Author: News Desk Benkiyabale

ತುಮಕೂರು: ಕನಕದಾಸರು ಸುಮಾರು 500 ವರ್ಷಗಳ ಹಿಂದೆ ರಚಿಸಿದ ಕೀರ್ತನೆಗಳು ಇಂದಿಗೂ ಜೀವಂತವಾಗಿದ್ದು ನಮ್ಮ ಜೀವನದಲ್ಲಿ ಸ್ಪೂರ್ತಿಯನ್ನು ತುಂಬಿವೆ ಎಂದು ಹಿರಿಯ ಲೇಖಕಿ ಮತ್ತು ಶಾರದಾ ಪ್ರಕಾಶನದ ಸಂಪಾದಕಿ ಪ್ರೊ. ಕಮಲಾನರಸಿಂಹ ಹೇಳಿದರು. ವಿವಿ ಕಲಾ ಕಾಲೇಜಿನಲ್ಲಿ ಬುಧವಾರ ಆಯೋಜಿಸಲಾಗಿದ್ದ ಕನಕದಾಸರ ವಿಚಾರ ಮಂಥನ ಮತ್ತು ಕನಕದಾಸ ಗೀತಗಾಯನ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನಕದಾಸರನ್ನು ಅರ್ಥಮಾಡಿಕೊಳ್ಳಲು ದೈವಭಕ್ತಿಯ ದೃಷ್ಟಿಯಿಂದಷ್ಟೇ ಅಲ್ಲದೇ ಚಿಂತಕ, ಸಾಹಿತಿ, ಮತ್ತು ಸಮಾಜ ಸುಧಾರಕರನ್ನಾಗಿಯೂ ನೋಡಬೇಕು. ದಾಸರು ಹಾಡಿನ ಮೂಲಕ ಹೇಳಿರುವ ಸಾಮಾಜಿಕ ಸತ್ಯವನ್ನು ಎಲ್ಲರೂ ಅಳವಡಿಸಿಕೊಂಡು ಸಮಾಜದ ಕೊಳಕು ಮತ್ತು ಬಂಡಾಯವನ್ನು ವಿನಯದ ಸಂಪತ್ತಿನಿAದ ತೊಳೆಯಬೇಕಿದೆ ಎಂದರು. ಕನಕದಾಸರ ವಿಚಾರಧಾರೆಯನ್ನು ಕುರಿತು ಮಾತನಾಡಿದ ಕಲಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಸ್. ಶಿವಣ್ಣ ಬೆಳವಾಡಿ, ರಾಮಧಾನ್ಯಚರಿತೆಯ ಪ್ರಸಂಗವನ್ನು ವಿಶ್ಲೇಷಿಸುವ ಮೂಲಕ ಇದು ಬರಿಯ ಚರಿತೆಯಲ್ಲ ವಿಚಾರಗಳನ್ನು ಪ್ರಾಯೋಗಿಕವಾಗಿ ಕಟ್ಟಿಕೊಟ್ಟಿದ್ದಾರೆ. ಸಾರ್ವಕಾಲಿಕ ಸತ್ಯವನ್ನು ತಮ್ಮ ಕೀರ್ತನೆಗಳ ಮೂಲಕ ಸಮಾಜಕ್ಕೆ ವಾಸ್ತವವನ್ನು ತಿಳಿಸುವ ಪ್ರಯತ್ನ ಮಾಡಿದ್ದಾರೆ ಎಂದರು.…

