Author: News Desk Benkiyabale

ತುಮಕೂರು: ನಗರದ ಸಾಹೇ ವಿಶ್ವವಿದ್ಯಾಲಯದ ಶ್ರೀ ಸಿದ್ಧಾ ರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿನ ಮೆಕ್ಯಾನಿಕಲ್, ಕಂಪ್ಯೂಟರ್, ಮಾಹಿತಿ ವಿಜ್ಞಾನ, ಎಲೆಕ್ಟಾçನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿAಗ್‌ನ ನಾಲ್ಕು ವಿಭಾಗಗಳಿಗೆ ಇತ್ತೀಚೆಗೆ ಎನ್‌ಬಿಎ (ರಾಷ್ಟಿçÃಯ ಮಾನ್ಯತಾ ಮಂಡಳಿ) ಭೇಟಿ ನೀಡಿ ೨೦೨೭-೨೦೨೮ನೇ ಸಾಲಿನವರೆಗೆ ಎನ್‌ಬಿಎ ಮಾನ್ಯತೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಸಾಹೇ ವಿವಿ ಕುಲಾಧಿಪತಿ ಡಾ.ಜಿ.ಪರಮೇಶ್ವರ ಅವರು ನಾಲ್ಕು ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಭೋದಕ ಮತ್ತು ಭೋದಕೇತರರಿಗೆ ಅಭಿನಂದನೆ ಸಲ್ಲಿಸಿದರು. ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು, ಎನ್‌ಬಿಎ ಇಂಜಿನಿಯರಿAಗ್ ಕಾಲೇಜಿನ ನಾಲ್ಕು ವಿಭಾಗಗಳಿಗೆ ಮಾನ್ಯತೆ ನೀಡಿದೆ, ಪ್ರಾಧ್ಯಾಪಕರು ಮತ್ತು ಉಪನ್ಯಾಸಕರು ಹೆಚ್ಚು ಸಂಶೋ ಧನೆಗೆ ಒತ್ತು ನೀಡಬೇಕು, ಮುಂದಿನ ಮೂರು ವರ್ಷಗಳಿಗೆ ಬೇಕಿರುವ ಮಾನ್ಯತೆಗೆ ಎಲ್ಲಾ ಅರ್ಹ ಮಾಹಿತಿಯನ್ನು ಈಗಿನಿಂ ದಲೇ ದಾಖಲೆ ಮಾಡಬೇಕು, ಹಾಗೂ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ನೀಡಬೇಕೆಂದು ಸಲಹೆ ನೀಡಿದರು. ರಾಷ್ಟಿçÃಯ ಮತ್ತು ಅಂತಾರಾಷ್ಟಿçÃಯ ಮಟ್ಟದಲ್ಲಿ ಸಂಶೋಧನಾ ಲೇಖನಗಳು, ಕಾರ್ಯಾಗಾರಗಳು, ಸಮ್ಮೇಳನಗಳಿಗೆ ಉಪನ್ಯಾ ಸಕರು ಭಾಗವಹಿಸಬೇಕು. ಇತ್ತೀಚಿನ ತಾಂತ್ರಿಕ ಕೌಶಲ್ಯ ಪ್ರವೃತ್ತಿ…

