Author: News Desk Benkiyabale

ಹುಳಿಯಾರು :       ಹುಳಿಯಾರು ಹೋಬಳಿಯ ಸೀಗೆಬಾಗಿಯಲ್ಲಿ ಚಿರತೆ ದಾಳಿಗೆ ಕರು ಬಲಿಯಾದ ಘಟನೆ ನಡೆದಿದ್ದು ಈ ಭಾಗದ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.       ಸೀಗೆಬಾಗಿಯ ಗೊರವಣ್ಣನವರ ಕರಿಯಮ್ಮ ಅವರಿಗೆ ಸೇರಿದ ಕರು ಚಿರತೆ ದಾಳಿಗೆ ಬಲಿಯಾಗಿದ್ದು ಇವರು ಇಲ್ಲಿನ ಗಂಗಾಧರ್ ಅವರ ತೋಟದಲ್ಲಿ ಎಂದಿನಂತೆ ತಮ್ಮ ನಾಲ್ಕು ದನ ಮತ್ತು ಕರುವನ್ನು ಮೇಯಿಸಲು ಕರೆದೊಯ್ದಿದ್ದರು.       ರಾಸುಗಳು ಮೇಯುತ್ತಿದ್ದ ಸಂದರ್ಭದಲ್ಲಿ ಚಿರತೆಯೊಂದು ಕರು ಮೇಲೆ ಎಗರಿ ಬಿದ್ದು ಪಕ್ಕದ ಬೇಲಿಗೆ ಕರುವನ್ನು ಎಳೆದೊಯ್ದು ತಿನ್ನಲು ಆರಂಭಿಸಿತು. ಇದನ್ನು ಕಂಡ ಕರಿಯಮ್ಮ ಗಾಭರಿಯಿಂದ ರಾಸುಗಳನ್ನು ಅಲ್ಲಿಯೇ ಬಿಟ್ಟು ಊರಿಗೆ ಓಡಿಹೋಗಿ ವಿಷಯ ಮುಟ್ಟಿಸಿದ್ದಾರೆ.       ಊರಿನವರು ಬಂದು ನೋಡುವಷ್ಟರಲ್ಲಿ ಚಿರತೆ ಕರುವನ್ನು ಅರ್ಧ ತಿಂದು ಪರಾರಿಯಾಗಿದೆ. ಪರಿಣಾಮ ಊರಿನ ಗ್ರಾಮಸ್ಥರು, ಕುರಿಗಾಹಿಗಳು, ಹೈನುಗಾರರು ತಮ್ಮ ಸಾಕು ಪ್ರಾಣಿಗಳನ್ನು ಮೇಯಿಸಲು ಹೋಗದೆ ಭಯಭೀತರಾಗಿದ್ದಾರೆ. ಹಾಗಾಗಿ ಅರಣ್ಯ ಇಲಾಖೆಯವರು ತಕ್ಷಣ ಬೋನ್…

