BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಸಂಭ್ರಮದ ಸ್ವಾತಂತ್ರೊತ್ಸವಕ್ಕೆ ಸಿದ್ಧತೆ
  • ಶಾಲಾ ಕ್ರೀಡಾಕೂಟ ನಡೆಸಲು ಶಿಕ್ಷಣ ಇಲಾಖೆ ನಿರಾಸಕ್ತಿ
  • ಚುನಾವಣೆಯಲ್ಲಿ ಹಂಚುವ ಉಚಿತ ಮದ್ಯಕ್ಕೆ ಬಲಿಯಾಗಬೇಡಿ
  • ೨೭ರಿಂದ ನಗರದಲ್ಲಿ ರಾಜ್ಯ ರ‍್ಯಾಂಕಿ0ಗ್ ಬ್ಯಾಡ್ಮಿಂಟನ್ ಪಂದ್ಯಾವಳಿ
  • ಬಿಎಲ್‌ಓಗಳ ಉತ್ತಮ ಕೆಲಸಕ್ಕೆ ಮಾಜಿ ಶಾಸಕ ಡಾ.ಎಸ್.ರಫೀಕ್ ಅಹಮದ್ ಶ್ಲಾಘನೆ
  • ಪ್ರೆಸಿಡೆನ್ಸಿ ಕಾಲೇಜು ಬಳಿ ಅಪಘಾತ
  • ಜಿಲ್ಲೆಯಲ್ಲಿ ಪೋಲೀಸರ ಭರ್ಜರಿ ಬೇಟೆ
  • ಆಗಸ್ಟ್ ೬ ರವರೆಗೆ ಸಲಹೆ ಸೂಚನೆಗಳನ್ನು ನೀಡಲು ಅವಕಾಶ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಪತ್ರಿಕಾಗೋಷ್ಠಿಗೆ ಅಡ್ಡಿಯಾದ ಜೆಡಿಎಸ್ : ಸೆಡ್ಡು ಹೊಡೆದ ಬಿಜೆಪಿ
Trending

ಪತ್ರಿಕಾಗೋಷ್ಠಿಗೆ ಅಡ್ಡಿಯಾದ ಜೆಡಿಎಸ್ : ಸೆಡ್ಡು ಹೊಡೆದ ಬಿಜೆಪಿ

By News Desk BenkiyabaleUpdated:June 20, 2019 6:48 pm

ತುಮಕೂರು:

      ಮಾಜಿ ಶಾಸಕ ಬಿ.ಸುರೇಶ್ ಗೌಡರು ಕುರುಬ ಸಮುದಾಯವನ್ನು ಕ್ಷಮೆ ಕೇಳಲು ಕರೆದಿದ್ದ ಪತ್ರಿಕಾ ಗೋಷ್ಠಿಯನ್ನು ನಡೆಸಲು ಜೆಡಿಎಸ್ ಮುಖಂಡರು ಅಡ್ಡಿಪಡಿಸಿದ ಘಟನೆ ಇಂದು ನಡೆದಿದೆ.

      ಪಕ್ಷದ ಶಾಸಕ ಗೌರಿಶಂಕರ್ ಬೆಂಬಲಿಗರು ಪತ್ರಿಕಾಗೋಷ್ಠಿ ನಡೆಯದಂತೆ ಉಡುಪಿ ಹೋಟೆಲ್ ಬಾಗಿಲು ಮುಚ್ಚಿಸಿದ್ದರು. ಮೊದಲೆ ನಿಗಧಿಯಾದಂತೆ ಅದೇ ಹೋಟೆಲ್‍ನಲ್ಲಿ ಗೋಷ್ಠಿ ನಡೆಯಿತಾದರೂ ಗಲಾಟೆ ಮಾಡಿ ಹಲ್ಲೆ ನಡೆಸಲು ಸಂಚು ರೂಪಿಸಲಾಗಿತ್ತು. ಇದನ್ನರಿತ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರು.

