Author: News Desk Benkiyabale

ಕೊರಟಗೆರೆ ಸರಕಾರದ ಆದೇಶವೇ ಇಲ್ಲದೇ ಅಂಚೆ ಇಲಾಖೆಯಲ್ಲಿ ಅನಧಿಕೃತವಾಗಿ ಡಿ.ಗ್ರೂಪ್ ನೌಕರನ ನೇಮಕ.. ಪ್ರತಿ ತಿಂಗಳು ಈತನ ಬ್ಯಾಂಕು ಖಾತೆಗೆ 15ಸಾವಿರ ಸಂಬಳ ಜಮಾ.. ಕಳೆದ 3ವರ್ಷದಿಂದ ಈತನೇ ಕೊರಟಗೆರೆ ಪಟ್ಟಣದ ಅಂಚೆ ಇಲಾಖೆ ಕಚೇರಿಯ ಬಾಸ್. ಡಿ.ಗ್ರೂಪ್ ನೌಕರ(ಹೊರಗುತ್ತಿಗೆ ಸಿಬ್ಬಂದಿ) ನೇಮಕದ ಬಗ್ಗೆ ತುಮಕೂರು ಅಂಚೆ ಇಲಾಖೆಯ ಜಿಲ್ಲಾ ಅಧಿಕ್ಷಕರಿಗೆ ಮಾಹಿತಿಯೇ ಇಲ್ವಂತೆ..!! ಕೊರಟಗೆರೆ ಪಟ್ಟಣದ ಕೇಂದ್ರ ಸ್ಥಾನದಲ್ಲಿನ ಅಂಚೆ ಕಚೇರಿಯಲ್ಲಿ ಅಧಿಕೃತ ನೌಕರಗಿಂತ ಅನಧಿಕೃತ ಸಿಬ್ಬಂದಿಗಳ ದರ್ಬಾರು ಹೆಚ್ಚಾಗಿದೆ. ನೌಕರರ ಪ್ರತಿನಿತ್ಯದ ದಾಖಲಾತಿ ಪರಿಶೀಲನೆ ನಡೆಸಬೇಕಾದ ಅಂಚೆ ನಿರೀಕ್ಷಕರೇ ಕೊರಟಗೆರೆಗೆ ಬರೋದು ತುಂಬಾನೇ ಕಡಿಮೆ. ತುಮಕೂರು ಅಂಚೆ ಇಲಾಖೆಯ ಜಿಲ್ಲಾಮಟ್ಟದ ಅಧಿಕ್ಷಕರು ಮತ್ತು ಉಪ ಅಧಿಕ್ಷಕರ ನಿರ್ಲಕ್ಷದ ಜಾಣಮೌನವು ಕೊರಟಗೆರೆಯಲ್ಲಿ ಸಮಸ್ಯೆ ದ್ವಿಗುಣವಾಗಲು ಕಾರಣವಾಗಿದೆ. ಡಿ.ಗ್ರೂಪ್ ನೌಕರ ಸುರೇಶ್ ಎಂಬಾತ ಪ್ರತಿನಿತ್ಯ ಬೆಳಿಗ್ಗೆ 8ಗಂಟೆಗೆ ಅಂಚೆ ಇಲಾಖೆಗೆ ಮೊದಲು ಬರ್ತಾನೇ. ಅಂಚೆ ಕಾಗದ, ಕ್ಯಾಸ್ ಕೌಂಟರ್, ಬ್ಯಾಗ್ ಕಟ್ಟೋದು ಸೇರಿದಂತೆ ಪ್ರಮುಖ ದಾಖಲೆಗಳಿಗೆ ಈತನೇ ಅಂಚೆ ಮುದ್ರೆ ಹಾಕ್ತಾನೇ.…