Read More

ತುಮಕೂರು: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಬೆಂಗಳೂರು, ತುಮಕೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ್.ನಿ, ಹಾಗೂ ತುಮಕೂರು ಜಿಲ್ಲಾ ಸಹಕಾರಿ ಯೂನಿಯನ್, ನಿ ತುಮಕೂರು ವತಿಯಿಂದ ನವೆಂಬರ್ 29 ರಂದು ಹೆಗ್ಗೆರೆಯ ಹೆಚ್.ಎಂ.ಗAಗಾಧರಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಸ್ವಯಂ ಚಾಲಿತ ಹಾಲು ಶೇಖರಣ ಘಟಕಗಳ ತಂತ್ರಾAಶ ಅನುಷ್ಠಾನ ಮತ್ತು ಕಾರ್ಯದರ್ಶಿಗಳಿಗೆ ತರಬೇತಿ ಮತ್ತು ಸಹಕಾರ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ ಜರುಗಲಿದೆ ಎಂದು ಸಹಕಾರ ಯೂನಿಯನ್ ಅಧ್ಯಕ್ಷ ಟಿ.ಜಿ.ವೆಂಕಟೇಗೌಡ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಈ ಬಾರಿಯ ಸಹಕಾರಿ ಸಪ್ತಾಹದಲ್ಲಿ ಸಹಕಾರಿ ರತ್ನ ಪ್ರಶಸ್ತಿ ಪಡೆದಿರುವ ಹಿರಿಯ ಸಹಕಾರಿ ಧುರೀಣರು ಹಾಗೂ ನಿವೃತ್ತ ಅಧಿಕಾರಿಗಳನ್ನು ಗೌರವಿಸಲಾಗುವುದು ಎಂದರು. ನವೆAಬರ್ 29 ರ ಬೆಳಗ್ಗೆ ಹೆಗ್ಗೆರೆಯ ಶಿಕ್ಷಣ ಭೀಷ್ಮ ಹೆಚ್.ಎಂ.ಗAಗಾಧರಯ್ಯ ಮೆಮೋರಿಯಲ್ ಹಾಲ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಹಕಾರ ದ್ವಜಾರೋಹಣವನ್ನು ಕೇಂದ್ರದ ಜಲಶಕ್ತಿ ಮತ್ತು ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ನೆರವೇರಿಸುವರು. ಉದ್ಘಾಟನೆಯನ್ನು ಗೃಹ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ…

Read More

ಪಾವಗಡ: ರಾಜಕೀಯ ಮೇಲಾಟದಿಂದಾಗಿ 13ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸರ್ಕಾರಿ ಶಾಲಾ ಕಟ್ಟಡ ಇಂದು ಅನೈತಿಕ ತಾಣವಾಗಿದ್ದು ಬೆಲೆ ಬಾಳುವ ವಸ್ತುಗಳ ನಾಪತ್ತೆಯಾಗುತ್ತಿವೆ ಎಂಬುದು ಗ್ರಾಮಸ್ಥರು ದೂರಾಗಿದೆ. ಪಾವಗಡ ತಾಲ್ಲೂಕಿನ ಆರಸೀಕೆರೆ ಗ್ರಾಮದಲ್ಲಿ 8ವರ್ಷಗಳ ಹಿಂದೆ ಆದರ್ಶಶಾಲೆಗಾಗಿ 13ಕೋಟಿವೆಚ್ಚದಲ್ಲಿ ನಿರ್ಮಾಣಗೊಂಡಿದ್ದು ಇದುವರೆಗೂ ಪಾವಗಡ ನಗರದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇದ್ದರೂ ಸ್ಥಳಾಂತರ ಗೊಳ್ಳದೆ ಸರ್ಕಾರಿ ಆದರ್ಶ ಶಾಲೆಯಕಟ್ಟಡ ಅನೈತಿಕ ತಾಳವಾಗಿ ಬಾಗಿಲುಗಲು ಕಿಟಕಿಗಳು ಗೆದ್ದಲು ಹಿಡಿದು ಹಾಳಾಗಿವೆ ಬೆಲೆ ಬಾಳುವ ವಸ್ತುಗಳು ಹಾಳಾಗಿವೆ ಕಟ್ಟಡದ ಒಳದ ಬಾಗದಲ್ಲಿ ಗಿಡಗೆಂಟಿಗಳು ಅಳುದ್ದ ಬೆಳೆದು ಕಾಡು ಪ್ರಾಣಿಗಳ ಅವಾಸಸ್ಥಾನವಾಗಿ ಮಾರ್ಪಟ್ಟಿದೆ ಮತ್ತು ಕಿಟಕಿಗಾಜು ಪ್ಯಾನ್ ಇನ್ನಿತರೆ ಬೆಲೆ ಬಾಳುವ ವಸ್ತುಗಳು ನಾಪತ್ತೆಯಾಗಿವೆ ಎಂಬುದು ನಾಗರೀಕರ ದೂರಾಗಿದೆ. ತಾಲ್ಲೂಕಿಗೆ ಅದರ್ಶಶಾಲೆ ಮುಂಜೂರು ಆದಾಗ ಇದ್ದ ಸರ್ಕಾರಿ ಕಟ್ಟಡವೊಂದರಲ್ಲಿ ತಾತ್ಕಾಲಿಕವಾಗಿ ಪ್ರಾರಂಭಮಾಡಲಾಯಿತು ಅನಂತರ ನಿವೇಶನಕ್ಕಾಗಿ ಹುಡುಕಾಟ ಪ್ರಾರಂಭವಾಯಿತು 10ಎಕರೆ ಜಾಗ ಸಿಗದೆ ಇದ್ದಾಗ ಅರಸೀಕೆರೆ ಗ್ರಾಮದವರು 21ಎಕರೆ ಜಾಗವನ್ನು ರಾಜ್ಯಪಾಲರ ಹೆಸರಿಗೆ ನೊಂದಾಯಿಸಿದ್ದಾರೆ ಹೀಗಾಗಿ ಸರ್ಕಾರ ಆ ಜಾಗದಲ್ಲಿ…

