BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ತುಮಕೂರು: ನೂತನ ವಿವಿ ಬಳಿ ಚಿರತೆ ಪ್ರತ್ಯಕ್ಷ
  • ನೈತಿಕ ಪತ್ರಿಕೋದ್ಯಮದ ಮೇಲೆ ಊಹಾ ಪತ್ರಿಕೋದ್ಯಮದ ಕರಿನೆರಳು
  • ಕೆಎನ್‌ಆರ್ ಅವರ ಅಮೃತ ಮಹೋತ್ಸವ ಯಶಸ್ವಿಗೊಳಿಸಿ: ದೊರೈರಾಜು ಅಭಿಪ್ರಾಯ
  • ವಿವಿ ಕ್ಯಾಂಪಸ್‌ನಲ್ಲಿ ೭೫ ಗಿಡ ನೆಟ್ಟು ಕೆ.ಎನ್.ಆರ್‌ಗೆ ಗೌರವ
  • ಮುಂದಿನ ದಿನಗಳಲ್ಲಿ ಭ್ರಷ್ಟಾಚಾರದ ವಿರುದ್ಧ ಜಾಥಾ ನಡೆಸಲಾಗುವುದು
  • ಜೆಡಿಎಸ್ ಪಕ್ಷವನ್ನು ಮುಳುಗಿಸಲು ಯಾರಿಂದಲೂ ಸಾದ್ಯವಿಲ್ಲ
  • ಕೆ.ಎನ್.ರಾಜಣ್ಣ ಸಹಕಾರಿ ಸಚಿವರಾಗಿ ಅಜಾತಶತೃವಾಗಿದ್ದಾರೆ
  • ಮುಂದಿನ ದಿನಗಳಲ್ಲಿ ಯಾವ ಅಧಿಕಾರವೂ ಬೇಡ, ಪ್ರೀತಿ, ವಿಶ್ವಾಸ ಉಳಿಸಿಕೊಂಡು ಹೋದರೆ ಸಾಕು: ಕೆಎನ್‌ಆರ್
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಡಿ.ಎಸ್.ಜಯಲಕ್ಷ್ಮಮ್ಮ ಗ್ರಾಮೀಣಾಭಿವೃದ್ದಿ ಸಂಸ್ಥೆಯ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿ, ವಿಧ್ಯಾರ್ಥಿನಿಯರಿಗೆ ಪ್ರತಿಭಾಪುರಸ್ಕಾರ
ಇತರೆ ಸುದ್ಧಿಗಳು

ಡಿ.ಎಸ್.ಜಯಲಕ್ಷ್ಮಮ್ಮ ಗ್ರಾಮೀಣಾಭಿವೃದ್ದಿ ಸಂಸ್ಥೆಯ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿ, ವಿಧ್ಯಾರ್ಥಿನಿಯರಿಗೆ ಪ್ರತಿಭಾಪುರಸ್ಕಾರ

By News Desk BenkiyabaleUpdated:August 25, 2022 6:07 pm

ತುಮಕೂರು:

