Author: News Desk Benkiyabale

ತುಮಕೂರು: ಸ್ತನ ಕ್ಯಾನ್ಸರ್ ಎಂಬುದು ಸ್ತನ ಜೀವಕೋಶಗಳಲ್ಲಾಗುವ ಅನಿಯಂತ್ರಿತ ಬೆಳವಣಿಗೆ ಯಾಗಿದ್ದು, ಆರಂಭಿಕ ಪತ್ತೆ ಹಾಗೂ ಸೂಕ್ತ ಚಿಕಿತ್ಸೆಯಿಂದ ಇದನ್ನು ಗುಣಪಡಿಸಬಹುದು ಎಂದು ಬೆಂಗಳೂರಿನ ಅಪೋಲೋ ಆಸ್ಪತ್ರೆಯ ಅಂತರಾಷ್ಟ್ರೀಯ ಖ್ಯಾತಿಯ ಸ್ತನ ಕ್ಯಾನ್ಸರ್ ತಜ್ಞೆ ಡಾ. ಜಯಂತಿ ಅವರು ಅಭಿಪ್ರಾ ಯಪಟ್ಟರು. ತುಮಕೂರಿನ ಚಿಕ್ಕಪೇಟೆಯ ಸುಪ್ರಸಿದ್ಧ ವೈದಿಕ ವಿದ್ವಾಂಸರಾಗಿದ್ದ ದಿವಂಗತ ಸಭಾಮುದ್ರೆ ಶಾಮಣ್ಣರವರ ಮೊಮ್ಮಗಳಾದ ಡಾ. ಜಯಂತಿ ಅವರು ತುಮಕೂರಿನ ಎಂ.ಜಿ.ರಸ್ತೆಯ ಮಹಿಳಾ ಸಮಾಜದಲ್ಲಿ ಮಹಿಳಾ ಸಮಾಜ ಟ್ರಸ್ಟ್ ವತಿಯಿಂದ ಮಾರ್ಚ್ ೨೩ ರಂದು ಏರ್ಪಟ್ಟಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾ ಚರಣೆಯನ್ನು ಉದ್ಘಾಟಿಸಿ, ‘ಸ್ತನ ಕ್ಯಾನ್ಸರ್ ಬಗ್ಗೆ ಮುಂಜಾಗ್ರತೆ ಹಾಗೂ ವೈದ್ಯಕೀಯ ಸಲಹೆಗಳು’ ಕುರಿತು ಮಾತನಾಡುತ್ತಿದ್ದರು. ಕಂಕುಳು ಅಥವಾ ಸ್ತನದ ಭಾಗದಲ್ಲಿ ನೋವಿಲ್ಲದ ಊತ, ಗಡ್ಡೆ ಬೆಳೆಯುವುದು, ಸ್ರನದ ಆಕಾರ, ಗಾತ್ರದಲ್ಲಿ ಗಮನಾರ್ಹ ವ್ಯತ್ಯಾಸ, ನಿಪ್ಪಲ್‌ನಲ್ಲಿ ದ್ರವರೂಪದ ಸ್ರಾವ, ಊತ, ಸ್ತನ ಅಥವಾ ತೊಟ್ಟಿನಲ್ಲಿ ನೋವು, ಚರ್ಮದ ಬದಲಾವಣೆ ಸ್ತನ ಕ್ಯಾನ್ಸರ್‌ನ ಮುಖ್ಯ ಲಕ್ಷಣಗಳಾಗಿವೆ. ಅನುವಂಶಿಕತೆ, ಮಿತಿಮೀರಿದ ತೂಕ, ಬೊಜ್ಜು, ವ್ಯಾಯಾಮರಹಿತ…

