BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ನೂತನ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಪುರುಷೋತ್ತಮ ಎಂ.ಎಲ್. ಅವರು ಅಧಿಕಾರ ಸ್ವಿಕಾರ
  • ಹಾಂಗ್ ಕಾಂಗ್‌ನಲ್ಲಿ ಅಂತರಾಷ್ಟಿçÃಯ ಸಾಂಸ್ಕೃತಿಕ ಉತ್ಸವ
  • ಸಿದ್ಧಾರ್ಥ ಕಾಲೇಜಿನ ದಂತ ವೈದ್ಯರಿಂದ ವೃದ್ಧಾಶ್ರಮದಲ್ಲಿ ಉಚಿತ ದಂತ ತಪಾಸಣೆ
  • ತ್ವರಿತವಾಗಿ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಲ್ಯಾಬ್ ಟಾಪ್ ವಿತರಣೆ
  • ನಿರಂತರ ಅಧ್ಯಯನದಿಂದ ಮಾತ್ರ ಸಾಧನೆ ಸಾಧ್ಯ
  • ಜಿ.ಎಸ್. ಸಿದ್ಧಲಿಂಗಯ್ಯನವರಿಗೆ ಶ್ರದ್ಧಾಂಜಲಿ
  • ಆಯುಕ್ತರಿಂದ ಇಂದಿರಾ ಕ್ಯಾಂಟೀನ್ ಪರಿಶೀಲನೆ
  • ಅಲ್ಪಸಂಖ್ಯಾತ ಅಂಗನವಾಡಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ನಾಮಪತ್ರ ಹಿಂಪಡೆದ ಮುದ್ದಹನುಮೇಗೌಡರ ವಿರುದ್ಧ ಆಕ್ರೋಶ
Trending

ನಾಮಪತ್ರ ಹಿಂಪಡೆದ ಮುದ್ದಹನುಮೇಗೌಡರ ವಿರುದ್ಧ ಆಕ್ರೋಶ

By News Desk BenkiyabaleUpdated:March 29, 2019 6:36 pm

ತುಮಕೂರು:

      ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ದೇವೇಗೌಡರ ಸ್ಪರ್ಧೆಯಿಂದ ರಾಷ್ಟ್ರ ರಾಜಕಾರಣದ ಕೆಂಗಣ್ಣಿಗೆ ಗುರಿಯಾಗಿತ್ತು. ತಮ್ಮ ಇಳಿ ವಯಸ್ಸಿನಲ್ಲಿ ಮೊಮ್ಮಕ್ಕಳಿಬ್ಬರನ್ನು ಕಣಕ್ಕಿಳಿಸಿ, ತನ್ನ ಸ್ಪರ್ಧೆ ಬಯಸಿ ತುಮಕೂರಿಗೆ ಅಡಿಯಿಟ್ಟ ದೇವೇಗೌಡರು ತನ್ನ ಕೊನೆಯ ಚುನಾವಣೆ ಎಂದಿದ್ದರಾದರೂ ಹಾಲಿ ಸಂಸದ ಮುದ್ದಹನುಮೇಗೌಡರ ಬೆಂಬಲಿಗರ ಆಕ್ರೋಷ ದೇವೇಗೌಡರ ನಿದ್ದೆ ಕೆಡಿಸಿತ್ತು. ದೇವೇಗೌಡರು ಜಾತ್ಯಾತೀತ ಜನತಾದಳದ ಪರಮೋಚ್ಚ ನಾಯಕರಾಗಿದ್ದರೂ ತುಮಕೂರು ಜಿಲ್ಲೆಯ ರಾಜಕಾರಣದ ವ್ಯಾಪ್ತಿಗೆ ಗೌಡರ ಪಾದಾರ್ಪಣೆಯನ್ನ ವ್ಯಾಪಕವಾಗಿ ವಿರೋಧಿಸಿದ್ದ ಇಲ್ಲಿನ ಒಕ್ಕಲಿಗ ಸಮುದಾಯವು ಸೇರಿದಂತೆ ಇತರರು ಯಾರೂ ಒಪ್ಪಿಕೊಂಡಿರಲಿಲ್ಲ. ಹಾಗಾಗಿ ಟಿಕೆಟ್ ವಂಚಿತ ಹಾಲಿ ಸಂಸದ ಮುದ್ದಹನುಮೇಗೌಡರ ಪರವಾಗಿ ದೇವೇಗೌಡರ ವಿರೋಧಿ ಬಣ ತೊಡೆತಟ್ಟಿ ನಿಂತಿತ್ತು. ಮುದ್ದಹನುಮೇಗೌಡರಿಗೆ ಬೆಂಬಲವಾಗಿ ನಿಂತಿತ್ತು. ಮುದ್ದಹನುಮೇಗೌqರ ಬಂಡಾಯ ಸ್ಪರ್ಧೆ ಗೌಡರ ಕುಟುಂಬವಲ್ಲದೇ ಇಡೀ ಜೆಡಿಎಸ್ ಪಕ್ಷದ ನಾಯಕರ ನಿದ್ದೆಗೆಡಿಸಿತ್ತು. ಒಕ್ಕಲಿಗರ ಮತಗಳು ಇಬ್ಭಾಗವಾಗಿ ದೇವೇಗೌಡರ ವಿರೋಧಿ ಮತಗಳು ಮುದ್ದಹನುಮೇಗೌಡರ ಕಡೆ ವಾಲುತ್ತವೆ ಎಂ¨ ಭೀತಿಯಿಂದ ಮುದ್ದಹನುಮೇಗೌಡರ ಉಮೇದುವಾರಿಕೆಯನ್ನು ಹಿಂಪಡೆಯುವಂತೆ ರಾಜಿ-ಸಂಧಾನಗಳು ನಡೆಯುತ್ತಲೇ ಇದ್ದವು.

      ಆರಂಭದಲ್ಲಿ ದೊಡ್ಡ ಗೌಡರ ವಿರುದ್ಧ ಗುಡುಗಿದ ಮಂದಿಯೆಲ್ಲ ದೊಡ್ಡ ಗೌಡರಿಗೆ ತಲೆಬಾಗಿ ಹಿಂಪಡೆದದ್ದು ಯಾವ ಕಾರಣಕ್ಕೆ..? ದ್ವೇಷದ ರಾಜಕಾರಣವನ್ನೇ ಮರೆತು ಹಸ್ತಲಾಘವ ಮಾಡಿರುವುದನ್ನು ಗಮನಿಸಿದರೆ, ಮಾತುಕತೆಯ ಸಮಯದಲ್ಲಿ ಚೆಕ್ಕುಗಳ ಸಪ್ಪಳ, ಹಣದ ಝಳಪಳ ಯಾವ ರೀತಿ ಸದ್ದು ಮಾಡುತ್ತಿದೆ ಎಂದು ಸಾಮಾನ್ಯರು ಊಹಿಸಬಹುದಾಗಿದೆ.

      ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ವಂಚಿತರಾಗಿ ಪಕ್ಷದ ವಿರುದ್ಧವೇ ಬಂಡಾಯ ಎದ್ದು ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದ ಹಾಲಿ ಸಂಸದ ಎಸ್.ಪಿ. ಮುದ್ದಹನುಮೇಗೌಡರ ಮನವೊಲಿಸುವ ಸಂಬಂಧ ಕಾಂಗ್ರೆಸ್ ನಾಯಕರು ನಡೆಸಿದ ಮಾತುಕತೆ ಫಲಪ್ರದವಾಗಿದ್ದು, ತಮ್ಮ ನಾಯಕರ ಒತ್ತಡಕ್ಕೆ ಮಣಿದಿರುವ ಮುದ್ದಹನುಮೇಗೌಡ ಅವರು ಇಂದು ಮಧ್ಯಾಹ್ನ ತಮ್ಮ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ.

