
ತುಮಕೂರು: ರಾಜ್ಯಾದ್ಯಂತ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಂಭವವಿರುವುದಾಗಿ ತಜ್ಞರು ಅಭಿಪ್ರಾಯಿಸಿರುತ್ತಾರೆ. ಫೆಸಿಫಿಕ್ ಮಹಾಸಾಗರದ ಮೇಲ್ಮೈ ತಾಪಮಾನವು ಸರಾಸರಿ ತಾಪಮಾನಕ್ಕಿಂತ ಹೆಚ್ಚಿರುವುದು ಎಂದರೆ ಎಲ್ ನಿನೋ ಇದಕ್ಕೆ ಕಾರಣವಾಗಿರುತ್ತದೆ. ಆದ್ದರಿಂದ ರೈತ ಬಾಂಧವರು ಹವಾಮಾನ ಪರಿಸ್ಥಿತಿಗೆ ಅನುಗುಣವಾಗಿ ಮಳೆಯನ್ನು ಆಧರಿಸಿ ತಳಿಗಳನ್ನು ಆಯ್ಕೆ ಮಾಡಿ ಬಿತ್ತನೆ ಕೈಗೊಳ್ಳಬೇಕಾಗಿ ಜಂಟಿ ಕೃಷಿ ನಿರ್ದೇಶಕ ಲಕ್ಷö್ಮಣ ಎಸ್.ಕಳ್ಳೆನ್ನವರ ಮನವಿ ಮಾಡಿದ್ದಾರೆ.
ಜಿಲ್ಲೆಯ ರೈತರು ವಿವಿಧ ಬೆಳೆಗಳಲ್ಲಿ ಈ ಕೆಳಕಂಡAತೆ ತಳಿಗಳನ್ನು ಆಯ್ಕೆ ಮಾಡಿ ತಾಂತ್ರಿಕತೆಗಳನ್ನು ಅನುಸರಿಸಬೇಕು.
ಖುಷ್ಕಿ ಬೆಳೆಗಳನ್ನು ಬೆಳೆಯುವ ಸಂದರ್ಭದಲ್ಲಿ ೫೦ ರಿಂದ ೬೦ ಮಿಲಿ ಮೀಟರ್ ಮಳೆ ಬಂದ ನಂತರ ಬಿತ್ತನೆ ಮಾಡುವುದು ಸೂಕ್ತ. ಕಳೆ ನಿಯಂತ್ರಣ ಹಾಗೂ ಮಣ್ಣಿನ ತೇವಾಂಶ ಸಂರಕ್ಷಣೆಗಾಗಿ ಅಂತರ ಬೇಸಾಯ ಕ್ರಮಗಳನ್ನು ಕೈಗೊಳ್ಳಬೇಕು. ಬೆಳೆಗಳ ಸಾಲುಗಳ ನಡುವೆ ಕೃಷಿ ತ್ಯಾಜ್ಯಗಳನ್ನು ಹೊದಿಕೆಯಾಗಿ ಬಳಸಬೇಕು. ಮಧ್ಯಂತರ ಬರ ಪರಿಸ್ಥಿತಿಯಲ್ಲಿ ಹಾಗೂ ಮಳೆಯ ನಂತರ ಬೆಳೆ ಚೇತರಿಕೆಗೆ ೧% ರಿಂದ ೩% ಯೂರಿಯಾವನ್ನು ೦.೫% ಜಿಂಕ್ ಸಲ್ಫೇಟ್ ಜೊತೆಗೆ ಅಥವಾ ಪ್ರತ್ಯೇಕವಾಗಿ ಸಿಂಪಡಿಸಬೇಕು. ಶೇ.೨ರಷ್ಟು ಡಿ.ಎ.ಪಿ, ಶೇ.೨ರಷ್ಟು ೧೩:೦:೪೫ ದ್ರಾವಣ ಅಥವಾ ಶೇ.೨ರಷ್ಟು ೧೯:೧೯:೧೯ ದ್ರಾವಣವನ್ನು ಸಿಂಪಡಿಸಬೇಕು. ಸಾವಯವ ಗೊಬ್ಬರಗಳು ಅಥವಾ ನೀರನ್ನು ಹೀರಿಕೊಳ್ಳುವ ಹೈಡ್ರೋಜೆಲ್ ಬಳಕೆಯಿಂದ ಹೊಲದಲ್ಲಿ ತೇವಾಂಶ ಲಭ್ಯತೆ ಹೆಚ್ಚುತ್ತದೆ. ಬೆಳೆಗಳ ಸಂದಿಗ್ಧ ಹಂತಗಳಲ್ಲಿ ಅವಕಾಶವಿದ್ದ ಕಡೆ ತುಂತುರು ನೀರಾವರಿ ಘಟಕ ಅಥವಾ ಹನಿ ನೀರಾವರಿ ಬಳಸಿ ನೀರನ್ನು ಹಾಯಿಸಬೇಕು.