Read More

ತುಮಕೂರು ತುಮಕೂರು ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಹಾಗೂ ಸ್ಲಂ ಜನಾಂದೋಲನ ಕರ್ನಾಟಕ, ಎಐಎಂಎಸ್‍ಎಸ್ ಸಂಘಟನೆಗಳ ಒಕ್ಕೂಟದೊಂದಿಗೆ ಮಾನ್ಯ ಜಿಲ್ಲಾಧಿಕಾರಿಗಳ ಕಛೇರಿಗೆ ನಿಯೋಗ ಕೈಗೊಂಡು ತುಮಕೂರು ವಿಶ್ವವಿದ್ಯಾಲಯದ ಕನ್ನಡ ಸಂಶೋದನಾ ಕೇಂದ್ರದಲ್ಲಿ ಸಂಶೋಧನಾ ವಿದ್ಯಾರ್ಥಿಯಾದ ಮಲ್ಲಿಕಾರ್ಜುನ ಎಂಬ ಯುವಕನು ತುಮಕೂರು ನಗರದ 17 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ವೆಸಗಿ ಪರಾರಿಯಾಗಿರುವ ಘಟನೆಯನ್ನು ಖಂಡಿಸಿ, ಶೀಘ್ರ ಕಾನೂನು ಕ್ರಮ ಕೈಗೊಂಡು ಬಂಧಿಸುವಂತೆ, ಅಪರ ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕರಾದ ಮೋಹನ್‍ಕುಮಾರ್ ರವರಿಗೆ ಮನವಿ ಸಲ್ಲಿಸಲಾಯಿತು. ನಿಯೋಗದ ಮಹಿಳಾ ಮುಖಂಡರಾದ ಬಾ.ಹ ರಮಾಕುಮಾರಿ ಮಾತನಾಡಿ ತುಮಕೂರು ನಗರ ಸಾಂಸ್ಕøತಿಕವಾಗಿ ಕಲ್ಪತರು ನಾಡು ಎಂಬ ಹಲವು ಹೆಸರುಗಳಿಗೆ ಸಾಕ್ಷಿಯಾಗಿದೆ. ತುಮಕೂರು ವಿ.ವಿಯ ಸಂಶೋಧನಾ ವಿದ್ಯಾರ್ಥಿ ಮಲ್ಲಿಕಾರ್ಜುನ್ ಎಂಬುವವನಿಂದ 17 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ವೆಸಗಿ ಗರ್ಭಿಣಿಯಾಗುವಂತೆ ಮಾಡಿರುವ ಘಟನೆ ಬಹಳ ಆತಂಕಕಾರಿಯಾಗಿದೆ. ವಿದ್ಯಾವಂತರೇ ಈತರದ ಘಟನೆಗಳನ್ನು ಮಾಡಿದರೇ ಹೇಗೆ. ಈ ಕುರಿತು ಹಲವು ಊಹಪೋಹಗಳು ನಡೆಯುತ್ತಿವೆ, ಆದ್ದರಿಂದ ತುಮಕೂರು ಜಿಲ್ಲಾಡಳಿತ ಈ ಘಟನೆ…

Read More

ತುಮಕೂರು ಭಾರತದ ಯಾವ ರಾಜ್ಯದಲ್ಲಿಯೂ ಒಂದು ಭಾಷೆಯ ಉಳಿವಾಗಿ ಪ್ರಾಧಿಕಾರವಿಲ್ಲ. ಕನ್ನಡಿಗರ ದುರ್ದೈವ ಕನ್ನಡ ನಾಡಿನಲ್ಲಿ ಮಾತ್ರ ಇಂತಹದೊಂದು ಪ್ರಾಧಿಕಾರ ಅಸ್ಥಿತ್ವದಲ್ಲಿದೆ. ಇದು ಭಾಷೆಯ ಬಗ್ಗೆ ಕನ್ನಡಿಗರಿಗೆ ಇರುವ ದುರಭಿಮಾನಕ್ಕೆ ಹಿಡಿದ ಕನ್ನಡಿ ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ ಅಭಿಪ್ರಾಯಪಟ್ಟಿದ್ದಾರೆ. ನಗರದ ಅಂತರಸರನಹಳ್ಳಿಯಲ್ಲಿರುವ ಕೆ.ಎಸ್.ಆರ್.ಟಿ.ಸಿ.ಘಟಕ 2ರಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕನ್ನಡ ಕ್ರಿಯಾಸಮಿತಿ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ಕನ್ನಡ ಭಾಷೆಯ ಉಳಿವಿಗಾಗಿ ಇದುವರೆಗೂ ಕನ್ನಡ ಅಭಿವೃದ್ದಿ ಪ್ರಾಧಿಕಾರ ಹಾಗೂ ಸರಕಾರ 168ಕ್ಕು ಹೆಚ್ಚು ಆಜ್ಞೆ, ಆದೇಶಗಳನ್ನು ಹೊರಡಿಸಿದೆ ಎಂದರು. ಕೆಂಗಲ್ ಹನುಮಂತಯ್ಯ ಅವರು ಬಳ್ಳಾರಿ ಕರ್ನಾಟಕವೂ ಸೇರಿದಂತೆ ಇಡೀ ಕರ್ನಾಟಕವನ್ನು ಒಂದುಗೂಡಿಸುವ ನಿಟ್ಟಿನಲ್ಲಿ ಪ್ರಾಣ ತ್ಯಾಗ ಮಾಡಿದ ವ್ಯಕ್ತಿ ರಂಜಾನ್ ಸಾಬ್ ಪಿಂಚಾರ್,ಅನ್ನ ಭಾಷಿಕರು ಆತನ ಮೇಲೆ ಅಸಿಡ್ ಎರಚಿ ಕೊಲೆ ಮಾಡುತ್ತಾರೆ.ಕನ್ನಡ ಏಕೀಕರಣಕ್ಕೆ ಹಾಕಿದ್ದ ಪೆಂಡಾಲ್ ಕಾಯುತಿದ್ದ ಆತನ ಮೇಲೆ ಅನ್ಯ ಭಾಷೆಯವರು ಪೆಂಡಾಲ್…

