Author: News Desk Benkiyabale

ತುಮಕೂರು: ಸರ್ಕಾರಿ ಚಿತ್ರಕಲಾ ಕಾಲೇಜಿನಲ್ಲಿ ಅರ್ಹತೆಯೇ ಇಲ್ಲದಿದ್ದರೂ ತಪುö್ಪ ಮಾಹಿತಿ ನೀಡಿ ಮತ್ತು ನಿಯಮಗಳನ್ನು ಉಲ್ಲಂಘಿಸಿ ಕಳೆದ ೩ ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ಸಂತೋಷ್ ಕುಮಾರ್ ನಾಗರಾಳ ಮತ್ತು ರಂಗಸ್ವಾಮಿ ಆರ್ ಇಬ್ಬರ ವಂಚನೆ ಬಯಲಾಗಿದೆ. ದಲಿತ ವಿದ್ಯಾರ್ಥಿ ಪರಿಷತ್, ತುಮಕೂರು ನೀಡಿದ ದೂರಿನ ಮೇರೆಗೆ ನಡೆದ ಕಾಲೇಜು ಶಿಕ್ಷಣ ಇಲಾಖೆ ನಡೆಸಿದ ತನಿಖೆಯಲ್ಲಿ ಈ ಅಕ್ರಮ ಬೆಳಕಿಗೆ ಬಂದಿದ್ದು, ಚಿತ್ರಕಲಾ ಇಲಾಖೆಯ ಜಂಟಿ ನಿರ್ದೇಶಕರು ಇಬ್ಬರನ್ನು ತಕ್ಷಣ ಕರ್ತವ್ಯದಿಂದ ಬಿಡುಗಡೆಗೊಳಿಸಲು ಸೂಚಿಸಿದ್ದಾರೆ. ತನಿಖಾ ವರದಿಯ ಪ್ರಕಾರ, ಸಂತೋಷ್‌ಕುಮಾರ್ ನಾಗರಾಳ್ ಎಂಬಾತ ವಿಶ್ವವಿದ್ಯಾಲಯದ ಸರ್ವಿಸ್ ದಾಖಲೆ ತೋರಿಸಿ ಕಳೆದ ೩ ವರ್ಷಗಳಿಂದ ಈ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕನಾಗಿ ಕರ್ತವ್ಯ ನಿರ್ವಹಿಸಿ ಇಲಾಖೆಗೆ ತಪ್ಪು ಮಾಹಿತಿ ನೀಡಿರುತ್ತಾರೆ ಎಂದು ವರದಿಯಲ್ಲಿ ದಾಖಲಾಗಿರುತ್ತದೆ. ಇನ್ನು ರಂಗಸ್ವಾಮಿ. ಆರ್ ಎಂಬಾತ ಬಿವಿಎ/ಬಿಎಫ್‌ಎ ಪರೀಕ್ಷಾ ಮಂಡಳಿಯಲ್ಲಿ ನಿಯಮವನ್ನು ಉಲ್ಲಂಘಿಸಿ ಸದಸ್ಯತ್ವ ಪಡೆದಿದ್ದ. ತನ್ನ ರಕ್ತ ಸಂಬAಧಿಗಳೇ ವಿದ್ಯಾರ್ಥಿಗಳಾಗಿದ್ದರೂ ಅವರ ಪರೀಕ್ಷಾ ಪ್ರಶ್ನೆಪತ್ರಿಕೆ ತಯಾರಿಸುವುದು, ಮೌಲ್ಯಮಾಪನ…

