BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಡಯಾಬಿಟಿಕ್ ಪುಟ್ ಕಾಯಿಲೆಯನ್ನು ಆರಂಭದಲ್ಲೇ ಗುರುತಿಸಿ
  • ಅಸಹಾಯಕ ಮಹಿಳೆಯನ್ನು ದತ್ತು ಪಡೆದ ಇಕ್ಬಾಲ್ ಅಹಮದ್
  • ಬದಲಾವಣೆ ಅಗತ್ಯ ಎಂಬ ಹೆಸರಿನಲ್ಲಿ ರಾಜಕೀಯ ಅಭಿಯಾನ
  • ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಜಾಗೃತಿ ಕಾರ್ಯಕ್ರಮ
  • ಮಕ್ಕಳು ಕಲೆ ಕಲಿತು ಭವಿಷ್ಯದ ಪ್ರತಿಭೆಗಳಾಗಿ: ಈಶ್ವರ್ ಕು.ಮಿರ್ಜಿ
  • ರೈತರ ಬೃಹತ್ ಪಾದಯಾತ್ರೆಗೆ ಚಾಲನೆ
  • ಬೈಕ್ ಅಪಘಾತಕ್ಕೆ ವಿದ್ಯಾರ್ಥಿ ಬಲಿ
  • ನವಜಾತ ಶಿಶುವಿಗೆ ತಾಯಿಯ ಹಾಲಿನಿಂದ ರೋಗನಿರೋಧಕ ಶಕ್ತಿ ವೃದ್ಧಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ತುಮಕೂರಿನಲ್ಲಿ ಭೀಕರ ಕೊಲೆ ; ಬೆಚ್ಚಬಿದ್ದ ಜನತೆ!
Trending

ತುಮಕೂರಿನಲ್ಲಿ ಭೀಕರ ಕೊಲೆ ; ಬೆಚ್ಚಬಿದ್ದ ಜನತೆ!

By News Desk BenkiyabaleUpdated:November 08, 2019 6:52 pm

ತುಮಕೂರು : 

      ನಗರದಲ್ಲಿ ಮತ್ತೊಂದು ಭೀಕರ ಕೊಲೆಯಾಗಿದೆ.

      ತುಮಕೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ನಾಗಣ್ಣನ ಪಾಳ್ಯದಲ್ಲಿ ಸಂಜೆ 4.30 ಸುಮಾರಿನಲ್ಲಿ ಮಹಾಂತೇಶ್ ಮತ್ತು ಮಂಜುನಾಥ್ ಎಂಬುವರಿಬ್ಬರ ಮೇಲೆ ಭೀಕರ ಸ್ವರೂಪದಲ್ಲಿ ಹಲ್ಲೆ ಮಾಡಿದ್ದಾರೆ.

      ಲಾಂಗು ಮತ್ತು ಮಚ್ಚು ಹಾಗೂ ಇತರೆ ಮಾರಕಾಸ್ತ್ರಗಳನ್ನು ಹಿಡಿದುಬಂದ ರೌಡಿಗಳ ಗುಂಪು ಅಮಾನವೀಯವಾಗಿ ಹಲ್ಲೆ ಮಾಡಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಾಂತೇಶ್ ಹಾಗೂ ಮಂಜುನಾಥ್ ರವರನ್ನ ಆಸ್ಪತ್ರೆಗೆ ದಾಖಲು ಮಾಡಿದ್ದು, ಆಸ್ಪತ್ರೆಯಲ್ಲಿ ಮಹಾಂತೇಶ್ ಕೊನೆಯುಸಿರೆಳೆದಿದ್ದಾರೆ.