Read More

ತುಮಕೂರು: ಕನ್ನಡ ಸಾಹಿತ್ಯದ ಸಾವಿರಾರು ವರ್ಷಗಳ ಪರಂಪರೆಯಲ್ಲಿ ೧೨ನೇ ಶತಮಾನದ ಶರಣ ಶರಣೆಯರು ನುಡಿದ ವಚನಗಳು, ಕೇವಲ ನಾಲಿಗೆಯಿಂದ ಹೊರಬಂದ ಪದಗಳಲ್ಲ, ಕೇವಲ ಶಬ್ಧಗಳಲ್ಲ, ಜೀವನದಲ್ಲಿ ಕಂಡು0ಡ, ಸಾಂಸಾರಿಕ ಬದುಕಿನೊಂದಿಗೆ ಅನುಭವಿಸಿ ಪಕ್ವಗೊಂಡು ಹೊರಬಂದ ಅಂತರAಗದ ಅಮೃತ ಬಿಂದುಗಳು ಎಂದು ನಿವೃತ್ತ ಉಪನ್ಯಾಸಕರು, ಶ್ರೀ ಪತಂಜಲಿ ಯೋಗಶಿಕ್ಷಣ ಸಮಿತಿಯ ಯೋಗತಜ್ಞರೂ ಆದ ಶರಣ ಸೋಮಶೇಖರ ಶೀಲವಂತಣ್ಣನವರು ಅಭಿಪ್ರಾಯಪಟ್ಟರು. ಅವರು ತುಮಕೂರು ಜಿಲ್ಲಾ, ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು, ಜಿಲ್ಲಾ ಕದಳಿ ಮಹಿಳಾ ವೇದಿಕೆ, ಎಸ್.ಎಸ್.ಪುರಂನ ಎಸ್.ಪಿ.ವೈ.ಎಸ್.ಎಸ್. ಗ್ಲೋಬಲ್ ಪೀಸ್ ಸಭಾಂಗಣದಲ್ಲಿ ನಡೆದ ಜಿ.ಗವಿಸಿದ್ದಯ್ಯನವರ ನೂತನ ದತ್ತಿ, ಲಿಂ. ಎನ್.ಎಸ್.ಮಾಲಿಸಿ, ಲಿಂ. ಅಡವಮ್ಮ, ಲಿಂ. ಗುರುವಯ್ಯ ಸಂಸ್ಮರಣಾ ದತ್ತಿ ಪ್ರಯುಕ್ತ ಪರಮಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ಸಂಸ್ಮರಣೆಯ ೭೦ನೆಯ ಮಾಸಿಕ ಶರಣ ಚಿಂತನ ಗೋಷ್ಠಿ, ವಚನ ಗಾಯನ ಕಾರ್ಯಕ್ರಮದಲ್ಲಿ `ಶರಣರ ವಚನಗಳಲ್ಲಿ ಸಾಮಾಜಿಕ ಮೌಲ್ಯಗಳು” ಎಂಬ ವಿಷಯವಾಗಿ ಮಾತನಾಡುತ್ತಾ, ಅಂದಿನ ಶರಣರು ಆಡಂಬ ರದಿಂದ ದೂರವಿದ್ದವರು. ಸಾಂಸಾರಿಕ ಕಷ್ಟ,…

Read More

ತುಮಕೂರು: ವಿಜ್ಞಾನದ ಜೊತೆ ಸಾಹಿತ್ಯಿಕ ಮನೋಭಾವ ನೆಯನ್ನು ಬೆಳೆಸಿಕೊಳ್ಳಬೇಕು ಮತ್ತು ಒಬ್ಬ ಉತ್ತಮ ವಿಜ್ಞಾನ ವಿದ್ಯಾರ್ಥಿ ಯಾಗಬೇಕಾದರೆ ಸಾಹಿತ್ಯದ ಅರಿವಿರುವುದು ಅತ್ಯಗತ್ಯ ಎಂದು ನ್ಯಾಷನಲ್ ಅಕಾಡೆಮಿ ಫಾರ್ ಲರ್ನಿಂಗ್ ಆರ್.ಆರ್. ಇನ್ಸಿ÷್ಟಟ್ಯೂಷನ್ ನಿರ್ದೇಶಕರಾದ ಪ್ರೊಫೆಸರ್ ಗುರುರಾಜ್ ಎಸ್. ತಿಳಿಸಿದರು. ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನ ಐಕ್ಯೂಎಸ್‌ಸಿ ಮತ್ತು ಇಂಗ್ಲಿಷ್ ವಿಭಾಗದ ಸಹಯೋಗದಲ್ಲಿ ಮಾ. ೨೪ ಮಂಗಳವಾ ರದಂದು ಹಮ್ಮಿಕೊಂಡಿದ್ದ “ಸಾಹಿತ್ಯ ಮತ್ತು ವೈಜ್ಞಾನಿಕ ಪ್ರಜ್ಞೆ” ವಿಷಯದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಉನ್ನತ ವ್ಯಾಸಂಗಕ್ಕಾಗಿ ಹೆಚ್ಚಿನ ವಿದ್ಯಾರ್ಥಿಗಳು ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊ ಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತ ಸಂವಿಧಾನದ ಎಂಟನೇ ಮೂಲಭೂತ ಕರ್ತವ್ಯವಾದ ವೈಜ್ಞಾನಿಕ ಮನೋಭಾವನೆ ಮತ್ತು ಪ್ರಜ್ಞೆಯನ್ನು ಬೆಳೆಸಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ೧೯೨೮ರಲ್ಲಿ ಸಿ.ವಿ. ರಾಮನ್ ಅವರು ನೊಬೆಲ್ ಪ್ರಶಸ್ತಿ ಪಡೆದ ನಂತರ, ಕಳೆದ ನೂರು ವರ್ಷಗಳಲ್ಲಿ ಮತ್ತೊಬ್ಬರು ಆ ಸಾಧನೆ ಮಾಡಲು ಸಾಧ್ಯವಾಗದಿರಲು ನಮ್ಮಲ್ಲಿರುವ ವೈಜ್ಞಾನಿಕ ಜ್ಞಾನದ ಮೂಲ ಕೊರತೆಯೇ…

