Author: News Desk Benkiyabale

ತುಮಕೂರು:      ಪ್ರಯೋಗಾಲಯಕ್ಕೆ ಕಳುಹಿಸಿದ್ದ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಡೆಕೆರೆಯ ಗೊಲ್ಲರಹಟ್ಟಿಯ ಮೇಕೆಗಳ ವರದಿಗಳು ನೆಗೆಟಿವ್ ಬಂದಿದ್ದು, ಕುರಿಗಾಹಿಗಳು ಹಾಗೂ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲವೆಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ: ಕೆ.ಜಿ. ನಂದೀಶ್ ಅವರು ತಿಳಿಸಿದ್ದಾರೆ.       ಕುರಿಗಾಹಿಯೊಬ್ಬನಿಗೆ ಕೊರೋನಾ ಸೋಂಕು ಧೃಡಪಟ್ಟಿರುವುದರಿಂದ ಅಕ್ಕ-ಪಕ್ಕದ ಗ್ರಾಮಸ್ಥರಲ್ಲಿ ಆತಂಕವಾಗಿದ್ದು, ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ಕುರಿಗಾಹಿಗೆ ಸೇರಿದ್ದ 40 ರಿಂದ 45 ಮೇಕೆಗಳಲ್ಲಿ ಹಾಗೂ ಪಕ್ಕದ ರೈತರ ಮೇಕೆಗಳ ಪೈಕಿ 10 ಹೆಚ್ಚು ಮೇಕೆಗಳ ಗಂಟಲು ದ್ರವವನ್ನು ಸಂಗ್ರಹಿಸಿ, ಬೆಂಗಳೂರಿನ I H B ಗೆ 5 ಮಾದರಿ ಹಾಗೂ ಭೂಪಾಲ್ ಲ್ಯಾಬ್‍ಗೆ 5 ಮಾದರಿ ಕಳುಹಿಸಿಕೊಡಲಾಗಿತ್ತು. ಬೆಂಗಳೂರಿನ ಲ್ಯಾಬ್‍ನಿಂದ ವರದಿ ನೆಗೆಟಿವ್ ಎಂದು ಬಂದಿದೆ.       ಪ್ರಪಂಚದಲ್ಲಿ ಇಲ್ಲಿಯವರೆಗೂ ಕೂಡ ಕುರಿ ಮತ್ತು ಮೇಕೆಗಳಿಗೆ ಕೋವಿಡ್-19 ರೋಗ ಕಂಡು ಬಂದಿರುವುದಿಲ್ಲ. ಜಿಲ್ಲೆಯ ರೈತರು ಹಾಗೂ ಸಾರ್ವಜನಿಕರು ಯಾವುದೇ…

Read More

ಪಾವಗಡ:      ಪಾವಗಡ ತಾಲ್ಲೂಕು ಕಸಬಾ ಹೋಬಳಿ ಬ್ಯಾಡನೂರು ಗ್ರಾಮದ ಶ್ರೀ ಶಂಕರಲಿಂಗಕೆರೆಯನ್ನು ಬಹಿರಂಗ ಹರಾಜು ಹಾಕದೇ ಮೀನುಗಾರಿಕಾ ಇಲಾಖೆ ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಅವ್ಯವಹಾರ ಎಸಗಿದ್ದಾರೆ ಎಂದು ಅರೋಪಿಸಿ ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ಸಂಘದ ವತಿಯಿಂದ ಶುಕ್ರವಾರ ಪಟ್ಟಣದ ಮೀನುಗಾರಿಕಾ ಇಲಾಖೆಗೆ ಮುತ್ತಿಗೆ ಹಾಕಿ ಅಕ್ರೋಶ ವ್ಯಕ್ತಪಡಿಸಿದ ಘಟನೆ ಜರುಗಿದೆ.        ಮುತ್ತಿಗೆಯ ನೇತೃತ್ವವನ್ನು ವಹಿಸಿದ್ದ ತಾಲ್ಲೂಕು ರೈತ ಮತ್ತು ಹಸಿರುಸೇನೆ ಸಂಘದ ಅಧ್ಯಕ್ಷ ಪೂಜಾರಪ್ಪ ಮಾತನಾಡಿ, ಬ್ಯಾಡನೂರು ಗ್ರಾಮದ ಶ್ರೀಶಂಕರಲಿಂಗನ ಕೆರೆಯನ್ನು 2014-15 ನೇ ಸಾಲಿನಲ್ಲಿ ಸಂಚಪ್ಪ ಎನ್ನುವರಿಗೆ ಮೀನು ಸಾಕಿ ಮಾರಾಟ ಮಾಡಲು ಟೆಂಡರ್ ನೀಡಿ ಇಲ್ಲಿಗೆ ಐದು ವರ್ಷವಾಗಿತ್ತು, 2019- ರಿಂದ 2020 ರವರೆಗೂ ಪುನಃ ಅವರಿಗೆ ರೀನಿವಲ್ ನೀಡಲಾಗಿತ್ತು. ಅದರೆ ಹೀಗ 2020-21 ನೇ ಸಾಲಿಗೆ ಮತ್ತೆ ಸಂಚಪ್ಪನಿಗೆ ರಿನೆವಲ್ ಮಾಡಲಾಗಿದೆ. ಕರೋನಾ ಲಾಕ್ ಡೌನ್ ಹಿನ್ನಲೆಯಲ್ಲೂ ಸಂಚಪ್ಪ ಕೆ.ಜಿ ಮೀನು 300 ರೂಗಳಿಗೆ ಮಾರಾಟ ಮಾಡಿದ್ದಾರೆ ತಕ್ಷಣ…

