Author: News Desk Benkiyabale

ಹುಳಿಯಾರು: ಹುಳಿಯಾರು ಹೋಬಳಿಯ ತಿಮ್ಲಾಪುರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಗುರುವಾರ ವಿಶೇಷ ಪ್ರಗತಿ ಪರಿಶೀಲನೆ ಹಾಗೂ ಸಾಲ ವಿತರಣಾ ಸಮಾರಂಭದಲ್ಲಿ ಅರ್ಹ ಫಲಾನುಭವಿ ರೈತರಿಗೆ ಹಾಗೂ ಸದಸ್ಯರಿಗೆ ಆರ್ಥಿಕ ನೆರವು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಸಕ್ತ ಸಾಲಿನ ಸಾಲ ಸೌಲಭ್ಯದ ಅಂಗವಾಗಿ ಒಟ್ಟು ೬೧ ಜನ ಸದಸ್ಯರಿಗೆ ೨೦ ಲಕ್ಷ ೫ ಸಾವಿರ ರೂಪಾಯಿಗಳ ಸಾಲದ ಪತ್ರ ಹಾಗೂ ಸೌಲಭ್ಯವನ್ನು ಅಧಿಕೃತವಾಗಿ ಹಸ್ತಾಂತರಿಸಲಾಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಾಲ ವಿತರಣೆ ನೆರವೇರಿಸಿ ಮಾತನಾಡಿದ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸಿಂಗದಹಳ್ಳಿ ರಾಜಕುಮಾರ್ ಅವರು, ಸಹಕಾರ ಸಂಘಗಳು ಗ್ರಾಮೀಣ ಭಾಗದ ಆರ್ಥಿಕ ಬೆನ್ನೆಲುಬಾಗಿವೆ. ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ಲೇವಾದೇವಿಗಾರರನ್ನೇ ಅವಲಂಬಿಸುವುದನ್ನು ತಪ್ಪಿಸಲು ಈ ಸಂಘಗಳು ನಿರಂತರ ಶ್ರಮಿಸುತ್ತಿವೆ. ತಿಮ್ಲಾಪುರ ಕೃಷಿ ಪತ್ತಿನ ಸಹಕಾರ ಸಂಘವು ಈ ನಿಟ್ಟಿನಲ್ಲಿ ಅತ್ಯುತ್ತಮ ಸಾಧನೆ ತೋರಿದೆ. ಸಂಘದ ವತಿಯಿಂದ ಇದುವರೆಗೆ ಒಟ್ಟು ೬೮೬ ಸದಸ್ಯರಿಗೆ ೨ ಕೋಟಿ ೧೯ ಲಕ್ಷ ೫ ಸಾವಿರ ರೂಪಾಯಿಗಳ…

Read More

ತುಮಕೂರು: ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿಯೂ ಸಂವಿಧಾನ ಶಿಲ್ಪಿ ಡಾ: ಬಿ.ಆರ್. ಅಂಬೇಡ್ಕರ್ ಹಾಗೂ ಹಸಿರುಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನ ರಾಂ ಭವನ ನಿರ್ಮಿಸಲು ೧೦ ಗುಂಟೆ ಜಾಗ ಮಂಜೂರು ಮಾಡಬೇಕೆಂದು ಜಿಲ್ಲಾ ಜಾಗೃತಿ ಉಸ್ತುವಾರಿ ಸಮಿತಿ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಅನುಸೂಚಿತ ಜಾತಿ ಮತ್ತು ಬುಡಕಟ್ಟಿಗೆ ಸಂಬAಧಿಸಿದAತೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಜಿಲ್ಲಾ ಜಾಗೃತಿ ಉಸ್ತುವಾರಿ ಸಮಿತಿ ಸಭೆಯಲ್ಲಿ ಈ ಮನವಿ ಮಾಡಲಾಯಿತು. ಸಭೆಯ ಅಧ್ಯಕ್ಷತೆವಹಿಸಿದ್ದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡುತ್ತಾ, ಆಷಾಡ ಮಾಸ ಪ್ರಯುಕ್ತ ಜಿಲ್ಲೆಯಲ್ಲಿ ಜರುಗುವ ವಿಶೇಷ ಜಾತ್ರೆ ಸಂದರ್ಭಗಳಲ್ಲಿ ಕೋಣಗಳ ಬಲಿ ಕೊಡುವುದನ್ನು ನಿರ್ಬಂಧಿಸಲು ಕ್ರಮಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಪರಿಶಿಷ್ಠ ಜಾತಿ ಮತ್ತು ಪಂಗಡದ ಜನಾಂಗದವರು ದೇವಾಲಯ ಪ್ರವೇಶಕ್ಕೆ ಸಂಬAಧಿಸಿದAತೆ ಯಾವುದೇ ದೂರು ಬರದಂತೆ ಕ್ರಮವಹಿಸಬೇಕೆಂದು ನಿರ್ದೇಶನ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಮಾತನಾಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ, ಪಾಲಿಕೆ ಆಯುಕ್ತೆ…