Read More

ತುಮಕೂರು ಶ್ರದ್ಧೆ ಏಕಾಗ್ರತೆ ಮತ್ತು ಸೇವೆ ಎಂಬ ಮೂರು ಅಂಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡವರು ಅದ್ವಿತೀಯ ಸಾಧನೆ ಮಾಡುವುದು ನಿಶ್ಚಿತ ಎಂದು ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ವಿವೇಕಾನಂದ ಯುವಕ ಸಂಘದ ಸಂಚಾಲಕ ಸುನಿಲ್ ಎಚ್ ಅರ್ ಅಭಿಪ್ರಾಯಪಟ್ಟರು. ತುಮಕೂರು ವಿವಿಯ ಸ್ವಾಮಿ ವಿವಕಾನಂದ ಅಧ್ಯಯನ ಪೀಠವು ವಿವಿ ಕಲಾ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಮಾಲೆಯ ದ್ವಿತೀಯ ಉಪನ್ಯಾಸ ಕಾರ್ಯಕ್ರಮದಲ್ಲಿ ಆಧುನಿಕ ಮನೋವಿಜ್ಞಾನದ ಬೆಳಕಿನಲ್ಲಿ ಸ್ವಾಮಿ ವಿವೇಕಾನಂದರ ಚಿಂತನೆಗಳು ವಿಷಯದ ಕುರಿತು ಮಾತನಾಡಿದ ಅವರು ನಮ್ಮಲ್ಲಿ ಸದೃಢ ವ್ಯಕ್ತಿತ್ವವಿದ್ದರೆ ನಿರ್ದಿಷ್ಟ ಗುರಿಯನ್ನು ತಲುಪುವುದು ಸಾಧ್ಯವೆಂದು ವಿವೇಕಾನಂದರು ಹೇಳುತ್ತಾರೆ ಎಂದು ತಿಳಿಸಿ ವಿಧ್ಯಾರ್ಥಿಗಳನ್ನು ಸ್ವಾಮಿ ವಿವೇಕಾಂದರ ಚಿಂತನೆಗಳು ಮತ್ತು ಆದರ್ಶಗಳನ್ನು ಬದುಕಿನಲ್ಲಿ ಅಳವಡಸಿಕೊಳ್ಳುವಂತೆ ಪ್ರೇರೇಪಿಸಿದರು. ಇಡೀ ಜಗತ್ತು ವಸಾಹತುಶಾಹಿ ಅಲೆಗೆ ಸಿಲುಕುತಿದ್ದ ಸಂದರ್ಭಲ್ಲಿ ಭಾತೃತ್ವವನ್ನು ಪರಿಚಯಿಸಿ ಪರಿಸರದ ಮಹಾನ್ ಚೇತನ ಭಾರತದ ಸಾಂಸ್ಕøತಿಕ ಪ್ರತಿನಿಧಿ ಸ್ವಾಮಿ ವಿವೇಕಾನಂದರು ಎಂದು ವಿವಿ ಯ ಕುಲಸಚಿವ ಪೆÇ್ರ.ನಿರ್ಮಲ್ ರಾಜು ತಿಳಿಸಿದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ವಿವಿಯ ಸ್ವಾಮಿ…

