Author: News Desk Benkiyabale

ಮಧುಗಿರಿ: ತಾಲ್ಲೂಕಿನ ಮಿಡಿಗೇಶಿ ಪೊಲೀಸ್ ಠಾಣಾ ವ್ಯಾಪ್ತಿಯ ಆರ್.ಗೊಲ್ಲಹಳ್ಳಿ ಗ್ರಾಮದ ಸರ್ಕಾರಿ ಹಳ್ಳದಲ್ಲಿ ಜೂಜಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಮಿಡಿಗೇಶಿ ಪಿ.ಎಸ್.ಐ ರವೀಂದ್ರ ಅವರು ತಮ್ಮ ಸಿಬ್ಬಂದಿಯೊ0ದಿಗೆ ಹಠಾತ್ ದಾಳಿ ನಡೆಸಿದರು. ದಾಳಿ ವೇಳೆ ಜೂಜಾಟದಲ್ಲಿ ತೊಡಗಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾದರು. ಬಂಧಿತರ ಬಳಿ ಪರಿಶೀಲನೆ ನಡೆಸಿದಾಗ ಜೂಜಾಟಕ್ಕೆ ಬಳಸಲಾಗುತ್ತಿದ್ದ ನಗದು ಹಣ ಪತ್ತೆಯಾಗಿದ್ದು, ಒಟ್ಟು ೫,೧೬೦ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬAಧ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ತನಿಖೆಯನ್ನು ಕೈಗೊಳ್ಳಲಾಗಿದೆ. ಪೊಲೀಸರ ಪ್ರಾಥಮಿಕ ವಿಚಾರಣೆ ಬಳಿಕ ಬಂಧಿತರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ಪೊಲೀಸ್ ಇಲಾಖೆ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಜೂಜಾಟ, ಮದ್ಯಪಾನ ಹಾಗೂ ಇತರ ಕಾನೂನುಬಾಹಿರ ಕೃತ್ಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರು ತಮ್ಮ ಸುತ್ತಮುತ್ತ ನಡೆಯುವ ಅಕ್ರಮ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವ ಮೂಲಕ…

Read More

ಮಧುಗಿರಿ: ಸ್ಪರ್ಧಾಥಿಗಳು ಪರೀಕ್ಷೆಗೆ ಸಿದ್ಧತೆ ನಡೆಸುವಾಗ ಒಬ್ಬ ಉತ್ತಮ ಸಾಧಕ ಹಾಗೂ ಪ್ರಯತ್ನ ನಡೆಸಿ ಸೋತವರ ಮಾರ್ಗದರ್ಶನ ಪಡೆದರೆ ಉತ್ತಮ. ಸಾಧಕನು ಗೆಲುವಿನ ತಂತ್ರಗಳ ಬಗ್ಗೆ ಮಾರ್ಗದರ್ಶನ ಮಾಡಿದರೆ , ಸೋತವನು ತಾನು ಮಾಡಿದ ತಪ್ಪುಗಳ ಬಗ್ಗೆ ತಿಳಿಸಿಕೊಡುವನು, ಇದರಿಂದ ಒಂದು ಕಡೆ ಪ್ರೇರಣೆ ಪಡೆದರೆ, ಇನ್ನೊಂದೆಡೆ ಎಡವದೇ ನಡೆಯು ವುದನ್ನು ಕಲಿತು ಪರಿಣಾಮಕಾರಿಯಾಗಿ ಪರೀಕ್ಷಾ ಸಿದ್ಧತೆ ನಡೆಸಲು ಸಹಕಾರಿಯಾಗುವುದು ಎಂದು ಹರ್ಷ ಆಫೀಸರ್ಸ್ ಅಕಾಡೆಮಿಯ ಸಂಸ್ಥಾಪಕ ಹರ್ಷ ಆರ್ ಕಿವಿಮಾತು ಹೇಳಿದರು. ಅವರು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಉದ್ಯೋಗ ಕೋಶ, ವಾಣಿಜ್ಯ ಶಾಸ್ತ್ರ ವಿಭಾಗ, ಐಕ್ಯೂ ಎಸಿ ಮತ್ತು ಹಳೆ ವಿದ್ಯಾರ್ಥಿಗಳ ಸಂಘದ ಸಹಭಾಗಿತ್ವದಲ್ಲಿ ಆಯೋಜಿಸಿರುವ ಯುಜಿಸಿ-ನೆಟ್,ಕೆ-ಸೆಟ್ ಮತ್ತು ಸ್ಯಾಡ್ ಪರೀಕ್ಷೆಗಳಿಗೆ ಸಂಬ0ಧಿಸಿದ0ತೆ ಹನ್ನೆರೆಡು ದಿನಗಳ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡುತ್ತ ಅನೇಕ ಸ್ಪರ್ಧಾಥಿಗಳು ಕೋಚಿಂಗ್ ಸೆಂಟರ್ ಸೇರುವಿಕೆ ಬಗ್ಗೆ ಗೊಂದಲದಲ್ಲಿ ಇರುತ್ತಾರೆ. ಆರಂಭಿಕ ಹಂತದಲ್ಲಿ ಪರೀಕ್ಷಾ ಸಿದ್ಧತೆ ನಡೆಸುತ್ತಿದ್ದರೆ ಅವರಿಗೆ ಮಾರ್ಗದರ್ಶನ ಪಡೆಯಲು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಗಳ ಅವಶ್ಯಕತೆಯಿರುತ್ತದೆ…

