Author: News Desk Benkiyabale

ತುಮಕೂರು: ಗಣಿಭಾದಿತ ಪ್ರದೇಶಗಳ ಅಭಿವೃದ್ದಿಗೆಂದು ಮೀಸಲಿಟ್ಟಿರುವ ಹಣವನ್ನು ಬಾಧಿತ ಪ್ರದೇಶಗಳ ಶಿಕ್ಷಣ, ಆರೋಗ್ಯ ಮತ್ತು ಅರ್ಥಿಕ ಅಭಿವೃದ್ದಿಗೆ ಬಳಸುವಂತೆ ಸರಕಾರದ ಮೇಲೆ ನಿಗಾವಹಿಸುವುದು, ಹೊಸ ಗಣಿಗಾರಿಕೆಗೆ ಅನುಮತಿ ನೀಡದಂತೆ ಸರಕಾರದ ಮೇಲೆ ಒತ್ತಡ ತರುವುದು ಹಾಗೂ ಸೆಸ್ ಹಣ ಅನ್ಯ ಉದ್ದೇಶಗಳೀಗೆ ಬಳಕೆಯಾಗುವುದನ್ನು ತಡೆಯುವ ಉದ್ದೇಶದಿಂದ ಬಾದಿತ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಲು ಆಗಸ್ಟ್ ೧೬ ರಂದು ಬಳ್ಳಾರಿಯಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಜನಾಂದೋಲನ ಮಹಾಮೈತ್ರಿಯ ಎಸ್.ಆರ್.ಹಿರೇಮಠ್ ತಿಳಿಸಿದ್ದಾರೆ. ನಗರದ ವಿಜ್ಞಾನ ಕೇಂದ್ರದಲ್ಲಿ ಜನಾಂದೋಲನ ಮಹಾಮೈತ್ರಿ ವತಿಯಿಂದ ಆಗಸ್ಟ್ ೧೬ ರಂದು ಹಮ್ಮಿಕೊಂಡಿರುವ ಗಣಿ ಭಾದಿತ ಪ್ರದೇಶಗಳ ಪುನಶ್ಚೇತನ ಸಮಾಲೋಚನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು,ಬಳ್ಳಾರಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಗಾಲಿ ಜನಾರ್ಧನ್ ರೆಡ್ಡಿ ನೇತೃತ್ವದಲ್ಲಿ ನಡೆದ ಎಗ್ಗಿಲ್ಲದ ಗಣಿಗಾರಿಕೆಯಿಂದ ತೊಂದರೆಗೆ ಒಳಗಾದ ಜನರು ಹೋರಾಟದ ಫಲವಾಗಿ ೨೦೧೧ ರಲ್ಲಿ ಸುಪ್ರಿಂಕೋರ್ಟು ನೀಡಿದ ತೀರ್ಪಿನ ಅನ್ವಯ ಜೈಲು ಶಿಕ್ಷೆ ಅನುಭವಿಸಿದ್ದಲ್ಲದೆ, ದಂಡವನ್ನು ಕಟ್ಟಬೇಕಾಯಿತು.ಇವೆಲ್ಲವೂ ಸಾಧ್ಯ ವಾಗಿದ್ದು,ರೈತರು,ಕಾರ್ಮಿಕರು,ಪರಿಸರವಾದಿ ಗಳು,ಹೋರಾಟಗಾರರ ಐಕ್ಯ ಹೋರಾಟದಿಂದ.ಹಾಗಾಗಿ ಈ ಹೋರಾಟವನ್ನು…