Read More

ತುಮಕೂರು:       ತುಮಕೂರು ಜಿಲ್ಲೆಯಲ್ಲಿ 3.7.2020ರ ಸಂಜೆಯ ವರದಿಯ ಪ್ರಕಾರ ಶುಕ್ರವಾರ ಒಂದೇ ದಿನ 25 ಪ್ರಕರಣಗಳು ಕೋವಿಡ್ – 19 ಸೋಂಕಿನಿಂದ ದೃಢಪಟ್ಟಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದು, ಕೋವಿಡ್-19 ಸೋಂಕು ಆರಂಭವಾದ ದಿನದಿಂದ ಇಂದಿನವರೆಗೆ 208 ಪ್ರಕರಣಗಳು ಪತ್ತೆಯಾಗಿದ್ದು, ಅವುಗಳ ಪೈಕಿ ಐಸಿಯುನಲ್ಲಿ 4 ಪ್ರಕರಣಗಳು ದಾಖಲಾಗಿದ್ದು, 141 ಪ್ರಕರಣಗಳು ಸಕ್ರಿಯ ಪ್ರಕರಣಗಳಾಗಿ ಚಿಕಿತ್ಸಾ ಹಂತದಲ್ಲಿವೆ.        ಆಸ್ಪತ್ರೆಯಿಂದ 60 ಪ್ರಕರಣಗಳು ಬಿಡುಗಡೆ ಹೊಂದಿದು ಶುಕ್ರವಾರದಂದು 11 ಪ್ರಕರಣಗಳು ಗುಣಮುಖರಾಗಿ ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಹೊಂದಿರುತ್ತಾರೆ. ಇದುವರೆವಿಗೂ 7 ಜನ ಕೋವಿಡ್ ಸೋಂಕಿತ ವ್ಯಕ್ತಿಗಳು ಮೃತಪಟ್ಟಿದ್ದಾರೆ. ಇದುವರೆಗೂ ಒಟ್ಟು 19540 ಕಫದ ಮಾದರಿಯನ್ನು ಪರೀಕ್ಷಿಸಿದ್ದು, 15756 ಮಾದರಿಗಳು ನೆಗಿಟೀವ್ ಬಂದಿರುತ್ತವೆ. 1395 ಜನರನ್ನು ನಿಗಾವಣೆಯಲ್ಲಿ ಇರಿಸಲಾಗಿದೆ. 208 ಪ್ರಕರಣಗಳು ಕೋವಿಡ್-19 ಸೋಂಕಿ ತರೆಂದು ವರದಿ ದೃಢಪಟ್ಟಿದೆ.       ಶುಕ್ರವಾರ ಪಾಸಿಟೀವ್ ವರದಿ ಬಂದಿದೆ ಎಂದು ಅಧಿಕೃತವಾಗಿ ದೃಢಪಡಿಸಿರುವ ಆರೋಗ್ಯ ಇಲಾಖೆಯ ಪಟ್ಟಿಯಲ್ಲಿ ಕೊರಟಗೆರೆ-3,…

