Author: News Desk Benkiyabale

ತುಮಕೂರು :       ಎತ್ತಿನಹೊಳೆ ಯೋಜನೆಯ ಬಫರ್ ಡ್ಯಾಂ ನಿರ್ಮಾಣ ವಿರೋಧಿಸಿ ಸೋಮವಾರ ಎತ್ತಿನಹೊಳೆ ಯೋಜನೆಯ ರೈತ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ರೈತರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.       ಈ ಯೋಜನೆಯಡಿ ಕೊರಟಗೆರೆ ತಾಲ್ಲೂಕು ಭೈರಗೊಂಡ್ಲು ಬಳಿ ಬಫರ್ ಡ್ಯಾಂ ನಿರ್ಮಾಣದ ಬದಲು ಪರ್ಯಾಯ ಕ್ರಮ ತೆಗೆದುಕೊಳ್ಳು ವಂತೆ ಸಲಹೆ ಕೊಟ್ಟಿದ್ದರೂ, ಅಧಿಕಾರಿಗಳು ನಿರ್ಲಕ್ಷ ಮಾಡಿ ಬಫರ್ ಡ್ಯಾಂ ನಿರ್ಮಾಣ ಮಾಡಲು ಹೊರಟಿರುವುದು ಖಂಡನಾರ್ಹ, ಈ ನಿರ್ಮಾಣ ನಿಲ್ಲಿಸಬೇಕು ಎಂದು ರೈತರು ಒತ್ತಾಯಿಸಿದರು.       ಬಫರ್ ಡ್ಯಾಂಗಾಗಿ ನಾವು ನಮ್ಮ ಹಳ್ಳಿಗಳನ್ನು ಖಾಲಿ ಮಾಡಿ ಹೋಗುವುದಿಲ್ಲ. ನಮ್ಮ ಹಿರಿಯರು ಬಾಳಿಬದುಕಿದ ನೆಲವನ್ನು ಮಾರಾಟ ಮಾಡುವುದಿಲ್ಲ. ಭೈರಗೊಂಡ್ಲು ಬಫರ್ಡ್ಯಾಂ ಕಟ್ಟಲು ಬಿಡುವುದಿಲ್ಲ ಎಂದು ಪ್ರತಿಭಟನಾ ರೈತರು ಹೇಳಿದರು.       ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಬಫರ್ ಡ್ಯಾಂ ನಿರ್ಮಾಣ ನಿಲ್ಲಿಸಬೇಕು ಎಂದು ಒತ್ತಾಯ ಮಾಡಿದರು.ಎತ್ತಿನಹೊಳೆ ಯೋಜನೆಯ…

Read More

ತುಮಕೂರು:        ಕುರುಬ ಸಮುದಾಯದ ಮುಖಂಡರಿಗೆ ನೀಡಿರುವ ಭರವಸೆಯಂತೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೂಕ್ತಸ್ಥಾನ ನೀಡಬೇಕೆಂದು ಜಿಲ್ಲಾ ಕುರುಬರ ಸಂಘದ ಕಾರ್ಯಾಧ್ಯಕ್ಷ ಆರ್‍ಎಂಸಿ ರಾಜಣ್ಣ ಒತ್ತಾಯಿಸಿದರು.       ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕುರುಬ ಸಮುದಾಯದ ಶಾಸಕರು ಕಾರಣರಾಗಿದ್ದು, ಉಪ ಚುನಾವಣೆ ವೇಳೆ ಬಿಎಸ್‍ವೈ ನೀಡಿದ್ದ ಭರವಸೆಯಂತೆ ಎಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಹಾಗೂ ಆರ್.ಶಂಕರ್ ಅವರಿಗೆ ಸೂಕ್ತಸ್ಥಾನ ಮಾನವನ್ನು ನೀಡಬೇಕು, ಬಿಎಸ್‍ವೈ ನೀಡಿದ್ದ ಭರವಸೆಯನ್ನು ಈಡೇರಿಸದಿದ್ದರೆ ಸಮುದಾಯ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.        ಬಿಜೆಪಿ ಪಕ್ಷಕ್ಕೆ ಕುರುಬ ಸಮುದಾಯ ಮನ್ನಣೆ ನೀಡಿದ್ದರಿಂದಲೇ ಬಿಎಸ್‍ವೈ ಮತ್ತೆ ಮುಖ್ಯಮಂತ್ರಿಯಾಗಲು ಸಾಧ್ಯವಾಗಿದ್ದು, ರಾಜಕಾರಣ ಏನೇ ಇದ್ದರೂ ಕುರುಬ ಸಮುದಾಯ ಒಂದಾಗುತ್ತಿದೆ, ಈಶ್ವರಪ್ಪ ಹಾಗೂ ಸಿದ್ದರಾಮಯ್ಯ ಅವರು ಅವರ ಪಕ್ಷಗಳಲ್ಲಿ ಪ್ರಮುಖರಾಗಿದ್ದಾರೆ, ಬಿಎಸ್‍ವೈ ಅವರು ವಿಶ್ವನಾಥ್ ಹಾಗೂ ಎಂಟಿಬಿ ನಾಗರಾಜ್ ಅವರಿಗೆ ಮಂತ್ರಿಗಿರಿ ನೀಡುವುದಾಗಿ ಆಶ್ವಾಸನೆ ನೀಡಿದ್ದರು ಅದರಂತೆ ಅವರು ನಡೆದುಕೊಳ್ಳಲಿ…