Read More

ಹುಳಿಯಾರು: ಹುಳಿಯಾರು ಕೆರೆಯ ಬಫರ್ ಝೋನ್ ಗುರುತಿಸುವ ಕಾರ್ಯ ನಡೆದಿದ್ದು ಕೆರೆ ಗಡಿಯಿಂದ ಒಟ್ಟು ೩೦ ಮೀಟರ್ ಬಫರ್ ಝೋನ್ ಎಂದು ಗುರುತಿಸಲಾಗಿದೆ. ಇದರಿಂದ ಕೆರೆ ದಡದಲ್ಲಿರುವ ನಿವಾಸಿಗಳಿಗೆ ಆತಂಕ ಶುರುವಾಗಿದ್ದು ಅಲೆಮಾರಿಗಳ ಕೋಟದಲ್ಲಿ ನಿವೇಶನ ಪಡೆದಿರುವವರು ಮನೆ ಕಟ್ಟಿಕೊಳ್ಳುವ ತವಕ ಹಾಗೂ ನಿವೇಶನವೇ ಸಿಗದವರು ನಿವೇಶನಕ್ಕಾಗಿ ಹೋರಾಡುವ ಅನಿವಾರ್ಯತೆ ಶುರುವಾಗಿದೆ. ಹುಳಿಯಾರು ಕೆರೆ ಅಂಗಳದಲ್ಲಿ ಮುಳುಗಡೆ ಪ್ರದೇಶದಲ್ಲಿನ ನಿವಾಸಿಗಳನ್ನು ತೆರವುಗೊಳಿಸಿ ಪುನರ್ವಸತಿ ಕಲ್ಪಿಸುವ ಕಾರ್ಯ ಕಳೆದ ಹಲವಾರು ವರ್ಷಗಳಿಂದಲೂ ನಡೆಯುತ್ತಲೇ ಬಂದಿದ್ದು ಈ ಮುಂಚೆ ಅಲೆಮಾರಿ ಜನಾಂಗದವರಿಗೆ ಗೌಡಗೆರೆ ಸರ್ವೇ ನಂಬರ್‌ನಲ್ಲಿ ೨.೨೮ ಎಕರೆ ಪ್ರದೇಶದಲ್ಲಿ ೩೬ ಮಂದಿಗೆ ನಿವೇಶನ ಕಲ್ಪಿಸಲಾಗಿದ್ದು ಇದೀಗ ಕಂಪನಹಳ್ಳಿ ಸರ್ವೇ ನಂಬರ್‌ನಲ್ಲಿ ೨ ಎಕರೆ ಜಾಗದಲ್ಲಿ ೧೬ ಮಂದಿಗೆ ನಿವೇಶನ ನೀಡುವ ಕಾರ್ಯಕ್ಕೆ ತಾಲೂಕು ಆಡಳಿತ ಮುಂದಾಗಿದೆ. ಆದರೂ ಕೆರೆ ಅಂಗಳದ ಎಲ್ಲಾ ನಿವಾಸಿಗಳ ತೆರುವುಗೊಳಿಸಿ ಪುನರ್ವಸತಿ ಕಲ್ಪಿಸುವ ಕಾರ್ಯ ಪೂರ್ಣಗೊಂಡಿಲ್ಲ. ಮಳೆಗಾಲ ಆರಂಭವಾದಾಗಲೆಲ್ಲ ಅಲ್ಲಿನ ನಿವಾಸಿಗಳಿಗೆ ಮನೆ ಜಲಾವೃತಗೊಳ್ಳುವ ಭಯದಿಂದ ಮುಕ್ತ ಮಾಡಲು…

Read More

ತುರುವೇಕೆರೆ: ವೀರಶೈವ ಲಿಂಗಾಯತ ಸಮಾಜ ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ದಮನ ಮಾಡುತ್ತಿದ್ದಾರೆ ವೀರಶೈವ ಲಿಂಗಾಯಿತರು ನಿಮ್ಮ ಅಸ್ತಿತ್ವಕ್ಕಾಗಿ ಹೋರಾಟ ಮಾಡಬೇಕು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು. ಪಟ್ಟಣದ ಗುರುಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕ, ಮಹಿಳಾ ಯುವ ಘಟಕ ಹಾಗೂ ವೀರಶೈವ ಲಿಂಗಾಯಿತ ಸಂಘ ಸಂಸ್ಥೆ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಸವಜಯಂತಿ ಹಾಗೂ ಸಾಮೂಹಿಕ ಇಷ್ಟಲಿಂಗ ಪೂಜೆ (ವೀರಯೋದರಿಗೆ ಬಲ ನೀಡಲು) ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ೨೦೧೧ರ ಜನಗಣತಿ ಯ ಪ್ರಕಾರ ಸುಮಾರು ೯೩ ಲಕ್ಷ ಜನಸಂಖ್ಯೆ ಹೊಂದಿ ರಾಜ್ಯದ ದೊಡ್ಡ ಸಮಾಜ ವಾಗಿದ್ದ ವೀರಶೈವ ಲಿಂಗಾಯಿತರು ಸಿದ್ದರಾಮಯ್ಯರ ಜಾತಿಗಣತಿಯಲ್ಲಿ ೭೫ ಲಕ್ಷಕ್ಕೆ ಇಳಿಸಿದ್ದಾರೆ. ದೊಡ್ಡ ಸಮಾಜಗಳಲ್ಲಿ ಸಣ್ಣ ಉಪ ಪಂಗಡಗಳನ್ನು ಎತ್ತಿ ಕಟ್ಟಿ ಹೊಡೆದು ಹಾಕುವ ಹುನ್ನಾರ ಮಾಡುತ್ತಿದ್ದಾರೆ. ಜಾತಿ ಆದಾರದಲ್ಲಿ ಬಜೆಟ್ ಮಂಡಿಸಲು ಸಿದ್ದತೆ ದೊಡ್ಡ ಜಾತಿಗಳಿಗೆ ಬಹಳ ಪೆಟ್ಟು ಬೀಳುತ್ತದೆ ಎಂದು ಎಚ್ಚರಿಸಿದರು. ಬಸವಣ್ಣನವರು ಇನ್ನು ೧೦…