Read More

ಕೊರಟಗೆರೆ: ತಾಲೂಕಿನ ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಚಿಂಪುಗಾನಹಳ್ಳಿ ಗ್ರಾಮದಲ್ಲಿ ಸುಮಾರು ಮೂರು ದಿನಗಳ ಕಾಲ ಗ್ರಾಮ ದೇವತೆ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು. ಜಾತ್ರಾ ಮಹೋತ್ಸವದಲ್ಲಿ ಹತ್ತು ಹಲವು ವಿಶೇಷತೆಗಳು ಗಮನ ಸೆಳೆದವು ದೇವಿಯ ಉತ್ಸವ ಪ್ರಾರಂಭವಾಗುತ್ತಿದ್ದAತೆಯೇ ಗ್ರಾಮದ ಸುತ್ತ ಗುರ್ಜು ರಥವನ್ನು ಎಳೆದು ಗ್ರಾಮಕ್ಕೆ ಯಾವುದೇ ರೀತಿಯ ತೊಂದರೆಯಾಗದAತೆ ಗ್ರಾಮಸ್ಥರು ಆರತಿ ಸೇವೆ ಹಾಗೂ ವಿಶೇಷ ಪೂಜೆಗಳನ್ನು ನಡೆಸಿದರು. ಇದೇ ಸಂದರ್ಭದಲ್ಲಿ ಊರವರೆಗಿನ ಮುತ್ಯಾಲಮ್ಮ, ತೊರೆ ಮಾರಮ್ಮ, ಸಪ್ಲಮ್ಮ, ಮಾವತ್ತೊರಮ್ಮ ಸೇರಿದಂತೆ ಸಪ್ತ ಮಾತೃಕೇಯ ದೇವರುಗಳಿಗೆ ಗ್ರಾಮಸ್ಥರು ಆರತಿ ಸೇವೆ ಪೂಜೆಯನ್ನು ನಡೆಸಿದರು. ಅನೇಕ ಭಕ್ತರು ಮಳೆ ಬೆಳೆಗಾಗಿ ಹಾಗೂ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ವಿಶೇಷ ಅರಕೆಯ ಪೂಜೆಗಳನ್ನು ಸಲ್ಲಿಸಿದರು. ಜಾತ್ರೆ ಎಂದರೆ ನಾನ್ ವೆಜ್ ಊಟದ ವ್ಯವಸ್ಥೆ ಕಡ್ಡಾಯವಾಗಿರುತ್ತದೆ ಅದೇ ರೀತಿಯಲ್ಲಿ ಚಿಂಪುಗಾನಹಳ್ಳಿಯಲ್ಲಿ ನಡೆದ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ ಗ್ರಾಮಸ್ಥರು ಜಾತ್ರೆಗೆ ಆಗಮಿಸಿದ ನೆಂಟರು, ರಾಜಕೀಯ ಮುಖಂಡರು, ಅಧಿಕಾರಿಗಳು, ಸ್ನೇಹಿತರು, ಬಂಧುಗಳಿಗಾಗಿ ಗ್ರಾಮಸ್ಥರು ಸುಮಾರು…

Read More

ಹುಳಿಯಾರು: ಅಧಿಕಾರಿಗಳ ಕೈಮುಗಿದು, ಕಾಲಿಗೆ ಬಿದ್ದು ಅತ್ತರೂ ಕರಗದ ಅರಣ್ಯ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳ ದಂಡು, ಹುಳಿಯಾರು ಹೋಬಳಿಯ ಮುತುಗದಹಳ್ಳಿ ಸರ್ವೇ ನಂಬರ್ ೩೧ ರಲ್ಲಿ ಬರುವ ಬುಕ್ಕಾಪಟ್ಟಣ ಅರಣ್ಯ ವಲಯದ ರೈತರ ಸಾಗುವಳಿಯನ್ನು ಪಟ್ಟು ಹಿಡಿದು ತೆರವು. ರೈತರು ಕಳೆದ ಎರಡ್ಮೂರು ದಶಕಗಳಿಂದ ರಕ್ತ ಬೆವರಿನಂತೆ ಸುರಿಸಿ ಬೆಳೆಸಿದ್ದ ಸಾವಿರಾರು ಅಡಿಕೆ ಹಾಗೂ ತೆಂಗಿನ ಮರಗಳನ್ನು ನೆಲಸಮಗೊಳಿಸಲಾಯಿತು. ಮುತುಗದಹಳ್ಳಿ ಸರ್ವೇ ನಂಬರ್ ೩೧ ರ ಅಸಲಿ ಕಥೆ!: ೧೯೮೨ ರಲ್ಲಿ ಈ ಸರ್ವೇ ನಂಬರಿನಲ್ಲಿ ಒಟ್ಟು ೫೯ ಮಂದಿ ರೈತರಿಗೆ ಸಾಗುವಳಿ ಮಂಜೂರಾಗಿತ್ತು. ತದನಂತರ ೧೯೯೦ ರಲ್ಲಿ ಈ ಜಮೀನನ್ನು ಎಸ್.ಮಲ್ಲಿಕಾರ್ಜುನಯ್ಯ ೨ ಎಕರೆ ಹಾಗೂ ಭಾಗ್ಯಮ್ಮ ಎಂಬುವವರು ೪.೩೮ ಎಕರೆ ಶುದ್ಧ ಕ್ರಯಕ್ಕೆ ಖರೀದಿಸಿದ್ದರು. ಕಳೆದ ೨೦ ವರ್ಷಗಳಿಂದಲೂ ಮಲ್ಲಿಕಾರ್ಜುನಯ್ಯ, ಭಾಗ್ಯಮ್ಮ ಹಾಗೂ ಗೀತಮ್ಮ ಎಂಬ ಮೂವರು ರೈತರು ಮಾತ್ರ ಈ ಜಮೀನಿನಲ್ಲಿ ಅಡಿಕೆ, ತೆಂಗು ಮತ್ತು ಬಾಳೆ ಬೆಳೆದು, ಜೀವನ ನಿರ್ವಹಿಸುತ್ತಿದ್ದರು. ಇನ್ನುಳಿದ ರೈತರು ಈ…

