ಹುಳಿಯಾರು: ದೇಶದಲ್ಲಿ ನಿರುದ್ಯೋಗವಿದೆ. ಕಂಪನಿಗಳಲ್ಲಿ ಕೆಲಸಗಾರರು ೧೦ ರಿಂದ ೧೨ ಗಂಟೆ ಕೆಲಸ ಮಾಡುವಂತಹ ನಿಯಮಗಳು ಬರುತ್ತಿವೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಸ್ವಉದ್ಯೋಗ ಮಾಡುವುದು ಅವಶ್ಯಕ. ಆದ್ದರಿಂದ ನೀವೆಲ್ಲರ ಉದ್ಯಮಿಗಳಾಗಿ ಹಣ ಸಂಪಾದಿಸಿ ಒಳ್ಳಯ ಜೀವನವನ್ನು ಪಡೆಯಿರಿ ಎಂದು ಮಾಸ್ ಟ್ರಸ್ಟ್ ಕಾರ್ಯದರ್ಶಿ ಹಾಗೂ ಸಾಮಾಜಿಕ ಕಾರ್ಯಕರ್ತ ರಾಮಕೃಷ್ಣಪ್ಪ ಸಲಹೆ ನೀಡಿದವರು. ಹುಳಿಯಾರು ಹೋಬಳಿಯ ಸಿಂಗಾಪುರ ಗ್ರಾಮದಲ್ಲಿ ಕಳ್ಳಂಬೆಳ್ಳದ ನವ್ಯ ದಿಶಾ ಸಂಸ್ಥೆ ಹಾಗೂ ಚಿಕ್ಕನಾಯಕನಹಳ್ಳಿ ಸೃಜನಾ ಮಹಿಳಾ ಸಂಘಟನೆ ಆಯೋಜಿಸಿದ್ದ ಯುವ ಉದ್ಯಮಿ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ನಿಮಗೆ ಅನೇಕ ಕೌಶಲಗಳ ಬಗ್ಗೆ ತಿಳಿದಿದೆ, ಅನೇಕ ಉದ್ಯೋಗಗಳ ಬಗ್ಗೆ ಪರಿಚಯವಿದೆ, ಆದರೆ ಅದನ್ನು ಕಾರ್ಯಗತ ಮಾಡಲು ಮಹಿಳೆಯರಿಗೆ ಮನೆಯಲ್ಲಿ ಅನೇಕ ಅಡ್ಡಿ ಆತಂಕಗಳಿವೆ. ಅವುಗಳಿಂದ ಆಚೆ ತರುವುದು ಈ ತರಬೇತಿಯ ಮುಖ್ಯ ಉದ್ದೇಶ. ಮಹಿಳೆಯರನ್ನು ಸ್ವತಂತ್ರ ಉದ್ಯಮಿಗಳನ್ನಾಗಿ ಮಾಡಲು ಅಗತ್ಯ ಮಾರ್ಗದರ್ಶನವನ್ನು ತರಬೇತಿ ಪಡೆಯುವವರಿಗೆ ನೀಡಲಾಗುವುದು ಎಂದು ಹೇಳಿದವರು. ಮುಖ್ಯ ತರಬೇತಿರಾದ ಕೆಂಪಣ್ಣ, ಸಂಪನ್ಮೂಲ ವ್ಯಕ್ತಿಗಳಾದ…
Author: News Desk Benkiyabale
ಪಾವಗಡ: ತಾಲೂಕಿನ ಬ್ಯಾಡನೂರು ವಡ್ಡರಹಟ್ಟಿ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾ ಖೆಯ ಉಪನಿರ್ದೇಶಕರಾದ ಚೇತನ್ ಕುಮಾರ್ ರವರು ಮಾತನಾಡಿ, ಗೊಲ್ಲರ ಹಟ್ಟಿಯಲ್ಲಿ ಆಚರಿಸುವ ಅನಿಷ್ಟ ಪದ್ಧತಿಗಳು ಬಾಲ್ಯವಿವಾಹ ಹದಿ ಹರೆಯದ ಗರ್ಬಿಣಿ ಮತ್ತು ಇಲಾಖಾ ಯೋಜನೆಗಳ ಬಗ್ಗೆ ಸವಿವರವಾಗಿ ತಿಳಿಸಿದರು ನಂತರ ಜಿಲ್ಲಾ ನಿರೂಪಣಾಧಿಕಾರಿಗಳಾದ ದಿನೇಶ್ ರವರು ಮಾತನಾಡಿ ಮಗುವಿನ ಆರೈಕೆ, ಪೋಷಣ್ ಅಭಿಯಾನ ಯೋಜನೆ ಬಾಣಂತಿ ಆರೈಕೆ ಬಗ್ಗೆ ಅರಿವು ಮೂಡಿಸಿದರು. ಇದೇ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಇಲಾಖಾ ಯೋಜನೆಗಳ ಬಗ್ಗೆ ಪಾತ್ರಾಭಿ ನಯದ ಮೂಲಕ ವ್ಯಕ್ತ ಪಡಿಸಿದರು ಕರಡಿ ಕುಣಿತ ಕೋಲಾಟ ಸೋಬಾನೆ ಪದ ಪುಟ್ಟ ಮಕ್ಕಳ ನೃತ್ಯ ಮುಂತಾದ ಮನರಂಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶ ಸುನಿತಾ ರವರು ವಂದನಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ನಾಗರಾಜ್, ರಾಜಾನಾಯ್ಕ, ಶಶಿಧರ,ಮೇಲ್ವಿಚಾರ ಕಿಯರು, ಸಮುದಾಯದ ಮುಖಂಡರು, ಮಹಿಳಾ…
ಹುಳಿಯಾರು: ಹುಳಿಯಾರಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ಆಟೋಟ ಸ್ಪರ್ಧೆನಡೆಸಿ ಬಹುಮಾನ ವಿತರಿಸಲಾಯಿತು. ಚಮಚದಿಂದ ನಾಣ್ಯ ಜೋಡಿಸುವ ಆಟದಲ್ಲಿ ಎಚ್.ಎಸ್.ಸುಲೋಚನ ಪ್ರಥಮ, ಗೌರಮ್ಮ ದ್ವಿತೀಯ, ಸುಶೀಲಮ್ಮ ತೃತೀಯ, ಕಪ್ ಜೋಡಿಸುವ ಆಟದಲ್ಲಿ ಸುಶೀಲಮ್ಮ ಪ್ರಥಮ, ಪ್ರೇಮ ದ್ವಿತೀಯ, ಭಾಗ್ಯಮ್ಮ ತೃತೀಯ, ಬಕೇಟ್ ಇನ್ದ ಬಾಲ್ನಲ್ಲಿ ಶುಧಕ್ಕ ಪ್ರಥಮ, ಸುಜಾತಮ್ಮ ದ್ವಿತೀಯ, ಭಾಗ್ಯಮ್ಮ ತೃತೀಯ ಬಹುಮಾನ ಪಡೆದುಕೊಂಡರು. ಚಮಚಗೋಲಿ ಆಟದಲ್ಲಿ ರೇಖಾ ಪ್ರಥಮ, ಅರ್ಪಿತಾ ದ್ವಿತೀಯ, ಲಕ್ಷಿö್ಮÃ ತೃತೀಯ, ಜೋಡಿ ಆಟದಲ್ಲಿ ಸುಶ್ರಾವ್ಯ ಪ್ರಥಮ, ಲಾವಣ್ಯ ದ್ವಿತೀಯ, ಕವಿತಾ ತೃತೀಯ, ಬಾಲ್ ಪಾಸಿಂಗ್ನಲ್ಲಿ ಅಪೂರ್ವ ಪ್ರಥಮ, ಸುಶ್ರಾವ್ಯ ದ್ವಿತೀಯ, ಯಶೋಧಮ್ಮ ತೃತೀಯ ಬಹುಮಾನ ಪಡೆದು ಕೊಂಡರು. ವಿಜೇತರಿಗೆ ಆಧ್ಯಾತ್ಮ ಶಿಕ್ಷಕಿ ಗೀತಕ್ಕ, ಸಿಆರ್ಪಿ ಕವಿತಾ, ಪ್ರಭುಕುಮಾರ್, ಸುಜಾತ, ಪೂರ್ಣಿಮ, ಸನತ್ ಕುಮಾರ್, ಎಸ್.ಎನ್.ಲಾವಣ್ಯ ಮತ್ತಿತರರು ಬಹುಮಾನ ವಿತರಿಸಿದರು. ಹುಳಿಯಾರಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ಆಟೋಟ ಸ್ಪರ್ಧೆನಡೆಸಿ ಬಹುಮಾನ ವಿತರಿಸಲಾಯಿತು.
