BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಗಣಿಬಾಧಿತ ಪ್ರದೇಶಗಳಲ್ಲಿನ ಶಾಲಾ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಠಿಕ ಆಹಾರ ವಿತರಣೆ: ಜಿಲ್ಲಾಧಿಕಾರಿ
  • ನಗರದಲ್ಲಿ ನ.೧೭ ರಿಂದ ನಾಟಕೋತ್ಸವ: ಸತೀಶ್ ತಿಪಟೂರು
  • ಭಾಷೆ ಕಣ್ಮರೆಯಾದರೆ ವಿವೇಕ ಸತ್ತಂತೆ
  • ತಾಲ್ಲೂಕಿನಲ್ಲಿ ಬಂಪರ್ ರಾಗಿ ಇಳುವರಿ ನಿರೀಕ್ಷೆ
  • ರೋಟರಿಯಿಂದ ಗರ್ಭ ಕಂಠ ಕ್ಯಾನ್ಸರ್, ಪೋಲಿಯೊ ಜಾಗೃತಿ
  • ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದು ಎಲ್ಲರ ಆದ್ಯ ಕರ್ತವ್ಯ: ಟಿ.ಎಸ್. ಅಶೋಕ್ ಕುಮಾರ್
  • ಅನಿಷ್ಟ ಪದ್ದತಿ ಹೋಗಲಾಡಿಸಲು ಶ್ರಮಿಸಿದ ಸಂತ ಕನಕದಾಸ
  • ಆರ್‌ಎಸ್‌ಎಸ್ ದೇಶದಲ್ಲಿ ಬ್ಯಾನ್ ಮಾಡುವಂತೆ ಆಗ್ರಹ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಅಯ್ಯಪ್ಪ ಮಾಲಾಧಾರಿ ಭಕ್ತರ ಮೇಲೆ ಪೊಲೀಸರ ದರ್ಪ ಸರಿಯಲ್ಲ : ಟಿ.ಬಿ.ಶೇಖರ್
ತುಮಕೂರು ಜಿಲ್ಲಾ ಸುದ್ಧಿಗಳು

ಅಯ್ಯಪ್ಪ ಮಾಲಾಧಾರಿ ಭಕ್ತರ ಮೇಲೆ ಪೊಲೀಸರ ದರ್ಪ ಸರಿಯಲ್ಲ : ಟಿ.ಬಿ.ಶೇಖರ್

By News Desk BenkiyabaleUpdated:November 20, 2018 4:12 pm

 ತುಮಕೂರು:

      ಕೇರಳ ರಾಜ್ಯದ ಶಬರಿಮಲೈ ಅಯ್ಯಪ್ಪಸ್ವಾಮಿ ಸನ್ನಿಧಿಯಲ್ಲಿ ಅಯ್ಯಪ್ಪ ಮಾಲಾದಾರಿ ಭಕ್ತರ ಮೇಲೆ ಪೊಲೀಸರು ದರ್ಪ ತೋರಿಸುತ್ತಿರುವುದು ಸರಿಯಲ್ಲ ಎಂದು ಶಬರಿಮಲ ಅಯ್ಯಪ್ಪಸೇವಾ ಸಮಾಜಂ (ಎಸ್‍ಎಎಸ್‍ಎಸ್) ಕೇಂದ್ರ ಸಮಿತಿ ಅಧ್ಯಕ್ಷರಾದ ಟಿ.ಬಿ.ಶೇಖರ್ ತಿಳಿಸಿದರು.

      ನಗರದ ಗಾರ್ಡನ್‍ರಸ್ತೆಯ ಅಯ್ಯಪ್ಪಸ್ವಾಮಿ ದೇವಾಲಯ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಈ ಗೊಂದಲ ಏರ್ಪಟ್ಟಿದ್ದು ಬೂಟುದಾರಿ ಪೊಲೀಸರು ಭಕ್ತರನ್ನು ತುಳಿಯುವ ದೃಶ್ಯ ಖಂಡನೀಯ ಎಂದರು.