Read More

ತುಮಕೂರು: ರಾಮಕೃಷ್ಣ ನಗರದ ರಾಮಕೃಷ್ಣ ವಿವೇಕಾ ನಂದ ಆಶ್ರಮ 1992ರಲ್ಲಿ ಸ್ಥಾಪನೆಗೊಂಡು ಇದೀಗ ತನ್ನ 33ನೇ ವಾರ್ಷಿಕೋತ್ಸವ ಸಂಭ್ರಮಾಚರಣೆಗೆ ಸನ್ನದ್ದಗೊಂಡಿದ್ದು ಜ.10 ಮತ್ತು 11 ರಂದು ಆಶ್ರಮದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಕಾರ್ಯ ಕ್ರಮ ಆಯೋಜನೆಗೊಂಡಿರುವುದಾಗಿ ಅಧ್ಯಕ್ಷರಾದ ಡಾ. ಶ್ರೀ ವಿರೇಶಾನಂದಸರಸ್ವತಿ ಸ್ವಾಮೀಜಿಗಳು ತಿಳಿಸಿದರು. ಆಶ್ರಮದಲ್ಲಿ ಇಂದು ಬೆಳಿಗ್ಗೆ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿ, ಜ.10 ರಂದು ಬೆಳಿಗ್ಗೆ 10:30ಕ್ಕೆ ಶ್ರೀಮಾತೆ ಶಾರದಾದೇವಿ ಜನ್ಮದಿನೋತ್ಸವದ ಅಂಗವಾಗಿ 26ನೇ ವರ್ಷದ ಜೀವಂತ ದುರ್ಗಪೂಜೆ ಕಾರ್ಯ ಕ್ರಮ ಏರ್ಪಟಿದ್ದು ೨೦೦ ಅಶಕ್ತ ತಾಯಂದಿ ರಿಗೆ ಅನ್ನದಾನ, ಧಾನ್ಯ ದಾನ, ವಸ್ತçದಾನಗಳಿಂದ ಸತ್ಕರಿಸಲಾಗುವುದು ಎಂದರು. ಹೆಸರಾAತ ಕ್ಯಾನ್ಸರ್ ಚಿಕಿತ್ಸಕರಾದ  ಡಾ. ವಿಜಯಲಕ್ಷಿö?ಮ ದೇಶಮಾನೆ ಕಾರ್ಯ ಕ್ರಮ ಉದ್ಘಾಟಿಸುವರು. ಹೆಸರಾಂತ ಅರ್ಥ ತಜ್ಞ ಮೂಕನಹಳ್ಳಿ ರಂಗಸ್ವಾಮಿ, ಹೆಸರಾಂತ ಉದ್ಯಮಿ ವೀರಭದ್ರ ಬ್ಯಾಡಗಿ, ಸಮಾಜ ಸೇವಕಿ ಶಿಲ್ಪ ಬ್ಯಾಡಗಿ ಭಾಗವಹಿಸುವರು. ಅಂದು ಸಂಜೆ ೫.೩೦ಕ್ಕೆ  ಆಶ್ರಮದ ಶ್ರೇಯಸ್ಸಿಗೆ ಶ್ರಮಿಸಿದ ಸೇವಾಕರ್ತರಿಗೆ ಪುರಸ್ಕಾರ ನೀಡಲಾಗುವುದು. ಜ.11 ರಂದು ಬೆಳಿಗ್ಗೆ 10…

