BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಕುಡಿಯುವ ನೀರಿಗಾಗಿ ಜನರ ಆಗ್ರಹ
  • ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ
  • ಕರಾರಸಾ ಸಂಸ್ಥೆಯ ನೌಕರರ ಹೊರ ರಾಜ್ಯ ಅಧ್ಯಯನ ಪ್ರವಾಸಕ್ಕೆ ಶಾಸಕ ಎಸ್.ಆರ್.ಶ್ರೀನಿವಾಸ್ ಚಾಲನೆ
  • ಕಲ್ಪತರುನಾಡಿನಲ್ಲಿ ವೈಕುಂಠ ಏಕಾದಶಿಯ ಸಡಗರ
  • ಭಕ್ತರಹಳ್ಳಿ ಗ್ರಾಮದಲ್ಲಿ ಆಹಾರ ಅದಾಲತ್ ಕಾರ್ಯಕ್ರಮ
  • ಕೊನೆಗೂ ಸೆರೆ ಸಿಕ್ಕ ನರಭಕ್ಷಕ ಚಿರತೆ
  • ಗರ್ಭಿಣಿ ಮಗಳನ್ನು ಕೊಂದ ತಂದೆಗೆ ಗಲ್ಲು ಶಿಕ್ಷೆ ನೀಡಿ: ಆಗ್ರಹ
  • ಚಿರತೆ ಹಾವಳಿ ತಡೆಗಟ್ಟಿ: ಮಾಜಿ ಶಾಸಕ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಶಾಸಕ ಡಿ.ಸಿ.ಗೌರಿಶಂಕರ್ ವಿರುದ್ಧ ಮಾಜಿ ಶಾಸಕ ಬಿ.ಸುರೇಶ್ ಗೌಡ ಆಗ್ರಹ
Trending

ಶಾಸಕ ಡಿ.ಸಿ.ಗೌರಿಶಂಕರ್ ವಿರುದ್ಧ ಮಾಜಿ ಶಾಸಕ ಬಿ.ಸುರೇಶ್ ಗೌಡ ಆಗ್ರಹ

By News Desk BenkiyabaleUpdated:March 01, 2019 4:44 pm

ತುಮಕೂರು:

     ನಗರದ ಖಾಸಗೀ ಹೋಟೆಲ್ ನಲ್ಲಿ ಸುದ್ಧಿಗೋಷ್ಠಿ ನಡೆಸಿದ ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ಗ್ರಾಮಾಂತರ ಮಾಜಿ ಶಾಸಕ ಬಿ.ಸುರೇಶ್ ಗೌಡರವರು ಹಾಲಿ ಶಾಸಕರಾದ ಡಿ.ಸಿ.ಗೌರಿಶಂಕರ್ ವಿರುದ್ಧ ಹರಿಹಾಯ್ದರು.

      ಗೌರಿಶಂಕರ್ ವಿರುದ್ಧ ಎಕ್ಸ್ಟ್ರಾಕ್ಷನ್ ಕೇಸು ದಾಖಲಿಸಲಬೇಕು ಮತ್ತು ಪ್ರಾಮಾಣಿಕ ಅಧಿಕಾರಿಯಿಂದ ತನಿಖೆ ನಡೆಸಬೇಕು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂವಿಜ್ಞಾನಿಯನ್ನು ಮುಖ್ಯ ಸಾಕ್ಷಿಯಾಗಿ ಪರಿಗಣಿಸಬೇಕು. ಭೂ ವಿಜ್ಞಾನಿಯವರು ಗಣಿ ಇಲಾಖೆಯ ಉಪ ನಿರ್ದೇಶಕರಿಗೆ ನೀಡಿರುವ ಹೇಳಿಕೆಯನ್ನು ಸಾಕ್ಷಿಯನ್ನಾಗಿ ಪರಿಗಣಿಸಬೇಕು. ಶಾಸಕರು ಕಾನೂನನ್ನು ಕೈಗೆತ್ತಿಕೊಂಡಿರುವುದರಿಂದ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಬಂಧಿಸಬೇಕು. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರವರು ಪಾರದರ್ಶಕ ತನಿಖೆಗೆ ಅನುವುಮಾಡಿಕೊಡಬೇಕು. ತಮ್ಮ ಪಕ್ಷದ ಶಾಸಕನನ್ನು ರಕ್ಷಣೆ ಮಾಡಬಾರದು ಎಂದು ಒತ್ತಾಯಿಸಿದರು.

