ತುಮಕೂರು : ನೋಟು ಅಮಾನ್ಯಿಕರಣದ ಹಿನ್ನೆಲೆ ಪ್ರಧಾನಿ ಮೋದಿಯನ್ನು ಸುಟ್ಟು ಹಾಕುವ ಕಾಲ ಬಂದಿದೆ ಎಂದು ಹೇಳಿಕೆ ನೀಡಿರುವ ಟಿ.ಬಿ. ಜಯಚಂದ್ರರ ಹೇಳಿಕೆಯನ್ನು ದೇಶದ್ರೋಹವೆಂದು ಪರಿಗಣಿಸಿ ಅವರನ್ನು ಗಲ್ಲಿಗೆ ಏರಿಸಬೇಕು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತುಮಕೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೋದಿ ವಿರುದ್ಧ ಕೀಳುಮಟ್ಟದಲ್ಲಿ ಜಯಚಂದ್ರ ಮಾತನಾಡಿದ್ದಾರೆ. ಈ ವರ್ತನೆ ಜಯಚಂದ್ರರ ಹುಟ್ಟಿನ ಗುಣವನ್ನು ತೋರಿಸುತ್ತದೆ. ಅವರು ನರಿಯೂ ಅಲ್ಲ, ಗುಳ್ಳೆನರಿಯೂ ಅಲ್ಲ, ಬದಲಾಗಿ ಕೆಟ್ಟ ಸೊಳ್ಳೆ. ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಅವರನ್ನು ಬಂಧಿಸಬೇಕು. ಪ್ರಧಾನಿ ಬಗ್ಗೆ ಈ ರೀತಿ ಹೇಳಿಕೆ ನೀಡುತ್ತಾರೆ ಎಂದ್ರೆ ನಾವೆಲ್ಲ ಏನು ಬಳೆ ತೊಟ್ಟು ಕೂತಿದ್ದೇವೆಯೇ ಎಂದು ಪ್ರಶ್ನಿಸಿದರು. ನಮ್ಮದು ಫೆಡರಲ್ ಸಿಸ್ಟಂ ಹೀಗಾಗಿ ಕ್ರಿಮಿನಲ್ಗಳನ್ನು ಎಲ್ಲಿ ಬೇಕಾದ್ರು ಬಂಧಿಸಬಹುದು. ಟಿ.ಬಿ ಜಯಚಂದ್ರ ಅಂಡ್ ಕಂಪನಿ ಲಜ್ಜೆಗೆಟ್ಟಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಯಾರೊಬ್ಬರೂ ಕೂಡ ಕಾಂಗ್ರೆಸ್ನಲ್ಲಿ…
Author: News Desk Benkiyabale
ಮಧುಗಿರಿ : ಬ್ರಿಟೀಷರ ವಿರುದ್ದ ಹೋರಾಡಿ ಅವರ ನಿದ್ದೆಗೆಡಿಸಿದ ಮೈಸೂರು ಹುಲಿ ಟಿಪ್ಪು ಬಗ್ಗೆ ರಾಜಕಾರಣದಿಂದಾಗಿ ಅಪಸ್ವರಗಳು ಎದ್ದಿರುವುದು ವಿಷಾದನೀಯ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು. ಪಟ್ಟಣದ ಮಾಲಿಮರಿಯಪ್ಪ ರಂಗಮಂದಿರದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಹಜರತ್ ಟಿಪ್ಪುಸುಲ್ತಾನ್ ಜಯಂತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬ್ರಿಟೀಷರು ಜಾನ್ಸಿರಾಣಿ ಲಕ್ಷ್ಮೀಬಾಯಿ ಮತ್ತು ಟಿಪ್ಪುಸುಲ್ತಾನ್ ಈ ಇಬ್ಬರಿಗೆ ಹೆದರುತ್ತಿದ್ದರು ಎಂದು ಇತಿಹಾಸದ ಪುಟಗಳಲ್ಲಿ ಉಲ್ಲೇಖವಾಗಿದೆ. ಎಲ್ಲಾ ಧರ್ಮದ ಜನರನ್ನೂ ಪ್ರೀತಿ ವಿಶ್ವಾಸದಿಂದ ಕಾಣುತ್ತಿದ್ದ ಮಹಾನ್ ವ್ಯಕ್ತಿ ಟಿಪ್ಪು ಎಂದು ಬಣ್ಣಿಸಿದ ಅವರು ಕರ್ನಾಟಕ ಮತ್ತು ಮಧುಗಿರಿ ಪಟ್ಟಣದಲ್ಲಿ ಹಿಂದೂ ಮುಸ್ಲೀಂಮರು ಅಣ್ಣ-ತಮ್ಮಂದಿರಂತೆ ಬಹಳಷ್ಟು ಅನ್ಯೋನ್ಯವಾಗಿದ್ದಾರೆ ಎಂದರು.