Author: News Desk Benkiyabale

ಚಿಕ್ಕನಾಯಕನಹಳ್ಳಿ: ಕೇಂದ್ರ ಹಾಗೂ ರಾಜ್ಯ ಸರ್ಕಾರದಗಳ ರೈತವಿರೋಧಿ ನೀತಿ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಒತ್ತಾಯಿಸಿ ರೈತಸಂಘಟನೆಗಳು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ರಾಜ್ಯರೈತಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಘಟಕದ ಸದಸ್ಯರು ಪಟ್ಟಣದ ಮುಖ್ಯರಸ್ತೆಯ ಮೂಲಕ ಪ್ರತಿಭಟನಾ ಮೆರವ ಣಿಗೆಯೊಂದಿಗೆ ತಾಲ್ಲೂಕು ಕಚೇರಿಯವರೆಗೆ ಆಗಮಿಸಿದರು. ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯದುಕುಮಾರ್ ಮಾತನಾಡಿ ಕಳೆದ ೩೦ ವರ್ಷಗಳಿಂದ ಜಾಗತಿಕ ಕ್ಷೇತ್ರವು ಹಲವು ಬದಲಾವಣೆಗಳನ್ನು ಕಂಡಿದೆ. ಇದರಲ್ಲಿ ಸರ್ಕಾರಗಳು ಬಂಡವಾಳಶಾಹಿ ಕೇಂದ್ರಿತ ವ್ಯವಸ್ಥೆಗೆ ಕೈಜೋಡಿಸಿದ ಪರಿಣಾಮ ಜನಸಾಮಾನ್ಯರ ಮೇಲಾಗುತ್ತಿದೆ, ಅಗತ್ಯವಸ್ತುಗಳ ಬೆಲೆ ಏರಿಕೆ, ಖಾಸಗೀಕರಣದಿಂದ ರೈತರಿಗೆ ದುರ್ಬಲವರ್ಗಕ್ಕೆ ಸರ್ಕಾರದಿಂದ ದೊರೆಯುತ್ತಿದ್ದ ಹಲವು ಸೌಲಭ್ಯ, ಸಬ್ಸಿಡಿಯಂತಹ ನೆರವುಗಳು ನಿಂತಿಹೋಗುತ್ತಿದೆ. ಕೃಷಿಮಾಡುವ ರೈತರ ವೆಚ್ಚ ದುಪ್ಪಟ್ಟಾಗಿದೆ, ಆದರೆ ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗದೆ ನಷ್ಠ ಅನುಭವಿಸಿ ರೈತರ ಆತ್ಮಹತ್ಯೆಗೆ ಕಾರಣವಾಗಿದೆ, ರೈತರ ಎಲ್ಲಾ ಬೇಡಿಕೆಗಳನ್ನು ಇಡೇರಿಸುತ್ತೇವೆ ಎಂಬ ಭರವಸೆಗೊಂದಿಗೆ ಬಂದ ರಾಜ್ಯದ ಕಾಂಗ್ರೆಸ್ ಸರ್ಕಾರವೂಸಹ ರೈತ ವಿರೋಧಿನೀತಿ ಪಾಲಿಸಲು ಮುಂದಾಗಿದೆ…