Read More

ತುಮಕೂರು: ಕುಡಿಯುವ ನೀರು ಮತ್ತು ಬರವನ್ನು ತುರ್ತು ಪರಿಸ್ಥಿತಿ ಎಂದು ತಿಳಿದು ತ್ವರಿತ ರೀತಿ ಕೆಲಸ ಮಾಡಲು ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ.ಜಿ ಪರಮೇಶ್ವರ ಸೂಚನೆ. ಬರದ ಪರಿಸ್ಥಿತಿ ಇರುವುದರಿಂದ ಕಡಿಮೆ ನೀರು ಬಳಸಿ ಕಡಿಮೆ ಹಣ ಖರ್ಚು ಮಾಡಲು ಸಾರ್ವಜನಿಕರಿಗೆ ಸೂಚನೆ. ೧೮೭೬ ರಲ್ಲಿ ಎಲ್ಮಿನೋ ಪ್ರಕೃತಿ ವಿಕೋಪ ಉಂಟಾಗಿತ್ತು. ಅದೇ ರೀತಿ ಸೂಪರ್ ಎಲ್ಮಿನೋ ಈಗ ಬಂದಿದೆ.ಸಮುದ್ರದ ಮೇಲ್ಭಾಗದ ಲ್ಲಿ ಉಷ್ಣಂಶಾ ಹೆಚ್ಚಾಗಿ ಪ್ರಪಂಚದ ಅರ್ಧ ಭಾಗ ಬರದ ಛಾಯೆ ಉಂಟಾಗಿದೆ. ಪಾವಗಡ ಬಿಟ್ಟರೆ ಉಳಿದೆಲ್ಲ ತಾಲ್ಲೂಕಿನಲ್ಲಿ ಮಳೆಯೆ ಕೊರತೆಯಾಗಿದೆ. ಸುರೇಶ್ ಬಾಬು ಮಾತನಾಡಿ ಮುಂಗಾರು ಸಂಪೂರ್ಣ ವೈಫಲ್ಯ ವಾಗಿದೆ. ಕೆಲವು ರೈತರು ಗೊಬ್ಬರ ಕೊಂಡು ಬಿತ್ತನೆ ಮಾಡಿದ್ದಾರೆ ,ರೈತರಿಗೆ ಎಕರೆಗೆ ಇಷ್ಟು ಅಂತ ಪರಿಹಾರ ನೀಡಬೇಕು .ಹಾಗೂ ವಿಮೆಯನ್ನು ಎಲ್ಲಾ ರೈತರಿಗೂ ಬರುವಂತೆ ನೋಡಿಕೊಳ್ಳಲು ಸಲಹೆ ನೀಡಿದರು. ಗುಬ್ಬಿ ಶಾಸಕ ಶ್ರೀನಿವಾಸ ಮಾತನಾಡಿ ಕುಡಿಯುವ ನೀರು ಅದರು ಅಧಿಕಾರಿಗಳು ಕೋಬೇಕು ಜಿ ಪಂ ಸಿ…