Read More

ತುಮಕೂರು: ಚುನಾವಣಾ ಆಯೋಗದ ವಿರುದ್ಧ ಆ. ೫ ರಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಕಾಂಗ್ರೆಸ್‌ನ ಯುವ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿಯವರು ಭಾಗವಹಿಸಲಿದ್ದಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಇಂದಿಲ್ಲಿ ತಿಳಿಸಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಅಕ್ರಮಗಳು ನಡೆದಿವೆ. ಹೀಗಾಗಿ ಚುನಾವಣಾ ಆಯೋಗದ ವಿರುದ್ಧ ರಾಹುಲ್‌ಗಾಂಧಿಯವರು ಪ್ರತಿಭಟನೆ ನಡೆಸಲು ಆ. ೫ ರಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಅಕ್ರಮಗಳು ನಡೆದಿರುವ ಬಗ್ಗೆ ಚುನಾವಣಾ ಆಯೋಗದ ವಿರುದ್ದ ಅನೇಕ ದೂರುಗಳು ಬಂದಿದ್ದವು ಎಂದು ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು. ನಮ್ಮ ದೇಶದಲ್ಲಿ ಚುನಾವಣಾ ಅಕ್ರಮಗಳ ದೂರುಗಳನ್ನು ಸರಿಯಾಗಿ ಗಮನಿಸುತ್ತಿಲ್ಲ. ಮತ ಪಟ್ಟಿಗೆ ಮತದಾರರು ಸೇರ್ಪಡೆ ಮಾಡುವ ಹಾಗೂ ಮತ ಪಟ್ಟಿಯಿಂದ ಹೆಸರುಗಳನ್ನು ತೆಗೆಯುವ ವಿಚಾರದಲ್ಲೂ ಅತಿ ಹೆಚ್ಚಿನ ಪ್ರಮಾಣದಲ್ಲಿ ಅಕ್ರಮಗಳು ಆಗಿವೆ. ಹೀಗಾಗಿ ರಾಹುಲ್‌ಗಾಂಧಿಯವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲೂ ಕೂಡ ಈ…

Read More

ತುಮಕೂರು: ಮಣ್ಣಿನಿಂದ ಬಂದಕಾಯ ಮಣ್ಣ ಸೇರುವವರೆಗೂ ಪ್ರಕೃತಿಯೊಂದಿಗೆ ನಿಕಟ ಸಂಪರ್ಕ ಹೊಂದಿರುವ ಮನಸ್ಸು ತನ್ನಲ್ಲಿರುವ ಸುಪ್ತ ಪ್ರತಿಭೆಗಳನ್ನು ಹೊರ ಹಾಕಲು ಇಂತಹ ಕಲಾ ತರಬೇತಿಗಳು ಸಹಕಾರಿಯಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟರು. ನಗರದ ಡಾ: ಬಿ.ಆರ್.ಅಂಬೇಡ್ಕರ್ ಸರಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ವಿಶೇಷ ಘಟಕ ಯೋಜನೆಯಡಿ ಹಮ್ಮಿಕೊಂಡಿದ್ದ ಕಲಾ ತರಬೇತಿ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಓದಿನ ಜೊತೆಗೆ ನಮ್ಮಲ್ಲಿ ಅಡಕವಾಗಿರುವ ಕಲೆಗಳನ್ನು ತಿದ್ದಿ-ತೀಡುವ ಕೆಲಸವನ್ನು ಇಂತಹ ಶಿಬಿರಗಳು ಮಾಡಲಿವೆ. ಇವುಗಳ ಉಪಯೋಗವನ್ನು ಪಡೆದು ಯಶಸ್ಸಿನತ್ತ ಮುನ್ನೆಡೆಯಬೇಕೆಂದರು. ಬಾಲದಲ್ಲಿ ಶಿಕ್ಷಣ ಮುಖ್ಯ. ಶಿಕ್ಷಣದ ಜೊತೆ ಜೊತೆಗೆ ಇಂತಹ ಸಾಂಸ್ಕೃತಿಕ ಚಟುವಟಿಕೆಗಳಿಗೆ ಗಮನಹರಿಸಬೇಕು. ಪಠ್ಯೇತರ ಚಟುವಟಿಕೆಗಳು ನಿಮ್ಮಲ್ಲಿರುವ ಭಯವನ್ನು ಹೋಗಲಾಡಿಸಿ, ನಾಲ್ಕು ಜನರ ಜೊತೆಗೆ ಬೆರೆತು-ಕಲೆತು ಬದುಕುವುದನ್ನು ಕಲಿಸುತ್ತವೆ. ಹಾಗಾಗಿ ಇಂತಹ ಕಲೆಗಳನ್ನು ನೀವುಗಳು ತೊಡಗಿಸಿಕೊಂಡರೆ ಮುಂದೊAದು ದಿನ ಒಳ್ಳೆಯ ಅಧಿಕಾರಿಯಾಗಿ, ಜನರ ಸಮಸ್ಯೆಗಳನ್ನು…