Read More

ತುಮಕೂರು: ಎಂಜಿನಿಯರಿAಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ಇಂದಿನಿAದ ಆರಂಭವಾದ ಸಾಮಾನ್ಯ ಪ್ರವೇಶ (ಸಿಇಟಿ) ಪರೀಕ್ಷೆಯು ನಗರ ಸೇರಿದಂತೆ ಜಿಲ್ಲೆಯಾದ್ಯಂತ ೨೫ ಪರೀಕ್ಷಾ ಕೇಂದ್ರಗಳಲ್ಲಿ ಸುಗಮವಾಗಿ ನಡೆಯಿತು. ತುಮಕೂರು ನಗರ ೧೮, ತಿಪಟೂರಿನ ೪ ಹಾಗೂ ಸಿರಾ ನಗರದ ೩ ಪರೀಕ್ಷಾ ಕೇಂದ್ರ ಸೇರಿ ಒಟ್ಟು ೨೫ ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆ ನಡೆದಿದ್ದು, ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಜಿಲ್ಲೆಯ ೨೫ ಪರೀಕ್ಷಾ ಕೇಂದ್ರಗಳಲ್ಲಿ ೧೧೭೫೦ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆಯುತ್ತಿದ್ದಾರೆ. ನಗರದ ಸಿದ್ದಗಂಗಾ ಮಹಿಳಾ ಪ.ಪೂ. ಕಾಲೇಜು ಸೇರಿದಂತೆ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಬೆಳಿಗ್ಗೆ ೮ ಗಂಟೆಯಿAದಲೇ ವಿದ್ಯಾರ್ಥಿಗಳು ಆಗಮಿಸಿ, ತಮ್ಮ ಪ್ರವೇಶ ಪತ್ರಗಳಲ್ಲಿದ್ದ ಕ್ಯೂ ಆರ್ ಕೋಡ್ ಮೂಲಕ ತಮ್ಮ ಮುಖ ಚಹರೆಯನ್ನು ಪರಿಶೀಲಿಸುವ ಕಾರ್ಯದಲ್ಲಿ ತೊಡಗಿದ್ದ ದೃಶ್ಯಗಳು ಕಂಡು ಬಂದವು. ಇAದು ಮತ್ತ ನಾಳೆ ಎರಡು ದಿನಗಳ ಕಾಲ ಸಿಇಟಿ ಪರೀಕ್ಷೆ ನಡೆಯುತ್ತಿದ್ದು, ಇಂದು ಬೆಳಿಗ್ಗೆ ೧೦.೩೦ ರಿಂದ ೧೧.೫೦ ರವರೆಗೆ ಭೌತಶಾಸ್ತç, ಮಧ್ಯಾಹ್ನ ೧೨.೩೦…

Read More

ಕೊರಟಗೆರೆ: ಏ. ೧೬ ತಾಲೂಕಿನ ಎಲೆರಾಂಪುರ ಗ್ರಾಮ ದಲ್ಲಿನ ಕುಂಚಿಟಿಗರ ಮಹಾಸಂಸ್ಥಾನ ಮಠದಲ್ಲಿ ಭಕ್ತಿಭಾವಪೂರ್ಣ ವಾತಾವರಣದಲ್ಲಿ ನಾಲ್ಕನೇ ವರ್ಷದ ಸಂಸ್ಕಾರ ಶಿಬಿರಕ್ಕೆ ಬುಧವಾರ ಭವ್ಯ ಚಾಲನೆ ದೊರೆಯಿತು. ಕಾರ್ಯಕ್ರಮದ ಉದ್ಘಾಟನೆಗೆ ತುಮಕೂರು ಜಿಲ್ಲಾಧಿಕಾರಿ ಡಾ. ಶುಭಕಲ್ಯಾಣ ಮತ್ತು ತುಮ ಕೂರು ವಿಶ್ವವಿದ್ಯಾನಿಲಯದ ಕುಲಸಚಿವೆ ನಾಹೀ ದ ಜಂ ಜಂ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮ ಉದ್ಘಾಟಿಸಿ ಜಿಲ್ಲಾಧಿಕಾರಿ ಡಾ. ಶುಭಕಲ್ಯಾಣ ಮಾತನಾಡುತ್ತಾ, “ಯಾವುದೇ ವಿಚಾರದಲ್ಲಿ ಶ್ರದ್ಧೆಯಿಂದ ಕಲಿತರೆ ಅದು ಜೀವ ನದ ದಿಕ್ಕು ಬದಲಾಯಿಸಬಲ್ಲದು. ಈ ಶಿಬಿರ ಮಕ್ಕಳಿಗೆ ಸಂಸ್ಕಾರಗಳನ್ನೂ ಕಲಿಸುವುದರ ಜೊತೆಗೆ, ಸಮಾಜದತ್ತ ನೈತಿಕ ಹೊಣೆಗಾರಿಕೆ ತಿಳಿಯಿಸುವ ಶಿಕ್ಷಣದ ಪಾಠಶಾಲೆಯಾಗಿದೆ,” ಎಂದು ಶ್ಲಾಘಿಸಿದರು. ತುಮಕೂರು ವಿಶ್ವ ವಿದ್ಯಾನಿಲಯದ ಕುಲಸಚಿವೆ ನಾಹೀದ ಜಂ ಜಂ ತಮ್ಮ ಭಾಷಣದಲ್ಲಿ, “ಈಗಿನ ತಲೆಮಾರಿಗೆ ನೀತಿಭದ್ರತೆ, ಶಿಸ್ತು ಮತ್ತು ಗೌರವವಂತಿಕೆ ಅತ್ಯಗತ್ಯ. ಹನುಮಂತನಾಥ ಸ್ವಾಮೀಜಿಗಳ ಶಿಬಿರ ಇಂಥ ಮೌಲ್ಯಗಳನ್ನು ಬಾಲ ಮನಸ್ಸಿನಲ್ಲಿ ಬಿತ್ತುವ ಮಹತ್ತರ ಕಾರ್ಯ ಮಾಡುತ್ತಿದೆ,” ಎಂದು ಹೇಳಿದರು. ಕಾರ್ಯಕ್ರಮದ ದಿವ್ಯ…