Read More

ಕೊರಟಗೆರೆ: ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ರಾಜ್ಯಾಧ್ಯಕ್ಷ ಕೆ.ಪ್ರಭಾಕರ್ ಕರೆಗೆ ಇಲ್ಲಿನ ಪ.ಪಂ ಪೌರ ನೌಕರರು ಕರ್ತವ್ಯಕ್ಕೆ ಗೈರಾಗಿ ದಿನನಿತ್ಯ ಕೆಲಸ ವನ್ನು ಮೂರನೇ ದಿನದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಪ.ಪಂ ಸದಸ್ಯರು, ಅಧಿಕಾರಿಗಳು ಮತ್ತು ತಾಲ್ಲೂಕು ಕಾರ್ಯ ನಿರತ ಪರ್ತಕರ್ತರ ಸಂಘ ಬೆಂಬಲ ಸೂಚಿಸಿ ಬೇಡಿಕೆ ಈಡೇರಿಕೆಗೆ ಸರ್ಕಾ ರವನ್ನು ಒತ್ತಾಯ ಮಾಡಿದರು. ಪ.ಪಂ ಅಧ್ಯಕ್ಷೆ ಅನಿತಾ ಮುಷ್ಕರಕ್ಕೆ ಬೆಂಬಲ ಸೂಚಿಸಿ ಮಾತನಾಡಿ, ಪೌರ ಕಾರ್ಮಿಕರು ಮತ್ತು ನೀರು ಸರಬರಾಜು ನೌಕರರ ಕಠಿಣ ಪರಶ್ರಮವನ್ನು ಸರ್ಕಾರ ಗಮನಹರಿಸಬೇಕು. ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಇವರುಗಳ ಪಾತ್ರ ಅತಿಮುಖ್ಯವಾಗಿದೆ. ಆದ್ದರಿಂದ ಸರ್ಕಾರ ಮಲತಾಯಿ ದೋರಣೆ ಮಾಡದೆ ಸರ್ಕಾರಿ ನೌಕರರ ಸೌಲಭ್ಯಗಳನ್ನು ಪೌರ ನೌಕರರಿಗೂ ಸಹ ನೀಡಿ ಸೇವಾ ಭದ್ರತೆ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿದರು. ಪ.ಪಂ ಮುಖ್ಯಾಧಿಕಾರಿ ಉಮೇಶ್ ಕೆ.ಎಸ್ ಮಾತನಾಡಿ, ಪೌರ ನೌಕರರ ಬೇಡಿಕೆಗಳು ರಾಜ್ಯ ಸರ್ಕಾರ ಮುಂದಿಟ್ಟಿರುವ ಬೇಡಿಕೆಗಳು ನ್ಯಾಯ ಸಮ್ಮತವಾಗಿದೆ. ಸರ್ಕಾರಿ ನೌಕರರಂತೆ ಮುನ್ಸಿಪಾಲ್ ಪೌರ ನೌಕರರನ್ನು…