Read More

ಗುಬ್ಬಿ :       ರಸ್ತೆ ಅಭಿವೃದ್ದಿ ಹೆಸರಿನಲ್ಲಿ ಅಗಲೀಕರಣ ನಡೆಸಿ ಗ್ರಾಮಸ್ಥರ ಮನೆಗಳ ಕಾಂಪೌಂಡ್ ತೆರೆವು ನಡೆಸಿರುವ ಗ್ರಾಮ ಪಂಚಾಯಿತಿ ಅಧಿಕಾರಿಗಳು ಯಾವುದೇ ಸೂಚನೆ, ನೋಟೀಸ್ ನೀಡದೇ ಏಕಾಏಕಿ ಮನೆಗಳ ಮೇಲೆ ಜೆಸಿಬಿ ಯಂತ್ರ ನುಗ್ಗಿಸಿದ್ದಾರೆ ಎಂದು ತಾಲ್ಲೂಕಿನ ಎಸ್.ಕೊಡಗೀಹಳ್ಳಿ ಗ್ರಾಪಂ ವ್ಯಾಪ್ತಿಯ ಎಂ.ಎಸ್.ಪಾಳ್ಯ ಗ್ರಾಮಸ್ಥರು ಆರೋಪಿಸಿದರು.       ಕೆಆರ್‍ಐಡಿಎಲ್ ಯೋಜನೆಯ 90 ಮೀಟರ್ ಬಾಕ್ಸ್ ಚರಂಡಿ ನಿರ್ಮಾಣದ ಕಾಮಗಾರಿ ಆರಂಭಿಸಿದ ಎಂ.ಎಸ್.ಪಾಳ್ಯ ಗ್ರಾಮದ ಆರಂಭದಲ್ಲೇ ಕೆಲ ಮನೆಗಳ ಕಾಂಪೌಂಡ್ ಒಡೆದುಹಾಕಲಾಗಿದೆ. ಮದ್ಯಾಹ್ನ ವೇಳೆ ದಿಢೀರ್ ಜೆಸಿಬಿ ಯಂತ್ರ ತಂದ ಪಂಚಾಯಿತಿ ಅಧಿಕಾರಿಗಳು ಪೊಲೀಸ್ ಮುಂದಿಟ್ಟುಕೊಂಡು ಯಾವುದೇ ಮಾತುಕತೆ ಇಲ್ಲದೆ ಮನೆಯ ಕಾಂಪೌಂಡ್ ತೆರೆವುಗೊಳಿಸಿದ್ದಾರೆ. ರಸ್ತೆಯಿಂದ ಬಹುದೂರದಲ್ಲಿರುವ ಮನೆಗಳನ್ನು ಗುರಿಯಾಗಿಸಿಕೊಂಡು ಕಾಂಪೌಂಡ್ ಒಡೆಯುತ್ತಿರುವುದು ದುರುದ್ದೇಶವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.       ಮನೆಯ ಮಾಲೀಕ ಇಲ್ಲದ ಸಂದರ್ಭದಲ್ಲಿ ಕಾಂಪೌಂಡ್ ಒಡೆದ ಅಧಿಕಾರಿಗಳು ನನಗೆ ಯಾವುದೇ ನೋಟೀಸ್ ನೀಡಿಲ್ಲ. ಮೌಖಿಕವಾಗಿ ಸಹ ಹೇಳಿಲ್ಲ ಎಂದು…