      ಮಹಾಂತೇಶ್ ಮತ್ತು ಚಿನ್ನು ಎನ್ನುವವರ ನಡುವೆ ಆಗಾಗ ಗಲಾಟೆ-ಗದ್ದಲಗಳು ನಡೆಯುತ್ತಿತ್ತು.  ಚಿನ್ನು ಎನ್ನುವ ರೌಡಿ ಕುಖ್ಯಾತ ರೌಡಿ ರೋಹಿತ್ ನ ಶಿಷ್ಯನಾಗಿದ್ದು, ಮುಂದಾಗಬಹುದಾದ ಅನಾಹುತವನ್ನು ಗಮನಿಸಿ ಈ ಹಿಂದೆಯೇ ನಗರ ವೃತ್ತ ನಿರೀಕ್ಷಕ ಚಂದ್ರಶೇಖರ್ ರವರು ಮಹಾಂತೇಶ ಮತ್ತು ಚಿನ್ನುವನ್ನ ಕರೆಸಿ ಬುದ್ಧಿ ಹೇಳಿ ಎಚ್ಚರಿಕೆ ನೀಡಿದ್ದರು. ಆದರೆ, ಆಂತರಿಕವಾಗಿ ಚಿನ್ನು ಮತ್ತು ಮಹಾಂತೇಶನ ನಡುವೆ ವೈರತ್ವ ಹಸಿ-ಹಸಿಯಾಗಿತ್ತು ಎನ್ನಲಾಗುತ್ತಿದೆ. ಹತ್ಯೆಯಾದ ಮಹಾಂತೇಶ ಕಳೆದ 1 ವರ್ಷದ ಹಿಂದೆ ಮದುವೆಯಾಗಿದ್ದು, ಮದುವೆಯಾದ ನಂತರ ತನ್ನ ಪುಂಡಾಟಿಕೆಯನ್ನ ಕಡಿಮೆ ಮಾಡಿಕೊಂಡಿದ್ದ. ಚಿನ್ನುವಿನ ಹಗೆತನದಿಂದ ತನಗೆ ಯಾವುದೇ ಅನಾಹುತವಾಗಬಾರದೆಂದು ಕೆಲವು ಪೊಲೀಸರ ವಿಶ್ವಾಸವನ್ನ ಗಳಿಸಿಕೊಂಡಿದ್ದ.

ನೆನ್ನೆ ನ.6 ರ ಬುಧವಾರ ತುಮಕೂರು ನಗರದಲ್ಲಿರುವ ಎಲ್ಲಾ ರೌಡಿಗಳ ಮನೆ ಮತ್ತು ಅಡಗುತಾಣಗಳ ಮಾಹಿತಿ ಕಲೆಹಾಕಿ ದಿಢೀರ್ ದಾಳಿ ಮಾಡಲಾಗಿತ್ತು. ಆ ದಾಳಿಯ ಸಂದರ್ಭದಲ್ಲಿ ಕುಖ್ಯಾತ ರೌಡಿ ರೋಹಿತ್ ಮತ್ತು ಅವನ ಗ್ಯಾಂಗಿನ ಕೆಲವರನ್ನ ಬಂಧಿಸಿ ಜೈಲಿಗೆ ಕಳಿಸಿದ್ದರು. ಬಂಧನದ ಸಮಯದಲ್ಲಿ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು. 

     ಜೈಲು ಸೇರಿದ್ದ ಕುಖ್ಯಾತ ರೌಡಿಯೊಬ್ಬನಿಗೆ ತನ್ನ ಬಗ್ಗೆ ಸುಳಿವು ನೀಡಿದ್ದು ಮಹಾಂತೇಶನೆಂಬ ಅನುಮಾನ ಉಕ್ಕಿರುವ ಸಾಧ್ಯತೆಗಳಿದೆ. ಏಕೆಂದರೆ ಹತ್ಯೆ ಮಾಡಿದ ಆರೋಪ ಹಾಗೂ ಅನುಮಾನ ಚಿನ್ನು ಮತ್ತು ಅವರ ಗ್ಯಾಗ್ ನ ಮೇಲಿದ್ದು, ಚಿನ್ನು ತನ್ನ ನಾಯಕನ ಆದೇಶವನ್ನ ಮೀರುವಂತಿಲ್ಲ. ಹಾಗಾಗಿ ಚಿನ್ನು ಮತ್ತು ಮಹಾಂತೇಶನ ಹಗೆತನ ಮನಗಂಡ  ಜೈಲು ಸೇರಿದ್ದ ರೌಡಿ ಜೈಲಿನೊಳಗಿದ್ದುಕೊಂಡೇ ಈ ಹತ್ಯೆಗೆ ಸಂಚು ರೂಪಿಸಿ ತನ್ನ ಶಿಷ್ಯ ಚಿನ್ನು ಮತ್ತು ಅವನ ಗ್ಯಾಂಗ್ ನಿಂದ ಈ ಕೊಲೆಯನ್ನ ಮಾಡಿಸಿರಬಹುದೆಂಬ ಅನುಮಾನವನ್ನು ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ.

