Author: News Desk Benkiyabale

 ತುಮಕೂರು:       ಜಿಲ್ಲೆಯ ತುಮಕೂರು ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಇಂದು ನಡೆದ ಎಸ್‍ಎಸ್‍ಎಲ್‍ಸಿ ತೃತೀಯ ಭಾಷೆ ಹಿಂದಿ ಪರೀಕ್ಷೆಗೆ ನೋಂದಣಿಯಾಗಿದ್ದ 33608 ವಿದ್ಯಾರ್ಥಿಗಳ ಪೈಕಿ 32922 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 695 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.       ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿಯೂ ಸಾಮಾಜಿಕ ಅಂತರ ಕಾಯ್ದುಕೊಂಡು ಪರೀಕ್ಷೆಯನ್ನು ಶಾಂತಿಯುತವಾಗಿ ಹಾಗೂ ವ್ಯವಸ್ಥಿತವಾಗಿ ನಡೆಸಲಾಗಿದೆ. ಇಂದು ನಡೆದ ಪರೀಕ್ಷೆಯಲ್ಲಿ 165 ವಿದ್ಯಾರ್ಥಿಗಳು ಕಂಟೈನ್‍ಮೆಂಟ್ ಪ್ರದೇಶದಿಂದ ಬಂದು ಪರೀಕ್ಷೆ ಬರೆದಿದ್ದು, 16 ವಿದ್ಯಾರ್ಥಿಗಳು ಅನಾರೋಗ್ಯ ಕಾರಣದಿಂದ ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆದಿದ್ದಾರೆ.         ಹಿಂದಿ ಭಾಷಾ ಪರೀಕ್ಷೆಗೆ ಖಾಸಗಿಯಾಗಿ ನೋಂದಣಿಯಾಗಿದ್ದ 585 ವಿದ್ಯಾರ್ಥಿಗಳ ಪೈಕಿ 448 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಉಳಿದಂತೆ 137 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ತುಮಕೂರು ಡಿಡಿಪಿಐ ಎಂ.ಆರ್. ಕಾಮಾಕ್ಷಿ ಹಾಗೂ ಮಧುಗಿರಿ ಡಿಡಿಪಿಐ ರೇವಣಸಿದ್ದಪ್ಪ ತಿಳಿಸಿದ್ದಾರೆ.

Read More

ತುಮಕೂರು:       ತುಮಕೂರು ನಗರ ಹಾಗೂ 15ನೇ ವಾರ್ಡ್‍ನ ಅಭಿವೃದ್ಧಿಗೆ ಶ್ರಮಿಸಿದ್ದ ಪಾಲಿಕೆ ಆಯುಕ್ತರು ಹಾಗೂ ಸ್ಮಾರ್ಟ್‍ಸಿಟಿ ಮುಖ್ಯಸ್ಥರಾಗಿದ್ದ ಭೂಬಾಲನ್ ಅವರು ಬಾಗಲಕೋಟೆ ಸಿಇಒ ಆಗಿ ವರ್ಗಾವಣೆಗೊಂಡಿರುವುದು ಬೇಸರದ ಸಂಗತಿ, ಇನ್ನು ಸ್ವಲ್ಪ ಕಾಲ ತುಮಕೂರಿನಲ್ಲಿ ಉಳಿದುಕೊಂಡಿದ್ದರೆ ತುಮಕೂರು ನಗರ ಸ್ಮಾರ್ಟ್ ಆಗುತ್ತಿತ್ತು ಎಂದು 15ನೇ ವಾರ್ಡ್ ಪಾಲಿಕೆ ಸದಸ್ಯ ಗಿರಿಜಾ ಧನಿಯಾಕುಮಾರ್ ತಿಳಿಸಿದ್ದಾರೆ.       ವರ್ಗಾವಣೆಗೊಂಡಿರುವ ಆಯುಕ್ತರಾದ ಭೂಬಾಲನ್ ಅವರನ್ನು ಅಭಿನಂದಿಸಿ ಮಾತನಾಡಿದ ಅವರು, 15ನೇ ವಾರ್ಡ್‍ನ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಿದ್ದ ಭೂಬಾಲನ್ ಅವರು, ಪಾರ್ಕ್ ಅಭಿವೃದ್ಧಿ ಹಾಗೂ 30 ವರ್ಷಗಳಿಂದ ಹದಗೆಟ್ಟಿದ್ದ ರೈಲ್ವೆಸ್ಟೇಷನ್ ರಸ್ತೆಯನ್ನು ಅಭಿವೃದ್ಧಿಪಡಿಸಲು ಸಹಕಾರ ನೀಡಿದ್ದರು, ರಾಯಗಾಲುವೆಯನ್ನು ತೆರವುಗೊಳಿಸಿ ಸ್ಲಾಬ್ ಹಾಕುವ ಕಾರ್ಯಕ್ಕೂ ಚಾಲನೆ ನೀಡಿದ್ದರು.       ಜನರಿಗಾಗಿ ಕೆಲಸ ಮಾಡುತ್ತಿದ್ದ ಭೂಬಾಲನ್ ಅವರು ಬಾಗಲಕೋಟೆ ಸಿಇಒ ಆಗಿ ವರ್ಗಾವಣೆಗೊಂಡಿದ್ದು, ಅವರಿಗೆ ಇನ್ನಷ್ಟು ಯಶಸ್ಸು ದೊರೆಯಲಿ ಎಂದು 15ನೇ ವಾರ್ಡ್‍ನ ಸಾರ್ವಜನಿಕರ ಪರವಾಗಿ ಹಾರೈಸಿದರು.