Read More

ಕೊರಟಗೆರೆ: ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿಗೆ ಗೃಹ ಮತ್ತು ಸಹಕಾರ ಸಚಿವರ ವಿರೋಧ ಕೂಡ ಇದೆ. ಆದರೆ ರಾಜ್ಯ ಸರ್ಕಾರದ ವಿರುದ್ಧ ಧ್ವನಿ ಎತ್ತದೆ ಮೌನ ವಹಿಸಿದ್ದಾರೆ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ತುಮಕೂರು ಜಿಲ್ಲೆಯ ೭ ತಾಲ್ಲೂಕಿನ ಜನತೆಯ ಕುಡಿಯುವ ನೀರಿಗೆ ಮರಣ ಶಾಸನವಾಗಲಿದೆ ಎಂದು ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಆಕ್ರೋಶ ಹೊರಹಾಕಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾ ಟಕ ರಾಜ್ಯ ರೈತ ಸಂಘದಿAದ ಮತ್ತು ಹೇಮಾವತಿ ಲಿಂಕ್ ಕೆನಾಲ್ ವಿರೋಧಿ ಹೋರಾಟ ಸಮಿತಿಯಿಂದ ಆಯೋಜಿಸಲಾದ ಸುದ್ದಿಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿ, ಗುಬ್ಬಿ ತಾಲ್ಲೂಕಿನ ಸುಂಕಪುರದ ಸಮೀಪ ಅರ್ಚ ಕರ ಜಮೀನಿನ ಮೂಲಕ ಮಾಗಡಿ ತಾಲ್ಲೂಕಿಗೆ ಹೇಮಾವತಿ ನೀರು ಹರಿಸಲು ರೈತರ ವಿರೋಧದ ನಡುವೆ ಕಾಮಗಾರಿಯನ್ನು ರಾಜ್ಯ ಸರ್ಕಾರ ಶಿಪಾರಸ್ಸಿನಂತೆ ಜಿಲ್ಲಾಡಳಿತ ಮುಂದುವರೆಸಿದೆ. ಕಾಮಗಾರಿಗೂ ಮುನ್ನ ಭೂಸ್ವಾಧೀನ ಪ್ರಕ್ರಿಯೆ ಆಗದೆ, ನೋಟಿಸ್ ನೀಡದೇ, ಜಮೀನಿನ ರೈತನಿಗೆ ಪರಿಹಾರ ನೀಡದೇ ನಿಯಮವನ್ನು ಉಲ್ಲಂಘಿಸಿ ಕಾಮಗಾರಿ ಪ್ರಾರಂಭಿಸಿದ್ದಾರೆ ಎಂದು ಆರೋಪ ಮಾಡಿದರು.…

Read More

ಪಾವಗಡ: ಯುವಜನತೆಯು ದೇಶದ ಪ್ರಬಲ ಶಕ್ತಿಯಾಗಿದೆ ಪ್ರಬಲವಾಗಿರುವಂತಹ ಮಾನವ ಸಂಪನ್ಮೂಲವನ್ನು ದೇಶದಲ್ಲಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಶ್ರೀಮದ್ ಜಪಾನಂದ ಜಿ ಮಹಾರಾಜ್ ಅವರು ತಿಳಿಸಿದರು. ತುಮಕೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಮತ್ತು ಶ್ರೀರಾಮಕೃಷ್ಣ ಸೇವಾಶ್ರಮ ಹಾಗೂ ಇಂಕ್ ಇಂಪ್ಯಾಕ್ಟ್ ಸರ್ವಿಸಸ್ ಪ್ರೈ.ಲಿ ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಪಾಠ ಶಾಲೆಯಲ್ಲಿ ಉದ್ಯೋಗ ಮೇಳ ಕಾರ್ಯಕ್ರಮವನ್ನು ಗಿಡಕ್ಕೆ ನೀರಾಕುವುದರ ಮೂಲಕ ಉದ್ಘಾಟಿಸಿ ದಿವ್ಯ ಸಾನಿಧ್ಯ ವಹಿಸಿದಂತಹ ಶ್ರೀಮದ್ ಜಪಾನಂದ ಜಿ ಮಹಾರಾಜ್ ರವರು ಮಾತನಾಡಿದರು ಗಡಿ ಭಾಗವಾದ ಪಾವಗಡಕ್ಕೆ ಹೆಸರಾಂತ ಹಲವು ಕಂಪನಿಗಳು ಬಂದಿವೆ ಇದನ್ನು ಪಾವಗಡದ ಜನತೆಯು ಸದುಪಯೋಗಪಡಿಸಿಕೊಳ್ಳಬೇಕು ಎಂದು ಆಶೀರ್ವಚನ ನೀಡಿದರು. ಪಾವಗಡದ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಶ್ರೀಮತಿ ಇಂದ್ರಾಣಮ್ಮನವರು ಮಾತನಾಡಿ ಪಾವಗಡದ ಮೂಲದ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳು ವಿದೇಶಗಳಲ್ಲೂ ತಮ್ಮನ್ನು ತಾವು ಬಿಂಬಿಸಿಕೊAಡಿದ್ದಾರೆ ಪಾವಗಡದಲ್ಲಿ ಶಿಕ್ಷಣಕ್ಕೆ ಉತ್ತಮವಾದ ರೀತಿಯ ಉತ್ತೇಜನವನ್ನು ಶ್ರೀ ಸ್ವಾಮಿ ಜಪಾನಂದ…