Read More

ಕೊರಟಗೆರೆ:       ಕೊರೊನಾ ಮುಕ್ತವಾಗಿದ್ದ ಕೊರಟಗೆರೆ ಕ್ಷೇತ್ರದ ತಾಪಂ ಕಚೇರಿಯ ಸಿಬ್ಬಂದಿ ಸೇರಿ ಒಟ್ಟು 19 ಜನರಿಗೆ ಕೊರೊನಾ ಸೊಂಕು ಪ್ರಕರಣ ದೃಢಪಟ್ಟಿರುವ ಹಿನ್ನಲೆ ಗುರುವಾರ ಕೊರಟಗೆರೆಗೆ ಕರಾಳ ದಿನವಾಗಿದೆ. ಸೋಂಕಿತರ ಪ್ರಥಮ ಮತ್ತು ದ್ವಿತೀಯ ಸಂಪರ್ಕದ ಜನರ ತನಿಖೆಗೆ ಆರೋಗ್ಯ ಮತ್ತು ಪೊಲೀಸ್ ಇಲಾಖೆಯಲ್ಲಿ ಜಂಟಿಯಾಗಿ ಕಾರ್ಯಚರಣೆ ನಡೆಸುತ್ತಿದೆ.       ಕೊರಟಗೆರೆ ಪಟ್ಟಣದ ತಾಪಂ ಕಚೇರಿಯ 39 ವರ್ಷದ ಸಿಬ್ಬಂದಿ, ಪಾತಗಾನಹಳ್ಳಿಯ 26 ವರ್ಷದ ಯುವಕ, ಎಲರಾಂಪುರದ 26ವರ್ಷದ ಮಹಿಳೆ, ಟಿ.ಗೊಲ್ಲಹಳ್ಳಿಯ 61ವರ್ಷದ ವೃದ್ಧ, ಕರೆಕಲ್ಲಹಟ್ಟಿ ತಾಂಡದ 32 ವರ್ಷದ ಮಹಿಳೆ, ಎನ್.ಜಿ.ಹಳ್ಳಿಯ 48ವರ್ಷದ ಪುರುಷ, ಗಟ್ಲಹಳ್ಳಿಯ 52ವರ್ಷದ ಪುರುಷ, ಕುರುಬರಪಾಳ್ಯದ 38ವರ್ಷದ ಪುರುಷ, ಎಂ.ಜಿ.ಗುಣಿಯ 33ವರ್ಷದ ಪುರುಷನಿಗೆ ಕೊರೊನಾ ಸೊಂಕು ದೃಡಪಟ್ಟಿದೆ.       ಜಂಪೇನಹಳ್ಳಿಯ 39ವರ್ಷದ ಪುರುಷ, ಎತ್ತಗಾನಹಳ್ಳಿಯ 78ವರ್ಷದ ವೃದ್ಧೆ, ಅಜ್ಜಿಹಳ್ಳಿ 23 ವರ್ಷದ ಯುವಕ, ಎಲೆರಾಂಪುರದ 10ವರ್ಷದ ಮಗು, ವೆಂಕಣ್ಣನಹಳ್ಳಿಯ 48ವರ್ಷದ ಪುರುಷ, ಮೀಣಸಂದ್ರದ 18ವರ್ಷದ ಯುವಕ,…

Read More

 ತುಮಕೂರು:       ಜಿಲ್ಲೆಯ ತುಮಕೂರು ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಇಂದು ನಡೆದ ಎಸ್‍ಎಸ್‍ಎಲ್‍ಸಿ ತೃತೀಯ ಭಾಷೆ ಹಿಂದಿ ಪರೀಕ್ಷೆಗೆ ನೋಂದಣಿಯಾಗಿದ್ದ 33608 ವಿದ್ಯಾರ್ಥಿಗಳ ಪೈಕಿ 32922 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 695 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.       ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿಯೂ ಸಾಮಾಜಿಕ ಅಂತರ ಕಾಯ್ದುಕೊಂಡು ಪರೀಕ್ಷೆಯನ್ನು ಶಾಂತಿಯುತವಾಗಿ ಹಾಗೂ ವ್ಯವಸ್ಥಿತವಾಗಿ ನಡೆಸಲಾಗಿದೆ. ಇಂದು ನಡೆದ ಪರೀಕ್ಷೆಯಲ್ಲಿ 165 ವಿದ್ಯಾರ್ಥಿಗಳು ಕಂಟೈನ್‍ಮೆಂಟ್ ಪ್ರದೇಶದಿಂದ ಬಂದು ಪರೀಕ್ಷೆ ಬರೆದಿದ್ದು, 16 ವಿದ್ಯಾರ್ಥಿಗಳು ಅನಾರೋಗ್ಯ ಕಾರಣದಿಂದ ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆದಿದ್ದಾರೆ.         ಹಿಂದಿ ಭಾಷಾ ಪರೀಕ್ಷೆಗೆ ಖಾಸಗಿಯಾಗಿ ನೋಂದಣಿಯಾಗಿದ್ದ 585 ವಿದ್ಯಾರ್ಥಿಗಳ ಪೈಕಿ 448 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಉಳಿದಂತೆ 137 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ತುಮಕೂರು ಡಿಡಿಪಿಐ ಎಂ.ಆರ್. ಕಾಮಾಕ್ಷಿ ಹಾಗೂ ಮಧುಗಿರಿ ಡಿಡಿಪಿಐ ರೇವಣಸಿದ್ದಪ್ಪ ತಿಳಿಸಿದ್ದಾರೆ.

