Author: News Desk Benkiyabale

ಚಿಕ್ಕನಾಯಕನಹಳ್ಳಿ: ದೇಶದ ರಾಜಕಾರಣಿಗಳು ವಾರ್ಷಿಕವಾಗಿ ಶೇಕಡ ೧೦ ಹತ್ತರಷ್ಟು ಕುಡುಕ ಪ್ರಜೆಗಳನ್ನು ಸೃಷ್ಟಿಸುತ್ತಿವೆ ದುಡಿಯುವ ರೈತನಿಗೆ ಸಿಗಬೇಕಾದ ಸೌಲಭ್ಯಗಳನ್ನು ಕೂಡ ರಾಜಕಾರಣಿಗಳ ಪಾಲಾಗುವ ಸ್ಥಿತಿ ತಲುಪಿದ್ದೇವೆ ರೈತರ ಪಾಲಿನ ಹಕ್ಕನ್ನು ಪಡೆಯಲು ಹೋರಾಟ ಒಂದೇ ದಾರಿ ಎಂದು ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆ ಹೊಸಳ್ಳಿ ಚಂದ್ರಣ್ಣ ಬಣದ ರಾಜ್ಯಾಧ್ಯಕ್ಷ ಹೊಸಳ್ಳಿ ಚಂದ್ರಣ್ಣ ಆತಂಕ ವ್ಯಕ್ತಪಡಿಸಿದರು. ತಾಲೂಕಿನ ಶೆಟ್ಟಿಕೆರೆ ಹೋಬಳಿ ಅಗಸರಹಳ್ಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡುತ್ತಾ ದೇಶದ ಐದು ಲಕ್ಷದ ನಲವತ್ತೇಳು ಸಾವಿರ ಹಳ್ಳಿಗಳು ಈ ಭಾರತದ ಆಧಾರ ಸ್ಥಂಭಗಳಾಗಿವೆ ಇವುಗಳ ಮೂಲಕವೇ ದೇಶದ ಪ್ರಗತಿಗೆ ರೈತರು ಮುನ್ನೆಲೆಯಾಗಿದ್ದಾರೆ ಇಂತಹ ಹಳ್ಳಿಗಳ ಭವಿಷ್ಯಗಳನ್ನು ನಮ್ಮ ನಾಡುವ ಜನಪ್ರತಿನಿಧಿಗಳು ತೀರಾ ಸಂಕಷ್ಟಕ್ಕೆ ದುಡುತ್ತ ಕೇವಲ ಶೇಕಡ ೩೦ರಷ್ಟಿರುವ ವ್ಯಾಪಾರಸ್ಥರ ಪರವಾಗಿ ಎಲ್ಲಾ ಸರ್ಕಾರಗಳು ಕೆಲಸ ಮಾಡುತ್ತಿವೆ ದೇಶದ ಪ್ರಗತಿ ಹಾಗೂ ದೇಶಕ್ಕೆ ಅನ್ನ ನೀಡುವ ಅನ್ನದಾತನ ಸಂಕಷ್ಟಕ್ಕೆ ಬಾರದಿರುವುದು…