Read More

ತುರುವೇಕೆರೆ:  ತಾಲೂಕಿನ ಮಾಯಸಂದ್ರ ನಾಡಕಚೇರಿಯ ಗ್ರಾಮ ಸಹಾಯಕ ರಂಗಸ್ವಾಮಿ ಎಂಬಾತನ ವಿರುದ್ಧ ಸಾಲು, ಸಾಲು ಲಂಚದ ಆರೋಪಗಳು ಕೇಳಿಬಂದಿದ್ದು, ಅಲ್ಲದೆ, ಈತ ಖಾತೆ ಸಂಬAಧ ೩ ಲಕ್ಷ ರೂ. ಲಂಚದ ಅವ್ಯವ ಹಾರದಲ್ಲಿ ಕೆಆರ್‌ಎಸ್ ಕಾರ್ಯಕರ್ತನನ್ನು ಸಿಲುಕಿ ಸಲು ಯತ್ನಿಸುತ್ತಿರುವ ಆಡಿಯೋ ವೈರಲ್ ಆದ ಹಿನ್ನೆಲೆ ಇದೆಲ್ಲದರ ಕುರಿತಾಗಿ ಕ್ರಿಮಿನಲ್ ಪ್ರಕರಣ ದಾಖಲಿಸಿ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಕೆಆರ್‌ಎಸ್ ಪಕ್ಷದ ಎಸ್ಸಿಎಸ್ಟಿ ಘಟಕದ ರಾಜ್ಯ ಕಾರ್ಯದರ್ಶಿ ಸಿ.ಚನ್ನಯ್ಯ ಅವರ ನೇತೃತ್ವದ ನಿಯೋಗ ಗುರುವಾರ ತಹಶೀಲ್ದಾರರಿಗೆ ದೂರು ಸಲ್ಲಿಸಿದೆ. ಗುರುವಾರ ಮಧ್ಯಾಹ್ನ ತುರುವೇಕೆರೆ ತಾಲೂಕು ಕಚೇರಿಗೆ ಭೇಟಿ ನೀಡಿ ತಹಶೀಲ್ದಾರ್ ಕುಂಇ ಅಹ್ಮದ್ ಅವರಿಗೆ ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಚನ್ನಯ್ಯ, ಮಾಯಸಂದ್ರ ಹೋಬಳಿಯ ನಾಡಕಚೇರಿಯಲ್ಲಿ ಗ್ರಾಮ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿರುವ ಮಲ್ಲೂರು ಗ್ರಾಮದ ರಂಗಸ್ವಾಮಿ ಎಂಬುವವರು ಖಾತೆ ಸಂಬAಧಿತ ಕೆಲಸಕ್ಕಾಗಿ ೩ ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದು ಹಾಗೂ ಈ ಪ್ರಕರಣದಲ್ಲಿ ನನಗೂ ಆಮಿಷವೊಡ್ಡಲು ಮುಂದಾಗಿರುವುದು ಆಡಿಯೋದಲ್ಲಿ ವ್ಯಕ್ತವಾಗಿದೆ…

