ಹುಳಿಯಾರು: ಹುಳಿಯಾರು ಸಮೀಪದ ಹಂದನಕೆರೆ ಹೋಬಳಿ ರಂಗಾಪುರ ಗ್ರಾಮದಲ್ಲಿ ಚಿಕ್ಕನಾಯಕನಹಳ್ಳಿಯ ನವೋದಯ ಪ್ರಥಮ ದರ್ಜೆ ಕಾಲೇಜಿನಿಂದ ನಡೆಯುತ್ತಿರುವ ಎನ್.ಎಸ್.ಎಸ್ ಶಿಬಿರದಲ್ಲಿ ಚಿಕ್ಕನಾಯಕನಹಳ್ಳಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಪಶು ಆರೋಗ್ಯ ಶಿಬಿರ ಮತ್ತು ಕರುಣಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ರಂಗಾಪುರ ಗ್ರಾಮದಲ್ಲಿ ಬೆಳಗ್ಗೆ ೮ ಗಂಟೆಗೆ ಕರುಗಳಿಗೊಸ್ಕರ “ಕರುಣಾ” ಎಂಬ ಕಾರ್ಯ ಕ್ರಮವನ್ನು ನಡೆಸಿಕೊಡಲಾಯಿತು. ಗ್ರಾಮದ ೨೫ ಕರುಗಳಿಗೆ ಸಮಗ್ರ ಚಿಕಿತ್ಸೆ ನೀಡಲಾಯಿತು. ಜಂತುನಾಶಕ ಔಷಧಿಯನ್ನು ಕುಡಿಸಿ, ಆರೋಗ್ಯ ಬೆಳವಣಿಗೆಗೆ ಪೂರಕವಾದ ಟಾನಿಕ್ ಚುಚ್ಚುಮದ್ದುಗಳನ್ನು ನೀಡಲಾಯಿತು. ೧೦೦ ರಾಸುಗಳಿಗೆ ಜಂತು ನಾಶಕ ಔಷಧಿ ಕುಡಿಸಿ ಆರೋಗ್ಯ ವರ್ಧನೆಗೆ ಚುಚ್ಚುಮದ್ದು ಮತ್ತು ಲವಣ /ಖನಿಜ ಮಿಶ್ರಣ ಪಾಕೇಟ್ಗಳನ್ನು ನೀಡಲಾಯಿತು.
ಅಲ್ಲದೆ ಪ್ರತಿ ಕರುವಿಗೆ ಬೆಳವಣಿಗೆಗೆ ಪೂರಕ ವಾದ ಮಾತ್ರೆಗಳು ಮತ್ತು ಟಾನಿಕ್ಗಳನ್ನು ನೀಡಲಾಯಿತು. ಕರುಗಳ ಲಾಲನೆ ಪಾಲನೆ, ಒಂದು ವರ್ಷದ ಒಳಗೆ ಕರು ಬೆದೆಗೆ ಬರುವಂತೆ ಮಾಡಲು ಅಳವಡಿಸಬೇಕಾದ ಅಂಶಗಳು, ಕೃತಕ ಗರ್ಭಧಾರಣೆ ಮಹತ್ವ, ಗರ್ಭಧರಿಸಿದ ರಾಸುಗಳ ಪಾಲನೆ, ಮೇವಿನ ಬೆಳೆಗಳ ಮಹತ್ವ, ಒಣಮೇವು ಪೌಷ್ಟೀಕರಣ, ರಸಮೇವು ತಯಾರಿಕೆ, ಲಸಿಕೆಗಳ ಮಹತ್ವ, ಲಾಭದಾಯಕ ಹೈನು ಗಾರಿಕೆಯ ತತ್ವಗಳು, ರೋಗಗಳ ನಿಯಂತ್ರಣ ಮುಂತಾದ ವಿಚಾರಗಳ ಕುರಿತು ರೈತರಿಗೆ ಮಾಹಿತಿ ನೀಡಲಾಯಿತು. ಈ ಸಂಧರ್ಭದಲ್ಲಿ ನವೋದಯ ಕಾಲೇ ಜಿನ ಪ್ರಾಚಾರ್ಯರಾದ ರವಿಕುಮಾರ್, ಶಿಬಿರಾ ಧಿಕಾರಿ ಸದಾನಂದ ಸ್ವಾಮಿ, ಪ್ರಾಥಮಿಕಾ ಶಾಲೆಯ ಮುಖ್ಯೋಪದ್ಯಾಯ ಗುರುಮೂರ್ತಿ ಉಪಸ್ಥಿತರಿದ್ದರು.
(Visited 1 times, 1 visits today)