Read More

ತುಮಕೂರು: ನಗರದ ಟೌನ್‌ಹಾಲ್ ಮುಂಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆಯ ಬಳಿ, ಶ್ರೀಲಕ್ಷಿö್ಮದೇವಿ ಟ್ರಸ್ಟ್(ರಿ), ಜಯಪುರ ಬಡಾವಣೆಯ ನಾಗರಿಕರು ಮಾ.೨೫ ರಂದು ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ನಡೆಯುವ ನ್ಯಾ.ನಾಗಮೋಹನ್ ದಾಸ್ ವರದಿ ತಿರಸ್ಕರಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಯುವ ವಕೀಲರು ಹಾಗೂ ಛಲವಾದಿ ಮಹಾಸಭಾ ರಾಜ್ಯ ಸಂಘಟನಾ ಸಂಚಾಲಕರಾದ ಟಿ.ಆರ್.ನಾಗೇಶ್ ಅವರ ನೇತೃತ್ವದಲ್ಲಿ ಜಯಪುರ ಬಡಾವಣೆಯ ಯುವ ಕರು ಪರಸ್ವರ ಕೈ ಹಿಡಿದು,ಸರಕಾರದ ನಡೆಯನ್ನು ಖಂಡಿಸಿ, ನ್ಯಾ.ನಾಗಮೋಹನ್‌ದಾಸ್ ವರದಿಯನ್ನು ತಿರಸ್ಕರಿಸುವಂತೆ ಒತ್ತಾಯಿಸಿ, ಘೋಷಣೆ ಕೂಗಿದರು. ಈ ವೇಳೆ ಮಾತನಾಡಿದ ವಕೀಲರಾದ ಟಿ.ಆರ್. ನಾಗೇಶ್, ನ್ಯಾ.ನಾಗಮೋಹನ್‌ದಾಸ್ ನೀಡಿರುವ ವರದಿ ಅತ್ಯಂತ ಅವೈಜ್ಞಾನಿಕವಾಗಿದ್ದು, ದೋಷಪೂರಿಕ ಮತ್ತು ಪಕ್ಷ ಪಾತದಿಂದ ಕೂಡಿದೆ.ಗೊಂದಲ ಬಗೆಹರಿಸುವ ಬದಲು, ಹೊಲಯ ಸಮುದಾಯದ ತಲೆಯ ಮೇಲೆ ಚಪ್ಪಡಿ ಕಲ್ಲು ಎಳೆಯುವ ಪ್ರಯತ್ನವನ್ನು ಮಾಡಿದೆ.ಒಳಮೀಸಲಾತಿಯೂ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ೧೦೧ ಜಾತಿಗಳಿಗೆ ಸಮಾನವಾಗಿ ಹಂಚಿಕೆಯಾಗಬೇಕಾದರೆ ಮೀಸಲಾತಿಯ ಪ್ರಮಾಣ ಹೆಚ್ಚಾಗಬೇಕು.ಸರಕಾರ ಕೇವಲ ೧ ಜಾತಿಯ ಒತ್ತಡಕ್ಕೆ ಮಣಿದು ಶೇ೧೫ರ ಮೀಸಲಾತಿಯಲ್ಲಿಯೇ ಒಳಮೀಸಲಾತಿ ಜಾರಿಗೊಳಿಸಲು…