Read More

ತುಮಕೂರು :       ನಗರಕ್ಕೆ ದಿನದ 24 ಗಂಟೆಯೂ ನಿರಂತರವಾಗಿ ಕುಡಿಯುವ ನೀರು ಪೂರೈಸುವ 24×7 ಯೋಜನೆ ಮುಂದಿನ ಆರೇಳು ತಿಂಗಳಲ್ಲಿ ಕಾರ್ಯಾರಂಭವಾಗಲಿದೆ ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ತಿಳಿಸಿದರು.       ಇಲ್ಲಿನ ವಿದ್ಯಾನಗರದಲ್ಲಿರುವ 20 ಲಕ್ಷ ಲೀಟರ್ ಸಾಮರ್ಥ್ಯದ ಪಂಪ್‍ಹೌಸ್‍ನಲ್ಲಿ ನಗರದ ವಿವಿಧ ಬಡಾವಣೆಗಳ ಓವರ್‍ಹೆಡ್ ಟ್ಯಾಂಕ್‍ಗಳಿಗೆ ನೀರು ಸರಬರಾಜು ಮಾಡುವ 120 ಹೆಚ್.ಪಿ. ಮೋಟಾರ್ ಹಾಗೂ 180 ಹೆಚ್.ಪಿ. ಮೋಟಾರ್ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.       ಮುಂದಿನ ಆರೇಳು ತಿಂಗಳಲ್ಲಿ 24×7 ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ಚಾಲ್ತಿಗೆ ಬರಲಿದೆ. ಈ ಯೋಜನೆ ಆರಂಭದಿಂದ ಇನ್ನೊಂದು ವರ್ಷದಲ್ಲಿ ನಗರದಲ್ಲಿ ಏಕಾಕಾಲದಲ್ಲಿ ಎಲ್ಲಾ ಬಡಾವಣೆಗಳಿಗೂ ಕುಡಿಯುವ ನೀರು ಪೂರೈಕೆಯಾಗಲಿದೆ ಎಂದರು.       24×7 ನೀರಿನ ಯೋಜನೆಯಡಿ ನಗರದ ಎಲ್ಲ ಮನೆಗಳಿಗೂ ಕುಡಿಯುವ ನೀರು ಸಮರ್ಪಕವಾಗಿ ಸರಬರಾಜಾಗಲಿದೆ. ಹಾಗೆಯೇ ಎಲ್ಲೂ ಸಹ ಕುಡಿಯುವ ನೀರಿನ ಸಮಸ್ಯೆ…