Read More

ಪಾವಗಡ: ಚುನಾವಣಾ ಸಮಯದಲ್ಲಿ ಭರವಸೇ ನೀಡಿದ್ದು ಅದರಂತೆ ಪಾವಗಡ ಪಟ್ಟಣವನ್ನು ೨೦ ಕೋಟಿ ವೆಚ್ಚದಲ್ಲಿ ೨೩ ವಾರ್ಡ ಗಳ ಮೂಲ ಭೂತ ಸೌಕರ್ಯಗಳನ್ನು ಕಲ್ಪಿಸಲು ಭದ್ದನಾ ಗೀದ್ದೇನೆ ಎಂದು ಶಾಸಕರಾದ ಎಚ್.ವಿ. ವೆಂಕಟೇಶ್ ತಿಳಿಸಿದರು. ಬುದುವಾರ ಬೆಳಿಗಿನಿಂದ ಸಂಜೆ ವರೆಗೂ ೨೩ ವಾರ್ಡಗಳಿಗೆ ಕಾಲ್ನಡಗೆಯಲ್ಲಿ ಸುಮಾರು ೧೦ ಕಿಲೋಮೀಟರ್ ದೂರದವರೆಗೂ ಪುರಸಭಾ ಅಧ್ಯಕ್ಷ ಮತ್ತು ಸದಸ್ಯರೊಂದಿಗೆ ಬೇಟಿ ನೀಡಿs ಸಮಸ್ಯೆಗಳನ್ನು ಖುದ್ದು ಪರಿಶೀಲಿಸಿ ನಂತರ ಮಾದ್ಯಮಗಳೊಂದಿಗೆ ಮಾತನಾಡಿ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ತಾಲ್ಲೂಕಿಗೆ ವಿಶೇಷ ಅನುದಾನ ೫೦ ಕೋಟಿ ಹಣ ಬಿಡುಗಡೆ ಮಾಡಿದ್ದಾರೆ, ಈ ಹಣದಲ್ಲಿ ಪಾವಗಡದ ೨೦ ಕೋಟಿ ಹಣವನ್ನು ಪಾವಗಡ ಪಟ್ಟಣದ ಅಭಿವೃದ್ಧಿಗೆ ನೀಡಲಾಗುತ್ತಿದೆ, ಅಮೃತಗ್ರಾಮ ೦೨ ಯೋಜನೆಯಲ್ಲಿ ಕುಡಿಯುವ ನೀರಿನ ಪೈಪ್ ಲೇನ್ ಕಾಂಗಾರಿ ಪ್ರಗತಿಯಲ್ಲಿದ್ದು, ಇದೇ ವೇಳೆ ಸಂಬ0ದಪಟ್ಟ ಗುತ್ತಿಗೆದಾರರಿಗೆ ಖಡಕ್ ಹೆಚ್ಚರಿಕೆಯನ್ನು ಸಹ ನೀಡಿದರು. ವಾರ್ಡಗಳ ಸಮಸ್ಯೆ ಸಾರ್ವಜನಿಕರ ಸಮಸ್ಯೆಯನ್ನು ಆಲಿಸಿದ್ದೇನೆ, ಪುರಸಭಾ ಸದಸ್ಯರು ಸಹ ಭರವಸೇ ನೀಡಿದ್ದು ಅವರ ಸೂಚಿಸಿದ್ದ ಕಾಮಗಾರಿಗಳನ್ನು…