ಹುಳಿಯಾರು: ರಾಜಕಾರಣಿಗಳೆಲ್ಲರೂ ನಾವು ರೈತರ ಮಕ್ಕಳು, ನಮ್ಮನ್ನು ಗೆಲ್ಲಿಸಿದರೆ ರೈತ ಪರ ಆಡಳಿತ ನಡೆಸುವುದಾಗಿ ಹೇಳುತ್ತಾರೆ. ಗೆದ್ದ ನಂತರ ಕಾರ್ಪರೇಟ್ ಕಂಪನಿಗಳ ಪರ ನಿಂತು ರೈತರನ್ನು ಕಡೆಗಣಿಸುತ್ತಾರೆ. ಹಾಗಾಗಿ ರೈತರು ಪಕ್ಷ, ಜಾತಿ ಬಿಟ್ಟು ರೈತ ಸಂಘದ ಮೂಲಕ ಸಂಘಟಿತರಾದಾಗ ಮಾತ್ರ ರೈತ ಪರವಾದ ಸರ್ಕಾರ ಮಾಡಲು ಸಾಧ್ಯ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಕರೆ ನೀಡಿದರು. ಹುಳಿಯಾರಿನ ವಾಲ್ಮೀಕಿ ಸರ್ಕಲ್ನಲ್ಲಿ ಹೊಸ ಹಳ್ಳಿ ಚಂದ್ರಣ್ಣ ಬಣದ ರೈತ ಸಂಘಕ್ಕೆ ವಿವಿಧ ಹಳ್ಳಿಗಳ ರೈತರ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶದಲ್ಲಿ ಸರ್ಕಾರಿ ನೌಕರರು, ಜಾತಿಪರ ಸಂಘಟನೆಗಳು, ವೃತಿ ಪರ ಸಂಘಟನೆಗಳು ಸಂಘಟನೆಯ ಮಹತ್ವ ಅರಿತು ಸಂಘಟಿತರಾಗಿ ತಮ್ಮ ಪಾಲಿನ ಹಕ್ಕಿಗಾಗಿ ಹೋರಾಟ ರೂಪಿಸಿ ಸರ್ಕಾರಗಳ ಕಿವಿ ಹಿಂಡಿ ಕೆಲಸ ಮಾಡಿಸಿಕೊಳ್ಳುತ್ತಿವೆ. ಆದರೆ ಇಡೀ ದೇಶಕ್ಕೆ ಅನ್ನ ಕೊಡುವ, ಶೇ.೭೦ ತಕ್ಕೂ ಹೆಚ್ಚು ಉದ್ಯೋಗ ಸೃಷ್ಠಿಸುವ ರೈತರು ಮಾತ್ರ ಅಸಂಘಟಿತರಾಗಿ ದ್ದಾರೆ. ದೇಶದ ಪ್ರತಿಯೊಬ್ಬ ವ್ಯಕ್ತಿಯೂ ರೈತನನ್ನು ಅವಲಂಬಿಸಿಸಿದ್ದರೂ…
ಚಿಕ್ಕನಾಯಕನಹಳ್ಳಿ: ಬೇಸಿಗೆ ಸಂದರ್ಭದಲ್ಲಿ ಕಾಡುವ ಕುಡಿಯುವ ನೀರಿನ ಸಮಸ್ಯೆ ಹಾಗೂ ಅನೈರ್ಮದಿಂದ ಆರೋಗ್ಯದ ಮೇಲಾಗುವ ಪರಿಣಾಮಗಳನ್ನು ನಿಯಂತ್ರಿಸಲು ಸಂಬAಧಿಸಿದ ಇಲಾಖೆಗಳು ಸೂಕ್ತಕ್ರಮಕೈಗೊಳ್ಳಬೇಕೆಂದು ಜಿಲ್ಲಾ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಲಕ್ಷಿö್ಮನಾರಾಯಣ್ ತಿಳಿಸಿದರು. ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗ ಣದಲ್ಲಿ ನಡೆದ ಸಾರ್ವಜನಿಕ ಕುಂದುಕೊರತೆ ಸಭೆ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ ಇಂದಿನ ಸಭೆಯಲ್ಲಿ ೨೨ಕ್ಕೂ ಮಿಗಿಲಾಗಿ ಸಾರ್ವಜನಿಕರಿಂದ ಅಹವಾಲು ಬಂದಿದ್ದು, ಕಂದಾಯ ಇಲಾ ಖೆಗೆ ಸಂಬAದಿಸಿದAತೆ ಹೆಚ್ಚು ಅರ್ಜಿಗಳು ಬಂದಿವೆ.