BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ರೈತರ ಹಕ್ಕನ್ನು ಪಡೆಯಲು ಹೋರಾಟ ಒಂದೇ ದಾರಿ
  • ಹಡಪದ ಅಪ್ಪಣ್ಣ ಅವರ ನುಡಿಗಳು ಇಂದಿಗೂ ಪ್ರಸ್ತುತ
  • ನಗರದ ವಿವಿಧಡೆ ಸಾಯಿಬಾಬಾ ದೇಗುಲಗಳಲ್ಲಿ ಗುರುಪೂರ್ಣಿಮೆ
  • ಜಿಲ್ಲೆಯ ಎಲ್ಲಾ ನ್ಯಾಯ ಬೆಲೆ ಅಂಗಡಿಗಳಲ್ಲಿ ಸಹಾಯವಾಣಿ ಸಂಖ್ಯೆ ಕಡ್ಡಾಯ: ಚಂದ್ರಶೇಖರ್ ಗೌಡ ಸೂಚನೆ
  • ರೈತ-ಕಾರ್ಮಿಕ ವಿರೋಧಿಸಿ ಪ್ರತಿಭಟನೆ
  • ಐಟಿ ಕಂಪನಿಗಳ ಸ್ಥಾಪನೆಯಿಂದ ಆರ್ಥಿಕ,  ಸಾಮಾಜಿಕ ಬದಲಾವಣೆ ಸಾಧ್ಯ: ಜಿಲ್ಲಾಧಿಕಾರಿ
  • ಹುಳಿಯಾರು: ಬಸ್ ನಿಲ್ದಾಣದ ಬಳಿ ನಿತ್ಯ ಕಸಕ್ಕೆ ಬೆಂಕಿ
  • ಪುರಾತನ ದೇವಸ್ಥಾನಗಳ ಸಂರಕ್ಷಣೆಯಾಗಲಿ: ಸಿದ್ಧಲಿಂಗ ಸ್ವಾಮೀಜಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಖಾಸಗಿ ಶಾಲೆ ಶುಲ್ಕ ಗೊಂದಲ ಬಗೆಹರಿಸಿ : ಆರೋಗ್ಯ – ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಚೌಡಪ್ಪ
Trending

ಖಾಸಗಿ ಶಾಲೆ ಶುಲ್ಕ ಗೊಂದಲ ಬಗೆಹರಿಸಿ : ಆರೋಗ್ಯ – ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಚೌಡಪ್ಪ

By News Desk BenkiyabaleUpdated:February 25, 2021 7:06 pm

ತುಮಕೂರು :

     ಕೋವಿಡ್ 2ನೇ ಅಲೆ ಹೆಚ್ಚುತ್ತಿದ್ದು, ನಗರ ಪ್ರದೇಶದಲ್ಲೆ ಕೋವಿಡ್ ಹರಡುತ್ತಿದ್ದು, ಆರೋಗ್ಯ ಇಲಾಖೆ ಎಚ್ಚರಿಕೆ ವಹಿಸುವಂತೆ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಚೌಡಪ್ಪ ಸೂಚಿಸಿದರು.

      ಜಿಲ್ಲಾ ಪಂಚಾಯತಿಯಲ್ಲಿ ಆರ್. ಚೌಡಪ್ಪ ಅಧ್ಯಕ್ಷತೆಯಲ್ಲಿ ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು ಬೆಂಗಳೂರು ತುಮಕೂರು ನಡುವೆ ಓಡಾಡುವರ ಸಂಖ್ಯೆ ಹೆಚ್ಚುತ್ತಿದ್ದು, ಗ್ರಾಮಾಂತರ ಪ್ರದೇಶಕ್ಕಿಂತ ನಗರ ಪ್ರದೇಶದಲ್ಲಿ ಕೋವಿಡ್ ಹೆಚ್ಚಳವಾಗುತ್ತಿದ್ದು, ಕೋವಿಡ್ ವಾರಿಯರ್ಸ್ ಶ್ರಮವಹಿಸುವಂತೆ ಸೂಚಿಸಿದರು.