Read More

ತುಮಕೂರು:       ತುಮಕೂರು ನಗರ ಹಾಗೂ 15ನೇ ವಾರ್ಡ್‍ನ ಅಭಿವೃದ್ಧಿಗೆ ಶ್ರಮಿಸಿದ್ದ ಪಾಲಿಕೆ ಆಯುಕ್ತರು ಹಾಗೂ ಸ್ಮಾರ್ಟ್‍ಸಿಟಿ ಮುಖ್ಯಸ್ಥರಾಗಿದ್ದ ಭೂಬಾಲನ್ ಅವರು ಬಾಗಲಕೋಟೆ ಸಿಇಒ ಆಗಿ ವರ್ಗಾವಣೆಗೊಂಡಿರುವುದು ಬೇಸರದ ಸಂಗತಿ, ಇನ್ನು ಸ್ವಲ್ಪ ಕಾಲ ತುಮಕೂರಿನಲ್ಲಿ ಉಳಿದುಕೊಂಡಿದ್ದರೆ ತುಮಕೂರು ನಗರ ಸ್ಮಾರ್ಟ್ ಆಗುತ್ತಿತ್ತು ಎಂದು 15ನೇ ವಾರ್ಡ್ ಪಾಲಿಕೆ ಸದಸ್ಯ ಗಿರಿಜಾ ಧನಿಯಾಕುಮಾರ್ ತಿಳಿಸಿದ್ದಾರೆ.       ವರ್ಗಾವಣೆಗೊಂಡಿರುವ ಆಯುಕ್ತರಾದ ಭೂಬಾಲನ್ ಅವರನ್ನು ಅಭಿನಂದಿಸಿ ಮಾತನಾಡಿದ ಅವರು, 15ನೇ ವಾರ್ಡ್‍ನ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಿದ್ದ ಭೂಬಾಲನ್ ಅವರು, ಪಾರ್ಕ್ ಅಭಿವೃದ್ಧಿ ಹಾಗೂ 30 ವರ್ಷಗಳಿಂದ ಹದಗೆಟ್ಟಿದ್ದ ರೈಲ್ವೆಸ್ಟೇಷನ್ ರಸ್ತೆಯನ್ನು ಅಭಿವೃದ್ಧಿಪಡಿಸಲು ಸಹಕಾರ ನೀಡಿದ್ದರು, ರಾಯಗಾಲುವೆಯನ್ನು ತೆರವುಗೊಳಿಸಿ ಸ್ಲಾಬ್ ಹಾಕುವ ಕಾರ್ಯಕ್ಕೂ ಚಾಲನೆ ನೀಡಿದ್ದರು.       ಜನರಿಗಾಗಿ ಕೆಲಸ ಮಾಡುತ್ತಿದ್ದ ಭೂಬಾಲನ್ ಅವರು ಬಾಗಲಕೋಟೆ ಸಿಇಒ ಆಗಿ ವರ್ಗಾವಣೆಗೊಂಡಿದ್ದು, ಅವರಿಗೆ ಇನ್ನಷ್ಟು ಯಶಸ್ಸು ದೊರೆಯಲಿ ಎಂದು 15ನೇ ವಾರ್ಡ್‍ನ ಸಾರ್ವಜನಿಕರ ಪರವಾಗಿ ಹಾರೈಸಿದರು.

Read More

ತುಮಕೂರು:       ನಗರದ ಸಿರಾಗೇಟ್ ಸಮೀಪದ ಅರಳಿಮರದ ಪಾಳ್ಯದ ರಸ್ತೆ ಸಮೀಪದ ಮನೆಯೊಂದರ ಮುಂಭಾಗ ಚಿರತೆ ಪ್ರತ್ಯಕ್ಷವಾಗಿ ಈ ಭಾಗದಲ್ಲಿ ಜನರಲ್ಲಿ ತೀವ್ರ ಭಯ ಭೀತಿ ಮೂಡಿಸಿದ ಘಟನೆ ಮುಂಜಾನೆ ನಡೆದಿದೆ.       ನಗರದ ಅರಳೀಮರದ ರಸ್ತೆಯ ಸಮೀಪ ವಾಸವಾಗಿರುವ ಜಗದೀಶ್ ಎಂಬುವರು ನಂದಿನಿ ಬೂತ್ ನಡೆಸುತ್ತಿದ್ದು. ಇವರು ಎಂದಿನಂತೆ ಮುಂಜಾನೆ 4.30ಕ್ಕೆ ನಂದಿನಿ ಬೂತ್‍ಗೆ ತೆರಳಲು ಮನೆಯಿಂದ ಹೊರಗೆ ಬಂದಿದ್ದಾರೆ. ಮನೆಯ ಮುಂಭಾಗದಲ್ಲಿ ನಾಯಿ ಮಾದರಿಯಲ್ಲಿ ಚಿರತೆ ಮಲಗಿದೆ. ಇದನ್ನು ಗಮನಿಸದೆ ಮನೆಯ ಕಾಂಪೌಂಡ್ ಗೇಟ್‍ನಿಂದ ಹೊರಗೆ ಬಂದ ಜಗದೀಶ್ ಅವರನ್ನು ಕಂಡ ಚಿರತೆ ಘರ್ಜಿಸಿದೆ.       ಚಿರತೆಯ ಘರ್ಜನೆ ಕೇಳಿದ ಜಗದೀಶ್ ಭಯದಿಂದ ಮನೆಯ ಒಳಗೆ ಓಡಿ ಹೋಗಿದ್ದಾರೆ. ತಕ್ಷಣ ಮನೆಯವರೆಲ್ಲಾ ಗೇಟ್ ಒಳಭಾಗದಿಂದಲೇ ಚಿರತೆಯನ್ನು ನೋಡಿದ್ದಾರೆ.  ನಂತರ ಪೊಲೀಸರು ಮತ್ತು ಅರಣ್ಯ ಇಲಾಖೆಗೆ ಈ ಕುಟುಂಬದವರು ಮಾಹಿತಿ ನೀಡಿದ್ದಾರೆ.       ಸುದ್ದಿ ತಿಳಿದ ತಕ್ಷಣ ಪೊಲೀಸರು…

Read More

ತುಮಕೂರು:       ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸಿದ ಕ್ಷಣವನ್ನು ಯುವ ಕಾಂಗ್ರೆಸ್ ಕಾರ್ಯಕರ್ತರು ತುಮಕೂರು ನಗರದಲ್ಲಿ ಹಬ್ಬದಂತೆ ಆಚರಿಸಿದರು ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಆರ್.ರಾಜೇಂದ್ರ ಅವರ ಸಹಯೋಗದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ಶಶಿ ಹುಲಿಕುಂಟೆಮಠ್ ಮತ್ತು ರಾಜೇಶ್ ದೊಡ್ಮನೆ ಅವರು ನಗರದ ಕನ್ನಡ ಭವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಯುವಕರು ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ ಸಮಾರಂಭ ನೇರ ಪ್ರಸಾರದಲ್ಲಿ ವೀಕ್ಷಿಸಲು ಎಲ್‍ಇಡಿ ಸ್ಕ್ರೀನ್ ಆಯೋಜನೆ ಮಾಡಿದ್ದರು. ಸುಮಾರು 200ಕ್ಕೂ ಹೆಚ್ಚು ಯುವಕರು ಮತ್ತು ಸೇವಾದಳದ ಪದಾಧಿಕಾರಿಗಳು, ವಿವಿಧ ಘಟಕಗಳ ಪದಾಧಿಕಾರಿಗಳು ಸಾಮಾಜಿಕ ಅಂತರ ಕಾಯ್ದುಕೊಂಡು ವೀಕ್ಷಣೆ ಮಾಡಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಲಾಯಿತು.       ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷರಾದ ಶಶಿ ಹುಲಿಕುಂಟೆ ಮಠ್ ಮಾತನಾಡಿ, ಇಂದು ಡಿ.ಕೆ.ಶಿವಕುಮಾರ್ ಅವರ ಪ್ರತಿಜ್ಞಾ ದಿನ ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ…