ಸಮರ್ಪಕವಾದ ಅರ್ಜಿಗಳನ್ನು ನಿಗದಿತ ಸಮಯಕ್ಕೆ ವಿಲೇವಾರಿ ಮಾಡಲಾಗುವುದು ಹಾಗೂ ನ್ಯಾಯಾಲಯದಲ್ಲಿ ಹಾಗೂ ಸಕಾರಣವಿ ಲ್ಲದ ಅರ್ಜಿಗಳನ್ನು ಕಾರಣ ನೀಡಿ ವಿಲೇವಾರಿ ಮಾಡಲಾಗುವುದೆಂದರು. ಸಭೆಯಲ್ಲಿ ಸಾರ್ವಜನಿಕವಾಗಿ ಬಂದ ದೂರಿನಂತೆ ಪಟ್ಟಣದಲ್ಲಿ ನಾಯಿಗಳ ಕಾಟ ಹಾಗೂ ರಸ್ತೆಬದಿಯಲ್ಲಿ ತಿಂಡಿ, ತಿನಿಸು ತಯಾರಿಸಿ ಮಾರಾ ಟ ಮಾಡುವ ಪರವಾನಗಿಯಿಲ್ಲದ ಅಂಗಡಿಗಳು ವಿಪರೀತವಾಗಿ ಹೆಚ್ಚಿದ್ದು, ಸದರಿ ಆಹಾರ ಪದಾರ್ಥಗಳು ತಿನ್ನಲು ಯೋಗ್ಯವೇ ಎಂಬ ಪರಿಶೀಲನೆಯಾಗಿಲ್ಲವೆಂಬ ದೂರಿಗೆ ಸಭೆಯಲ್ಲಿದ್ದ ಪುರಸಭಾ…
ತುರುವೇಕೆರೆ: ಇತಿಹಾಸ ಪ್ರಸಿದ್ದ ಪಟ್ಟಣದ ಶ್ರೀ ಬೇಟೆರಾಯ ಸ್ವಾಮಿಯ ರ ಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಬುಧುವಾರ ಮದ್ಯಾಹ್ನ ಬಹಳ ವಿಜೃಂಬಣೆಯಿAದ ನೆರವೇರಿತು. ಬುಧುವಾರ ಬ್ರಹ್ಮ ರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ಬೇಟೆರಾಯಸ್ವಾಮಿ ಮೂಲ ದೇವರಿಗೆ ಪಂಚಾಮೃತ, ಕ್ಷೀರಾಭಿಷೇಕ ಸೇರಿದಂತೆ ದೇವಾಲಯದಲ್ಲಿ ಅನೇಕ ಪೂಜಾ ಕೈಂಕರ್ಯಗಳು ನೆರವೇರಿದವು. ಭಕ್ತಾದಿಗಳು ದೇವಾಲಯಕ್ಕೆ ತೆರಳಿ ವಿಶೇ಼ಷ ಪೂಜೆ ಸಲ್ಲಿಸಿದರು. ಮಧ್ಯಾಹ್ನ ಬೇಟರಾಯಸ್ವಾಮಿಯನ್ನು ರಥದಲ್ಲಿ ಕುಳ್ಳರಿಸಿ ಎಡೆ ನೇವೇದ್ಯ ನಂತರ ರಥಕ್ಕೆ ಪೂಜೆ ಸಲ್ಲಿಸಿದರು. ಅಕಾಶದಲ್ಲಿ ಗರುಡ ದರ್ಶನ ನೀಡುತ್ತಿದ್ದಂತೆ ನೆರದಿದ್ದ ಆಪಾರ ಭಕ್ತರು ಗೋವಿಂದಾ ಗೋವಿಂದ ಸುಬ್ಬಾ ಸುಬ್ಬಾ ಗೋವಿಂದ ಬೇಟರಾಯಸ್ವಾಮಿ ಗೋವಿಂದ ನಾಮ ಸ್ಮರಣೆ ಮುಗಿಲು ಮಟ್ಟಿತ್ತು. ತಹಸೀಲ್ದಾರ್ ಕುಂ.ಇ.ಅಹಮದ್ ರಥಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡುತ್ತಲೆ ಭಕ್ತರು ಜೈಘೋಷ ಕೂಗುತ್ತಾ ರಥವನ್ನು ಬಹಳ ಉತ್ಸಾಹದಿಂದ ಎಳೆದರು. ಭಕ್ತಾಧಿಗಳು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಭಕ್ತಿ ಭಾವದಿಂದ ರಥಕ್ಕೆ ಬಾಳೆಹಣ್ಣು, ದವನವನ್ನು ಎಸೆದರೆ. ಬಂದAತ ಭಕ್ತಾಧಿಗಳಿಗೆ ಪಾನಕ, ಪಲಹಾರ, ಮಜ್ಜಿಗೆ, ಹಾಗೂ ಬೂಂದಿ-ಪಾಯಸ, ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.…