Read More

ತುಮಕೂರು:       ನಗರದ ಮಂಡಿಪೇಟೆಯಲ್ಲಿ ನೂತನವಾಗಿ ಆರಂಭವಾಗಿರುವ ಮೆಟ್ರೋದಿಂದ ಮಂಡಿಪೇಟೆ ರಸ್ತೆಯಲ್ಲಿ ಪ್ರತಿನಿತ್ಯ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದ್ದು, ಈ ಸಮಸ್ಯೆಯನ್ನು ಬಗೆಹರಿಸುವಂತೆ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರಾದ ಮಂಜುನಾಥ್ ಮತ್ತು ಟ್ರಾಫಿಕ್ ಇನ್ಸ್‍ಪೆಕ್ಟರ್ ಶಿವಕುಮಾರ್ ಅವರಿಗೆ ಸಮಾಜ ಸೇವಕರು ಹಾಗೂ ಆರ್ಯವೈಶ್ಯ ಮುಖಂಡರಾದ ನಟರಾಜು ಒತ್ತಾಯಿಸಿದರು.       ಮಂಡಿಪೇಟೆಯ ವರ್ತಕರು ಮತ್ತು ಸಾರ್ವಜನಿಕರೊಂದಿಗೆ ನಟರಾಜು ಅವರು, ತೆರಳಿ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಮಂಜುನಾಥ್ ಅವರೊಂದಿಗೆ ಟ್ರಾಫಿಕ್ ಸಮಸ್ಯೆ ಬಗ್ಗೆ ಚರ್ಚಿಸಿ, ನೀವು ಮೆಟ್ರೋ ಆರಂಭಿಸಿರುವುದರಿಂದ ಈ ಭಾಗದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ. ಈ ಭಾಗದ ವರ್ತಕರು ಮತ್ತು ಸಾರ್ವಜನಿಕರು ಪ್ರತಿನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ಸಮಸ್ಯೆ ನಿವಾರಣೆಗೆ ಕ್ರಮ ವಹಿಸಬೇಕೆಂದು ಮನವಿ ಮಾಡಿದರು.       ಸ್ಥಳಕ್ಕೆ ಆಗಮಿಸಿದ ಟ್ರಾಫಿಕ್ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಶಿವಕುಮಾರ್ ಅವರು, ಸಮಾಜ ಸೇವಕರಾದ ನಟರಾಜು ಸೇರಿದಂತೆ ವರ್ತಕರು ಹಾಗೂ ಸಾರ್ವಜನಿಕರೊಂದಿಗೆ ಕೆಲಹೊತ್ತು ಚರ್ಚೆ ನಡೆಸಿದರು. ಇವರ ಮನವಿಗೆ ಸ್ಪಂದಿಸಿದ…

Read More

ಹುಳಿಯಾರು:       ದಸರಾ ಮತ್ತು ದೀಪಾವಳಿ ಹಬ್ಬದ ಅಂಗವಾಗಿ ಪಟ್ಟಣದಲ್ಲಿ ಜನಸಂದಣಿ ಹೆಚ್ಚಾಗುವ ಹಿನ್ನೆಲೆಯಲ್ಲಿ ಕೋವಿಡ್ 19 ರ ನಿಯಮಾವಳಿಗಳಂತೆ ಕಡ್ಡಾಯವಾಗಿ ಮಾಸ್ಕ್ ಧರಿಸಿ 6 ಅಡಿ ಅಂತರವನ್ನು ಕಾಯ್ದಿರಿಸಿಕೊಂಡು ವ್ಯಾಪಾರ ವಹಿವಾಟು ನಡೆಸಬೇಕು ಇಲ್ಲವಾದಲ್ಲಿ ದಂಡ ವಿಧಿಸಲಾಗುತ್ತದೆ ಎಂದು ಪಪಂ ಮುಖ್ಯಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.       ವ್ಯಾಪಾರಿಗಳು ಆದಷ್ಟು ಹಬ್ಬಕ್ಕೆ ಅಗತ್ಯವಾದ ಹೂವು, ಹಣ್ಣು, ತರಕಾರಿ ಮತ್ತು ದಿನಸಿ ಪದಾರ್ಥಗಳನ್ನು ಹೋಂ ಡಿಲುವರಿ ಮಾಡಿದರೆ ಉತ್ತಮವಾಗಿರುತ್ತದೆ. ಗ್ರಾಹಕರೂ ಕೂಡ ಅನಗತ್ಯವಾಗಿ ಓಡಾಡುವುದನ್ನು ನಿಲ್ಲಿಸಿ ಒಮ್ಮೆ ಹಬ್ಬಕ್ಕೆ ಬೇಕಾದ ಅಷ್ಟೂ ಸಾಮಗ್ರಿಗಳನ್ನು ಖರೀಧಿಸಿ ಮನೆಯಿಂದ ಹೊರಬಾರದಂತೆ ಮನೆಯಲ್ಲಿ ಹಬ್ಬ ಆಚರಿಸಲು ನಿರ್ಧರಿಸಿದರೆ ಒಳಿತು. ಇದರಿಂದ ಕೊರೊನಾ ಸೋಂಕು ಹರಡುವುದನ್ನು ತಡೆಯಲು ತಾವೆಲ್ಲರೂ ಅತ್ಯಮೂಲ್ಯ ಕೊಡುಗೆ ಕೊಟ್ಟಂತ್ತಾಗುತ್ತದೆ ಎಂದಿದ್ದಾರೆ.       ಹಬ್ಬದ ವ್ಯಾಪಾರದ ಸಂದರ್ಭದಲ್ಲಿ ಪಪಂ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ತಂಡ ಪಟ್ಟಣದಲ್ಲಿ ಸಂಚಾರ ಮಾಡುತ್ತಿದ್ದು ಮಾಸ್ಕ್ ಧರಿಸದೆ ಓಡಾಡುವುದು, ಸಾರ್ವಜನಿಕ ಅಂತರವನ್ನು…