Read More

ತುಮಕೂರು: ಇಂದಿನ ಕನ್ನಡ ಸಾಹಿತ್ಯ ವಲಯದಲ್ಲಿ ಅಸಹನೆ ವರ್ಗ ತಾರತಮ್ಯ ಅಸೂಯೆ ಗುಂಪುಗಾರಿಕೆ ಅಧಿಕಾರದ ಓಲೈಸುವಿಕೆ ರಾಜಕಾರಣ ಪ್ರಶಸ್ತಿ ಪುರಸ್ಕಾರದ ವಾಂಛೆ ಇಂದಿನ ಸಾಹಿತ್ಯವಲಯದ ವಾತಾವರಣವನ್ನು ಅಸಹನೀಯಗೊಳಿಸಿವೆ ಸಾಹಿತ್ಯವಲಯ ಎಡಪಂಥ, ಬಲಪಂಥ ಎಂದು ಎರಡು ವಿಭಿನ್ನ ವರ್ಗಗಳಲ್ಲಿ ಗುರುತಿಸಿ ಕೊಂಡಿದೆ ಒಬ್ಬ ಬರಹಗಾರ ಈ ಯಾವುದಾದರೂ ಗುಂಪಿನೊ ಂದಿಗೆ ಗುರುತಿಸಿಕೊಂಡಲ್ಲಿ ಮಾತ್ರ ತನ್ನದೇ ಆದ ಐಡೆಂಟಿಟಿ ಹೊಂದಲು ಸಾಧ್ಯ ಎನ್ನುವ ವಾತಾವರಣ ಸಾಹಿತ್ಯ ಕ್ಷೇತ್ರದಲ್ಲಿ ನಿರ್ಮಾಣವಾಗಿದೆ ಎಂದು ಇತಿಹಾಸ ಸಂಶೋಧಕ ಡಾ. ಡಿ.ಎನ್.ಯೋಗೀಶ್ವರಪ್ಪ ಅಭಿಪ್ರಾಯಪಟ್ಟರು. ಅವರು ನಗರದ ಶ್ರೀ ಸಿದ್ಧಗಂಗಾ ಬಿಇಡಿ ಕಾಲೇಜಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಪ್ರೊ. ಬಿ. ವೀರಭದ್ರಯ್ಯ ಮಂಗಳಮ್ಮ ಮತ್ತು ವಿಶ್ವಸ್ತ ದತ್ತಿ ಉಪನ್ಯಾಸದಲ್ಲಿ ಇಂದಿನ ಸಾಹಿತ್ಯವಲಯ ಕುರಿತು ಮಾತನಾಡಿದರು. ಪ್ರತಿ ಗುಂಪಿಗೂ ಬರೆಯಲು ಅವರದೇ ಆದ ಅಜೆಂಡಾಗಳಿವೆ ಅಂಥದ್ದೊ0ದು ಸ್ಥಾಪಿತ ಅಜೆಂಡಾದ ಚೌಕಟ್ಟಿನಲ್ಲೇ ಬರೆಯ ಬೇಕಾದ ಅನಿವಾರ್ಯತೆ ಬರಹಗಾರನದು. ಒಂದು ಗುಂಪಿನ ಬರಹಗಾರನ ವಿರುದ್ಧ ಇನ್ನೊಂದು ಗುಂಪಿನವರು ಕತ್ತಿಮಸೆಯುತ್ತಾರೆ. ಇಂತಹ ವಾತಾವರಣದಲ್ಲಿ ಪರಭಾಷೆಗಳ…