ತುಮಕೂರು: ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಭಾರತ ಸಂವಿಧಾನ ಅಂಗೀಕಾರದ ೭೫ ವರ್ಷದ ಸಂದರ್ಭದಲ್ಲಿ ಕಲ್ಪತರು ಸಾಂಸ್ಕೃತಿಕ ವೇದಿಕೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಏಪ್ರಿಲ್ ೧೪ರಂದು ಅಂಬೇಡ್ಕರ್ ಜನ್ಮದಿನದಂದು ನಗರ ದಲ್ಲಿ ಸÀಂವಿಧಾನ ಶಿಲ್ಪಿಯನ್ನು ಸಂಭ್ರಮಿಸುವ ಭೀಮೋತ್ಸವ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮ ಸಂಬAಧ ಕಲ್ಪತರು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಸೋಮಶೇಖರ್ ಅಧ್ಯಕ್ಷತೆಯಲ್ಲಿ ವಿವಿಧ ದಲಿತಪರ, ಕನ್ನಡಪರ ಹಾಗೂ ಹಲವು ಸಾಮಾಜಿಕ ಸಂಘಟನೆಗಳ ಮುಖಂಡರು ಗುರು ವಾರ ನಗರದಲ್ಲಿ ಸಭೆ ಸೇರಿ ಚರ್ಚೆ ನಡೆಸಿದರು. ವೇದಿಕೆ ಅಧ್ಯಕ್ಷ ಸೋಮಶೇಖರ್ ಮಾತನಾಡಿದ, ಭಾರತಕ್ಕೆ ಶ್ರೇಷ್ಠ ಸಂವಿಧಾನ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರು ಭಾರತೀಯರ ಘನತೆಯ ಜೀವನಕ್ಕೆ ಕಾರಣರಾಗಿದ್ದಾರೆ. ಅವರನ್ನು ದೇಶದ ಪ್ರತಿಯೊಬ್ಬ ಪ್ರಜೆ ಯೂ ಗೌರವದಿಂದ ಸ್ಮರಿಸುತ್ತಾರೆ. ಸಂವಿಧಾನ ಅಂಗೀಕಾರಗೊAಡ ೭೫ ವರ್ಷ ತುಂಬಿದ ಈ ಸಂದರ್ಭದಲ್ಲಿ ಡಾ.ಅಂಬೇಡ್ಕರ್ ಅವರ ಜನ್ಮದಿನವಾದ ಏಪ್ರಿಲ್ ೧೪ರಂದು ಅವರ ಕೊಡುಗೆ ಸ್ಮರಿಸಿ ಸಂಭ್ರಮಿಸುವ ಕಾರ್ಯಕ್ರ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ನಗರದ ಬಿಜಿಎಸ್ ವೃತ್ತದಿಂದ ಅಂಬೇಡ್ಕರ್ ಅವರ ಭಾವಚಿತ್ರದ ಅದ್ದೂರಿ ಮೆರವಣಿಗೆ ಏರ್ಪಡಿಸಲಾಗಿದೆ.…