Read More

ತುಮಕೂರು ಬಿಜೆಪಿ ರಾಷ್ಟ್ರಭಕ್ತ ಸಮರ್ಪಣಾ ಮನೋಭಾವದ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು ಪ್ರಪಂಚದ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿದೆ. ಎಲ್ಲಾ ವರ್ಗ, ಸಮುದಾಯಗಳನ್ನು ಸಮಾಜದ ಸೇವೆಗೆ ಸರ್ಮಪಿಸಿಕೊಂಡಿರುವ ಕಾರ್ಯಕರ್ತರ ಆಧಾರಿತ ಪಕ್ಷವಾಗಿದೆ ಎಂದು ಬಿಜೆಪಿ ರಾಜ್ಯ ಎಸ್.ಟಿ. ಮೋರ್ಚಾದ ಪ್ರಧಾನ ಕಾರ್ಯದರ್ಶಿ ಹಾಗೂ ಬಿಬಿಎಂಪಿ ಮಾಜಿ ಸದಸ್ಯರಾದ ನರಸಿಂಹನಾಯಕ್ ತಿಳಿಸಿದರು. ಇವರು ಕೊರಟಗೆರೆಯ ಶ್ರೀಕ್ಷೇತ್ರ ಸಿದ್ದರಬೆಟ್ಟದ ಬಾಳೆಹೊನ್ನೂರು ಶಾಖಾ ಮಠದ ಸಭಾ ಭವನದಲ್ಲಿ ಬಿಜೆಪಿ ತುಮಕೂರು- ಮಧುಗಿರಿ ಸಂಘಟನಾತ್ಮಕ ಜಿಲ್ಲೆಗಳ ಎಸ್.ಟಿ.ಮೋರ್ಚಾದ ಪ್ರಮುಖ ಪದಾಧಿಕಾರಿಗಳು, ಪ್ರಮುಖರ ಎರಡು ದಿನಗಳ ಪ್ರಶಿಕ್ಷಣ ವರ್ಗದ ಉದ್ಘಾಟನೆ ಮಾಡಿ ಮಾತನಾಡುತ್ತಾ, 1951ರಲ್ಲಿ ಜನಸಂಘ, 1980ರಲ್ಲಿ ಬಿಜೆಪಿಯು ಆರಂಭಗೊಂಡು ಇಂದು ಪ್ರಪಂಚದಲ್ಲೇ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿದೆ. ದೇಶದ ಏಕತೆ, ಅಖಂಡತೆ, ಸಮಗ್ರತೆ, ಸಮಾಜದ ಕಟ್ಟ ಕಡೆಯ ವ್ಯಕ್ತಿಯ ವಿಕಾಸನ ಧ್ಯೇಯದಿಂದ ಕಾರ್ಯನಿರ್ವಹಿಸುತ್ತಿದ್ದು ದೇಶವನ್ನು ಪರಿವರ್ತನೆ ಮಾಡುವ ಹಾದಿಯಲ್ಲಿ ಸಾಗುತ್ತಿದೆ ಎಂದರು. ಕಾಂಗ್ರೆಸ್, ಇತರರಿಂದ ದೇಶ ಹಿನ್ನಡೆ ದೇಶ, ರಾಜ್ಯವನ್ನು 60 ವರ್ಷ ಆಳಿದ ಕಾಂಗ್ರೆಸ್ ಹಾಗೂ ಇತರ ಪಕ್ಷಗಳು…