Read More

ತುಮಕೂರು: ನಗರದ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ಬುಧವಾರ ವಿಕಲಚೇತನರ ರಾಜ್ಯ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ ನಡೆಯಿತು. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ವಿಕಲಚೇತನರು ವಿವಿಧ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ಕ್ರೀಡಾ ಪ್ರತಿಭೆ ಪ್ರದರ್ಶಿಸಿ ಗಮನ ಸೆಳೆದರು. ಸಮರ್ಥಂ ವಿಕಲಚೇತನರ ಸಂಸ್ಥೆ ಆಯೋಜಿಸಿದ್ದ ಈ ಕ್ರೀಡಾಕೂಟವನ್ನು ರಾಜ್ಯ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಟಿ.ಎನ್.ಮಧುಕರ್ ಉದ್ಘಾಟಿಸಿ, ವಿಕಲಚೇತನ ಮಕ್ಕಳು ಕೀಳರಿಮೆ ತೊರೆದು ಇಂತಹ ಅವಕಾಶಗಳನ್ನು ಬಳಿಸಿಕೊಂಡು ಸಾಧನೆ ಮಾಡಬೇಕು ಎಂದು ಹೇಳಿದರು. ವಿಕಲಚೇತನರಿಗೆ ಅಂಗವೈಕಲ್ಯವಿರಬಹುದು ಆದರೆ ಅವರಲ್ಲಿ ವಿಶೇಷವಾದ ಬುದ್ಧಿವಂತಿಕೆ, ಕ್ರಿಯಾಶೀಲತೆ ಇರುತ್ತದೆ. ಇತ್ತೀಚೆಗೆ ಚೆಸ್ ಅಸೋಸಿಯೇಷನ್‌ನಿಂದ ತುಮಕೂರಿನಲ್ಲಿ ನಡೆಸಿದ ರಾಜ್ಯ ಮಟ್ಟದ ಅಂಧರ ಚೆಸ್ ಪಂದ್ಯಾವಳಿಯಲ್ಲಿ ಆ ಮಕ್ಕಳ ಬುದ್ಧಿವಂತಿಕೆಯನ್ನು ಗಮನಿಸಿದ್ದೇನೆ. ಸಾಮಾನ್ಯ ಮಕ್ಕಳಿಗಿಂತಲೂ ಹೆಚ್ಚು ಪ್ರತಿಭಾವಂತರಾಗಿದ್ದಾರೆ ಎಂದರು. ಅಂಗವೈಕಲ್ಯ ಸಾಧನೆಗೆ ಅಡ್ಡಿಯಾಗಬಾರದು. ಅದನ್ನು ಸವಾಲಾಗಿ ಸ್ವೀಕರಿಸಿ ಸಾಧನೆ ಮಾಡಬೇಕು. ರಾಜ್ಯಮಟ್ಟದ ಕ್ರೀಡೆಯಲ್ಲಿ ವಿಜೇತರಾದವರು ರಾಷ್ಟç ಮಟ್ಟದ ಪಂದ್ಯಾವಳಿಯಲ್ಲಿ ಸ್ಪರ್ಧೆ ಮಾಡಲು ಅರ್ಹರಾಗುತ್ತಾರೆ, ಮುಂದೆ ಅಂತರರಾಷ್ಟಿçÃಯ ಮಟ್ಟದಲ್ಲೂ ಪಾಲ್ಗೊಳ್ಳುವ ಅವಕಾಶ ದೊರೆಯುತ್ತದೆ ಎಂದು ಟಿ.ಎನ್.ಮಧುಕರ್…