Read More

ತುಮಕೂರು :       ರಾಜ್ಯದಲ್ಲಿರುವ ಬಿಜೆಪಿ ಸರ್ಕಾರದ ದುರಾಡಳಿತದ ಬಗ್ಗೆ ಬಿಜೆಪಿಯ ಹಿರಿಯ ಸದಸ್ಯ ಬಸವರಾಜ ಯತ್ನಾಳ್ ಅವರೇ ಅಸಮಾಧಾನ ವ್ಯಕ್ತಪಡಿಸಿರುವುದು ಬಿಜೆಪಿ ದುರಾಡಳಿತಕ್ಕೆ ಸಾಕ್ಷಿಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.       ಸಿರಾ ತಾಲ್ಲೂಕು ಕಳ್ಳಂಬೆಳ್ಳ ಹೋಬಳಿಯ ಯತ್ತಪ್ಪನಹಟ್ಟಿ, ದೊಡ್ಡ ಅಗ್ರಹಾರ, ತರೂರು ಸೇರಿದಂತೆ ಸುತ್ತಮುತ್ತ ಕಾಂಗ್ರೆಸ್ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಬಿಜೆಪಿ ಸರ್ಕಾರ ಸಹಕಾರ ನೀಡಲಿಲ್ಲ. ಇಂತಹ ದುರಾಡಳಿತವನ್ನು ಬಿಜೆಪಿ ನಡೆಸುತ್ತಿದೆ ಎಂದು ದೂರಿದರು.       ರಾಜ್ಯದಲ್ಲಿ ರೈತ, ದಲಿತ, ಮಹಿಳೆಯರ ಪರವಾಗಿ ಮಾತನಾಡುವ ಶಕ್ತಿ ಇರುವುದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ. ಎಲ್ಲ ವರ್ಗಗಳ ಪರವಾಗಿ ಕೆಲಸ ಮಾಡುವ ಶಕ್ತಿ ಇರುವುದು ಕಾಂಗ್ರೆಸ್‍ಗೆ ಮಾತ್ರ ಎಂದ ಅವರು, ಸಿರಾ ಮತದಾರರು ರಾಜ್ಯಕ್ಕೆ ಸಂದೇಶ ನೀಡಬೇಕಿದೆ, ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಮತ ಚಲಾಯಿಸುವಂತೆ ಕರೆ ನೀಡಿದರು.  …

Read More

 ತುಮಕೂರು :       ಶಿರಾ ವಿಧಾನಸಭಾ ಉಪಚುನಾವಣೆಗೆ ಸಲ್ಲಿಕೆಯಾಗಿದ್ದ 17 ಉಮೇದುವಾರರ ಪೈಕಿ ಇಬ್ಬರು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ ಎಂದು ಶಿರಾ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿ ಡಾ: ನಂದಿನಿದೇವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.      ಪಕ್ಷೇತರದಿಂದ ನಾಮಪತ್ರ ಸಲ್ಲಿಸಿದ್ದ ನಿಸಾರ್ ಅಹಮದ್ ಹಾಗೂ ತಿಮ್ಮರಾಜ್ ಗೌಡ ಅವರು ಇಂದು ತಮ್ಮ ಉಮೇದುವಾರಿಕೆಯನ್ನು ವಾಪಸ್ಸು ತೆಗೆದುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Read More