Read More

ತುಮಕೂರು: ಇಪಿಎಸ್-೯೫ ಪಿಂಚಣಿದಾರರು ಕೇಂದ್ರ ಸರ್ಕಾರದ ಮುಂದೆ ತಮ್ಮ ಬೇಡಿಕೆ ಈಡೇರಿಕೆಗಾಗಿ ಕಳೆದ ಹತ್ತು ವರ್ಷಗಳಿಂದ ಮನವಿ ಮಾಡ್ತಿದ್ದಾರೆ. ಬೇಡಿಕೆ ಈಡೇರಿಸುವಂತೆ ಹೋರಾಟವನ್ನೂ ಮಾಡಿದ್ದಾರೆ. ಆದರೆ, ಕೇಂದ್ರ ಸರ್ಕಾರ ಮಾತ್ರ ಇಪಿಎಸ್ -೯೫ ಪಿಂಚಣಿದಾರರ ಬೇಡಿಕೆ ಈಡೇರಿಸುವಲ್ಲಿ ಮುಂದಾಗಿಲ್ಲ ಎಂಬ ಆಕ್ರೋಶದ ಕಿಚ್ಚು ಪಿಂಚಣಿದಾರರಿAದ ಕೇಳಿಬಂದಿದೆ. ಹತ್ತು ವರ್ಷಗಳಿಂದಲೂ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಪಿಂಚಣಿದಾರರು ಹೋರಾಟಕ್ಕಿಳಿಯುವ ಪರಿಸ್ಥಿತಿ ಅನಿವಾರ್ಯವಾಗಿದ್ದು, ಇದರ ಭಾಗವಾಗಿ ತುಮಕೂರಿನ ಇಪಿಎಸ್- ೯೫ ಪಿಂಚಣಿದಾರರು ತುಮಕೂರಿನ ಪಾಲಿಕೆ ಆವರಣದ ಅಂಬೇಡ್ಕರ್ ಪ್ರತಿಮೆ ಮುಂದೆ ತಮ್ಮ ಪ್ರತಿಭಟನೆ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಎನ್‌ಎಸ್‌ಇ ಸಹ ಕಾರ್ಯದರ್ಶಿ ಕೆ.ಎಸ್.ರಾಜಣ್ಣ ಅವರು ಪ್ರತಿಭಟನೆ ಮಾತನಾಡುತ್ತಾ ಇಪಿಎಸ್-೯೫ ಪಿಂಚಣಿದಾರರು ಕನಿಷ್ಠ ಮಾಸಿಕ ಪಿಂಚಣಿಯನ್ನು ೭೫೦೦ ಕ್ಕೆ ಹೆಚ್ಚಿಸಬೇಕು. ವಿಧವಾ ಪಿಂಚಣಿ ಕೊಡಬೇಕು ಎಂಬುದು ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು. ಕಳೆದ ೧೦ ವರ್ಷಗಳಿಂದ ಪಿಂಚಣಿದಾರರು ನಿರಂತರ ಹೋರಾಟ ನಡೆಸುತ್ತಾ, ತಮ್ಮ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದರೂ ಯಾವುದೇ ಶಾಶ್ವತ…