      ದಿನಾಂಕ 21-.01-2019 ರಂದು ಭ್ರಷ್ಠಾಚಾರ ನಿಗ್ರಹದಳದ ಪೋಲೀಸ್ ಉಪಾದೀಕ್ಷಕರಿಗೆ ದೂರು ನೀಡಲಾಗಿದ್ದು ಸದರೀ ದೂರಿನ ಸಂಭಂದ 25.01.2019 ರಂದು ಪತ್ರಿಕಾಗೋಷ್ಠಿ ನಡೆಸಲಾಗಿತ್ತು ಆದರೆ ಭ್ರಷ್ಠಾಚಾರ ನಿಗ್ರಹ ದಳದ ಪೋಲೀಸ್ ಠಾಣೆಗೆ ನೀಡಿದ ದೂರಿನ ಅನ್ವಯ ನಾವು ನೀಡಿದ್ದ ಅರ್ಜಿಯನ್ನು ಪೋಲೀಸ್ ಅಧೀಕ್ಷಕರು ಕೇಂದ್ರ ವಲಯ ಭ್ರಷ್ಟಾಚಾರ ನಿಗ್ರಹ ದಳ ಬೆಂಗಳೂರು ರವರಿಗೆ ತುಮಕೂರಿನ ಎ.ಸಿ.ಬಿ.ಯ ಡಿವೈಎಸ್‍ಪಿ ರವರು ಸದರೀ ಅರ್ಜಿಯ ಬಗ್ಗೆ ಕೈಗೊಳ್ಳಬಹುದಾದ ಕ್ರಮದ ಬಗ್ಗೆ ಮನವಿ ಮಾಡಿದ್ದರು.

      ಅಭಿಯೋಗ ಉಪನಿರ್ದೇಶಕರಿಂದ ಬಂದ ಅಭಿಪ್ರಾಯದ ಮೇರೆಗೆ ಮಾನ್ಯ ಪೋಲೀಸ್ ಅಧೀಕ್ಷಕರು ಭ್ರಷ್ಠಾಚಾರ ನಿಗ್ರಹದಳದ ಕೇಂದ್ರ ವಲಯದವರು ಸದರೀ ದೂರಿನಲ್ಲಿ ಬೆದರಿಕೆ ಹಾಕಿ ಹಣ ವಸೂಲಿ ಮಾಡುವ ಬಗ್ಗೆ (ಎಕ್ಸಟ್ರಾಕ್ಷನ್) ಆರೋಪ ಕಂಡು ಬಂದಿರುವುದರಿಂದ ನಮ್ಮ ಅರ್ಜಿಯನ್ನು ಮುಂದಿನ ಕ್ರಮಕ್ಕಾಗಿ ತುಮಕೂರು ಜಿಲ್ಲಾ ಪೋಲೀಸ್ ಅಧೀಕ್ಷಕರ ಕಛೇರಿಗೆ ದಿನಾಂಕ 23.02-2019 ರಂದು ನಮ್ಮ ದೂರನ್ನು ವರ್ಗಾಯಿಸಿರುತ್ತಾರೆ.