ಹುಳಿಯಾರು:      ಅಡಿಗೆ ಅನಿಲ ಸೋರಿಕೆಯಿಂದ ಮನೆ ಸಂಪೂರ್ಣ ಭಸ್ಮವಾಗಿ 25 ಲಕ್ಷ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದ ಘಟನೆ ಹುಳಿಯಾರು ಹೋಬಳಿಯ ಕುಶಾಲಪುರದಲ್ಲಿ ನಡೆದಿದೆ.      ಕುಶಾಲಪುರದ ಮಧುಸೂಧನ್ ಅವರ ಮನೆ ಈ ಅನಿಲ ದುರಂತದಿಂದ ಭಸ್ಮವಾಗಿದ್ದು ಇವರು ಕುಟುಂಬ ಸಮೇತ ಪಕ್ಕದ ಊರಿನ ದೇವಾಲಯಕ್ಕೆ ಪೂಜೆಗೆ ತೆರಳಿದ್ದ ಸಂದರ್ಭದಲ್ಲಿ ಈ ಅವಘಡ ಜರುಗಿದೆ.      ಮನೆಯಲ್ಲಿ ತೆಂಗಿನ ಕೊಬ್ಬರಿ ಹಾಗೂ ಊಟಕ್ಕೆ ಬಳಸುವ ಮುತ್ತುಗದ ಎಲೆಗಳು ಇದ್ದ ಕಾರಣದಿಂದ ಬೆಂಕಿ ಮನೆಯನ್ನು ಸಂಪೂರ್ಣ ವ್ಯಾಪಿಸಿದೆ. ಅಗ್ನಿಶಾಮಕ ತಂಡದವರು ಬರುವಷ್ಟರಲ್ಲಿ ಮನೆ ಸಂಪೂರ್ಣ ಸುಟ್ಟು ಹೋಗಿತ್ತು.       ಬೆಂಕಿಯ ಕೆನ್ನಾಲಿಗೆಗೆ ಮನೆಯ ಗೃಹಪಯೋಗಿ ವಸ್ತುಗಳು, ಪೀಠೋಪಕರಣಗಳು, ದವಸಧಾನ್ಯ, ಊಟಕ್ಕೆ ಬಳಸುವ ಮುತ್ತಗದ ಎಲೆ, ನಗದು, ಒಡವೆ ಸೇರಿದಂತೆ ಕಟ್ಟಡ ಬಾಗಿಲು, ಕಿಟಕಿ, ಮೇಲ್ಚಾವಣಿ ಸೇರಿದಂತೆ 25 ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ ವಸ್ತುಗಳು ಸುಟ್ಟುಕರಕಲಾಗಿವೆ.       ಹುಳಿಯಾರು ಪೊಲೀಸ್ ಠಾಣೆಯಲ್ಲಿ…

