BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ನಗರೋತ್ಥಾನ ಯೋಜನೆ ಅನುಷ್ಠಾನ
  • ಬಿ-ಖಾತೆ: ೩ ತಿಂಗಳ ಕಾಲಾವಧಿ ವಿಸ್ತರಣೆ
  • ರಾಜ್ಯದಲ್ಲಿ ಮೈನಿಂಗ್ ಲಾಭಿ ಎಗ್ಗಿಲ್ಲದೆ ನಡೆಯುತ್ತಿದೆ
  • ನೀರಿನ ರಕ್ಷಣಾ ಕ್ರಮಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ
  • ಅಮ್ ಆದ್ಮಿ ಪಕ್ಷದಿಂದ ಭಾರತೀಯ ಸೇನೆಗೆ ಅಭಿನಂದನೆ
  • ಅವ್ಯವಹಾರಗಳ ಬಗ್ಗೆ ಕಾನೂನು ಕ್ರಮಕ್ಕೆ ಆಗ್ರಹಿಸಿ ಗೃಹಸಚಿವರಿಗೆ ರೈತರ ಮನವಿ
  • ಶಿರಡಿ ಸಾಯಿಬಾಬಾ ಮಂದಿರದ ವಾರ್ಷಿಕೋತ್ಸವ
  • ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರಿಂದ ಭೂಮಿ ಪೂಜೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರಿಂದ ಭೂಮಿ ಪೂಜೆ
ತುಮಕೂರು

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರಿಂದ ಭೂಮಿ ಪೂಜೆ

ಅಭಿವೃದ್ಧಿ, ಗುಣಮಟ್ಟದಲ್ಲಿ ವಿಚಾರದಲ್ಲಿ ರಾಜಿ ಇಲ್ಲ: ಶಾಸಕ ಬಿ. ಸುರೇಶ್ ಗೌಡ
By News Desk BenkiyabaleUpdated:May 15, 2025 4:07 pm

ತುಮಕೂರು: ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೂಲ ಮಂತ್ರ ಅಭಿವೃದ್ಧಿ ಕೆಲಸಗಳನ್ನು ಮಾಡಿಸುವುದು ಎಂದರೆ ನನಗೆ ಇನ್ನಿಲ್ಲದ ಪ್ರೀತಿ ಎಂದು ಹೇಳಿದ ಶಾಸಕರು ಅಭಿವೃದ್ಧಿ ವಿಚಾರದಲ್ಲಿ ಮತ್ತು ಗುಣಮಟ್ಟದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವಂತಹ ಸ್ವಭಾವ ನನ್ನದಲ್ಲ. ಹಿಡಿದ ಕೆಲಸವನ್ನು ನಿಗದಿತ ಕಾಲ ಮಿತಿಯಲ್ಲಿ ಪೂರ್ಣಗೊಳಿಸಿ ಲೋಕಾರ್ಪಣೆ ಗೊಳ್ಳುವವರೆಗೂ ಕೂಡ ಕಾಮಗಾರಿಯ ಹಿಂದೆ ಇರುತ್ತೇನೆ ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ. ಸುರೇಶ್ ಗೌಡ ತಿಳಿಸಿದರು.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಸಬಾ ಹೋಬಳಿ ಬೆಳಗುಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದೂರು ಗ್ರಾಮದಲ್ಲಿ ಇಂದು ರೂ೧೨ ಕೋಟಿ ರೂಪಾಯಿಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬಿಜೆಪಿ ಶಾಸಕರಾದ ಬಿ. ಸುರೇಶ್ ಗೌಡ ಹಾಗೂ ಜ್ಯೋತಿಗಣೇಶ್ ಅವರು ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ತುಮಕೂರು ಗ್ರಾಮಾಂತರ ಹಾಗೂ ನಗರ ವಿಧಾನಸಭಾ ಕ್ಷೇತ್ರಗಳನ್ನು ಸಂಪರ್ಕಿಸುವ ದೇವರಾಯಪಟ್ಟಣದಿಂದ ಮಾರನಾಯಕನಪಾಳ್ಯ ಮಾರ್ಗವಾಗಿ ಕುಂದೂರು, ಕುಂದೂರು ಕ್ರಾಸ್ ಗೆ ಸಂಪರ್ಕಿಸುವ ರಸ್ತೆಯನ್ನು ೧೦ ಕೋಟಿಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಇದರಲ್ಲಿ ನಗರ ವಿಧಾನಸಭಾ ಕ್ಷೇತ್ರದ ರಸ್ತೆಯು ಸೇರ್ಪಡೆ ಆಗಿರುವುದರಿಂದ ನಗರ ಬಿಜೆಪಿ ಶಾಸಕ ಜ್ಯೋತಿ ಗಣೇಶ ಅವರು ಹಾಗೂ ನಾನು ಸೇರಿ ಇಬ್ಬರು ಒಟ್ಟಿಗೆ ರಸ್ತೆಯನ್ನು ಅಭಿವೃದ್ಧಿಪಡಿಸಲು ಸಂಕಲ್ಪಿಸಿರುವುದಾಗಿ ಹೇಳಿದರು.
ಈ ರಸ್ತೆ ಅಭಿವೃದ್ಧಿಗಾಗಿ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದಿಂದಲೂ ಕೂಡ ಒಂದು ಕೋಟಿ ಅನುದಾನವನ್ನು ಒದಗಿಸಲಾಗಿದೆ ಎಂದು ಶಾಸಕ ಜ್ಯೋತಿ ಗಣೇಶ ಹೇಳಿದರು.