Read More

ತುಮಕೂರು: ಹನ್ನೇರಡನೇ ಶತಮಾನದಲ್ಲಿ ಸಮ ಸಮಾಜದ ಕನಸು ಕಂಡು, ಅದನ್ನು ಸಕಾರಗೊಳಿಸಲು ಶ್ರಮಿಸಿದ ಶಿವಶರ ಣರಲ್ಲಿ ಹಡಪದ ಅಪ್ಪಣ್ಣ ಅವರು ಒಬ್ಬರು. ಬಸವಣ್ಣನವರ ಸಮಕಾಲಿನರಾಗಿ, ಕಾಯಕಯೋಗಿ, ಕರ್ಮಯೋಗಿಯಾಗಿ ಬದುಕಿದ್ದ ಅಪ್ಪಣ್ಣ ಅವರ ನಡೆ, ನುಡಿಗಳು ಇಂದಿಗೂ ಪ್ರಸ್ತುತಎಂದು ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ತಿಳಿಸಿದ್ದಾರೆ. ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ ಮತ್ತು ತುಮಕೂರು ಜಿಲ್ಲಾ ಮತ್ತು ತಾಲೂಕು ಸವಿತಾ ಸಮಾಜ (ರಿ), ವತಿಯಿಂದ ಆಯೋಜಿಸಿದ್ದ ಶ್ರೀಹಡಪದ ಅಪ್ಪಣ್ಣಅವರ ಜನ್ಮಜಯಂತಿಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ೧೨ ಶತಮಾನದಲ್ಲಿ ಇದ್ದ ಯಾವ ಕಾಯಕವೂ ಮೇಲು, ಕೀಳು ಎಂಬ ಭಾವನೆ ಹೊಂದಿರಲಿಲ್ಲ.   ಎಲ್ಲವೂ ಪರಸ್ವರ ಪೂರಕವಾಗಿ ಸಮಾಜದ ಅಭಿವೃದ್ದಿಗೆ ಅತ್ಯಂತ  ಅವಶ್ಯಕ   ಎಂದು ಭಾವಿಸಲಾಗಿತ್ತು.  ಎಲ್ಲಾ ವೃತ್ತಿಗಳಿಗೂ ಅದರದ್ದೇ ಆದ  ಘನತೆ, ಗೌರವಗಳಿದ್ದವೂ. ಆದರೆ  ಅಂತಹ ವೃತ್ತಿಗಳೇ ಜಾತಿಗಳಾಗಿರುವುದು ವಿಪರ್ಯಾಸ  ಎಂದರು. ಸ್ವದೇಶಿ ವಿಶ್ವನಾಥ್ ಮಾತನಾಡಿ, ಬಸವ   ಕಲ್ಯಾಣದಲ್ಲಿ…

Read More

ತುಮಕೂರು: ರಾಮಕೃಷ್ಣ ನಗರದ ಶ್ರೀ ಶಿರಡಿಸಾಯಿನಾಥ ದೇಗುಲ ಸೇರಿದಂತೆ ನಗರದ ವಿವಿಧಡೆ ಇರುವ ಸಾಯಿಬಾಬಾ ದೇಗುಲಗಳಲ್ಲಿ ಗುರುಪೂರ್ಣಿಮೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ರಾಮಕೃಷ್ಣ ನಗರದ ಸಾಯಿನಾಥ ಮಂದಿರದಲ್ಲಿ ಬೆಳಿಗ್ಗೆ  ೬ ಗಂಟೆಗೆ ಕಾಕಡ ಆರತಿ, ೭ ಗಂಟೆಗೆ ಪಂಚಾಮೃತ ಅಭಿಷೇಕ ಮತ್ತು ವಿಶೇಷ ಅಲಂಕಾರ, ೮ ಗಂಟೆಗೆ ರುದ್ರಾಭಿಷೇಕ, ೧೦ ಗಂಟೆಗೆ ೧೦೮ ಗುರುಗಳ ಅವಾಹನೆ ಪೂಜಾ, ಮಧ್ಯಾಹ್ನ ೧೨ಕ್ಕೆ ಮಹಾಮಂಗಳಾರತಿ ನೆರವೇರಿತು. ಭಕ್ತಾದಿಗಳಿಗಾಗಿ ಬೆಳಿಗ್ಗೆಯಿಂದ ರಾತ್ರಿ ವರೆಗೂ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ರಾಮಕೃಷ್ಣನಗರದ ಸಾಯಿನಾಥ ಮಂದಿರದಲ್ಲಿ ೧೦೮ ಗುರುಗಳ ಅವಾಹನೆ ಪೂಜೆ ನೆರವೇರಿಸಿದ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ವೇದಗಳನ್ನು ವಿಭಜನೆ ಮಾಡಿ ೪ ವೇದ ಮತ್ತು ೧೮ ಪುರಾಣಗಳನ್ನು ಜನರಿಗೆ ಪರಿಚಯಿಸಿದ ಕೀರ್ತಿ ವೇದ ವ್ಯಾಸರಾಜರಿಗೆ ಸಲ್ಲುತ್ತದೆ. ಶಂಕರಾಚಾರ್ಯ, ಸ್ವಾಮಿ ವಿವೇಕಾನಂದರು, ಶಿರಡಿ ಬಾಬಾರವರು ಮಹಾನ್ ಪರಂಪರೆಯನ್ನು ಜಗತ್ತಿಗೆ ಪರಿಚಯಿಸಿದವರು ಎಂದರು. ಗುರುತ್ವಾಕರ್ಷಣೆಯನ್ನು ಕಂಡು ಹಿಡಿದ ನ್ಯೂಟನ್‌ನಗೆ ಭೂಮಿ ತಾಯಿಯೇ ಗುರುವಾಗಿ ಪರಿಣಿಮಿಸಿದಳು.…