Read More

ತುಮಕೂರು: ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿವತಿಯಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಬೆಲೆ ಏರಿಕೆ ಖಂಡಿಸಿ ತುಮಕೂರು ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಯಿತು ಈ ಸಂದಭದಲ್ಲಿ ತುಮಕೂರು ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಪ್ರಧಾನಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕರಾದ ಎ.ನರಸಿಂಹಮೂರ್ತಿಸAವಿಧಾನದ ಆಶಯವಾದ ಕಲ್ಯಾಣ ರಾಜ್ಯದ ಪರಿಕಲ್ಪನೆಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ಪರ್ಧೇಗೆ ಇಳಿದು ಬೆಲೆ ಏರಿಕೆ ಮಾಡುತ್ತಿವೆ. ಈ ಬೆಲೆ ಏರಿಕೆಯಿಂದ ಬಡವರಿಗೆ ಪ್ರತಿನಿತ್ಯ ರಕ್ತ ಹೀರುತ್ತಿವೆ. ಜನರ ಕಲ್ಯಾಣ ಮಾಡುವ ಸರ್ಕಾರಗಳು ಬಡವರ ರಕ್ತ ಹೀರುವ ಕೆಲಸಕ್ಕೆ ಮುಂದಾಗಿವೆ. ಇದನ್ನು ಸ್ಲಂ ಜನಾಂದೋಲನ ಕರ್ನಾಟಕ ಖಂಡಿಸುತ್ತದೆ. ಜನವರಿ ೫-೨೦೨೫ ರಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರದ ಬಸ್ ದರವನ್ನು ಶೇಕ ೧೫% ರಷ್ಟು ಏರಿಕೆ ಮಾಡಿದೆ ಇನ್ನೊಂದೆಡೆ ವಿದ್ಯುತ್ ದರವನ್ನು ಮತ್ತೆ ಪರಷ್ಕರಣೆ ಮಾಡಲಾಗಿದೆ ಸದ್ಯಕ್ಕೆ ರಾಜ್ಯದಲ್ಲಿ…

