Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ನಗರದ ೧೦೦ಕ್ಕೂ ಹೆಚ್ಚು ಬ್ಲಾಕ್ ಸ್ಪಾಟ್‌ಗಳ ಸ್ವಚ್ಛತೆ – ಬಿ.ವಿ. ಅಶ್ವಿಜಾ
  • ಅಂತರ ಸಭೆಗಳ ಕ್ರೀಡಾಕೂಟಕ್ಕೆ ಚಾಲನೆ
  • ಸೆ.೨೯ ಶುಕ್ರವಾರ ಗುಬ್ಬಿ ಬಂದ್
  • ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡಲು ಸಚಿವ ಡಾ.ಜಿ.ಪರಮೇಶ್ವರ ಸೂಚನೆ
  • ಸಾರ್ವಜನಿಕರಿಂದ ಸಲ್ಲಿಸಲ್ಪಡುವ ಅರ್ಜಿಗಳನ್ನು ತಿರಸ್ಕರಿಸಬಾರದು : ಡಾ: ಜಿ.ಪರಮೇಶ್ವರ್
  • ಕಲ್ವತರುನಾಡಿನಲ್ಲಿ ಸಡಗರ ಸಂಭ್ರಮದ ಗೌರಿ-ಗಣೇಶ ಆಚರಣೆ
  • ಬರಗಾಲ ಪೀಡಿತ ರಾಜ್ಯವನ್ನಾಗಿ ಘೋಷಿಸಲು ಸಿಪಿಐ(ಎಂ) ಅಗ್ರಹ
  • ನÀಗರದಾದ್ಯಂತ ಸ್ವಚ್ಛತಾ ಕಾರ್ಯಕ್ರಮ : ಅಶ್ವಿಜ
Facebook Twitter Instagram YouTube RSS
Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Benkiyabale
Home » ಶಬರಿ ಮಲೆಗೆ ಮಹಿಳೆಯರ ಪ್ರವೇಶ : ಪ್ರತಿಭಟನೆ
Trending

ಶಬರಿ ಮಲೆಗೆ ಮಹಿಳೆಯರ ಪ್ರವೇಶ : ಪ್ರತಿಭಟನೆ

By News Desk BenkiyabaleUpdated:January 03, 2019 3:50 pm

 ತುಮಕೂರು:

      ಮಹಿಳೆಯರು ಶಬರಿಮಲೆ ದೇಗುಲವ ಪ್ರವೇಶಿಸಿರುವುದು ದಾಖಲೆಗಷ್ಟೇ ಹೊರತು ಅವರಿಗೆ ದೇವರ ದರ್ಶನವಾಗಿಲ್ಲ, ಮಹಿಳೆಯರನ್ನು ಕರೆದುಕೊಂಡು ಹೋಗಿ ದರ್ಶನ ಮಾಡಿಸುವಂತಹ ಅಚಾತುರ್ಯವನ್ನು ಕೇರಳ ಸರ್ಕಾರ ಮಾಡಿರುವುದು ಸರಿಯಲ್ಲ ಎಂದು ಅಯ್ಯಪ್ಪಸ್ವಾಮಿ ಸೇವಾ ಸಮಾಜಂನ ರಾಷ್ಟ್ರೀಯ ಅಧ್ಯಕ್ಷ ಟಿ.ಬಿ.ಶೇಖರ್ ಹೇಳಿದರು.

      ನಗರದ ಟೌನ್‍ಹಾಲ್ ಸರ್ಕಲ್‍ನಲ್ಲಿ ಶಬರಿಮಲೆಗೆ ಮಹಿಳೆಯ ಪ್ರವೇಶಿಸಿರುವುದನ್ನು ವಿರೋಧಿಸಿ ಹಿಂದೂ ಪರ ಸಂಘಟನೆಗಳು ನಡೆಸಿದ ಮಾನವ ಸರಪಳಿ ನಿರ್ಮಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಶಬರಿಮಲೆಗೆ ಮಹಿಳೆಯರನ್ನು ಕರೆದುಕೊಂಡು ಹೋಗಿ ದರ್ಶನ ಮಾಡಿಸಿರುವ ಪಿಣರಾಯಿ ಅವರ ಕಮ್ಯುನಿಸ್ಟ್ ಸರ್ಕಾರ ಅಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆಯನ್ನು ಮಾಡಿದೆ, ಪಿಣರಾಯಿ ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ, ಎಲ್ಲ ಸಂಘಟನೆಗಳೊಂದಿಗೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