Read More

ತುಮಕೂರು: ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರ ೧೭ನೇ ಪಟ್ಟಾಭಿಷೇಕ ಹಾಗೂ ೪೦ನೇ ಜನ್ಮ ವರ್ಧಂತ್ಯೋತ್ಸವ ಅಂಗವಾಗಿ ಜುಲೈ ೧೯ರಂದು ಚಿತ್ರದುರ್ಗದಲ್ಲಿ ಬೃಹತ್ ರಾಷ್ಟಿçÃಯ ಭೋವಿ ಜನೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ: ಎಂ. ರಾಮಪ್ಪ ತಿಳಿಸಿದ್ದಾರೆ. ನಗರದ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು, ಭೋವಿ ಸಮುದಾಯದ ಅಭಿವೃದ್ಧಿ ದೃಷ್ಟಿಯಿಂದ ನಿಗಮದ ಮೂಲಕ ಕರ್ನಾಟಕ ಸರ್ಕಾರ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಸಮುದಾಯವನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡುತ್ತಿದೆ. ಈ ನಿಟ್ಟಿನಲ್ಲಿ ಭೋವಿ ಜನಸಮುದಾಯದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಹಾಗೂ ಸಮುದಾಯ ಸಂಘಟಿತರಾಗಬೇಕೆAಬ ಉದ್ದೇಶದಿಂದ ಕುಲಗುರುವಿನ ಜನ್ಮ ಜಯಂತಿಯನ್ನು ಭೋವಿ ಜನೋತ್ಸವ ಹೆಸರಿನಲ್ಲಿ ಚಿತ್ರದುರ್ಗದಲ್ಲಿ ಆಚರಿಸಲಾಗುತ್ತಿದೆ ಎಂದು ಅವರು ವಿವರಿಸಿದರು. ಈ ಕಾರ್ಯಕ್ರಮದಲ್ಲಿ ದೇಶಾದ್ಯಂತ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಭೋವಿ ಸಮುದಾಯದ ಜನರು ಬೃಹತ್ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್…

Read More

ತುಮಕೂರು: ಕರ್ನಾಟಕ ರಾಜ್ಯ ಸರ್ಕಾರದ ಸನ್ಮಾನ್ಯ ಉಪಮುಖ್ಯಮಂತ್ರಿಗಳು, ಕಂದಾಯ ಸಚಿವರು, ಯುವಜನ ಮತ್ತು ಕ್ರೀಡಾ ಇಲಾಖೆ ಸಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಛಲವಾದಿ ಸಮುದಾಯದ ಕಣ್ಮಣಿಗಳು, ಸರಳ ಸಜ್ಜನಿಕೆಯ ಹಿರಿಯ ರಾಜಕಾರಣಿಗಳಾದ ಸನ್ಮಾನ್ಯ ಶ್ರೀ ಡಾ.ಜಿ.ಪರಮೇಶ್ವರ್ ರವರ ವಿರುದ್ದ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಹೋರಾಟಗಾರರೆಂದು ಬಿಂಬಿಸಿಕೊಳ್ಳುತ್ತಿರುವ ಹಂದ್ರಾಳು ನಾಗಭೂಷಣ್ ರವರ ವಿರುದ್ದ ಸಂಬAಧಪಟ್ಟ ಅಧಿಕಾರಿಗಳು ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಛಲವಾದಿ ಮುಖಂಡರು ಇಂದು ಆಗ್ರಹಿಸಿದ್ದಾರೆ. ಛಲವಾದಿ ಮಹಾಸಭಾ ಸಂಘಟನೆಯ ಸದಸ್ಯರುಗಳು ಇಂದು ನಗರದ ಪಾಲಿಕೆ ಆವರಣದಲ್ಲಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿಯ ಮುಂಭಾಗದಲ್ಲಿ ಸಭೆ ಸೇರಿ ಡಾ|| ಜಿ.ಪರಮೇಶ್ವರ್ ರವರು ತುಮಕೂರು ಜಿಲ್ಲೆಗೆ ತಮ್ಮದೇ ಆದ ವಿಶಿಷ್ಠ ಕೊಡುಗೆಗಳನ್ನು ನೀಡುತ್ತಾ ಬರುತ್ತಿದ್ದಾರೆ, ಜೊತೆಗೆ ಅವರು ಪ್ರಸ್ತುತದ ಸರ್ಕಾರದಲ್ಲಿ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ರಾಜ್ಯ ಸರ್ಕಾರದಿಂದ ಸಾವಿರಾರು ಕೋಟಿ ಅನುದಾನವನ್ನು ತಂದು ತಮ್ಮ ದೂರದೃಷ್ಟಿಯಿಂದ ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ.…