      ಈ ಹಿಂದೆ 100-200 ಜನ ಪೊಲೀಸರು ಖಾಕಿ ಸಮವಸ್ತ್ರದಲ್ಲಿ ಹೆಗಲಮೇಲೆ ಕಪ್ಪು ಟವಲ್ ಹಾಕಿಕೊಂಡು ಬೂಟ್ಸ್‍ಗಳನ್ನು ಧರಿಸದೆ ಭಕ್ತರಿಗೆ ಸಹಕಾರ ನೀಡುತ್ತಿದ್ದರು ಈಗ 144 ಕಲಂ ಅನ್ವಯ ನಿಷೇಧಾಜ್ಞೆ ಜಾರಿ ಇದೆ ಎಂಬ ನೆಪವೊಡ್ಡಿ ಅಲ್ಲಿಗೆ ತೆರಳುತ್ತಿರುವ ಭಕ್ತರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

      ನ.17ರಿಂದ ಜನವರಿ 18 ರವರೆಗೆ ಮಂಡಲ ಮಹೋತ್ಸವ ಜಾತ್ರೆ, ಕಾರ್ತೀಕದಿಂದ ಮಾಘಮಾಸದವರೆಗೆ ನಡೆದು ಸಂಕ್ರಾಂತಿ ಮಕರ ಜ್ಯೋತಿ ದರ್ಶನದೊಂದಿಗೆ ಕೊನೆಯಾಗುವುದು. ಈ ಸಂದರ್ಭದಲ್ಲಿ ಕರ್ನಾಟಕ ಕೇರಳ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯ ಹಾಗೂ ಬೇರೆ ದೇಶಗಳಿಂದ ಸುಮಾರು ಐದೂವರೆ ಕೋಟಿಯಷ್ಟು ಭಕ್ತರು ಅಲ್ಲಿ ಜಮಾವಣೆಗೊಳ್ಳಲಿದ್ದು ಕರ್ನಾಟಕ ರಾಜ್ಯದಿಂದ 60 ರಿಂದ 70 ಲಕ್ಷ ಭಕ್ತರು ಸೇರುತ್ತಾರೆ ಎಂದು ಟಿ.ಬಿ.ಶೇಖರ್ ತಿಳಿಸಿದರು.

      ಅಯ್ಯಪ್ಪದರ್ಶನಕ್ಕೆ ಮಾಲಾಧಾರಿಗಳು ತಂಡೋಪ ತಂಡವಾಗಿ ಬರುವುದು ವಾಡಿಕೆ. ಇಂತಹ ಕ್ಷೇತ್ರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸುವುದು ಸರಿಯಲ್ಲ. ಈ ಹಿಂದೆ ಭಕ್ತರನ್ನು ಪಂಪಾವರೆಗೆ ಹೋಗಿ ಅಲ್ಲಿ ವಾಹನದಿಂದ ಇಳಿದು ಪಾದಯಾತ್ರೆ ಮೂಲಕ ಹೋಗಬೇಕಿತ್ತು ಈಗ ನೀಲಕಲ್ ಬಳಿ ವಾಹನವನ್ನು ನಿಲ್ಲಿಸಿರುವುದರಿಂದ 20 ಕಿ.ಮೀ. ದೂರ ಕ್ರಮಿಸಬೇಕಿದೆ ಎಂದು ಹೇಳಿದರು.

      ಈ ದೂರವನ್ನು ಕ್ರಮಿಸಲು ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‍ಗಳ ಸೌಕರ್ಯ ಮಾಡಿದ್ದು ಈ ಹಿಂದೆ 29 ರೂ. ಪ್ರಯಾಣದರ ನಿಗಧಿಪಡಿಸಿತ್ತು. ಈಗ ಅದನ್ನು 60 ರೂ.ಗೆ ಹೆಚ್ಚಿಸಲಾಗಿದೆ. ನಮ್ಮ ಎಸ್‍ಎಎಸ್‍ಎಸ್ ವತಿಯಿಂದ ಭಕ್ತರಿಗೆ ಉಚಿತವಾಗಿ ಪ್ರಯಾಣಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು ಕೇರಳ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು ಅದು ಸ್ಪಂದಿಸುತ್ತಿಲ್ಲ ಎಂದರು.

      ಶಬರಿಮಲೆ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆಯುತ್ತಿರುವ ವಿದ್ಯಾಮಾನಗಳು ಭಕ್ತರಿಗೆ ಬೇಸರ ಮೂಡಿಸಿದ್ದು ಅಲ್ಲಿ ಭಕ್ತರಿಗೋಸ್ಕರ ಇರುವ ವಸತಿ ಗೃಹಗಳಲ್ಲಿ ಪೊಲೀಸರು ಬೀಡುಬಿಟ್ಟಿದ್ದಾರೆ. ದೇಶದ ವಿವಿಧ ಭಾಗಗಳಿಂದ ತೆರಳಿದ ಭಕ್ತರು ವಸತಿ ಸೌಕರ್ಯವಿಲ್ಲದೆ ಪರದಾಡುವಂತಾಗಿದೆ ಎಂದು ಟಿ.ಬಿ.ಶೇಖರ್ ನುಡಿದರು.