      ಕಮ್ಯುನಿಸ್ಟ್ ಸರ್ಕಾರದ ವಿರುದ್ಧ ಈಗಾಗಲೇ ಕೇರಳದಲ್ಲಿ ಅಯ್ಯಪ್ಪಸ್ವಾಮಿ ಆ್ಯಕ್ಷನ್ ಕೌನ್ಸಿಲ್ ಮೂಲಕ ಹೋರಾಟಕ್ಕೆ ಮುಂದಾಗಿದೆ. ಈ ಕೌನ್ಸಿಲ್‍ನ ಹೆಸರಲ್ಲಿನ ಇಂದು ಕೇರಳ ಬಂದ್‍ಗೆ ಕರೆ ನೀಡಲಾಗಿದೆ, 14 ರಾಜ್ಯಗಳಲ್ಲಿ ಶಬರಿಮಲೆಗೆ ಮಹಿಳೆಯರ ಪ್ರವೇಶದ ವಿರುದ್ಧ ಪ್ರತಿಭಟನೆ ನಡೆಸುವ ಮೂಲಕ ಕೇರಳಬಂದ್‍ಗೆ ಬೆಂಬಲ ನೀಡಲಾಗುತ್ತಿದೆ. ಪಿಣರಾಯಿ ಸರ್ಕಾರಕ್ಕೆ ಇದು ಕೊನೆಗಾಲವಾಗಿದ್ದು, ಹಿಂದೂ ಭಾವನೆಗಳ ಮೇಲೆ ನಡೆಸುತ್ತಿರುವ ದಬ್ಬಾಳಿಕೆ ನಿಲ್ಲಿಸದೇ ಹೋದಲ್ಲಿ ತೀವ್ರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಅಯ್ಯಪ್ಪಸ್ವಾಮಿ ಸೇವಾ ಸಮಾಜಂನ ರಾಷ್ಟ್ರೀಯ ಅಧ್ಯಕ್ಷ ಟಿ.ಬಿ.ಶೇಖರ್ ತಿಳಿಸಿದರು.

      ಹಿಂದೂ ಜಾಗರಣ ವೇದಿಕೆಯ ಜಿ.ಎಸ್.ಬಸವರಾಜು ಮಾತನಾಡಿ, ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶದ ಹಿಂದೆ ಅಂತರಾಷ್ಟ್ರೀಯ ಕುತಂತ್ರವಿದ್ದು, ಕಮ್ಯುನಿಸ್ಟ್ ಸರ್ಕಾರ ಈ ಕುತಂತ್ರಕ್ಕೆ ಕುಮ್ಮಕ್ಕು ನೀಡುವ ಮೂಲಕ ಅನ್ಯಧರ್ಮಿಯ ಮಹಿಳೆಯರನ್ನು ಶಬರಿಮಲೆ ದೇಗುಲ ಪ್ರವೇಶಿಸುವಂತೆ ಉತ್ತೇಜನ ನೀಡುತ್ತಿದೆ ಎಂದು ಆರೋಪಿಸಿದರು.

      ಭಾರತದಲ್ಲಿರುವ 24 ಲಕ್ಷ ದೇಗುಲಗಳಲ್ಲಿ ಕೆಲವೇ ಕೆಲವು ದೇಗುಲಗಳಿಗಷ್ಟೇ ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಗಿದೆ, ಹಾಗೆಯೇ ಕೆಲವು ದೇಗುಲಗಳಿಗೆ ಪುರುಷರ ಪ್ರವೇಶವನ್ನು ನಿಷೇಧಿಸಲಾಗಿದೆ. ಆದರೆ ಈ ದೇಗುಲಗಳ ಪ್ರವೇಶಕ್ಕೆ ಯಾರು ಸುಪ್ರೀಂಕೋರ್ಟ್ ಮೊರೆ ಹೋಗುವುದಿಲ್ಲ, ದಕ್ಷಿಣ ಭಾರತದಲ್ಲಿಯೇ 4-5 ಕೋಟಿ ಭಕ್ತರು ಪ್ರತಿ ವರ್ಷ ಹೋಗುವ ಶಬರಿ ಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂಕೋರ್ಟ್ ಮೊರೆ ಹೋಗುವ ಮೂಲಕ, ದೇಗುಲದ ಪಾವಿತ್ರ್ಯತೆಯನ್ನು ಹಾಳು ಮಾಡುವ ಪ್ರಯತ್ನವನ್ನು ಕೆಲ ಪ್ರಗತಿಪರರೊಂದಿಗೆ ಸೇರಿಕೊಂಡು ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