Read More

ಹುಳಿಯಾರು  :        ಚಿಕ್ಕನಾಯಕನಹಳ್ಳಿ ತಾಲ್ಲೂಕು ಕುಪ್ಪೂರು ವೃತ್ತದ ಅಂಗನವಾಡಿ ಕಾರ್ಯಕರ್ತೆಯರಿಗೆ ಪೋಷಣ್ ಅಭಿಯಾನ ಯೋಜನೆಯಡಿಯಲ್ಲಿ ಸ್ಮಾರ್ಟ್ ಫೋನ್ ವಿತರಣೆ ಮಾಡಲಾಯಿತು.       ಜಿಲ್ಲಾ ಪೋಷಣ್ ಅಭಿಯಾನ ಯೋಜನಾ ಸಹಾಯಕರಾದ ಆರ್.ರವಿಕುಮಾರ್ ಮಾತನಾಡಿ ಸ್ಮಾರ್ಟ್ ಫೋನ್ ಕೊಟ್ಟಿರುವುದರಿಂದ ಅಪೌಷ್ಠಿಕ ಮಕ್ಕಳ ಬೆಳವಣಿಗೆ ಮಾಪನ, ಮಕ್ಕಳ ಮನೆ ಭೇಟಿ ಮಾಡುವುದು ಇನ್ನೂ ಸುಲಭ ಹಾಗೂ ದಕ್ಷ ಎಂದರು.       ಮೇಲ್ವಿಚಾರಕರಾದ ಬಿ.ರೇಖಾ ಮಾತನಾಡಿ ಯೋಜನೆಗಳು, ಸೇವೆಗಳು ಮತ್ತು ಕೆಲಸದಲ್ಲಿ ದಕ್ಷತೆ, ಪ್ರಗತಿ ಹಾಗೂ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ನೀಡುತ್ತಿರುವುದು ಉತ್ತಮ ಯೋಜನೆ ಎಂದರು.       ಪೋಷಣ್ ಅಭಿಯಾನ ತಾಲ್ಲೂಕು ಸಂಯೋಜಕರಾದ ಎಂ.ಜಿ.ಸಂತೋಷ್ ಕುಮಾರ್ ಮಾತನಾಡಿ ಸಮುದಾಯ ಕಾರ್ಯಕ್ರಮಗಳು, ಹಾಜರಾತಿ, ಗರ್ಭಿಣಿ, ಬಾಣಂತಿಯರ ಆರೋಗ್ಯ ತಪಾಸಣೆ, ಪೋಷಣ್ ಅಭಿಯಾನದ ತರಬೇತಿಗೆ ಅತ್ಯುತ್ತಮ ಕಾರ್ಯ ಮಾದರಿ ಇದಾಗಿದೆ ಎಂದರು.      ಮೇಲ್ವಿಚಾರಕಿ ಸೌಮ್ಯ ಮಾತನಾಡಿ ಅಂಗನವಾಡಿ ಮೇಲ್ವಿಚಾರಣೆ, ನಿರ್ವಹಣೆ…

Read More

ಗುಬ್ಬಿ :       ಮೂಲಭೂತ ಸರ್ಕಾರಿ ಸವಲತ್ತುಗಳನ್ನು ಅನುಷ್ಠಾನಗೊಳಿಸಲು ಮೀಸಲಿಟ್ಟ 9 ಎಕರೆ ಸರ್ಕಾರಿ ಗೋಮಾಳ ಜಮೀನು ಪ್ರಭಾವಿ ಕುಟುಂಬವೊಂದಕ್ಕೆ ಮಂಜೂರು ಮಾಡಿರುವುದನ್ನು ಖಂಡಿಸಿ ಸೋಮವಾರ ತಾಲ್ಲೂಕಿನ ನಿಟ್ಟೂರು ಹೋಬಳಿ ಓಬಳಾಪುರದಲ್ಲಿ ಗುಬ್ಬಿ ಮತ್ತು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗಡಿಭಾಗದ ಐದು ಗ್ರಾಮದ ನಿವಾಸಿಗಳು ದಿಢೀರ್ ಪ್ರತಿಭಟಿಸಿ ಗೋಮಾಳ ಜಮೀನು ಉಳಿಸುವಂತೆ ಆಗ್ರಹಿಸಿದರು.       ಕಳೆದ 20 ವರ್ಷಗಳಿಂದ ಗಣಿಬಾದಿತ ಪ್ರದೇಶಗಳಾದ ಗುಬ್ಬಿ ತಾಲ್ಲೂಕಿನ ಓಬಳಾಪುರ, ಗುಡ್ಡದಹಟ್ಟಿ, ಹೊಸಹಟ್ಟಿ, ಹಾಗೂ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕರಡಿ, ರಾಂಪುರ, ತೀರ್ಥಪುರ ಹೀಗೆ ಅನೇಕ ಗ್ರಾಮಗಳು ಮೊದಲನಿಂದಲೂ ಮೂಲ ಸವಲತ್ತು ವಂಚಿತ ಗ್ರಾಮಗಳಾಗಿವೆ. ಇಲ್ಲಿಯ ಸಮಸ್ಯೆಗಳ ಪಟ್ಟಿ ಹೇಳತೀರದಾಗಿದೆ. ಕುಡಿಯುವ ನೀರಿನ ಅಭಾವದಿಂದ ಎಲ್ಲವೂ ಸಮಸ್ಯೆಯಿಂದಲೇ ಕೂಡಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಸೌಲಭ್ಯಗಳಾದ ಶಾಲೆ, ಅಂಗನವಾಡಿ, ಹೆರಿಗೆ ಆಸ್ಪತ್ರೆ, ನ್ಯಾಯಬೆಲೆ ಅಂಗಡಿ ಹೀಗೆ ಅನೇಕ ಸರ್ಕಾರಿ ಕಟ್ಟಡಗಳ ನಿರ್ಮಾಣಕ್ಕೆ ಓಬಳಾಪುರ ಗ್ರಾಮದ ಸರ್ವೆ ನಂಬರ್ 6 ರಲ್ಲಿ 9 ಎಕರೆ ಗೋಮಾಳ…

