ಕೊರಟಗೆರೆ:

      ಡಿಸಿಎಂ ಡಾ.ಜಿ.ಪರಮೇಶ್ವರ್ ಸ್ವಂತ ಶಕ್ತಿಯಿಂದ ಕೊರಟಗೆರೆಯಲ್ಲಿ ಶಾಸಕನಾಗಿಲ್ಲ.. ಜೆಡಿಎಸ್ ಪಕ್ಷದ ಮಾಜಿ ಸಚಿವ ಸಿ.ಚೆನ್ನಿಗಪ್ಪನ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು ಒಳ ಒಪ್ಪಂದದಿಂದ ಗೆಲುವು ಸಾದಿಸಿದ್ದಾರೆ ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಸುರೇಶ್‍ಗೌಡ ವಾಗ್ದಾಳಿ ನಡೆಸಿದರು.

      ಪಟ್ಟಣದ ಎಸ್‍ಎಸ್‍ಆರ್ ವೃತ್ತದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ ಲೋಕಸಭಾ ಚುನಾವಣೆಯ ಬೃಹತ್ ಪ್ರಚಾರ ರ್ಯಾಲಿಯಲ್ಲಿ ಬಿಜೆಪಿ ಪಕ್ಷದ ಯುವ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

      ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಚೆನ್ನಿಗಪ್ಪನ ಮಗ ಗೌರಿಶಂಕರ್ ಗೆಲುವು ಮತ್ತು ಕೊರಟಗೆರೆ ಕ್ಷೇತ್ರದಲ್ಲಿ ಜೆಡಿಸ್ ಪಕ್ಷದ ಅಭ್ಯರ್ಥಿ ಸುಧಾಕರಲಾಲ್ ಸೋಲಿಸಲು ಚೇನ್ನಿಗಪ್ಪ ಮತ್ತು ಡಾ.ಜಿ.ಪರಮೇಶ್ವರ್ ನಡುವೆ ಮ್ಯಾಚ್ ಪಿಕ್ಸಿಂಗ್ ನಡೆದಿದೆ. ಕೊರಟಗೆರೆ ಕ್ಷೇತ್ರದ ಅಭ್ಯರ್ಥಿಯನ್ನು ಸೋಲಿಸಲು ಚೇನ್ನಿಗಪ್ಪ 5ಕೋಟಿ ಹಣ ಪಡೆದಿದ್ದಾರೆ ಎಂದು ಕಿಡಿಕಾರಿದರು.

      ತುಮಕೂರು ಬಿಜೆಪಿ ಅಭ್ಯರ್ಥಿ ಬಸವರಾಜು ಮಾತನಾಡಿ ಮಾಜಿ ಪ್ರಧಾನಿ ದೇವೆಗೌಡರಿಗೆ ಹಾಸನ ಜಿಲ್ಲೆಯೇ ನಮ್ಮ ಭಾರತ ದೇಶ. ಹೊಳೆ ನರಸಿಪುರವೇ ಕರ್ನಾಟಕ ರಾಜ್ಯವಾಗಿದೆ. ರಾಜ್ಯ ಸರಕಾರ ನೂರಾರು ಯೋಜನೆಗಳು ಹಾಸನ ಮತ್ತು ಮಂಡ್ಯ ಜಿಲ್ಲೆಗೆ ಸಿಮೀತವಾಗಿದೆ. ಲೋಕಸಭೆ ಚುನಾವಣೆಗೆ ಮುಂಚೆಯೇ ಕಾಂಗ್ರೇಸ್ ಮುಕ್ತ ತುಮಕೂರು ಮಾಡಿರುವ ಕೀರ್ತಿ ದೇವೆಗೌಡರಿಗೆ ಸಲ್ಲುತ್ತದೆ ಎಂದು ತಿಳಿಸಿದರು.ಕರ್ನಾಟಕ ರಾಜ್ಯದ ರಾಜಕಾರಣದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಕುಟುಂಬದ ಚಿಕ್ಕ ಮಗ ಮುಖ್ಯಮಂತ್ರಿ, ದೊಡ್ಡ ಮಗ ಸಚಿವ, ಸೊಸೆ ಶಾಸಕಿ ಮತ್ತು ಈಗ ದೇವೇಗೌಡರು ಸೇರಿ ಇಬ್ಬರು ಮೊಮ್ಮಕ್ಕಳು ಸಂಸದ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದಾರೆ. ತುಮಕೂರು ಜಿಲ್ಲೆಯ ಮಾಜಿ ಸಂಸದರಿಗೆ ಕುಠಿರ ರಾಜಕೀಯದಿಂದ ಕೈ ಟಿಕೇಟ್ ತಪ್ಪಿಸಿ ಮೂಲೆ ಗುಂಪು ಮಾಡಿ ದೇವೇಗೌಡರನ್ನು ಮತದಾರರು ಮನೆಗೆ ಕಳುಹಿಸುವುದು ಖಚಿತವಾಗಿದೆ ಎಂದು ಹೇಳಿದರು.

      ಕೊರಟಗೆರೆ ಬಿಜೆಪಿ ತಾಲೂಕು ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ ಮಾತನಾಡಿ ಕೊರಟಗೆರೆ ಕ್ಷೇತ್ರದಿಂದ ಶಾಸಕನಾಗಿ ಡಿಸಿಎಂ ಆಗಿರುವ ಡಾ.ಜಿ.ಪರಮೇಶ್ವರ್ 10ತಿಂಗಳು ಕಳೆದರೂ ಸ್ಥಳೀಯರ ಕೈಗೆ ಸಿಗದೇ ಬೆಂಗಳೂರು ಮತ್ತು ತುಮಕೂರು ಮನೆಯಲ್ಲಿ ಸಿಸಿಟಿವಿ ನೋಡಿ ರಾಜಕೀಯ ಮಾಡುತ್ತೀದ್ದಾರೆ.

       ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಡಾ.ಜಿ.ಪರಮೇಶ್ವರ್ ದೇವೇಗೌಡರ ಕಾಲಿಗೆ ಬಿದ್ದು ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಪವನಕುಮಾರ್, ನಾಗರಾಜು, ಪ್ರದೀಪಕುಮಾರ್, ಬಿಜೆಪಿ ಮುಖಂಡರಾದ ಹೆಬ್ಬಾಕರವಿ, ತಿಮ್ಮಜ್ಜ, ಗೋಪಾಲಕೃಷ್ಣ, ಪ್ರಕಾಶರೆಡ್ಡಿ, ಲಕ್ಷ್ಮೀಪ್ರಸಾದ್, ಹನುಮಂತರಾಜು, ಗುರುಧತ್, ಸ್ವಾಮಿ, ಮಧು, ಪ್ರಸನ್ನ, ರುದ್ರೇಶ್, ಶಶಿಕುಮಾರ್, ಸಂಜಯ್, ರಂಜಿತ್, ಪುನೀತ್ ಇದ್ದರು.

(Visited 40 times, 1 visits today)