Read More

ತುಮಕೂರು: ದಲಿತರ ಮೇಲೆ ಹೆಚ್ಚಾಗುತ್ತಿರುವ ಕೊಲೆ,ದೌರ್ಜನ್ಯ,ಅಸ್ಪೃಶ್ಯತಾಚರಣೆ, ಕೌಂಟರ್ ಕೇಸ್, ಮರ್ಯಾದೆ ಹತ್ಯೆ ತಡೆಯಲು ರಾಜ್ಯ ಸರ್ಕಾರ ಕ್ರಮ ವಹಿಸಲು ಒತ್ತಾಯಿಸಿ ಗುರುವಾರ ರಾಜ್ಯಾದ್ಯಂತ ಪ್ರತಿಭಟನೆಯ ಭಾಗವಾಗಿ ಜಿಲ್ಲಾಧಿಕಾರಿಗಳ ಕಛೇರಿ ಎದರು ಪ್ರತಿಭಟನೆ ನಡೆಸಿ ಸ್ಥಾನಿಕ ಅಧಿಕಾರಿಗಳಾದ ಶ್ರೀ ಮೋಹನ್ ಅವರ ಮೂಲಕ ಮನವಿ ಸಲ್ಲಿಸಲಾಯಿತು. ಈ ಪ್ರತಿಭಟನೆಯನ್ನು ಉದ್ದೇಶಿಸಿ ದಲಿತ ಹಕ್ಕುಗಳ ಸಮಿತಿ ರಾಜ್ಯಾಧ್ಯಕ್ಷರಾದ ಗೋಪಾ ಲಕೃಷ್ಣ ಹರಳಹಳ್ಳಿ ಮಾತನಾಡಿ ಮಂಡ್ಯದ ಕೆ.ಆರ್ ಪೇಟೆ ದಲಿತ ಜಯಕುಮಾರ್ ಎಂಬ ದಲಿತನನ್ನು ಸಜೀವವಾಗಿ ದಹನ ಮಾಡಿ ಕೊಲೆ ಮಾಡಲಾಗಿದೆ, ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕು ಕವಣಗಾಲದಲ್ಲಿ ದಲಿತ ಯುವಕ ಸ್ವಾಮಿನಾಥ ದೇವಲಾಯ ಪ್ರವೇಶ ಮಾಡಿದ ಎಂಬ ಕಾರಣಕ್ಕಾಗಿ ಇಡೀ ಗ್ರಾಮದ ಮೇಲ್ಜಾತಿಯವರು ಬಹಿಷ್ಕಾರ ಹಾಕಿದ ಘಟನೆ, ತುಮಕೂರಿನ ಪಂಚಾಯತ್ ರಾಜ್ ಇಲಾ ಖೆಯಲ್ಲಿ ಓಂಕಾರ್ ಮೂರ್ತಿ ಎಂಬ ದಲಿತ ಸಮುದಾಯದ ಸಿಬ್ಬಂದಿಗೆ ನಿರಂತರವಾಗಿ ಜಾತಿ ತಾರತಮ್ಯ ಮಾಡಿ ದರ‍್ಜನ್ಯವೆಸಗಲಾಗಿದೆ ಆ ದರೆ ಇದೂವರೆಗೂ ದೂರು ದಾಖಲಿಸಿಲ್ಲ, ದಲಿತ ಸಮುದಾಯದ ವರದಿಗಾರನ ಮೇಲೆ ಜಾತಿ…

