ಮಧುಗಿರಿ: ಮಧುಗಿರಿ ತಾ ಪುರವರ ಹೋ ಬ್ಯಾಲ್ಯ ಗ್ರಾಮದ ನಿವೇಶನ ರಹಿತರು ಇದೇ ಗ್ರಾಮದ ಸ್ಮಶಾನ ಪಕ್ಕದಲ್ಲಿ ಸುಮಾರು 10 ತಿಂಗಳಿಂದ ಗುಡಿಸಲು ನಿರ್ಮಿಸಿಕೊಂಡು ವಾಸವಿದ್ದು, ಈ ಬಡ ನಿರ್ಗತಿಕರು ಭೂಮಿ & ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಸಹಕಾರದೊಂದಿಗೆ ಕಳೆದ 2019 ನವೆಂಬರ್ ತಿಂಗಳಿಂದ ತುಮಕೂರು ಜಿಲ್ಲಾದಿಕಾರಿಗಳ ಕಛೇರಿ ಮುಂಭಾಗ 14 ದಿನಗಳ ಕಾಲ ಅಹೋರಾತ್ರಿ ದರಣಿ ಹಮ್ಮಿಕೊಂಡ ಸಮಯದಲ್ಲಿ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ರವರು ಇದೇ ಬ್ಯಾಲ್ಯ ಗ್ರಾಮದ ಚೌಡಮ್ಮ ದೇವಸ್ಥಾನದ ಪಕ್ಕ ಗ್ರಾಮಠಾಣ ಜಾಗದಲ್ಲಿ ನಿವೇಶನ ವಿಂಗಡಿಸಿ ನಿಯಮಾನುಸಾರ ನಿವೇಶನ ರಹಿತರಿಗೆ ಹಂಚಿಕೆ ಮಾಡಲು ಮಧುಗಿರಿ EO, ಬ್ಯಾಲ್ಯ ಗ್ರಾಮದ PDO ರವರಿಗೆ ನಿರ್ದೇಶನ ನೀಡಿದ್ದರು. EO, ಮತ್ತು PDO ರವರ ಕಾಲ ವಿಳಂಬ,ನಿರ್ಲಕ್ಷ್ಯದಿಂದ ಈ ಜಾಗವನ್ನು ಒತ್ತುವರಿ ಮಾಡಿ ತಿಪ್ಪೆ ,ಬಣವೆ ಹಾಕಿಕೊಂಡಿದ್ದ ಕೆಲವರು ನ್ಯಾಯಲಯದಲ್ಲಿ ತಡೆಯಾಜ್ಞೆ ತಂದಿರುತ್ತಾರೆ. ಈ ಮದ್ಯೆ ಕೋವಿಡ್-19…
Author: News Desk Benkiyabale
ಮಧುಗಿರಿ: ಪಟ್ಟಣಕ್ಕೆ ಕುಡಿಯುವ ನೀರೊದಗಿಸುವ ಸಿದ್ದಾಪುರ ಕೆರೆಗೆ ಹೇಮಾವತಿ ನಾಲೆಯಿಂದ 30 ದಿನಗಳು ನೀರು ಹರಿಯಲಿದ್ದು, ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು. ಪಟ್ಟಣಕ್ಕೆ ಕುಡಿಯುವ ನೀರೊದಗಿಸುವ ಸಿದ್ದಾಪುರ ಕೆರೆಗೆ 50 ಲಕ್ಷ ವೆಚ್ಚದಲ್ಲಿ ಹಮ್ಮಿಕೊಂಡಿರುವ ಕೆರೆ ಹೂಳೆತ್ತುವ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು ಕೆರೆಯಲ್ಲಿ ಹೆಚ್ಚಿನ ನೀರು ಸಂಗ್ರಹವಾಗುವ ಉದ್ದೇಶದಿಂದ ಹೂಳೆತ್ತುವ ಹಾಗೂ ಏರಿ ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ. ಈಗ ಹೇಮಾವತಿ ನೀರು ಹರಿಯುತ್ತಿದ್ದು, ಮಳೆಗಾಲ ಆರಂಭವಾದರೆ ಮಳೆ ನೀರು ಹೆಚ್ಚಾದರೆ ಕೆಲಸ ಮಾಡಲು ಸಾಧ್ಯವಿಲ್ಲ. ಅಷ್ಟರಲ್ಲಿ ಕೆಲಸ ಮುಗಿಸಿದರೆ ಹೆಚ್ಚಿನ ನೀರು ಸಂಗ್ರಹ ಮಾಡಬಹುದು. ಆದಷ್ಟೂ ಬೇಗ ಕಾಮಗಾರಿಯನ್ನು ಗುಣಮಟ್ಟದಲ್ಲಿ ಮುಗಿಸುವಂತೆ ಸೂಚಿಸಿದರು. ಸೋಮವಾರ ಸಂಜೆಯಿಂದ ಪಟ್ಟಣದ ಸಿದ್ದಾಪುರ ಕೆರೆಗೆ ಹೇಮಾವತಿ ನೀರು ಹರಿಯುತ್ತಿದ್ದು, ಪಟ್ಟಣದ ನೀರಿನ ಸಮಸ್ಯೆ ಬಗೆಹರಿಯಲಿದೆ. ಮುಂದಿನ ಮಳೆಗಾಲದವರೆಗೂ ನೀರಿನ ಲಭ್ಯತೆ ಇರುವಂತೆ ಪುರಸಭೆ ನಿಗದಿತ ಸಮಯದಲ್ಲೇ…
ಮಧುಗಿರಿ: ಕೊರೊನಾ ಎಫೆಕ್ಟ್ ನಿಂದಾಗಿ ಬ್ಯಾಂಕಿನ ಸಾಮಾಜಿಕ ಅಂತರ ನೆಪದಲ್ಲಿ ಗ್ರಾಹಕರನ್ನು ಸುಡುಬಿಸಿಲಿನಲ್ಲಿ ಕಾಯ್ದುಕೊಂಡು ಹಣ ಮತ್ತಿತರ ಬ್ಯಾಂಕಿನ ವ್ಯವಹಾರಗಳನ್ನು ನಡೆಸೇ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಧುಗಿರಿ ಪಟ್ಟಣದ ಹೈಸ್ಕೂಲ್ ರಸ್ತೆಯಲ್ಲಿರುವ ಕರ್ನಾಟಕ ಬ್ಯಾಂಕ್ ಶಾಖೆ ಮಹಡಿಯ ಮೇಲಿರುವುದರಿಂದ ಗ್ರಾಹಕರು ಮೆಟ್ಟಿಲೇರಿ ವ್ಯವಹಾರ ನಡೆಸಬೇಕಾಗಿದೆ. ಕೊರೊನಾ ಕಾರಣದಿಂದಾಗಿಯೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನೆಪದಲ್ಲಿ ಇಪ್ಪತ್ತು ಮಂದಿಯಷ್ಟೆ ಮಾತ್ರ ಏಕಕಾಲಕ್ಕೆ ಒಳಗಡೆ ಹೋಗಬೇಕಾಗಿದೆ. ಇನ್ನುಳಿದ ಗ್ರಾಹಕರು ಬಾಗಿಲ ಬಳಿ ಕಾಯಬೇಕಾಗಿದೆ. ಇನ್ನೂ ವೃದ್ಧರ ಪಾಡು ಹೇಳತೀರದಾಗಿದೆ. ಅವರು ಮೆಟ್ಟಿಲುಗಳು ಹತ್ತಲು ಸಾಧ್ಯವಾಗದೆ ಗೊಳೋ ಎನ್ನುತ್ತಿದ್ದಾರೆ. ಈ ಶಾಖೆಯನ್ನು ನೆಲ ಅಂತಸ್ತಿಗೆ ಸ್ಥಳಾಂತರ ಮಾಡಬೇಕೆಂಬ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಇನ್ನೂ ಗ್ರಾಹಕರು ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ನಮ್ಮ ಹಣ ನಾವು ಪಡೆಯಲು ಸರ್ಕಸ್ ಮಾಡಬೇಕಾಗಿ ಬಂದಿದೆ ಎಂದು ಆರೋಪಿಸುತ್ತಾರೆ. ಗ್ರಾಹಕರ ಗೋಳು ಕೇಳದಂತಾಗಿದೆ ಕನಿಷ್ಠ ಪಕ್ಷ ಮಾನವೀಯ ದೃಷ್ಟಿಯಿಂದ ಬಿಸಿಲಿನ ತಾಪವನ್ನು…
ತುಮಕೂರು: ಹುಲಿಯೂರು ದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ಅಪರಿಚಿತ ವ್ಯಕ್ತಿಗಳು ಮೃತಪಟ್ಟಿದ್ದು, ಮೃತರ ವಿಳಾಸ ಪತ್ತೆಯಾಗಿರುವುದಿಲ್ಲ ಎಂದು ಪೊಲೀಸ್ ಸಬ್ಇನ್ಸ್ಪೆಕ್ಟರ್ ತಿಳಿಸಿದ್ದಾರೆ. ಪ್ರಕರಣ 1: ಲಕ್ಷ್ಮಿಪುರ ಗ್ರಾಮದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಸುಮಾರು 45 ವರ್ಷದ ವ್ಯಕ್ತಿಯು ಯಾವುದೋ ಕಾಯಿಲೆಯಿಂದ ಅಸ್ವಸ್ಥನಾಗಿದ್ದು, ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೇ 23ರಂದು ಮೃತಪಟ್ಟಿದ್ದಾನೆ. ಮೃತ ವ್ಯಕ್ತಿಯು ಸುಮಾರು 166 ಸೆಂ.ಮೀ ಎತ್ತರ, ದುಂಡು ಮುಖ. ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ ಹೊಂದಿದ್ದು, ಮೃತನ ಬಲಕೈನ ಮೊಣಕೈಯಲ್ಲಿ ಹಿಂದಿಯಲ್ಲಿ ವಿನೋದ, ಎಸ್.ಎಮ್ ಹಚ್ಚೆ ಇರುತ್ತದೆ. ಮೃತನ ಮೈ ಮೇಲೆ ಆಕಾಶ್ ನೀಲಿ ಬಣ್ಣದ ಆರ್ಧತೋಳಿನ ಟೀ ಶರ್ಟ್, ಹಳದಿ ಬಣ್ಣದ ಬರ್ಮಡ ಇರುತ್ತದೆ. ಪ್ರಕರಣ 2: ಹಳೇವೂರು ಗ್ರಾಮದಲ್ಲಿ ಶ್ರೀ ಹುಲಿಯೂರಮ್ಮ ದೇವಸ್ಥಾನದ ಬಳಿ ಬಿಕ್ಷಾಟನೆ ಮಾಡುತ್ತಿದ್ದ ಸುಮಾರು…