Read More

ತುಮಕೂರು: ಅಕ್ರಮವಾಗಿ ನಾಡಾ ಬಂದೂಕುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಕುಖ್ಯಾತಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ ಅವರು ತಿಳಿಸಿದರು. ನಗರದ ಎಸ್ಪಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ಧಿಗೋಷ್ಠಯಲ್ಲಿ ಮಾತನಾಡಿದ ಅವರು, ಗುಬ್ಬಿ ತಾಲ್ಲೂಕು ತಿದ್ದೂರು ಗ್ರಾಮದ ವಾಸಿಗಳಾದ ಆರೋಪಿ ಮಧುಚಂದ್ರ & ಶಿವ ಕುಮಾರ್ ರವರು ಅಕ್ರಮವಾಗಿ ಯಾವುದೇ ಲೈಸೆನ್ಸ್ ಇಲ್ಲದ ನಾಡ ಬಂದೂಕಿನೊಂದಿಗೆ ಬೇಟೆಗೆ ಬಂದಾಗ ಚೈತ್ರರವರ ಗಂಡ ರ‍್ಶನ್ ಆಕ್ಷೇಪಿಸಿದಾಗ ಬಂದೂಕು ಕೆಳಗೆ ಬಿದ್ದು ಫೈರ್ ಆಗಿ ಚೈತ್ರ ರವರಿಗೆ ಗಾಯ ಆಗಿದೆ. ಚೈತ್ರ ರವರ ಹೇಳಿಕೆ ಮೇರೆಗೆ ಗುಬ್ಬಿ ಪೊಲೀಸ್ ಠಾಣೆಯಲ್ಲಿ ರ‍್ಮ್ಸ್ ಆಕ್ಟ್ ಮತ್ತು 125(ಎ) ಬಿಎನ್‌ಎಸ್ ರೀತ್ಯಾ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದ ಎಂದು ತಿಳಿಸಿದ್ದಾರೆ. ತನಿಖಾ ಕಾಲದಲ್ಲಿ ತುಮಕುರು ಜಿಲ್ಲೆಯಲ್ಲಿ 25-30 ಸಾವಿರ ರೂ ಗಳಿಗೆ ಅಕ್ರಮ ಬಂದೂಕು ತಯಾರಿಸಿ ಮಾರಾಟ ಮಾಡುತ್ತಿರುವ ಜಾಲ ಸಕ್ರಿಯವಾಗಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಕರ‍್ಯಪ್ರವೃತ್ತರಾದ ಪೊಲೀಸರು 6…