      ಸಂಸದ ಮುದ್ದಹನುಮೇಗೌಡರ ಬೆಂಗಳೂರಿನ ಸಂಜಯನಗರದಲ್ಲಿರುವ ನಿವಾಸದಲ್ಲಿಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಸೇರಿದಂತೆ ಕಾಂಗ್ರೆಸ್ ನಾಯಕರು ಮತ್ತೊಂದು ಸುತ್ತಿನ ಮಾತುಕತೆ ನಡೆಸುವ ಜೊತೆಗೆ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು, ಎಸ್‍ಪಿಎಂ ಹಿತೈಷಿಗಳ ಸಭೆಯನ್ನು ಸಹ ನಡೆಸಿ ಮುದ್ದಹನುಮೇಗೌಡರ ನಾಮಪತ್ರ ವಾಪಸ್ ತೆಗೆಸುವ ಸಂಬಂಧ ಮುದ್ದಹನುಮೇಗೌಡರ ಮನವೊಲಿಸುವಲ್ಲಿ ಸಫಲರಾಗಿದ್ದಾರೆ ಎನ್ನಲಾಗಿದೆ.

      ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಿರ್ಧಾರದಿಂದ ಬೇಸತ್ತಿರುವ ಜಿಲ್ಲೆಯ ಕೈ ಕಾರ್ಯಕರ್ತರುಗಳು ರಾಜ್ಯ ನಾಯಕರ ಮನವೊಲಿಕೆಗೆ ಒಂದು ಹಂತದ ವರೆಗೂ ಸೊಪ್ಪು ಹಾಕಲಿಲ್ಲ. ಆದರೂ ಕೈ ನಾಯಕರು ಕಂಗೆಡದೆ ತುಮಕೂರು ಜಿಲ್ಲೆಯ ಕಾರ್ಯಕರ್ತರು ಮತ್ತು ಎಸ್‍ಪಿಎಂ ಬೆಂಬಲಿಗರ ಮನವೊಲಿಸಿ, ಮುಂದಿನ ದಿನಗಳಲ್ಲಿ ಮುದ್ದಹನುಮೇಗೌಡರಿಗೆ ಸೂಕ್ತ ಸ್ಥಾನಮಾನವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

      ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾತ್ರಿ ಮುದ್ದಹನುಮೇಗೌಡರೊಂದಿಗೆ ದೂರವಾಣಿಯಲ್ಲಿ ಚರ್ಚಿಸಿ ನಾಮಪತ್ರ ವಾಪಸ್ ಪಡೆಯುವಂತೆ ಪರಿಪರಿಯಾಗಿ ಮನವಿ ಮಾಡಿದ್ದರು. ಮಾಜಿ ಪ್ರಧಾನಿ ದೇವೇಗೌಡರೇ ಕ್ಷೇತ್ರಕ್ಕೆ ಬಂದಿರುವುದರಿಂದ ಬಂಡಾಯವಾಗಿ ಸ್ಪರ್ಧಿಸುವುದು ಸರಿಯಲ್ಲ. ಅವರ ಗೆಲುವಿಗೆ ಎಲ್ಲರೂ ಒಟ್ಟಾಗಿ ಶ್ರಮಿಸೋಣ, ನಾಮಪತ್ರವನ್ನು ವಾಪಸ್ ಪಡೆಯುವಂತೆ ಕೋರಿದ್ದ ಹಿನ್ನಲೆಯಲ್ಲಿ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ.  ಇದರೊಂದಿಗೆ ಮೈತ್ರಿಕೂಟದ ಅಭ್ಯರ್ಥಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸ್ವಲ್ಪ ಮಟ್ಟಿಗೆ ನಿರಾಳರಾಗಲಿದ್ದಾರೆ.