Read More

ತುಮಕೂರು:       ನಗರದ ಸಿರಾಗೇಟ್ ಸಮೀಪದ ಅರಳಿಮರದ ಪಾಳ್ಯದ ರಸ್ತೆ ಸಮೀಪದ ಮನೆಯೊಂದರ ಮುಂಭಾಗ ಚಿರತೆ ಪ್ರತ್ಯಕ್ಷವಾಗಿ ಈ ಭಾಗದಲ್ಲಿ ಜನರಲ್ಲಿ ತೀವ್ರ ಭಯ ಭೀತಿ ಮೂಡಿಸಿದ ಘಟನೆ ಮುಂಜಾನೆ ನಡೆದಿದೆ.       ನಗರದ ಅರಳೀಮರದ ರಸ್ತೆಯ ಸಮೀಪ ವಾಸವಾಗಿರುವ ಜಗದೀಶ್ ಎಂಬುವರು ನಂದಿನಿ ಬೂತ್ ನಡೆಸುತ್ತಿದ್ದು. ಇವರು ಎಂದಿನಂತೆ ಮುಂಜಾನೆ 4.30ಕ್ಕೆ ನಂದಿನಿ ಬೂತ್‍ಗೆ ತೆರಳಲು ಮನೆಯಿಂದ ಹೊರಗೆ ಬಂದಿದ್ದಾರೆ. ಮನೆಯ ಮುಂಭಾಗದಲ್ಲಿ ನಾಯಿ ಮಾದರಿಯಲ್ಲಿ ಚಿರತೆ ಮಲಗಿದೆ. ಇದನ್ನು ಗಮನಿಸದೆ ಮನೆಯ ಕಾಂಪೌಂಡ್ ಗೇಟ್‍ನಿಂದ ಹೊರಗೆ ಬಂದ ಜಗದೀಶ್ ಅವರನ್ನು ಕಂಡ ಚಿರತೆ ಘರ್ಜಿಸಿದೆ.       ಚಿರತೆಯ ಘರ್ಜನೆ ಕೇಳಿದ ಜಗದೀಶ್ ಭಯದಿಂದ ಮನೆಯ ಒಳಗೆ ಓಡಿ ಹೋಗಿದ್ದಾರೆ. ತಕ್ಷಣ ಮನೆಯವರೆಲ್ಲಾ ಗೇಟ್ ಒಳಭಾಗದಿಂದಲೇ ಚಿರತೆಯನ್ನು ನೋಡಿದ್ದಾರೆ.  ನಂತರ ಪೊಲೀಸರು ಮತ್ತು ಅರಣ್ಯ ಇಲಾಖೆಗೆ ಈ ಕುಟುಂಬದವರು ಮಾಹಿತಿ ನೀಡಿದ್ದಾರೆ.       ಸುದ್ದಿ ತಿಳಿದ ತಕ್ಷಣ ಪೊಲೀಸರು…