Read More

ತುಮಕೂರು: ಜಿಲ್ಲೆಯ ಪಾವಗಡ ತಾಲ್ಲೂಕು ನಾಗಲಮಡಿಕೆ ಗ್ರಾಮದ ಎಸ್.ಆರ್. ಎಂಟರ್ ಪ್ರೆöÊಸಸ್ ಮಳಿಗೆಯಲ್ಲಿ ಮಾರಾಟ ಮಾಡಲಾಗುತ್ತಿದ್ದ ಕಳಪೆ ದರ್ಜೆಯ 2 ಜೈವಿಕ ಪ್ರಚೋದಕ(ಜೈವಿಕ/ಸಾವಯವ) ಪರಿಕರಗಳನ್ನು ಜಪ್ತಿ ಮಾಡಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಪುಟ್ಟರಂಗಪ್ಪ ತಿಳಿಸಿದ್ದಾರೆ. ಜಪ್ತಿ ಮಾಡಲಾದ ಪರಿಕರಗಳಲ್ಲಿ ಹೆಚ್ಚಿನ ಪ್ರಮಾಣದ ಕೀಟನಾಶಕ ಅಂಶಗಳಿರುವ ಬಗ್ಗೆ ವಿಶ್ಲೇಷಣಾ ಪ್ರಯೋಗಾಲಯಗಳ ವರದಿಯಿಂದ ದೃಢಪಟ್ಟಿರುವುದರಿಂದ ಕೃಷಿ ಇಲಾಖೆಯ ಜಾರಿದಳ ವಿಭಾಗದಿಂದ ಕಳಪೆ ದರ್ಜೆಯ ಪರಿಕರಗಳನ್ನು ಜಪ್ತಿ ಮಾಡಿ ಇಲಾಖೆ ವಶಕ್ಕೆ ಪಡೆಯಲಾಗಿದೆ. ಕೃಷಿ ಇಲಾಖೆಯ ಜಾರಿದಳ ವಿಭಾಗವು ನವೆಂಬರ್ 25ರಂದು ಎಸ್.ಆರ್.ಎಂಟರ್ ಪ್ರೆöÊಸಸ್ ಮಾರಾಟ ಮಳಿಗೆ ಮೇಲೆ ದಾಳಿ ಮಾಡಿ ನಿಯಮಾನುಸಾರ ಪರಿಶೀಲಿಸಿದಾಗ, ಅಂದಾಜು 29,400 ರೂ. ಮೌಲ್ಯದ 4.90 ಲೀಟರ್ ಪ್ರಮಾಣದ ಹೈದರಾಬಾದ್ ಉತ್ಪಾದಕ ಕಂಪನಿಗಳಾದ ಆಸ್ಕರ್ ಕ್ರಾಪ್ ಕೇರ್ ಹಾಗೂ ವಾಯು ಎಂಬ 2 ಜೈವಿಕ ಪರಿಕರ ಮಾದರಿಗಳನ್ನು ಅನುಮತಿ ಪಡೆಯದೆ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಕಳೆದ ಬಾರಿ ಕ್ಷೇತ್ರ ಭೇಟಿ ಸಂದರ್ಭದಲ್ಲಿ ಸಂಶಯಾಸ್ಪದ ಹಿನ್ನೆಲೆಯಲ್ಲಿ ಕೀಟನಾಶಕ ತೇಷಾಂಶ…