      ಇದರ ಬಗ್ಗೆ ದಿನಾಂಕ 23-02-2019 ರಂದು ಎ ಸಿ ಬಿ ಡಿವೈಎಸ್ಪಿ ರವರು ನಮಗೆ ಹಿಂಬರಹ ನೀಡಿರುತ್ತಾರೆ. ಈ ವಿಚಾರವಾಗಿ ಶಾಸಕ ಗೌರಿಶಂಕರ ವಿರುದ್ದ ಬೆದರಿಕೆ ಹಾಕಿ ಹಣ ವಸೂಲಿ ಮಾಡಿರುವ ಬಗ್ಗೆ ಪ್ರಕರಣ ದಾಖಲು ಮಾಡಿ ಕೂಲಂಕುಶ ತನಿಖೆ ನಡೆಸುವ ಅಗತ್ಯತೆ ಇದೆ. ಕ್ಯಾಂತ್ಸಂದ್ರ ಪಿ,ಎಸ್,ಐ ರಾಜು ಮತ್ತು ವೃತ್ತ ನಿರೀಕ್ಷಕರಾದ ರಾಮಕೃಷ್ಣಯ್ಯ ಇವರುಗಳು ಶಾಸಕ ಗೌರಿಶಂಕರ ಅವರ ಶಿಫಾರಸಿನ ಮೇರೆಗೆ ಕ್ಯಾತ್ಸಂದ್ರ ವೃತ್ತದಲ್ಲಿ ಇರುವುದರಿಂದ ಸದರೀ ಪ್ರಕರಣವನ್ನು ಬೇರೋಬ್ಬ ದಕ್ಷ ಪ್ರಾಮಾಣಿಕ ಅಧಿಕಾರಿಯಿಂದ ತನಿಖೆ ನಡೆಸಬೇಕೆಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ಆಗ್ರಹಿಸುತ್ತಿದ್ದೇನೆ,
ಸದರೀ ವಿಚಾರಕ್ಕೆ ಸಂಬಂದಪಟ್ಟಂತೆ ಶಾಸಕ ಗೌರಿಶಂಕರ ಮತ್ತು ಬೆಂಬಲಿಗರು ಲಾರಿಗಳನ್ನು ತಡೆದು ವಸೂಲಿ ಮಾಡಿದ್ದರು ಎಂಬುದಕ್ಕೆ ಪುಷ್ಟೀಕರಿಸುವಂತೆ ಗಣಿ ಮತ್ತು ಭೂ ವಿಜ್ಘಾನ ಇಲಾಖೆಯ ಉಪನಿರ್ದೇಶಕರಿಗೆ ಭೂ ವಿಜ್ಘಾನಿ ಆದ ಪಿ,ಎಸ್ ನವೀನ್ ರವರು ದಿನಾಂಕ 4-02-2019 ರಂದು ಹೇಳಿಕೆ ನೀಡಿರುತ್ತಾರೆ.

      ಅವರ ಹೇಳಿಕೆಯಲ್ಲಿ ಇರುವಂತೆ ರಾಷ್ರೀಯ ಹೆದ್ದಾರಿ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕಲ್ಲು ದಿಮ್ಮಿ ತುಂಬಿದ್ದ 4 ಲಾರಿಗಳು ನಿಂತಿದ್ದು ಇದರ ಬಗ್ಗೆ ಗ್ರಾಮಾಂತರ ಕ್ಷೇತ್ರದ ಶಾಸಕರು ಕರೆ ಮಾಡಿ ವಿವರಣೆ ಕೇಳಿದ್ದು ನಂತರ ಸ್ಥಳಕ್ಕೆ ಹೋಗಿ ಅಲ್ಲಿ ನಿಂತಿದ್ದ ಲಾರಿಗಳನ್ನು ಕಂಡು ಶಾಸಕರು ಕೇಳಿದ ಮಾಹಿತಿಯನ್ನು ತಿಳಿಸಿ ಇಲಾಖೆಯಿಂದ ಗುತ್ತಿಗೆ ಮುಂಜೂರು ಮಾಡಿರುವ ಬಗ್ಗೆ ಹಾಗು ಗುತ್ತಿಗೆದಾರರು ಪರವಾನಗಿ ಪಡೆದು ಸಾಗಾಣೆ ಮಾಡಿರುವ ಬಗ್ಗೆ ವಿವರಣೆ ನೀಡಿರುತ್ತೇನೆ.

      ಲಾರಿಗಳಲ್ಲಿ ಪರವಾನಗಿ ಇಲ್ಲದೇ ಇದ್ದರೆ ನಿಯಮಾನುಸಾರ ಕ್ರಮ ಜರುಗಿಸುವುದಾಗಿ ತಿಳಿಸಿ ಲಾರಿಗಳನ್ನು ವಿಚಾರಣೆಗಾಗಿ ಪೋಲೀಸ್ ಠಾಣೆಗೆ ಇಲ್ಲ ನಮ್ಮ ಕಛೇರಿಗೆ ಲಾರಿಗಳನ್ನು ತೆಗದುಕೊಂಡು ಬರುವಂತೆ ಲಾರಿಯವರಿಗೆ ತಿಳಿಸಿದಾಗ ಶಾಸಕರ ಬೆಂಬಲಿಗರು ಲಾರಿಗಳನ್ನು ನಾನು ತೆಗೆದುಕೊಂಡು ಹೋಗಲು ಅಡ್ಡಿಪಡಿಸಿರುತ್ತಾರೆ. ಸದರೀ ವಿಚಾರವನ್ನು ಉಪನಿರ್ದೇಶಕರಿಗೆ ದೂರವಾಣಿ ಮೂಲಕ ತಿಳಿಸಿರುವುದಾಗಿ ಅವರ ಹೇಳಿಕೆಯಲ್ಲೇ ನವೀನ್ ಪಿ.ಎಸ್. ರವರು ತಿಳಿಸಿರುತ್ತಾರೆ.