ಈ ಭಾಗದ ಬಹುದಿನಗಳ ಬೇಡಿಕೆಯಾಗಿರುವ ಕುಡಿಯುವ ನೀರು ಮತ್ತು ಕಸ ವಿಲೇವಾರಿ ಸೇರಿದಂತೆ ಯುಜಿಡಿ ಸಂಪರ್ಕ ಕಲ್ಪಿಸಿಕೊಡಲು ಅನೇಕ ದಿನಗಳಿಂದ ಜನರು ಮನವಿಗಳನ್ನು ನೀಡುತ್ತಿರುವುದು ನಮ್ಮ ಇಬ್ಬರ ಗಮನಕ್ಕೆ ಬಂದಿದೆ ಇದಕ್ಕೆ ಆದಷ್ಟು ಬೇಗ ಮುಕ್ತಿ ಕಲ್ಪಿಸಿ ಕೊಡುವುದಾಗಿ ಸುರೇಶ್ ಗೌಡ ಹೇಳಿದರು.
ಶಾಸಕ ಜ್ಯೋತಿ ಗಣೇಶ ಮತ್ತು ಸರ್ಕಾರದೊಡನೆ ಚರ್ಚಿಸಿ ಯುಜಿಡಿ ಸಂಪರ್ಕ ಕಲ್ಪಿಸಿ ಕೊಡುವುದಾಗಿ ಶಾಸಕ ಬಿ.ಸುರೇಶ್ ಗೌಡರು ಹೇಳಿದರು
ಜ್ಯೋತಿ ಗಣೇಶ್ ಅವರ ಸರಳ ಸಜ್ಜನಿಕೆಯ ಮತ್ತು ಅಭಿವೃದ್ಧಿ ವಿಚಾರದಲ್ಲಿ ದೂರದೃಷ್ಟಿಯುಳ್ಳ ನಾಯಕತ್ವದ ಬಗ್ಗೆ ಸುರೇಶ್ ಗೌಡರು ಕೊಂಡಾಡಿದರು.
ಕೇಂದ್ರದ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ೬೫ ಲಕ್ಷಗಳಲ್ಲಿ ಬೆಳಗುಂಬ ಗ್ರಾಮದ ಪ್ರತಿ ಮನೆ ಮನೆಗೆ ನಲ್ಲಿ ಸಂಪರ್ಕ ಕಲ್ಪಿಸುವ ಕಾಮಗಾರಿಗೂ ಚಾಲನೆ ನೀಡಿದರು.
ಈಗಾಗಲೇ ಅನೇಕ ಗ್ರಾಮಗಳಲ್ಲಿ ರಸ್ತೆಗಳನ್ನು ಅಭಿವೃದ್ಧಿಪಡಿಸಿ ರುವುದರಿಂದ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಪೈಪ್ ಲೈನ್ ಹಾಕುವಾಗ ರಸ್ತೆಗೆ ತೊಂದರೆಯಾಗದAತೆ ಡ್ಯಾಮೇಜ್ ಮಾಡದಂತೆ ಪೈಪ್ ಲೈನ್ ತೆಗೆದುಕೊಂಡು ಹೋಗಲು ಶಾಸಕರು ಸೂಚಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂ ಅಧ್ಯಕ್ಷರಾದ ಶ್ರೀಮತಿ ಮಂಗಳಮ್ಮ ಚೌಡಪ್ಪ,ಉಪಾಧ್ಯಕ್ಷರಾದ ನರಸಿಂಹರಾಜು ಮಾಜಿ ಉಪ ಮೇಯರ್ ಮಂಡಿ ಮೂರ್ತಿ, ಜಹಾಂಗೀರ್ ರವಿ ಮಾಜಿ ಉಪಾಧ್ಯಕ್ಷ ಹಾಲಿ ಸದಸ್ಯರಾದ ರಾಮಚಂದ್ರಪ್ಪ,ಮರಿಯಣ್ಣ ಚಿಕ್ಕರಂಗಯ್ಯಬ್ರೆಡ್ ರಾಜಣ್ಣ, ಮಲ್ಲೇಶಣ್ಣ,ಸುರೇಶ್,ರಾಜು, ತಿಮ್ಮರಾಯಪ್ಪ, ಲೋಕೇಶ್, ಭರತ್,ಸ್ವಾಮಿ, ರಂಗಾಧಾಮಯ್ಯ ನಾಗರಾಜು.ಶಶಾಂಕ್, ಕಾರ್ಯಪಾಲಕ ಅಭಿಯಂತರರಾದ ಹರೀಶ್ ಎಇಇ ಅಪ್ಪಣ್ಣ ರವಿ ಸೇರಿದಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು ಮಾಜಿ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.