Read More

ತುಮಕೂರು ಗ್ರಾಮಾಂತರ  ಹೆತ್ತೇನಹಳ್ಳಿ ಮಾರಮ್ಮನಿಗೆ ಮಾಜಿ ಶಾಸಕರಾದ ಸುರೇಶ್ ಗೌಡ ಅವರು ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರ ಆಶಯದಂತೆ ಮಂಗಳವಾರ ಬೆಳ್ಳಿ ಖಡ್ಗವನ್ನು ಸಮರ್ಪಿಸಿದರು. ಡಿಸೆಂಬರ್-7 ರಂದು ಭಾರತೀಯ ಜನತಾ ಪಕ್ಷದ ತುಮಕೂರು ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಕಛೇರಿ “ ಶಕ್ತಿ ಸೌಧ’’ ಉದ್ಘಾಟಿಸಲು ಆಗಮಿಸಿದ್ದ ನಾಡಿನ ಜನಪ್ರಿಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸುರೇಶ್ ಗೌಡರವರು ಬೆಳ್ಳಿ ಖಡ್ಗವನ್ನು ನೀಡಿದ್ದರು. ಮುಖ್ಯಮಂತ್ರಿಗಳು ಬೆಳ್ಳಿ ಖಡ್ಗವನ್ನು ಈ ಭಾಗದ ಶಕ್ತಿ ದೇವತೆಗೆ ಸಮರ್ಪಿಸುವಂತೆ ತಿಳಿಸಿದ್ದರು. ಈ ಹಿನ್ನೆಲೆ ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಮಾನ್ಯ ಮಾಜಿ ಶಾಸಕರಾದ ಸುರೇಶ್ ಗೌಡರವರು ಮಾರಮ್ಮ ದೇಗುಲಕ್ಕೆ ಬೆಳ್ಳಿಖಡ್ಗ ನೀಡಿದರು. ಮಾಜಿ ಶಾಸಕ ಸುರೇಶ್ ಗೌಡ ಅವರು ಮಾತನಾಡಿ, ಮಾನ್ಯ ಮುಖ್ಯಮಂತ್ರಿಗಳ ಆಶಯದಂತೆ ಬೆಳ್ಳಿ ಖಡ್ಗವನ್ನು ಶಕ್ತಿದೇವತೆಗೆ ಸಮರ್ಪಿಸಿ, ಪ್ರಾರ್ಥಿಸಲಾಗಿದೆ ಎಂದರು. ಉಪವಿಭಾಗಾಧಿಕಾರಿ ಅಜಯ್ ಕುಮಾರ್, ತಹಶೀಲ್ದಾರ್ ಸಿದ್ದೇಶ್ , ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಶಂಕರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಶಿವಕುಮಾರ್,ಉದ್ಯಮಿ…

Read More

ತುರುವೇಕೆರೆ ನಾವು ಪಿಂಚಣಿ ತೆಗೆದುಕೊಳ್ಳುತ್ತಿರುವುದು ಜನಸಾಮಾನ್ಯರ ತೆರಿಗೆ ಹಣದಿಂದ ಇದನ್ನು ನೆನಪಿನಲ್ಲಿಟ್ಟುಕೊಂಡು ನಾವು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂದು ಜಿಲ್ಲಾ ನಿವೃತ್ತ ನೌಕರ ಸಂಘದ ಅಧ್ಯಕ್ಷರಾದ ಬಾ.ಹಾ. ರಮಾಕುಮಾರಿ ಅಭಿಪ್ರಾಯ ಪಟ್ಟರು. ತಾಲ್ಲೂಕು ನಿವೃತ್ತ ನೌಕರರ ಸಂಘ ಪಟ್ಟಣದ ವಿರಕ್ತ ಮಠದಲ್ಲಿ ಹಮ್ಮಿಕೊಂಡಿದ್ದ ನಿವೃತ್ತ ನೌಕರರ ದಿನಾಚರಣೆ ಮತ್ತು 2021-22 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಇವತ್ತು ನಾವೆಲ್ಲಾ ಸಂಭ್ರಮಿಸುವ ದಿನವಾಗಿದೆ ನಾವೆಲ್ಲ ನಮ್ಮ ಕಷ್ಟ ಸುಖಗಳನ್ನೆಲ್ಲ ಬದಿಗೊತ್ತಿ ಒಂದೆಡೆ ಸೇರಿದ್ದೇವೆ ಇಲ್ಲಿ ನಾವು ನೋವು ನಲಿವುಗಳನ್ನು ಹಂಚಿಕೊಳ್ಳೋಣ ಇಂತಹ ಕಾರ್ಯಕ್ರಮಗಳಲ್ಲಿ ಬಾಗವಹಿಸುವರ ಸಂಖ್ಯ್ ಕಡಿಮೆಯಾಗಿದೆ ನಿವೃತ್ತರಾದವರೆಲ್ಲ ಸಂಘಕ್ಕೆ ಸದಸ್ಯರಾಗಿಲ್ಲ ಕೂಡಲೇ ಸದಸ್ಯತ್ವವನ್ನು ಪಡೆದುಕೊಂಡು ನಿಮ್ಮ ಸಮಸ್ಯೆ ಗಳು ಹಾಗೂ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆದುಕೊಳ್ಳಲು ನಿಮಗೆ ಅನುಕೂಲವಾಗುತ್ತದೆ ಪಿಂಚಣಿ ಗೋಸ್ಕರ ತೊಂದರೆಯಾದಾಗ ನ್ಯಾಯಾಲಯಕ್ಕೆ ಹೋಗಿ ಪರಿಹರಿಸಿಕೊಂಡಂತಹ ಉದಾಹರಣೆಗಳನ್ನು ಕಾಣಬಹುದಾಗಿದೆ. ತಾಲ್ಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಶಿವಯ್ಯ ನವರು ಮಾತನಾಡಿ ನಮಗೆ…