Read More

ತುಮಕೂರು :       ಇತಿಹಾಸ ಪ್ರಸಿದ್ದ ಗೂಳೂರು ಮಹಾಗಣಪತಿ ದೇವಾಲಯಲ್ಲಿಸೋಮವಾರಮಹಾಗಣಪತಿ ಸ್ಥಿರಬಿಂಬ ಪ್ರತಿಷ್ಠಾಪನೆÀ ಮತ್ತು ಕಳಸ ಪ್ರತಿಷ್ಠಾಪನ ಮಹೋತ್ಸವಅದ್ಧೂರಿಯಾಗಿ ನೆರವೇರಿತು.       ಶಿಲಾಗ್ರಹದ ಪ್ರರಿಷ್ಠಾಪನೆಯು ಜ.26 ರ ಭಾನುವಾರ ಮತ್ತು 27 ರ ಸೋಮವಾರಗ್ರಾಮದ ಹದಿನೆಂಟು ಕೋಮಿನ ಜನಾಂಗದವರು ಸೇರಿದಂತೆ ವಿವಿಧ ಗಣ್ಯವ್ಯಕ್ತಿಗಳು ಹಾಗೂ ಪೂಜ್ಯ ಸ್ವಾಮೀಜಿಗಳ ಸಮ್ಮುಖದಲ್ಲಿ ನೆರವೇರಿತು.       ಜ.26ರ ಭಾನುವಾರ ಸಂಜೆ 4.25 ಗಂಟೆಗೆ ದೀಪಾರಾಧನೆ ವಾಸ್ತುಹೋಮ ಸೇರಿದಂತೆ ವಿವಿಧ ವಿಧಿವಿಧಾನಗಳು ನಡೆದು 6.30 ಗಂಟೆಗೆನೂತನ ಬಿಂಬಕ್ಕೆ ಜಲಾಧಿವಾಸ ಮತ್ತುಕ್ಷೀರಾಧಿವಾಸ ಮಹಾಮಂಗಳಾರತಿ ನೆರವೇರಿಸಲಾಯಿತು. ಸೋಮವಾರ ಬೆಳಿಗ್ಗೆ 5.30ಕ್ಕೆ ಗೋಪುರ ಕಳಶ ಸ್ಥಾಪನೆ ಮತ್ತು 8 ಗಂಟೆಗೆ ನವಗ್ರಹ ಹೋಮ, ಪ್ರತಿಷ್ಠಾಂಗ ಹೋಮ, 12 ಗಂಟೆಗೆಕುಂಭಾಭಿಷೇಕ ನಡೆಸಲಾಯಿತು.ನಂತರ ವೇದಿಕೆ ಕಾರ್ಯಕ್ರಮಗಳು ನಡೆಯಿತು.       ಮೆರವಣಿಗೆ; ಭಾನುವಾರಗ್ರಾಮದರಾಜ ಬೀದಿಗಳಲ್ಲಿ ವಿಗ್ರಹವನ್ನುಗಣಪತಿರಥದ ಮೇಲೆ ಮೆರವಣಿಗೆ ಮಾಡಲಾಯಿತು.ಈ ವೇಳೆ ಮಹಿಳೆಯರು ಕಳಸ ಹೊತ್ತು ಸಾಗಿದರು.ಕುಂಭ ಮೇಳದೊಂದಿಗೆ ಡಂಖವಾದ್ಯ, ವೀರಗಾಸೆ, ನಂದಿಧ್ವಜ, ವೀರಗಾಸೆ…

Read More

ತುಮಕೂರು :        2019ರಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಾಗೂ ವಿಧಾನಸಭಾ ಉಪ ಚುನಾವಣೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಹಾಗೂ ಪಾಲಿಕೆ ಆಯುಕ್ತ ಟಿ. ಭೂಬಾಲನ್ ಅವರನ್ನು ಗೌರವಾನ್ವಿತ ರಾಜ್ಯಪಾಲರಾದ ವಜುಬಾಯ್ ರೂಢಬಾಯ್ ವಾಲಾ ಅವರು ಇಂದು ಸನ್ಮಾನಿಸಿದರು.        ಬೆಂಗಳೂರಿನ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ನಡೆದ ರಾಜ್ಯಮಟ್ಟದ ರಾಷ್ಟ್ರೀಯ ಮತದಾನ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ. ಸಿಇಓ ಹಾಗೂ ಪಾಲಿಕೆ ಆಯುಕ್ತರಿಗೆ ರಾಜ್ಯ ಮಟ್ಟದ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದರು.       ಕಾರ್ಯಕ್ರಮದಲ್ಲಿ ಮುಖ್ಯ ಚುನಾವಣಾಧಿಕಾರಿ ಸಂಜೀವ್‍ಕುಮಾರ್, ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ಆಯುಕ್ತ ಬಿ.ಹೆಚ್. ಅನಿಲ್ ಕುಮಾರ್, ಮತ್ತಿತರರು ಹಾಜರಿದ್ದರು.

Read More

ತುಮಕೂರು :       ತುಮಕೂರು ನಗರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಆರ್.ಸುರೇಶ್ ಕುಮಾರ್ ಅವರು ಇಂದು ಭೇಟಿ ನೀಡಿ ಪರಿಶೀಲಿಸಿದರು.       ಆನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಥಮ ದರ್ಜೆ ಕಾಲೇಜಿನಲ್ಲಿ 1600 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ವಿಶೇಷವಾಗಿ ವಿದ್ಯಾರ್ಥಿನಿಯರಿಗೆ ಸುಸಜ್ಜಿತವಾದ ಕಾಲೇಜು ನಿರ್ಮಾಣವಾಗಬೇಕಾಗಿದೆ ಎಂದರು.       ಕಾಲೇಜಿನ ವಾತಾವರಣವನ್ನು ಕಣ್ಣಾರೆ ಕಂಡಿದ್ದೇನೆ. ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಜಾಗದ ತೊಡಕಿದೆ. ಅದನ್ನು ನಿವಾರಿಸಿ ಉತ್ತಮ ಕಟ್ಟಡ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.       ಶಾಸಕರಾದ ಜ್ಯೋತಿಗಣೇಶ್, ಕಾಲೇಜಿನ ಅಧ್ಯಾಪಕರು ಹಾಗೂ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