     ಸಾರ್ವಜನಿಕರು ಸಹ ಮದುವೆ ಮತ್ತು ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸುವ ಮುನ್ನ ಎಚ್ಚರಿಕೆ ವಹಿಸಬೇಕು, ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯವಾಗಿ ಧರಿಸುವ ಮೂಲಕ ಕೋವಿಡ್ ಅಲೆ ತಡೆಯಲು ಸಹಕರಿಸುವಂತೆ ಕೋರಿದರು. ಖಾಸಗಿ ಶಾಲೆಗಳು ಸರ್ಕಾರ ನಿಗದಿಪಡಿಸಿರುವ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕ ಪಡೆಯುತ್ತಿರುವ ಶಾಲೆಗಳ ವಿರುದ್ಧ ಕ್ರಮವಹಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.

       ಜಿ.ಪಂ.ಸದಸ್ಯ ಕೆಂಚಮಾರಯ್ಯ ಅವರು ಮಾತನಾಡಿ ಕೋವಿಡ್ ಸಂದ ರ್ಭದಲ್ಲಿ ಖಾಸಗಿ ಶಾಲೆಗಳು ಹೆಚ್ಚಿನ ಶುಲ್ಕ ಸಂಗ್ರಹ ಮಾಡುತ್ತಿದ್ದು, ಇದನ್ನು ನಿಯಂತ್ರಿಸುವಂತೆ ಸೂಚನೆ ನೀಡಿದರು. ಜಿ.ಪಂ.ಸದಸ್ಯೆ ಮಂಜುಳ ಅವರು ಮಾತನಾಡಿ ಎಸ್ ಡಿಎಂಸಿಯಲ್ಲಿ ರಾಜಕೀಯ ನುಸುಳದಂತೆ ನೋಡಿಕೊಳ್ಳಿ, ಪೋಷಕರ ಸಲಹೆ ಮೇರೆಗೆ ಎಸ್ಡಿಎಂಸಿ ನೇಮಕ ಮಾಡುವಂತೆ ಹೇಳಿದರು, ಗುಬ್ಬಿ ಸದಸ್ಯ ಜಗನ್ನಾಥ ಅವರು ಮಾತನಾಡಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಹತ್ತಿರಕ್ಕೆ ಬರುತ್ತಿದ್ದು, ವಿ.ಆರ್.ಎಸ್ ಪಡೆಯಲು ಅರ್ಜಿ ಸಲ್ಲಿಸಿರುವ ಶಿಕ್ಷಕರಿಗೆ ವಿ.ಆರ್.ಎಸ್ ನೀಡಬಾರದು ಎಂದು ಸೂಚಿಸಿದರು.

      ಶ್ರೀನಿವಾಸ ಶಾಲೆಯಲ್ಲಿ ಮೂವರು ಶಿಕ್ಷಕರು ವಿ.ಆರ್.ಎಸ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ, ಮಕ್ಕಳಿಗೆ ಪಾಠ ಮಾಡಲು ಬರುತ್ತಿಲ್ಲ, ಕೊಳಗೇರಿ ಮಕ್ಕಳ ವಿದ್ಯಾಭ್ಯಾಸ ಕುಂಠಿತವಾಗಿದ್ದು, ಆ ಶಿಕ್ಷಕರ ವಿಆರ್ ಎಸ್ ಒಪ್ಪಿಕೊಳ್ಳದೇ, ಮಕ್ಕಳಿಗೆ ಪಾಠ ಮಾಡಲು ಅನುವು ಮಾಡಿಕೊಡಬೇಕೆಂದು ಸೂಚಿಸಿದರು.

      ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ಚೌಡಪ್ಪ ಮಾತನಾಡಿ, ಸಂಬಂಧಪಟ್ಟ ಶಿಕ್ಷಕರಿಗೆ ವಿ.ಆರ್.ಎಸ್. ಸೌಲಭ್ಯ ದೊರೆಯಬೇಕೆಂದರೆ ಪಾಠ ಮಾಡುವಂತೆಕೈಗೊಳ್ಳಲಾಗಿಕು, ಡಿಡಿಪಿಐ ಅವರು ವೈಯಕ್ತಿಕವಾಗಿ ಪ್ರಕರಣ ತೆಗೆದುಕೊಂಡು, ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವಂತೆ ಸೂಚಿಸಿದರು.

       ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಶಿರಾ ತಾಲ್ಲೂಕು ಹಿಂದುಳಿದಿದೆ, ಶಿರಾ ತಾಲ್ಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಉತ್ತಮಗೊಳಿಸಬೇಕು ಎಂದು ಹೇಳಿದರು, ಮಧುಗಿರಿ ಡಿಡಿಪಿಐ ಮಾತನಾಡಿ ಮಕ್ಕಳು ಮತ್ತು ಪೋಷಕರ ಅಭಿಪ್ರಾಯವನ್ನು ಪಡೆದುಕೊಳ್ಳಲಾಗಿದ್ದು, ಶಿರಾ ತಾಲ್ಲೂಕಿನ ಮುಖ್ಯ ಶಿಕ್ಷಕರ ಸಭೆಯನ್ನು ಕರೆದು ಮಾರ್ಗದರ್ಶನ ಮಾಡಲಾಗಿದೆ ಎಂದರು.

      ಶಿರಾ ತಾಲ್ಲೂಕಿನ ಗ್ರಾಮಾಂತರ ಶಾಲೆಗಳಲ್ಲಿ ಉತ್ತಮ ಫಲಿತಾಂಶವಿದೆ, ನಗರ ಪ್ರದೇಶದಲ್ಲಿ ಫಲಿತಾಂಶ ಕುಸಿದಿದೆ, ಶಾಲಾ ಹಂತ, ಬಿಇಒ ಹಂತದಲ್ಲಿ ಮಾರ್ಗಸೂಚಿಗಳನ್ನು ನಿಗದಿ ಪಡಿಸಿದ್ದು, ವಿಷಯವಾರು ಶಿಕ್ಷಕರಿಗೆ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗಿದ್ದು, ಉತ್ತಮ ಫಲಿತಾಂಶಕ್ಕೆ ಶ್ರಮಿಸಲಾಗುವುದು ತಿಳಿಸಿದರು.

     ಜಿ.ಪಂ.ಸದಸ್ಯ ಕೆಂಚಮಾರಯ್ಯ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕರಿದ್ದು, ಎಸ್ಸೆಸ್ಸೆಲ್ಸಿಯಲ್ಲಿ ಶೇ.100 ಫಲಿತಾಂಶ ದೊರಕಿದೆ, ವ್ಯವಸ್ಥಿತವಾಗಿ ಶಿಕ್ಷಣ ಇಲಾಖೆ ಕಾರ್ಯನಿರ್ವಹಿಸಬೇಕಾದರೆ ರಾಜಕೀಯ, ಗುಂಪುಗಾರಿಕೆಯಲ್ಲಿ ತೊಡಗಿರುವ ಶೇ.10 ರಷ್ಟು ಶಿಕ್ಷಕರಿಗೆ ನಿಯಂತ್ರಣ ಹಾಕಬೇಕಿದೆ ಎಂದರು.

     ಶಾಲೆಗಳಿಗೆ ಭೇಟಿ ನೀಡುವ ಬಿಇಒ ಮತ್ತು ಡಿಡಿಪಿಐಗಳು ಭೌತಿಕ ಪ್ರಗತಿ ಪರಿಶೀಲಿಸುವುದರೊಂದಿಗೆ, ಶಾಲೆಗಳಲ್ಲಿ ಪಠ್ಯಕ್ರಮದಲ್ಲಿ ಆಗಿರುವ ಪ್ರಗತಿ ಸಾಧಿಸಬೇಕು, ಫಲಿತಾಂಶ ಗಳಿಸುವುದಷ್ಟೇ ಮುಖ್ಯವಲ್ಲ, ಗುಣಮಟ್ಟದ ಶಿಕ್ಷಣವನ್ನು ನೀಡಬೇಕೆಂದರು. ತುಮಕೂರು ಜಿಲ್ಲೆಯ ಎರಡು ಶೈಕ್ಷಣಿಕ ಜಿಲ್ಲೆಗಳಲ್ಲಿ ಉತ್ತಮ ಫಲಿತಾಂಶ ದೊರಕಿಸಬೇಕು ಎಂದು ಹೇಳಿದರು.