Read More

ತುಮಕೂರು:       ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸಿದ ಕ್ಷಣವನ್ನು ಯುವ ಕಾಂಗ್ರೆಸ್ ಕಾರ್ಯಕರ್ತರು ತುಮಕೂರು ನಗರದಲ್ಲಿ ಹಬ್ಬದಂತೆ ಆಚರಿಸಿದರು ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಆರ್.ರಾಜೇಂದ್ರ ಅವರ ಸಹಯೋಗದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ಶಶಿ ಹುಲಿಕುಂಟೆಮಠ್ ಮತ್ತು ರಾಜೇಶ್ ದೊಡ್ಮನೆ ಅವರು ನಗರದ ಕನ್ನಡ ಭವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಯುವಕರು ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ ಸಮಾರಂಭ ನೇರ ಪ್ರಸಾರದಲ್ಲಿ ವೀಕ್ಷಿಸಲು ಎಲ್‍ಇಡಿ ಸ್ಕ್ರೀನ್ ಆಯೋಜನೆ ಮಾಡಿದ್ದರು. ಸುಮಾರು 200ಕ್ಕೂ ಹೆಚ್ಚು ಯುವಕರು ಮತ್ತು ಸೇವಾದಳದ ಪದಾಧಿಕಾರಿಗಳು, ವಿವಿಧ ಘಟಕಗಳ ಪದಾಧಿಕಾರಿಗಳು ಸಾಮಾಜಿಕ ಅಂತರ ಕಾಯ್ದುಕೊಂಡು ವೀಕ್ಷಣೆ ಮಾಡಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಲಾಯಿತು.       ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷರಾದ ಶಶಿ ಹುಲಿಕುಂಟೆ ಮಠ್ ಮಾತನಾಡಿ, ಇಂದು ಡಿ.ಕೆ.ಶಿವಕುಮಾರ್ ಅವರ ಪ್ರತಿಜ್ಞಾ ದಿನ ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ…

Read More

ತುಮಕೂರು:       ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ 44 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 183ಕ್ಕೆ ಏರಿಕೆ ಆದಂತಾಗಿದೆ. ತಾಲ್ಲೂಕುವಾರು ಸೋಂಕಿತರ ವಿವರ : ತಿಪಟೂರು-5 ಚಿಕ್ಕನಾಯಕನಹಳ್ಳಿ-5  ತುರುವೇಕೆರೆ-1 ಗುಬ್ಬಿ-13 ಕೊರಟಗೆರೆ-17 ಕುಣಿಗಲ್-3       ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಇಂದು ಒಂದೇ ದಿನ 44 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಜಿಲ್ಲೆಯ  ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಗುಬ್ಬಿ, ಕೊರಟಗೆರೆ, ಕುಣಿಗಲ್ ತಾಲ್ಲೂಕುಗಳಲ್ಲಿ ಕೊರೊನಾ ರುದ್ರ ನರ್ತನ ಮಾಡುತ್ತಿದೆ.       ಲಾಕ್‍ಡೌನ್ ಸಡಿಲಿಕೆಯ ನಂತರ ಎಲ್ಲರೂ ಎಲ್ಲೆಂದರಲ್ಲಿ ಸುತ್ತಾಡುತ್ತಿದ್ದು, ಯಾರಿಗೆ ಯಾರಿಂದ ಸೋಂಕು ಹರಡುತ್ತಿದೆ ಎಂಬ ಅರಿವಿಲ್ಲ.       ಗ್ರಾಮೀಣ ಪ್ರದೇಶದ ಜನತೆಯನ್ನ ಬಿಟ್ಟು ಬಿಡದಂತೆ ಕಾಡುತ್ತಿರುವ ಕೊರೊನಾ ಸೋಂಕು ಯಾವುದೇ ರೀತಿಯಲ್ಲಿ ಯಾರಿಂದ ಯಾರಿಗೆ ಸುಳಿವು ನೀಡದೇ ಎಲ್ಲರಲ್ಲೂ ಆವರಿಸುತ್ತಿದೆ.

