BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ರೈತರ ಹಕ್ಕನ್ನು ಪಡೆಯಲು ಹೋರಾಟ ಒಂದೇ ದಾರಿ
  • ಹಡಪದ ಅಪ್ಪಣ್ಣ ಅವರ ನುಡಿಗಳು ಇಂದಿಗೂ ಪ್ರಸ್ತುತ
  • ನಗರದ ವಿವಿಧಡೆ ಸಾಯಿಬಾಬಾ ದೇಗುಲಗಳಲ್ಲಿ ಗುರುಪೂರ್ಣಿಮೆ
  • ಜಿಲ್ಲೆಯ ಎಲ್ಲಾ ನ್ಯಾಯ ಬೆಲೆ ಅಂಗಡಿಗಳಲ್ಲಿ ಸಹಾಯವಾಣಿ ಸಂಖ್ಯೆ ಕಡ್ಡಾಯ: ಚಂದ್ರಶೇಖರ್ ಗೌಡ ಸೂಚನೆ
  • ರೈತ-ಕಾರ್ಮಿಕ ವಿರೋಧಿಸಿ ಪ್ರತಿಭಟನೆ
  • ಐಟಿ ಕಂಪನಿಗಳ ಸ್ಥಾಪನೆಯಿಂದ ಆರ್ಥಿಕ,  ಸಾಮಾಜಿಕ ಬದಲಾವಣೆ ಸಾಧ್ಯ: ಜಿಲ್ಲಾಧಿಕಾರಿ
  • ಹುಳಿಯಾರು: ಬಸ್ ನಿಲ್ದಾಣದ ಬಳಿ ನಿತ್ಯ ಕಸಕ್ಕೆ ಬೆಂಕಿ
  • ಪುರಾತನ ದೇವಸ್ಥಾನಗಳ ಸಂರಕ್ಷಣೆಯಾಗಲಿ: ಸಿದ್ಧಲಿಂಗ ಸ್ವಾಮೀಜಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಪಶು ವೈದ್ಯರ ಕೆಲಸ ದನ ಕರುಗಳಿಗೆ ಚಿಕಿತ್ಸೆ ನೀಡಲಷ್ಟೇ ಸೀಮಿತವಾಗಿಲ್ಲ
ಇತರೆ ಸುದ್ಧಿಗಳು

ಪಶು ವೈದ್ಯರ ಕೆಲಸ ದನ ಕರುಗಳಿಗೆ ಚಿಕಿತ್ಸೆ ನೀಡಲಷ್ಟೇ ಸೀಮಿತವಾಗಿಲ್ಲ

By News Desk BenkiyabaleUpdated:January 20, 2021 6:54 pm

ತುಮಕೂರು : 

     ಪಶುವೈದ್ಯರ ಕೆಲಸ ಇಂದು ದನ ಕರುಗಳಿಗೆ ಚಿಕಿತ್ಸೆ ನೀಡುವುದಕಷ್ಟೇ ಸಿಮೀತವಾಗಿಲ್ಲ.ಪ್ರಾಣಿಯಿಂದ ಮನುಷ್ಯನಿಗೆ ಬರಬಹುದಾದ ರೋಗಗಳನ್ನು ತಡೆಗಟ್ಟಿ, ಜನರ ಆರೋಗ್ಯದ ಕಡೆಗೂ ಹೆಚ್ಚಿನ ಗಮನಹರಿಸುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಮಂಜುಳ ಅಭಿಪ್ರಾಯಪಟ್ಟಿದ್ದಾರೆ.