Read More

ತುಮಕೂರು: ೭ನೇ ವೇತನಆಯೋಗದ ಪರಿಷ್ಕೃತ ವೇತನ ಪಾವತಿಗೆಅವಶ್ಯವಿರುವ ಹೆಚ್ಚುವರಿಅನುದಾನವನ್ನು ನೀಡುವುದೂ ಸೇರಿದಂತೆವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿಇಲ್ಲಿನ ಮಹಾನಗರಪಾಲಿಕೆಅಧಿಕಾರಿಗಳ ಹಾಗೂ ನೌಕರರ ಸಂಘದಕರೆಯ ಮೇರೆಗೆಅಧಿಕಾರಿ, ನೌಕರರು ಬುಧವಾರಕಪ್ಪುಪಟ್ಟಿ ಧರಿಸಿ ಕಾರ್ಯನಿರ್ವಹಿಸಿದರು. ಈ ಸಂಬAಧ ನಗರ ಪಾಲಿಕೆ ಆಯುಕ್ತರಿಗೆ ಮನವಿಪತ್ರ ಸಲ್ಲಿಸಿದ ಅಧಿಕಾರಿ, ನೌಕರರು, ರಾಜ್ಯ ಸಂಘದವತಿಯಿAದ ಸರ್ಕಾರಕ್ಕೆ ನೀಡಿರುವ ಬೇಡಿಕೆಗಳನ್ನು ಈಡೇರಿಸದೇಇದ್ದಲ್ಲಿ ಬರುವ ಮೇ ೨೬ರಂದು ಸಾಂದರ್ಭಿಕರಜೆ ಹಾಕಿ, ನ್ಯಾಯಯುತ ಬೇಡಿಕೆಗಳನ್ನು ಪಡೆಯುವ ಹಿತದೃಷ್ಟಿಯಿಂದ ಕೆಲಸ ಕಾರ್ಯಗಳನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಿ, ಅನಿವಾರ್ಯ ಕಾರಣಗಳಿಂದ ಹೋರಾಟವನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿರುತ್ತದೆಎಂದು ಹೇಳಿದರು. ಹಂತಹAತವಾಗಿ ಹೋರಾಟ ತೀವ್ರಗೊಳಿಸಲು ನಿರ್ಧರಿಸಲಾಗಿದೆ.ಮಹಾನಗರ ಪಾಲಿಕೆಗಳು ಖಾಯಂ ನೌಕರರ ವೇತನಾನುದಾನಕ್ಕೆ ನಿಗದಿತ ನಮೂನೆ ‘ಅಪೆಂಡಿಕ್ಸ್-ಬಿ’ಯಲ್ಲಿ ಸಲ್ಲಿಸಿದ್ದ ಬೇಡಿಕೆಯಲ್ಲಿ ಶೇ.೯೦/ಶೇ.೮೫ರಷ್ಟು ಅನುದಾನವನ್ನು ಮಾತ್ರ ಹಂಚಿಕೆ ಮಾಡಿ ವ್ಯತ್ಯಾಸದ ಉಳಿಕೆ ಶೇ.೧೦/ಶೇ.೧೫ ಅನುದಾನವನ್ನು ಮಹಾನಗರ ಪಾಲಿಕೆಗಳು ಕ್ರೋಢೀಕರಿಸಿದ ಸ್ವಂತ ಸಂಪನ್ಮೂಲಗಳಿAದ ಭರಿಸಲುಆರ್ಥಿಕಇಲಾಖೆಯ ೨೦೨೫-೨೬ನೇ ಸಾಲಿನ ಆಯವ್ಯಯ ವೆಚ್ಚ ಸಂಪುಟ-೦೪ ರಟಿಪ್ಪಣಿಯಂತೆ ಪೌರಾಡಳಿತ ನಿರ್ದೇಶನಾಲಯದಿಂದಆದೇಶ ಹೊರಡಿಸಲಾಗಿದ್ದು, ಸದರಿಆದೇಶವನ್ನು ಹಿಂಪಡೆದು, ಖಾಯಂನೌಕರರ ವೇತನಾನುದಾನಕ್ಕೆಅವಶ್ಶವಿರುವ ಸಂಪೂರ್ಣಅನುದಾನವನ್ನು ಎಸ್‌ಎಫ್‌ಸಿ ನಿಧಿಯಿಂದ ಬಿಡುಗಡೆಗೊಳಿಸಬೇಕು…

Read More

ತುಮಕೂರು: ಡೀಸಲ್ ದರ, ಎಫ್.ಸಿ. ಶುಲ್ಕ ಸೇರಿದಂತೆ ಸಾರಿಗೆ ಇಲಾಖೆಯಲ್ಲಿನ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯಾದ್ಯಂತ ಪ್ರತಿಭಟನೆಯನ್ನು ಏಪ್ರಿಲ್ ೧೪ರ ಮಧ್ಯಾರಾತ್ರಿಯಿಂದ ಹಮ್ಮಿಕೊಂ ಡಿದ್ದು, ಇದರ ಅಂಗವಾಗಿ ಕರ್ನಾಟಕ ಟ್ರೆöÊಲರ್ & ಟ್ರಕ್ ಓರ‍್ಸ್ ಅಸೋಸಿಯೇಷನ್ ವತಿ ಯಿಂದ ತುಮಕೂರು ನಗರದ ಕ್ಯಾತ್ಸಂದ್ರ ಬಳಿಯಿರುವ ಟೋಲ್‌ನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಪ್ರತಿಭಟನೆಯನ್ನುದ್ದೇಶಿಸಿ ರಾಜ್ಯಾಧ್ಯಕ್ಷರಾದ ಕೆ.ಆರ್.ರಾಘವೇಂದ್ರ ಮಾತನಾಡಿ ಡೀಸೆಲ್ ಮೇಲಿನ ಸೆಸ್ ಕಡಿತ, ಅಂತಾರಾಜ್ಯ ಆರ್.ಟಿ.ಓ. ಚೆಕ್ ಪೋಸ್ಟ್ ರದ್ದು, ರಾಜ್ಯ ಹೆದ್ದಾರಿಗಳಲ್ಲಿನ ಟೋಲ್ ಪ್ಲಾಜ್ ಮುಚ್ಚುವುದು, ಸಾರಿಗೆ ವಾಹನಗಳು ನಗರ ಪ್ರವೇಶವನ್ನು ಮುಕ್ತಗೊಳಿಸುವುದು, ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಾವು ಪ್ರತಿಭಟನೆಯನ್ನು ನಡೆಸುತ್ತಿದ್ದೇವೆ ಜೊತೆಗೆ ಇತ್ತೀಚಗೆ ಡೀಸೆಲ್ ಬೆಲೆಯಲ್ಲಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಡೀಸೆಲ್ ಬೆಲೆ ಇಳಿಕೆ ಮಾಡಲೇಬೇಕು ಏಕೆಂದರೆ ಇದರಿಂದ ಜನ ಸಾಮಾನ್ಯರ ಮೇಲೆ ನೇರ ಹೊರೆ ಬೀಳುತ್ತದೆ, ಜೊತೆಗೆ ಡೀಸಲ್ ಬೆಲೆ ಏರಿಕೆ ಯಿಂದ ಅಗತ್ಯವಸ್ತುಗಳ ಬೆಲೆಗಳಲ್ಲಿಯೂ ಸಹ ಗಣನೀಯ ಏರಿಕೆ ಬರುವುದು ಖಂಡಿತ ಆ ದುದರಿಂದ ಜನರ…