Read More

ತುರುವೇಕೆರೆ: ತಾಲೂಕಿನ ಬಿ.ಸಿ.ಕಾವಲ್ ರ‍್ವೆ ನಂ 1 ರಲ್ಲಿ ನಕಲಿ ದಾಖಲಾತಿಗಳನ್ನು ಸೃಷ್ಟಿ ಮಾಡಿರುವ ಅಧಿಕಾರಿಗಳು ಹಾಗೂ ಭೂ ಮಾಫಿಯಾ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ರ‍್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ರ‍್ನಾಟಕ ದಲಿತ ಸಂರ‍್ಷ ಸಮಿತಿ (ಬಿ.ಕೃಷ್ಣಪ್ಪ ಸ್ಥಾಪಿತ) ವತಿಯಿಂದ ಪಟ್ಟಣದಲ್ಲಿ ರಸ್ತೆ ತಡೆ ನಡೆಸಿ ಸೋಮವಾರ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾಕಾರರು ಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಆಗಮಿಸಿ ಬಾಣಸಂದ್ರ ವೃತ್ತದಲ್ಲಿ ಕೆಲ ಕಾಲ ಮಾನವ ಸರಪಳಿ ನರ‍್ಮಿಸಿ ಘೋಷಣೆ ಕೂಗಿದರು. ನಂತರ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಕೈಗೊಂಡರು. ರ‍್ನಾಟಕ ದಲಿತ ಸಂರ‍್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ದಂಡಿನಶಿವರ ಕುಮಾರ್ ಮಾತನಾಡಿ, ತಾಲೂಕಿನ ದಂಡಿನಶಿವರ ಹೋಬಳಿ ಬಿ.ಸಿ. ಕಾವಲ್ ರ‍್ವೆ ನಂ 1 ರಲ್ಲಿ ಹಲವು ದಶಕಗಳಿಂದ ಸ್ಥಳೀಯ ರೈತರು ತಾತ, ಮುತ್ತಾತಂದಿರ ಕಾಲದಿಂದ ಉಳುಮೆ ಮಾಡಿಕೊಂಡು, ಬೆಳೆ ಬೆಳೆದು ಜೀವನ ಸಾಗಿಸುತ್ತಿದ್ದಾರೆ. ರ‍್ಕಾರದಿಂದ ಸಾಗುವಳಿ ಚೀಟಿ ಪಡೆದಿದ್ದಾರೆ. ಆದರೂ ಕೆಲವು…

Read More

ತುರುವೇಕೆರೆ: ಪಟ್ಟಣದ ಇತಿಹಾಸ ಪ್ರಸಿದ್ದ ಬೇಟರಾಯ ಸ್ವಾಮಿ ಸ್ವಾಮಿ ಬ್ರಹ್ಮ ರಥೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿ0ದ ಸೋಮವಾರ ನಡೆಯಿತು. ರಥೋತ್ಸವದ ಅಂಗವಾಗಿ ಸೋಮವಾರ ಬೆಳಿಗ್ಗೆಯಿಂದಲೇ ಮಹಾಲಕ್ಷ್ಮೀ ಬೇಟರಾಯಸ್ವಾಮಿಗೆ ವಿಶೇಷ ಅಭಿಷೇಕ, ವಿವಿದ ಹೂ ಅಲಂಕಾರದಿ0ದ ಅಲಂಕರಿಸಿ ಹಲವು ಪೂಜೆ ನೆರವೇರಿಸಿ ದಾರ್ಮಿಕ ವಿಧಿ ವಿದಾನ ನೆಡೆಸಿದರು. ನಂತರ ನೆರೆಯ ದೇವರಾದ ಬೇಟರಾಯಸ್ವಾಮಿಯನ್ನು ಉತ್ಸವದ ಮೂಲಕ ಕರೆ ತಂದು ರಥಕ್ಕೆ ಕುರಿಸಿ ಮಹಾ ಮಂಗಾಳಾರತಿ ಮಾಡಲಾಯಿತು.. ರಥಕ್ಕೆ ಎಡೆ ಅನ್ನ ನೈವೇದ್ಯ ಪೂಜೆ ನೆರವೇರಿಸಿದ ನಂತರ ಆಕಾಶದಲ್ಲಿ ಗರಡು ದರ್ಶನ ನೀಡಿದ ನಂತರ ಭಕ್ತರು ಬಹಳ ಬಿರು ಬಿಸಲನ್ನು ಲೆಕ್ಕಿಸದೆ ಉತ್ಸಾಹದಿಂದ ರ ಥವನ್ನು ಎಳೆದರು. ಭಕ್ತ ಸಮೂಹ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಮಾಡಿಕೊಂಡಿದ್ದ ಹರಕೆ ತೀರಿಸಿದರು. ರಥಕ್ಕೆ ಹೂವು, ದವನ, ಬಾಳೆಹಣ್ಣು ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು. ರ ಥೋತ್ಸವಕ್ಕೂ ಮುನ್ನಾ ಭಾರತೀಯ ಸಂಪ್ರದಾಯಿಕ ಉಡುಪು ದರಿಸಿದ್ದ ಮಹಿಳೆಯರಿಂದ ಕೋಲಾಟ, ಭಜನಾ ಕಾರ್ಯಕ್ರಮ ವಾದ್ಯಗೋಷ್ಟಿಗಳು ಭಕ್ತರ ಗಮನ ಸೆಳೆಯಿತು.…