Read More

ಕೊರಟಗೆರೆ: ಮೇವು ಕೆಡಬಾರದುಎಂದುಕೆಮಿಕಲ್ ಬಳಸಿದ ಮೇವನ್ನ ಕುರಿಗಳು ಸ್ಥಳದಲ್ಲಿಯೇ ಮೃತಪಟ್ಟಿರುವಘಟನೆ ವಡ್ಡೇರಹಳ್ಳಿ ಗ್ರಾಮದಲ್ಲಿ ನೆಡೆದಿದೆ. ತಾಲೂಕಿನ ಕೋಳಾಲ ಹೋಬಳೀಯ ಚಿನ್ನಹಳ್ಳಿ ಗ್ರಾಪಂ ವ್ಯಾಪ್ತಿಯ ವಡ್ಡೇರಹಳ್ಳಿ ಗ್ರಾಮದ ಹನುಮಂತೇಗೌಡಎನ್ನವರೈತಹೈನುಗಾರಿಕೆ ಮಾಡಿಕೊಂಡಿದ್ದು, ಮನೆಯ ಪಕ್ಕದಲ್ಲಿಯೇ ಸುಮಾರು ೭೦ ಕ್ಕೂ ಹೆಚ್ಚು ನಾಟಿ ಸುವರ್ಣ, ಡಾರ್ಪರ್‌ಎನ್ನವ ಹೈಬ್ರೀಡ್ ತಳಿ ಕುರಿಗಳನ್ನ ಸಾಕಾಣಿಕೆ ಮಾಡುತ್ತಿದ್ದರು. ಒಂದುಕುರಿ ೬೦ ಸಾವಿರ, ಒಂದುಟಗರು ೧.೫ ಲಕ್ಷ ಬೆಲೆ ಬಾಳುವಂತ ಕುರಿಗಳನ್ನ ಕಳೆದುಕೊಂಡು ರೈತಕಂಗಾಲಾಗಿದ್ದಾನೆ. ಸುಮಾರು ೬೨ ಕುರಿಗಳು ಸ್ಥಳದಲ್ಲಿಯೇ ಮೃತಪಟ್ಟಿದ್ರೆ ಉಳಿದ ಕುರಿಗಳ ಪರಿಸ್ಥಿತಿ ಚಿಂತಾಜನಕವಾಗಿವೆಎನ್ನಲಾಗಿದೆ. ಸುಮಾರು ವರ್ಷಗಳಿಂದ ರೈತಹನುಮಂತೇಗೌಡ ಸುಮಾರು ೧೧೦ ಕ್ಕೂ ಹೆಚ್ಚು ನಾಟಿ ಸುವರ್ಣ, ಡಾರ್ಪರ್‌ಕುರಿಗಳನ್ನ ಸಾಕಾಣಿಕೆ ಮಾಡಿಕೊಂಡು ಬರುತ್ತಿದ್ದು, ೪೦ ಕುರಿಗಳನ್ನ ಬೇರೆಡೆ ಸಾಕಾಣಿಕೆ ಮಾಡಲಾಗುತ್ತಿದ್ದ, ಮನೆ ಹತ್ತಿರ ಸುಮಾರು ೭೦ ಕ್ಕೂ ಹೆಚ್ಚು ಕುರಿಗಳನ್ನ ಸಾಕಾಣಿಕೆ ಮಾಡುತ್ತಿದ್ದರು. ಮನೆಯಲ್ಲಿದ್ದಕುರಿಗೆ ಹಾಕುವ ಮೇವು ಕೆಡಬಾರದುಎನ್ನವಉದ್ದೇಶದಿಂದಕೆಮಿಕಲ್ ಬಳಸಲಾಗಿದೆ ಎನ್ನಲಾಗಿದೆ.ಸುಮಾರು ೬೨ ಕುರಿಗಳು ಮೇವು ತಂದುಜೀವ ಕಳೆದುಕೊಂಡಿವೆ. ಸ್ಥಳಕ್ಕೆ ಆರೋಗ್ಯ ಇಲಾಖೆ, ಪಶು ಹಾಗೂ ಕೃಷಿ ಇಲಾಖೆಯ…

Read More

ತುಮಕೂರು: ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಆಗಸ್ಟ್ ೧೫ರಂದು ಸ್ವಾತಂತ್ರ‍್ಯ ದಿನಾಚರಣೆಯ ಸಂಭ್ರಮಾಚರಣೆಗೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಸ್ವಾತಂತ್ರ‍್ಯ ದಿನಾಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಸ್ವಾತಂತ್ರ‍್ಯ ದಿನಾಚರಣೆಯಲ್ಲಿ ನಾವೆಲ್ಲರೂ ಸಂತಸದಿAದ ಭಾಗವಹಿಸಿ ಅರ್ಥಪೂರ್ಣವಾಗಿ ಹಬ್ಬದ ರೀತಿಯಲ್ಲಿ ಆಚರಿಸಬೇಕು. ಅದಕ್ಕೆ ಪೂರಕ ಸಿದ್ಧತೆಗಳನ್ನು ಕೈಗೊಳ್ಳಬೇಕೆಂದು ಸೂಚಿಸಿದರು. ವಿವಿಧ ಶಾಲಾ-ಕಾಲೇಜು, ವಸತಿ ನಿಲಯಗಳ ಮಕ್ಕಳಿಂದ ದೇಶಭಕ್ತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ಸಾಂಸ್ಕೃತಿಕ ಕಾರ್ಯಕ್ರಮವು ಸ್ವಚ್ಛತೆ, ಪರಿಸರ ಸಂರಕ್ಷಣೆ, ರಸ್ತೆ ಸುರಕ್ಷತೆ, ಜೀವಜಲ ಸಂರಕ್ಷಣೆಯAತಹ ವಿಷಯಾಧಾರಿತವಾಗಿರಬೇಕು ಸೂಚಿಸಿದರು. ಬೆಳಿಗ್ಗೆ ೯ ಗಂಟೆಗೆ ಉಪ ಮುಖ್ಯಮಂತ್ರಿಗಳಿAದ ಧ್ವಜಾರೋಹಣ: ಜಿಲ್ಲಾಡಳಿತ ವಿವಿಧ ಇಲಾಖೆ ಹಾಗೂ ಸಂಘ-ಸAಸ್ಥೆಗಳ ಸಹಯೋಗದೊಂದಿಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಆಗಸ್ಟ್ ೧೫ರಂದು ಬೆಳಿಗ್ಗೆ ೯ ಗಂಟೆಗೆ ಉಪ ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ, ಗೌರವ ರಕ್ಷೆ ಸ್ವೀಕಾರ, ಸ್ವಾತಂತ್ರೊö್ಯÃತ್ಸವದ ಸಂದೇಶ ನೀಡುವ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮ ನಡೆಯಲಿರುವ ಜಿಲ್ಲಾ…