(Visited 1 times, 1 visits today)
BJP Congress Mla jyothiganesh tumkur ಜಿಲ್ಲಾಧಿಕಾರಿ ಶುಭ ಕಲ್ಯಾಣ್
Previous Articleಬಣ್ಣದ ಶಿಬಿರದಲ್ಲಿ ನಾಟಕ ಪ್ರಯೋಗ
Next Article ಶಿರಡಿ ಸಾಯಿಬಾಬಾ ಮಂದಿರದ ವಾರ್ಷಿಕೋತ್ಸವ
News Desk Benkiyabale

Related Posts

ನಗರೋತ್ಥಾನ ಯೋಜನೆ ಅನುಷ್ಠಾನ

May 15, 2025 4:17 pm ತುಮಕೂರು

ಬಿ-ಖಾತೆ: ೩ ತಿಂಗಳ ಕಾಲಾವಧಿ ವಿಸ್ತರಣೆ

May 15, 2025 4:15 pm ತುಮಕೂರು

ರಾಜ್ಯದಲ್ಲಿ ಮೈನಿಂಗ್ ಲಾಭಿ ಎಗ್ಗಿಲ್ಲದೆ ನಡೆಯುತ್ತಿದೆ

May 15, 2025 4:14 pm ತುಮಕೂರು
ತಾಜಾ ಸುದ್ಧಿಗಳು
ತುಮಕೂರು

ನಗರೋತ್ಥಾನ ಯೋಜನೆ ಅನುಷ್ಠಾನ

May 15, 2025 4:17 pm
ತುಮಕೂರು

ಬಿ-ಖಾತೆ: ೩ ತಿಂಗಳ ಕಾಲಾವಧಿ ವಿಸ್ತರಣೆ

May 15, 2025 4:15 pm
ತುಮಕೂರು

ರಾಜ್ಯದಲ್ಲಿ ಮೈನಿಂಗ್ ಲಾಭಿ ಎಗ್ಗಿಲ್ಲದೆ ನಡೆಯುತ್ತಿದೆ

May 15, 2025 4:14 pm

ನೀರಿನ ರಕ್ಷಣಾ ಕ್ರಮಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ

May 15, 2025 4:13 pm
ತುಮಕೂರು

ಅಮ್ ಆದ್ಮಿ ಪಕ್ಷದಿಂದ ಭಾರತೀಯ ಸೇನೆಗೆ ಅಭಿನಂದನೆ

May 15, 2025 4:12 pm
ತುಮಕೂರು

ಅವ್ಯವಹಾರಗಳ ಬಗ್ಗೆ ಕಾನೂನು ಕ್ರಮಕ್ಕೆ ಆಗ್ರಹಿಸಿ ಗೃಹಸಚಿವರಿಗೆ ರೈತರ ಮನವಿ

May 15, 2025 4:10 pm
Our Youtube Channel
Our Picks

ಶಿರಡಿ ಸಾಯಿಬಾಬಾ ಮಂದಿರದ ವಾರ್ಷಿಕೋತ್ಸವ

May 15, 2025 4:09 pm

ಬಣ್ಣದ ಶಿಬಿರದಲ್ಲಿ ನಾಟಕ ಪ್ರಯೋಗ

May 14, 2025 4:39 pm

ಕ್ಷೇತ್ರವನ್ನು ಶೈಕ್ಷಣಿಕವಾಗಿ ಅಭಿವೃದ್ಧಿ ಪಡಿಸುವುದೇ ನನ್ನ ಮುಖ್ಯ ಗುರಿ ಶಿಕ್ಷಣಕ್ಕೆ ನನ್ನ ಸಂಪೂರ್ಣ ಸಹಕಾರ ಸದಾಕಾಲವಿರುತ್ತದೆ: ಶಾಸಕ

May 14, 2025 4:37 pm

ಪೋಕೋ ಪ್ರಕರಣ: ಆರೋಪಿಗೆ ೪೦ ವರ್ಷ ಜೈಲು ಶಿಕ್ಷೆ, ೨ ಲಕ್ಷ ೫೦ ಸಾವಿರ ರೂ. ದಂಡ

May 14, 2025 4:35 pm

ದುಷ್ಟರ ಸಂಹಾರಕ್ಕಾಗಿ ಸೋಮೇಶ್ವರ ದೇವಾಲಯದಲ್ಲಿ ಹೋಮ

May 12, 2025 3:11 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University YSpatil ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ತುಮಕೂರು

ನಗರೋತ್ಥಾನ ಯೋಜನೆ ಅನುಷ್ಠಾನ

By News Desk BenkiyabaleMay 15, 2025 4:17 pm

ತುಮಕೂರು: ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯ ಅನುಷ್ಠಾನ ಮಾಡುವಲ್ಲಿ ಪ್ರಗತಿಯಲ್ಲಿ ಹಿಂದುಳಿದ ಅಧಿಕಾರಿಗಳ ಅಮಾನತ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಡಳಿತ…

ಬಿ-ಖಾತೆ: ೩ ತಿಂಗಳ ಕಾಲಾವಧಿ ವಿಸ್ತರಣೆ

May 15, 2025 4:15 pm

ರಾಜ್ಯದಲ್ಲಿ ಮೈನಿಂಗ್ ಲಾಭಿ ಎಗ್ಗಿಲ್ಲದೆ ನಡೆಯುತ್ತಿದೆ

May 15, 2025 4:14 pm

ನೀರಿನ ರಕ್ಷಣಾ ಕ್ರಮಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ

May 15, 2025 4:13 pm
News by Date
May 2025
M T W T F S S
 1234
567891011
12131415161718
19202122232425
262728293031  
« Apr    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.