      ಪತ್ರಿಕಾ ಗೋಷ್ಠಿ ನಡೆಯುತ್ತಿದ್ದ ಖಾಸಗಿ ಹೋಟೆಲ್ ಮುಂಭಾಗದಲ್ಲಿ ಡಿವೈಎಸ್ಪಿ ತಿಪ್ಪೇಸ್ವಾಮಿ, ತಿಲಕ್ ಪಾರ್ಕ್ ಇನ್ಸ್ಪೆಕ್ಟರ್ ರಾಧಾಕೃಷ್ಣ, ನಗರ ಇನ್ಸ್ಪೆಕ್ಟರ್ ಚಂದ್ರಶೇಖರ್ ಐವರು ಸಬ್ ಇನ್ಸ್ಪೆಕ್ಟರ್ ಗಳು, ಎಎಸೈಗಳು, ಸಿಬ್ಬಂದಿ, ಡಿಆರ್ ವ್ಯಾನ್ ಎಲ್ಲರೂ ಜಮಾವಣೆಗೋಂಡಿದ್ದರು, ಕಾರಣ ಮಾಜಿ ಶಾಸಕರ ಮೇಲೆ ಹಲ್ಲೆಯಾಗುವ ಎಲ್ಲಾ ಲಕ್ಷಣಗಳು ಪೊಲೀಸ್ ಇಲಾಖೆಗೆ ತಿಳಿದಿತ್ತು ಎನ್ನಲಾಗುತ್ತಿದೆ, ಜೆಡಿಎಸ್ ಕಾರ್ಪೋರೇಟರ್ ಸೇರಿದಂತೆ ಕುರುಬ ಸಮುದಾಯದ ಇಪ್ಪತ್ತು ಮಂದಿ ಸುರೇಶ್ ಗೌಡರನ್ನು ಪ್ರಶ್ನಿಸುತ್ತಿರುವಾಗ ಕೆಲವು ಜೆಡಿಎಸ್ ಮುಖಂಡರು ಮಾಜಿ ಶಾಸಕರ ಮೇಲೆ ಹಲ್ಲೆ ನಡೆಸುವ ಪ್ಲಾನ್ ಮಾಡಲಾಗಿತ್ತು. ಆದರೆ, ಅದು ವಿಫಲವಾಯಿತು ಎನ್ನಲಾಗುತ್ತಿದೆ. ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದರೆ ಗ್ರಾಮಾಂತರ ಕ್ಷೇತ್ರದ ರಾಜಕೀಯ ಕಡು ವೈರಿಗಳಾದ ಹಾಲಿ ಶಾಸಕ ಗೌರಿಶಂಕರ್ ಮತ್ತು ಮಾಜಿ ಶಾಸಕ ಸುರೇಶ್ ಗೌಡರ ನಡುವೆ ಬದ್ಧ ವೈರತ್ವದ ಕಾರಣದಿಂದಾಗಿ ಕೇವಲ ರಾಜಕೀಯ ಲಾಭಕ್ಕಾಗಿ ಕುರುಬರ ನಿಂದನೆಯ ವಿಚಾರ ಮುಂದಿಟ್ಟುಕೊಂಡು ಅದರ ಲಾಭ ಪಡೆಯುವ ತವಕದಲ್ಲಿದೆ ಎಂದು ತಿಳಿದುಬರುತ್ತಿದೆ. ಜೆಡಿಎಸ್ ಮುಖಂಡರು ಹಚ್ಚಿದ ಜಾತಿಯ ದಳ್ಳುರಿಯಲ್ಲಿ ಕೆಲವರು ಕಾವು ಕಾಯಿಸಿಕೊಳ್ಳಿವ ಇರಾದೆಯಲ್ಲಿದ್ದರು ಆದರೆ ಅದು ನಿರೀಕ್ಷಿಸಿದ ಮಟ್ಟಿಗೆ ಸಫಲತೆ ಕಾಣಲಿಲ್ಲ ಎನ್ನಲಾಗುತ್ತಿದೆ.

      ಪೊಲೀಸ್ ರಕ್ಷಣೆಯಲ್ಲಿ ಪತ್ರಿಕಾಗೋಷ್ಠಿ ನಡೆಸುವ ಅನಿವಾರ್ಯತೆ ತುಮಕೂರಿನಲ್ಲಿ ಸೃಷ್ಟಿಯಾಗುತ್ತಿದೆ ಎಂದರೆ ಎತ್ತ ಸಾಗಿದೆ ತುಮಕೂರು ಗ್ರಾಮಾಂತರ ರಾಜಕೀಯ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಇದು ಹೀಗೆ ಮುಂದುವರೆದರೆ ಎರಡೂ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಭಯದ ವಾತಾವರಣದಲ್ಲಿ ಬದುಕುವ ಅನಿವಾರ್ಯತೆ ಸೃಷ್ಟಿಯಾಗುವುದರಲ್ಲಿ ಸಂಶಯವಿಲ್ಲ.