Read More

ತುಮಕೂರು :         ರಾಜ್ಯದಲ್ಲಿ ಕೋವಿಡ್-19 ಸಂಕಷ್ಟದಲ್ಲಿಯೂ ಕೂಡ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಆರಂಭವಾಗಿದ್ದು, ಈ ಬಾರಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುವ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಎಸ್.ಸುರೇಶ್‍ಕುಮಾರ್ ಅವರು ತಿಳಿಸಿದರು.       ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಯ ವಿವಿಧ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‍ಎಸ್‍ಎಲ್‍ಸಿ ಪರೀಕ್ಷೆಯ 5ನೇ ದಿನವಾದ ಇಂದು ಕನ್ನಡ ಭಾಷಾ ವಿಷಯವಿದ್ದು, ರಾಜ್ಯದಲ್ಲಿ ಈವರೆಗೆ ಶೇ.98ರಷ್ಟು ವಿದ್ಯಾರ್ಥಿಗಳ ಹಾಜರಾತಿ ಇದೆ. ಪರೀಕ್ಷೆ ಆರಂಭವಾದ ದಿನದಿಂದ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ನಗರಕ್ಕೆ ಭೇಟಿ ನೀಡಿದ್ದೇನೆ. ಇಂದು ತುಮಕೂರು ಜಿಲ್ಲೆಯ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ ಎಂದು ಅವರು ತಿಳಿಸಿದರು.       ಶಿಕ್ಷಣ ಇಲಾಖೆಯು ಯಾವುದೇ ಪರೀಕ್ಷಾ ಕೇಂದ್ರ, ಕೇವಲ ಪರೀಕ್ಷಾ ಕೇಂದ್ರವಾಗಿರಬಾರದು ಅದು ಮಕ್ಕಳ ಸುರಕ್ಷತಾ ಕೇಂದ್ರವಾಗಿರಬೇಕು.…

Read More

ಮಧುಗಿರಿ :       ತಾಲ್ಲೂಕಿನಲ್ಲಿ ಕರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಇಂದು ಕೂಡ ನಾಲ್ಕು ಕೋವಿಡ್ ಸೋಂಕಿತ ಪ್ರಕರಣಗಳು ದಾಖಲಾಗಿದ್ದು ನಾಲ್ಕು ತಿಂಗಳ ಮಗುವಿಗೂ ಕೂಡ ಕರೋನಾ ವೈರಸ್ ಸೋಂಕು ತಗಲಿದೆ.       ತಾಲ್ಲೂಕಿನ ಇಂದಿರಾ ಗ್ರಾಮದಲ್ಲಿದ್ದ ತಮಿಳುನಾಡಿನಿಂದ ಆಗಮಿಸಿದ್ದ ಕುಟುಂಬವನ್ನು ಕ್ವಾರಂಟೈನ್ ಮಾಡಲಾಗಿತ್ತು .ಈ ಕುಟುಂಬದ ನಾಲ್ಕು ತಿಂಗಳ ಮಗುವಿಗೆ ಸೋಂಕು ದೃಢಪಟ್ಟಿದೆ. ಕೆರೆಗಳಪಾಳ್ಯದ ಮೂವತ್ತಾರು ವರ್ಷ ವಯಸ್ಸಿನ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ .ಕಡಗತ್ತೂರು ಗ್ರಾಮದಲ್ಲಿ ಸೌದಿ ಅರೇಬಿಯದಿಂದ ಆಗಮಿಸಿದಂತ ವ್ಯಕ್ತಿಗೆ ಸೋಂಕು ಧೃಢವಾಗಿದ್ದು.‌ ಐ.ಡಿ.ಹಳ್ಳಿ ಹೋಬಳಿಯ ಗೂಲಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಕರೋನಾ ಸೋಂಕು ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ.ಇದರಲ್ಲಿ ಕೆರೆಗಳ ಪಾಳ್ಯ ವ್ಯಕ್ತಿಯ ಪ್ರವಾಸ ಮಾಹಿತಿ ತಿಳಿದುಬಂದಿರುವುದಿಲ್ಲ. ಉಳಿದ ಮೂರು ಪ್ರಕರಣಗಳ ಸೋಂಕಿತರನ್ನು ಕ್ವಾರಂಟೈನ್ ಮಾಡಲಾಗಿತ್ತು.

