ತುಮಕೂರು: ನಿಯಮವನ್ನು ಉಲ್ಲಂಘಿಸಿ ಪರ ವಾನಗಿ ಇಲ್ಲದೆ ದೋಷಪೂರಿತ ದಾಖ ಲೆಗಳನ್ನು ಹೊಂದಿರುವ ಹಿನ್ನೆಲೆಯಲ್ಲಿ ಕಾರ್ಖಾನೆಗೆ ಬಳಸುವ ೭,೭೮,೮೦೦ ರೂ. ಮೌಲ್ಯದ ೩೦ ಟನ್ ಟೆಕ್ನಿಕಲ್ ಯೂರಿಯಾ ರಸಗೊಬ್ಬರವನ್ನು ಸಾಗಾಣಿಕೆ ಮಾಡುತ್ತಿದ್ದ ಸರಕು ವಾಹನ(ಆರ್.ಜೆ-೧೧ ಜಿ.ಸಿ.-೩೮೧೮)ವನ್ನು ಮೇ ೧೯ರಂದು ಜಪ್ತಿ ಮಾಡಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಸಹಾಯಕ ಕೃಷಿ ನಿರ್ದೇಶಕ(ಜಾರಿದಳ-೧) ಪುಟ್ಟರಂಗಪ್ಪ ತಿಳಿಸಿದ್ದಾರೆ.
ನಗರದ ರಾಷ್ಟಿçÃಯ ಹೆದ್ದಾರಿ ಕ್ಯಾತ್ಸಂದ್ರ ಜಾಸ್ ಟೋಲ್ ಬಳಿ ಜಾಗೃತಿ ಕಾರ್ಯಕ್ರಮದಲ್ಲಿ ಪರಿಶೀಲಿಸಿದಾಗ ನಿಯಮ ಉಲ್ಲಂಘನೆ ಪ್ರಕರಣ ಬೆಳಕಿಗೆ ಬಂದಿದ್ದರಿ0ದ ವಾಣಿಜ್ಯ ತೆರಿಗೆ ಅಧಿಕಾರಿ(ಜಾರಿ-೨) ಕೆ.ಎನ್. ನರಸಿಂಹರಾಜು, ಸಹಾಯಕ ಆಯುಕ್ತ(ಜಾರಿ) ನಾಗರಾಜು ಜಪ್ತಿ ಮಾಡಿ ಕೃಷಿ ಇಲಾಖೆ ಮಾಹಿತಿ ನೀಡಿದ್ದರು.
ಮಾಹಿತಿಯನ್ನಾಧರಿಸಿ ಕೃಷಿ ಇಲಾಖೆ ಅಧಿಕಾರಿಗಳು ದಾಖಲೆಯನ್ನು ಪರಿಶೀಲಿಸಿ ಸರಕನ್ನು ವಿಶ್ಲೇಷಣೆಗಾಗಿ ಪ್ರಯೋಗಾಲಕ್ಕೆ ಕಳುಹಿಸಿದ್ದು, ಪ್ರಯೋಗಾಲಯದ ವರದಿಯಲ್ಲಿ ಸಾಗಾಣಿಕೆ ಮಾಡುತ್ತಿದ್ದ ರಸಗೊಬ್ಬರವು ಕಾರ್ಖಾನೆಗಳಿಗೆ ಬಳಸುವ ರಸಗೊಬ್ಬರವೆಂದು ತಿಳಿದು ಬಂದಿದೆ.
ಪರವಾನಗಿ ಇಲ್ಲದೆ ಇಂತಹ ರಸಗೊಬ್ಬ ರವನ್ನು ಸರಬರಾಜು, ಸಾಗಾಣಿಕೆ, ವಿತರಣೆ ಮಾಡುವುದು ಅಪರಾಧ. ಕೇಂದ್ರ ಸರ್ಕಾರದ ಕೃಷಿ ಮಂತ್ರಾಲಯದಿAದ ಪರವಾನಗಿ ಹೊಂದಿರುವವರು ಮಾತ್ರ ರಸಗೊಬ್ಬರವನ್ನು ಸರಬರಾಜು ಮಾಡಬೇ ಕೆಂಬ ನಿಯಮವಿದ್ದು, ಜಪ್ತಿ ಮಾಡಿದ ರಸಗೊಬ್ಬರಕ್ಕೆ ಪರವಾನಗಿ ಹಾಗೂ ಸೂಕ್ತ ದಾಖಲೆಗಳನ್ನು ಹೊಂದಿಲ್ಲದೆ ಇದ್ದುದರಿಂದ ರಸಗೊಬ್ಬರದ ಸರಕು ವಾಹನವನ್ನು ಕೃಷಿ ಇಲಾಖೆ ವಶಕ್ಕೆ ಪಡೆಯಲಾಗಿದೆ. ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಹೆಚ್ಚಿನ ತನಿಖೆಗಾಗಿ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಜೂನ್ ೩ರಂದು ಪ್ರಕರಣವನ್ನು ದಾಖಲಿಸಲಾಗಿದೆ.
ಜಪ್ತಿ ಕಾರ್ಯದಲ್ಲಿ ಸಹಾಯಕ ಕೃಷಿ ನಿರ್ದೇ ಶಕ(ಜಾರಿದಳ-೨) ಅಶ್ವತ್ಥನಾರಾಯಣ ವೈ., ಪೊಲೀಸ್ ಇಲಾಖೆಯ ತನಿಖಾಧಿಕಾರಿ ಎಸ್.ಎಸ್.ಚೇತನ್ ಕುಮಾರ್ ಹಾಗೂ ಸಿಬ್ಬಂದಿ ಶಶಿಧರ್ ಎಸ್.ಎಲ್., ಮಂಜುನಾಥ ಎಲ್. ದೇವರಾಜ್, ಓಂಕಾರೇಶ್ವರ ಭಾಗವಹಿಸಿದ್ದರು.