Read More

ತುಮಕೂರು :        ತುಮಕೂರು ವಿಶ್ವವಿದ್ಯಾನಿಲಯದ ಗೌರವಾನ್ವಿತ ಕುಲಪತಿಗಳಾದ ಪ್ರೊ. ವೈ.ಎಸ್. ಸಿದ್ದೇಗೌಡ ರವರು 2020-21ನೇ ಶೈಕ್ಷಣಿಕ ಸಾಲಿನಿಂದ ವಿಶ್ವವಿದ್ಯಾನಿಲಯದಲ್ಲಿ, ತಿಪಟೂರಿನ ಸ್ನಾತಕೋತ್ತರ ಕೇಂದ್ರದಲ್ಲಿ ಹಾಗೂ ಶಿರಾ ಸ್ನಾತಕೋತ್ತರ ಕೇಂದ್ರದಲ್ಲಿ ಈ ಕೆಳಕಂಡ ಸ್ನಾತಕೋತ್ತರ ಕೋರ್ಸ್‍ಗಳನ್ನು ಹಾಗೂ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್‍ಗಳನ್ನು ಪ್ರಾರಂಭಿಸಲು ಕ್ರಮ ಕೈಗೊಂಡಿದ್ದಾರೆ.       ವಿಶ್ವವಿದ್ಯಾನಿಲಯದಲ್ಲಿ ಪ್ರಾರಂಭಿಸಿರುವ ಕೋರ್ಸ್ ಗಳು:     1) ಎಂ.ಎ. ಹಿಂದಿ:       ಸ್ನಾತಕೋತ್ತರ ಹಿಂದಿ ಪದವಿಯನ್ನು ಪಡೆಯುವುದರಿಂದ ಬೋಧಕರಾಗಬಹುದು. ಭಾಷಾಂತರಕಾರರಾಗಿ ಹಾಗೂ ಪ್ರವಾಸಿ ಕೇಂದ್ರಗಳಲ್ಲಿ ಹಿಂದಿ ಭಾಷಾ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುವ ಅವಕಾಶವಿದೆ. 2) ಎಂ.ಎ. ಸಂಸ್ಕøತ: ಸಂಸ್ಕøತ ಅಧ್ಯಯನದಿಂದ ಭಾಷಾಂತರಕಾರರಾಗಬಹುದು ಹಾಗೂ ಶಾಲಾ ಕಾಲೇಜುಗಳಲ್ಲಿ ಬೋಧಕರಾಗಿ, ಭಾಷಾ ಪ್ರಚಾರಕರಾಗಿ ಕಾರ್ಯನಿರ್ವಹಿಸಬಹುದು. ತಿಪಟೂರು ಸ್ನಾತಕೋತ್ತರ ಕೇಂದ್ರ:        1) ಎಂ.ಎಸ್ಸಿ. ಮೈಕ್ರೋಬಯಾಲಜಿ: ಈ ಕೋರ್ಸ್‍ನ್ನು ಅಧ್ಯಯನ ಮಾಡಿದ ಪದವೀಧರರು ಬಯೋಮೆಡಿಕಲ್ ವಿಜ್ಞಾನಿಗಳು, ಕ್ಲಿನಿಕಲ್ ರಿಸರ್ಚ್ ಅಸೋಸಿಯೇಟ್ಸ್, ಫಾರ್ಮಕಾಲಜಿಸ್ಟ್ಸ್ (ಔಷಧಶಾಸ್ತ್ರ), ಫುಡ್…