      ನಗರದ ಶ್ರೀಸಿದ್ದಾರ್ಥ ಎಂಬಿಎ ಸಭಾಂಗಣದಲ್ಲಿ ಕರ್ನಾಟಕ ಪಶು ವೈದ್ಯಕೀಯ ಸಂಘ, ತುಮಕೂರು ಜಿಲ್ಲಾ ಶಾಖೆ ಹಾಗೂ ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಿದ್ದ ಜಾನುವಾರುಗಳು ಉದರ ಸಂಬಂಧಿ ರೋಗಗಳ ಪತ್ತೆ ಮತ್ತುಚಿಕಿತ್ಸೆ ಎಂಬ ವಿಷಯ ಕುರಿತ ತಾಂತ್ರಿಕ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಪ್ರಾಣಿಗಳಿಂದ ಮನುಷ್ಯನಿಗೆ ಹರಡಬಹುದಾದ ರೇಬಿಸಿ ಇನ್ನಿತರ ರೋಗಗಳು ಮಾನವ ಸಂಪನ್ಮೂಲವನ್ನು ಕಡಿಮೆ ಮಾಡದ ರೀತಿಯಲ್ಲಿ ಆಗಿಂದಾಗ್ಗೆ ಇಂತಹ ಕಾರ್ಯಕ್ರಮಗಳ ಮೂಲಕ ಜಾಗೃತಿ ಪಡೆದು, ಹೊಸ ರೋಗಗಳಿಗೆ ಸವಾಲಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

       ಕೃಷಿ ಸಂಕಷ್ಟದ ದಿನಗಳಲ್ಲಿ ಇರುವ ಇಂದು, ಹೈನುಗಾರಿಕೆ, ಪಶು ಸಂಗೋಪನಾ ಪ್ರಮುಖ ಸ್ಥಾನ ಪಡೆದುಕೊಳ್ಳುತ್ತಿದೆ. ಪಶುಸಂಗೋಪನೆಗೆ ಅಗತ್ಯವಿರುವ ಸವಲತ್ತು, ತಾಂತ್ರಿಕ ಮಾಹಿತಿ ಮತ್ತು ಸವಲತ್ತುಗಳನ್ನು ಸರಕಾರ ಪಶುವೈದ್ಯರ ಮೂಲಕ ಫಲಾನುಭವಿಗಳಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿದೆ. ತಮ್ಮ ವೃತ್ತಿಯ ಜೊತೆಗೆ, ಹಲವು ಕೆಲಸಗಳನ್ನು ಪಶುವೈದ್ಯರು ನಡೆಸುತಿದ್ದಾರೆ ಎಂದು ಶ್ರೀಮತಿ ಮಂಜುಳ ನುಡಿದರು.

      ಜಾನುವಾರುಗಳ ಉದರ ಸಂಬಂಧಿ ರೋಗಗಳ ಪತ್ತೆ ಮತ್ತು ಚಿಕಿತ್ಸೆ ಕುರಿತು ವಿಶೇಷ ಉಪನ್ಯಾಸ ನೀಡಿದ ಡಾ.ಮಂಜು ನಾಥ್,ನಾವು ವಿದ್ಯಾರ್ಥಿಗಳಿದ್ದಾಗ ಪಠ್ಯದಿಂದ ಕಲಿತಿದ್ದನ್ನು,ಪಶುವೈದ್ಯರಾಗಿ ಕೆಲಸ ಮಾಡುವ ಸಂದರ್ಭದಲ್ಲಿ ಅಳವಡಿಸಿ ಕೊಂಡು ಉತ್ತಮ ವೈದ್ಯರಾಗಿ ರೂಪುಗೊಳ್ಳಲು ಅವಕಾಶವಿದೆ.ಇಲಾಖೆಯಿಂದ ನಡೆಯುವ ತಾಂತ್ರಿಕ ಕಾರ್ಯಾಗಾರ, ವಿಶೇಷ ಉಪನ್ಯಾಸಗಳ ಮೂಲಕ ಜ್ಞಾನವನ್ನು ಪಡೆದು,ಅದನ್ನು ವೃತ್ತಿ ಜೀವನದಲ್ಲಿ ಅಳವಡಿಸಿಕೊಂಡರೆ, ನಮಗಿರುವ ಇತಿಮತಿಯಲ್ಲಿಯೇ ಜಾನುವಾರುಗಳಿಗೆ ಬರುವ ವಿವಿಧ ಉದರ ಸಂಬಂಧಿರೋಗಗಳನ್ನು ನಿಖರವಾಗಿ ಪತ್ತೆ ಹೆಚ್ಚಿ ಯಶಸ್ವಿ ಚಕಿತ್ಸೆ ನೀಡಲು ಸಾಧ್ಯ ಎಂದರು.

      ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಶುಸಂಗೋಪನೆ ಮತ್ತು ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಜಿ.ಎಂ.ಕೋಟೇಶಪ್ಪ ಮಾತನಾಡಿ,ಜಾನುವಾರುಗಳ ಆರೋಗ್ಯ ಸೇವೆಯಲ್ಲಿ ತೊಡಗಿರುವ ಪಶುವೈದ್ಯರು ಹಲವಾರು ಸಮಸ್ಯೆಗಳನ್ನು ಎದುರಿಸುತಿದ್ದಾರೆ.ನಾವು ವಿದ್ಯಾರ್ಥಿಗಳಿದ್ದಾಗ ಪಠ್ಯದಲ್ಲಿ ಓದಿದ್ದ ಅಫ್ರಿಕಾದಲ್ಲಿ ಪ್ರಾಣಿಗಳಿಗೆ ಕಂಡು ಬರುತ್ತಿದ್ದ ಅನೇಕ ರೋಗಗಳು ಇಂದು ಭಾರತದ ಪ್ರಾಣಿಗಳಲ್ಲಿಯೂ ಕಂಡು ಬರುತ್ತಿವೆ.ಅಲ್ಲದೆ ಪ್ರಾಣಿಗಳಿಂದ ಮನುಷ್ಯನಿಗೆ ಹಲವಾರು ರೋಗಗಳು ಪ್ರಸರಣಗೊಳ್ಳುತ್ತಿವೆ.ಹಾಗಾಗಿ ಇಂದು ಪಶುವೈದ್ಯರು ಕೇವಲ ಪ್ರಾಣಿಗಳಿಗೆ ಬರುವ ರೋಗಗಳ ಬಗ್ಗೆ ಜ್ಞಾನ ಹೊಂದಿದ್ದರೆ ಸಾಲದು, ಎಲ್ಲಾ ರೀತಿಯ ಖಾಯಲೆಗಳ ಬಗ್ಗೆಯೂ ಪ್ರಾಥಮಿಕ ಜ್ಞಾನವನ್ನು ಹೊಂದಿರುವ ಅಗತ್ಯವಿದೆ ಎಂದರು.

      ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಪಶುವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ.ವಿ.ಸಿ. ರುದ್ರಪ್ರಸಾದ್,ಕೋವಿಡ್‍ನಿಂದಾಗಿ ಕಳೆದ ಒಂದು ವರ್ಷದಿಂದ ನಾವು ತಾಂತ್ರಿಕ ಕಾರ್ಯಾಗಾರ ನಡೆಸಲು ಸಾಧ್ಯವಾಗಿ ರಲಿಲ್ಲ.ಇಂದು ಈ ಅವಕಾಶ ದೊರೆತಿದೆ. ಪಶುವೈದ್ಯರು ಪ್ರಾಣಿಗಳ ಉದರ ಸಂಬಂಧಿತ ಹಲವಾರು ಸಮಸ್ಯೆಗಳನ್ನು ಕ್ಷೇತ್ರದಲ್ಲಿ ದಿನನಿತ್ಯ ಎದುರಿಸುತ್ತಿದ್ದೇವೆ.ಹಾಗಾಗಿ ಪಶುವೈದ್ಯರ ಪಾತ್ರ ಇತ್ತೀಚಿನ ದಿನಗಳಲ್ಲಿ ಬಹಳವಾಗಿದೆ.ಅಲ್ಲದೆ ಇತ್ತೀಚಿಗೆ ಸರಕಾರ ಜಾರಿಗೆ ತಂದಿರುವ ಗೋ ಹತ್ಯೆ ನಿಷೇಧ ಕಾಯ್ದೆಯಿಂದ ಪಶುವೈದ್ಯರ ಮೇಲೆ ಅಪಾರ ಹೊರೆ ಬೀಳಲಿದೆ.ಸರಕಾರ ಪ್ರತಿ ತಾಲೂಕಿಗೆ ಎರಡು ಗೋ ಶಾಲೆಗಳನ್ನು ತೆರೆಯಲು ಹೊರಟಿದೆ.ಈ ಹಿಂದೆ ಬರ ಸಂದರ್ಭದಲ್ಲಿ ತೆರೆದ ಗೋಶಾಲೆ ಗಳಲ್ಲಿ ಕೆಲಸ ಮಾಡಿದ ಸುಮಾರು 32 ವೈದ್ಯರ ಮೇಲೆ ಹಾಕಿರುವ ಕೇಸ್‍ಗಳು ಇಂದಿಗೂ ಬಗೆಹರಿದಿಲ್ಲ. ಹೀಗಿರುವಾಗ ಹೊಸ ಗೋಶಾಲೆಗಳಿಂದ ಉದ್ಬವಿಸಬಹುದಾಗ ಸಮಸ್ಯೆ ಹಾಗೂ ಮಾನಸಿಕ ಒತ್ತಡ ಕುರಿತು ನಾವೆಲ್ಲರೂ ಆಲೋಚಿಸ ಬೇಕಾಗಿದೆ.ಹೊಸ ಸಮಸ್ಯೆ ಎದುರಿಸಲು ಸಿದ್ದರಾಗಬೇಕಾಗಿದೆ ಎಂದರು.