      ಮಧುಗಿರಿ ಮತ್ತು ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ ಶಾಲೆಗಳ ಕೊಠಡಿ ಲಭ್ಯತೆ ಹಾಗೂ ದುಸ್ಥಿತಿ ಬಗ್ಗೆ ಪಟ್ಟಿ ಮಾಡುವಂತೆ ಡಿಡಿಪಿಐಗಳಿಗೆ ಸೂಚಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಚೌಡಪ್ಪ ಅವರು, ಶಾಲೆಗಳ ಸ್ಥಿತಿಗತಿಗಳ ಬಗ್ಗೆ ವರದಿಯನ್ನು ಶೀಘ್ರ ಸಲ್ಲಿಸಿದರೆ ಶಿಕ್ಷಣ ಸಚಿವರಿಗೆ ಪತ್ರ ಬರೆದು, ಅನುದಾನ ನೀಡಲು ಒತ್ತಾಯಿಸಲಾಗುವುದು ಎಂದು ಸೂಚನೆ ನೀಡಿದರು.

      ಸರ್ಕಾರಿ ಶಾಲೆಗಳ ನಿರ್ಮಾಣಕ್ಕಾಗಿ ಹಿಂದೆ ಭೂಮಿ ನೀಡಿದ್ದ ವಂಶಸ್ಥರು ಈಗ ಭೂಮಿಗಾಗಿ ನ್ಯಾಯಾಲಯದ ಮೊರೆ ಹೋಗುತ್ತಿದ್ದಾರೆ ಇಂತಹ ಪ್ರಕರಣಗಳು ಹೆಚ್ಚುತ್ತಿದ್ದು, ಈಗಾಗಲೇ ಪಿಡಿಒಗಳಿಗೆ ಸೂಚನೆ ನೀಡಿದ್ದು, ಸ್ವಾಧೀನದಲ್ಲಿರುವ ಭೂಮಿಗೆ ದಾಖಲೆಯನ್ನು ಸಿದ್ಧಪಡಿಸುವಂತೆ ಡಿಡಿಪಿಐ ಹಾಗೂ ಬಿಇಒಗಳಿಗೆ ಉಪ ಕಾರ್ಯದರ್ಶಿ ರಮೇಶ್ ಅವರು ಸೂಚನೆ ನೀಡಿದರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ.60 ಕ್ಕಿಂತ ಹೆಚ್ಚು ಅಂಕಗಳಿಸಿದ ಎಸ್ಸಿ,ಎಸ್ಟಿ ವಿದ್ಯಾರ್ಥಿಗಳಿಗೆ ಕಳೆದ ವರ್ಷದ ಪ್ರೋತ್ಸಾಹಧನವೇ ಬಿಡುಗಡೆಯಾಗಿಲ್ಲ, ಹೊಸ ವ್ಯವಸ್ಥೆ ತರುವ ಮುನ್ನ ಹಳೆಯ ಅನುದಾನ ಬಿಡುಗಡೆ ಮಾಡಿಸಬೇಕು ಎಂದ ಅವರು, ಸಿಆರ್ ಪಿ ಗಳು ಎಸ್ಸಿಎಸ್ಟಿ ವಿದ್ಯಾರ್ಥಿ ನಿಲಯ ಕ್ಕೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಅವಶ್ಯಕವಾಗಿರುವ ವಿಷಯಗಳ ಬೋಧನೆಗೆ ಕ್ರಮವಹಿಸುವಂತೆ ಜಿ.ಪಂ.ಸದಸ್ಯ ಕೆಂಚಮಾರಯ್ಯ ಸಲಹೆ ನೀಡಿದರು.

      ಜಿಲ್ಲೆಯ 2400 ಶಾಲೆಗಳಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕ್ರಮವಹಿಸಬೇಕು, ಗ್ರಾ.ಪಂನಲ್ಲಿ 15ನೇ ಹಣಕಾಸು ಆಯೋಗ ನಿಧಿ ಖಾಲಿಯಾಗುವ ಮೊದಲು ಶಾಲೆಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಕ್ರಮವಹಿಸುವಂತೆ ಗ್ರಾಮೀಣ ಕುಡಿಯುವ ನೀರು ಇಲಾಖೆ ಎಂಜನಿಯರ್ ಹಾಗೂ ಬಿಇಒಗಳಿಗೆ ಚೌಡಪ್ಪ ಸೂಚನೆ ನೀಡಿದರು.