Read More

ತುಮಕೂರು: ಕನಿಷ್ಠ ವೇತನ ಅಧಿಸೂಚನೆಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಬೇಕು, ಪಿಎಫ್ ಮತ್ತು ಇಎಸ್‌ಐ ಮಿತಿಗಳನ್ನು ರದ್ದುಗೊಳಿಸಬೇಕು, ಭೂಕಂದಾಯ ವಸೂಲಿಯಲ್ಲಿ ನ್ಯಾಯಾಲಯದ ತೀರ್ಪುಗಳನ್ನು ತಕ್ಷಣ ಪಾಲಿಸಬೇಕು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು ತುಮಕೂರು ಜಿಲ್ಲಾ ಸಮಿತಿಯು ಪ್ರತಿಭಟನಾ ಮೆರವಣಿಗೆ ಮತ್ತು ಧರಣಿ ನಡೆಸಿ ೩ ಗಂಟೆಗೆ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆಯು ಜಿಲ್ಲಾಧಿಕಾರಿಗಳ ಕಚೇರಿ ಎದುರು ತಲುಪಿತು. ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್, ಖಜಾಂಚಿ ಎ. ಲೋಕೇಶ್, ಪ್ರ.ಕಾರ್ಯದರ್ಶಿ ಜಿ. ಕಮಲ, ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ರಂಗಧಾಮಯ್ಯ, ಮಧುಸೂಧನ್ ಅವರ ನೇತೃತ್ವದಲ್ಲಿ ನೂರಾರು ಕಾರ್ಮಿಕರು ಭಾಗವಹಿಸಿದ್ದರು. ತುಮಕೂರು ಪೌರ ಕಾರ್ಮಿಕರ ಸಂಘದ ರಾಜೇಶ್, ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘದ ಪ್ರಕಾಶ್, ತುಮಕೂರು ಮಹಾನಗರ ಪಾಲಿಕೆ ಕಸದ ಆಟೋ ಚಾಲಕರು ಮತ್ತು ಸಹಾಯಕರ ಸಂಘದ ಮಾರುತಿ, ಜಿಲ್ಲಾ ನೀರು ಸರಬರಾಜು ನೌಕರರ ಸಂಘದ ಕುಮಾರ್, ಸರ್ಕಾರಿ ಆಸ್ಪತ್ರೆ ಕಾರ್ಮಿಕರ ಸಂಘದ ರಂಗಮ್ಮ, ವಿವಿ ನೌಕರರ ಸಂಘದ ಲಕ್ಷಿö್ಮÃ,…