Read More

ತುಮಕೂರು: ಮಂಡಿಪೇಟೆಯಲ್ಲಿರುವ ಶ್ರೀ ಮಾರಯಮ್ಮ ದೇವಿಯ ೬೨ ನೇ ಜಾತ್ರ ಮಹೊತ್ಸವದ ಕರಗಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ನಗರ ಶಾಸಕರಾದ ಜ್ಯೋತಿಗಣೇಶ್ ತುಮಕೂರು ನಗರದ ಅಭಿವೃದ್ದೀಯಲ್ಲಿ ಸ್ಲಂ ನಲ್ಲಿರುವ ಬಡವರ ಕೊಡುಗೆ ಅಪಾರವಾಗಿದೆ ಮಂಡಿಪೆಟೆ ಮಾರ್ಕೇಟ್ ಗಳಲ್ಲಿ ಅಗತ್ಯವಿರುವ ಮಾನವ ಶ್ರಮವನ್ನು ಮಾರಿಯಮ್ಮ ನಗರದ ಜನರು ನೀಡುತ್ತಿದ್ದಾರೆ ಇಲ್ಲಿರುವ ಯುವಕರು ಅಸಂಘಟಿತ ವಲಯಗಳಲ್ಲಿ ದುಡಿಯುತ್ತಿದ್ದಾರೆ ಅಂಬೇಡ್ಕರ್ ಆಶಯದಂತೆ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕು ದ್ರಾವಿವಿಡ ಸಂಸ್ಕೃತಿ ಹಿರಿಯರನ್ನು ಗೌರವಿಸುವ ಒಗ್ಗಟ್ಟಿನಲ್ಲಿ ನಡೆಯು ವುದನ್ನು ಕಲಿಸಿದೆ ಇದರಿಂದಲೇ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಇಂಡಿಯಾಕ್ಕೆ ಮಾದರಿಯಾದ ವಸತಿ ಸಮುಚ್ಛಯಗಳನ್ನು ಪಡೆಯಲಾಗಿದೆ ಮಾರಿಯಮ್ಮ ನಗರದ ಮೂಲ ದೇವಸ್ಥಾನದ ಅಭಿವೃದ್ಧಿಗೆ ಅಗತ್ಯ ನೆರವು ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ ಎಂದರು. ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿ ಸ್ಲಂ ಜನರ ಕೊಡಿಗೆಯನ್ನು ಶಾಸಕರು ಗುರುತಿಸಿರುವುದಕ್ಕೆ ಧನ್ಯವಾದಗಳು ನಿವೇಶ ರಹಿತರಿಗೆ ನಿವೇಶನ ಮತ್ತು ಸ್ಲಂ ಜನರಿಗೆ ಹಕ್ಕು ಪತ್ರ ದೊರೆಕಿಸಿಕೊಡಬೆಕೇಂದು ಅಗ್ರಹಿಸದರು ಮಾಜಿ ನಗರ ಪಾಲಿಕೆ…