Read More

ಚಿಕ್ಕನಾಯಕನಹಳ್ಳಿ:       ಸರ್ಕಾರಿ ಜಮೀನು ಒತ್ತುವರಿ, ನಕಲಿ ದಾಖಲೆ ಸೃಷ್ಠಿಸಿ ಭೂಕಬಳಿಕೆ ಮಾಡಿರುವವರ ವಿರುದ್ದ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕೆಂಬ ಸುತ್ತೋಲೆ ಜ.20 ರಂದು ಹೊರಡಿಸಿರುವ ಬೆನ್ನಲ್ಲೆ ತಾಲ್ಲೂಕಿನಲ್ಲೊಂದು ಅತಿಕ್ರಮಣ ಹಾಗೂ ಅಕ್ರಮ ಖಾತೆಯ ಪ್ರಕರಣ ಬೆಳಕಿಗೆ ಬಂದಿದೆ.       ತಾಲ್ಲೂಕಿನ ಕಂದಿಕೆರೆ ಹೋಬಳಿ ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಸಾಲ್ಕಟ್ಟೆ ಗ್ರಾಮದ ಹರಿಜನ ಕಾಲೋನಿಯ ಪಕ್ಕದಲ್ಲಿರುವ ಸ.ನಂ. 104 ರಲ್ಲಿ 1.35 ಎಕರೆ ಸರ್ಕಾರಿ ಜಮೀನಿದೆ. ಈಜಾಗದಲ್ಲಿ ಒಂದು ಕಿರಿಯ ಪ್ರಾಥಮಿಕ ಶಾಲೆ, ಅಂಬೇಡ್ಕರ್ ಭವನ ಹಾಗೂ ಅಂಗನವಾಡಿ ಕಟ್ಟಡವಿದೆ.        ಉಳಿದ ಸರ್ಕಾರಿ ಜಾಗದಲ್ಲಿ ಕಾಲೋನಿಯ ಸುಮಾರು 60ಕ್ಕೂ ಹೆಚ್ಚಿನ ಮಂದಿ ಹುಲ್ಲಿನ ಬಣವೆ, ತಿಪ್ಪೆಗುಂಡಿ ಹಾಗೂ ಕೊಪ್ಪಲುಗಳನ್ನು ಮಾಡಿಕೊಂಡಿದ್ದರು. ಆದರೆ ಮಳೆಗಾಲದಲ್ಲಿ ಮಳೆ ಬಂದಾಗ ಚರಂಡಿ ನೀರು ಶಾಲೆಯೆಡೆಯೇ ಹರಿದು ಬರುತ್ತಿತ್ತು, ಜೊತೆಗೆ ಸುತ್ತಮುತ್ತಲಿನ ಕಸಕಡ್ಡಿಗಳು ಗಾಳಿ ಬಂದಾಗ ಶಾಲೆಯ ಒಳಕ್ಕೆ ಬಂದು ಬೀಳುತ್ತಿತ್ತು. ಇದರಿಂದ ಮಕ್ಕಳ ಶಿಕ್ಷಣಕ್ಕೆ ಸಾಕಷ್ಟು…

Read More

ತುಮಕೂರು:       ಜಿಲ್ಲೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ತಿಪಟೂರಿನ ಅನ್ನಪೂರ್ಣೇಶ್ವರಿ ಸ್ತ್ರೀಶಕ್ತಿ ಸಂಘವನ್ನು ರಾಜ್ಯ ಪ್ರಶಸ್ತಿಗಾಗಿ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಆಯ್ಕೆ ಮಾಡಿ ರಾಜ್ಯಕ್ಕೆ ಶಿಫಾರಸ್ಸು ಮಾಡಿ ಕಳುಹಿಸಿಕೊಡಲು ನಿರ್ಧರಿಸಲಾಯಿತು.       ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶುಭಾ ಕಲ್ಯಾಣ್ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.       ತುಮಕೂರು ಜಿಲ್ಲೆಯಲ್ಲಿ ಒಟ್ಟು 11036 ಸ್ತ್ರೀಶಕ್ತಿ ಗುಂಪುಗಳಿದ್ದು, 177032 ಮಹಿಳೆಯರು ಸದಸ್ಯರಿದ್ದಾರೆ. 2019-20ನೇ ಸಾಲಿನಲ್ಲಿ ರೂ. 10ಲಕ್ಷ ಸುತ್ತುನಿಧಿ ಮತ್ತು ತರಬೇತಿಗಾಗಿ ರೂ. 218400 ಬಿಡುಗಡೆ ಮಾಡಲಾಗಿದೆ, ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕಾಗಿ ರೂ. 75000 ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಇದುವರೆಗೂ ರೂ. 50000 ವೆಚ್ಚವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಎಸ್. ನಟರಾಜ್ ಸಭೆಗೆ ಮಾಹಿತಿ ನೀಡಿದರು.       ಜಿಲ್ಲೆಯಲ್ಲಿ…