ಕುರುಬ ಸಮುದಾಯವನ್ನು ಕ್ಷಮೆ ಯಾಚಿಸಿದ ಬಿಜೆಪಿ ಮಾಜಿ ಶಾಸಕ ಬಿ.ಸುರೇಶ್ ಗೌಡ:

      ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕನಾದ ಬಿ.ಸುರೇಶ್‍ಗೌಡ ನಾನು ಸೋಮವಾರದಂದು ನನ್ನ ಕ್ಷೇತ್ರದಲ್ಲಿ ಸಂಚರಿಸಿ ನನ್ನ ಕ್ಷೇತ್ರದಲ್ಲಿರುವ ನನ್ನ ಮತದಾರ ಬಂಧುಗಳ ಮನೆಗಳಲ್ಲಿ ಸರಣಿ ಕಳ್ಳತನವಾಗುತ್ತಿರುವ ಬಗ್ಗೆ ಕೇಳಿ ತಿಳಿದುಕೊಂಡು, ಹೆಬ್ಬೂರು ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಹಾಗೂ ಅಲ್ಲಿರುವಂತಹ ಎಸ್‍ಬಿ ಕಾನ್‍ಸ್ಟೆಬಲ್ ರವರು ಮತ್ತು ಸಿಬ್ಬಂದಿಗಳ ನಿರ್ಲಕ್ಷ್ಯ ಧೋರಣೆಯ ವಿರುದ್ಧ ಮಾತನಾಡುವ ಸಂದರ್ಭದಲ್ಲಿ ಆಡು ಭಾಷೆಯ ಪದ ಬಳಸುವಾಗ ಕುರುಬ ಎನ್ನುವಂತಹ ಪದವನ್ನು ಬಾಯ್ತಪ್ಪಿನಿಂದ ಬಳಸಿರುತ್ತೇನೆ. ನನಗೆ ಕುರುಬ ಸಮುದಾಯದ ಬಗ್ಗೆ ಯಾವುದೇ ರೀತಿಯ ಬೇಸರ, ಆತಂಕ, ದ್ವೇಷ ಇರುವುದಿಲ್ಲ. ಆದರೆ ಹೆಬ್ಬೂರು ಠಾಣೆಯ ಎಸ್‍ಬಿ ಕಾನ್‍ಸ್ಟೆಬಲ್ ಪುಟ್ಟರಾಜು ಅವರ ಹೆಸರು ನನಗೆ ತಿಳಿದಿರುವುದಿಲ್ಲ. ಅವರ ಹೆಸರನ್ನು ತಿಳಿಯುವ ಸಂದರ್ಭದಲ್ಲಿ ನನ್ನ ಎದುರಿಗೆ ಅಲ್ಲಿದ್ದಂತಹ ಕಾರ್ಯಕರ್ತರು ಮತ್ತು ಪೊಲೀಸ್ ಸಿಬ್ಬಂದಿಗಳಿಗೆ ಯಾರು ಕುರುಬ ಜನಾಂಗದವರು ಎಸ್‍ಬಿ ಕಾನ್ ಸ್ಟೆಬಲ್ ಎಂದು ಕೇಳಿದೆ ಅಷ್ಟೇ ವಿನಃ ನಾನು ಕುರುಬ ಸಮಾಜವನ್ನು ನಿಂದಿಸಿಲ್ಲ. ಆ ವ್ಯಕ್ತಿಗೆ 420 ಎಂಬ ಪದ ಬಳಕೆ ಮಾಡಿರುತ್ತೇನೆ. ಕೇವಲ ವ್ಯಕ್ತಿಯ ನಿಂದನೆಯನ್ನು ಸಮಾಜದ ನಿಂದನೆ ಎಂದು ತಪ್ಪಾಗಿ ಅರ್ಥೈಸಿ ರಾಜಕೀಯ ದ್ವೇಷಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಕುರುಬ ಸಮಾಜದ ಬಗೆಗೆ ನನಗೆ ಪ್ರೀತಿ ವಿಶ್ವಾಸ ಅಭಿಮಾನವಿದೆ. ಮಾತಿನ ಭರದಲ್ಲಿ ನಾನು ಬಳಸಿದ ಪದದಿಂದಾಗಿ ತಮ್ಮ ಸಮುದಾಯದ ಬಂಧುಗಳ ಮನಸ್ಸುಗಳಿಗೆ, ಮನಸ್ಸಿನ ಭಾವನೆಗಳಿಗೆ ಧಕ್ಕೆಯಾಗಿದ್ದಲ್ಲಿ ನಾನು ಈ ಸಮುದಾಯದ ಬಂಧುಗಳಿಗೆ ಬಹಿರಂಗವಾಗಿ ಕ್ಷಮೆಯಾಚಿಸುತ್ತೇನೆ, ನನ್ನ ರಾಜಕೀಯ ವಿರೋಧಿಗಳು ಇದನ್ನು ಬಳಕೆ ಮಾಡಿಕೊಂಡು ಸಮುದಾಯವನ್ನು ನನ್ನ ವಿರುದ್ಧ ಎತ್ತಿ ಕಟ್ಟಲು ಸಂಚು ರೂಪಿಸುತ್ತಿರುವುದರಿಂದ ದಯವಿಟ್ಟು ಸಹಕರಿಸಬೇಕೆಂದು ಮನವಿ ಮಾಡುತ್ತೇನೆ ಎಂದು ತಿಳಿಸಿದರು.