Read More

ಹುಳಿಯಾರು: ದೇಶದ ಎಲ್ಲಾ ಕಾನೂನುಗಳ ತಾಯಿ ಸಂವಿಧಾನ. ನಾವು ನೆಮ್ಮದಿ ಮತ್ತು ಖುಷಿಯಿಂದ ಇರಲು ಅದೇ ಕಾರಣ. ಸಂವಿಧಾನವನ್ನು ಪ್ರೀತಿಸುವವರು ಹಾಗೂ ಗೌರವಿಸುವವರು ಎಂದೂ ಕೂಡಾ ಸುಂದರ ಬದುಕನ್ನು ನಡೆಸಬಹುದು ಎಂದು ರಾಜ್ಯಶಾಸ್ತç ಉಪನ್ಯಾಸಕ ಟಿ.ಆರ್.ಪ್ರಸನ್ನ ತಿಳಿಸಿದರು. ಹುಳಿಯಾರಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆದ ‘ಸಂವಿಧಾನ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತದ ಸಂವಿಧಾನವು ಇಲ್ಲೇ ಕುಳಿತು ರಚಿಸಿದ್ದಲ್ಲ. ಇದಕ್ಕಾಗಿ ಅನೇಕ ದೇಶಗಳ ಕಾನೂನುಗಳನ್ನು ಅಧ್ಯಯನ ಮಾಡಿ ಅಳವಡಿಸಲಾಗಿದೆ. ಭಾರತದ ಸಂವಿಧಾನ ರಚನೆಗೆ 2 ವರ್ಷ 9 ತಿಂಗಳು 18 ದಿನ ಹಿಡಿಯಿತು. 2015 ರ ವರೆಗೆ ‘ಲಾ ಡೇ’ ಎಂದು ಕರೆಯಲಾಗುತ್ತಿದ್ದ ದಿನವನ್ನು ಇದೀಗ ‘ಸಂವಿಧಾನ ದಿನ’ ಎಂದು ಕರೆಯಲಾಗುತ್ತಿದೆ ಎಂದರು. ಸಂವಿಧಾನ ಅತ್ಯಂತ ಪವಿತ್ರ ಗ್ರಂಥ. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎನ್ನುವ ಆಶಯದ ಸಂವಿಧಾನ ನಮಗೆಲ್ಲರಿಗೂ ಮಹಾನ್ ಗ್ರಂಥವಾಗಿದೆ. ಸಮಾನತೆ, ಸೌಹಾರ್ದತೆ ಸಾಧಿಸುವಲ್ಲಿ ಸಂವಿಧಾನವು ದಾರಿದೀಪವಾಗಿದೆ. ಜಾಗತಿಕವಾಗಿ ಹೆಸರಾದ ಮತ್ತು ಅನೇಕ ದೇಶಗಳಿಗೆ ಮಾದರಿಯಾದ…