Read More

ತುರುವೇಕೆರೆ: ತಾಲೂಕಿನ ಗೋಣಿತುಮಕೂರು ಬಳಿಯಲ್ಲಿ ೫ ಜನರಿಗೆ ದಾಳಿ ನೆಡೆಸಿದ್ದ ತೋಟದ ಮನೆಯಲ್ಲಿ ಬಂದಿಯಾಗಿದ್ದ ಚಿರತೆಯನ್ನು ಬುಧವಾರ ರಾತ್ರಿಯೇ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆಯವರು ಯಶಸ್ವಿಯಾದರು. ಬುಧವಾರ ಸುಮಾರು ಐದು ಜನರಿಗೆ ದಾಳಿ ನೆಡೆಸಿದ್ದ ಚಿರತೆಯನ್ನು ರೈತರು ದೈರ್ಯ ಮಾಡಿ ತೋಟದ ಮನೆಯಲ್ಲಿ ಕೂಡಿ ಹಾಕಿದ್ದರು. ಸ್ಥಳಕ್ಕೆ ದಾವಿಸಿದ ತಹಶೀಲ್ದಾರ್ ಕುಂ.ಇ. ಅಹಮದ್ ನೇತೃತ್ವದಲ್ಲಿ ಆರಣ್ಯ ಇಲಾಕೆ ಚಿರತೆಯನ್ನು ಬಂದಿಸಲು ಕಾರ್ಯಚರಣೆ ಪ್ರಾರಂಭಿಸಿದ್ದರು. ಕೆಲವು ಕಾಲ ಕಾರ್ಯಚರಣೆ ನೆಡೆಸಿದರೂ ಬೋನಿಗೆ ಕೆಡವಲು ಸಾದ್ಯವಾಗದೆ. ನಂತರ ಮೈಸೂರಿನ ಪಶು ವೈದ್ಯಾಧಿಕಾರಿ ಅರವಳಿಕೆ ತಜ್ಞರಾದ ಡಾ.ವಾಸಿಂ ಆಗಮಿಸಿ ಗನ್ ಮೂಲಕ ಚಿರತೆಗೆ ಅರವೆಳಿಕೆ ಮದ್ದು ನೀಡಿ ಪ್ರಜ್ಞೆ ತಪ್ಪಿಸಿ ನಂತರ ಬಲೆ ಮೂಲಕ ಹಿಡಿದು ಬೋನ್ ನಲ್ಲಿ ಬಂದಿಸಿ ಬಂಡಿ ಪುರ ಅರಣ್ಯಕ್ಕೆ ಬಿಡಲು ಸಾಗಿಸಲಾಯಿತು. ನಿಟ್ಟಿಸಿರು ಬಿಟ್ಟ ಜನತೆ: ಸುಮಾರು ೫ ಜನರ ಮೇಲೆ ದಾಳಿ ನೆಡೆಸಿ ಮುಖ ಕೈ ಕಾಲು ಗಾಯ ಮಾಡಿದ್ದರಿಂದ ಗೋಣಿತುಮಕೂರು, ದೇವಿಹಳ್ಳಿ, ನಡುವನಹಳ್ಳಿ ಭಾಗದ ಜನರಲ್ಲಿ ಭಯದ…