Read More

ತುಮಕೂರು: ಜಿಲ್ಲೆಯ ಎಲ್ಲಾ ನ್ಯಾಯ ಬೆಲೆ ಅಂಗಡಿಗಳಲ್ಲಿ ಆಹಾರ ಇಲಾಖೆ ಸಹಾಯವಾಣಿ ಸಂಖ್ಯೆ ೧೯೬೭ನ್ನು ನಮೂದಿಸುವಂತೆ ನ್ಯಾಯ ಬೆಲೆ ಅಂಗಡಿಗಳ ಮಾಲೀಕರಿಗೆ ನಿರ್ದೇಶನ ನೀಡಬೇಕೆಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಅನ್ನ ಭಾಗ್ಯ ಯೋಜನೆಯಡಿ ಪಡಿತರ ವಿತರಣೆ ಅಂಗಡಿಗಳಲ್ಲಿ ಸಾರ್ವಜನಿಕರಿಗೆ ೧೦ ಕೆಜಿ ಅಕ್ಕಿಗೆ ಬದಲಾಗಿ  ೮ ಕೆಜಿ ಮಾತ್ರ ವಿತರಿಸಲಾಗುತ್ತಿದೆ. ಬಯೋಮೆಟ್ರಿಕ್ ಪಡೆಯುವ ಸಂದರ್ಭದಲ್ಲೂ ಸಾರ್ವಜನಿಕರಿಂದ ೧೦ ರೂ.ಗಳ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಪಡಿತರ ವಿತರಿಸುವ ಸ್ಥಳವನ್ನು ಸ್ವಚ್ಛವಾಗಿಟ್ಟುಕೊಂಡಿರುವುದಿಲ್ಲ ಎಂದೂ ಸಾರ್ವಜನಿಕ  ದೂರುಗಳು ವ್ಯಕ್ತವಾಗುತ್ತಿವೆ. ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಇಂತಹ ಸಮಸ್ಯೆಗಳು ಕಂಡು ಬಂದಲ್ಲಿ ನೇರವಾಗಿ ಸಹಾಯವಾಣಿ ಸಂಖ್ಯೆ ೧೯೬೭ನ್ನು ಸಂಪರ್ಕಿಸಿ ದೂರು ನೀಡುವ ಬಗ್ಗೆ ಅಧಿಕಾರಿಗಳು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು. ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರ…