ಕೊರಟಗೆರೆ: k ಅತಿವೇಗವಾಗಿ ಬಿಸಿದ ಬಿರುಗಾಳಿಗೆ ಚನ್ನರಾಯನದುರ್ಗ ಮತ್ತು ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಗ್ರಾಮೀಣ ಪ್ರದೇಶದಲ್ಲಿ 25ಕ್ಕೂ ಹೆಚ್ಚು ವಿದ್ಯುತ್ಕಂಬಗಳು ಮುರಿದು ಬಿದ್ದಿರುವ ಪರಿಣಾಮ ಬೆಸ್ಕಾಂ ಇಲಾಖೆಗೆ 2ಲಕ್ಷಕ್ಕೂ ಅಧಿಕ ನಷ್ಟವಾಗಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ. ತಾಲೂಕಿನ ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಬಸವನಹಳ್ಳಿ, ಕ್ಯಾಶವಾರ, ಆರ್.ವೆಂಕಟಾಪುರ, ಅಕ್ಕಿರಾಂಪುರ, ತೊಗರಿಘಟ್ಟ, ರೆಡ್ಡಿಹಳ್ಳಿ ಮತ್ತು ಚನ್ನರಾಯನದುರ್ಗ ಹೋಬಳಿ ವ್ಯಾಪ್ತಿಯ ಬುಕ್ಕಾಪಟ್ಟಣ, ಜಂಪೇನಹಳ್ಳಿ, ಜೆಟ್ಟಿಅಗ್ರಹಾರ ಗ್ರಾಮದ ಬಳಿಯ ವಿದ್ಯುತ್ಕಂಬ ಬಿರುಗಾಳಿಗೆ ನೆಲಕ್ಕುರುಳಿವೆ. ಅತಿವೇಗದ ಬಿರುಗಾಳಿಗೆ ಮಳೆಯು ಮಾಯವಾಗಿ ರೈತರ ಅಡಿಕೆ, ತೆಂಗು ಮತ್ತು ಬಾಳೆ ಮರಗಳು ನೆಲಕ್ಕೆ ಬಿದ್ದು ಸಾವಿರಾರು ರೂ ನಷ್ಟವಾಗಿದೆ. ಗ್ರಾಮೀಣ ಪ್ರದೇಶದ ತೋಟದ ಮನೆಗಳ ಸೀಟ್ ಮತ್ತು ಹೆಂಚಿನ ಮನೆಗಳ ಛಾವಣಿ ಬಿಗುರಾಳಿ ಕೀಮೀ ದೂರಕ್ಕೆ ಹಾರಿಹೋಗಿವೆ. ಜಯಮಂಗಳಿ ನದಿಪಾತ್ರದ ರೈತರು ಬಿರುಗಾಳಿಗೆ ಭಯಬೀತರಾಗಿದ್ದಾರೆ. ಕೊರಟಗೆರೆ ಬೆಸ್ಕಾಂ ಎಇಇ ವಿ.ಮಲ್ಲಣ್ಣ ಮಾತನಾಡಿ ಅತಿವೇಗದ ಬಿರುಗಾಳಿಯಿಂದ…
ತುಮಕೂರು: ತುಮಕೂರು ಜಿಲ್ಲೆಯಲ್ಲಿಂದು ಹೊಸದಾಗಿ ಒಬ್ಬರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ಅವರು ತಿಳಿಸಿದ್ದಾರೆ. ಸೋಂಕಿತ ವ್ಯಕ್ತಿಯು 33 ವರ್ಷದ ಪುರುಷನಾಗಿದ್ದು, ಮುಂಬೈ ಹೋಟೆಲ್ವೊಂದರಲ್ಲಿ ವೈಟೆರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈತನು ಮೇ 24ರಂದು ಬೆಂಗಳೂರಿಗೆ ಹೋಗುವ ಮಾರ್ಗದಲ್ಲಿ ಇಳಿದಿದ್ದಾನೆ. ಭಾನುವಾರದಂದು ಕಫ್ರ್ಯೂ ಜಾರಿಯಲ್ಲಿದ್ದರಿಂದ ಜಿಲ್ಲಾಸ್ಪತ್ರೆಗೆ ಬಂದಿದ್ದಾರೆ. ಇವರ ಪ್ರಯಾಣದ ಹಿಸ್ಟರಿ ಇದ್ದಿದ್ದರಿಂದ ಅವರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರ ವರದಿ ಪಾಸಿಟಿವ್ ಬಂದಿದೆ. ಸೋಂಕಿತ ವ್ಯಕ್ತಿಯನ್ನು ಪಿ-2343 ಗುರುತಿಸಿದ್ದು, ಈತನು ಮೈಸೂರಿನ ಮೆಟಗಳ್ಳಿಯವರಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದರಿಯವರಿಗೆ ಯಾವುದೇ ರೀತಿಯ ಜ್ವರ, ಉಸಿರಾಟದ ತೊಂದರೆಯಾಗಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ತುರುವೇಕೆರೆ: ಇದೇ ಮೊದಲ ಬಾರಿಗೆ ಜಿಲ್ಲೆಗೆ ನ್ಯಾಯಯುತವಾಗಿ ಹೇಮಾವತಿ ನೀರು ಹರಿಯುತ್ತಿದೆ ಎಂದು ಶಾಸಕ ಮಸಾಲಾ ಜಯರಾಮ್ ಹರ್ಷ ವ್ಯಕ್ತಪಡಿಸಿದರು. ಪತ್ರಕರ್ತರೊಂದಿಗೆ ಮಾತನಾಡಿದ ಅವರು ಇದುವರೆಗೂ ಜಿಲ್ಲೆಗೆ ಹೇಮಾವತಿ ನೀರು ಹರಿಯುವ ಸಂಬಂಧ ಅನ್ಯಾಯವಾಗುತ್ತಿತ್ತು. ಆದರೆ ಈಗ ತಮ್ಮ ಬಿಜೆಪಿ ಸರ್ಕಾರ ಬಂದ ತರುವಾಯ ಜಿಲ್ಲೆಗೆ ನ್ಯಾಯ ದೊರಕಿಸಿದೆ ಎಂದು ಹೇಳಿದರು. ನಿನ್ನೆಯಿಂದ ಜಿಲ್ಲೆಗೆ ಬಾಕಿ ಉಳಿದಿದ್ದ 6 ಟಿಎಂಸಿ ನೀರು ಹರಿಸಲು ಸರ್ಕಾರ ಕ್ರಮ ಕೈಗೊಂಡಿದೆ. ವರ್ಷದಲ್ಲಿ ಎರಡು ಬಾರಿ ನೀರು ಹರಿಸುತ್ತಿರುವುದು ಇತಿಹಾಸದಲ್ಲೇ ಇರಲಿಲ್ಲ. ಇದೇ ಮೊದಲು. ಈಗ ಜಿಲ್ಲೆಯ ಬಿಜೆಪಿ ಶಾಸಕರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಭೇಟಿ ಮಾಡಿದ ಫಲವಾಗಿ ಹೇಮಾವತಿ ನೀರು ಹರಿಯುತ್ತಿದೆ ಎಂದು ಮಸಾಲಾ ಜಯರಾಮ್ ಹೇಳಿದರು. ಈಗ ಸುಮಾರು 2000 ಕ್ಯೂಸೆಕ್ಸ್ ನೀರು ಹರಿಯುತ್ತಿದೆ. ಜಿಲ್ಲೆಯ ಕುಡಿಯುವ ನೀರಿನ ಅಗತ್ಯವಿರುವ ಕೆರೆಗಳಿಗೆ ಹಂತಹಂತವಾಗಿ ನೀರು ಹರಿಸಲಾಗುವುದು ಎಂದು ಹೇಳಿದರು. …