     ಲೋಕಸಭಾ ಚುನಾವಣೆ ಘೋಷಣೆಯಾಗುವ ಮೊದಲಿನಿಂದಲೂ ತುಮಕೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟು ಕೊಡುವುದಾದರೆ ಪಕ್ಷೇತರವಾಗಿ ಚುನಾವಣೆಗೆ ಸ್ಪರ್ಧಿಸುವುದಾಗಿ ಬಹಿರಂಗವಾಗಿಯೇ ಘೋಷಿಸಿದ್ದ ಮಾಜಿ ಶಾಸಕ ಕೆ.ಎನ್. ರಾಜಣ್ಣ ಅವರು ತಮ್ಮ ಹೇಳಿಕೆಯಂತೆಯೇ ಚುನಾವಣೆಗೆ ಪಕ್ಷೇತರವಾಗಿ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದರು. ಆದರೆ ಪಕ್ಷದ ನಾಯಕರ ಒತ್ತಡಕ್ಕೆ ಮಣಿದು ಅವರೊಂದಿಗೆ ಮಾತುಕತೆ ಫಲಪ್ರದವಾಗಿರುವ ಹಿನ್ನೆಲೆಯಲ್ಲಿ ಇಂದು ತಾವು ಸಲ್ಲಿಸಿದ್ದ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ.

      ಈ ಎಲ್ಲವನ್ನೂ ಗಮನಿಸಿದರೆ, ರಾಜಾಕಾರಣದಲ್ಲಿ ದ್ವೇಷ, ಅಸೂಯೆ, ಸ್ನೇಹ, ಸ್ವಾಭಿಮಾನ ಯಾವುದೂ ಶಾಶ್ವತವಲ್ಲ, ಕೇವಲ ತಮ್ಮ ಸ್ವ-ಹಿತಾಸಕ್ತಿಯೊಂದೇ ಶಾಶ್ವತ ಎನ್ನುವುದನ್ನ ಸಾರುವಂತಾಗಿದೆ.

(Visited 14 times, 1 visits today)
Previous Articleದೇವೇಗೌಡರ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ – ಸಿ.ಬಿ.ಸುರೇಶ್‍ಬಾಬು
Next Article ಮಾಜಿ ಶಾಸಕ ಸುರೇಶ್ ಗೌಡರ ವಿರುದ್ಧ ಬೃಹತ್ ಮೌನ ಪ್ರತಿಭಟನೆ
News Desk Benkiyabale

Related Posts

ನೂತನ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಪುರುಷೋತ್ತಮ ಎಂ.ಎಲ್. ಅವರು ಅಧಿಕಾರ ಸ್ವಿಕಾರ

May 08, 2025 4:40 pm ತುಮಕೂರು

ಹಾಂಗ್ ಕಾಂಗ್‌ನಲ್ಲಿ ಅಂತರಾಷ್ಟಿçÃಯ ಸಾಂಸ್ಕೃತಿಕ ಉತ್ಸವ

May 08, 2025 3:01 pm ತುಮಕೂರು

ಸಿದ್ಧಾರ್ಥ ಕಾಲೇಜಿನ ದಂತ ವೈದ್ಯರಿಂದ ವೃದ್ಧಾಶ್ರಮದಲ್ಲಿ ಉಚಿತ ದಂತ ತಪಾಸಣೆ

May 08, 2025 2:46 pm ತುಮಕೂರು
ತಾಜಾ ಸುದ್ಧಿಗಳು

ನೂತನ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಪುರುಷೋತ್ತಮ ಎಂ.ಎಲ್. ಅವರು ಅಧಿಕಾರ ಸ್ವಿಕಾರ