Read More

ತುಮಕೂರು: ಕಾರ್ಮಿಕ ಸಂಘಟನೆಗಳ  ಜಂಟಿ ಸಮಿತಿಯು  ರೈತ  ಕಾರ್ಮಿಕ ವಿರೋಧಿ ನೀತಿಗಳನ್ನು  ವಿರೋಧಿಸಿ,ಕಾರ್ಮಿಕ ವಿರೋಧಿ  ಸಂಹಿತೆಗಳನ್ನು ಹಿಂಪಡಯ ಬೇಕು,  ದೇಶದ ಅಸ್ತಿಗಳನ್ನು  ಮೂರು ಕಾಸಿಗೆ  – ಆರು ಕಾಸಿಗೆ ಮಾರಟ ಮಾಡುವ, ಜನ ಸಮಾನ್ಯ  ತೆರಿಗೆ ಹಣದಿಂದ  ಕಟ್ಟಲಾದ ಸಾರ್ವಜನಿಕ ಅಸ್ತಿಗಳ ಹಿಗೆ ಮಾರುವುದು  ದೇಶ ವಿರೋಧಿಸಿ.  ಅಗತ್ಯ  ವಸ್ತುಗಳ ಬೇಲೆ ಏರಿಕೆ  ತಡೆಗಟ್ಟಬೆಕು.  ಉದ್ಯೋಗ ಸೃಷಿ, ಬದುಕಲು  ಯೋಗ್ಯ ಕನಿಷ್ಟ ಕೂಲಿ ಮಾಸಿಕ ೩೬೦೦೦ ನಿಗಧಿಗೆ,  ಎಂಟು  ಗಂಟೆಯ ಕೆಲಸದ   ಅವಧಿಯನ್ನು ೧೨ ಗಂಟೆಗೆ ವಿಸ್ತರಿಸುವುದನ್ನು ಹಿಂಪಡೆಯ ಬೆಕು.ಕೆಲಸ, ಗುತ್ತಿಗೆ  ಕಾರ್ಮಿಕ ಖಾಯಂಮಾತಿ, ಅಸಂಘಟಿತ     ಕಾರ್ಮಿಕರು ಮತ್ತು ಸ್ಕೀಂ ನೌಕರರಿಗೆ ಸಮಾಜಿಕ ಭದ್ರತೆಗಾಗಿ   ಒತ್ತಾಯಿಸಿ. ಬಲವಂತದ ಭೂಸ್ವಾಧಿನ ವಿರೋಧಿಸಿ, ಬಗೇರ್  ಹುಕುಂ ಸಾಗುವಳಿದಾರರ ಒಕ್ಕಲೆಬ್ಬಿ ಸುವುನ್ನು  ವಿರೋಧಿಸಿ,  ಸ್ಮಾಟ್ ಮಿಟರ್ ಹೇರಿಕೆ ವಿರೋಧಿಸಿ.ಎಲ್ಲಾರಿಗೊ ಕನಿಷ್ಟ ಮಾಸಿಕ   ಪಿಂಚಣಿ  ರೂ,೯೦೦೦ ನಿಗಧಿಗೆ ಒತ್ತಾಯಿಸಿ.  ರಾಷ್ಟಿçÃಯ   ಸಾರ್ವರ್ತಿಕ     ಮುಷ್ಕ ರದ ಅಂಗವಾಗಿ  ಸಾವಿರಾರು  ಪ್ಯಾಕ್ಟರಿಗಳ ಕಾರ್ಮಿಕರು, ಅಂಗನವಾಡಿ, ಆಶಾ, ಮುನಿಸಿಪಲ್…