ಶ್ರೀಮತಿ ಡಿ.ಎಸ್.ಜಯಲಕ್ಷ್ಮಮ್ಮ ಗ್ರಾಮೀಣಾಭಿವೃದ್ದಿ ಸಂಸ್ಥೆ(ರಿ) ತುಮಕೂರು ಜಿಲ್ಲೆಯ ಇವರವತಿಯಿಂದ ಸಂಸ್ಥೆಯ 9ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಕನ್ನಡ ಭವನದಲ್ಲಿ ಪ್ರತಿಭಾಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸ್ಪೂರ್ತಿ ಡೆವಲ್ಪರ್ಸ್‍ನ ಮಾಲೀಕರು ಹಾಗೂ ಸಮಾಜ ಸೇವಕರಾದ ಎಸ್.ಪಿ.ಚಿದಾನಂದ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ 2021-22ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ಹಾಗೂ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಶಾಸಕ ಜಿ.ಬಿ.ಜೋತಿಗಣೇಶ್,ವಿದ್ಯಾರ್ಥಿಗಳು ಡಾ.ಅಬ್ದುಲ್ ಕಲಾಂ ಅವರು ಹೇಳಿರುವಂತೆ ದೊಡ್ಡ ಕನಸುಗಳನ್ನು ಕಾಣಬೇಕು.ನಮ್ಮ ಮುಂದೆ ಐಎಎಸ್, ಐಪಿಎಸ್‍ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿದ್ದು,ಕೀಳಿರಿಮೆ ಬಿಟ್ಟು, ಅಗತ್ಯವಾದ ಮಾರ್ಗದರ್ಶನ ಮತ್ತು ಸತತ ಪರಿಶ್ರಮದಿಂದ ಜಯಗಳಿಸದರೆ, ಭವಿಷ್ಯವೇ ನಿಮ್ಮದಾಗಲಿದೆ. ಈ ನಿಟ್ಟಿನಲ್ಲಿ ನಿಮ್ಮೇಲ್ಲರೂ ಕಾರ್ಯೋನ್ಮುಖರಾಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಪೂರ್ತಿ ಡೆವಲ್ಪರ್ಸ್‍ನ ಎಸ್.ಪಿ.ಚಿದಾನಂದ ಮಾತನಾಡಿ,ಒಂದು ಕಾಲದಲ್ಲಿ ನಾನು ಕೂಡ ಓದು, ಬರಹಕ್ಕೆ ದುಡ್ಡು ಹೊಂದಿಸಲಾಗದ ಸ್ಥಿತಿಯಿಂದ ಕಷ್ಟಪಟ್ಟು ಇಂದಿನ ಸ್ಥಿತಿಗೆ ಬಂದಿದ್ದೇನೆ. ಯಾವುದೇ ಕ್ಷೇತ್ರವಾಗಲಿ, ನಿರಂತರ ಪರಿಶ್ರಮ ಮತ್ತು ಒಳ್ಳೆಯ ದಾರಿಯಲ್ಲಿ ನಡೆದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ನನ್ನ ಜೀವನವೇ ಉದಾಹರಣೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲಿಷ್ ಭಾಷೆ ಅತಿ ಅಗತ್ಯವಾಗಿದೆ. ಹಾಗಾಗಿ ಕನ್ನಡದ ಜೊತೆಗೆ,ಇಂಗ್ಲಿಷ್ ಭಾಷೆಯ ಕಲಿಕೆಗೆ ಎಲ್ಲರೂ ಒತ್ತು ನೀಡಿ,ಚಿಕ್ಕವರಿರುವಾಗಲೇ ಉತ್ತಮ ಗುರಿಯನ್ನು ತಲುಪುವ ದಾರಿಯನ್ನು ಕಂಡುಕೊಂಡು ಮುನ್ನೆಡೆಯಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಉದ್ಯಮಿ ಆರ್.