ಸರ್ಕಾರ ಅಲ್ಪಸಂಖ್ಯಾತರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಇವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಸಮುದಾಯದ ಮುಖಂಡ ಎಂ.ಆರ್. ಖಲೀಲ್ ಮಾತನಾಡಿ ಕರ್ನಾಟಕ ಭಾರತಕ್ಕೇ ಮಾದರಿಯಾಗಿದ್ದು, ದೇಶಕ್ಕೇ ಸ್ವಾತಂತ್ರ್ಯ ತಂದು ಕೊಟ್ಟ ಮಹನೀಯರ ಜಯಂತಿಗಳನ್ನು ಆಚರಿಸುವುದು ನಮ್ಮ ಕರ್ತವ್ಯ. ಟಿಪ್ಪು…
ತುಮಕೂರು: ಉಪಗ್ರಹ ಆಧಾರಿತ ತರಬೇತಿಯಿಂದ ಜನಪ್ರತಿನಿಧಿಗಳ ಸಾಮಾರ್ಥ್ಯಾಭಿವೃದ್ಧಿ ಸಾಧ್ಯವಿಲ್ಲ ಮುಖಾಮುಖಿ ತರಬೇತಿಯ ವಾತಾವರಣ ಸೃಷ್ಠಿಯಾಗಬೇಕು ಎಂದು ಶಾಸಕರಾದ ಜೆ.ಸಿ.ಮಾಧುಸ್ವಾಮಿ ಹೇಳಿದರು. ಅವರು ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳ ರಾಜ್ಯಮಟ್ಟದ ಸಮಾವೇಶದಲ್ಲಿ ಮಾತನಾಡುತ್ತಾ, ನಾನು ವಿಕೇಂದ್ರಿಕರಣದ ಪ್ರತಿಪಾದಕ, ನಾಣು ಕೆ.ಎಂ.ಎಫ್.ಅಧ್ಯಕ್ಷನಾಗಿದ್ದ ಕಾಲದಲ್ಲಿ ಹಾಲು ಉತ್ಪಾದಕರ ಒಕ್ಕೂಟಕ್ಕೆ ಅಧಿಕಾರ ವಿಕೇಂದ್ರಿಕರಣಕ್ಕೆ ಬಾರೀ ವಿರೋಧದ ನಡುವೆಯೆ ಜಾರಿ ಮಾಡಿದ್ದೆ. ಹಾಗೆಯೇ ಪಂಚಾಯತ್ ರಾಜ್ ವ್ಯವಸ್ಥೇ ಅಧಿಕಾರ ವಿಕೇಂದ್ರಿಕರಣದಿಂದ ಅಭಿವೃದ್ಧಿ ಸಾಧ್ಯ ಆದರೆ ತರಬೇತಿ ಸಂಸ್ಥೆ ಗುಣಾತ್ಮಕ ತರಬೇತಿ ಕಡೆ ಗಮನ ಹರಿಸಬೇಕಾಗಿದೆ ಎಂದರು. ಆದರೆ ತರಬೇತಿ ಸಂಸ್ಥೆಗೆ ಅದಿಕಾರ ವಿಕೇಂದ್ರಿಕರಣದ ಪರವಾಗಿ ಇರುವ ಕ್ರಿಯಾ ಶೀಲ ಅಧಿಕಾರ ಬರಬೇಕಿದೆ ಹಾಗೂ ಸಂಸ್ಥೆಯಲ್ಲಿ ಕಾರ್ಯ ನಿರ್ವಸುತ್ತಿರುವ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಂಡು ಜನ ಪ್ರತಿನಿಧಿಗಳನ್ನು ಮುಖ್ಯವಾಹಿನಿಗೆ ತರಬೇಕಿದೆ, ಅವರು ತಮ್ಮ ಅಧಿಕಾರ ವ್ಯಾಪ್ತಿಯನ್ನು ಅರಿತು ಕೆಲಸ ಮಾಡುವಂತಾಗಬೇಕೆಂದರು. …