Read More

ತುರುವೇಕೆರೆ: ವಿದ್ಯಾರ್ಥಿಗಳು ಬಹಳ ಶ್ರದ್ಧೆಯಿಂದ ಅಧ್ಯಯನ ಮಾಡಿದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಸಿಪಿಐ ಲೋಹಿತ್ ಹೇಳಿದರು. ಪಟ್ಟಣದ ಜೆಪಿ ಕಾನ್ವೆಂಟ್ ಮತ್ತು ಜೆಪಿ ಆಂಗ್ಲ ಪ್ರೌಢಶಾಲೆಯ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಮಹತ್ವದ ಘಟ್ಟ. ಈ ಸಂದರ್ಭದಲ್ಲಿ ವಿದ್ಯಾಭ್ಯಾಸವನ್ನೇ ಗುರಿಯಾಗಿಸಿಕೊಂಡು ಏಕಾಗ್ರತೆಯಿಂದ ಓದಿದಲ್ಲಿ ಮುಂದಿನ ಹಂತ ಎಂದಿಗೂ ಕಠಿಣ ಎನಿಸದು ಎಂದರು. ಪೋಷಕರೂ ತಮ್ಮ ಮಕ್ಕಳ ಭವಿಷ್ಯ ಕಟ್ಟಿಕೊಳ್ಳಲು ಮೈಯೆಲ್ಲಾ ಕಣ್ಣಾಗಿರಿಸಿಕೊಂಡಿರಬೇಕು. ಮಕ್ಕಳಿಗೆ ಟಿವಿ ಮತ್ತು ಮೊಬೈಲ್ ನ ಗೀಳು ಬಾರದಂತೆ ನೋಡಿಕೊಳ್ಳಬೇಕೆಂದು ಸಿಪಿಐ ಲೋಹಿತ್ ಪೋಷಕರಿಗೆ ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಶೈಕ್ಷಣಿಕ ಆಡಳಿತ ಅಧಿಕಾರಿಗಳಾದ ಡಿ.ಎಚ್ ಲಕ್ಷ್ಮಣಯ್ಯ ಹಾಗೂ ಮುಖ್ಯ ಶಿಕ್ಷಕ ಹೆಚ್. ಆರ್. ತುಕಾರಾಮ್ ರವರನ್ನು ಎಸ್ ಎಸ್ ಎಲ್ ಸಿ ಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ೩೩ ವಿದ್ಯಾರ್ಥಿಗಳನ್ನು ಹಾಗೂ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಾದ ಜೆ.ಪಿ. ಸಂದೀಪ್, ಡಾ ಸಹನಾ, ಶುಭ…