Read More

ತುಮಕೂರು: ಸೈಬರ್ ಭದ್ರತಾ ಆಡಳಿತ ಘಟಕ ಸ್ಥಾಪನೆ ಸಾಮಾಜಿಕ ಜಾಲತಾಣದ ಸೈಬರ್ ಅಪರಾಧ ನಿಯಂತ್ರಣ ಸೇರಿದಂತೆ ಹಲವು ಯೋಜನೆಗಳಿಗೆ ಸಾಹೇ ವಿಶ್ವವಿದ್ಯಾಲಯ, ಸ್ಮಾರ್ಟ್ ಸಿಟಿ ತುಮಕೂರು, ಹಸ್ತಾಕ್ಷ ಲ್ಯಾಬ್ ಸಹಯೋಗದೊಂದಿಗೆ ಸೈಬರ್ ಭದ್ರತಾ ಆಡಳಿತ ಕೋಶದ ಸ್ಥಾಪನೆ, ಸೈಬರ್ ಭದ್ರತಾ ಉಪಕ್ರಮಗಳಿಗೆ ಭದ್ರತಾ ಲೆಕ್ಕಪರಿಶೋಧಕರು, ಮತ್ತು ಸೈಬರ್ ತಜ್ಞರನ್ನು ಸಕ್ರಿಯಗೊಳಿಸುವುದು, ಇಂಟರ್ನ್ಶಿಪ್‌ಗಳು ಮತ್ತು ಜಂಟಿ ಯೋಜನೆಗಳು ಸೇರಿದಂತೆ ಇತ್ಯಾದಿ ವಿಷಯಗಳನ್ನು ಕುರಿತಂತೆ ಒಡಂಬಡಿಕೆಗೆ ಗುರುವಾರ ಪರಸ್ಪರ ಒಡಂಬಡಿಕೆಗೆ ಸಹಿ ಹಾಕಲಾಯಿತು. ನಗರದ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ ಗುರುವಾರದಂದು ಏರ್ಪಟ್ಟ ಒಡಂಬಡಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ವಿ ಅಶೋಕ್ ಅವರು ತಂತ್ರಜ್ಞಾನದ ಸರಿಯಾದ ಬಳಕೆಯಿಂದ ಮಾನವ ಸಮಾಜವು ಸುಸಂಸ್ಕೃತವಾಗುತ್ತಾ ನಿರಂತರವಾಗಿ ಅಭಿವೃದ್ಧಿ ಹೊಂದುತ್ತಿದೆ, ಆದರೆ ಅಪರಾಧ ಪ್ರವೃತ್ತಿಯ ಕೆಲವರು ಅದನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಸಮಾಜಕ್ಕೆ ಹಾನಿ ಮಾಡುತ್ತಿದ್ದಾರೆ. ಸಮಾಜದ ಭದ್ರತೆಗೆ ಸುಧಾರಿತ ತಂತ್ರಜ್ಞಾನ ವ್ಯವಸ್ಥೆಯನ್ನು ಅಳವಡಿಸಿಕೊಂಡು ಸೈಬರ್ ಅಪರಾಧಗಳನ್ನು ನಿಯಂತ್ರಿಸುವ ಅಗತ್ಯವಿದೆ ಎಂದು ತಿಳಿಸಿದರು. ಕಳ್ಳತನ…

Read More

ಹುಳಿಯಾರು: ವರ್ಷಕ್ಕೆ ಎರಡ್ಮೂರು ಬಾರಿ ಹುಳಿಯಾರು ಪಟ್ಟಣ ಪಂಚಾಯ್ತಿಯ ವಾಣಿಜ್ಯ ಮಳಿಗೆಗಳ ವಿಚಾರ ಮುನ್ನೆಲೆಗೆ ಬರುತ್ತದೆ. ಕಳೆದ ವರ್ಷ ಹರಾಜು ಹಾಕುವ ನೆಪವೊಡಿ ಏಕಾಏಕಿ ಮಳಿಗೆಗಳಿಗೆ ಬೀಗ ಹಾಕಿ ಮರುದಿನವೇ ಹಾಕಿದ್ದ ಬೀಗವನ್ನು ಪಂಚಾಯ್ತಿ ಅಧಿಕಾರಿಗಳೇ ತೆಗೆದು ಸುದ್ದಿಯಾಗಿತ್ತು. ಕಳೆದ ಐದಾರು ತಿಂಗಳ ಹಿಂದಷ್ಟೆ ಕೆಲ ಮಳಿಗೆಗಳನ್ನು ದುರಸ್ಥಿ ಮಾಡುವ ನಿಟ್ಟಿನಲ್ಲಿ ತೆರವು ಮಾಡುವಂತೆ ನೋಟಿಸ್ ನೀಡಿ ಸುದ್ದಿಯಾಗಿತ್ತು. ಈಗ ಬಾಡಿಗೆ ಬಾಕಿ ವಸೂಲಿಗೆ ಬೀಗ ಸಮೇತ ಬಂದು ಮತ್ತೊಮ್ಮೆ ಸುದ್ದಿಯಾಗಿದೆ. ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ನಾಗಭೂಷಣ್ ಹಾಗೂ ಆರ್‌ಐ ಶೃತಿ ಬನಾರ ಅವರ ನೇತೃತ್ವದಲ್ಲಿ ಬೀಗಗಳ ಸಮೇತ ಪೌರಕಾರ್ಮಿಕರು ದಂಡು ಕರೆದುಕೊಂಡು ಬುಧವಾರ ಬೆಳಗ್ಗೆಯಿಂದಲೇ ಬಾಡಿಗೆ ವಸೂಲಿಗೆ ಮುಂದಾಗಿತ್ತು. ಮಳಿಗೆಗಳನ್ನು ಪಡೆದು ವ್ಯಾಪಾರ ವಹಿವಾಟು ಮಾಡಿ ಅನುಕೂಲ ಮಾಡಿಕೊಂಡಿರುವ ಬಾಡಿಗೆದಾರರೇ ಸ್ವಯಂ ಪ್ರೇರಣೆಯಿಂದ ಬಾಡಿಗೆ ಕಟ್ಟಬೇಕು. ಆದರೆ ಸಿಬ್ಬಂದಿಯೇ ಎಷ್ಟು ಬಾರಿ ಅಲೆದರೂ ಬಾಡಿಗೆ ಕಟ್ಟದೆ ಸತಾಯಿಸುತ್ತಿದ್ದಾರೆ. ಕೆಲವರದ್ದು ಮರ‍್ನಲ್ಕು ವರ್ಷಗಳಿಂದ ಬಾಕಿ ಇದೆ ಎಂದು ಆರೋಪಿಸಿ ಬಾಡಿಗೆ ಕೊಡಿ…

