಗಾಲ ಪೀಡಿತ ರಾಜ್ಯವನ್ನಾಗಿ ಘೋಷಿಸಲು ಸಿಪಿಐ(ಎಂ) ಅಗ್ರಹ

September 20, 2023 5:11 pm

ನÀಗರದಾದ್ಯಂತ ಸ್ವಚ್ಛತಾ ಕಾರ್ಯಕ್ರಮ : ಅಶ್ವಿಜ

September 20, 2023 5:10 pm

ಸೆ.೧೫ ಸಂವಿಧಾನ ಓದು ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ

September 12, 2023 4:16 pm
News by Date
September 2023
M T W T F S S
 123
45678910
11121314151617
18192021222324
252627282930  
« Aug    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2023 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.