Read More

ತುಮಕೂರು: ಸರ್ಕಾರದ ಯೋಜನೆಯ ಅಂತ:ಸತ್ವವನ್ನು ಮೊದಲು ಅರ್ಥ ಮಾಡಿಕೊಂಡು ಅದನ್ನು ಅತ್ಯಂತ ಪರಿಣಾಮಕಾರಿಯಾಗಿ ಮಾಡಬೇಕು. ಯೋಜನೆ ಅನುಷ್ಠಾನ ಮಾಡುವವರಿಗೆ ಶಕ್ತಿ ತುಂಬಬೇಕಾಗಿರುವುದು ಒಳ್ಳೆಯ ಅಧಿಕಾರಿಯ ಲಕ್ಷಣ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿ ಈಗ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಯಾಗಿರುವ ಜಿ.ಪ್ರಭು ಹೇಳಿದರು. ಶನಿವಾರ ಸಂಜೆ ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ತಮ್ಮ ಪತ್ನಿಯೊಂದಿಗೆ ಹೃದಯಸ್ಪರ್ಶಿ ಅಭಿನಂದನೆ ಸ್ವೀಕರಿಸಿದ ಜಿ.ಪ್ರಭು ಮಾತನಾಡಿ, ಸೇವೆಯಲ್ಲಿರುವವರು ಯಾವತ್ತೂ ಸಕಾರಾತ್ಮಕ ಅಭಿಪ್ರಾಯ ಇಟ್ಟುಕೊಳ್ಳಬೇಕು. ನಾನು ಏನು ಹೇಳುತ್ತೇನೆ ಅದನ್ನು ನಾನು ಮೊದಲು ಮಾಡಬೇಕು ಎನ್ನುವ ಆಯಾಮದಲ್ಲಿ ಕೆಲಸ ಮಾಡಬೇಕು ಎಂದು ಹೇಳಿದರು. ನನ್ನ ಕರ್ತವ್ಯದ ಸೇವಾವಧಿಯಲ್ಲಿ ಆರ್‌ಡಿಪಿಆರ್ ಇಲಾಖೆ ಸಿಕ್ಕಿದ್ದು ದೊಡ್ಡ ಸೌಭಾಗ್ಯವೇ ಸರಿ. ನಾನು ಜಿಲ್ಲಾ ಪಂಚಾಯ್ತಿ ಸಿಇಓ ಆಗಿರದಿದ್ದರೆ ಹಳ್ಳಿಗಾಡಿನ ಜನರು ಸೇರಿದತೆ ವಿವಿಧ ಇಲಾಖೆಗಳ ಮೂಲಕ ದೊಡ್ಡ ಸಮುದಾಯಕ್ಕೆ ಸಲ್ಲಿಸಬಹುದಾದ ಸೇವೆಯ ಅವಕಾಶವನ್ನು ಕಳೆದುಕೊಳ್ಳುತ್ತಿದ್ದೆ. ಈ ಅವಕಾಶವನ್ನು ೨೦೨೩ರಲ್ಲಿ ತುಮಕೂರಿಗೆ ಕಲ್ಪಿಸಿದ…