May 08, 2025 4:40 pm
ತುಮಕೂರು

ಹಾಂಗ್ ಕಾಂಗ್‌ನಲ್ಲಿ ಅಂತರಾಷ್ಟಿçÃಯ ಸಾಂಸ್ಕೃತಿಕ ಉತ್ಸವ

May 08, 2025 3:01 pm
ತುಮಕೂರು

ಸಿದ್ಧಾರ್ಥ ಕಾಲೇಜಿನ ದಂತ ವೈದ್ಯರಿಂದ ವೃದ್ಧಾಶ್ರಮದಲ್ಲಿ ಉಚಿತ ದಂತ ತಪಾಸಣೆ

May 08, 2025 2:46 pm
ತುಮಕೂರು

ತ್ವರಿತವಾಗಿ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಲ್ಯಾಬ್ ಟಾಪ್ ವಿತರಣೆ

May 08, 2025 2:38 pm
ತುಮಕೂರು

ನಿರಂತರ ಅಧ್ಯಯನದಿಂದ ಮಾತ್ರ ಸಾಧನೆ ಸಾಧ್ಯ

May 08, 2025 2:30 pm
ತುಮಕೂರು

ಜಿ.ಎಸ್. ಸಿದ್ಧಲಿಂಗಯ್ಯನವರಿಗೆ ಶ್ರದ್ಧಾಂಜಲಿ

May 08, 2025 2:15 pm
Our Youtube Channel
Our Picks

ಆಯುಕ್ತರಿಂದ ಇಂದಿರಾ ಕ್ಯಾಂಟೀನ್ ಪರಿಶೀಲನೆ

May 08, 2025 2:08 pm

ಎಸ್‌ಎಸ್‌ಎಲ್‌ಸಿಯ ಫಲಿತಾಂಶ: ಹರಿಪ್ರಿಯಾಳ ಉತ್ತಮ ಸಾಧನೆ

May 02, 2025 2:34 pm

ಮಾತು ಕೃತಿಗೆ ಬಂದಾಗ ವ್ಯಕ್ತಿಗೆ ಗೌರವ

April 30, 2025 4:11 pm

ಕಾಯಕವೇ ಕೈಲಾಸ ಎಂದು ಸಾರಿದವರು ಬಸವಣ್ಣ

April 30, 2025 4:09 pm

ಮೇ೫: ಆಟೋ ಚಾಲಕ, ಕಾರ್ಮಿಕರ ನೋಂದಣಿ ಅಭಿಯಾನ

April 30, 2025 4:08 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police police naveen Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss

ನೂತನ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಪುರುಷೋತ್ತಮ ಎಂ.ಎಲ್. ಅವರು ಅಧಿಕಾರ ಸ್ವಿಕಾರ

By News Desk BenkiyabaleMay 08, 2025 4:40 pm

ತುಮಕೂರು: ಗುರುವಾರ ಬೆಳಗ್ಗೆ ೧೧:೦೦ ಗಂಟೆಯ ಸಮಯದಲ್ಲಿ ನೂತನ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಪುರುಷೋತ್ತಮ ಎಂ.ಎಲ್,( ಅಪರಾಧ) ಕೆ.ಎಸ್.ಪಿ.ಎಸ್ ರವರು…

ಹಾಂಗ್ ಕಾಂಗ್‌ನಲ್ಲಿ ಅಂತರಾಷ್ಟಿçÃಯ ಸಾಂಸ್ಕೃತಿಕ ಉತ್ಸವ

May 08, 2025 3:01 pm

ಸಿದ್ಧಾರ್ಥ ಕಾಲೇಜಿನ ದಂತ ವೈದ್ಯರಿಂದ ವೃದ್ಧಾಶ್ರಮದಲ್ಲಿ ಉಚಿತ ದಂತ ತಪಾಸಣೆ

May 08, 2025 2:46 pm

ತ್ವರಿತವಾಗಿ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಲ್ಯಾಬ್ ಟಾಪ್ ವಿತರಣೆ

May 08, 2025 2:38 pm
News by Date
May 2025
M T W T F S S
 1234
567891011
12131415161718
19202122232425
262728293031  
« Apr    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.