Read More

ತುಮಕೂರು: ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭವಾಗಿ ೪೫ ದಿನಗಳಾದರೂ ಶಾಲೆಯಲ್ಲಿ ಕ್ರೀಡಾ ಚಟುವಟಿಕೆ ಆರಂಭವಾಗಿಲ್ಲ, ೧೪ ವಯೋಮಾನ ಹಾಗೂ ೧೭ ವಯೋಮಾನದ ಕ್ರೀಡಾಕೂಟ ನಡೆಸಲು ಸಾರ್ವಜನಿಕ ಇಲಾಖೆ ಮೀನಾಮೇಷ ಎಣಿಸುತ್ತಿರುವುದು ಮಕ್ಕಳ ಬಾಲ್ಯವನ್ನೇ ಮಸುಕಾಗಿಸಿದೆ. ಜೂನ್ ತಿಂಗಳಲ್ಲಿಯೇ ಹೊರಬೀಳಬೇಕಿರುವ ಸುತ್ತೋಮೆ ಜುಲೈ ಅರ್ಧ ಮುಗಿದರೂ ಪ್ರಕಟವಾಗಿಲ್ಲ, ರಾಜ್ಯಾದ್ಯಂತ ೪೮೫೨೭ ಶಾಲೆಗಳಲ್ಲಿ ಕ್ರೀಡಾ ಚಟುವಟಿಕೆ ಇನ್ನೂ ಆರಂಭವಾಗದ ಪರಿಣಾಮ ವಿದ್ಯಾರ್ಥಿಗಳಲ್ಲಿದ್ದ ಕ್ರೀಡಾ ಆಸಕ್ತಿ ಹಾಗೂ ಉತ್ಸಾಹ ಕುಗ್ಗುವಂತಾಗಿದೆ. ಕ್ರೀಡಾಕೂಟ ಆಯೋಜಿಸಲು ಬೇಗಾದ ಪೂರ್ವಸಿದ್ಧತೆಯೂ ಇಲ್ಲದಂತಾಗಿದೆ. ಜಿಲ್ಲಾ ಮಟ್ಟದ ದೈಹಿಕ ಶಿಕ್ಷಣ ಉಸ್ತುವಾರಿ ಹೊಣೆ ಹೊತ್ತಿರುವ ಅಧಿಕಾರಿಗಳ ಜತೆ ಕಳೆದ ಜೂ.೧೧ರಂದು ದೈಹಿಕ ಶಿಕ್ಷಣ ವಿಭಾಗದ ಜಂಟಿ ನಿರ್ದೇಶಕ ನರಸಿಂಹಯ್ಯ ಅವರು ಸಭೆ ನಡೆಸಿದ್ದಾರೆ ಆದರೂ, ಒಂದು ತಿಂಗಳಾದರೂ ಮಾರ್ಗಸೂಚಿ ಹೊರಡಿಸದಿರುವುದು ಮಕ್ಕಳ ನವಿರಾದ ಬಾಲ್ಯ ಕಿತ್ತುಕೊಳ್ಳುವಂತಾಗಿದೆ. ಪ್ರತಿ ಶೈಕ್ಷಣಿಕ ವರ್ಷದ ಆರಂಭದಿAದಲೇ ಕ್ರೀಡಾ ಚಟುವಟಿಕೆಗೆ ಆದ್ಯತೆ ನೀಡುವುದು ವಾಡಿಕೆ ಆದರೆ, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಗುರುತಿಸಿ ತಾಲೂಕು, ಜಿಲ್ಲಾ, ವಿಭಾಗ ಹಾಗೂ ರಾಜ್ಯಮಟ್ಟದ ಸ್ಪರ್ಧೆಗಳಿಗೆ…