Read More

ಮಧುಗಿರಿ :       ಗ್ರಾ. ಪಂ ಕಚೇರಿಯನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಲು ಲಗೇಜ್ ಆಟೋದಲ್ಲಿ ಪೀಟೋಪಕರಣಗಳು ಮತ್ತು ಕಡತಗಳನ್ನು ತುಂಬಿಕೊಂಡು ಹೊರಡುವ ವೇಳೆ ಗ್ರಾಮಸ್ಥರು ತಡೆಯೊಡ್ಡಿದ ಪರಿಣಾಮ ಗ್ರಾಮದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿ ದಿನ ಪೂರ್ತಿ ಮಹಿಳೆಯರು ಮತ್ತು ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.        ಗ್ರಾಮದಲ್ಲಿರುವ ಗ್ರಾ.ಪಂ ಕಚೇರಿಯನ್ನು ಯಾವುದೇ ಕಾರಣಕ್ಕೂ ಸ್ಥಳಾಂತರಿಸಬಾರದು ಗ್ರಾಮದಲ್ಲೇ ಉಳಿಯಲಿ ಎಂದು ಪ್ರತಿಭಟನಾಕಾರರು ಶಾಸಕ ಎಂ.ವಿ.ವಿರಭದ್ರಯ್ಯನವರಿಗೆ ಮನವಿ ಮಾಡಿದರು. ಆಗ ಶಾಸಕರು ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರನ್ನು ಸಾರ್ವಜನಿಕ ಅಭಿಪ್ರಾಯಕ್ಕೆ ವಿರೋಧವಾಗಿ ಸ್ಥಳಾಂತರ ಮಾಡುವುದು ಬೇಡ ಎಂದು ಕಚೇರಿಯ ಮುಂಭಾಗ ಮನವರಿಕೆ ಮಾಡಿಕೊಟ್ಟರು. ಇದಕ್ಕೆ ಒಪ್ಪದ ಆಡಳಿತ ಮಂಡಳಿ ಸದಸ್ಯರು ಜುಲೈ 1 ಕ್ಕೆ ನಮ್ಮ ಅಧಿಕಾರವಧಿ ಕೊನೆಗೊಳ್ಳಲಿದ್ದು, ಕಚೇರಿ ಸ್ಥಳಾಂತರಿಸಿ ಇಲ್ಲಿ ಸಭೆ ನಡೆಸಬೇಕೆಂದು ಪಟ್ಟು ಹಿಡಿದಾಗ ಶಾಸಕರು ಕಚೇರಿಯ ಉದ್ಘಾಟನೆಯಾಗಿದ್ದು, ಸೂಕ್ತ ಸಮಯದಲ್ಲಿ ಕಚೇರಿ ಸ್ಥಳಾಂತರವಾಗುತ್ತದೆ ಎಂದು ಹೇಳಿದರೂ ಸಹ ಆಡಳಿತ ಮಂಡಳಿಯವರು…

Read More

ತುಮಕೂರು:       ತುಮಕೂರು(ದ) ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಇಂದು ನಡೆದ ಎಸ್‍ಎಸ್‍ಎಲ್‍ಸಿ ವಿಜ್ಞಾನ ವಿಷಯ ಪರೀಕ್ಷೆಗೆ ನೋಂದಣಿಯಾಗಿರುವ 33781 ವಿದ್ಯಾರ್ಥಿಗಳ ಪೈಕಿ 33130 ವಿದ್ಯಾರ್ಥಿಗಳು ಹಾಜರಾಗಿದ್ದು, 651 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ. ತುಮಕೂರು(ದ):       ವಿಜ್ಞಾನ ವಿಷಯ ಪರೀಕ್ಷೆಗೆ ವಿದ್ಯಾರ್ಥಿಗಳು ನೋಂದಣಿಯಾಗಿರುವ 20976 ವಿದ್ಯಾರ್ಥಿಗಳ ಪೈಕಿ 20792 ವಿದ್ಯಾರ್ಥಿಗಳು ಹಾಜರಾಗಿದ್ದು, ಈ ಪೈಕಿ 184 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಮಧುಗಿರಿ:       ವಿಜ್ಞಾನ ವಿಷಯ ಪರೀಕ್ಷೆಗೆ ವಿದ್ಯಾರ್ಥಿಗಳು ನೋಂದಣಿಯಾಗಿರುವ 12805 ವಿದ್ಯಾರ್ಥಿಗಳ ಪೈಕಿ 12338 ವಿದ್ಯಾರ್ಥಿಗಳು ಹಾಜರಾಗಿದ್ದು, 467 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. 8 ವಿದ್ಯಾರ್ಥಿಗಳು ನೆರೆ ರಾಜ್ಯಗಳಿಂದ, 21 ವಿದ್ಯಾರ್ಥಿಗಳು ಕಂಟೈನ್ಮೆಂಟ್ ಪ್ರದೇಶಗಳಿಂದ, ಅನಾರೋಗ್ಯದಿಂದ ವಿಶೇಷ ಕೊಠಡಿಯಲ್ಲಿ ಒಬ್ಬ ವಿದ್ಯಾರ್ಥಿ ಪರೀಕ್ಷೆ ಬರೆದಿದ್ದಾರೆ. ಮೊದಲ ಬಾರಿಗೆ 12280 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.       ಮೊದಲ ಬಾರಿಗೆ ಪರೀಕ್ಷೆಗೆ ಹಾಜರಾದ…