Read More

ತುಮಕೂರು: ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಹಾಗೂ ಅಖಿಲ ಭಾರತ ಅಂಬೇಡ್ಕರ್ ಪ್ರಚಾರ ಸಮಿತಿಯ ವತಿಯಿಂದ ಬಾಬಾ ಸಾಹೇಬ್ ಡಾ|| ಬಿ.ಆರ್.ಅಂಬೇಡ್ಕರ್‌ರವರ ೧೩೪ನೇ ಜನ್ಮದಿನಾಚರಣೆಯನ್ನು ಅಂಬೇಡ್ಕರ್ ಅವರ ಆಶಯದಂತೆ ಆಚರಿಸಲಾಯಿತು. ಡಾ. ಬಿ.ಆರ್.ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅಖಿಲ ಭಾರತ ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕು ಮಾರ್ ಮಾತನಾಡುತ್ತಾ ಇಂದು ತಳ ಸಮುದಾಯದ ಪ್ರತಿಯೊಬ್ಬರು ಸುಶಿಕ್ಷಿತರಾಗಿ ಬದುಕುತ್ತಿದ್ದೇವೆಂದರೆ ಅದಕ್ಕೆ ಮೂಲ ಕಾರಣ ಬಾಬಾ ಸಾಹೇಬರು, ಅವರು ಹಾಕಿಕೊಟ್ಟ ಮಾರ್ಗದರ್ಶನ ಇಂದು ಕೋಟ್ಯಂತರ ಜನರಿಗೆ ಅನುಕೂಲಕರವಾಗುತ್ತಿದೆ ಎಂದರೇ ತಪ್ಪಾಗಲಾರದು ಅದಕ್ಕಾಗಿಯೇ ಡಾ|| ಬಿ.ಆರ್.ಅಂಬೇಡ್ಕರ್ ಅವರನ್ನು ಮದರ್ ಆಫ್ ನೇಷನ್ ಎಂದು ಕರೆಯಲಾಗುತ್ತಿದೆ, ಅವರಿಗೆ ಜನರು ನೀಡಿರುವ ಬಿರುದುಗಳನ್ನು ಹೇಳುತ್ತಿದ್ದರೆ ಮೈ ರೋಮಾಂಚನವಾಗುದAತು ಸತ್ಯ ಎಂದರು. ಮುAದುವರೆದು ಮಾತನಾಡುತ್ತಾ ಭಾರತೀಯರಿಗೆ ಅಂಬೇಡ್ಕರ್ ಅವರ ಪ್ರತಿಭಟನಾತ್ಮಕ ಗುಣಗಳು ಪರಿಚಯವಾದಷ್ಟು ಅವರ ಔಧರ್ಯ ಅ ರ್ಥವಾಗಲಿಲ್ಲ. ಜನ ಸಮೂಹಗಳ ಮೇಲೆ ಅವರಿಗಿದ್ದ ಆಂತರಿಕ ಅಂತ:ಕರಣವನ್ನು ಸಂಪೂರ್ಣ…