Read More

ಪಾವಗಡ: ಬಡ ಜನರಿಗಾಗಿ ಸರ್ಕಾರ ವಿತರಿಸುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಕಾಳಸಂತೆ ಹಾಗೂ ನೆರೆಯ ರಾಜ್ಯಕ್ಕೆ ಸಾಗಿಸುತ್ತಿದ್ದ ಬೃಹತ್ ಜಾಲವನ್ನು ಪಾವಗಡ ಪೊಲೀಸರು ಭೇದಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ನಡೆಸಿದ ಕಾರ್ಯಾಚರಣೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಪಡಿತರ ಅಕ್ಕಿ ಹಾಗೂ ಸಾಗಾಟಕ್ಕೆ ಬಳಸಲಾಗುತ್ತಿದ್ದ ವಾಹನವನ್ನು ಜಪ್ತಿ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ದೂರಿನ ಮೇರೆಗೆ ಪೊಲೀಸ್ ಠಾಣೆಯಲ್ಲಿ ಅಧಿಕೃತ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ತಾಲ್ಲೂಕಿನ ಗಡಿ ಭಾಗದ ಮೂಲಕ ಸರ್ಕಾರದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ತಾಲ್ಲೂಕು ಆಡಳಿತ ಪ್ರಮುಖ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸಿದ ವೇಳೆ ಅಕ್ರಮ ಸಾಗಾಟ ಪತ್ತೆಯಾಗಿದೆ. ದಾಳಿಯ ನಂತರ ಅಕ್ಕಿ ಮೂಟೆಗಳು ಮತ್ತು ಸಾಗಾಟಕ್ಕೆ ಬಳಸಿದ್ದ ವಾಹನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಜಪ್ತಿ ಮಾಡಲಾದ ಅಕ್ಕಿ ಹಾಗೂ ವಾಹನವನ್ನು ಪೊಲೀಸ್ ಠಾಣೆಯ ಆವರಣದಲ್ಲಿ ಇರಿಸಲಾಗಿದ್ದು, ಸಂಬಂಧಿತ ಕಾನೂನುಗಳಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು…

Read More

ಪಾವಗಡ: ತಾಲ್ಲೂಕಿನ ಜಂಗಮರಹಳ್ಳಿ ಗ್ರಾಮದಲ್ಲಿ ೬೦ ಅಡಿ ಆಳದ ನೀರಿನ ಬಾವಿಗೆ ಆಕಸ್ಮಿಕವಾಗಿ ಬಿದ್ದ ಎಚ್‌ಎಫ್ ತಳಿಯ ಹಸುವನ್ನು ಅಗ್ನಿಶಾಮಕ ಸಿಬ್ಬಂದಿ ಸತತ ೪ ಗಂಟೆ ೧೨ ನಿಮಿಷಗಳ ಸಾಹಸಮಯ ಕಾರ್ಯಾಚರಣೆ ನಡೆಸಿ ಜೀವಂತವಾಗಿ ರಕ್ಷಿಸಿದ್ದಾರೆ. ಪಾವಗಡ ತಾಲೂಕಿನ ಜಂಗಮರಹಳ್ಳಿ ಗ್ರಾಮದ ಶಿವಕುಮಾರ್ ಅವರ ಎಚ್‌ಎಫ್ ತಳಿಯ ಹಸು ತೋಟದಲ್ಲಿ ಮೇಯುತ್ತಿರುವ ವೇಳೆ ಕಾಲು ಜಾರಿ ಸುಮಾರು ೬೦ ಅಡಿ ಆಳದ ನೀರಿನ ಬಾವಿಗೆ ಬಿದ್ದಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಪಾವಗಡ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಹಗ್ಗ, ಹೋಸ್ ಸೇರಿದಂತೆ ವಿವಿಧ ರಕ್ಷಣಾ ಉಪಕರಣಗಳ ನೆರವಿನಿಂದ ಕಾರ್ಯಾಚರಣೆ ಆರಂಭಿಸಿದರು. ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಪ್ರವೀಣ್ ಕುಮಾರ್ ಆವರ ನೇತೃತ್ವದಲ್ಲಿ ಪ್ರಮುಖ ಅಗ್ನಿಶಾಮಕರಾದ ವೆಂಕಟೇಶ ನಾಡಗೌಡ, ನಾಗೇಶ ಎಂ.ಎನ್., ಚಾಲಕ ತಂತ್ರಜ್ಞ ಶೇಕ್ ಮನ್ಸೂರ್ ಅಹ್ಮದ್ ಹಾಗೂ ಅಗ್ನಿಶಾಮಕರಾದ ಸಂದೀಪ ದಾಮೋದರ ನಾಯಕ ಮತ್ತು ಹರೀಶ್ ಎನ್.ಎಂ. ಅವರ ತಂಡ ಸತತ ೪ ಗಂಟೆ ೧೨ ನಿಮಿಷಗಳ ಕಾಲ ಶ್ರಮಿಸಿ…