Read More

ತುಮಕೂರು ಜನರಲ್ಲಿ ವೈಜ್ಞಾನಿಕ ಮನೋಧರ್ಮ ಬೆಳೆಸುವುದು ಶಿಕ್ಷಣದ ಗುರಿಯಾಗಬೇಕು ಎಂದು ಸಾಹಿತಿ ನಾಡೋಜ ಬರಗೂರು ರಾಮಚಂದ್ರಪ್ಪ ಪ್ರತಿಪಾದಿಸಿದ್ದಾರೆ. ನಗರದ ಶ್ರೀಸಿದ್ದಾರ್ಥ ಮೆಡಿಕಲ್ ಕಾಲೇಜು ಆವರಣದಲ್ಲಿ ಕರ್ನಾಟಕ ರಾಜ್ಯವೈಜ್ಞಾನಿಕ ಸಂಶೋಧನಾ ಪರಿಷತ್ ಆಯೋಜಿಸಿದ್ದ ರಾಜ್ಯಮಟ್ಟದ 2ನೇ ವೈಜ್ಞಾನಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಅತಿ ಹೆಚ್ಚು ವಿದ್ಯಾವಂತರೇ ಮೂಢನಂಬಿಕೆಗಳನ್ನು ಪ್ರತಿಪಾದಿಸುತಿದ್ದು, ಹಾಗಾಗಿಯೇ ವಿದ್ಯಾವಂತರೆಲ್ಲಾ ವಿವೇಕವಂತರಲ್ಲ. ಅವಿದ್ಯಾವಂತರಲ್ಲ, ಅವಿವೇಕಿಗಳಲ್ಲ ಎಂಬ ಮಾತು ಪ್ರಚಲಿತದಲ್ಲಿದೆ ಎಂದರು. ವೈಜ್ಞಾನಿಕ ಮನೋಧರ್ಮವೆಂಬುದು ಮನುಷ್ಯನಲ್ಲಿ ಮಾನವೀಯತೆ, ಆಂತಃಕರಣ, ಸಮಾನತೆ, ಸಹಬಾಳ್ವೆಯನ್ನು ಪ್ರತಿನಿಧಿಸುತ್ತದೆ. ಅದು ಎಕಮುಖಿಯಲ್ಲ.ಅದಕ್ಕೆ ಬಹುಮುಖಿ ಆಯಾಮವಿದೆ.ಆಸ್ಥಿಕನಾಗಿದ್ದು,ನಾಸ್ಥಿಕನ ಅಭಿಪ್ರಾಯವನ್ನು ಗೌರವಿಸುವ, ನಾಸ್ಥಿಕನಾಗಿದ್ದು ಅಸ್ಥಿಕನ ಅಭಿಪ್ರಾಯವನ್ನು ಕೇಳುವ ಮನಸ್ಥಿತಿ ಬೆಳೆಸಿಕೊಳ್ಳಬೇಕು.ಇದನ್ನ ಬುದ್ದ,ಬಸವ,ಅಂಬೇಡ್ಕರ್, ಕುವೆಂಪು, ಗಾಂಧಿ,ಸ್ವಾಮಿ ವಿವೇಕಾನಂದ ಮಾಡಿ ತೋರಿಸಿದ್ದಾರೆ.ಆದರೆ ಇಂದು ಅಸಮಾನತೆ,ಅಮಾನಿಯತೆ, ಅವಾಸ್ತವ ಅಂಶಗಳೇ ಹೆಚ್ಚು ಪ್ರಜ್ವಲಿಸುತ್ತಿವೆ.ಸ್ವಾತಂತ್ರ ಆಲೋಚನೆಯನ್ನು ಜನರು ಮರೆತಿರುವಂತೆ ಕಂಡು ಬರುತ್ತಿದೆ.ಇವುಗಳ ಕುರಿತು ಪೂರ್ವಗ್ರಹ ರಹಿತ ಸಂವಾದ ಅಗತ್ಯವಿದೆ ಎಂದು ಡಾ.ಬರಗೂರು ರಾಮಚಂದ್ರಪ್ಪ ತಿಳಿಸಿದರು. ಇಂದು ದೇವರು, ಧರ್ಮದ ಹೆಸರಿನಲ್ಲಿ ಹೆಚ್ಚು ಜನರನ್ನು ಶೋಷಣೆಗೆ ಒಳಪಡಿಸಲಾಗುತ್ತಿದೆ.ಇಂದು ಮನುಷ್ಯನಿಗಿಂತ…