     ವೇದಿಕೆಯಲ್ಲಿ ಪಶುವೈದ್ಯಕೀಯ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಆರ್.ಎಂ.ನಾಗಭೂಷಣ್,ಉಪಾಧ್ಯಕ್ಷ ಡಾ.ದಿವಾಕರ್, ಡಾ.ಶಶಿಕಲ ಮತ್ತಿತರರು ಉಪಸ್ಥಿತರಿದ್ದರು.

(Visited 13 times, 1 visits today)
Previous Articleದೇಶದ ಸಂಪನ್ಮೂಲವನ್ನು ಕಾರ್ಪೋರೇಟ್ ಸಂಸ್ಥೆಗಳಿಗೆ ಹರಾಜು ಹಾಕಲಾಗುತ್ತಿದೆ
Next Article  ತುಮಕೂರು : ನಾಳೆ ನಗರಕ್ಕೆ ಸಿಎಂ ಭೇಟಿ
News Desk Benkiyabale

Related Posts

ಪತ್ರಿಕೋದ್ಯಮ ವಿದ್ಯರ‍್ಥಿಗಳು ಪತ್ರಿಕೋದ್ಯಮದ ಆಸ್ತಿಗಳಾಗಲಿ

July 01, 2025 3:52 pm ಇತರೆ ಸುದ್ಧಿಗಳು

೧೭ ಮಹಿಳೆಯರು ಸೇರಿ ೩೨ ಮಂದಿಗೆ ಗಾಯ

June 30, 2025 3:48 pm ಇತರೆ ಸುದ್ಧಿಗಳು

ಒಕ್ಕಲಿಗರ ಸಂಘಟನೆಗೆ ಹೊಸ ಚೇತನ ಕೆಂಪೇಗೌಡರು

June 28, 2025 3:39 pm ಇತರೆ ಸುದ್ಧಿಗಳು
ತಾಜಾ ಸುದ್ಧಿಗಳು
ತುಮಕೂರು

ರೈತರ ಹಕ್ಕನ್ನು ಪಡೆಯಲು ಹೋರಾಟ ಒಂದೇ ದಾರಿ

July 10, 2025 3:51 pm
ತುಮಕೂರು

ಹಡಪದ ಅಪ್ಪಣ್ಣ ಅವರ ನುಡಿಗಳು ಇಂದಿಗೂ ಪ್ರಸ್ತುತ

July 10, 2025 3:50 pm
ತುಮಕೂರು

ನಗರದ ವಿವಿಧಡೆ ಸಾಯಿಬಾಬಾ ದೇಗುಲಗಳಲ್ಲಿ ಗುರುಪೂರ್ಣಿಮೆ

July 10, 2025 3:49 pm
ತುಮಕೂರು

ಜಿಲ್ಲೆಯ ಎಲ್ಲಾ ನ್ಯಾಯ ಬೆಲೆ ಅಂಗಡಿಗಳಲ್ಲಿ ಸಹಾಯವಾಣಿ ಸಂಖ್ಯೆ ಕಡ್ಡಾಯ: ಚಂದ್ರಶೇಖರ್ ಗೌಡ ಸೂಚನೆ