      ಕಳೆದ ಹತ್ತು ದಿನಗಳಿಂದ ಒಟ್ಟು ಮೂರು ಬರ್ಬರ ಹತ್ಯೆಗಳಾಗಿದ್ದು, ಮೂರು ಕೊಲೆ ಯತ್ನದ ಪ್ರಯತ್ನಗಳು ನಡೆದಿವೆ. ತುಮಕೂರು ಪೊಲೀಸರು ನಿದ್ದೆಗೆಡುವಂತ ಪರಿಸ್ಥಿತಿ ಎದುರಾಗುತ್ತಿದೆ. ಕುಖ್ಯಾತ ರೌಡಿಗಳು ಹಾಗೂ ಅವರ ಸಹಚರರ ಅಟ್ಟಹಾಸಕ್ಕೆ ಕಡಿವಾಣ ಹಾಕದಿದ್ದರೆ ನಗರದ ನಾಗರೀಕರು ನಿರಾತಂಕವಾಗಿ ಜೀವನ ಸಾಗಿಸುವುದು ಕಷ್ಟವಾಗುತ್ತದೆ.

    ಹತ್ಯೆ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ||ಕೋನ ವಂಶಿಕೃಷ್ಣ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ಜೆ.ಉದೇಶ್, ಡಿವೈಎಸ್‍ಪಿ ತಿಪ್ಪೇಸ್ವಾಮಿ, ಸಬ್ ಇನ್ಸ್‍ಪೆಕ್ಟರ್ ವಿಜಯಲಕ್ಷ್ಮೀ ಇನ್ನಿತರರು ಭೇಟಿ ನೀಡಿ ಹತ್ಯೆ ಮತ್ತು ಹತ್ಯೆಯ ಘೊರತೆಯನ್ನ ಪರಿಶೀಲಿಸಿದ್ದಾರೆ.