Read More

ತುಮಕೂರು :        ನಗರದ ಮಂಡಿಪೇಟೆಯಲ್ಲಿ ಮೆಟ್ರೋ ಭಾರತದ 28ನೆಯ ಮತ್ತು ಕರ್ನಾಟಕದ 7ನೇ ಮೆಟ್ರೋ ಹೋಲ್‍ಸೇಲ್ ಮಳಿಗೆಯನ್ನು ಆರಂಭಿಸಲಾಗಿದೆ.       ದೇಶದ ಅತಿದೊಡ್ಡ ಸಂಘಟಿತ ಹೋಲ್‍ಸೇಲ್ ಮಾರಾಟಗಾರ ಮತ್ತು ಆಹಾರದ ಪರಿಣಿತಿ ಹೊಂದಿರುವ ಮೆಟ್ರೋ ಕ್ಷಾಶ್ ಅಂಡ್ ಕ್ಯಾರಿ ನಗರದಲ್ಲಿ ಆರಂಭಿಸಿರುವ ಮಳಿಗೆಯನ್ನು ಶಾಸಕ ಜಿ.ಬಿ. ಜ್ಯೋತಿಗಣೇಶ್ ಉದ್ಘಾಟಿಸಿದರು.       ನಂತರ ಮಾತನಾಡಿದ ಅವರು, ನಗರದಲ್ಲಿ ಮೆಟ್ರೋ ಮಳಿಗೆ ಆರಂಭವಾಗಿರುವುದು ಗ್ರಾಹಕರಿಗೆ ತುಂಬಾ ಅನುಕೂಲವಾಗುತ್ತದೆ. ಬೆಂಗಳೂರಿನ ರಾಜಾಜಿನಗರದಲ್ಲಿ ಮೆಟ್ರೋ ಸ್ಟೋರ್‍ಗೆ ಹೋಗಿ ಹೋಲ್‍ಸೇಲ್‍ನಲ್ಲಿ ಸರಕುಗಳನ್ನು ತರುವುದು ತಪ್ಪಿದಂತಾಗಿದೆ ಎಂದರು. ಮಂಗಳೂರು, ಹುಬ್ಬಳ್ಳಿಯಲ್ಲಿ ಮೆಟ್ರೋ ಹೋಲ್‍ಸೇಲ್ ಮಳಿಗೆ ಆರಂಭಿಸಲಾಗಿಲ್ಲ. ಬದಲಾಗಿ ತುಮಕೂರಿನಲ್ಲಿ ಆರಂಭಿಸಿರುವುದು ದಿನೇ ದಿನೇ ಬೆಳೆಯುತ್ತಿರುವ ತುಮಕೂರಿನ ಪ್ರಗತಿಗೆ ಪೂರಕವಾಗಲಿದೆ ಎಂದರು.        ಮೆಟ್ರೋ ಆರಂಭದಿಂದ ಎಲ್ಲರಿಗೂ ಎಲ್ಲ ರೀತಿಯ ವಸ್ತುಗಳನ್ನು ಖರೀದಿಸಲು ಅನುಕೂಲಕರವಾಗಿದೆ ಎಂದು ಅವರು ಹೇಳಿದರು. ಸಂಸದ ಜಿ.ಎಸ್. ಬಸವರಾಜು ಮಾತನಾಡಿ, ಬೆಂಗಳೂರಿಗೆ ಪರ್ಯಾಯ ನಗರವಾಗಿ…

Read More