ಕೊರಟಗೆರೆ: ಯುವ ಕ್ರೀಡಾಪಟುಗಳು ಗೆಲುವು ಮತ್ತು ಸೋಲನ್ನು ಸಮವಾಗಿ ಸ್ವೀಕರಿಸಿ ತಮ್ಮ ಗುರಿಯನ್ನು ಮುಟ್ಟುವಂತಹ ಪ್ರಯತ್ನ ಮಾಡಬೇಕು ಎಂದು ತುಮಕೂರು ಸಂಸದ ಎಸ್.ಪಿ.ಮುದ್ದಹನುಮೇಗೌಡ ತಿಳಿಸಿದರು. ಪಟ್ಟಣದ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಪೃಥ್ವಿ ಇಲೆವನ್ ಮತ್ತು ಡಾ.ಜಿ.ಪರಮೇಶ್ವರ ಯೂತ್ ಐಕಾನ್ಸ್ ವತಿಯಿಂದ ಶನಿವಾರ ಏರ್ಪಡಿಸಲಾಗಿದ್ದ ಕೊರಟಗೆರೆ ಪ್ರೀಮಿಯರ್ ಲೀಗ್ ಕ್ರಿಕೇಟ್ ಪಂದ್ಯಾವಳಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಯುವ ಕ್ರೀಡಾ ಪಟುಗಳನ್ನು ಗುರುತಿಸಲು ರಾಜ್ಯದ ಡಿಸಿಎಂ ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ಕ್ರೀಡಾ ಇಲಾಖೆಯಿಂದ ಕೊರಟಗೆರೆ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಸುಮಾರು 3ಕೋಟಿ ವೆಚ್ಚದ ಕ್ರೀಂಡಾಗಣ ನಿರ್ಮಿಸಲು ಈಗಾಗಲೇ ಅನುಧಾನ ಬಿಡುಗಡೆ ಮಾಡಲು ಸೂಚನೆ ನೀಡಿದ್ದಾರೆ. ಯುವಕರು ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡಿ ರಾಜ್ಯ ಮತ್ತು ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗಬೇಕು ಎಂದು ಸಲಹೆ ನೀಡಿದರು. ಗ್ರಾಮೀಣ ಪ್ರದೇಶದ ಬಡ ಕುಟುಂಬದ ವಿದ್ಯಾರ್ಥಿಗಳು ದೇಶ…
ಹುಳಿಯಾರು: ಭಾರತ ದೇಶ ಧಾರ್ಮಿಕ ಭಾವನೆಗಳುಳ್ಳ ದೇಶ. ವಿವಿಧ ಜಾತಿ, ಮತಗಳನ್ನು ಹೊಂದಿರುವ ಹಾಗೆಯೇ ವಿವಿಧ ಸಂಪ್ರದಾಯಗಳ ಸಂಗಮವಾಗಿದ್ದು ವಿಶ್ವಕ್ಕೆ ಭಾವೈಕ್ಯತೆಯ ಸಂದೇಶ ನೀಡುವುದಕ್ಕದರೂ ಬಿಜೆಪಿಯವರು ಟಿಪ್ಪು ಜಯಂತಿ ಆಚರಿಸಲು ಸಹಕರಿಸಬೇಕು ಎಂದು ಜಿಲ್ಲಾ ಖಾದಿ ಬೋರ್ಡ್ ಮಾಜಿ ಅಧ್ಯಕ್ಷ ಸೈಯದ್ ಜಬೀಉಲ್ಲಾ ತಿಳಿಸಿದರು. ಹುಳಿಯಾರಿನ ಶನಿವಾರ ಸರಳವಾಗಿ ಏರ್ಪಡಿಸಿದ್ದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶದ ಜಾತ್ಯತೀತ ಮೌಲ್ಯಗಳು ಹಾಗೂ ಬಹುಸಂಸ್ಕೃತಿಯನ್ನು ಕಾಪಾಡುವ ನಿಟ್ಟಿನಲ್ಲಿ ರಾಷ್ಟ್ರೀಯ ಭಾವೈಕ್ಯತೆ, ಸಹಬಾಳ್ವೆ ಹಾಗೂ ಸೌಹಾರ್ದತೆ ಪ್ರತಿಯೊಬ್ಬರ ಉಸಿರಾಗಬೇಕು. ಆದರೆ ಬಿಜೆಪಿಯವರು ಟಿಪ್ಪು