      ಪಿಣರಾಯಿ ಸರ್ಕಾರ ಹಿಂದೂ ವಿರೋಧಿ ಧೋರಣೆ ಅನುಸರಿಸುವುದನ್ನು ಬಿಡಬೇಕಿದೆ, ಹಿಂದೂಗಳನ್ನು ಕೆರಳಿಸಬೇಡಿ, ಹಿಂದೂಗಳು ಕೆರಳಿದರೆ ಗೋಧ್ರಾ ಘಟನೆ ನಂತರ ಪರಿಣಾಮ ಎದುರಿಸಬೇಕಾಗುತ್ತದೆ, ಸುಪ್ರೀಂಕೋರ್ಟ್ ಆದೇಶದ ಹೆಸರಿನಲ್ಲಿ ಕಮ್ಯುನಿಸ್ಟ್ ಸರ್ಕಾರ ಕುತಂತ್ರದ ಹಿಂದೂಗಳನ್ನು ಹಣೆಯುವ ಪ್ರಯತ್ನವನ್ನು ಬಿಡಬೇಕು ಎಂದು ಎಚ್ಚರಿಸಿದರು.

      ಭಜರಂಗ ದಳದ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಮಾತನಾಡಿ ಹಿಂದೂಗಳು ಇಂದು ದಾಸ್ಯರಾಗಿರುವುದರಿಂದಲೇ ಕಮ್ಯುನಿಸ್ಟ ಸರ್ಕಾರ ಹಿಂದೂ ದೇವರಿಗೆ ಅಪಚಾರ ಮಾಡುತ್ತಿದೆ. ಮುಸ್ಲಿಂ, ಕ್ರಿಶ್ಚಿಯನ್ ಮಹಿಳೆಯರಿಗೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಪ್ರೇರೇಪಿಸುತ್ತಿದೆ. ಮುಸಲ್ಮಾನರಿಗೆ, ಬ್ರಿಟೀಷರಿಗೆ ಭಾರತವನ್ನಾಳಲು ಅವಕಾಶ ಮಾಡಿಕೊಟ್ಟಿದ್ದು ಸಹ ಹಿಂದೂಗಳು, ಅವರ ಸೌಮ್ಯತ್ವದಿಂದಲೇ ಇಂದು ಕಮ್ಯುನಿಸ್ಟರು ಹಿಂದೂಗಳ ಮೇಲೆ ದಬ್ಬಾಳಿಕೆ ಮಾಡುತ್ತಿದ್ದರು ವಿರೋಧಿಸದೇ ದಾಸ್ಯದಿಂದ ಬದುಕುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

      ಹಿಂದೂಗಳು ಮೇಲೆ ಎಷ್ಟೇ ದಬ್ಬಾಳಿಕೆ ನಡೆದರೂ, ಹಿಂದೂಗಳು ಒಂದಾಗುವುದಿಲ್ಲ, ಶಬರಿಮಲೆಗೆ ಮಹಿಳೆಯರು ಪ್ರವೇಶಿಸಿ ಸಂಪ್ರದಾಯವನ್ನು ಉಲ್ಲಂಘಿಸಿದಂತೆ, ಅನ್ಯ ಧರ್ಮದ ವಿಚಾರದಲ್ಲಿ ನಡೆದಿದ್ದರೆ ಎಲ್ಲರೂ ಒಂದಾಗಿ ವಿರೋಧಿಸುತ್ತಿದ್ದರು, ಹಿಂದೂ ಧರ್ಮವನ್ನು ಕಾಪಾಡಲು ಉಗ್ರ ಹೋರಾಟಕ್ಕೆ ಮುಂದಾಗಬೇಕಿದೆ, ಇದು ಅನಿವಾರ್ಯವಾಗಿದೆ ಎಂದು ಕರೆ ನೀಡಿದರು.