      ಮಾಜಿ ವಿಧಾನ ಪರಿಷತ್ ಸದಸ್ಯ ಹುಲಿನಾಯ್ಕಕ್ ಮಾತನಾಡಿ ಸುರೇಶ್ ಗೌಡರು ಈಗಾಗಲೇ ಕ್ಷಮೆಯಾಚಿಸಿರುವುದರಿಂದ ಈ ವಿಚಾರವನ್ನ ಕೈಬಿಡೋಣ. ವಿನಾಕಾರಣ ಮುಂದುವರಿಸುವುದು ಬೇಡ. ಆಡು ಭಾಷೆಯಲ್ಲಿ ಪದ ಬಳಕೆ ಮಾಡಿದ್ದಾರೆ ಅಷ್ಟೇ. ಅವರು ಸಮುದಾಯವನ್ನು ಬೈದಿಲ್ಲ. ಕೇವಲ ವ್ಯಕ್ತಿಯನ್ನು ಮಾತ್ರ ನಿಂದಿಸಿರುವುದು. ಕುರುಬ ಸಮುದಾಯದ ಬಗ್ಗೆ ಅವರಿಗೆ ಅಪಾರವಾದ ಗೌರವವಿದೆ. ಇದು ರಾಜಕೀಯ ಪ್ರೇರಿತವಾಗುವುದು ಸರಿಯಲ್ಲ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಓನಮೂ ನಾರಾಯಣ್, ಬಿ.ಕೆ.ಮಂಜುನಾಥ್ ಸೇರಿದಂತೆ ಮುಖಂಡರು ಭಾಗವಹಿಸಿದ್ದರು.

(Visited 522 times, 1 visits today)
Previous Articleಜೂ.21ರಿಂದ SSLC ಪೂರಕ ಪರೀಕ್ಷೆ : ಮೊಬೈಲ್ ನಿಷೇಧ!
Next Article ಬಸ್-ಬೈಕ್ ನಡುವೆ ಮುಖಾಮುಖಿ ಡಿಕ್ಕಿ : ಇಬ್ಬರ ಸಾವು
News Desk Benkiyabale