Read More

ತುಮಕೂರು ನ್ಯೂ ತುಮಕೂರು ಜಿಲ್ಲಾ ಚೆಸ್ ಸಂಸ್ಥೆಯು ರಾಜ್ಯಮಟ್ಟದ ಶಾಲಾ ಬಾಲಕ ಹಾಗೂ ಬಾಲಕಿಯರ ಚೆಸ್ ಪಂದ್ಯಾವಳಿಯನ್ನು ಜನವರಿ 1 ರಂದು ಬೆಳಿಗ್ಗೆ 9 ಗಂಟೆಗೆ ನಗರದ ಅಶೋಕ ರಸ್ತೆಯಲ್ಲಿರುವ ಎಂಪ್ರೆಸ್ ಸರ್ಕಾರಿ ಬಾಲಕಿಯರ ಶಾಲೆಯಲ್ಲಿ ಏರ್ಪಡಿಸಲಾಗಿದೆ. ಪಂದ್ಯಾವಳಿಯು 7, 9, 11, 13, 15 ಹಾಗೂ 17 ವರ್ಷದೊಳಗಿನ ಬಾಲಕ – ಬಾಲಕಿಯರ ಪ್ರತ್ಯೇಕ ವಿಭಾಗಗಳಲ್ಲಿ ಆಯೋಜಿಸಲಾಗಿದೆ ಎಂದು ಪಂದ್ಯಾವಳಿಯ ಆಯೋಜಕರು ಹಾಗೂ ಸಂಸ್ಥೆಯ ಅಧ್ಯಕ್ಷರಾದ ಟಿ.ಎನ್ ಮಧುಕರ್ ತಿಳಿಸಿದ್ದಾರೆ. ಮೊದಲ ಸ್ಥಾನ ಗಳಿಸಿದ ಎಲ್ಲಾ ವಿಭಾಗದ ಸ್ಪರ್ಧಿಗಳನ್ನು ತಮಿಳುನಾಡಿನ ಹೊಸೂರಿನಲ್ಲಿ ನಡೆಯಲಿರುವ ರಾಷ್ಟ್ರೀಯ ಶಾಲಾ ಚೆಸ್ ಪಂದ್ಯಾವಳಿಗೆ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ. ಪಂದ್ಯಾವಳಿಗೆ ನೋಂದಾಯಿಸಲು ಡಿ. 29 ಕಡೆಯ ದಿನವಾಗಿದ್ದು, ಮೊದಲ ಹತ್ತು ಸ್ಥಾನ ಪಡೆದ ಸ್ಪರ್ಧಿಗಳಿಗೆ ಆಕರ್ಷಕ ಟ್ರೋಫಿ, ಬಹುಮಾನವಿರುತ್ತದೆ.ಪಂದ್ಯಾವಳಿಯ ಸಮಗ್ರ ಮಾಹಿತಿಯು ವೆಬ್ ಸೈಟ್: ತಿತಿತಿ.ಞಚಿಡಿಚಿಟಿಚಿಣಚಿಞಚಿಛಿhess.ಛಿom ನಲ್ಲಿ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ: 9036464600 ಅಥವಾ 8050244338 ಸಂಪರ್ಕಿಸುವಂತೆ ಕೋರಲಾಗಿದೆ.

