ತುಮಕೂರು: ಸಹಕಾರ ಸಚಿವ ಕೆ.ಎನ್.ರಾಜಣ್ಣನವರ ೭೫ನೇ ಹುಟ್ಟುಹಬ್ಬ ಆಚರಣೆಯ ಅಮೃತ ಮಹೋತ್ಸವ ಈ ತಿಂಗಳ ೨೧ರಂದು ನಗರದಲ್ಲಿ ಏರ್ಪಾಟಾಗಿದ್ದು, ಕೆ.ಎನ್.ಆರ್ ಆವರು ಸಾಗಿಬಂದ ಹಾದಿ, ಅವರ ಹೋರಾಟ, ಕೊಡುಗೆಗಳನ್ನು ದಾಖಲುಮಾಡಿ ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯಕ್ರಮವಾಗಿದೆ ಎಂದು ಆಡಿಟರ್ ಟಿ.ಆರ್.ಆಂಜನಪ್ಪ ಹೇಳಿದರು.
ಕೆ.ಎನ್.ರಾಜಣ್ಣನವರ ಹುಟ್ಟು ಹಬ್ಬ ಆಚರಣೆ ಹಿನ್ನೆಲೆಯಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟ ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಮುಖಂಡರ ಸಭೆಯಲ್ಲಿ ಸಮಾರಂಭದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಸಚಿವ ಕೆ.ಎನ್.ರಾಜಣ್ಣನವರು ಒಂದು ಜಾತಿ ನಂಬಿ ರಾಜಕಾರಣ ಮಾಡಿದವರಲ್ಲ, ಎಲ್ಲರನ್ನೂ ಜೊತೆಯಾಗಿ ತೆಗೆದುಕೊಂಡು ಹೋಗುವ ಮನಸ್ಥಿತಿಯ ನಾಯಕ. ಎಲ್ಲಾ ಜಾತಿಯಲೂ ಇವರನ್ನು ಪ್ರೀತಿಸುವ, ಗೌರವಿಸುವ ಜನರಿದ್ದಾರೆ ಎಂದರು.
೭೫ ವರ್ಷ ಪೂರ್ಣಗೊಳಿಸಿರುವ ಕೆ.ಎನ್.ರಾಜಣ್ಣನವರ ರಾಜಕಾರಣದ ಹಾದಿ ಕಠಿಣವಾಗಿತ್ತು. ಎದುರಾಗುವ ಎಲ್ಲಾ ಸವಾಲುಗಳನ್ನು ಸಮರ್ಥವಾಗಿ ಎದುರಿಸಿಕೊಂಡು ಜನರೊಂದಿಗೆ ನಡೆದು ಬೆಳೆದರು. ರಾಜಕೀಯ ಜೀವನದ ಹೋರಾಟ, ನಡೆದುಬಂದ ಹಾದಿ, ಕೊಟ್ಟಿರುವ ಕೊಡುಗೆಗಳು ಮುಂದಿನ ತಲೆಮಾರಿಗೆ ತಿಳಿಯಬೇಕು. ಅದಕ್ಕಾಗಿ ಕೆ.ಎನ್.ರಾಜಣ್ಣನವರ ಹುಟ್ಟುಹಬ್ಬ ಆಚರಣೆ ಮೂಲಕ ಆವರ ರಾಜಕೀಯ ಬದುಕನ್ನು ದಾಖಲು ಮಾಡುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಇದೇ ೨೧ರಂದು ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಕೆ.ಎನ್.ರಾಜಣ್ಣನವರ ಅಮೃತ ಮಹೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಮತ್ತಿತರ ನಾಯಕರು ಭಾಗವಹಿಸುತ್ತಾರೆ. ಇಂತಹ ವಿಶೇಷ ಕಾರ್ಯಕ್ರಮದಲ್ಲಿ ಹೆಚ್ಚು ಜನ ಭಾಗವಹಿಸಿ, ಕೆ.ಎನ್.ರಾಜಣ್ಣನವರಿಗೆ ಶಕ್ತಿ ತುಂಬಿ ಅಭಿಮಾನ ತೋರಬೇಕು ಎಂದು ಟಿ.ಆರ್.ಆಂಜನಪ್ಪ ಹೇಳಿದರು.