      ಅದೇ ಹೇಳಿಕೆಯಲ್ಲಿ ಶಾಸಕರ ಬೆಂಬಲಿಗರ ಗುಂಪು ಇದ್ದದ್ದರಿಂದ ನಾನು ಪ್ರಾಣ ಭಯದಿಂದ ಲಾರಿಗಳನ್ನು ತಡೆದು ನಿಲ್ಲಿಸಲಾಗದೆ ವಾಪಸು ಬಂದಿರುತ್ತೇನೆ ಎಂದು ಅವರ ಹಿರಿಯ ಅಧಿಕಾರಿಗಳಿಗೆ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

      ಅಂದರೆ ಶಾಸಕರು ಮತ್ತು ಅವರ ಬೆಂಬಲಿಗರು ಹಣ ವಸೂಲಿಗಾಗಿ ಲಾರಿಗಳನ್ನು ತಡೆದು ಅಕ್ರಮವಾಗಿ ಕರೆದೊಯ್ದಿರುವುದು ಇದರಿಂದ ಸಾಬೀತಾಗಿರುತ್ತದೆ. ನವೀನ್ ಪಿ,ಎಸ್ ರವರು ಸರ್ಕಾರಿ ಭೂ ವಿಜ್ಘಾನಿ ಆಗಿದ್ದು ಇವರ ಹೇಳಿಕೆ ಬಹುಮುಖ್ಯ ಹೇಳಿಕೆಯಾಗಿ ಪರಿಗಣಿಸುವಂತೆ ಈ ಮೂಲಕ ಒತ್ತಾಯಿಸುತ್ತಿದ್ದೇನೆ. ಲಾರಿಗಳಲ್ಲಿ ಅಕ್ರಮವಾಗಿ ಸಾಗಾಟ ಆಗುತ್ತಿರುವ ಮಾಹಿತಿ ಇರುವ ಶಾಸಕರು ಸಂಬಂದಪಟ್ಟ ಇಲಾಖೆಗೆ ಮಾಹಿತಿ ನೀಡಿ ಕಾನೂನು ರೀತ್ಯಾ ಕ್ರಮ ಜರುಗಿಸುವಂತೆ ಶಿಫಾರಸ್ಸು ಮಡಬೇಕಿತ್ತು ಆದರೆ ಇದ್ಯಾವುದನ್ನು ಮಾಡದೆ ತಾವೇ ನೇರವಾಗಿ ಫೀಲ್ಡಗೆ ಇಳಿದಿರುವುದು ಮತ್ತು ಬೆಂಬಲಿಗರೊಡನೆ ಲಾರಿಗಳನ್ನು ಅಡ್ಡಗಟ್ಟಿರುವುದರ ಅರ್ಥ ಏನು ಇದರ ಬಗ್ಗೆ ನಿಸ್ಪಕ್ಷಪಾತವಾಗಿ ಸಮಗ್ರ ತನಿಖೆ ನಡೆಸಬೇಕು ಎಂದು ಎಸ್ಪಿ ಅವರಲ್ಲಿ ಒತ್ತಾಯ ಮಾಡುತ್ತಿದ್ದೇನೆ ಎಂದರು.

(Visited 97 times, 1 visits today)
Previous Articleಗುಣಮಟ್ಟ ಕಾಯ್ದುಕೊಳ್ಳುವ ಸೇತುವೆ ನೀಡುವಂತೆ ಗುತ್ತಿಗೆದಾರರಿಗೆ ಶಾಸಕರ ಸೂಚನೆ
Next Article ಬಿ.ಸತ್ಯನಾರಾಯಣ್ ರಿಂದ ಕ.ರಾ.ರ.ಸಾ.ನಿಗಮದ ಕಛೇರಿ ಪರಿಶೀಲನೆ
News Desk Benkiyabale