Read More

ತುಮಕೂರು: ಜಿಲ್ಲೆಯಲ್ಲಿ  ಐಟಿ(ಇನ್ಫಾರ್ಮೇಷನ್ ಟೆಕ್ನಾಲಜಿ) ಕಂಪನಿಗಳ ಸ್ಥಾಪನೆಯಿಂದ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಹಲವಾರು ಬದಲಾವಣೆ ಹೊಂದಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು. ಜಿಲ್ಲಾಧಿಕಾರಿಗಳ ನ್ಯಾಯಿಕ ಸಭಾಂಗಣದಲ್ಲಿ ಬುಧವಾರ ಐಟಿ ಕಂಪನಿಗಳ ಉದ್ಯಮಿಗಳ ಜೊತೆ ಸಭೆ ನಡೆಸಿ ಮಾತನಾಡಿದ ಅವರು ನಮ್ಮ ಜಿಲ್ಲೆಯಿಂದ ಬೆಂಗಳೂರು ನಗರಕ್ಕೆ ಸುಮಾರು ೪,೦೦೦ ಉದ್ಯೋಗಿಗಳು ಐಟಿ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿಯೇ ಐಟಿ ಕಂಪನಿಗಳನ್ನು ಸ್ಥಾಪಿಸುವುದರಿಂದ  ಬೇರೆ ನಗರಗಳಲ್ಲಿ ಈಗಾಗಲೇ ಉದ್ಯೋಗ ಮಾಡುತ್ತಿರುವ ಸ್ಥಳೀಯ ಉದ್ಯೋಗಿಗಳಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು. ಐಟಿ ಕಂಪನಿಗಳ ಸ್ಥಾಪನೆಯಿಂದ ಬಿಎಸ್ಸಿ, ಬಿಇ, ಎಂಸಿಎ ಮುಂತಾದ ವಿದ್ಯಾರ್ಹತೆ ಪಡೆದವರಿಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗವಕಾಶಗಳು ಹಾಗೂ ಸ್ಥಳೀಯ ಆರ್ಥಿಕ ಚಟುವಟಿಕೆಗಳು ಹೆಚ್ಚುತ್ತವೆ. ಇದರಿಂದ ಡಿಜಿಟಲ್ ತಂತ್ರಜ್ಞಾನ ಸೇರಿದಂತೆ ರಸ್ತೆ, ವಿದ್ಯುತ್ ಮುಂತಾದ ಮೂಲಸೌಕರ್ಯಗಳು ಅಭಿವೃದ್ಧಿಯಾಗುತ್ತವೆ. ಸ್ಥಳೀಯ ಕಾಲೇಜು ಮತ್ತು ತರಬೇತಿ ಕೇಂದ್ರಗಳಲ್ಲಿ ಐಟಿ ಸಂಬAಧಿತ ಕೋರ್ಸುಗಳು ಆರಂಭವಾಗಬಹುದು. ಐಟಿ ಹಬ್ ರೂಪುಗೊಳ್ಳುವುದರಿಂದ ಜಿಲ್ಲೆಯ ಮುಂದಿನ ೧೦ ವರ್ಷಗಳ ಅಭಿವೃದ್ಧಿಗೆ ನಾಂದಿ…