Read More

ತುಮಕೂರು: ಶುಶ್ರೂಷಕಿಯರ ಕೆಲಸ ಜಗತ್ತಿನಲ್ಲೇ ಬಹಳ ಅತ್ಯುತ್ತಮವಾದ ಕೆಲಸವಾಗಿದೆ, ಶುಶ್ರೂಷಕಿಯರು ನೀಡುವ ನಿಸ್ವಾರ್ತ ಸೇವಾಮನೋಭಾವ ಎಲ್ಲರೂ ಮೆಚ್ಚುವಂತಹ ಕೆಲಸವಾಗಿದೆ ಎಂದು ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಟ್ರಷ್ಟಿಗಳಾದ ಶ್ರೀಮತಿ ಕನ್ನಿಕಾ ಪರಮೇಶ್ವರಿಯವರು ತಿಳಿಸಿದರು. ನಗರದ ಹೊರವಲಯದ ಅಗಲಕೋಟೆಯ ಶ್ರೀ ಸಿದ್ಧಾ ರ್ಥ ವೈದ್ಯಕೀಯ ಮಹಾವಿದ್ಯಾಲಯದ ಡಾ. ಹೆಚ್.ಎಂ ಗಂಗಾದರಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಲಾಗಿದ್ದ ಶ್ರೀ ಸಿದ್ಧಾರ್ಥ ನರ್ಸಿಂಗ್ ಕಾಲೇಜಿನ ಘಟಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಶುಶ್ರೂಷಕಿಯರು ಪ್ರತಿನಿತ್ಯ ಅಧ್ಯಯನವನ್ನು ಮಾಡುತ್ತಾ ತಮ್ಮ ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆಗಳ ಬಗ್ಗೆ ಅರಿಯುತ್ತಿರಬೇಕು. ತಮ್ಮ ಕೌಶಲ್ಯಗಳನ್ನು ಉತ್ತಮಗೊಳಿಸಿಕೊಳ್ಳುತ್ತಿರಬೇಕು. ಒಬ್ಬ ರೋಗಿ ಗುಣಮುಖವಾಗಲು ಶುಶ್ರೂಷಕಿಯ ಪಾತ್ರ ಬಹಳಾ ಮುಖ್ಯವಾಗಿರುತ್ತದೆ. ಶ್ರುಶ್ರೂಷಕಿಯರು ಮಾನವೀಯ ಗುಣಗಳನ್ನು ಬೆಳೆಸಿಕೊಂಡು ರೋಗಿಗಳಿಗೆ ಉತ್ತಮ ಸೇವೆಯನ್ನು ನೀಡಿದಾಗ ಮಾತ್ರ ತಾವು ಮಾಡುತ್ತಿರುವ ಕೆಲಸಕ್ಕೆ ಒಂದು ಬೆಲೆ ಸಿಕ್ಕಂತಾಗುತ್ತದೆ. ಶುಶ್ರೂಷಕಿಯರಿಗೆ ರೋಗಿಯೊಂದಿಗೆ ಉತ್ತಮ ಸಂವಹನ ನಡೆಸಲು ನಾಲ್ಕೆöÊದು ಭಾಷೆಯ ಅರಿವಿರಬೇಕು. ಇದರಿಂದ ರೋಗಿಯೊಂದಿಗೆ ಸ್ನೇಹ ಸಂಬ0ದ ಉತ್ತಮವಾಗಿ ರೋಗಿಯು ಗುಣಮುಖನಾಗುತ್ತಾನೆ ಎಂದು ತಿಳಿಸಿದರು. ಮುಖ್ಯ ಅಥಿತಿಗಳಾದ…