Related Posts

ಡಿ. 12 ರಿಂದ 24ರವರೆಗೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ

December 12, 2025 3:48 pm ತುಮಕೂರು

ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ: ಶೇ. ೬೦.೭೧ರಷ್ಟು ಪ್ರಗತಿ

December 12, 2025 3:25 pm ತುಮಕೂರು

ಸರ್ಕಾರಿ ಯೋಜನೆಗಳ ಸಮಗ್ರ ಅನುಷ್ಠಾನಕ್ಕೆ ಡಿಸಿ ಸೂಚನೆ

December 08, 2025 4:21 pm ತುಮಕೂರು
ತಾಜಾ ಸುದ್ಧಿಗಳು
ಇತರೆ ಸುದ್ಧಿಗಳು

ಕುಡಿಯುವ ನೀರಿಗಾಗಿ ಜನರ ಆಗ್ರಹ

December 30, 2025 4:28 pm
ಇತರೆ ಸುದ್ಧಿಗಳು

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ

December 30, 2025 4:27 pm
ಇತರೆ ಸುದ್ಧಿಗಳು

ಕರಾರಸಾ ಸಂಸ್ಥೆಯ ನೌಕರರ ಹೊರ ರಾಜ್ಯ ಅಧ್ಯಯನ ಪ್ರವಾಸಕ್ಕೆ ಶಾಸಕ ಎಸ್.ಆರ್.ಶ್ರೀನಿವಾಸ್ ಚಾಲನೆ

December 30, 2025 4:25 pm
ಇತರೆ ಸುದ್ಧಿಗಳು

ಕಲ್ಪತರುನಾಡಿನಲ್ಲಿ ವೈಕುಂಠ ಏಕಾದಶಿಯ ಸಡಗರ

December 30, 2025 4:23 pm
ಇತರೆ ಸುದ್ಧಿಗಳು

ಭಕ್ತರಹಳ್ಳಿ ಗ್ರಾಮದಲ್ಲಿ ಆಹಾರ ಅದಾಲತ್ ಕಾರ್ಯಕ್ರಮ

December 30, 2025 4:22 pm
ಇತರೆ ಸುದ್ಧಿಗಳು

ಕೊನೆಗೂ ಸೆರೆ ಸಿಕ್ಕ ನರಭಕ್ಷಕ ಚಿರತೆ

December 26, 2025 3:16 pm
Our Youtube Channel
Our Picks

ಕುಡಿಯುವ ನೀರಿಗಾಗಿ ಜನರ ಆಗ್ರಹ

December 30, 2025 4:28 pm

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ

December 30, 2025 4:27 pm

ಕರಾರಸಾ ಸಂಸ್ಥೆಯ ನೌಕರರ ಹೊರ ರಾಜ್ಯ ಅಧ್ಯಯನ ಪ್ರವಾಸಕ್ಕೆ ಶಾಸಕ ಎಸ್.ಆರ್.ಶ್ರೀನಿವಾಸ್ ಚಾಲನೆ

December 30, 2025 4:25 pm

ಕಲ್ಪತರುನಾಡಿನಲ್ಲಿ ವೈಕುಂಠ ಏಕಾದಶಿಯ ಸಡಗರ

December 30, 2025 4:23 pm

ಭಕ್ತರಹಳ್ಳಿ ಗ್ರಾಮದಲ್ಲಿ ಆಹಾರ ಅದಾಲತ್ ಕಾರ್ಯಕ್ರಮ

December 30, 2025 4:22 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ಇತರೆ ಸುದ್ಧಿಗಳು

ಕುಡಿಯುವ ನೀರಿಗಾಗಿ ಜನರ ಆಗ್ರಹ

By News Desk BenkiyabaleDecember 30, 2025 4:28 pm

ತುರುವೇಕೆರೆ: ತಾಲೂಕಿನ ತಂಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗವಿಪುರ (ಕರೆಕಲ್ ಬಾರೆ) ಗ್ರಾಮದ ಜನರು ಕುಡಿಯುವ ನೀರಿಗಾಗಿ ಆಗ್ರಹಿಸಿ ಪಂಚಾಯಿತಿ…

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ

December 30, 2025 4:27 pm

ಕರಾರಸಾ ಸಂಸ್ಥೆಯ ನೌಕರರ ಹೊರ ರಾಜ್ಯ ಅಧ್ಯಯನ ಪ್ರವಾಸಕ್ಕೆ ಶಾಸಕ ಎಸ್.ಆರ್.ಶ್ರೀನಿವಾಸ್ ಚಾಲನೆ

December 30, 2025 4:25 pm

ಕಲ್ಪತರುನಾಡಿನಲ್ಲಿ ವೈಕುಂಠ ಏಕಾದಶಿಯ ಸಡಗರ

December 30, 2025 4:23 pm
News by Date
December 2025
M T W T F S S
1234567
891011121314
15161718192021
22232425262728
293031  
« Nov    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.