Read More

ಹುಳಿಯಾರು: ಹುಳಿಯಾರು ಬಸ್ ನಿಲ್ದಾಣಕ್ಕೆ ಬರುವವರು ಪ್ರಕೃತಿಯ ಕರೆಗಳನ್ನು ಮನೆಯಲ್ಲೇ ಮುಗಿಸಿಕೊಂಡು ಬನ್ನಿ ಎಂದು ಸುದ್ದಿ ಮಾಡಿದಾಯ್ತು. ಹುಳಿಯಾರು ಬಸ್ ನಿಲ್ದಾಣಕ್ಕೆ ಬರುವವರು ಕುಡಿಯುವ ನೀರನ್ನು ಮನೆಯಿಂದಲೇ ತನ್ನಿ ಎನ್ನುವ ಸುದ್ದಿಯನ್ನೂ ಮಾಡಿದಾಯ್ತು. ಈಗ ಹುಳಿಯಾರು ಬಸ್ ನಿಲ್ದಾಣಕ್ಕೆ ಬರುವವರು ವಿಷಕಾರಿ ಹೊಗೆಯ ರಕ್ಷಣೆಗೆ ಒಳ್ಳೆಯ ಮಾಸ್ಕ್ ಹಾಕ್ಕೊಂಡು ಬನ್ನಿ ಎನ್ನುವ ಸುದ್ದಿ ಮಾಡುವ ಸರದಿ.            ಹೌದು, ಹುಳಿಯಾರು ಪಟ್ಟಣ ಪಂಚಾಯ್ತಿಯ ನಿರ್ಲಕ್ಷö್ಯದಿಂದಾಗಿ ಕಳೆದ ಎರಡ್ಮೂರು ವರ್ಷಗಳಿಂದಲೂ ಬಸ್ ನಿಲ್ದಾಣದಲ್ಲಿ ಶುದ್ದ ಕುಡಿಯುವ ನೀರಿಲ್ಲ ಹಾಗೂ ಶೌಚಾಲಯ ಇಲ್ಲ. ಈಗ ಬಸ್ ನಿಲ್ದಾಣದ ಹೊಸ ಸಮಸ್ಯೆಯಾಗಿದೆ ವಿಷಕಾರಿ ಹೊಗೆ. ಬಸ್ ನಿಲ್ದಾಣದ ಪಕ್ಕದಲ್ಲೇ ನಿತ್ಯ ಕಸಕ್ಕೆ ಬೆಂಕಿ ಇಡುತ್ತಿದ್ದು ಇದರಿಂದ ಹೊರಸೂಸುವ ಹೊಗೆಯದ್ದು ದೊಡ್ಡ ಸಮಸ್ಯೆಯಾಗಿದೆ. ಬೆಳಗ್ಗೆಯ ವೇಳೆ ಪಂಚಾಯ್ತಿಯವರು ಇಟ್ಟರೆ, ಮಧ್ಯಾಹ್ನ ಅಂಗಡಿ, ಹೋಟಲ್‌ನವರು, ರಾತ್ರಿ ಬಾರ್‌ನವರು ಹೀಗೆ ನಿತ್ಯ ಬೆಳಗ್ಗೆಯಿಂದ ಸಂಜೆವರೆವಗೂ ಯಾರಾದರೊಬ್ಬರು ಬೆಂಕಿ ಹಾಕುತ್ತಲೇ ಇರುತ್ತಾರೆ.      …

Read More

ತುಮಕೂರು: ಭಾರತೀಯ ಸಂಸ್ಕೃತಿಯಲ್ಲಿ ದೇವಸ್ಥಾನಗಳಿಗೆ ವಿಶೇಷ ಮಹತ್ವವಿದೆ. ದೇವಸ್ಥಾನಗಳಲ್ಲಿ ಮನುಷ್ಯ ಶಾಂತಿ, ನೆಮ್ಮದಿ ಪಡೆಯಬಹುದಾಗಿದೆ. ನಮ್ಮ ಇತಿಹಾಸ ಪ್ರಸಿದ್ಧ ದೇವಸ್ಥಾನಗಳನ್ನು ರಕ್ಷಿಸಿ ಜೀಣೋದ್ಧಾರ ಮಾಡಬೇಕು ಎಂದು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು. ನಗರದ ಸಮೀಪದ ಗೂಳೂರಿನ ಉಮಾಮಹೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಸ್ವಾಮೀಜಿ ಅಲ್ಲಿ ಪೂಜೆ ಸಲ್ಲಿಸಿ ಭಕ್ತರಿಂದ ಪಾದಪೂಜೆ ಸ್ವೀಕರಿಸಿ ಮಾತನಾಡಿ, ಒಂದು ಸಾವಿರಕ್ಕೂ ಹೆಚ್ಚು ವರ್ಷಗಳ ಹಿಂದಿನ ಉಮಾಮಹೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶ್ರೇಷ್ಠ ಕೆತ್ತನೆಯ ಅಪರೂಪದ ಮೂರ್ತಿಗಳನ್ನು ಕಾಣಬಹುದು. ಗೂಳೂರಿನ ಗಣಪತಿ, ಕೈದಾಳದ ಚೆನ್ನಕೇಶವ ದೇವಸ್ಥಾನಗಳನ್ನು ಒಳಗೊಂಡ ಪ್ರಸಿದ್ಧ ಕ್ಷೇತ್ರ ಇದು. ಇಲ್ಲಿನ ಮಠ ಬೇಲಿಮಠಕ್ಕೆ ಸೇರಿದ್ದಾಗಿ ಹೇಳಲಾಗಿದೆ. ಗದ್ದಿಗೆಗಳು ಮಠದ ಪರಂಪರೆಗೆ ಸಾಕ್ಷಿಯಾಗಿವೆ ಎಂದು ಹೇಳಿದರು. ನಮ್ಮ ಪೂರ್ವಜನರು ನಿರ್ಮಿಸಿರುವ ದೇವಸ್ಥಾನಗಳು ಅಳಿದುಹೋಗದಂತೆ ನಾವು ರಕ್ಷಣೆ ಮಾಡಬೇಕು. ಶಿಥಿಲಗೊಂಡ ದೇವಸ್ಥಾನವನ್ನು ಜೀಣೋದ್ಧಾರ ಮಾಡಿ, ಅಗತ್ಯ ಅಭಿವೃದ್ಧಿ ಕೆಲಸ ಮಾಡಲು ಉದ್ಯಮಿಗಳಾದ ಸ್ಫೂರ್ತಿ ಚಿದಾನಂದ್ ಹಾಗೂ ಕೃಷ್ಣಪ್ಪ ಅವರು ಆಸಕ್ತರಾಗಿರುವುದು ಶ್ಲಾಘನೀಯ. ಇತರ ಭಕ್ತರೂ ಈ…