Read More

ಕೊರಟಗೆರೆ: ರ‍್ನಾಟಕ ಕರ‍್ಯನಿರತ ಪತ್ರರ‍್ತರ ಸಂಘದ ತಾಲೂಕು ಘಟಕದ ಚುನಾವಣೆಯಲ್ಲಿ ಕೆ.ನರಸಿಂಹಮರ‍್ತಿ ಅವರು ಅತಿಹೆಚ್ಚು ಮತಗಳನ್ನ ಪಡೆದು ತಾಲೂಕು ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ರ‍್ನಾಟಕ ಕರ‍್ಯನಿರತ ಪತ್ರರ‍್ತರ ಸಂಘದ ಜಿಲ್ಲಾಧ್ಯಕ್ಷ ಯೋಗೇಶ್ ಹಾಗೂ ಚುನಾವಣಾಧಿಕಾರಿಯಾಗಿದ್ದ ಪತ್ರರ‍್ತ ಪ್ರಸನ್ನ ದೊಡ್ಡಗುಣಿ ಹಾಗೂ ಸಹಾಯಕ ಅಧಿಕಾರಿಯಾಗಿದ್ದ ಯೋಗೀಶ್ ಮಳೇಕಲ್ಲಹಳ್ಳಿ ಹಾಗೂ ಸುಪ್ರೀತಿಕ್. ಅವರ ನೇತೃತ್ವದಲ್ಲಿ ಚುನಾವಣೆಯನ್ನ ರ‍್ಪಡಿಸಲಾಗಿತ್ತು. ಅಧ್ಯಕ್ಷ ಸ್ಥಾನ, ಉಪಾಧ್ಯಕ್ಷ ಸ್ಥಾನ ಹಾಗೂ ಪ್ರಧಾನಕರ‍್ಯರ‍್ಶಿ ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯಿತ್ತು. ಉಳಿದ ಖಜಾಂಚಿ, ಕರ‍್ಯರ‍್ಶಿ ಎರಡು ಸ್ಥಾನ ಹಾಗೂ ನರ‍್ದೇಶಕರ ೭ ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕೊರಟಗೆರೆ ಕರ‍್ಯನಿರತ ಪತ್ರರ‍್ತರ ಸಂಘದ ಅಧ್ಯಕ್ಷರಾಗಿ ಕೆ.ನರಸಿಂಹಮರ‍್ತಿ (ವಿ.ಕೆ.ಮರ‍್ತಿ) ಉಪಾಧ್ಯಕ್ಷ ಸ್ಥಾನ ಎರಡರಲ್ಲಿ ಎಚ್.ಎನ್.ನಾಗರಾಜು, ತಿಮ್ಮರಾಜು, ಪ್ರಧಾನ ಕರ‍್ಯರ‍್ಶಿ ಡಿ.ಎಂ.ರಾಘವೇಂದ್ರ, ಅವರು ಚುನಾವಣೆಯಲ್ಲಿ ಜಯಶೀಲರಾಗಿದ್ದಾರೆ. ಅವಿರೋಧವಾಗಿ ಕರ‍್ಯರ‍್ಶಿ ಸ್ಥಾನ ಎರಡರಲ್ಲಿ ಲಕ್ಷಿö್ಮÃಕಾಂತ, ಲಕ್ಷಿö್ಮÃಶ, ಖಜಾಂಚಿ ನವೀನ್‌ಕುಮಾರ್, ನರ‍್ದೇಶಕರಾಗಿ ಲೋಕೇಶ್, ದೇವರಾಜು, ವಿಜಯಶಂಕರ್, ನಾಗೇಂದ್ರ, ಮಂಜುಸ್ವಾಮಿ, ಸಿದ್ದರಾಜು, ನರಸಿಂಹಮರ‍್ತಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.…