Read More

ಗುಬ್ಬಿ:        ತಾಲ್ಲೂಕಿನ ಕಸಬ ಹೋಬಳಿ ಜವರೇಗೌಡನಪಾಳ್ಯ ಗ್ರಾಮದಲ್ಲಿನ ಕಚ್ಚಾ ರಸ್ತೆ ಮಳೆ ಬಂದು ಸಂಪೂರ್ಣ ಓಡಾಟಕ್ಕೂ ಯೋಗ್ಯವಲ್ಲದಂತಾಗಿ ಗ್ರಾಮವೇ ಸೀಲ್‍ಡೌನ್ ಆಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.       ಇಡೀ ಗ್ರಾಮದಲ್ಲಿ ಎಲ್ಲರ ಮನೆಯ ಸಂಪರ್ಕಿಸುವ 600 ಮೀಟರ್ ಮುಖ್ಯರಸ್ತೆ ಸೇರಿದಂತೆ ನಾಲ್ಕು ಗಲ್ಲಿ ರಸ್ತೆಗಳು ಸಂಪೂರ್ಣ ಕಚ್ಚಾ ರಸ್ತೆಯಾಗಿದೆ. 12 ಅಡಿಗಳ ಈ ರಸ್ತೆ ಮಣ್ಣಿನಿಂದ ಕೂಡಿ ಚರಂಡಿ ವ್ಯವಸ್ಥೆ ಇಲ್ಲವಾಗಿದೆ. ಮಳೆ ಬಂದರೆ ಯಾರೊಬ್ಬರು ಓಡಾಡಲು ಆಗದ ದುಸ್ಥಿತಿಯಲ್ಲಿದೆ. ಕಳೆದ 20 ವರ್ಷದಿಂದ ಇದೇ ಅವ್ಯವಸ್ಥೆ ಅನುಭವಿಸಿರುವ ಗ್ರಾಮಸ್ಥರು ಈಗಾಗಲೇ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ನರಸಿಂಹಮೂರ್ತಿ ಆರೋಪಿಸಿದ್ದಾರೆ.       ರೈತರು ಸಾಕಿರುವ ರಾಸುಗಳು ಸಹ ಈ ರಸ್ತೆಗೆ ಹೆಜ್ಜೆ ಇಡಲು ಹಿಂಜರಿಯುತ್ತಿವೆ. ಗುಂಡಿ ಬಿದ್ದ ಸಂದರ್ಭದಲ್ಲಿ ಸ್ಥಳೀಯರೇ ಮಣ್ಣು ತುಂಬಿಸಿಕೊಂಡು ರಸ್ತೆ ಸರಿಪಡಿಸಿಕೊಳ್ಳುತ್ತಿದ್ದಾರೆ. ಮಣ್ಣಿನಿಂದ ಕೂಡಿದ ರಸ್ತೆ ಮಳೆಗಾಲದಲ್ಲಿ ಯಾವ ಗದ್ದೆ ಬಯಲಿಗೂ ಸಮವಿಲ್ಲ…

Read More