July 10, 2025 3:48 pm
ತುಮಕೂರು

ರೈತ-ಕಾರ್ಮಿಕ ವಿರೋಧಿಸಿ ಪ್ರತಿಭಟನೆ

July 10, 2025 3:47 pm
ತುಮಕೂರು

ಐಟಿ ಕಂಪನಿಗಳ ಸ್ಥಾಪನೆಯಿಂದ ಆರ್ಥಿಕ,  ಸಾಮಾಜಿಕ ಬದಲಾವಣೆ ಸಾಧ್ಯ: ಜಿಲ್ಲಾಧಿಕಾರಿ

July 10, 2025 3:45 pm
Our Youtube Channel
Our Picks

ಪತ್ರಿಕೋದ್ಯಮ ವಿದ್ಯರ‍್ಥಿಗಳು ಪತ್ರಿಕೋದ್ಯಮದ ಆಸ್ತಿಗಳಾಗಲಿ

July 01, 2025 3:52 pm

೧೭ ಮಹಿಳೆಯರು ಸೇರಿ ೩೨ ಮಂದಿಗೆ ಗಾಯ

June 30, 2025 3:48 pm

ಒಕ್ಕಲಿಗರ ಸಂಘಟನೆಗೆ ಹೊಸ ಚೇತನ ಕೆಂಪೇಗೌಡರು

June 28, 2025 3:39 pm

ಹೆಣ್ಣು ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯಲಿ

June 28, 2025 3:38 pm

ಡಾ. ಶ್ರೀ ಶ್ರೀ ಶ್ರೀಶಿವಕುಮಾರ ಶ್ರೀಗಳ ಗ್ರಂಥ ಲೋಕಾರ್ಪಣೆ

June 28, 2025 3:37 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ತುಮಕೂರು

ರೈತರ ಹಕ್ಕನ್ನು ಪಡೆಯಲು ಹೋರಾಟ ಒಂದೇ ದಾರಿ

By News Desk BenkiyabaleJuly 10, 2025 3:51 pm

ಚಿಕ್ಕನಾಯಕನಹಳ್ಳಿ: ದೇಶದ ರಾಜಕಾರಣಿಗಳು ವಾರ್ಷಿಕವಾಗಿ ಶೇಕಡ ೧೦ ಹತ್ತರಷ್ಟು ಕುಡುಕ ಪ್ರಜೆಗಳನ್ನು ಸೃಷ್ಟಿಸುತ್ತಿವೆ ದುಡಿಯುವ ರೈತನಿಗೆ ಸಿಗಬೇಕಾದ ಸೌಲಭ್ಯಗಳನ್ನು ಕೂಡ…

ಹಡಪದ ಅಪ್ಪಣ್ಣ ಅವರ ನುಡಿಗಳು ಇಂದಿಗೂ ಪ್ರಸ್ತುತ

July 10, 2025 3:50 pm

ನಗರದ ವಿವಿಧಡೆ ಸಾಯಿಬಾಬಾ ದೇಗುಲಗಳಲ್ಲಿ ಗುರುಪೂರ್ಣಿಮೆ

July 10, 2025 3:49 pm

ಜಿಲ್ಲೆಯ ಎಲ್ಲಾ ನ್ಯಾಯ ಬೆಲೆ ಅಂಗಡಿಗಳಲ್ಲಿ ಸಹಾಯವಾಣಿ ಸಂಖ್ಯೆ ಕಡ್ಡಾಯ: ಚಂದ್ರಶೇಖರ್ ಗೌಡ ಸೂಚನೆ

July 10, 2025 3:48 pm
News by Date
July 2025
M T W T F S S
 123456
78910111213
14151617181920
21222324252627
28293031  
« Jun    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.