Read More

ತುಮಕೂರು: ದೇಶಕ್ಕೆ ಸ್ವಾತಂತ್ರ ಬಂದು ೭೮ ವರ್ಷ ಕಳೆದರು ಸಂವಿಧಾನದ ಅರ್ಟಿಕಲ್ ೨೧(ಎ)ಅಡಿಯಲ್ಲಿ ದೇಶದ ಮಕ್ಕಳಿಗೆ ಉಚಿತ ಗುಣಮಟ್ಟದ ಶಿಕ್ಷಣ ನೀಡಲಾಗದೆ ಸರಕಾರಗಳ ವಿರುದ್ದ ಹಾಗೂ ಕೆ.ಪಿ.ಎಸ್ ಮ್ಯಾಗ್ನೇಟ್ ಶಾಲೆಯ ಹೆಸರಿನಲ್ಲಿ ೪೧ ಸಾವಿರ ಸರಕಾರಿ ಶಾಲೆಗಳನ್ನು ಮುಚ್ಚಲು ಹೊರಟಿರುವ ಸರಕಾರದ ಕ್ರಮವನ್ನು ಖಂಡಿಸಿ, ಜನವರಿ ೨೬ರ ಗಣರಾಜೋತ್ಸವ ದಿನದೊಂದು ಕರ್ನಾಟಕ ರಾಜ್ಯ ರೈತ ಹಾಗೂ ಎಸ್.ಡಿ.ಎಂ.ಸಿ ಸಂಘದವತಿಯಿAದ ಕಪ್ಪು ಬಾವುಟದೊಂದಿಗೆ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ರೈತ ಸಂಘದ ಬಿ.ಆರ್.ಯೋಗೀಶ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಶಿಕ್ಷಣದಲ್ಲಿ ಖಾಸಗೀಕರಣಕ್ಕೆ ಅವಕಾಶ ಮಾಡಿಕೊಟ್ಟ ಪರಿಣಾಮ ಉಳ್ಳವರಿಗೆ ಒಂದು ರೀತಿ ಶಿಕ್ಷಣ, ಇಲ್ಲದವರಿಗೆ ಒಂದು ರೀತಿಯ ಶಿಕ್ಷಣ ಎಂಬುವ0ತಾಗಿದೆ.ಇದಕ್ಕೆ ಸರಕಾರದ ನೀತಿಗಳೇ ಕಾರಣವಾಗಿದ್ದು, ಸರಕಾರ ಎಚ್ಚೆತ್ತುಕೊಂಡು,ಎಲ್ಲಾ ಮಕ್ಕಳಿಗೆ ಉಚಿತ ಗುಣಮಟ್ಟದ ಶಿಕ್ಷಣ ಖಚಿತ ಪಡಿಸದಿದ್ದಲ್ಲಿ, ೨೦೨೬ರ ಜನವರಿ ೨೬ರ ಗಣರಾಜೋತ್ಸವ ದಿನದಂದು ರೈತ ಸಂಘದ ಕಾರ್ಯಕರ್ತರು ಹಾಗೂ ಎಸ್.ಡಿ.ಎಂ.ಸಿ ಸಂಘದ ಸದಸ್ಯರುಗಳು ಬಲಗೈಯಲ್ಲಿ ತ್ರಿವರ್ಣ ದ್ವಜ ಹಾಗೂ ಎಡಗೈಯಲ್ಲಿ ಕಪ್ಪು ಬಾವುಟ ಹಿಡಿದು ರಾಜ್ಯದ ಎಲ್ಲಾ…

Read More

ತುಮಕೂರು: ವಿದ್ಯಾರ್ಥಿಗಳು ಇತಿಹಾಸದಲ್ಲಿ ಭೀಮ ಕೋರೆಂಗಾವ್ ನಂತಹ ಚರಿತ್ರೆಗಳನ್ನು ತಿಳಿದುಕೊಳ್ಳುತ್ತ ತಮ್ಮ ಅರಿವನ್ನ ಎಚ್ಚರಗೊಳಿಸಬೇಕು. ಅಸಮಾನತೆ ಎನ್ನುವುದು ವ್ಯವಸ್ಥೆಯ ಕಣ ಕಣದಲ್ಲೂ ಅಡಗಿದೆ ಅದನ್ನು ನಿರ್ಮೂಲನೆ ಮಾಡಲು ಮುಂದಾಗಬೇಕು. ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕು ಎಂದರು. ತುಮಕೂರು ವಿಶ್ವವಿದ್ಯಾನಿಲಯದ ಬಯಲು ರಂಗಮ0ದಿರದಲ್ಲಿ ಡಿಸೆಂಬರ್ ೩೧ರಂದು ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ, ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ತರಬೇತಿ, ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರದ ಸಹಯೋಗದಲ್ಲಿ ಚಾರಿತ್ರಿಕ ಭೀಮ ಕೋರೆಂಗಾವ್ ವಿಜಯೋತ್ಸವದ ಅಂಗವಾಗಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ರವರ ಪರಿವರ್ತನಾ ಗೀತ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ಡಾ. ಬಸವರಾಜು ಈ ದಿನವನ್ನು ಶೌರ್ಯದ ದಿನ, ಸಮಾನತೆಯ ಹೋರಾಟದ ದಿನ, ಒಗ್ಗಟ್ಟಿನ ದಿನ ಎಂದು ಆಚರಿಸಬೇಕು. ಯಾವುದೇ ಶೋಷಣೆಯಿರಲಿ ಅದನ್ನು ಸಂಪೂರ್ಣವಾಗಿ ತೊಡೆದುಹಾಕುವವರೆಗೆ ಎದುರಿಸಬೇಕು. ನಿರಂತರವಾಗಿ ನಡೆಯುವ ಶೋಷಣೆಯ ಹಂತ ಮೀರಿದರೆ ಹೇಗೆ ಪರಿಣಾಮಕಾರಿಯಾಗಿ ಬದಲಾವಣೆಯಾಗುತ್ತದೆ ಎಂಬುದಕ್ಕೆ ೧೮೧೮ ರಲ್ಲಿ ಪೇಶ್ವೆಗಳ ವಿರುದ್ಧ ನಡೆದ ಭೀಮ ಕೋರೆಂಗಾವ್ ಯುದ್ಧವೇ…