Read More

ಹುಳಿಯಾರು: ಸರ್ಕಾರ ಮದ್ಯ ಮಾರಾಟದ ಅಂಗಡಿಗಳನ್ನು ತೆರೆದಿದ್ದರೂ, ಅಲ್ಲಿಗೆ ಹೋಗದಿರುವ ನಿರ್ಧಾರ ನಮ್ಮದಾಗಬೇಕು ಎಂದು ಹುಳಿಯಾರು ಹೋಬಳಿಯ ತಿಮ್ಲಾಪುರ ಗ್ರಾಪಂ ಪಿಡಿಒ ರಮೇಶ್ ಅವರು ಕರೆ ನೀಡಿದರು. ಹುಳಿಯಾರಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಆಯೋಜಿಸಲಾಗಿದ್ದ ಮಧ್ಯ ವರ್ಜನ ಶಿಬಿರದ ಮಾಹಿತಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಅವರು ಪ್ರಮುಖ ಉಪನ್ಯಾಸಕರಾಗಿ ಮಾತನಾಡುತ್ತಿದ್ದರು. ಕುಡಿತದ ಚಟಕ್ಕೆ ಬಿದ್ದ ವ್ಯಕ್ತಿ ಮೊದಮೊದಲು ಸ್ನೇಹಿತರ ಒತ್ತಾಯಕ್ಕೋ ಅಥವಾ ಚುನಾವಣೆಯ ಸಂದರ್ಭದಲ್ಲಿ ಸಿಗುವ ಉಚಿತ ಮದ್ಯಕ್ಕೋ ಮಾರುಹೋಗುತ್ತಾನೆ. ತದನಂತರ ಇದು ವ್ಯಸನವಾಗಿ ಬದಲಾಗಿ, ತಮಗಿರುವ ಜಮೀನನ್ನು ಅಡವಿಟ್ಟು ಕೊನೆಗೆ ಅದನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಕೊನೆಗೆ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆ ಸೇರಿದಾಗ ಸಾಲದ ಹೊರೆ ಮತ್ತಷ್ಟು ಹೆಚ್ಚಾಗಿ ಇಡೀ ಕುಟುಂಬವೇ ಬೀದಿಗೆ ಬೀಳುತ್ತದೆ. ಕೊನೆಗೆ ಹೆಂಡತಿ-ಮಕ್ಕಳ ಭವಿಷ್ಯ ಅಂಧಕಾರವಾಗುತ್ತದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು. ಕೊರೊನಾ ಸಾಂಕ್ರಾಮಿಕದ ಅವಧಿಯಲ್ಲಿ ಎರಡು-ಮೂರು ವರ್ಷಗಳ ಕಾಲ ಮದ್ಯ ಸಿಗದೇ ಇದ್ದಾಗ ಎಷ್ಟೋ ಕುಡುಕರು ಅನಿವಾರ್ಯವಾಗಿ ಕುಡಿತವನ್ನು ಬಿಟ್ಟಿದ್ದರು. ಇಂದು ಅವರು ಉತ್ತಮ…

Read More

ತುಮಕೂರು: ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್‌ನ ೭೫ ವರ್ಷಾಚರಣೆ ಅಂಗವಾಗಿ ಈ ತಿಂಗಳ ೨೭ರಿಂದ ಆರು ದಿನಗಳ ಕಾಲ ನಗರದಲ್ಲಿ ಯೋನೆಕ್ಸ್-ಸನ್‌ರೈಸ್ ರಾಜ್ಯ ರ‍್ಯಾಂಕಿAಗ್ ಬ್ಯಾಡ್ಮಿಂಟನ್ ಅಂಡರ್-೧೧ ಮತ್ತು ಅಂಡರ್-೧೩ ವಿಭಾಗಗಳ ಪಂದ್ಯಾವಳಿ ಏರ್ಪಾಟಾಗಿದೆ. ರಾಜ್ಯಾದ್ಯಂತ ಸುಮಾರು ೬೦೦ ಆಟಗಾರರು ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ ಎಂದು ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷರೂ ಆದ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದರು. ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಡ್ಮಿಂಟನ್‌ನಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ರಾಜ್ಯದ ಪ್ರತಿಭಾವಂತ ಬ್ಯಾಡ್ಮಿಂಟನ್ ಆಟಗಾರರು ವಿಶ್ವ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಮುಂಬರುವ ಒಲಂಪಿಕ್ ಗುರಿ ಇಟ್ಟುಕೊಂಡು ಪ್ರತಿಭಾನ್ವಿತ ಬ್ಯಾಡ್ಮಿಂಟನ್ ಆಟಗಾರರನ್ನು ಗುರುತಿಸಲು, ಸಿದ್ಧಪಡಿಸಲು ಈ ಟೂರ್ನಮೆಂಟ್ ಉತ್ತಮ ವೇದಿಕೆ ಆಗಲಿದೆ. ಆರು ಅಂಕಣಗಳಲ್ಲಿ ಆರು ದಿನಗಳ ಕಾಲ ಪಂದ್ಯಾವಳಿ ನಡೆಯಲಿದೆ. ಆಗಸ್ಟ್ ೧ರಂದು ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ೫೦೦ಕ್ಕೂ ಹೆಚ್ಚು ಪ್ರತಿಭಾವಂತ ಕಿರಿಯ ಬ್ಯಾಡ್ಮಿಂಟನ್ ಆಟಗಾರರು ಈ ಪಂದ್ಯಾವಳಿಯಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಇದು ಅಂಡರ್-೧೧…