Read More

ಕೊರಟಗೆರೆ: ೨೦೨೬ರ ಜೂನ್ ಅಂತ್ಯದೊಳಗೆ ತುಮಕೂರು ಜಿಲ್ಲೆಯ ತಿಪಟೂರು, ಚಿಕ್ಕನಾಯಕನಹಳ್ಳಿ, ಕೊರಟಗೆರೆ ಮತ್ತು ಮಧುಗಿರಿ ಕ್ಷೇತ್ರದ ೩೪೩ಕೆರೆಗಳಿಗೆ ಎತ್ತಿನಹೊಳೆ ಯೋಜನೆಯಿಂದ ನೀರಾವರಿಗೆ ೩.೪೪ಟಿಎಂಸಿ ಮತ್ತು ಕುಡಿಯುವ ನೀರಿಗೆ ೨.೨೯ ಟಿಎಂಸಿ ಸೇರಿ ಒಟ್ಟು ೫.೭೪ಟಿಎಂಸಿ ನೀರು ಹರಿಯಲಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ ಮಾಹಿತಿ ನೀಡಿದರು. ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ತೀತಾ ಗ್ರಾಪಂ ವ್ಯಾಪ್ತಿಯ ಗೊರವನಹಳ್ಳಿಯ ಕಮಲಪ್ರಿಯ ಕಲ್ಯಾಣ ಮಂಟಪದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ೨೪ಗ್ರಾಪಂ ಅಧ್ಯಕ್ಷ ರು, ಉಪಾಧ್ಯಕ್ಷರು ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ನಮ್ಮ ಸರಕಾರ ದಿವಾಳಿ ಆಗಿದೆ ಅಂತಾ ವಿರೋಧ ಪಕ್ಷದವ್ರು ಅಂತಾರೇ. ಹಿಂದಿನ ವರ್ಷದ ಬಜೆಟ್ ೩ಲಕ್ಷ ೭೧ಸಾವಿರ ಕೋಟಿ. ಪ್ರಸ್ತುತ ವರ್ಷದ ಬಜೆಟ್ ಗಾತ್ರ ೪ಲಕ್ಷ ೯ಸಾವಿರ ಕೋಟಿ. ಬಜೆಟ್ ಹೆಚ್ಚಾಗಿದ್ದು ವಿರೋಧ ಪಕ್ಷಗಳಿಗೆ ಗೋತ್ತಿಲ್ಲವೇ. ಎತ್ತಿನಹೊಳೆ ಯೋಜನೆಯ ನೀರಾವರಿ ಮತ್ತು ಕುಡಿಯುವ ನೀರಿನ ಯೋಜ ನೆಯ ಅಭಿವೃದ್ದಿಯ ನನ್ನ ಹೆಜ್ಜೆಗುರುತು ಸಾಕ್ಷಿಯಾಗಿ ಉಳಿಯಲಿವೆ ಎಂದರು. ನಾನು ಮಧುಗಿರಿ ಕ್ಷೇತ್ರದ…