Read More

ಮಧುಗಿರಿ: ಅಸ್ಪೃಶ್ಯರ ಸ್ವಾಭಿಮಾನಕ್ಕಾಗಿ ಶೂರರಾದ ಮಹಾರರು ಸಿದ್ದನಾಕ ಮುಖಂಡತ್ವದಲ್ಲಿ ೧೮೧೮ ಜನವರಿ ೧ ರಂದು ಭೀಮಾಕೋರೆಗಾಂವ್ ಯುದ್ದದಲ್ಲಿ ಬಾಜಿರಾವ್ ಪೇಶ್ವೆಯ ೩೦ ಸಾವಿರ ಸೈನಿಕರ ವಿರುದ್ದ ಜಯಭೇರಿ ಬಾರಿಸಿದರು ಯುದ್ದದಲ್ಲಿ ಮಡಿದ ೨೨ ಮಹಾರ್ ವೀರ ಸೈನಿಕರ ಹೆಸರುಗಳನ್ನು ಸರ್ಕಾರಿ ಅಜ್ಞೆಯಂತೆ ವಿಜಯ ಸ್ತಂಭವನ್ನು ಸ್ಥಾಪಿಸಲಾಗಿದೆ ಎಂದು ದ.ಸಂ.ಸ ರಾಜ್ಯ ಪ್ರಧಾನ ಕಾರ್ಯದರ್ಶಿ ಬೆಲ್ಲದಮಡು ಕೃಷ್ಣಪ್ಪ ತಿಳಿಸಿದರು. ಪಟ್ಟಣದ ಅಂಬೇಡ್ಕರ್ ಭವನದಲ್ಲಿ ದಲಿತ ಸಂಘರ್ಷ ಸಮಿತಿವತಿಯಿಂದ ಆಯೋಜಿಸಲಾಗಿದ್ದ ಜನವರಿ ೧೮೧೮ ರ ಭೀಮಾಕೋರೆಗಾಂವ್ ಯುದ್ದದಲ್ಲಿ ಮಹಾರ್ ಸ್ವಾಭಿಮಾನಿ ವೀರಯೋದರ ವಿಜಯೋತ್ಸವದ ನೆನಪಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಡಾ.ಬಿ.ಆರ್.ಅಂಬೇಡ್ಕರ್ ರವರು ಬ್ರಿಟಿಷ್ ರ ಮತ್ತು ಮಹಾರರ ಸಂಪೂರ್ಣ ಇತಿಹಾಸ ತಿಳಿದುಕೊಳ್ಳಲು ಅಧ್ಯಯನ ಮಾಡುವಾಗ ಮಹಾರ್ ಯುದ್ಧದ ಪರಿಚಯ ವಾಯಿತು ಇಲ್ಲವಾದರೆ ಚರಿತ್ರೆಯಲ್ಲಿ ಮುಚ್ಚಿಹೋಗಿದ್ದ ಈ ವಿಚಾರ ಬೆಳಕಿಗೆ ಬರುತ್ತಿರಲಿಲ್ಲ ಎಂದರು.ಈ ದೇಶದಲ್ಲಿ ಯಾವುದೇ ತರಹದ ಸಮಸ್ಯೆಗಳನ್ನು ಕೊನೆಗಾಣಿಸಲು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾರಂಗ ಸತ್ಯವನ್ನು ಬರೆದು ಸಮಾಜಕ್ಕೆ ಕಣ್ಣಾಗಬೇಕು ಅನ್ಯಾಯದ…