Read More

ತುಮಕೂರು: ರಾಜ್ಯ ಚುನಾವಣಾ ಆಯೋಗ ನಡೆಸುತ್ತಿರುವ ಎಸ್.ಐ.ಆರ್.ನಲ್ಲಿ ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಜಿಲ್ಲಾಡಳಿತ, ಚುನಾವಣಾ ಆಯೋಗದ ಸಹಕಾರದಿಂದ ಉತ್ತಮವಾಗಿ ಮತದಾರರ ನೊಂದಣಿ ನಡೆದಿದ್ದು, ಶೇ೯೯.೭೨ರಷ್ಟು ಮತದಾರರಿಗೆ ಎನ್ಮರೇಷನ್ ಫಾರಂ ಹಂಚುವ ಮೂಲಕ ಬಿಎಲ್‌ಓಗಳು ಉತ್ತಮ ಕೆಲಸ ಮಾಡಿದ್ದಾರೆ ಎಂದು ಮಾಜಿ ಶಾಸಕ ಡಾ.ಎಸ್.ರಫೀಕ್ ಅಹಮದ್ ಶ್ಲಾಘೀಸಿದ್ದಾರೆ. ನಗರದ ೭ನೇ ವಾರ್ಡಿನ ಜಿ.ಸಿ.ಆರ್. ಕಾಲೋನಿಯ ಕೆಲ ಬಡಾವಣೆಗಳಿಗೆ ಭೇಟಿ ನೀಡಿ,ಎಸ್.ಐ.ಆರ್. ಪ್ರಕ್ರಿಯೆ ಕಾರ್ಯವನ್ನು ವೀಕ್ಷಿಸಿದ ನಂತರ,ಅಲ್ಲಿನ ಮತದಾರರು ಮತ್ತು ಬಿ.ಎಲ್.ಓ ಗಳಿಂದ ಮಾಹಿತಿ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಚುನಾವಣಾ ಆಯೋಗದಿಂದ ನೇಮಕ ವಾಗಿರುವ ಬಿಎಲ್‌ಓಗಳು ಪ್ರತಿ ಮನೆ ಮನೆಗೆ ಭೇಟಿ ನೀಡಿ ಫಾರಂ ನೀಡುವ ಮೂಲಕ ಎಸ್‌ಐಆರ್ ಪ್ರಕ್ರಿಯೆಗೆ ಒಳ್ಳೆಯ ಸಾಥ್ ನೀಡಿದ್ದಾರೆ ಎಂದರು. ಕಳೆದ ೨೯ ರಿಂದ ಎಸ್.ಐ.ಆರ್.ಪ್ರಕ್ರಿಯೆ ರಾಜ್ಯದಲ್ಲಿ ಆರಂಭವಾಗಿದ್ದು, ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಎಸ್.ಐ.ಆರ್. ಬಹಳ ತ್ವರಿತಗತಿಯಲ್ಲಿ ನಡೆಯುತ್ತಿದೆ.ತುಮಕೂರು ನಗರ ೧೩೨ನೇ ವಿಧಾನಸಭಾ ಕ್ಷೇತ್ರದಲ್ಲಿ ೨೪೭ಬೂತ್ ಗಳಿದ್ದು, ೨,೮೩,೮೦೦ ಮತದಾರರಿದ್ದು,ಈಗಾಗಲೇ ಬಿಎಲ್‌ಓಗಳು ೨,೭೩ಲಕ್ಷ ಎನ್ಮರೇಷನ್…

Read More