ಎಲ್.ರಮೇಶ್‍ಬಾಬು ಮಾತನಾಡಿ,ವಿದ್ಯಾರ್ಥಿಗಳ ಜೀವನ ಒಂದು ಒಳ್ಳೆಯ ಹಂತ. ಈ ಸಂದರ್ಭದಲ್ಲಿ ಯಾವುದೇ ವಿಚಾರದಲ್ಲಿ ನಿರ್ಲಕ್ಷ ಸಲ್ಲದು, ಹಿರಿಯರು ಹೇಳಿರುವಂತೆ ಮಕ್ಕಳು ಭತ್ತ ತುಂಬುವ ಚೀಲಗಳಾಗದೆ, ಭತ್ತ ಬೆಳೆಯುವ ಗದ್ದೆಗಳಾಗಬೇಕು.ತಂದೆ, ತಾಯಿಗಳ, ಗುರು ಹಿರಿಯರ ಜೊತೆಗೆ ಒಳ್ಳೆಯ ಬಾಂಧವ್ಯ ಹೊಂದಿ, ನಾಡಿಗೆ ಹೆಸರು ತರಬೇಕೆಂದು ಸಲಹೆ ನೀಡಿದರು.
ಶ್ರೀಮತಿ ಡಿ.ಎಸ್.ಜಯಲಕ್ಷ್ಮಮ್ಮ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಕಾರ್ಯದರ್ಶಿಗಳಾದ ವೈ.ಎನ್.ಹೊಸಕೋಟೆ ನಟರಾಜು ಮಾತನಾಡಿ,ಸುಶಿಕ್ಷಿತರನ್ನು ಎಲ್ಲರೂ ಗೌರವಿಸುವಂತಹ ಕಾಲ.ಅಂಬೇಡ್ಕರ್ ಅವರಿಗೆ ಇಂದು ಪ್ರಪಂಚದಾದ್ಯಂತ ಗೌರವ, ಆಧರಗಳು ದೊರೆಯುತ್ತಿದ್ದರೆ,ಅದಕ್ಕೆ ಅವರು ಗಳಿಸಿದ ವಿದ್ವತ್ತೇ ಕಾರಣ. ಅವರನ್ನು ನೀವು ಮಾದರಿಯಾಗಿ ತೆಗೆದುಕೊಂಡು, ಉನ್ನತ ವ್ಯಾಸಂಗ ಮಾಡಿ ಯಶಸ್ಸು ಗಳಿಸಬೇಕು ಎಂದರು.
ಶ್ರೇಷಾದ್ರಿಪುರಂ ಕಾಲೇಜು ಪ್ರಾಂಶುಪಾಲರಾದ ಡಾ.ಜಿ.ಟಿ.ಜಗದೀಶ್ ಮಾತನಾಡಿ, ಶಿಕ್ಷಣ ಎಂಬುದು ಇಂದು ಬಡವರು, ಮಧ್ಯಮ ವರ್ಗದವರಿಗೆ ಕೈಗೆಟುಕಲಾರದ ಸ್ಥಿತಿಯಲ್ಲಿದೆ.ಹಾಗಾಗಿ ಗ್ರಾಮೀಣ ಮತ್ತು ಬಡವರ ಮಕ್ಕಳು ಹೆಚ್ಚಿನ ರೀತಿಯಲ್ಲಿ ಸರಕಾರದ ಸೌಲಭ್ಯಗಳ ಜೊತೆಗೆ,ಸಂಘ ಸಂಸ್ಥೆಗಳು ಸಹಕಾರ ನೀಡುತಿದ್ದು, ಇವುಗಳ ಸದುಪಯೋಗ ಪಡೆದುಕೊಂಡು, ತಮ್ಮ ಶೈಕ್ಷಣಿಕ ಪ್ರಗತಿಯನ್ನು ಹೊಂದುವಂತೆ ಕರೆ ನೀಡಿದರು.
ವೇದಿಕೆಯಲ್ಲಿ ಅಮ್ಮನಘಟ್ಟ ಮುಖಂಡರಾದ ಮಹದೇವಯ್ಯ, ಶ್ರೀಮತಿ ಸುಧಾ, ವಕ್ಫ್ ಬೋರ್ಡ್ ಉಪಾಧ್ಯಕ್ಷ ಶಬ್ಬೀರ್, ಶ್ರೀಮತಿ ನಳಿನ, ರಾಮಚಂದ್ರರಾವ್, ದೇವರಾಜು ಮತ್ತಿತರರು ಉಪಸ್ಥಿತರಿದ್ದರು.2021-22ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ 51 ಮಕ್ಕಳಿಗೆ ನೆನಪಿನ ಕಾಣಿಕೆ ಜೊತೆಗೆ, ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