Read More

ತುಮಕೂರು: ಇಂದು ಸುಳ್ಳು ಹೋರಾಟಗಾರರನ್ನು ಸೃಷ್ಟಿ ಸಲಾಗುತ್ತಿದೆ. ಸಂಘಟನೆಗಳಿಗೆ ಸೈದಾಂತಿ ಬದ್ಧತೆ ಅಗತ್ಯವಾಗಿದೆ, ಸೈದಾಂತಿಕ ಬದ್ದತೆಯ ಹೋರಾಟಗಳೆ ಇವತ್ತು ಜನರನ್ನ ಸಂಕಷ್ಟಗಳಿAದ ಪಾರುಮಾಡಲು ಸಾಧ್ಯ ಎಂದು ಪ್ರೊ.ಕೆ. ದೊರೆರಾಜು ತಿಳಿಸಿದರು. ತುಮಕೂರು ನಗರದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಭವನದಲ್ಲಿ ತುಮಕೂರು ಪೌರಕಾರ್ಮಿಕರ ಸಂಘ, ರಿ, ಸಿಐಟಿಯು, ಕರ್ನಾ ಟಕ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘ ರಿ. ಕಸದ ಆಟೋ ಚಾಲಕರು ಮತ್ತು ಸಹಾಯಕರು, ಲೋರ‍್ಸ್ ಮತ್ತು ಕ್ಲೀರ‍್ಸ್ ಸಂಘ ರಿ. ನಗರ ಪಾಲಿಕೆ ನೀರು ಸರಬರಾಜು ನೌಕರರ ಸಂಘ ರಿ, ಜಂಟಿಯಾಗಿ ಸಂಘಟಿಸಿದ್ದ ಡಾಕ್ಟರ್;; ಬಾಬು ಜಗಜೀವನ್ ರಾಮ್ ಹಾಗು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಮುಂದುವರೆದು ಮಾತನಾಡಿದ ಅವರು ಇಂದು ಜಾತಿಯನ್ನು ಬಂಡವಾಳ ಮಾಡಿಕೊಂಡಿರುವ ಕೆಲವರು ತಮ್ಮ ನಾಯಕರ ಅನುಕೂಲಕ್ಕಾಗಿ ಸಂಘ ಟನೆಗಳನ್ನು ಕಟ್ಟುತ್ತಿದ್ದಾರೆ, ಜಾತಿ- ಜಾತಿಗಳ ನಡುವೆ ವೈಷಮ್ಯವನ್ನು ಹುಟ್ಟು ಹಾಕಿ ಸಮಾಜದಲ್ಲಿ ಜನ ಸಮುದಾಯಗಳ ಛಿದ್ರಿಕರಣಕ್ಕೆ ಕಾರಣವಾಗುತ್ತಿದ್ದಾರೆ,…

Read More

ತುಮಕೂರು: ನಗರದ ಲಯನ್ ಮಾರ್ಷಲ್ಸ್ ಆರ್ಟ್ ಕರಾಟೆ ಟ್ರೆöÊನಿಂಗ್ ಸ್ಕೂಲ್ ವಿದ್ಯಾರ್ಥಿಗಳು ಹರಿಯಾಣದ ಗುರುಗ್ರಾಮ್‌ನ ಕಮ್ಯುನಿಕ್ ಸೆಂಟರ್ ಹಾಲ್‌ನಲ್ಲಿ ನಡೆದ ಓಪನ್ ಇಂಟರ್ ನ್ಯಾಷನಲ್ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ. ಹರಿಯಾಣದಲ್ಲಿ ೨ ದಿನಗಳ ಕಾಲ ನಡೆದ ಈ ಚಾಂಪಿಯನ್ ಶಿಪ್‌ನಲ್ಲಿ ತುಮಕೂರಿನ ಲಯನ್ ಮಾರ್ಷಲ್ಸ್ ಆರ್ಟ್ ಕರಾಟೆ ಟ್ರೆöÊನಿಂಗ್ ಸ್ಕೂಲ್ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡುವ ಮೂಲಕ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಗಳಿಸಿದ್ದಾರೆ. ಪ್ರಥಮ ಬಹುಮಾನ ಉತ್ತಮ ಕರಾಟೆ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಾದ ವಂಶಿ ಕೆ.ಪಿ., ಪೋಷಿತ್ ಎಂ. ರಾಜು, ಸುಶಾಂತ್ ನಾಯಕ್ ಹಾಗೂ ಖುಷಿ ಕೆ.ಪಿ. ಅವರು ಪ್ರಥಮ ಬಹುಮಾನ ಪಡೆದಿದ್ದಾರೆ. ದ್ವಿತೀಯ ಬಹುಮಾನ ಅದ್ವಿಕ್ ಹೆಚ್.ಎಸ್., ಶ್ರೀರಂಗ, ಶ್ರೀನಿಧಿ, ದರ್ಶಿತ್, ಲೇಖಶ್ರೀ, ಶ್ರೀಹರಿ, ಅಭಿರಾಮ್, ಚೇತನ್‌ಕುಮಾರ್, ಶ್ರೀನಿವಾಸ್ ಹಾಗೂ ಜೇಂಕಾರ್ ಅವರು ದ್ವಿತೀಯ ಬಹುಮಾನ ಗಳಿಸಿದ್ದಾರೆ. ಓಪನ್ ಇಂಟರ್ ನ್ಯಾಷನಲ್ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ನಗರದ ಲಯನ್ ಮಾರ್ಷಲ್ಸ್ ಆರ್ಟ್ ಕರಾಟೆ ಟ್ರೆöÊನಿಂಗ್…

Read More