Read More

ತುಮಕೂರು: ಪ್ರೌಢಾವಸ್ಥೆಯ ಜೀವನ ಅತ್ಯಂತ ಅಮೂಲ್ಯವಾಗಿದ್ದು ಈ ಸಂದರ್ಭದಲ್ಲಿ ಅತ್ಯಂತ ಎಚ್ಚರಿಕೆಯ ಹೆಜ್ಜೆ ಇಡಬೇಕೆಂದು ರಾಷ್ಟç ಪ್ರಶಸ್ತಿ ಪುರಸ್ಕೃತ ಶಿಕ್ಷಕ ಹನುಮದಾಸ್ ವಿದ್ಯಾರ್ಥಿ ಸಮೂಹಕ್ಕೆ ಕರೆ ನೀಡಿದರು. ತುಮಕೂರು ನಗರ ಸಾಂತ್ವನ ಕೇಂದ್ರದ ಸಹಯೋಗದಿಂದ ದೇವರಾಯ ಪಟ್ಣದ ಆಕ್ಸ್ ಫರ್ಡ ಪ್ರೌಢಶಾಲೆಯಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ೧೨ ರಿಂದ ೧೮ ವರ್ಷಗಳ ನಡುವಿನ ಅವಧಿ ಅತ್ಯಂತ ಸೂಕ್ಷö್ಮವಾದದ್ದು. ಈ ಅವಧಿಯಲ್ಲಿ ಮನಸ್ಸು ನಮ್ಮ ಹತೋಟಿಗೆ ಬರುವುದು ಕಷ್ಟ. ಆದರೆ ಮಾನಸಿಕ ನಿಗ್ರಹವೊಂದಿದ್ದರೆ ಏನು ಬೇಕಾದರೂ ಸಾಧಿಸಲು ಸಾಧ್ಯ. ಶಿಸ್ತುಬದ್ದ ಜೀವನ ನಿಮ್ಮದಾದರೆ ಭವಿಷ್ಯ ಸುಂದರವಾಗಲಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ತಿಗಳ ಅಗ್ನಿವಂಶ ಕ್ಷತ್ರಿಯ ವಿದ್ಯಾಭಿವೃದ್ದಿ ಸಂಘದ ಅಧ್ಯಕ್ಷರಾದ ಬಿ.ಎಂ. ಗಂಗರಾಜು ಮಾತನಾಡಿ ವಿದ್ಯಾರ್ಥಿಗಳು ಮನೆಯಿಂದ ಶಾಲಾ ಕಾಲೇಜುಗಳಿಗೆ ಹೋಗಿ ಬರುವಾಗ ಎಚ್ಚರಿಕೆಯಿಂದ ಇರಬೇಕು. ಪೋಷ ಕರು ಹಾಗೂ ಶಿಕ್ಷರ ಮಾತು ಕೇಳಿ ಅವರ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದರು.…