Read More

ತುಮಕೂರು: ಕಾರ್ಮಿಕರು ಮತ್ತು ರೈತರು ಜಂಟಿಯಾಗಿ ಸಂಯುಕ್ತ ಕಿಸಾನ್ ಮೊರ್ಚ, ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ದೇಶದ್ಯಂತ ಇಂದು ನಡೆದ ಪ್ರತಿಭಟನೆಯ ಭಾಗವಾಗಿ ತುಮಕೂರು ನಗರದಲ್ಲಿ ಸಹ ಪ್ರತಿಭಟನೆಯನ್ನು ನಡೆಸಲಾಯಿತು, ದಿ; 26 – 11-2024 ರಂದು ಬೆಳಿಗ್ಗೆ -11 ಗಂಟೆಗೆ ನಗರದ ಸ್ವಾತಂತ್ರ ಚೌಕದಿಂದ ಜಿಲ್ಲಾಧಿಕಾರಿಗಳ ಕಛೇರಿಯ ತನಕ ನೂರಾರು ರೈತ – ಕಾರ್ಮಿಕರ ಮೆರವಣಿಗೆ ನಡೆಸಿದರು. ಜಿಲ್ಲಾಧಿಕಾರಿಗಳ ಕಛೇರಿ ಎದುರು ಧರಣಿಯನ್ನು ಸಹ ನಡೆಸಲಾಯಿತು, ಅರಂಭಿಕವಾಗಿ ರೈತ ಮುಖಂಡ ಬಿ.ಉಮೇಶ್ ಅವರು ಪ್ರಾಸ್ತವಿಕ ಮಾತುಗಳನ್ನು ಅಡಿದರು . ಧರಣೀಯನ್ನು ಉದ್ದೇಶಿಸಿ ಸಂಯುಕ್ತ ಹೋರಾಟ ಕರ್ನಾಟಕದ ಜಿಲ್ಲಾ ಸಂಚಾಲಕರಾದ ಸಿ. ಯತಿರಾಜು ಅವರು ಮಾತನಾಡಿ ಕಾರ್ಪೊರೇಟ್‌ಗಳು ಮತ್ತು ಅತಿ ಶ್ರೀಮಂತರನ್ನು ಶ್ರೀಮಂತಗೊಳಿಸುವ ಗುರಿಯನ್ನು ಹೊಂದಿರುವ ಓಆಂ3 ಸರ್ಕಾರದ ನೀತಿಗಳೊಂದಿಗೆ ಭಾರತದ ದುಡಿಯುವ ಜನರು ಆಳವಾದ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಡಿಜಿಟಲ್ ಅಗ್ರಿಕಲ್ಚರ್ ಮಿಷನ್-ಡ್ಯಾಮ್ ಮೂಲಕ ಭೂಮಿ ಮತ್ತು ಬೆಳೆಗಳ ಡಿಜಿಟಲೀಕರಣವನ್ನು ಹೇರುತ್ತಿz ಎಂದು ಅಪಾಧಿಸಿದರು. ಹೋರಾಟದಲ್ಲಿ ಸಿಐಟಿಯು ಎನ್. ಕೆ ಸುಬ್ರಮಣ್ಯ,…

Read More

ತುಮಕೂರು: ರಂಗಭೂಮಿ ಟ್ರಸ್ಟ್ (ರಿ).ಕೊಡಗು ಇವರ ವತಿಯಿಂದ ನವೆಂಬರ್ 28 ಮತ್ತು 29 ರಂದು ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಸತ್ಯವನ್ನೇ ಹೇಳುತ್ತೇನೆ ಎಂಬ ನಾಟಕದ ಪ್ರದರ್ಶನವನ್ನು ಹಮ್ಮಿಕೊಂಡಿದ್ದು, ನಾಟಕದ ಪ್ರವೇಶಕ್ಕೆ 200 ರೂ ಪ್ರವೇಶ ಶುಲ್ಕ ನಿಗಧಿ ಮಾಡಲಾಗಿದೆ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಮೈಸೂರಿನ ರಂಗಾಯಣದ ನಿಕಟಪೂರ್ವ ನಿರ್ದೇಶಕರಾಗಿರುವ ಅಡ್ಡಂಡ ಕಾರ್ಯಪ್ಪ ಅವರ ನಿರ್ದೇಶನದಲ್ಲಿ ಚರಿತ್ರೆಯ ಕುರಿತ ಸತ್ಯವನ್ನೇ ಹೇಳುತ್ತೇನೆ ಎಂಬ ನಾಟಕ ಎರಡು ದಿನಗಳ ಕಾಲ ಪ್ರದರ್ಶನಗೊಳ್ಳಲಿದ್ದು,ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವೀಕ್ಷಿಸುವಂತೆ ಮನವಿ ಮಾಡಿದರು. ರಂಗಭೂಮಿ ಟ್ರಸ್ಟ್ ಕೊಡಗುನ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಮಾತನಾಡಿ, ಮೈಸೂರಿನ ರಂಗಾಯಣದ ನಿರ್ದೇಶಕ ನಾಗಿದ್ದಾಗ, ಅಲ್ಲಿನ ಕಲಾವಿದರನ್ನು ಬಳಸಿಕೊಂಡು ಟಿಪ್ಪುವಿನ ನಿಜ ಕನಸು ಎಂಬ ನಾಟಕವನ್ನು ರಾಜ್ಯದ ಎಲ್ಲಡೆ ಪ್ರದರ್ಶನ ನಡೆಸಿದ್ದು, ಸುಮಾರು ಅರವತ್ತು ಪ್ರದರ್ಶನ ಕಂಡಿತ್ತು.ತದನAತರ ಸ್ವಾತಂತ್ರ ಹೋರಾಟದಲ್ಲಿ ಭಾಗಿಯಾಗಿಯೂ ಅಪಹಾಸ್ಯಕ್ಕೆ ಒಳಗಾಗಿದ್ದ ನಿಜ ಸ್ವಾತಂತ್ರ ಹೋರಾಟಗಾರ ವೀರ ಸಾರ್ವಕರ್ ಕುರಿತ ಕರಿನೀರಿನ ವೀರ…