Read More

ತುಮಕೂರು:       ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ 44 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 183ಕ್ಕೆ ಏರಿಕೆ ಆದಂತಾಗಿದೆ. ತಾಲ್ಲೂಕುವಾರು ಸೋಂಕಿತರ ವಿವರ : ತಿಪಟೂರು-5 ಚಿಕ್ಕನಾಯಕನಹಳ್ಳಿ-5  ತುರುವೇಕೆರೆ-1 ಗುಬ್ಬಿ-13 ಕೊರಟಗೆರೆ-17 ಕುಣಿಗಲ್-3       ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಇಂದು ಒಂದೇ ದಿನ 44 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಜಿಲ್ಲೆಯ  ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಗುಬ್ಬಿ, ಕೊರಟಗೆರೆ, ಕುಣಿಗಲ್ ತಾಲ್ಲೂಕುಗಳಲ್ಲಿ ಕೊರೊನಾ ರುದ್ರ ನರ್ತನ ಮಾಡುತ್ತಿದೆ.       ಲಾಕ್‍ಡೌನ್ ಸಡಿಲಿಕೆಯ ನಂತರ ಎಲ್ಲರೂ ಎಲ್ಲೆಂದರಲ್ಲಿ ಸುತ್ತಾಡುತ್ತಿದ್ದು, ಯಾರಿಗೆ ಯಾರಿಂದ ಸೋಂಕು ಹರಡುತ್ತಿದೆ ಎಂಬ ಅರಿವಿಲ್ಲ.       ಗ್ರಾಮೀಣ ಪ್ರದೇಶದ ಜನತೆಯನ್ನ ಬಿಟ್ಟು ಬಿಡದಂತೆ ಕಾಡುತ್ತಿರುವ ಕೊರೊನಾ ಸೋಂಕು ಯಾವುದೇ ರೀತಿಯಲ್ಲಿ ಯಾರಿಂದ ಯಾರಿಗೆ ಸುಳಿವು ನೀಡದೇ ಎಲ್ಲರಲ್ಲೂ ಆವರಿಸುತ್ತಿದೆ.

Read More

ತುಮಕೂರು :         ರಾಜ್ಯದಲ್ಲಿ ಕೋವಿಡ್-19 ಸಂಕಷ್ಟದಲ್ಲಿಯೂ ಕೂಡ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಆರಂಭವಾಗಿದ್ದು, ಈ ಬಾರಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುವ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಎಸ್.ಸುರೇಶ್‍ಕುಮಾರ್ ಅವರು ತಿಳಿಸಿದರು.       ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಯ ವಿವಿಧ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‍ಎಸ್‍ಎಲ್‍ಸಿ ಪರೀಕ್ಷೆಯ 5ನೇ ದಿನವಾದ ಇಂದು ಕನ್ನಡ ಭಾಷಾ ವಿಷಯವಿದ್ದು, ರಾಜ್ಯದಲ್ಲಿ ಈವರೆಗೆ ಶೇ.98ರಷ್ಟು ವಿದ್ಯಾರ್ಥಿಗಳ ಹಾಜರಾತಿ ಇದೆ. ಪರೀಕ್ಷೆ ಆರಂಭವಾದ ದಿನದಿಂದ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ನಗರಕ್ಕೆ ಭೇಟಿ ನೀಡಿದ್ದೇನೆ. ಇಂದು ತುಮಕೂರು ಜಿಲ್ಲೆಯ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ ಎಂದು ಅವರು ತಿಳಿಸಿದರು.       ಶಿಕ್ಷಣ ಇಲಾಖೆಯು ಯಾವುದೇ ಪರೀಕ್ಷಾ ಕೇಂದ್ರ, ಕೇವಲ ಪರೀಕ್ಷಾ ಕೇಂದ್ರವಾಗಿರಬಾರದು ಅದು ಮಕ್ಕಳ ಸುರಕ್ಷತಾ ಕೇಂದ್ರವಾಗಿರಬೇಕು.…

Read More