ಮಧುಗಿರಿ: ಮೇ.19ರಂದು ‘ಬೆಂಕಿಯಬಲೆ’ ದಿನಪತ್ರಿಕೆಯಲ್ಲಿ ‘ಮಧುಗಿರಿಯಲ್ಲಿ ಜಲಕ್ಷಾಮ, ವಾರದ ನಂತರ ಪಟ್ಟಣದಲ್ಲಿ ಕುಡಿಯುವ ನೀರು ಬಂದ್’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿ ಸಿದ್ದಾಪುರ ಕೆರೆಗೆ ಹರಿಯುವ ಹೇಮೆಯ ನೀರು ಖಾಲಿಯಾಗುತ್ತಿದ್ದು, ಕೆರೆಯ ಒಡಲು ಬರಿಗಾಗುತ್ತಿದೆ. ಇನ್ನೊಂದು ವಾರ ಮಾತ್ರ ಪಟ್ಟಣದ ಜನತೆಗೆ ನೀರು ಸಿಗಲಿದ್ದು ತದ ನಂತರ ಬಂದ್ ಆಗಲಿದೆ ಎಂದು ಎಚ್ಚರಿಸಿತ್ತು. ವರದಿ ಪ್ರಕಟಗೊಂಡ .ನಂತರ ಶಾಸಕ ವೀರಭದ್ರಯ್ಯ ಸರ್ಕಾರದ ಮೇಲೆ ಒತ್ತಡ. ತಂದ ಹಿನ್ನೆಲೆಯಲ್ಲಿ ಕೆರೆಗೆ ನೀರು ಹರಿದಿದ್ದು, ಪಟ್ಟಣದ ಜನತೆ ಕುಡಿಯುವ ನೀರಿನ ಬರ ನೀಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಸಿದ್ದಾಪುರ ಕೆರೆಗೆ ಸೋಮವಾರ ರಾತ್ರಿ ಎರಡನೇ ಅವಧಿಗೆ ಹೇಮೆ ಹರಿದಿದ್ದು ಜನತೆ ಸಂತಸ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಹರಿಸುವ ಬಗ್ಗೆ ಹಮ್ಮಿಕೊಂಡಿದ್ದ ಸಚಿವರ ಸಬೆಯಲ್ಲಿ ಭಾಗವಹಿಸಿ ಶಾಸಕ ಎಂ.ವಿ.ವೀರಭಧ್ರಯ್ಯ ರವರು ಮಧುಗಿರಿಗೆ ಎರಡನೇ…
ತುಮಕೂರು: ರಾಜ್ಯದ ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆಯನ್ನು 6 ತಿಂಗಳ ಕಾಲ ಮುಂದೂಡಬೇಕು, ಚುನಾವಣೆ ಮುಂದೂಡುವುದು ಅನಿವಾರ್ಯವಾದಲ್ಲಿ ಆಡಳಿತ ಸಮಿತಿ ಸದಸ್ಯರು ಅಥವಾ ಆಡಳಿತಾಧಿಕಾರಿಗಳನ್ನು ನೇಮಕ ಮಾಡುವ ಬದಲು ಈಗಿರುವ ಚುನಾಯಿತಿ ಸದಸ್ಯರ ಅವಧಿಯನ್ನು 6 ತಿಂಗಳವರೆಗೆ ವಿಸ್ತರಿಸಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮಂಗಳವಾರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾಧ್ಯಕ್ಷರಾದ ತಾಜುದ್ದೀನ್ ಷರೀಫ್, ರಾಜ್ಯದ ಪಂಚಾಯತ್ರಾಜ್ ವ್ಯವಸ್ಥೆಗೆ ತನ್ನದೇ ಆದ ಇತಿಹಾಸವಿದ್ದು, ಸಂವಿಧಾನದ 73ನೇ ತಿದ್ದುಪಡಿ ಮೂಲಕ ಆಡಳಿತ ವಿಕೇಂದ್ರೀಕರಣದ ಆಶಯಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಇಡೀ ದೇಶಕ್ಕೇ ಮಾದರಿಯನ್ನಾಗಿ ತೋರಿಸಿಕೊಟ್ಟ ಕೀರ್ತಿ ಕರ್ನಾಟಕ ರಾಜ್ಯಕ್ಕೆ ಸಲ್ಲುತ್ತದೆ ಎಂದರು. ಗ್ರಾಮ ಪಂಚಾಯಿತಿಗಳ ಅವಧಿ 5 ವರ್ಷದ ಅವಧಿ ಪ್ರಸ್ತುತ ಮೇ ಅಂತ್ಯಕ್ಕೆ ಕೊನೆಗೊಳ್ಳಲಿದೆ. ಕೆಲವೊಂದು ಪಂಚಾಯಿತಿಗಳ ಅವಧಿ…
ತುರುವೇಕೆರೆ: ತಾಲ್ಲೂಕಿನ ಹಲವು ಭಾಗಗಳಲ್ಲಿ ಸೋಮವಾರ ರಾತ್ರಿ ಸುರಿದ ರೋಹಿಣಿ ಮಳೆಯಿಂದ ಇಳೆಯೆಲ್ಲ ತಂಪಾಗಿ ಅನ್ನದಾತನ ಮೊಗದಲ್ಲಿ ಮಂದಹಾಸ ಮೂಡಿಸಿದೆ. ತಾಲೂಕಿನಲ್ಲಿ ಇದುವರೆವಿಗೂ ಸರಿಯಾದ ಮಳೆ ಬಾರದೆ ಮುಂಗಾರು ಕುಂಠಿತಗೊಂಡು ರೈತರಲ್ಲಿ ಆತಂಕ ಮನೆಮಾಡಿತ್ತು. ತಾಲೂಕಿನ ಮಾಯಸಂದ್ರ ಹಾಗೂ ದಬ್ಬೇಘಟ್ಟ ಹೋಬಳಿಗಳಲ್ಲಿ ಅಲ್ಪಸ್ವಲ್ಪ ಮಳೆ ಬಿದ್ದದ್ದು ಬಿಟ್ಟರೆ ದಂಡಿನಶಿವರ ಹಾಗೂ ಕಸಬಾ ಹೋಬಳಿಗಳಲ್ಲಿ ಮಳೆ ಮರೀಚಿಕೆಯಾಗಿ ಮುಂಗಾರು ಬೆಳೆ ಕೈಕೊಟ್ಟಿತು ಅನ್ನುವಷ್ಟರಲ್ಲಿ ಸೋಮವಾರ ಸಂಜೆ ಬಿರುಗಾಳಿಯೊಂದಿಗೆ ತಾಲೂಕಿನ ದಂಡಿನಶಿವರ, ರಾಮಡಿಹಳ್ಳಿ ಮಾಚೇನಹಳ್ಳಿ, ಅಮ್ಮಸಂದ್ರ, ಅಂಘರಾಖನಹಳ್ಳಿ, ಹಡವನಹಳ್ಳಿ, ದುಂಡಾ, ಸಂಪಿಗೆ ಸೇರಿ ಸುತ್ತಾಮುತ್ತ ಹಲವು ಕಡೆಗಳಲ್ಲಿ ಸುರಿದ ರೋಹಿಣಿ ಮಳೆ ಭೂಮಿಯನ್ನು ತಂಪೆರೆಯಿತು. ದಂಡಿನಶಿವರ ಹೋಬಳಿ ಅಮ್ಮಸಂದ್ರ ವೈನ್ ಶಾಪ್ ಮುಂಬಾಗದ ರಸ್ತೆಯಲ್ಲಿ ಮರವೊಂದು 11ಕೆವಿ ವಿದ್ಯುತ್ ಕಂಬದ ಮೇಲೆ ಉರುಳಿದ್ದು ಯಾವುದೇ ಅಪಾಯ ಸಂಭವಿಸಿಲ್ಲ. ಅಂಘರಾಖನಹಳ್ಳಿ ಗ್ರಾಮದ ರೈತನೋರ್ವನ ತೆಂಗಿನ ಮರ ಹಾಗೂ ಬೆಂಡೆಬೆಳೆ ನೆಲಕಚ್ಚಿದೆ. ದಬ್ಬೇಘಟ್ಟ ಹೋಬಳಿ…