Related Posts

ಸಂಭ್ರಮದ ಸ್ವಾತಂತ್ರೊತ್ಸವಕ್ಕೆ ಸಿದ್ಧತೆ

July 16, 2026 5:17 pm news

ಶಾಲಾ ಕ್ರೀಡಾಕೂಟ ನಡೆಸಲು ಶಿಕ್ಷಣ ಇಲಾಖೆ ನಿರಾಸಕ್ತಿ

July 16, 2026 5:15 pm news

ಚುನಾವಣೆಯಲ್ಲಿ ಹಂಚುವ ಉಚಿತ ಮದ್ಯಕ್ಕೆ ಬಲಿಯಾಗಬೇಡಿ

July 16, 2026 3:36 pm news
ತಾಜಾ ಸುದ್ಧಿಗಳು

ಸಂಭ್ರಮದ ಸ್ವಾತಂತ್ರೊತ್ಸವಕ್ಕೆ ಸಿದ್ಧತೆ

July 16, 2026 5:17 pm

ಶಾಲಾ ಕ್ರೀಡಾಕೂಟ ನಡೆಸಲು ಶಿಕ್ಷಣ ಇಲಾಖೆ ನಿರಾಸಕ್ತಿ

July 16, 2026 5:15 pm

ಚುನಾವಣೆಯಲ್ಲಿ ಹಂಚುವ ಉಚಿತ ಮದ್ಯಕ್ಕೆ ಬಲಿಯಾಗಬೇಡಿ

July 16, 2026 3:36 pm

೨೭ರಿಂದ ನಗರದಲ್ಲಿ ರಾಜ್ಯ ರ‍್ಯಾಂಕಿ0ಗ್ ಬ್ಯಾಡ್ಮಿಂಟನ್ ಪಂದ್ಯಾವಳಿ

July 16, 2026 3:34 pm

ಬಿಎಲ್‌ಓಗಳ ಉತ್ತಮ ಕೆಲಸಕ್ಕೆ ಮಾಜಿ ಶಾಸಕ ಡಾ.ಎಸ್.ರಫೀಕ್ ಅಹಮದ್ ಶ್ಲಾಘನೆ

July 16, 2026 3:32 pm

ಪ್ರೆಸಿಡೆನ್ಸಿ ಕಾಲೇಜು ಬಳಿ ಅಪಘಾತ

July 16, 2026 3:31 pm
Our Youtube Channel
Our Picks

ಸಂಭ್ರಮದ ಸ್ವಾತಂತ್ರೊತ್ಸವಕ್ಕೆ ಸಿದ್ಧತೆ

July 16, 2026 5:17 pm

ಶಾಲಾ ಕ್ರೀಡಾಕೂಟ ನಡೆಸಲು ಶಿಕ್ಷಣ ಇಲಾಖೆ ನಿರಾಸಕ್ತಿ

July 16, 2026 5:15 pm

ಚುನಾವಣೆಯಲ್ಲಿ ಹಂಚುವ ಉಚಿತ ಮದ್ಯಕ್ಕೆ ಬಲಿಯಾಗಬೇಡಿ

July 16, 2026 3:36 pm

೨೭ರಿಂದ ನಗರದಲ್ಲಿ ರಾಜ್ಯ ರ‍್ಯಾಂಕಿ0ಗ್ ಬ್ಯಾಡ್ಮಿಂಟನ್ ಪಂದ್ಯಾವಳಿ

July 16, 2026 3:34 pm

ಬಿಎಲ್‌ಓಗಳ ಉತ್ತಮ ಕೆಲಸಕ್ಕೆ ಮಾಜಿ ಶಾಸಕ ಡಾ.ಎಸ್.ರಫೀಕ್ ಅಹಮದ್ ಶ್ಲಾಘನೆ

July 16, 2026 3:32 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds kannada news karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss

ಸಂಭ್ರಮದ ಸ್ವಾತಂತ್ರೊತ್ಸವಕ್ಕೆ ಸಿದ್ಧತೆ

By News Desk BenkiyabaleJuly 16, 2026 5:17 pm

ತುಮಕೂರು: ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಆಗಸ್ಟ್ ೧೫ರಂದು ಸ್ವಾತಂತ್ರ‍್ಯ ದಿನಾಚರಣೆಯ ಸಂಭ್ರಮಾಚರಣೆಗೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್…

ಶಾಲಾ ಕ್ರೀಡಾಕೂಟ ನಡೆಸಲು ಶಿಕ್ಷಣ ಇಲಾಖೆ ನಿರಾಸಕ್ತಿ

July 16, 2026 5:15 pm

ಚುನಾವಣೆಯಲ್ಲಿ ಹಂಚುವ ಉಚಿತ ಮದ್ಯಕ್ಕೆ ಬಲಿಯಾಗಬೇಡಿ

July 16, 2026 3:36 pm

೨೭ರಿಂದ ನಗರದಲ್ಲಿ ರಾಜ್ಯ ರ‍್ಯಾಂಕಿ0ಗ್ ಬ್ಯಾಡ್ಮಿಂಟನ್ ಪಂದ್ಯಾವಳಿ

July 16, 2026 3:34 pm
News by Date
July 2026
M T W T F S S
 12345
6789101112
13141516171819
20212223242526
2728293031  
« Jun    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.