       ನೀರು ಬರದೇ ಯಾವುದೇ ಕಾರಣಕ್ಕೂ ಅನುದಾನ ಬಿಡುಗಡೆಗೆ ಸಹಿ ಹಾಕಬಾರದು, ನೀರು ಬರದೇ ಹೋದರೆ ಸಂಬಂಧಪಟ್ಟ ಮುಖ್ಯೋಪಾಧ್ಯಾಯರೇ ಹೊಣೆ ಹೊರಸದಸುತ್ತದೆ ಎಂದು ಎಚ್ಚರಿಕೆ ನೀಡಿದ ಅವರು, ಶಾಲೆಗಳಿಗೆ ಮೈದಾನ ಮತ್ತು ಕಾಪೌಂಡ್ ನಿರ್ಮಾಣ, ಅಂಕಣ ನಿರ್ಮಾಣಕ್ಕೆ ನರೇಗಾದಲ್ಲಿ ಅವಕಾಶವಿದ್ದು, ಸಂಬಂಧಪಟ್ಟ ಅಧ್ಯಕ್ಷರಿಗೆ ಮನವಿ ಸಲ್ಲಿಸುವಂತೆ ಉಪ ಕಾರ್ಯದರ್ಶಿ ರಮೇಶ್ ಸೂಚನೆ ನೀಡಿದರು. ಸಭೆಯಲ್ಲಿ ಸದಸ್ಯರಾದ ಗಾಯಿತ್ರಿದೇವಿ, ಮಂಜುಳಾ, ಜಗನ್ನಾಥ, ತಿಮ್ಮಯ್ಯ, ಜಿ.ಪಂ. ಕಾರ್ಯದರ್ಶಿ ರಮೇಶ್ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಇತರರಿದ್ದರು.

(Visited 6 times, 1 visits today)
Previous Articleಇಂಧನ ಬೆಲೆ ಹೆಚ್ಚಳ ಖಂಡಿಸಿ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದಿಂದ ಪ್ರತಿಭಟನೆ
Next Article ಗ್ರಾಮ ಪಂಚಾಯ್ತಿಗಳಲ್ಲಿ ಸರಿಯಾದ ಸೌಕರ್ಯ ಸಿಕ್ಕರೆ ಅದೇ ರಾಮರಾಜ್ಯ
News Desk Benkiyabale

Related Posts

ರೈತರ ಹಕ್ಕನ್ನು ಪಡೆಯಲು ಹೋರಾಟ ಒಂದೇ ದಾರಿ

July 10, 2025 3:51 pm ತುಮಕೂರು

ಹಡಪದ ಅಪ್ಪಣ್ಣ ಅವರ ನುಡಿಗಳು ಇಂದಿಗೂ ಪ್ರಸ್ತುತ

July 10, 2025 3:50 pm ತುಮಕೂರು

ನಗರದ ವಿವಿಧಡೆ ಸಾಯಿಬಾಬಾ ದೇಗುಲಗಳಲ್ಲಿ ಗುರುಪೂರ್ಣಿಮೆ

July 10, 2025 3:49 pm ತುಮಕೂರು
ತಾಜಾ ಸುದ್ಧಿಗಳು
ತುಮಕೂರು

ರೈತರ ಹಕ್ಕನ್ನು ಪಡೆಯಲು ಹೋರಾಟ ಒಂದೇ ದಾರಿ

July 10, 2025 3:51 pm
ತುಮಕೂರು

ಹಡಪದ ಅಪ್ಪಣ್ಣ ಅವರ ನುಡಿಗಳು ಇಂದಿಗೂ ಪ್ರಸ್ತುತ

July 10, 2025 3:50 pm
ತುಮಕೂರು

ನಗರದ ವಿವಿಧಡೆ ಸಾಯಿಬಾಬಾ ದೇಗುಲಗಳಲ್ಲಿ ಗುರುಪೂರ್ಣಿಮೆ

July 10, 2025 3:49 pm
ತುಮಕೂರು

ಜಿಲ್ಲೆಯ ಎಲ್ಲಾ ನ್ಯಾಯ ಬೆಲೆ ಅಂಗಡಿಗಳಲ್ಲಿ ಸಹಾಯವಾಣಿ ಸಂಖ್ಯೆ ಕಡ್ಡಾಯ: ಚಂದ್ರಶೇಖರ್ ಗೌಡ ಸೂಚನೆ