ನೆಲಗಡಲೆಯಲ್ಲಿ ತಳಿಗಳಾದ ಜೆಎಲ್ ೨೪, ಕೆ-೬ ಮತ್ತು ಕೆ-೯ ತಳಿಗಳನ್ನು ಬಿತ್ತನೆ ಮಾಡಬೇಕು. ಸಾಮಾನ್ಯವಾಗಿ ಬಿತ್ತನೆ ಸಮಯ ಜುಲೈ ಮೊದಲ ವಾರವಾಗಿರುತ್ತದೆ. ಆದರೆ ಜುಲೈ ಮೊದಲ ೧೫ ದಿನಗಳ ನಂತರ ಮಳೆ ವಿಳಂಬವಾದರೆ ಪರ್ಯಾಯ ಬೆಳೆಯಾಗಿ ರಾಗಿ, ಹುರುಳಿ ಮತ್ತು ಹಿಂಗಾರಿ ಕಡಲೆ ಬೆಳೆಯನ್ನು ಬೆಳೆಯಬಹುದು. ಬಿತ್ತನೆ ಮಾಡಿದ ೩೦ ರಿಂದ ೪೦ ದಿನಗಳ ನಂತರ ೩ ಮೀಟರ್ ಅಂತರದಲ್ಲಿ ಉಕ್ಕೆ ಸಾಲು ಅಥವಾ ತೋಡನ್ನು (ಆeಚಿಜ ಈuಡಿಡಿoತಿs) ತೆಗೆಯಬೇಕು.
ಮುಸುಕಿನ ಜೋಳದಲ್ಲಿ ಸಂಕರಣ ತಳಿಗಳನ್ನು ಬಿತ್ತನೆ ಮಾಡಬೇಕು. ಮೆಥಾಲಿನ್+ಅಟ್ರಜಿನ್ ಅನ್ನು ಪ್ರತಿ ಹೆಕ್ಟರ್ಗೆ ೦.೫ ಕೆ.ಜಿ. ಪ್ರಮಾಣದಲ್ಲಿ ಮೊಳಕೆಗೆ ಮೊದಲು ಸಿಂಪಡಿಸಬೇಕು.
ತೊಗರಿ ತಳಿಗಳಾದ ಬಿಆರ್ ಜಿ-೧ ಮತ್ತು ಬಿಆರ್ ಜಿ-೨ ಅನ್ನು ತೊಗರಿ ಬಿತ್ತನೆಗೆ ಬಳಸಬಹುದು. ಆದರೆ ಮಳೆ ವಿಳಂಬವಾದರೆ ಎಕೆಟಿ-೮೮೧೧ ಅಥವಾ ಬಿಎಸ್ ಎಂಆರ್-೭೮೬ ತಳಿಗಳನ್ನು ಬಳಸಬೇಕು.