ವಿವೇಕಾನಂದ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪಿ.ಮೂರ್ತಿ ಮಾತನಾಡಿ, ಕೆ.ಎನ್.ರಾಜಣ್ಣನವರು ಸಹಕಾರ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಬಡವರಿಗೆ ಸಾಲಸೌಲಭ್ಯ ದೊರೆಯದ ಸಂದರ್ಭದಲ್ಲಿ ಸಣ್ಣಪುಟ್ಟ ಸಮಾಜದವರೂ ಸಹಕಾರ ಸಂಸ್ಥೆ ಸ್ಥಾಪಿಸಿ ಸಾಲ ಸೌಕರ್ಯ ಪಡೆಯಬೇಕು ಎಂಬುದು ಅವರ ಆಶಯವಾಗಿತ್ತು. ಇಂದು ಜಿಲ್ಲೆಯ ಬಹುತೇಕ ಎಲ್ಲಾ ಸಮಾಜದವರೂ ಸಹಕಾರ ಸಂಸ್ಥೆಗಳನ್ನು ಹೊಂದಿದ್ದಾರೆ. ಇದಕ್ಕೆ ಕೆ.ಎನ್.ರಾಜಣ್ಣನವರ ಸಾಮಾಜಿಕ ಕಳಕಳಿಯೇ ಕಾರಣ ಎಂದರು.
ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಎಲ್ಲಾ ಜಾತಿಜನಾಂಗದ ಜನ ಭಾಗವಹಿಸಿ ಕೆ.ಎನ್.ರಾಜಣ್ಣನವರ ಬಗ್ಗೆ ತಮಗಿರುವ ಅಭಿಮಾನವನ್ನು ವ್ಯಕ್ತಪಡಿಸುತ್ತಾರೆ. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ ಎಂದು ಹೇಳಿದರು.
ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಧನಿಯಾಕುಮಾರ್ ಮಾತನಾಡಿ, ಎಲ್ಲಾ ವರ್ಗದವರೂ ಗೌರವಿಸುವ ಸಹಕಾರ ಸಚಿವ ಕೆ.ಎನ್.ರಾಜಣ್ಣನವರು ಹಿಂದುಳಿದ ವರ್ಗಗಳಿಗೆ ಶಕ್ತಿಯಾಗಿದ್ದಾರೆ. ಶಾಲಾ ಮಕ್ಕಳಿಗೆ ಶೂ ಭಾಗ್ಯ, ಕ್ಷೀರ ಭಾಗ್ಯ ದೊರೆಯಲು ಕೆ.ಎನ್.ರಾಜಣ್ಣನವರು ಸರ್ಕಾರಕ್ಕೆ ನೀಡಿದ್ದ ಸಲಹೆ ಕಾರಣ ಎಂದರು.
ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ದೇವರಾಜ ಅರಸು ಅವರ ಹೆಸರು ಇಡಲು ಕೆ.ಎನ್.ರಾಜಣ್ಣನವರ ಪಾತ್ರ ಮುಖ್ಯವಾಗಿದೆ. ದೇವರಾಜ ಅರಸು ಮಾದರಿಯಲ್ಲಿ ನಿರ್ಲಕ್ಷಿತ, ಸಣ್ಣ ಸಮಾಜಗಳಿಗೆ ಕೆ.ಎನ್.ರಾಜಣ್ಣನವರು ಧ್ವನಿಯಾಗಿ ಆ ಸಮುದಾಯಗಳಿಗೆ ನ್ಯಾಯ ದೊರಕಿಸುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದರು.
ಮಾಜಿ ಸಚಿವ ಸೊಗಡು ಶಿವಣ್ಣ, ಆರ್ಯ ಈಡಿಗರ ಸಂಘದ ಜಿಲ್ಲಾಧ್ಯಕ್ಷ ನಾಗರಾಜು, ಮುಖಂಡರಾದ ಮಲ್ಲಸಂದ್ರ ಶಿವಣ್ಣ, ಎಂ.ಕೆ.ವೆAಕಟಸ್ವಾಮಿ, ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ಲಕ್ಷö್ಮಣ್, ಸವಿತಾ ಸಮಾಜ ಅಧ್ಯಕ್ಷ ಮಂಜೇಶ್ ಒಲಂಪಿಕ್, ಮುಖಂಡರಾದ ಹೆಬ್ಬಾಕ ಮಲ್ಲಿಕಾರ್ಜುನ್, ಆರ್.ಎನ್.ವೆಂಕಟಾಚಲ, ಲಕ್ಷಿö್ಮÃಕಾಂತರಾಜೇ ಅರಸು, ನಟರಾಜ ಶೆಟ್ಟಿ, ರಾಜೇಶ್ ದೊಡ್ಮನೆ, ಶಾಂತಕುಮಾರ್, ಡಮರುಗೇಶ್, ಅಣ್ಣೇನಹಳ್ಳಿ ಶಿವಕುಮಾರ್, ನಾರಾಯಣಸ್ವಾಮಿ, ವಿಠಲ್, ತೇಜೇಶ್, ಗುರುರಾಘವೇಂದ್ರ, ಎನ್.ಅರುಣ್ಕುಮಾರ್, ರಾಜಣ್ಣ ಮೊದಲಾದವರು ಭಾಗವಹಿಸಿದ್ದರು.
(Visited 1 times, 1 visits today)