Read More

ತುಮಕೂರು: ಜಿಲ್ಲೆಯಲ್ಲಿ ೪೮೩೫ ಹೆಕ್ಟೇರ್ ಪ್ರದೇಶದಲ್ಲಿ  ಹತ್ತಿ ಬೆಳೆಯನ್ನು ಬೆಳೆಯುತ್ತಿದ್ದು, ಸಂಬ0ಧಿಸಿದ ರೈತರೊಂದಿಗೆ ಹತ್ತಿ ಬೀಜ ಮಾರಾಟ ಕಂಪನಿಗಳು  ಆಗಸ್ಟ್ ೩ರೊಳಗೆ ಒಡಂಬಡಿಕೆ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚಿಸಿದ್ದಾರೆ.   ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ರೈತರು ಹಾಗೂ ಹತ್ತಿ ಬೀಜ ಮಾರಾಟ ಕಂಪನಿಗಳ ಏಜೆಂಟರೊ0ದಿಗೆ ಸಭೆ ನಡೆಸಿದ ಅವರು, ಶಿರಾ, ಮಧುಗಿರಿ, ಪಾವಗಡ ಮತ್ತು ಚಿಕ್ಕನಾಯಕನಹಳ್ಳಿ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಕೆಲವು ಖಾಸಗಿ ಬೀಜ ಮಾರಾಟ ಸಂಸ್ಥೆಗಳು ಹತ್ತಿ ಬೀಜಗಳನ್ನು ರೈತರಿಗೆ ನೀಡಿ ಕಾನೂನು ಬಾಹಿರವಾಗಿ ಬೀಜೋತ್ಪಾದನೆಯನ್ನು ಮಾಡಿಕೊಂಡು ಹಣ ನೀಡದೆ ರೈತರಿಗೆ ವಂಚಿಸಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಹತ್ತಿ ಬೀಜ ಮಾರಾಟ ಸಂಸ್ಥೆಗಳು ರೈತರೊಂದಿಗೆ ಕಡ್ಡಾಯವಾಗಿ ಒಪ್ಪಂದ ಮಾಡಿಕೊಳ್ಳಬೇಕೆಂದು ಅವರು ಬೀಜ ಕಂಪನಿಗಳಿಗೆ ಸೂಚಿಸಿದರು. ಬೀಜ ಮಾರಾಟ ಕಂಪನಿಗಳು ಹತ್ತಿ ಬೆಳೆಗಾರರಿಗೆ ಒಡಂಬಡಿಕೆಯAತೆ ನೇರ ಬ್ಯಾಂಕ್ ಖಾತೆಗೆ ಹಣ ಪಾವತಿಸಬೇಕು. ಅಲ್ಲದೆ ರೈತರಿಂದ ಹತ್ತಿ ಬೀಜ ಖರೀದಿಸಿದ ನಂತರ  ಬೀಜ ಅಧಿನಿಯಮದನ್ವಯ ೩ ತಿಂಗಳ ಅವಧಿಯಲ್ಲೇ ಜಿಓಟಿ ಪರೀಕ್ಷೆಗೆ…