      ಅಯ್ಯಪ್ಪ ಸ್ವಾಮಿ ಸೇವಾ ಸಮಾಜಂನ ಮುಖಂಡ ಕೃಷ್ಣಯ್ಯ ಮಾತನಾಡಿ, ಶಬರಿಮಲೆ ದೇಗುಲಕ್ಕೆ ಮುಸ್ಲಿಂ ಮಹಿಳೆಯೊಬ್ಬಳು ಪೊಲೀಸರೊಂದಿಗೆ ಪ್ರವೇಶಿಸಲು ಯತ್ನಿಸಿದಾಗ ಆಕೆ ಇರುಮಂಡಿಯಲ್ಲಿ ಒಳ ಉಡುಪುಗಳನ್ನು ತಂದಿದ್ದಳು, ಅಂತಹ ಧರ್ಮ ವಿರೋಧಿಗಳಿಗೆ ಕೇರಳ ಸರ್ಕಾರ ಬೆಂಬಲ ನೀಡುತ್ತಿದೆ, ಹಿಂದೂ ಧಾರ್ಮಿಕ ಭಾವನೆಗಳಿಗೆ ಘಾಸಿಯುಂಟು ಮಾಡಬೇಕೆಂದು ಮಹಿಳೆಯರನ್ನು ದೇಗುಲಕ್ಕೆ ಮಾರುವೇಷದಲ್ಲಿ ಪೊಲೀಸರೊಂದಿಗೆ ಕಳುಹಿಸಿದೆ, ಮಹಿಳೆಯರು ದೇಗುಲಕ್ಕೆ ಹೋದರು ದೇವರ ದರ್ಶನವಾಗಿಲ್ಲ ಎನ್ನುವುದು ವಿಡಿಯೋದಲ್ಲಿಯೇ ಗೊತ್ತಾಗುತ್ತದೆ, ಅಯ್ಯಪ್ಪ ಸ್ವಾಮಿ ಭಕ್ತರು ಇದರ ವಿರುದ್ಧ ಹೋರಾಡದೇ ಇದ್ದಲ್ಲಿ ದೇಗುಲದ ಪವಿತ್ರತೆಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಕಳವಳ ವ್ಯಕ್ತಿಪಡಿಸಿದರು.

      ಅಯ್ಯಪ್ಪಸ್ವಾಮಿ ಸೇವಾ ಸಮಾಜಂನ ಜಿಲ್ಲಾಧ್ಯಕ್ಷ, ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಹುಲಿನಾಯ್ಕರ್ ಮಾತನಾಡಿದರು, ಪ್ರತಿಭಟನೆಯಲ್ಲಿ ಮುಖಂಡರಾದ ರವೀಶಯ್ಯ, ಜಿ.ಕೆ.ಶ್ರೀನಿವಾಸ್, ಧನುಶ್, ಶಿವಪ್ರಸಾದ್, ಪಾಲಿಕೆ ಸದಸ್ಯರಾದ ರಮೇಶ್, ವಿಷ್ಣು, ಗಿರಿಜಾ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

  

(Visited 50 times, 1 visits today)
Previous Articleಶ್ರೀಗಳು ಬೇಗ ಹುಷಾರಾಗಲೆಂದು ಬಾಹುಬಲಿ ಪ್ರಾರ್ಥನೆ ಮಾಡಿದ್ದೇವೆ
Next Article 2019ರ ಎಂ.ಪಿ.ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಯಾಗಿ ಎಸ್.ಪಿ.ಎಂ. ಕಣಕ್ಕೆ
News Desk Benkiyabale

Related Posts

ಅಂತರ ಸಭೆಗಳ ಕ್ರೀಡಾಕೂಟಕ್ಕೆ ಚಾಲನೆ

September 30, 2023 5:03 pm ತುಮಕೂರು

ಸೆ.೨೯ ಶುಕ್ರವಾರ ಗುಬ್ಬಿ ಬಂದ್

September 27, 2023 4:34 pm ತುಮಕೂರು

ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡಲು ಸಚಿವ ಡಾ.ಜಿ.ಪರಮೇಶ್ವರ ಸೂಚನೆ

September 27, 2023 4:32 pm ತುಮಕೂರು
ತಾಜಾ ಸುದ್ಧಿಗಳು
ಇತರೆ ಸುದ್ಧಿಗಳು

ನಗರದ ೧೦೦ಕ್ಕೂ ಹೆಚ್ಚು ಬ್ಲಾಕ್ ಸ್ಪಾಟ್‌ಗಳ ಸ್ವಚ್ಛತೆ – ಬಿ.ವಿ. ಅಶ್ವಿಜಾ

September 30, 2023 5:06 pm
ತುಮಕೂರು

ಅಂತರ ಸಭೆಗಳ ಕ್ರೀಡಾಕೂಟಕ್ಕೆ ಚಾಲನೆ

September 30, 2023 5:03 pm
ತುಮಕೂರು

ಸೆ.೨೯ ಶುಕ್ರವಾರ ಗುಬ್ಬಿ ಬಂದ್

September 27, 2023 4:34 pm
ತುಮಕೂರು

ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡಲು ಸಚಿವ ಡಾ.ಜಿ.ಪರಮೇಶ್ವರ ಸೂಚನೆ