Read More

ಮಧುಗಿರಿ: ಜನವರಿ ೧ರಂದು ಭೀಮ ಕೋರೆಗಾಂವ್ ಯುದ್ಧದ ವಿಜಯೋತ್ಸವವನ್ನು ದೇಶದಾದ್ಯಂತ ಶೋಷಿತ ಸಮುದಾಯಗಳು ಆಚರಣೆ ಮಾಡುತ್ತಿವೆ. ಎಸ್‌ಸಿ, ಎಸ್‌ಟಿ ಹಾಗೂ ಹಿಂದುಳಿದ ವರ್ಗದವರ ಪ್ರತಿ ಗ್ರಾಮದಲ್ಲಿ ಭೀಮ ಕೋರೆಗಾಂವ್ ಯುದ್ಧದ ವಿಜಯೋತ್ಸವದ ಚರಿತ್ರೆಯನ್ನು ಜನರಿಗೆ ತಿಳಿಸಬೇಕು ಎಂದು ದ.ಸಂ.ಸ ಜಿಲ್ಲಾ ಸಂಚಾ ಲಕ ದೊಡ್ಡೇರಿ ಕಣಿಮಯ್ಯ ತಿಳಿಸಿದರು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿ ಬಳಿ ಸಮಾಜಕಲ್ಯಾಣ ಇಲಾಖೆ ಹಾಗೂ ದಲಿತಪರ ಸಂಘಟನೆಗಳ ಸಹಯೋಗದೊಂದಿಗೆ ಹಮ್ಮಿ ಕೊಂಡಿದ್ದ ಭೀಮ ಕೋರೆಗಾಂವ್ ಯುದ್ಧದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಶೋಷಿತರ ಶೌರ್ಯದ ಸಂಕೇತವೇ ಕೋರೆಗಾಂವ್ ಯುದ್ಧವಾಗಿದೆ ಭೀಮಾ ನದಿ ದಡದಲ್ಲಿ ಪೇಶ್ವೆ ಸೇನೆ ಹಾಗೂ ಮಹಾರ್ ಸೈನಿಕರ ಮಧ್ಯೆ ನಡೆದ ಯುದ್ದದಲ್ಲಿ ಮಹರ್ ಸೈನಿಕರು ಶೌರ್ಯ ಮೆರೆದಿದ್ದಾರೆ ೩೦ ಸಾವಿರ ಪೇಶ್ವೆಗಳನ್ನು ೫೦೦ ಮಹಾರ್ ಸೈನಿ ಕರು ಸೋಲಿಸಿ ವಿಜಯಪತಾಕೆ ಹಾರಿಸಿದ ದಿನವನ್ನು ಕೋರೆಗಾಂವ್ ವಿಜಯೋತ್ಸವವಾಗಿ ದೇಶಾದ್ಯಂತ ಆಚರಣೆ ಮಾಡಲಾಗುತ್ತಿದೆ. ಪೇಶ್ವೆಗಳ ಆಡಳಿತದಲ್ಲಿದ್ದ ಜಾತಿ, ಅಸ್ಪೃಶ್ಯತೆ, ಮೇಲುಕೀಳುಗಳ ವಿರುದ್ಧ ನಿಂತು…

Read More