Read More

ಶಿರಾ: ದುಶ್ಚಟಗಳು ನಮ್ಮ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ, ಮಾದಕ ವ್ಯಸನದಿಂದ ಬದುಕಿಗೆ ಹಾನಿಯಾಗುತ್ತದೆ ಆಗಾಗಿ ನಾವು ಅದರಿಂದ ಅಂತರ ಕಾಪಾಡಿಕೊಳ್ಳುವುದು ಮುಖ್ಯ ಎಂದು ಅಚರ್ಡ್ ಸಂಸ್ಥೆಯ ಯೋಜನಾ ವ್ಯವಸ್ಥಾಪಕ ಮುತ್ತರಾಯಪ್ಪ ಹೇಳಿದರು. ಶಿರಾ ತಾಲ್ಲೂಕಿನ ತಾವರೆಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳು ಆಯೋಜಿಸಿದ್ದ ‘ಸರಣಿ ಸಂವಾದ’ ಎಂಬ  ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತಾನಾಡಿದ ಅವರು ಈ ಹದಿಹರೆಯದ ವಯಸ್ಸಿನಲ್ಲಿ ತುಮುಲಗಳು ಸಹಜ ಅದನ್ನು ಹಿಡಿತದಲ್ಲಿ ಇಟ್ಟಿಕೊಳ್ಳಬೇಕು. ದುಶ್ಚಟಗಳ ಬಗ್ಗೆ ಕೆಟ್ಟ ಕೌತುಕಗಳು ಬೇಡ. ಬೆಟ್ಟಿಂಗ್, ಮೊಬೈಲ್ ಚಟದಿಂದ ದೂರವಿರಿ. ಕೀಳರಿಮೆ ಬಿಟ್ಟು ಸಾಧನೆಕಡೆಗೆ ನಿಮ್ಮ ನಡೆ ಇರಲಿ ಎಂದೇಳಿದರು ಹಾಗೆಯೇ ಮಕ್ಕಳ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದರು. ಶಾಲಾ ಮುಖ್ಯ ಶಿಕ್ಷಕ ತಿಪ್ಪೇಸ್ವಾಮಿ ಎಂ. ಮಾತಾನಾಡಿ ಈ ತರಹದ ಉಪನ್ಯಾಸಗಳು ಮಕ್ಕಳಿಗೆ ತೀರಾ ಅವಶ್ಯಕ. ನೈತಿಕ ಮೌಲ್ಯಗಳು ಬದುಕಿಗೆ ಮುಖ್ಯ, ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಿ ಎಂದೇಳಿದರು. ಕಾರ್ಯಕ್ರಮದಲ್ಲಿ ಗ್ರಾ. ಪಂ ಸದಸ್ಯ ಶಿವು ಕುಮಾರನಾಯ್ಕ, ಶಿವು ಸ್ನೇಹಪ್ರಿಯ, ರವಿತೇಜ ಚಿಗಳಿಕಟ್ಟೆ ಹಾಗೂ…

Read More