ತುಮಕೂರು: ನಡೆದಾಡುವ ದೇವರಾದ ಪರಮಪೂಜ್ಯಡಾ. ಶ್ರೀ ಶ್ರೀ ಶಿವಕುಮಾರ ಮಹಾ ಸ್ವಾಮೀಜಿಯವರ ದಿವ್ಯ ಕೃಪಾದೃಷ್ಟಿಗೆ ಪಾತ್ರರಾಗಿದ್ದ ಮಾದೇನಹಳ್ಳಿ ಮಲ್ಲಿಕಾರ್ಜುನಯ್ಯನವರು ಒಬ್ಬ ಆದರ್ಶ ಶರಣರಂತೆ ಬದುಕಿ ಮುಂದಿನ ಯುವಜನಾಂಗಕ್ಕೆ ಮಾದರಿಯಾಗಿದ್ದರು ಎಂದು ಸಿದ್ಧಗಂಗಾ ಮಠದ ಪೂಜ್ಯ ಅಧ್ಯಕ್ಷರಾದ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು. ತುಮಕೂರು ಜಿಲ್ಲಾ ಹಾಗು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆದ ಲಿಂ. ಮಾದೇನಹಳ್ಳಿ ಮಲ್ಲಿಕಾರ್ಜುನಯ್ಯನವರ ಸಾಮಾಜಿಕ ಸೇವಾನಿಷ್ಠೆ ವಿಚಾರ ಸಂಕಿರಣವನ್ನು ಶ್ರೀಕ್ಷೇತ್ರದ ಕನ್ನಡ ಪಂಡಿತ್ ಕಾಲೇಜಿನ ಸ್ವಾಮೀ ಜಿ ಸಭಾಂಗಣದಲ್ಲಿ ಆಶೀರ್ವಚನ ನೀಡುತ್ತಾ ಶರಣರು ಬದುಕಿದ ರೀತಿ ಎಂದೆAದಿಗೂ ಆ ದರ್ಶ ಎಂದರು. ನಂತರ ವಿಚಾರ ಸಂಕಿರಣ ಉದ್ಘಾಟಿಸಿದ ಟಿ.ಕೆ.ನಂಜುAಡಪ್ಪನವರು ಶರಣ ಶ್ರೇಷ್ಠ ಮಲ್ಲಿಕಾ ರ್ಜುನಯ್ಯನವರ ಪತ್ರಗಳಲ್ಲಿನ ಜೀವನ ಮೌಲ್ಯ ಕುರಿತು ಮಾಡನಾಡಿದರು. ವಿದ್ವಾನ್ ಕೋ.ರಂ.ಬಸವರಾಜುರವರು ಸಾಮಾಜಿಕ ಚಿಂತನೆ ಕುರಿತು ಮಾತನಾಡಿದರು. ಅಧ್ಯಕ್ಷ ಸ್ಥಾನದಿಂದ ವಿದ್ವಾನ್ ಎಂ.ಜಿ.ಸಿದ್ಧರಾಮಯ್ಯನವರು ಮಾತನಾ ಡುತ್ತಾ ಶರಣ ಸಾಹಿತ್ಯ ಪರಿಷತ್ತಿನ ಸೇವಾ ಚಟುವಟಿಕೆಗಳಲ್ಲಿ ದತ್ತಿ ನೀಡಿರುವುದರಿಂದ ಶರಣ ತತ್ವಗಳನ್ನು ಬಿತ್ತನೆ ಮಾಡುವ…
ತುಮಕೂರು: ಮತದಾರರ ಪಟ್ಟಿ ತಯಾರಿಕೆ ಸಂದರ್ಭದಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಉಪ ವಿಭಾ ಗಾಧಿಕಾರಿ ಗೌರವ ಕುಮಾರ್ ಶೆಟ್ಟಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ತುಮಕೂರು ಉಪವಿಭಾಗ ಮಟ್ಟದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರ ಪಟ್ಟಿ ತಯಾರಿಕೆ ಸಂಬAಧ ಮತದಾರರ ನೋಂದಣಾಧಿಕಾರಿಗಳ ಕರಡು ಕೈಪಿಡಿ ಕುರಿತು ನೋಂದಾಯಿತ ಹಾಗೂ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಂದ ಅಭಿಪ್ರಾಯಗಳನ್ನು ಪಡೆ ಯುವ ಸಂಬAಧ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ತುಮಕೂರು ಉಪವಿಭಾಗ ವ್ಯಾಪ್ತಿಗೊಳಪಡುವ ಪ್ರತಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮತದಾರರ ಪಟ್ಟಿಯಿಂದ ಅನರ್ಹರ ಹೆಸರನ್ನು ಕೈಬಿಡಬೇಕು. ಮತದಾರರು ಎರಡು ಕಡೆ ಹೆಸರನ್ನು ನೋಂದಾಯಿಸಿಕೊAಡಿದ್ದರೆ ಒಂದು ಕಡೆ ಅವರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಬೇಕು. ಮತದಾರರು ಮೃತರಾಗಿದ್ದರೆ, ವರ್ಗಾವಣೆಯಾಗಿದ್ದರೆ ಅಂತಹವರ ಹೆಸರನ್ನು ಕೈಬಿಟ್ಟು ನಿಖರವಾದ ಮತದಾರರ ಪಟ್ಟಿಯನ್ನು ಸಿದ್ಧಪಡಿಸಬೇಕೆಂದು ನಿರ್ದೇಶನ ನೀಡಿದರು. ಸಭೆಯಲ್ಲಿ ನೋಂದಾಯಿತ ಹಾಗೂ ಮಾನ್ಯತೆ ಪಡೆದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು…
ಚಿಕ್ಕನಾಯಕನಹಳ್ಳಿ: ಪುರಸಭಾ ಸದಸ್ಯ ರೇಣುಕ ಪ್ರಸಾದ್ರಿಂದ ನನಗೆ ಮಾನಸಿಕವಾಗಿ ಹಿಂಸೆಯಾಗುತ್ತಿದೆ ಎಂದು ಮುಖ್ಯಾಧಿಕಾರಿ ಮಂಜಮ್ಮ ತಮ್ಮ ಅಳಲನ್ನು ವ್ಯಕ್ತಪಡಿಸಿದರು. ಸಂವಿಧಾನ ಉಳಿಸಿ ಹಾಗೂ ಮಾಹಿತಿ ಹಕ್ಕಿನ ನಿಯಮ ಇಲ್ಲಿನ ಪುರಸಭೆಗೆ ಅನ್ವಯವಾ ಗುವುದಿಲ್ಲವೆ ಎಂಬ ಪ್ರಶ್ನೆಯೊಂದಿಗೆ ಪುರಸಭೆಯ ಮುಂದೆ ಪ್ರತಿಭಟನೆ ನಡೆಸಿರುವ ಸದಸ್ಯ ರೇಣುಕ ಪ್ರಸಾದ್ರಿಗೆ ಏಕೆ ಅವರು ಕೇಳಿದ ಮಾಹಿತಿ ನೀಡುತ್ತಿಲ್ಲ ಎಂಬ ವರದಿಗಾರರ ಪ್ರಶ್ನೆಗೆ ಮುಖ್ಯಾ ಧಿಕಾರಿ ಮಂಜಮ್ಮನವರು ಸಮರ್ಪಕವಾದ ಉತ್ತರ ನೀಡಲು ತಡಬಡಾಯಿಸಿದರು. ನಾನೀಗ ಮಾಹಿತಿ ನೀಡಿದ್ದೇನೆ ಎಂದರು. ಆದರೆ ಸದರಿ ಮಾಹಿತಿಯು ಅವಧಿ ಮೀರಿದ ನಂತರ ನೀಡಿದ ಮಾಹಿತಿಯಾಗಿದೆ ಹಾಗೂ ಅವರು ಕೇಳಿದ ಮಾಹಿತಿ ಅಗಾಧವಾಗಿದೆ ಎಂದು ಉತ್ತರಿಸಿದ್ದೀರಿ ಹಾಗೂ ಸಿಬ್ಬಂದಿಯ ಕೊರತೆ ಹಾಗೂ ಕಛೇರಿಯಲ್ಲಿಯೇ ವೀಕ್ಷೀಸಿ ಎಂಬ ಉತ್ತರ ಎಷ್ಟು ಸಮರ್ಪಕ ಎಂಬ ಪ್ರಶ್ನೆಗಳ ಸುರಿಮಳೆಗೆ ವಿಚಲಿತರಾದ ಮುಖ್ಯಾಧಿಕಾರಿ ರೇಣುಕಪ್ರಸಾದ್ರ ಮೇಲೆಯೇ ಆರೋಪಗಳ ಮಳೆಸುರಿಸಿದರು. ಅವರು ನನ್ನನ್ನು ಅವಾಚ್ಗಶಬ್ದ ಗಳಿಂದ ನಿಂದಿಸುತ್ತಾರೆ, ಇದರಿಂದ ನನಗೆ ಕೆಲಸವೇ ಮಾಡಲು ಆಗುತ್ತಿಲ್ಲ ಹಾಗೂ ಮಾನಸಿಕವಾಗಿ ನೊಂದಿದ್ದೇನೆ ಎಂದರು.…