Read More

ತುಮಕೂರು ವರ್ಷದ 12 ಮಾಸಗಳಲ್ಲಿ ಧನುರ್ಮಾಸ ಅತ್ಯಂತ ಶ್ರೇಷ್ಠ ಮಾಸವಾಗಿದೆ, ನವಗ್ರಹಗಳಿಗೆ ಅಧಿಪತಿ ಸೂರ್ಯದೇವ, ಅಂತಹ ಸೂರ್ಯ ಗ್ರಹ ಧನಸ್ಸುರಾಶಿಗೆ ಬಂದಾಗ ಧನುರ್ಮಾಸ ಪ್ರಾರಂಭವಾಗುತ್ತದೆ, ಧನಸ್ಸು ರಾಶಿಗೆ ಗುರು ಅಧಿಪತಿ,ಇಂತಹ ಮಾಸದಲ್ಲಿ ಗುರುವಿನಿಂದ ಉಪದೇಶವನ್ನು ಪಡೆಯುವ ನೀವೆಲ್ಲರೂ ಧನ್ಯರು,ವೀರಶೈವರು ಇಷ್ಟಲಿಂಗ ಬಿಟ್ಟು ಬೇರೊಂದು ದೈವವಿಲ್ಲ ಎಂದು ತಿಳಿಯಬೇಕು,ಶಿವಯೋಗದ ಮುಖಾಂತರ ದೈವತ್ವವನ್ನು ಪಡೆಯಬೇಕು,ಶಿವ ವೀರಶೈವರಿಗೆ ಅಂಗೈಯಲ್ಲಿ ಇಷ್ಟಲಿಂಗವನ್ನು ದಯಪಾಲಿಸಿದ್ದಾನೆ ಇದೊಂದು ವೀರಶೈವರಿಗೆ ವರ,ಇಷ್ಟಲಿಂಗವನ್ನು ಪೂಜಿಸುವ ಮೂಲಕ ದೈವತ್ವವನ್ನು ಕಾಣಬಹುದು,ಇಷ್ಟಲಿಂಗ ಪೂಜೆಯೇ ಶ್ರೇಷ್ಠ,ಶಿವಪೂಜೆಯೇ ಕಡ್ಡಾಯವ್ರತ ಎಂದು ವೀರಶೈವರು ತಿಳಿಯಬೇಕು ಎಂದು ಉಜ್ಜಯಿನಿ 1008 ಜಗದ್ಗುರು ಶ್ರೀ ಸಿದ್ದಲಿಂಗರಾಜದೇಶಿಕೇಂದ್ರ ಶಿವಾಚಾರ್ಯ ಮಹಾ ಭಗವತ್ಪಾದರು ಹೇಳಿದರು. ಅವರು ತುಮಕೂರು ನಗರದ ಶೆಟ್ಟಿಹಳ್ಳಿ ಮುಖ್ಯರಸ್ತೆಯಲ್ಲಿರುವ ವಿಶಾಲಾಕ್ಷಮ್ಮ ಸದಾಶಿವಯ್ಯ ಸಭಾಭವನದಲ್ಲಿ ನಡೆಯುತ್ತಿರುವ ಧನುರ್ಮಾಸದ ಇಷ್ಟಲಿಂಗ ಮಹಾಪೂಜೆ ಮತ್ತು ಧರ್ಮ ಪರಂಪರೆ ರಕ್ಷಣೆಯ ಸಮಾರಂಭವನ್ನು ಉದ್ಘಾಟಿಸಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಉಪದೇಶಾಮೃತ ನೀಡಿದ ಯೆಡೆಯೂರು ಶ್ರೀ ರೇಣುಕ ಶಿವಾಚಾರ್ಯಸ್ವಾಮೀಜಿಗಳು ಈ ಶರೀರ ಪಂಚಭೂತಗಳಿಂದ ಬಂದಿದೆ ಹಾಗೆಯೇ ಪಂಚಪೀಠಾಚಾರ್ಯರು ಒಂದೊಂದು…

Read More