Read More

ಚಿಕ್ಕನಾಯಕನಹಳ್ಳಿ :        ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಆವರಣದಲ್ಲಿ ಬಾಬು ಜಗಜೀವನರಾಂಭವನ ನಿರ್ಮಾಣದ ಕುರಿತು ಸ್ಪಷ್ಟನೆ ನೀಡುತ್ತಾ ವಿವಾದಕ್ಕೆಡೆಯಾಗಿದ್ದ ಪ್ರಕರಣಕ್ಕೆ ತೆರೆ ಎಳೆದರು.        ಪಟ್ಟಣದ ಕೆಎಸ್‍ಆರ್‍ಟಿಸಿ ಬಸ್‍ನಿಲ್ದಾಣದಲ್ಲಿ ಸುದ್ದಿಗಾರ ಪ್ರಶ್ನೆಗೆ ಉತ್ತರಿಸಿ ಬಾಬು ಜಗಜೀವನರಾಂ ಭವನ ನಿರ್ಮಾಣ ಕಾಲೇಜು ಪರಿಸರದಲ್ಲಿ ಮಾಡಲೇಬೇಕೆಂಬ ಹಠ ನಮ್ಮದಲ್ಲ. ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸುಮಾರು 5 ಎಕೆರೆ ಆವರಣದಲ್ಲಿ ಈ ಹಿಂದೆ ಕಟ್ಟಿರುವ ಕಟ್ಟಡಗಳು ಅವೈಜ್ಞಾನಿಕವಾಗಿದೆ. ಸರಿಯಾದ ಪ್ಲಾನ್ ಇಲ್ಲದೆ ಕಟ್ಟಿದ ಕಟ್ಟಡಗಳಿಂದ ಕಾಲೇಜಿಗೆ ಸೇರಿದ ಜಾಗ ಉಪಯೋಗಕ್ಕೆ ಬಾರದಂತಾಗಿ, ಅತಿಕ್ರಮಣಕ್ಕೆ ದಾರಿಮಾಡಿದಂತಾಗಿದೆ. ಇದನ್ನು ತಪ್ಪಿಸಿ ಕಾಲೇಜಿಗೆ ಸೇರಿದ ಜಾಗದ ಒಂದು ಕೊನೆಯಲ್ಲಿ ರೂ.3.5 ಕೋಟಿ ವೆಚ್ಚದಲ್ಲಿ ಭವ್ಯ ಜಗಜೀವನರಾಂ ಭವನಕ್ಕೆ ನಿರ್ಮಿಸಿ, ಅದಕ್ಕೆ ಬೇರೆ ಮಾರ್ಗವನ್ನೂ ಮಾಡಬಹುದೆಂಬ ಆಲೋಚನೆ ನಮ್ಮದಾಗಿತ್ತು ಅಷ್ಟೆ, ಇದರಿಂದ ಜಾಗ ಒತ್ತುವರಿ ಸಮಸ್ಯೆಗೆ ಪರಿಹಾರವಾಗಬಹುದೆಂಬ ನಮ್ಮ ಉದ್ದೇಶವಿತ್ತು, ಇದಕ್ಕಾಗಿ ಜಾಗ ನೋಡಿದ್ದನ್ನೆ ದೊಡ್ಡ ವಿವಾದವೆಬ್ಬಿಸಿ ಅಲ್ಲಿನ ಕೆಲ ಉಪನ್ಯಾಸಕರು ವಿದ್ಯಾರ್ಥಿಗಳ ಮೂಲಕ…

Read More