Read More

ಕೊರಟಗೆರೆ: ಅಂತರ್ಜಲ ಅಭಿವೃದ್ಧಿ ಸಲುವಾಗಿ ಎತ್ತಿನಹೊಳೆ ಯೋಜನೆಯ ಮಧುಗಿರಿ ಗುರುತ್ವಾ ಕಾಲುವೆಯಿಂದ ೬೨ಕೆರೆಗಳಿಗೆ ನೀರು ತುಂಬಿಸುವುದರ ಜೊತೆಗೆ ೩೧ ಕೆರೆಗಳ ಅಭಿವೃದ್ಧಿ ಕಾರ್ಯ ನಡೆಯಲಿದೆ. ೨೦೨೭ಕ್ಕೆ ಕಾಮಗಾರಿ ಸಂಪೂರ್ಣಗೊಳ್ಳಲಿದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದರು. ತಾಲ್ಲೂಕಿನ ಕೋಳಾಲ ಹೋಬಳಿ ಚಿನ್ನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಸಣ್ಣ ನೀರಾವರಿ ಇಲಾಖೆಯಿಂದ ತಿಮ್ಮಸಂದ್ರ ಗ್ರಾಮದಲ್ಲಿ ೨೮೫ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಎತ್ತಿನಹೊಳೆ ಗುರುತ್ವ ಕಾಲುವೆ ಕಾಮಗಾರಿಯನ್ನು ವೀಕ್ಷಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು. ತಾಲ್ಲೂಕಿನ ಕಸಬಾ ಹೋಬಳಿ ೧೦ಕೆರೆ, ಹೊಳವನಹಳ್ಳಿ ಹೋಬಳಿ ೧೦ಕೆರೆ, ಸಿಎನ್ ದುರ್ಗಾ ಹೋಬಳಿ ೧೭ಕೆರೆ, ಕೋಳಾಲ ೨೫ಕೆರೆಗಳಿಗೆ ನೀರು ಹರಿಸುವ ಯೋಜನೆ ಇದಾಗಿದ್ದು, ಈ ಕೆರೆಗಳಿಗೆ ನೀರು ತುಂಬಿಸಲು ಸುಮಾರು ೧೯೭ ಕಿ.ಮೀ ಪೈಪ್‌ಲೈನ್ ಅವಶ್ಯಕತೆಯಿದ್ದು, ಎಂಎಸ್ ಪೈಪ್ ೮೭ಕಿ.ಮೀ, ಹೆಚ್‌ಡಿಪಿ ಪ್ಲಾಸ್ಟಿಕ್ ಪೈಪ್ ೧೧೦ಕಿ.ಮೀ, ಈ ಯೋಜನೆಗೆ ೨೮೫ಕೋಟಿ.ರೂ ವೆಚ್ಚ ಖರ್ಚಾಗಲಿದೆ ಎಂದು ಹೇಳಿದರು. ಪ್ರಮುಖವಾಗಿ ಕುಡಿಯುವ ನೀರಿನ ಸರಬರಾಜಿಗಾಗಿ ಈ ಕೆರೆಗಳಿಗೆ ನೀರು ಹರಿಸುವ ಕೆಲಸವಾಗುತ್ತಿದೆ. ಕೆರೆಗಳಿಗೆ ನೀರು ತುಂಬಿಸುವುದರಿ0ದ…

Read More