ಜಯಂತಿ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಜಾತಿ, ಧರ್ಮದ ನಡುವೆ ಸಾಮರಸ್ಯ ಕದಡುತ್ತಿದ್ದಾರೆ ಎಂದು ಆಪಾದಿಸಿದರಲ್ಲದೆ ಬಸವಣ್ಣ, ಕನಕ, ವಾಲ್ಮೀಕಿ ಸಮುದಾಯದವರು ಕೇಳಿದಂತೆ ಮುಸ್ಲಿಂ ಸಮುದಾಯ ಟಿಪ್ಪು ಜಯಂತಿ ಕೇಳಿದ್ದಾರೆ. ಸರ್ವರಿಗೂ ಸಮಬಾಳು, ಸಮಪಾಲು ಎನ್ನುವುದು ಸಂವಿಧಾನ ಆಶಯವಾಗಿದ್ದು ಅದರಂತೆ ಟಿಪ್ಪು ಜಯಂತಿ ಆಚರಿಸುವುದರಲ್ಲಿ ತಪ್ಪೇನಿದೆ…
ಮದ್ದೂರು: ವಿರೋಧದ ನಡುವೆಯೂ ತಾಲ್ಲೂಕು ಆಡಳಿತದ ವತಿಯಿಂದ ಜಾಮೀಯಾ ಶಾದಿ ಮಹಲ್ ನಲ್ಲಿ ಟಿಪ್ಪು ಜಯಂತಿ ಆಚರಣೆ ನಡೆಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ರವರು ಮಾತನಾಡಿ ಕೆ ಆರ್ ಎಸ್ ಜಲಾಶಯಕ್ಕೆ ಮೊದಲು ಯೋಜನೆ ರೂಪಿಸಿದ್ದು ಟಿಪ್ಪು ಸುಲ್ತಾನ್ ಆದರೆ ಅದು ಕಾರ್ಯ ರೂಪಕ್ಕೆ ಬರಲಿಲ್ಲ ನಂತರ ಕೃಷ್ಣ ರಾಜ ಒಡೆಯರ್ ಅವರು ತಮ್ಮ ಒಡವೆಗಳನ್ನು ಬಾಂಬೆಯಲ್ಲಿ ಅಡವಿಟ್ಟು ಜಲಾಶಯ ನಿರ್ಮಿಸಿದರು ಟಿಪ್ಪು ಹಿಂದೂಗಳ ವಿರೋಧಿಯಾಗಿದ್ದರೆ ಮೇಲುಕೋಟೆ ನಂಜನಗೂಡು ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿ ದೇವಾಲಯಕ್ಕೆ ಸಾಕಷ್ಟು ಪ್ರಮಾಣದಲ್ಲಿ ಹಣ ಆಭರಣಗಳನ್ನು ಯಾಕೆ ನೀಡಬೇಕಿತ್ತು ಎಂದರು ನಂತರ ಪಾಪುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು ಈ ರಕ್ತವನ್ನು ಬೆಂಗಳೂರಿನ ಆದಿ ಚುಂಚನಗಿರಿ ಮಠದ ಆಸ್ಪತ್ರೆಗೆ ನೀಡಲಾಗುವುದು ಎಂದು ಪುರಸಭಾ ಸದಸ್ಯ ಆದಿಲ್ ಆಲಿ ಖಾನ್ ತಿಳಿಸಿದರು. ಇದೇ ಸಂದರ್ಭದಲ್ಲಿ ಐದು ಮಂದಿ…
ತುಮಕೂರು: ಹಾವು ಎಂದರೆ ಯಾರಿಗೆ ತಾನೇ ಭವವಿಲ್ಲ ಹೇಳಿ. ಆದರೆ ಈ ಮಹಿಳೆ ಮಾತ್ರ ಕುಡಿದ ಅಮಲಿನಲ್ಲಿ ಮಹಿಳೆಯೊಬ್ಬಳು ಹಾವಿನೊಂದಿಗೆ ಚೆಲ್ಲಾಟವಾಡಿದ್ದಾಳೆ. ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕು ಜೆಟ್ಟಿ ಅಗ್ರಹಾರ ಗ್ರಾಮದಲ್ಲಿ ಇಂಥಹದ್ದೊಂದು ಘಟನೆ ನಡೆದಿದೆ. ಸುಶೀಲಮ್ಮಾ ಎಂಬ ಮಹಿಳೆಯೇ ಹಾವಿನೊಂದಿಗೆ ಆಟವಾಡಿದ ಮಹಿಳೆ. ಗ್ರಾಮದಲ್ಲಿ ಹಾವು ಕಂಡ ವಿಚಾರದ ಬಗ್ಗೆ ಜನರು ಮಾತನಾಡಿದ್ದಾರೆ. ಆ ಮಾತು ಕೇಳಿಸಿಕೊಂಡು ಹೋದ ಸುಶೀಲಮ್ಮ ಹಾವನ್ನು ಹಿಡಿದು, ಕೊರಳಿಗೆ ಹಾಕೊಂಡು ಸರಸವಾಡಿದ್ದಾಳೆ. ಈ ಘಟನೆ ಕೆಲ ಕಾಲ ನೆರೆದ ಜನರ ವಿಸ್ಮಯಕ್ಕೆ ಕಾರಣವಾಗಿತ್ತು. ವಿಷ ಪೂರಿತ ಹಾವಲ್ಲದಿದ್ದರಿಂದ ಕಚ್ಚಲಿಲ್ಲ ಹಾವನ್ನು ಸಾಯಿಸಿ ಸುಡುತ್ತೇನೆ ಇಲ್ಲವಾದರೆ ಕಾಡಿಗೆ ಬಿಡುತ್ತೇನೆ ತಿನ್ನುವುದಿಲ್ಲ ಎಂದು ಪಾನಮತ್ತ ಮಹಿಳೆ ಹೇಳುತ್ತಿದ್ದರು ಜನತೆ ಇದನ್ನು ನೊಡುತ್ತ ವಿಸ್ಮಿತರಾಗಿದ್ದರು.
ಬೆಂಗಳೂರು: ರಾಜ್ಯದ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಉಪ ಚುನಾವಣೆಯಿಂದಾಗಿ ಮುಂದೂಡಲ್ಪಟ್ಟಿದ್ದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನವೆಂಬರ್ 15 ರಂದು ಆಯೋಜಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ನವೆಂಬರ್ 1 ರಂದು ನಡೆಯಬೇಕಿದ್ದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಐದು ಕ್ಷೇತ್ರಗಳ ಉಪ ಚುನಾವಣಾ ನೀತಿ ಸಂಹಿತೆ ಬಿಸಿ ತಟ್ಟಿದ್ದರಿಂದ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುಂದೂಡಲಾಗಿತ್ತು. ಇದೀಗ ನೀತಿ ಸಂಹಿತೆ ಅವಧಿ ಪೂರ್ಣಗೊಂಡಿದ್ದು ನವೆಂಬರ್ 15 ರಂದು ಸಮಾರಂಭ ನಡೆಸಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲು ನಿರ್ಧರಿಸಲಾಗಿದೆ. ಇದು 63 ನೇ ಕನ್ನಡ ರಾಜ್ಯೋತ್ಸವ ಆದ ಕಾರಣ ಕಲೆ, ಸಾಹಿತ್ಯ, ರಂಗಭೂಮಿ, ಸಮಾಜಸೇವೆ, ಕ್ರೀಡೆ, ಸಿನಿಮಾ, ಪತ್ರಿಕೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ 63 ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಹಾಸನ: ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ನೀಡುವ ಪ್ರಸಿದ್ಧ ಹಾಸನಾಂಬೆ ದರ್ಶನಕ್ಕೆ ಇಂದು ಅಧಿಕೃತ ತೆರೆ ಬಿದ್ದಿದ್ದು, 9 ದಿನದ ದರ್ಶನಕ್ಕೆ ಇಂದು ಸಂಪೂರ್ಣ ತೆರೆ ಬಿದ್ದಿದೆ. ನವೆಂಬರ್ 1 ರಿಂದ ಪ್ರಾರಂಭವಾಗಿ ಒಂಬತ್ತು ದಿನಗಳ ಕಾಲ ಹಾಸನಾಂಬೆ ದೇಗುಲದ ಬಾಗಿಲು ತೆರೆದು ಭಕ್ತಾದಿಗಳಿಗೆ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಈ ಬಾರಿ ವ್ಯವಸ್ಥೆ ಉತ್ತಮವಾಗಿದೆ ಎಂದು ಹೇಳಲಾಯಿತಾದರೂ ಭಕ್ತಾದಿಗಳ ಆಗಮನ ಕಳೆದ ವರ್ಷಕ್ಕಿಂತಲೂ ಕಡಿಮೆಯೇ ಇತ್ತು. ಒಂಬತ್ತು ದಿನಗಳ ವರೆಗೆ ನಡೆದ ಉತ್ಸವದಲ್ಲಿ ಒಟ್ಟು 12 ಲಕ್ಷಕ್ಕೂ ಮಿಕ್ಕಿ ಜನರು ಹಾಸನಾಂಬೆ ದರ್ಶನ ಮಾಡಿದ್ದಾರೆ ಎಂದು ಜಿಲ್ಲಾ ಆಡಳಿತ ಹೇಳಿದೆ. ಅಂತೆಯೇ ಕಾಣಿಕೆ ಸಂಗ್ರಹದಲ್ಲಿಯೂ ಈ ಬಾರಿ ಕಡಿಮೆ ಆಗಿದೆ ಎನ್ನಲಾಗಿದೆ. ಕಾಣಿಕೆ ಹಣ ಎಣಿಸುವ ಕಾರ್ಯ ಚಾಲ್ತಿಯಲ್ಲಿದೆ. ಪ್ರತಿಬಾರಿಯಂತೆ ಈ ಬಾರಿಯೂ ಗಣ್ಯರಿಗೆ ವಿಶೇಷ ಪಾಸ್ ವ್ಯವಸ್ಥೆ ಮತ್ತು ವಿಶೇಷ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ವಿಶೇಷ…
ಚಿಕ್ಕನಾಯಕನಹಳ್ಳಿ : ಸಹಕಾರದ ಮೂಲತತ್ವವೇ ನಂಬಿಕೆ, ನಂಬಿಕೆಯಿಂದಲೇ ಎಲ್ಲಾ ಕೆಲಸಗಳು ಸುಗಮವಾಗಿ ನಡೆಯುವುದು ಎಂದು ಕನಕ ಗುರುಪೀಠ ಹೊಸದುರ್ಗ ಶಾಖಾಮಠದ ಈಶ್ವರಾನಂದಪುರಿಸ್ವಾಮೀಜಿ ಹೇಳಿದರು. ಪಟ್ಟಣದ ಸರ್ಕಾರಿ ನೌಕರರ ಸಂಘದ ಮೊದಲನೇ ಮಹಡಿಯ ಕಛೇರಿಯಲ್ಲಿ ಪ್ರಾರಂಭಗೊಂಡ ಶ್ರೀ ಕನಕಲಕ್ಷ್ಮೀ ಪತ್ತಿನ ಸಹಕಾರ ಸಂಘದ ಕಾರ್ಯಕ್ರಮದಲ್ಲಿ ದಿವ್ಯಸಾನಿದ್ಯ ವಹಿಸಿ ಮಾತನಾಡಿದ ಅವರು, ಗ್ರಾಹಕರು ನಂಬಿಕೆ ಇಟ್ಟು ಸಹಕಾರ ಸಂಘಗಳಿಗೆ ಹಣವನ್ನು ಇಡುತ್ತಾರೆ, ಅವರು ನೀಡಿರುವ ಹಣವನ್ನು ಸುರಕ್ಷಿತವಾಗಿ ಕಾಪಾಡಬೇಕು, ಶ್ರೀ ಕನಕಲಕ್ಷ್ಮೀ ಪತ್ತಿನ ಸಹಕಾರ ಸಂಘದ ಎಲ್ಲಾ ನಿರ್ದೇಶಕರು ಅದರ ಜವಬ್ದಾರಿ ಹೊರಬೇಕು, ಸಂಘವನ್ನು ಉತ್ತಮವಾಗಿ ಬೆಳೆಸಿಕೊಂಡು ಹೋಗಬೇಕು ಎಂದರು. ಸಂಘದ ಪ್ರವಕರ್ತಕರು ಇತರೆ ಅಭಿವೃದ್ದಿ ಹೊಂದಿರುವ ಬ್ಯಾಂಕ್ಗಳ ವಹಿವಾಟನ್ನು ಪರಿಗಣಿಸಿ, ಯಾವ ರೀತಿ ವರ್ಷಾನುಗಟ್ಟಲೆ ಬ್ಯಾಂಕ್ ನಡೆಸಿ, ವ್ಯವಹಾರ ಮಾಡಿ ಅಭಿವೃದ್ದಿಯಾಗಿದ್ದಾರೆ ಎಂಬುದನ್ನು ತಿಳಿಯಿರಿ ಎಂದ ಅವರು, ಆರಂಭವಾಗುತ್ತಿರುವ ಬ್ಯಾಂಕ್ ಸಮಾಜದ್ದಾಗಿದೆ ಇಲ್ಲಿ ಸಂಬಂಧಿಕರನ್ನು ಸೇರಿಸಬೇಡಿ, ಕೆಲವು ಸಂಘಗಳಲ್ಲಿ…