Read More

ಹುಳಿಯಾರು: ಸರ್ಕಾರದ ‘ಮನೆ ಮನೆ ಗಂಗೆ’ ಯೋಜನೆ ಇನ್ನೂ ತಲುಪದ ಆ ಹಳ್ಳಿಯಲ್ಲಿ ಕುಡಿಯುವ ನೀರಿಗೆ ಇರುವುದೇ ಎರಡು ಸಿಸ್ಟನ್‌ಗಳು. ಆದರೆ, ಆ ಸಿಸ್ಟನ್‌ಗಳ ನಲ್ಲಿಗಳು ಸತತವಾಗಿ ಸೋರುತ್ತಿದ್ದರೂ ರಿಪೇರಿ ಮಾಡುವವರೇ ಇಲ್ಲದಂತಾಗಿದೆ. ನಿತ್ಯವೂ ನೂರಾರು ಲೀಟರ್ ಕುಡಿಯುವ ನೀರು ಚರಂಡಿ ಪಾಲಾಗುತ್ತಿದೆ. ಅಲ್ಲದೆ ಕಾಲಕಾಲಕ್ಕೆ ಚರಂಡಿ ಕ್ಲೀನ್ ಮಾಡದೆ ನಿರ್ಲಕ್ಷಿö್ಯಸಿರುವುದರಿಂದ ಗ್ರಾಮಸ್ಥರು ಸೊಳ್ಳೆ ಹಾಗೂ ದುರ್ನಾತದ ನರಕಯಾತನೆ ಅನುಭವಿಸುತ್ತಿದ್ದಾರೆ! ಇದು ಹುಳಿಯಾರು ಹೋಬಳಿಯ ಕಾರೆಹಳ್ಳಿ ಗ್ರಾಮದ ಇಂದಿನ ಕರುಣಾಜನಕ ಸ್ಥಿತಿ. ಸಿಸ್ಟನ್‌ಗಳಿಂದ ನಿರಂತರವಾಗಿ ಪೋಲಾಗುತ್ತಿರುವ ನೀರೆಲ್ಲವೂ ಪಕ್ಕದ ಚರಂಡಿಯಲ್ಲಿ ಹೋಗಿ ಶೇಖರಣೆಯಾಗುತ್ತಿದೆ. ಕಾಲಕಾಲಕ್ಕೆ ಚರಂಡಿ ಸ್ವಚ್ಛಗೊಳಿಸಬೇಕಾದ ಗ್ರಾಮ ಪಂಚಾಯಿತಿ ಸಂಪೂರ್ಣ ಕಣ್ಣು ಮುಚ್ಚಿ ಕುಳಿತಿದೆ. ಇದರಿಂದಾಗಿ ಹರಿದ ನೀರೆಲ್ಲಾ ಕೊಳೆತು, ಇಡೀ ಚರಂಡಿ ಕಲುಷಿತಗೊಂಡಿದೆ. ಇದು ಸೊಳ್ಳೆಗಳ ಆಶ್ರಯ ತಾಣವಾಗಿ ಮಾರ್ಪಟ್ಟಿದ್ದು, ನಿತ್ಯವೂ ಇಲ್ಲಿಗೆ ನೀರು ಹಿಡಿಯಲು ಬರುವ ಮಹಿಳೆಯರು, ಮಕ್ಕಳು ಸೊಳ್ಳೆಗಳ ಕಾಟದಿಂದ ಹೈರಾಣಾಗುತ್ತಿದ್ದಾರೆ. ಇನ್ನು ಚರಂಡಿ ಪಕ್ಕದಲ್ಲಿರುವ ಮನೆಗಳ ಪರಿಸ್ಥಿತಿಯಂತೂ ಹೇಳತೀರದಾಗಿದೆ. ದಿನಪೂರ್ತಿ ಬೀರುವ ದುರ್ನಾತ ಹಾಗೂ…

Read More