      ಅಯ್ಯಪ್ಪಸ್ವಾಮಿ ಸನ್ನಿಧಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತ ಸಾಗರ ಜಮೆಯಾಗುತ್ತಿದ್ದು ಪೊಲೀಸರಿಂದ ಇವರಿಗಾಗುವ ತೊಂದರೆಯನ್ನು ನಿವಾರಿಸಬೇಕು. ಸೂಕ್ತ ಮೂಲಭೂತ ಸೌಲಭ್ಯಗಳನ್ನೊದಗಿಸಿ ಅಯ್ಯಪ್ಪದರ್ಶನಕ್ಕೆ ಅನುವು ಮಾಡಿಕೊಡಬೇಕೆಂದು ಎಸ್‍ಎಎಸ್‍ಎಸ್, ಕೇರಳ ಸರ್ಕಾರ ಮತ್ತು ತಿರುವನಂತಪುರಂ ದೇವಾಲಯದ ಮಂಡಳಿ (ಟಿಡಿಬಿ) ಒತ್ತಾಯಿಸಿರುವುದಾಗಿ ತಿಳಿಸಿದರು.

      ಪೂಜೆಯಲ್ಲೇ ಪವಿತ್ರವಾದ ತುಪ್ಪಾಭಿಷೇಕಕ್ಕೆ, ಇರುಮುಡಿ ಬಿಚ್ಚಲು ಅವಕಾಶ ನೀಡುತ್ತಿಲ್ಲ ಇದಕ್ಕಾಗಿ ಭಕ್ತರು ಕೂರುವ ಜಾಗದಲ್ಲಿ ನೀರು ಹಾಯಿಸಿ ಇಡೀ ನೆಲವನ್ನು ತೇವ ಮಾಡುವುದರಿಂದ ಕೂರಲು ಅವಕಾಶವಿಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಯ್ಯಪ್ಪ ಭಕ್ತರನ್ನು ಟೆರರಿಸ್ಟ್‍ಗಳಂತೆ ನೋಡಲಾಗುತ್ತದೆ ಇಂತಹ ವಾತಾವರಣವನ್ನು ಈ ಹಿಂದೆ ನೋಡಿರಲಿಲ್ಲ ಎಂದು ವಿಷಾದಿಸಿದರು.

 

(Visited 19 times, 1 visits today)
Previous Articleವಿದ್ಯುತ್ ಕಳವು: ಇಬ್ಬರು ಆರೋಪಿಗಳ ಬಂಧನ
Next Article ತುಮಕೂರು ಜಿಲ್ಲಾಧಿಕಾರಿಗೆ ಬಿಸ್ಕೆಟ್​​​​​​ನಲ್ಲಿ ಸಿಕ್ತು ಮೊಳೆ… ಸೀಜ್ ಆಯ್ತು ಬೇಕರಿ!!
News Desk Benkiyabale

Related Posts

ಸಮಾಜದಲ್ಲಿ ತಾಂಡವಾಡುತ್ತಿರುವ ಅಜ್ಞಾನ ಹೋಗಿ ಸುಜ್ಞಾನ ಬರಲಿ: ಸ್ವಾಮೀಜಿ

November 10, 2025 2:20 pm ತುಮಕೂರು

ಅನ್ಯಾಯದ ವಿರುದ್ಧ ಧ್ವನಿ ಎತ್ತುವುದೇ ವಿದ್ಯಾರ್ಥಿಗಳ ಲಕ್ಷಣ

November 10, 2025 2:15 pm ತುಮಕೂರು

ರೈತರ ಹೋರಾಟಕ್ಕೆ ಹೆಚ್ಚೆತ್ತುಕೊಳ್ಳದ ಸರ್ಕಾರ

November 06, 2025 3:01 pm ತುಮಕೂರು
ತಾಜಾ ಸುದ್ಧಿಗಳು
ಇತರೆ ಸುದ್ಧಿಗಳು

ಗಣಿಬಾಧಿತ ಪ್ರದೇಶಗಳಲ್ಲಿನ ಶಾಲಾ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಠಿಕ ಆಹಾರ ವಿತರಣೆ: ಜಿಲ್ಲಾಧಿಕಾರಿ