Read More

ತುಮಕೂರು: ಕೇಂದ್ರ ಸರಕಾರ ಜಾರಿಗೆ ತಂದಿರುವ ವಕ್ಫ್ ತಿದ್ದುಪಡಿ ಕಾಯ್ದೆ-೨೦೨೫ನ್ನು ವಿರೋಧಿಸಿ, ಮಸೂದೆಯನ್ನು ಹಿಂಪಡೆಯುವ0ತೆ ಆಗ್ರಹಿಸಿ ಶುಕ್ರವಾರ ನಗರದ ಬಾರ್‌ಲೈನ್ ರಸ್ತೆಯಲ್ಲಿರುವ ಮೆಕ್ಕಾ ಮಸೀದಿ ಆವರಣದಲ್ಲಿ ಮಾನವ ಸರಪಳಿ ನಿರ್ಮಿಸಿ ತುಮಕೂರು ನಗರದ ಮುಸ್ಲಿಂ ಬಾಂಧವರು ಪ್ರತಿಭಟನೆ ನಡೆಸಿದರು. ಶುಕ್ರವಾರದ ಸಾಮೂಹಿಕ ಪ್ರಾರ್ಥನೆಯ ನಂತರ ಮೆಕ್ಕಾ ಮಸೀದಿಯ ಮುತ್ತುವಲ್ಲಿಯವರ ನೇತೃತೃದಲ್ಲಿ ನೂರಾರು ಮುಸ್ಲಿಂ ಭಾಂಧವರು ಪ್ರತಿಭಟನಾ ಫಲಕಗಳನ್ನು ಪ್ರದರ್ಶಿಸುವ ಮೂಲಕ ಕೇಂದ್ರ ಸರಕಾರ ಜಾರಿಗೆ ತಂದಿರುವ, ಮುಸ್ಲಿಂ ಭಾಂಧವರಿಗೆ ಕಂಟಕವಾದ ವಕ್ಪ್ ಮಸೂಧೆಯನ್ನು ಹಿಂಪಡೆಯಬೇಕೆAದು ಆಗ್ರಹಿಸಿದರು. ಈ ವೇಳೆ ಮಾತನಾಡಿದ ತಾಜುದ್ದೀನ್ ಷರೀಫ್, ಕರ್ನಾಟಕ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ನ ನಿರ್ದೇಶನದಂತೆ ರಾಜ್ಯದ ಪ್ರತಿ ಹಳ್ಳಿಗಳಲ್ಲಿಯೂ ಶುಕ್ರವಾರದ ನಮಾಜ ನಂತರ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸರಕಾರ ಜಾರಿಗೆ ತಂದಿರುವ ತಿದ್ದುಪಡಿ ಮಸೂದೆ ಮುಸ್ಲಿಂ ವಿರೋಧಿ ಎನ್ನುವುದರ ಜೊತೆಗೆ, ಸಂವಿಧಾನ ವಿರೋಧಿಯೂ ಆಗಿದೆ.ಭಾರತೀಯ ಸಂವಿಧಾನದಲ್ಲಿಯೇ ಅವರವರ ಧರ್ಮ ಪಾಲನೆಗೆ ಅವಕಾಶವಿದೆ. ಅದು ಹಿಂದು, ಮುಸ್ಲಿಂ, ಕ್ರಿಶ್ಚಿಯನ್, ಬೌಧ್ದ, ಪಾರ್ಸಿ…

Read More