ತುಮಕೂರು ನಗರದಲ್ಲಿ ದಿನನಿತ್ಯವೂ ರಕ್ತಪಾತ ನಡೆಯುತ್ತಿದ್ದು, ನಗರ ನಾಗರೀಕರ ನೆಮ್ಮದಿ ಹದಗೆಟ್ಟಿದೆ. ನಡುರಸ್ತೆಯಲ್ಲಿ ಎಲ್ಲೆಂದರಲ್ಲಿ ಲಾಂಗು-ಮಚ್ಚುಗಳ ರೌದ್ರನರ್ತನ, ರೌಡಿಗಳ ಅಟ್ಟಹಾಸ, ರಸ್ತೆ-ರಸ್ತೆಗಳಲ್ಲಿ ಹರಿಯುತ್ತಿರುವ ರಕ್ತಪಾತ, ಪುಂಡರ ಹಾವಳಿ, ವಂಚಕರ ಹಿಂಡು ಹಾಡಹಗಲೇ ರಾಜಾರೋಷವಾಗಿ ಮೆರೆಯುತ್ತಿದೆ ಎಂದರೆ ತುಮಕೂರು ನಗರದ ಪೊಲೀಸರ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಕಳೆದ ಹತ್ತು ದಿನಗಳಲ್ಲಿ ಮೂರು ಬರ್ಬರ ಹತ್ಯೆಗಳು, ಮೂರು ಕೊಲೆಯ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದೆ. ಇದಕ್ಕೆ ಮೂಲ ಕಾರಣ ತುಮಕೂರು ನಗರಗಳಲಿರುವ ಪೊಲೀಸ್ ಠಾಣೆಗಳ ಪೊಲೀಸ್ ಅಧಿಕಾರಿಗಳು ತಮ್ಮ ಕಾರ್ಯಕ್ಷಮತೆಯನ್ನ ಪ್ರದರ್ಶಿಸದಿರುವುದು. ರೈಲ್ವೇ ಸ್ಟೇಷನ್ ರಸ್ತೆಯಲ್ಲಿ ನಡೆದ ಗ್ಯಾಂಗ್ ವಾರ್ ನ ನಂತರ ನಗರದಲ್ಲೆಲ್ಲಾ ರೌಡಿಗಳ ಮನೆಯ ಮೇಲೆ ಆದಂತಹ ದಾಳಿಗಳು ಕೇವಲ ನೆಪಮಾತ್ರಕ್ಕೆ. ಫೋಟೋಗಳಲ್ಲಿ ಕಾಣುವ ಫೋಜುಗಳು ಠಾಣೆಯಲ್ಲಿ ನಡೆಯುವ ಅಕ್ರಮಗಳು ಒಂದಕ್ಕೊಂದು ತಾಳೆಯಾಗುತ್ತಿಲ್ಲ. ನೆನ್ನೆ ಸಂಜೆ ನಡೆದ ಮಹೇಶನ ಹತ್ಯೆಗೆ ಬಹು ಮುಖ್ಯ ಕಾರಣ ಪೊಲೀಸರ ಅಸಹಾಯಕತೆ ಮತ್ತು ಅಸಹಕಾರ. ರೋಹಿತ ಮನೆಯಲ್ಲಿ ಅಡಗಿರುವ ಮಾಹಿತಿಯನ್ನು ರವಾನಿಸಿದ ಮಹಾಂತೇಶನ ವಿಚಾರವನ್ನ ನಗರ ಠಾಣೆಯಲ್ಲಿ ಕುಖ್ಯಾತ ರೌಡಿ ರೋಹಿತನಿಗೆ ಹೇಳುವ ಅನಿವಾರ್ಯತೆಯಾದರೂ ಇತ್ತೇ… ಅವನು ಹೇಳಿದ ಆ ಒಂದು ಮಾಹಿತಿ ವiಹಾಂತೇಶನ ಕೊಲೆಗೆ ಮುಖ್ಯ ಕಾರಣವಾಗಿತ್ತು. ಪೊಲೀಸರಿಗೆ ನೀಡಿದ್ದ ಗೌಪ್ಯ ಮಾಹಿತಿಯನ್ನು ಹೊರಹಾಕಬಾರದು ಎಂಬು ಕನಿಷ್ಟ ಸೌಜನ್ಯವೂ ಇಲ್ಲದ ಕೆಲವರು ಪರೋಕ್ಷವಾಗಿ ಮಹಾಂತೇಶನ ಹತ್ಯೆಗೆ ಕಾರಣೀಭೂತರಾಗಿದ್ದಾರೆ. ಹತನಾದ ಮಹಾಂತೇಶನ ಆಧಾರದ ಮೇಲೆ ರೋಹಿತನ ಮನೆಗೆ ರೋಹಿತನನ್ನು ಬಂಧಿಸಲು ಕೇವಲ ಕ್ರೈಂ ಪೊಲೀಸರಲ್ಲದೇ , ಇನ್ಸ್‍ಪೆಕ್ಟರ್, ಸಬ್ ಇನ್ಸ್‍ಪೆಕ್ಟರ್‍ಗಳು, ಡಿವೈಎಸ್‍ಪಿ ನಂತರದ ಅಧಿಕಾರಿಗಳು ಆತನನ್ನ ಬಂಧಿಸಲು ಹೋದದ್ದು ಇಲಾಖೆಯ ಮತ್ತೊಂದು ದುರಂತ. ಒಬ್ಬ ರೌಡೀಶೀಟರ್‍ನನ್ನು ಬಂಧಿಸಲು ಅಷ್ಟೊಂದು ಜನ ಅಧಿಕಾರಿಗಳು ಮತ್ತು ಸಿಬ್ಬಂಧಿ ತೆರಳುವ ಅನಿವಾರ್ಯತೆ ಇತ್ತೇ.. ಎಲ್ಲರೂ ಹೋಗಿ ಬಂಧಿಸಿ ಕರೆತರುವ ಸಂದರ್ಭದಲ್ಲಿ ರೌಡಿ ರೋಹಿತನ ಮನೆಯ ಸಿಸಿ ಕ್ಯಾಮೆರಾದ ಡಿವಿಆರ್‍ನ್ನು ಕಳಚಿಕೊಂಡು ಬಂದದ್ದು ಯಾವ ಪುರುಷಾರ್ಥಕ್ಕೆ..ರೋಹಿತನ ಜೊತೆ ಆತನ ಇಡೀ ಸಹಚರರನ್ನು ಬಂಧಿಸದಿರುವುದು ಯಾವ ಕಾರಣಕ್ಕೆ .. ಠಾಣೆಗೆ ಕರೆತಂದ ರೋಹಿತನಿಗೆ ಲಾಠಿ ರುಚಿ ತೋರಿಸದೇ ಸತ್ಕರಿಸಿದ್ದು ಯಾವ ಪುರುಷಾರ್ಥಕ್ಕೆ.. ಪೊಲೀಸರ ಬಗ್ಗೆ ಕಿಂಚಿತ್ತೂ ಭಯವಿಲ್ಲದೇ ಅನಾಯಾಸವಾಗಿ ಜೈಲು ಸೇರಿದ ರೋಹಿತನ ಕೊಲೆಗೆ ಜೈಲಿನಲ್ಲಿದ್ದುಕೊಂಡೇ ಸಂಚು ರೂಪಿಸಿದ. ಸಂಚು ಮಿಂಚಾಗಿ ಕೇವಲ 24 ಗಂಟೆಗಳೊಳಗಾಗಿ ಮಹಾಂತೇಶನನ್ನ ಬಲಿ ತೆಗೆದುಕೊಂಡದ್ದು, ಪೊಲೀಸರ ನ್ಯೂನತೆಗೆ ತಾಜಾ ಉದಾಹರಣೆಯಲ್ಲವೇ.. ರೋಹಿತನು ಪೊಲೀಸರ ವಶದಲ್ಲಿದ್ದಾಗ ಆಧರಿಸಿ, ಸತ್ಕರಿಸಿದ್ದು ರೋಹಿತನ ಜಾತಿಯ ಬೆಂಬಲವೇ.. ಅಥವಾ ರೋಹಿತನ ಜಾತಿಯ ನಂಟು ನಗರದ ಕೆಲವು ಪೊಲೀಸ್ ಅಧಿಕಾರಿಗಳ ಪ್ರೀತಿ ಪಾತ್ರಕ್ಕೆ ಕಾರಣವಾಯಿತೇ ಎನ್ನುವುದು ಕೇವಲ ಪ್ರಶ್ನೆಯಾಗೇ ಉಳಿದಿದೆ. ನಗರದಲ್ಲಾಗುತ್ತಿರುವ ಎಲ್ಲಾ ಅಪರಾಧಗಳಿಗೂ ತುಮಕೂರು ನಗರ ಉಪವಿಭಾಗ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಪೊಲೀಸ್ ಅಧಿಕಾರಿಗಳ ಅದಕ್ಷತೆ ಮೂಲಕ ಕಾರಣವೆಂದು ಹೇಳಲಾಗುತ್ತಿದೆ. ಈ ಕೊಲೆ ನಗರ ವೃತ್ತ ನಿರೀಕ್ಷಕ ಬಿ.ನವೀನ್ ರವರ ಕಾರ್ಯವೈಖರಿಯನ್ನ ಎತ್ತಿ ತೋರಿಸುತ್ತದೆ