Read More

ಚಿಕ್ಕನಾಯಕನಹಳ್ಳಿ: ಪುರಸಭಾ ಅನುದಾನದಲ್ಲಿ ಬೆಸ್ಕಾಂ ನಡೆಸಿದ ವಿದ್ಯುತ್ ಕಂಬದ ಬದಲಾವಣೆ ಕಾಮಾಗಾರಿ, ಸರಕಾರಿ ಬಸ್‌ಗಳ ಕೊರತೆ, ಡಿಪೋ ಸಮಸ್ಯೆ ಹಾಗು ಬೆಸ್ಕಾಂ ಅಕ್ರಮ ಸಕ್ರಮ ಯೋಜನೆ ಸೇರಿದಂತೆ ಹಲವು ಸಮಸ್ಯೆಗಳು ಇಲ್ಲಿ ಬುಧವಾರ ನಡೆದ ಗ್ಯಾರಂಟಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರತಿಧ್ವನಿಸಿದವು. ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ಯಾರಂಟಿ ಸಮಿತಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ವಿವಿಧ ಸಮಸ್ಯೆಗಳಿಗೆ ಪರಿಹಾರ ಕ್ರಮ ಮತ್ತು ತಾಲ್ಲೂಕಿನ ಅಭಿವೃದ್ದಿಗೆ ಅಗತ್ಯವಿರುವ ಕಾರ್ಯಗಳ ಕುರಿತು ಚರ್ಚೆಗಳು ನಡೆದವು. ಸಭೆಯಲ್ಲಿ ಭಾಗವಹಿದ್ದ ಅಧಿಕಾರಿಗಳು ಸಮಸ್ಯೆ ಇತ್ಯರ್ಥ ಪಡಿಸುವ ಭರವಸೆ ನೀಡಿದರು. ಪಂಚ ಗ್ಯಾರಂಟಿ ಯೋಜನೆಗಳು ಬಡ ಜನರ ಆರ್ಥಿಕ ಅಭಿವೃದ್ದಿಗೆ ಸಹಕಾರಿಯಾಗಿದ್ದು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಪ್ರಮಾಣಿಕತೆಯಿಂದ ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು. ಗ್ರಾಮೀಣ ಭಾಗದಲ್ಲಿ ಸಾರ್ವಜನಿಕರು ಹಾಗು ಫಲಾನುಭವಿಗಳೊಂದಿಗೆ ಮುಕ್ತ ಸಂವಾದ ನಡೆಸುವುದು. ಯೋಜನೆಗಳ ಪ್ರಯೋಜನ ಪಡೆಯುವಲ್ಲಿ ಫಲಾನುಭವಿಗಳು ಸಮಸ್ಯೆ ಎದುರಿಸುತ್ತಿದ್ದರೆ ತಕ್ಷಣ ಸ್ಪಂದಿಸುವAತೆ ಗ್ಯಾರಂಟಿ ಸಮಿತಿ ಸದಸ್ಯರಿಗೆ ಅಧ್ಯಕ್ಷ ಚಂದ್ರಶೇಖರ್ ಸೂಚಿಸಿದರು. ಶಕ್ತಿ ಯೋಜನೆಯಲ್ಲಿ ಉತ್ತಮ…

Read More

ಹುಳಿಯಾರು: ಚೆನ್ನಾಗಿದ್ದ ಡಾಂಬಾರ್ ರಸ್ತೆ ಮೇಲೆ ಮಣ್ಣು ಹಾಕಿ ಕೆಸರು ಗದ್ದೆಯಾಗುವಂತೆ ಮಾಡಿ ಸುಗಮ ಸಂಚಾರಕ್ಕೆ ತೊಡಕು ಮಾಡಿದ್ದಾರೆ ಎಂದು ಹೋಬಳಿಯ ಕಲ್ಲಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ. ಚಿಕ್ಕಬಿದರೆ ಗ್ರಾಮದಿಂದ ನಂದಿಹಳ್ಳಿಗೆ ಡಾಂಬರು ರಸ್ತೆಯಿದ್ದು ಕಲ್ಲಹಳ್ಳಿ ಗ್ರಾಮದ ಮೂಲಕ ಹಾದು ಹೋಗಿದೆ. ಗ್ರಾಮದಲ್ಲಿ ಡಾಂಬರು ರಸ್ತೆಯ ಎರಡು ಕಡೆ ನೀರು ಹರಿದು ಹೋಗಲು ೬ ತಿಂಗಳ ಹಿಂದೆ ಚರಂಡಿ ನಿರ್ಮಿಸಿದ್ದರು. ಈಗ ಈ ಚರಂಡಿ ಪಕ್ಕಕ್ಕೆ ಸಮತಟ್ಟು ಮಾಡಲು ಮಣ್ಣು ಹಾಕಿದ್ದಾರೆ. ಜೆಸಿಬಿ ಮೂಲಕ ಮಣ್ಣು ಸಮತಟ್ಟು ಮಾಡುವಾಗ ಡಾಂಬಾರ್ ರಸ್ತೆಯ ಮೇಲೆಲ್ಲ ಮಣ್ಣು ಬಿದ್ದಿದೆ. ಇದನ್ನು ಗಮನಿಸಿದ ಸ್ಥಳೀಯರು ಡಾಂಬರ್ ರಸ್ತೆಯ ಮೇಲೆ ಬಿದ್ದಿರುವ ಮಣ್ಣನ್ನು ತೆಗೆಯುವಂತೆ ಗುತ್ತಿಗೆದಾರರನ್ನು ಕೇಳಿಕೊಂಡರು ತೆಗೆಯದೆ ನಿರ್ಲಕ್ಷಿö್ಯಸಿದ್ದಾರೆ. ಪರಿಣಾಮ ಮಳೆ ಬಿದ್ದಾಗ ಕೆಸರು ಗದ್ದೆಯಾಗಿಗೂ, ಬೇಸಿಗೆಯಲ್ಲಿ ಧೂಳಿನ ರಸ್ತೆಯಾಗಿಯೂ ಪರಿವರ್ತನೆಯಾಗಿ ಸಂಚಾರಕ್ಕೆ ಕಿರಿಕಿರಿಯಾಗುತ್ತಿದೆ ಎಂಬುದು ಸ್ಥಳೀಯರ ಆರೋಪವಾಗಿದೆ. ಚರಂಡಿಯನ್ನೂ ಸಹ ಅನಾವಶ್ಯಕವಾಗಿ ಮಾಡಿದ್ದಾರಲ್ಲದೆ ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯದೆ ಚರಂಡಿಯಲ್ಲೇ ನಿಲ್ಲುವಂತೆ ಅವೈಜ್ಞಾನಿಕವಾಗಿ ಮಾಡಿದ್ದಾರೆ. ಇದರಿಂದ…