September 27, 2023 4:32 pm
ಇತರೆ ಸುದ್ಧಿಗಳು

ಸಾರ್ವಜನಿಕರಿಂದ ಸಲ್ಲಿಸಲ್ಪಡುವ ಅರ್ಜಿಗಳನ್ನು ತಿರಸ್ಕರಿಸಬಾರದು : ಡಾ: ಜಿ.ಪರಮೇಶ್ವರ್

September 25, 2023 5:06 pm
ತುಮಕೂರು

ಕಲ್ವತರುನಾಡಿನಲ್ಲಿ ಸಡಗರ ಸಂಭ್ರಮದ ಗೌರಿ-ಗಣೇಶ ಆಚರಣೆ

September 20, 2023 5:12 pm
Our Youtube Channel
Our Picks

ನಗರದ ೧೦೦ಕ್ಕೂ ಹೆಚ್ಚು ಬ್ಲಾಕ್ ಸ್ಪಾಟ್‌ಗಳ ಸ್ವಚ್ಛತೆ – ಬಿ.ವಿ. ಅಶ್ವಿಜಾ

September 30, 2023 5:06 pm

ಸಾರ್ವಜನಿಕರಿಂದ ಸಲ್ಲಿಸಲ್ಪಡುವ ಅರ್ಜಿಗಳನ್ನು ತಿರಸ್ಕರಿಸಬಾರದು : ಡಾ: ಜಿ.ಪರಮೇಶ್ವರ್

September 25, 2023 5:06 pm

ಬರಗಾಲ ಪೀಡಿತ ರಾಜ್ಯವನ್ನಾಗಿ ಘೋಷಿಸಲು ಸಿಪಿಐ(ಎಂ) ಅಗ್ರಹ

September 20, 2023 5:11 pm

ಮಾಹಿತಿ ಶಿಕ್ಷಣ ಸಂವಹನ ವಿಶೇಷ ಕಾರ್ಯಕ್ರಮ

August 22, 2023 5:18 pm

ಹೋಬಳಿ ಮಟ್ಟದ ಜನಸಂಪರ್ಕ ಸಭೆ ಮೂಲಕ ಸಮಸ್ಯೆ ಬಗೆಹರಿಸಲು ಕೆ.ಎನ್.ರಾಜಣ್ಣ ಸೂಚನೆ

August 17, 2023 4:52 pm
News Tags
Accident Ambedkar Araga jnanendra BJP Bommai Ceo Chikkanayakanahalli Congress corona Cpim crime DC dss epaper gs basavaraju Gubbi jc madhuswamy Jds jyothiganesh Kn rajanna kodigenahalli Koratagere kumaraswamy kunigal madhugiri Mla Mla jyothiganesh mla shrinivas mlc r.rajendra Parameshwar pavagada Police police naveen Protest r.ashok R. Rajendra tumakur tumkur Tumkur dc yspatil Tumkur mahanagara palike tumur turuvekere University Vasanna YSpatil
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm

ಯೌವನಕ್ಕೆ “ವಿವೇಕಾನಂದದೀಕ್ಷೆ’’ ಕೊಡಿ

September 19, 2020 6:23 pm
Don't Miss
ಇತರೆ ಸುದ್ಧಿಗಳು

ನಗರದ ೧೦೦ಕ್ಕೂ ಹೆಚ್ಚು ಬ್ಲಾಕ್ ಸ್ಪಾಟ್‌ಗಳ ಸ್ವಚ್ಛತೆ – ಬಿ.ವಿ. ಅಶ್ವಿಜಾ

By News Desk BenkiyabaleSeptember 30, 2023 5:06 pm

ತುಮಕೂರು ಪಾಲಿಕೆ ವ್ಯಾಪ್ತಿಯಲ್ಲಿ ೪೦೦ ಸ್ವಸಹಾಯ ಗುಂಪಿನ ಸದಸ್ಯರು ಹಾಗೂ ನಗರಸಭಾ ಸದಸ್ಯರನ್ನು ತೊಡಗಿಸಿಕೊಂಡು ಹೆಚ್ಚಾಗಿ ಕಸ ಬಿದ್ದಿರುವ ೧೦೦ಕ್ಕೂ…

ಅಂತರ ಸಭೆಗಳ ಕ್ರೀಡಾಕೂಟಕ್ಕೆ ಚಾಲನೆ

September 30, 2023 5:03 pm

ಸೆ.೨೯ ಶುಕ್ರವಾರ ಗುಬ್ಬಿ ಬಂದ್

September 27, 2023 4:34 pm

ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡಲು ಸಚಿವ ಡಾ.ಜಿ.ಪರಮೇಶ್ವರ ಸೂಚನೆ

September 27, 2023 4:32 pm
News by Date
October 2023
M T W T F S S
 1
2345678
9101112131415
16171819202122
23242526272829
3031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2023 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.