ಆಗಸ್ಟ್ ಮಾಹೆಯಲ್ಲಿ ಬಿತ್ತನೆಗೆ ಪೂರಕವಾದ ಉತ್ತಮ ಮಳೆಯಾದರೆ ರಾಗಿಯಲ್ಲಿ ಜಿ.ಪಿ.ಯು-೨೮, ಎಂ.ಎಲ್-೩೬೫, ಪಿ.ಆರ್-೨೦೨, ಜಿ.ಪಿ.ಯು-೬೬, ತಳಿಗಳನ್ನು ಆಗಸ್ಟ್ ೧೫ರೊಳಗೆ ಮತ್ತು ಜಿ.ಪಿ.ಯು-೨೬, ಜಿ.ಪಿ.ಯು-೪೫, ಜಿ.ಪಿ.ಯು-೪೮ನ್ನು ಆಗಸ್ಟ್ ಅಂತ್ಯದವರೆಗೆ ಬಿತ್ತನೆ ಮಾಡಬಹುದು. ರಾಗಿ ಸಸಿ ಮಡಿಗಳನ್ನು ಬೆಳೆಸಿದ್ದಲ್ಲಿ ನಾಟಿಗೆ ಉಪಯೋಗಿಸುವುದು ಉತ್ತಮ. ರಾಗಿ ಬಿತ್ತನೆಯಾಗಿದ್ದು ಸರಿಯಾಗಿ ಹುಟ್ಟುವಳಿಯಾಗದಿದ್ದರೆ ರಾಗಿ ಪೈರನ್ನು ನಾಟಿ ಮಾಡುವುದು ಸೂಕ್ತ. ಅಲಸಂದೆ, ಹುರುಳಿ ಮತ್ತು ಹೆಬ್ಬಾಳ ಅವರೆಯನ್ನು ಬಿತ್ತನೆ ಮಾಡಬಹುದು. ಜಾನುವಾರುಗಳಿಗೆ ಅಗತ್ಯವಿರುವ ಮೇವಿಗಾಗಿ ಮೇವಿನ ಜೋಳ ಬಿತ್ತನೆ ಮಾಡಬಹುದು.
ಸೆಪ್ಟಂಬರ್ ಮಾಹೆಯಲ್ಲಿ ಬಿತ್ತನೆಗೆ ಪೂರಕವಾದ ಉತ್ತಮ ಮಳೆಯಾದರೆ ಸಸಿ ಮಡಿಗಳನ್ನು ತಯಾರಿಸಿದಲ್ಲಿ ಮೊದಲ ಪಾಕ್ಷಿಕದಲ್ಲಿ ರಾಗಿ ಸಸಿಗಳನ್ನು ಸಸಿ ಮಡಿಗಳಿಂದ ಕಿತ್ತು ನಾಟಿ ಕಾರ್ಯ ಪೂರ್ಣಗೊಳಿಸಬೇಕು. ಜಿ.ಪಿ.ಯು-೨೬, ಜಿ.ಪಿ.ಯು-೪೫, ಜಿ.ಪಿ.ಯು-೪೮, ಕೆ.ಎಂ.ಆರ್-೩೦೧ ಹಾಗೂ ಇಂಡಾಫ್-೧೫ ತಳಿಗಳ ಪೈರನ್ನು ಬೆಳೆಸಿ ನಾಟಿ ಮಾಡಬಹುದು. ಸೆಪ್ಟಂಬರ್ ೧೫ ರೊಳಗೆ ಹಿಂಗಾರಿ ಜೋಳದ ಬಿತ್ತನೆಯನ್ನು ಪೂರ್ಣಗೊಳಿಸುವುದು ಸೂಕ್ತ. ದ್ವಿದಳಧಾನ್ಯ ಬೆಳೆಗಳಾದ ಅಲಸಂದೆ, ಹುರುಳಿ ಮುಂತಾದ ಅಲ್ಪವಧಿ ಬೆಳೆಗಳನ್ನು ಬಿತ್ತನೆ ಮಾಡಬಹುದು. ತಳಿಗಳ ಆಯ್ಕೆ ಮತ್ತು ಮಧ್ಯಂತರ ಬರ ಪರಿಸ್ಥಿತಿ ನಿರ್ವಹಣಾ ಕ್ರಮಗಳನ್ನು ಅನುಸರಿಸಿದಾಗ ಮಳೆಯ ಅಭಾವದಿಂದಾಗುವ ಬೆಳೆ ಹಾನಿಯನ್ನು ತಡೆಯಬಹುದು.
ತಳಿಗಳ ಆಯ್ಕೆ ಮತ್ತು ಮಧ್ಯಂತರ ಬರ ಪರಿಸ್ಥಿತಿ ನಿರ್ವಹಣಾ ಕ್ರಮಗಳನ್ನು ಅನುಸರಿಸಿದಾಗ ಮಳೆಯ
ಅಭಾವದಿಂದಾಗುವ ಬೆಳೆ ಹಾನಿಯನ್ನು ತಡೆಯಬಹುದು ಎಂದು ಅವರು ತಿಳಿಸಿದ್ದಾರೆ.