Read More

ತುಮಕೂರು: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವ ಹಿಸುತ್ತಿರುವ ಪೌರ ಕಾರ್ಮಿಕರಿಗೆ ಶೂ, ಕೈಗವಸು, ಮಾಸ್ಕ್ನ್ನು ಕಡ್ಡಾಯವಾಗಿ ವಿತರಿಸುವಂತೆ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ. ರಘು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಚ್ಛತಾ ಕಾರ್ಮಿಕರು/ಪೌರ ಕಾರ್ಮಿಕರಿಗೆ ನಿಗದಿತ ಸಮಯಕ್ಕೆ ಸರಿಯಾಗಿ ವೇತನ ಸೌಲಭ್ಯ ನೀಡಬೇಕೆಂದು ಹೇಳಿದರು. ಪೌರ ಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಪ್ರತಿ ೩ ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಲು ಕ್ರಮ ವಹಿಸಬೇಕು. ಮುಂದಿನ ಸಭೆಯಲ್ಲಿ ಆರೋಗ್ಯ ತಪಾಸಣೆ ವರದಿಯನ್ನು ನೀಡಬೇಕೆಂದು ನಿರ್ದೇಶನ ನೀಡಿದರು. ಹೊರ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾ ರ್ಮಿಕರಿಗೆ ನ್ಯಾಯಯುತವಾಗಿ ಸಿಗಬೇಕಿರುವ ಇಎಸ್‌ಐ, ಪಿಎಫ್ ಸೌಲಭ್ಯವನ್ನು ನೀಡಬೇಕು ಹಾಗೂ ಎಲ್ಲಾ ಪೌರಕಾ ರ್ಮಿಕರು ಕಡ್ಡಾಯವಾಗಿ ಜೀವ ವಿಮೆ ಮಾಡಿಸುವಂತೆ ಕ್ರಮವ ಹಿಸಬೇಕೆಂದು ಹೇಳಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ…

Read More

ತುಮಕೂರು: ಬಲಿಜ ಸಮುದಾಯ ವ್ಯಾಪಾರ, ವ್ಯವಹಾರ, ರಾಜಕೀಯ ಕ್ಷೇತ್ರಗಳಲ್ಲಿ ಮುಂದಿದ್ದು, ಅತ್ಯಂತ ಸಂಘಟಿತ ಸಮುದಾಯವಾಗಿದೆ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ. ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾ ಬಲಿಜ ಸಂಘ(ರಿ). ಆಯೋಜಿಸಿದ್ದ ಕಾಲಜ್ಞಾನಿ ಶ್ರೀಯೋಗಿ ನಾರೇಯಣ ಯತೀಂದ್ರರ ೩೦೦ನೇ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,ಸಮುದಾಯದ ಹಿರಿಯರ ಜಯಂತಿಗಳು ಜನರನ್ನು ಒಗ್ಗೂಡಿಸಲು ಸಹಕಾರಿಯಾಗಲಿವೆ ಎಂದರು. ಕೈವಾರ ತಾತಯ್ಯ ಮಹಾನ್ ಕಾಲಜ್ಞಾನಿಗಳು, ತಮ್ಮ ಆಧ್ಯಾತ್ಮ ಶಕ್ತಿಯಿಂದಲೇ ಇಹ, ಪರದ ಬಗ್ಗೆ ಅವಲೋಕಿಸಿ, ಭೂತ, ವರ್ತಮಾನ ಮತ್ತು ಭವಿಷ್ಯ ಕುರಿತು ನಿಖರವಾಗಿ ತಮ್ಮ ಕಾಲಜ್ಞಾನ ಕೃತಿಯಲ್ಲಿ ಬರೆದಿದ್ದಾರೆ.ಆವರ ಆದರ್ಶಗಳನ್ನು ನಾವುಗಳು ಪಾಲಿಸುವ ಮೂಲಕ ಸಮಾಜದಲ್ಲಿ ಬೆಳೆಯಬೇಕಿದೆ. ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗುತಿದ್ದು, ಅದಕ್ಕೆ ತಕ್ಕಂತೆ ನಾವುಗಳು ಬದಲಾಗುವ ಮೂಲಕ ಇಂದಿನ ಪೈಪೊಟಿ ಯುಗಕ್ಕೆ ನಮ್ಮ ಮಕ್ಕಳನ್ನು ಸಜ್ಜುಗೊಳಿಸಬೇಕಾಗಿದೆ ಎಂದು ಜಿ.ಬಿ.ಜೋತಿಗಣೇಶ್ ತಿಳಿಸಿದರು. ಬಿಜೆಪಿ ಓಬಿಸಿ ಮೋರ್ಚಾ ಕಾರ್ಯಕಾರಿಣಿ…

Read More