(Visited 4,643 times, 1 visits today)
Previous Articleಮಣ್ಣು ಮಾಫಿಯಾಗೆ ಕೆರೆ ಬಲಿ : ತುಮಕೂರು ನಗರಕ್ಕೆ ಕುಡಿಯುವ ನೀರಿಲ್ಲ!!
Next Article ತುಮಕೂರು: ತಾತ್ಕಾಲಿಕ ಬಸ್‍ನಿಲ್ದಾಣ ಸ್ಥಳಾಂತರಕ್ಕೆ ಅಡ್ಡಿ!!!
News Desk Benkiyabale

Related Posts

ಡಯಾಬಿಟಿಕ್ ಪುಟ್ ಕಾಯಿಲೆಯನ್ನು ಆರಂಭದಲ್ಲೇ ಗುರುತಿಸಿ

August 07, 2026 5:05 pm news

ಅಸಹಾಯಕ ಮಹಿಳೆಯನ್ನು ದತ್ತು ಪಡೆದ ಇಕ್ಬಾಲ್ ಅಹಮದ್

August 07, 2026 5:03 pm news

ಬದಲಾವಣೆ ಅಗತ್ಯ ಎಂಬ ಹೆಸರಿನಲ್ಲಿ ರಾಜಕೀಯ ಅಭಿಯಾನ

August 07, 2026 5:01 pm news
ತಾಜಾ ಸುದ್ಧಿಗಳು
news

ಡಯಾಬಿಟಿಕ್ ಪುಟ್ ಕಾಯಿಲೆಯನ್ನು ಆರಂಭದಲ್ಲೇ ಗುರುತಿಸಿ

August 07, 2026 5:05 pm
news

ಅಸಹಾಯಕ ಮಹಿಳೆಯನ್ನು ದತ್ತು ಪಡೆದ ಇಕ್ಬಾಲ್ ಅಹಮದ್

August 07, 2026 5:03 pm
news

ಬದಲಾವಣೆ ಅಗತ್ಯ ಎಂಬ ಹೆಸರಿನಲ್ಲಿ ರಾಜಕೀಯ ಅಭಿಯಾನ

August 07, 2026 5:01 pm
news

ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಜಾಗೃತಿ ಕಾರ್ಯಕ್ರಮ

August 07, 2026 4:59 pm
news

ಮಕ್ಕಳು ಕಲೆ ಕಲಿತು ಭವಿಷ್ಯದ ಪ್ರತಿಭೆಗಳಾಗಿ: ಈಶ್ವರ್ ಕು.ಮಿರ್ಜಿ

August 07, 2026 4:57 pm
news

ರೈತರ ಬೃಹತ್ ಪಾದಯಾತ್ರೆಗೆ ಚಾಲನೆ

August 07, 2026 4:54 pm
Our Youtube Channel
Our Picks

ಡಯಾಬಿಟಿಕ್ ಪುಟ್ ಕಾಯಿಲೆಯನ್ನು ಆರಂಭದಲ್ಲೇ ಗುರುತಿಸಿ

August 07, 2026 5:05 pm

ಅಸಹಾಯಕ ಮಹಿಳೆಯನ್ನು ದತ್ತು ಪಡೆದ ಇಕ್ಬಾಲ್ ಅಹಮದ್

August 07, 2026 5:03 pm

ಬದಲಾವಣೆ ಅಗತ್ಯ ಎಂಬ ಹೆಸರಿನಲ್ಲಿ ರಾಜಕೀಯ ಅಭಿಯಾನ

August 07, 2026 5:01 pm

ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಜಾಗೃತಿ ಕಾರ್ಯಕ್ರಮ

August 07, 2026 4:59 pm

ಮಕ್ಕಳು ಕಲೆ ಕಲಿತು ಭವಿಷ್ಯದ ಪ್ರತಿಭೆಗಳಾಗಿ: ಈಶ್ವರ್ ಕು.ಮಿರ್ಜಿ

August 07, 2026 4:57 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಡಯಾಬಿಟಿಕ್ ಪುಟ್ ಕಾಯಿಲೆಯನ್ನು ಆರಂಭದಲ್ಲೇ ಗುರುತಿಸಿ

By News Desk BenkiyabaleAugust 07, 2026 5:05 pm

ತುಮಕೂರು: ಮಧುಮೇಹ ರೋಗಿಗಳು ಅನುಭವಿಸುವ ಡಯಾಬಿಟಿಕ್ ಪುಟ್ ಕಾಯಿಲೆಯನ್ನು ಆರಂಭದಲ್ಲೇ ಗುರುತಿಸಿ,ಸುಧಾರಿತ ವ್ಯಾಸ್ಕ÷್ಯಲರ್ ಚಿಕಿತ್ಸೆಯ ಮೂಲಕ ಅಂಗವೈಕಲ್ಯವನ್ನು ತಡೆಯಬಹುದಾಗಿದೆ ಎಂದು…

ಅಸಹಾಯಕ ಮಹಿಳೆಯನ್ನು ದತ್ತು ಪಡೆದ ಇಕ್ಬಾಲ್ ಅಹಮದ್

August 07, 2026 5:03 pm

ಬದಲಾವಣೆ ಅಗತ್ಯ ಎಂಬ ಹೆಸರಿನಲ್ಲಿ ರಾಜಕೀಯ ಅಭಿಯಾನ

August 07, 2026 5:01 pm

ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಜಾಗೃತಿ ಕಾರ್ಯಕ್ರಮ

August 07, 2026 4:59 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.