July 10, 2025 3:48 pm
ತುಮಕೂರು

ರೈತ-ಕಾರ್ಮಿಕ ವಿರೋಧಿಸಿ ಪ್ರತಿಭಟನೆ

July 10, 2025 3:47 pm
ತುಮಕೂರು

ಐಟಿ ಕಂಪನಿಗಳ ಸ್ಥಾಪನೆಯಿಂದ ಆರ್ಥಿಕ,  ಸಾಮಾಜಿಕ ಬದಲಾವಣೆ ಸಾಧ್ಯ: ಜಿಲ್ಲಾಧಿಕಾರಿ

July 10, 2025 3:45 pm
Our Youtube Channel
Our Picks

ಪತ್ರಿಕೋದ್ಯಮ ವಿದ್ಯರ‍್ಥಿಗಳು ಪತ್ರಿಕೋದ್ಯಮದ ಆಸ್ತಿಗಳಾಗಲಿ

July 01, 2025 3:52 pm

೧೭ ಮಹಿಳೆಯರು ಸೇರಿ ೩೨ ಮಂದಿಗೆ ಗಾಯ

June 30, 2025 3:48 pm

ಒಕ್ಕಲಿಗರ ಸಂಘಟನೆಗೆ ಹೊಸ ಚೇತನ ಕೆಂಪೇಗೌಡರು

June 28, 2025 3:39 pm

ಹೆಣ್ಣು ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯಲಿ

June 28, 2025 3:38 pm

ಡಾ. ಶ್ರೀ ಶ್ರೀ ಶ್ರೀಶಿವಕುಮಾರ ಶ್ರೀಗಳ ಗ್ರಂಥ ಲೋಕಾರ್ಪಣೆ

June 28, 2025 3:37 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ತುಮಕೂರು

ರೈತರ ಹಕ್ಕನ್ನು ಪಡೆಯಲು ಹೋರಾಟ ಒಂದೇ ದಾರಿ

By News Desk BenkiyabaleJuly 10, 2025 3:51 pm

ಚಿಕ್ಕನಾಯಕನಹಳ್ಳಿ: ದೇಶದ ರಾಜಕಾರಣಿಗಳು ವಾರ್ಷಿಕವಾಗಿ ಶೇಕಡ ೧೦ ಹತ್ತರಷ್ಟು ಕುಡುಕ ಪ್ರಜೆಗಳನ್ನು ಸೃಷ್ಟಿಸುತ್ತಿವೆ ದುಡಿಯುವ ರೈತನಿಗೆ ಸಿಗಬೇಕಾದ ಸೌಲಭ್ಯಗಳನ್ನು ಕೂಡ…

ಹಡಪದ ಅಪ್ಪಣ್ಣ ಅವರ ನುಡಿಗಳು ಇಂದಿಗೂ ಪ್ರಸ್ತುತ

July 10, 2025 3:50 pm

ನಗರದ ವಿವಿಧಡೆ ಸಾಯಿಬಾಬಾ ದೇಗುಲಗಳಲ್ಲಿ ಗುರುಪೂರ್ಣಿಮೆ

July 10, 2025 3:49 pm

ಜಿಲ್ಲೆಯ ಎಲ್ಲಾ ನ್ಯಾಯ ಬೆಲೆ ಅಂಗಡಿಗಳಲ್ಲಿ ಸಹಾಯವಾಣಿ ಸಂಖ್ಯೆ ಕಡ್ಡಾಯ: ಚಂದ್ರಶೇಖರ್ ಗೌಡ ಸೂಚನೆ

July 10, 2025 3:48 pm
News by Date
July 2025
M T W T F S S
 123456
78910111213
14151617181920
21222324252627
28293031  
« Jun    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.