November 11, 2025 3:29 pm
ಇತರೆ ಸುದ್ಧಿಗಳು

ನಗರದಲ್ಲಿ ನ.೧೭ ರಿಂದ ನಾಟಕೋತ್ಸವ: ಸತೀಶ್ ತಿಪಟೂರು

November 11, 2025 3:27 pm
ಇತರೆ ಸುದ್ಧಿಗಳು

ಭಾಷೆ ಕಣ್ಮರೆಯಾದರೆ ವಿವೇಕ ಸತ್ತಂತೆ

November 11, 2025 3:26 pm
ಇತರೆ ಸುದ್ಧಿಗಳು

ತಾಲ್ಲೂಕಿನಲ್ಲಿ ಬಂಪರ್ ರಾಗಿ ಇಳುವರಿ ನಿರೀಕ್ಷೆ

November 11, 2025 3:25 pm
ಇತರೆ ಸುದ್ಧಿಗಳು

ರೋಟರಿಯಿಂದ ಗರ್ಭ ಕಂಠ ಕ್ಯಾನ್ಸರ್, ಪೋಲಿಯೊ ಜಾಗೃತಿ

November 11, 2025 3:23 pm
ಇತರೆ ಸುದ್ಧಿಗಳು

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದು ಎಲ್ಲರ ಆದ್ಯ ಕರ್ತವ್ಯ: ಟಿ.ಎಸ್. ಅಶೋಕ್ ಕುಮಾರ್

November 10, 2025 3:07 pm
Our Youtube Channel
Our Picks

ಗಣಿಬಾಧಿತ ಪ್ರದೇಶಗಳಲ್ಲಿನ ಶಾಲಾ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಠಿಕ ಆಹಾರ ವಿತರಣೆ: ಜಿಲ್ಲಾಧಿಕಾರಿ

November 11, 2025 3:29 pm

ನಗರದಲ್ಲಿ ನ.೧೭ ರಿಂದ ನಾಟಕೋತ್ಸವ: ಸತೀಶ್ ತಿಪಟೂರು

November 11, 2025 3:27 pm

ಭಾಷೆ ಕಣ್ಮರೆಯಾದರೆ ವಿವೇಕ ಸತ್ತಂತೆ

November 11, 2025 3:26 pm

ತಾಲ್ಲೂಕಿನಲ್ಲಿ ಬಂಪರ್ ರಾಗಿ ಇಳುವರಿ ನಿರೀಕ್ಷೆ

November 11, 2025 3:25 pm

ರೋಟರಿಯಿಂದ ಗರ್ಭ ಕಂಠ ಕ್ಯಾನ್ಸರ್, ಪೋಲಿಯೊ ಜಾಗೃತಿ

November 11, 2025 3:23 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ಇತರೆ ಸುದ್ಧಿಗಳು

ಗಣಿಬಾಧಿತ ಪ್ರದೇಶಗಳಲ್ಲಿನ ಶಾಲಾ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಠಿಕ ಆಹಾರ ವಿತರಣೆ: ಜಿಲ್ಲಾಧಿಕಾರಿ

By News Desk BenkiyabaleNovember 11, 2025 3:29 pm

ತುಮಕೂರು: ಕರ್ನಾಟಕ ಗಣಿ ಪರಿಸರ ಪುನಃಶ್ಚೇತನ ನಿಗಮದಿಂದ ಪರಿಸರ ಗಣಿಗಾರಿಕೆ ಪ್ರಭಾವ ವಲಯಕ್ಕಾಗಿ ಸಮಗ್ರ ಪರಿಸರ ಯೋಜನೆಯಡಿ ಜಿಲ್ಲೆಯ ಗಣಿಬಾಧಿತ…

ನಗರದಲ್ಲಿ ನ.೧೭ ರಿಂದ ನಾಟಕೋತ್ಸವ: ಸತೀಶ್ ತಿಪಟೂರು

November 11, 2025 3:27 pm

ಭಾಷೆ ಕಣ್ಮರೆಯಾದರೆ ವಿವೇಕ ಸತ್ತಂತೆ

November 11, 2025 3:26 pm

ತಾಲ್ಲೂಕಿನಲ್ಲಿ ಬಂಪರ್ ರಾಗಿ ಇಳುವರಿ ನಿರೀಕ್ಷೆ

November 11, 2025 3:25 pm
News by Date
November 2025
M T W T F S S
 12
3456789
10111213141516
17181920212223
24252627282930
« Oct    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.