Read More

ತುರುವೇಕೆರೆ: ಜಿಲ್ಲೆಯ ರೈತರಿಗೆ ಮರಣ ಶಾಸನದಂತಾಗಿರುವ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಅವೈಜ್ಞಾನಿಕ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸುವಂತೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎ.ಗೋವಿಂದರಾಜು ಸರ್ಕಾರವನ್ನು ಎಚ್ಚರಿಸಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಅವರು ಲಿಂಕ್ ಕೆನಾಲ್ ಕಾಮಗಾರಿಯಿಂದ ಜಿಲ್ಲೆಯ ಏಳೆಂಟು ತಾಲ್ಲೂಕಿಗೆ ದೊಡ್ಡ ಅಪಾಯವಾಗಲಿದೆ. ಕುಣಿಗಲ್ ತಾಲ್ಲೂಕಿಗೆ ನೀರು ಹರಿಸಬೇಕೆಂದರೆ ಮೂಲ ನಾಲೆಯ ಮೂಲಕ ತೆಗೆದುಕೊಂಡು ಹೋಗಲಿ ನಮ್ಮದ್ದು ಯಾವುದೇ ಅಭ್ಯಂತರವೇನಿಲ್ಲ. ಆದರೆ ನೀವು ಲಿಂಕ್ ಕೆನಾಲ್ ಮಾಡಿ ಪೈಪ್ ಗಳನ್ನು ಮೂಲಕ ನೀರನ್ನು ತೆಗೆದುಕೊಂಡು ಹೋದಲ್ಲಿ ಜಿಲ್ಲೆಯ ಏಳೆಂಟು ತಾಲ್ಲೂಕುಗಳಿಗೆ ಮರಣ ಶಾಸನವಾಗಲಿದೆ. ಕೂಡಲೇ ಈ ಕಾಮಗಾರಿಯನ್ನು ಸರ್ಕಾರ ವಾಪಸ್ ಪಡೆಯಬೇಕೆಂದು ನಾವುಗಳು ಒತ್ತಾಯ ಮಾಡುತ್ತೇವೆ ಎಂದರು. ಸುಮಾರು ಒಂದೂವರೆ ವರ್ಷದಿಂದಲೂ ನಾವುಗಳು ಹೋರಾಟವನ್ನು ಮಾಡಿಕೊಂಡು ಬಂದಿದ್ದೇವೆ. ನೀವು ೭೦ನೇ ಕಿ.ಮೀ.ನಲ್ಲಿ ೫೦೦ ಕ್ಯೂಸೆಕ್ಸ್ ನೀರನ್ನು ಕುಣಿಗಲ್ ಭಾಗಕ್ಕೆ ಹರಿಸಿದರೆ ಇನ್ನು ಏಳು ತಾಲ್ಲೂಕಿಗೆ ೬೦೦…

Read More