ಪಾವಗಡ: ಯುವಜನತೆಯು ದೇಶದ ಪ್ರಬಲ ಶಕ್ತಿಯಾಗಿದೆ ಪ್ರಬಲವಾಗಿರುವಂತಹ ಮಾನವ ಸಂಪನ್ಮೂಲವನ್ನು ದೇಶದಲ್ಲಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಶ್ರೀಮದ್ ಜಪಾನಂದ ಜಿ ಮಹಾರಾಜ್ ಅವರು ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಮತ್ತು ಶ್ರೀರಾಮಕೃಷ್ಣ ಸೇವಾಶ್ರಮ ಹಾಗೂ ಇಂಕ್ ಇಂಪ್ಯಾಕ್ಟ್ ಸರ್ವಿಸಸ್ ಪ್ರೈ.ಲಿ ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಪಾಠ ಶಾಲೆಯಲ್ಲಿ ಉದ್ಯೋಗ ಮೇಳ ಕಾರ್ಯಕ್ರಮವನ್ನು ಗಿಡಕ್ಕೆ ನೀರಾಕುವುದರ ಮೂಲಕ ಉದ್ಘಾಟಿಸಿ ದಿವ್ಯ ಸಾನಿಧ್ಯ ವಹಿಸಿದಂತಹ ಶ್ರೀಮದ್ ಜಪಾನಂದ ಜಿ ಮಹಾರಾಜ್ ರವರು ಮಾತನಾಡಿದರು ಗಡಿ ಭಾಗವಾದ ಪಾವಗಡಕ್ಕೆ ಹೆಸರಾಂತ ಹಲವು ಕಂಪನಿಗಳು ಬಂದಿವೆ ಇದನ್ನು ಪಾವಗಡದ ಜನತೆಯು ಸದುಪಯೋಗಪಡಿಸಿಕೊಳ್ಳಬೇಕು ಎಂದು ಆಶೀರ್ವಚನ ನೀಡಿದರು.
ಪಾವಗಡದ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಶ್ರೀಮತಿ ಇಂದ್ರಾಣಮ್ಮನವರು ಮಾತನಾಡಿ ಪಾವಗಡದ ಮೂಲದ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳು ವಿದೇಶಗಳಲ್ಲೂ ತಮ್ಮನ್ನು ತಾವು ಬಿಂಬಿಸಿಕೊAಡಿದ್ದಾರೆ ಪಾವಗಡದಲ್ಲಿ ಶಿಕ್ಷಣಕ್ಕೆ ಉತ್ತಮವಾದ ರೀತಿಯ ಉತ್ತೇಜನವನ್ನು ಶ್ರೀ ಸ್ವಾಮಿ ಜಪಾನಂದ ಜಿ ಮಹಾರಾಜರವರು ನೀಡುತ್ತಿದ್ದಾರೆ, ಶಿಕ್ಷಣದಿಂದ ಹಿಂದುಳಿದಿರುವ ಮತ್ತು ಅನೇಕ ರೀತಿಯ ವಿದ್ಯಾಭ್ಯಾಸವನ್ನು ಪಡೆದು ಉದ್ಯೋಗದಿಂದ ವಂಚಿತರಾಗಿರುವವರಿಗೆ ಇದು ಬಹಳ ಉಪಯುಕ್ತವಾದ ಕಾರ್ಯಕ್ರಮ ಎಂದು ತಿಳಿಸಿದರು.
ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನ ವಿಭಾಗದ ಮುಖ್ಯಸ್ಥರಾದ ಪ್ರೊ. ಪರಶುರಾಮ್ ಕೆ ಜಿ ರವರು ಮಾತನಾಡಿ ನೀವು ಕೆಲಸವನ್ನು ಪಡೆಯಬೇಕಾದರೆ ತಮ್ಮ ಸ್ಥಳಿಯ ಸ್ಥಳವನ್ನು ಬಿಟ್ಟು ಕೆಲಸಕ್ಕಾಗಿ ವಲಸೆ ಹೋಗಬೇಕಾಗುತ್ತದೆ ಸುಮಾರು ೨,೦೦೦ ಹುದ್ದೆಗಳು ಬಾಕಿ ಇದ್ದು ಸುಮಾರು ೫೦೦ ಜನರಿಗೆ ಉದ್ಯೋಗ ದೊರಕುತ್ತದೆ. ಉದ್ಯೋಗಕ್ಕಾಗಿ ಮತ್ತು ಉದ್ಯೋಗವನ್ನು ಅವಲಂಬಿಸಿ ಉದ್ಯೋಗ ಮೇಳಕ್ಕೆ ಬಂದAತಹ ಪ್ರತಿಯೊಬ್ಬರಿಗೂ ಉದ್ಯೋಗ ಸಿಗುತ್ತದೆ ಎಂದು ತಿಳಿಸಿದರು
ಇಂಕ್ ಇಂಫ್ಯಾಕ್ಟ್ ಸರ್ವಿಸ್ ನ ಉಪಾಧ್ಯಕ್ಷರಾದ ಶ್ರೀ ಮಹೇಶ್ ಎಚ್ ರವರು ಮಾತನಾಡಿ ಉದ್ಯೋಗಕ್ಕಾಗಿ ಬಂದಿರುವ ಉದ್ಯೋಗಿ ಆಕಾಂಕ್ಷಿಗಳಿಗೆ ಉದ್ಯೋಗಕ್ಕಾಗಿ ಯಾವೆಲ್ಲ ರೀತಿಯ ವಿದ್ಯಾಭ್ಯಾಸ ಅಗತ್ಯ ಎಂದು ತಿಳಿಸಿದರು .
ಅಧ್ಯಕ್ಷ ನುಡಿಯನ್ನಾಡಿದ ಇಂಫ್ಯಾಕ್ಟ್ ಸರ್ವಿಸ್ ನ ನಿರ್ದೇಶಕರಾದ ಶ್ರೀಯುತ ಮಂಜುನಾಥ್ ನಾಯಕ್ ರವರು ಉದ್ಯೋಗವೆಂಬುದು ಬಹಳಷ್ಟು ಇವೆ ಆದರೆ ತಕ್ಕ ಕೌಶಲ್ಯವುಳ್ಳ ಉದ್ಯೋಗಿಗಳೇ ಇಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಇಂದ್ರಾಣಮ್ಮನವರು ,ಮಹೇಶ್ ರವರು, ಮುಖ್ಯ ಶಿಕ್ಷಕರಾದ ವೆಂಕಟನಾಯಕ್, ಸಮಾಜಕಾರ್ಯ ಅಧ್ಯಯನ ವಿಭಾಗದ ಉಪನ್ಯಾಸಕರಾದಂತಹ ಡಾ.ಭೂಷಣ್ ಕುಮಾರ್ ,ಡಾ. ಲಕ್ಷ್ಮೀ ರಂಗಯ್ಯ ,ಡಾ.ನಿಸರ್ಗ ಪ್ರಿಯ ,ಡಾ. ಕೃಷ್ಣ ತಳವಾರ್ ಶಿಬಿರ ಅಧಿಕಾರಿಗಳಾದ ಶ್ರೀಮತಿ ಅನುಷಾ ಜೈನ್ ಮತ್ತು ಶ್ರೀ ಶೇಖರಯ್ಯ ,ಶಿಬಿರಾರ್ಥಿಗಳು, ಉದ್ಯೋಗಾಕಾಂಕ್ಷಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದು . ಶಿಬಿರಾರ್ಥಿಯಾದ ಗಗನ ರವರು ನಿರೂಪಿಸಿ ಪ್ರಿಯಾಂಕರವರು ಸ್ವಾಗತ ಕೋರಿದರು ಮತ್ತು ಸುಪ್ರಿಯ ರವರು ವಂದನೆ ಸಲ್ಲಿಸಿದರು
(Visited 1 times, 1 visits today)