(Visited 1 times, 1 visits today)
tumkur
Previous Articleಶ್ರೀ ಕೃಷ್ಣ ದೀಕ್ಷಿತರ ಸಮ್ಮುಖದಲ್ಲಿ ಶ್ರೀ ಗುರು ದತ್ತಾತ್ರೇಯ ಸ್ವಾಮಿ ಹಾಗೂ ಪಂಚಮುಖಿ ಆಂಜನೇಯ ಮತ್ತು ಶ್ರೀ ಕಾರ್ತ ವೀರಾರ್ಜುನ ದೇವರುಗಳ ಸ್ಥಿರಬಿಂಬ ಪ್ರತಿಷ್ಠಾಪನೆ.
Next Article ಆಟೋ ಮೇಲೆ ಮರ ಬಿದ್ದು ಗಾಯಗೊಂಡ ಚಾಲಕನ ಮನೆಗೆ ಮಾಜಿ ಸಚಿವ ಸೊಗಡು ಶಿವಣ್ಣ ಭೇಟಿ.
News Desk Benkiyabale

Related Posts

ತುಮಕೂರು: ನೂತನ ವಿವಿ ಬಳಿ ಚಿರತೆ ಪ್ರತ್ಯಕ್ಷ

June 26, 2025 4:01 pm ತುಮಕೂರು

ನೈತಿಕ ಪತ್ರಿಕೋದ್ಯಮದ ಮೇಲೆ ಊಹಾ ಪತ್ರಿಕೋದ್ಯಮದ ಕರಿನೆರಳು

June 26, 2025 3:46 pm ತುಮಕೂರು

ಕೆಎನ್‌ಆರ್ ಅವರ ಅಮೃತ ಮಹೋತ್ಸವ ಯಶಸ್ವಿಗೊಳಿಸಿ: ದೊರೈರಾಜು ಅಭಿಪ್ರಾಯ

June 20, 2025 3:41 pm ತುಮಕೂರು
ತಾಜಾ ಸುದ್ಧಿಗಳು
ತುಮಕೂರು

ತುಮಕೂರು: ನೂತನ ವಿವಿ ಬಳಿ ಚಿರತೆ ಪ್ರತ್ಯಕ್ಷ

June 26, 2025 4:01 pm
ತುಮಕೂರು

ನೈತಿಕ ಪತ್ರಿಕೋದ್ಯಮದ ಮೇಲೆ ಊಹಾ ಪತ್ರಿಕೋದ್ಯಮದ ಕರಿನೆರಳು

June 26, 2025 3:46 pm
ತುಮಕೂರು

ಕೆಎನ್‌ಆರ್ ಅವರ ಅಮೃತ ಮಹೋತ್ಸವ ಯಶಸ್ವಿಗೊಳಿಸಿ: ದೊರೈರಾಜು ಅಭಿಪ್ರಾಯ

June 20, 2025 3:41 pm
ತುಮಕೂರು

ವಿವಿ ಕ್ಯಾಂಪಸ್‌ನಲ್ಲಿ ೭೫ ಗಿಡ ನೆಟ್ಟು ಕೆ.ಎನ್.ಆರ್‌ಗೆ ಗೌರವ

June 20, 2025 3:40 pm
ತುಮಕೂರು

ಮುಂದಿನ ದಿನಗಳಲ್ಲಿ ಭ್ರಷ್ಟಾಚಾರದ ವಿರುದ್ಧ ಜಾಥಾ ನಡೆಸಲಾಗುವುದು

June 20, 2025 3:38 pm
ತುಮಕೂರು

ಜೆಡಿಎಸ್ ಪಕ್ಷವನ್ನು ಮುಳುಗಿಸಲು ಯಾರಿಂದಲೂ ಸಾದ್ಯವಿಲ್ಲ

June 20, 2025 3:37 pm
Our Youtube Channel
Our Picks

ಮೈಕ್ರೋ ಫೈನಾನ್ಸ್ಗಳಿಂದ ಬೆದರಿಕೆ, ಜಾತಿ ನಿಂದನೆ ಮಾಡಲಾಗುತ್ತಿದೆ: ಖಂಡನೆ

June 16, 2025 2:21 pm

ಶೋಷಿತರಲ್ಲಿ ಹೋರಾಟದ ಕಿಚ್ಚು ಹತ್ತಿಸಿದವರು ಪ್ರೊ.ಬಿ.ಕೃಷ್ಣಪ್ಪ

June 16, 2025 1:56 pm

ಸಾರ್ವಜನಿಕರು ಸರ್ಕಾರಿ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು: ಜಿಲ್ಲಾಧಿಕಾರಿ

June 05, 2025 2:29 pm

ನಗರದಲ್ಲಿ ಪ್ರಾದೇಶಿಕ ತೆಂಗು ಅಭಿವೃದ್ಧಿ ಮಂಡಳಿ ಕಚೇರಿ ತೆರೆಯಿರಿ

May 31, 2025 3:29 pm

ಗ್ಯಾರಂಟಿ ಯೋಜನೆಗಳು ಜನರ ಆರ್ಥಿಕ ಅಭಿವೃದ್ಧಿಗೆ ಸಹಕಾರಿ

May 29, 2025 4:18 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ತುಮಕೂರು

ತುಮಕೂರು: ನೂತನ ವಿವಿ ಬಳಿ ಚಿರತೆ ಪ್ರತ್ಯಕ್ಷ

By News Desk BenkiyabaleJune 26, 2025 4:01 pm

ಸಾಂದರ್ಭಿಕ ಚಿತ್ರ ತುಮಕೂರು: ಇತ್ತೀಚಿನ ದಿನಗಳಲ್ಲಿ ಆಹಾರ ಅರಸುತ್ತ ಕಾಡುಪ್ರಾಣಿಗಳು ಕಾಡಿನಿಂದ ನಾಡಿಗೆ ಬರುವುದು ಸರ್ವೆ ಸಾಮಾನ್ಯ ವಾಗಿಬಿಟ್ಟಿದೆ. ಇತ್ತ…

ನೈತಿಕ ಪತ್ರಿಕೋದ್ಯಮದ ಮೇಲೆ ಊಹಾ ಪತ್ರಿಕೋದ್ಯಮದ ಕರಿನೆರಳು

June 26, 2025 3:46 pm

ಕೆಎನ್‌ಆರ್ ಅವರ ಅಮೃತ ಮಹೋತ್ಸವ ಯಶಸ್ವಿಗೊಳಿಸಿ: ದೊರೈರಾಜು ಅಭಿಪ್ರಾಯ

June 20, 2025 3:41 pm

ವಿವಿ ಕ್ಯಾಂಪಸ್‌ನಲ್ಲಿ ೭೫ ಗಿಡ ನೆಟ್ಟು ಕೆ.ಎನ್.ಆರ್‌ಗೆ ಗೌರವ

June 20, 2025 3:40 pm
News by Date
June 2025
M T W T F S S
 1
2345678
9101112131415
16171819202122
23242526272829
30  
« May    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.