
ತುಮಕೂರು: ಏಪ್ರಿಲ್ ೧ರಿಂದ ಆರಂಭವಾ ಗಿರುವ ಸ್ವಯಂ ಗಣತಿಯಲ್ಲಿ ಸಾರ್ವಜನಿಕರು ಭಾಗ ವಹಿಸುವ ಮೂಲಕ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ ಕರೆ ನೀಡಿದ್ದಾರೆ.
ತುಮಕೂರು ನಗರದ ವಿವಿಧ ಬಡಾವಣೆಗಳಿಗೆ ಗುರುವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಅವರು ಮೊಬೈಲ್ ಮೂಲಕ ನಾಗರಿಕರು ಸ್ವಯಂ ಗಣತಿ ಮಾಡುವುದು ಹೇಗೆ ಎಂಬುದನ್ನು ಖುದ್ದು ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರತಿ ಹತ್ತು ವರ್ಷಗಳಿಗೊಮ್ಮೆ ಭಾರತ ಸರ್ಕಾ ರ ಜನಗಣತಿ ಮಾಡುತ್ತದೆ. ಅಂತೆಯೇ ಇದೀಗ ೨೦೨೭ರ ಜನಗಣತಿ ಏಪ್ರಿಲ್ ೧ರಿಂದ ಆರಂಭ ವಾಗಿದ್ದು ಏಪ್ರಿಲ್ ೧೫ರವರೆಗೆ ಸ್ವಯಂ ಗಣತಿ ನಂತರ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಗಣತಿ ಕಾರ್ಯ ಮಾಡಲಿದ್ದಾರೆ ಎಂದರು.
ಪ್ರಸ್ತುತ ಏಪ್ರಿಲ್ ೧ರಿಂದ ೧೫ರವರೆಗೆ ಸ್ವಯಂ ಗಣತಿ ಆರಂಭವಾಗಿದ್ದು ಸಾರ್ವಜನಿಕರು ತಮ್ಮ ಮೊಬೈಲ್ ಮೂಲಕ ವಿವರಗಳನ್ನು ದಾಖಲಿಸಬೇಕಿದೆ. ಈ ದಾಖಲೆಗಳು ಅತ್ಯಂತ ಗೌಪ್ಯವಾಗಿರಿಸಲಾಗುವುದು ಮತ್ತು ಇದು ಸರ್ಕಾರದ ಯೋಜನಗಳ ರೂಪಿಸುವ ಉದ್ದೇ ಶಕ್ಕೆ ಮಾತ್ರ ಬಳಕೆ ಆಗಲಿದೆ ಎಂದರು.
ತಮ್ಮ ಮೊಬೂಲ್ ನಲ್ಲಿಈ ಲಿಂಕನ್ನು ತೆರೆದು ಅಲ್ಲಿ ತಮ್ಮ ಕುಟುಂಬ ಮುಖ್ಯಸ್ಥರು ವಿವರಗ ಳನ್ನು ದಾಖಲಿಸಬೇಕಿದೆ. ಕೇವಲ ೩೩ ಪ್ರಶ್ನೆಗಳಿಗೆ ೩ ನಿಮಿಷದಲ್ಲಿ ಉತ್ತರಿಸಿ ಗಣತಿ ಕಾರ್ಯವನ್ನು ಸುಲಭವಾಗಿ ಯಶಸ್ವಿಯಾಗಿ ಪೂರ್ಣಗೊಳಿಸಬಹುದು ಎಂದರು.
ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಒಂದು ಐಡಿ ನಂಬರ್ ಬರುತ್ತದೆ ಅದನ್ನು ಸ್ಕ್ರೀನ್ ಷಾಟ್ ತೆಗೆದಿಟ್ಟುಕೊಂಡು ಏಪ್ರಿಲ್೧೬ರಿಂದ ಗಣತಿದಾರರು ಮನೆ ಮನೆಗೆ ಗಣತಿಗಾಗಿ ಆಗಮಿಸಿದಾಗ ಈ ಐಡಿ ನಂಬರನ್ನು ತೋರಿಸಿದಲ್ಲಿ ಅದನ್ನು ಒಮ್ಮೆ ಪರಿಶೀಲಿಸಿ ಆಗಿದೆ ಎಂದು ನಮೂದಿಸಿಕೊಳ್ಳುತ್ತಾರೆ. ಈಗ ಮಾಡಿಲ್ಲದವರು ಗಣತಿದಾರರಿಗೆ ಮಾಹಿತಿ ನೀಡ ಬೇಕಾಗುತ್ತದೆ ಎಂದು ಅವರು ತಿಳಿಸಿದರು.
೧೮೭೨ರಲ್ಲಿ ದೇಶದಲ್ಲಿ ಮೊದಲ ಜನಗಣತಿ ಮಾಡಲಾಗಿದ್ದು ಆ ನಂತರ ಪ್ರತಿ ಹತ್ತು ವರ್ಷ ಗಳಿಗೊಮ್ಮೆ ಮಾಡಲಾಗುತ್ತದೆ. ಅಲ್ಲದೆ ೧೯೪೮ರ ಗಣತಿ ಕಾಯ್ದೆಯಂತೆ ಈ ಪ್ರಕ್ರಿಯೆ ನಡೆಯಲಿದ್ದು ಸಾರ್ವಜನಿಕರು ಸಹಕರಿಸಬೇಕು ಹಾಗೂ ಗಣತಿ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದರು.
ತುಮಕೂರು ಮಹಾನಗರ ಪಾಲಿಕೆ ಆಯುಕ್ತೆ ಶುಭ ಬಿ. ಮಾತನಾಡಿ, ಏಪ್ರಿಲ್ ೧ರಿಂದ ತಮ್ಮ ಸಿಬ್ಬಂದಿ ಗಣತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಏಪ್ರಿಲ್ ೧೬ರಿಂದ ಗಣತಿದಾರರು ಮನೆ ಮನೆಗೆ ಭೇಟಿ ನೀಡಲಿದ್ದಾರೆ. ಐಡಿ ಕಾರ್ಡಿನೊಂದಿ ಅವರು ಬರಲಿದ್ದಾರೆ ಅದನ್ನು ಪರಿಶೀಲಿಸಿ ಸಾರ್ವಜನಿಕರು ಗಣತಿಗೆ ಮಾಹಿತಿ ನೀಡಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.





