ತುಮಕೂರು ಕಾಂಗ್ರೆಸ್ನ ಗಾಂಧಿವಾದ ಮತ್ತು ಬಿಜೆಪಿಯ ನಾಥೂರಾಮ್ ಗೂಡ್ಸೆ ವಾದದ ನಡುವೆ ಪ್ರಸಕ್ತ ಚುನಾವಣೆ ನಡೆಯುತ್ತಿದ್ದು, ಜನರ ಆಶೀರ್ವಾದ ಬಲದಿಂದ ರಾಜ್ಯದಲ್ಲಿ ಸ್ಪಷ್ಟ ಬಹುಮತ ಪಡೆದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ದೆಹಲಿ ಕಾಂಗ್ರೆಸ್ ಶಾಸಕಿ ಹಾಗೂ ಎಐಸಿಸಿ ಮಾಧ್ಯಮ ವಕ್ತಾರೆ ಅಲ್ಕಾಲಂಬಾ ತಿಳಿಸಿದರು. ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಹೊಸ ಭರವಸೆಗಳು ಮತ್ತು ಬಿಜೆಪಿ ಪಕ್ಷದ ಶೂನ್ಯ ಸಾಧನೆ ಪ್ರಸಕ್ತ ಚುನಾವಣೆಯಲ್ಲಿ ಚರ್ಚೆಗೆ ಗ್ರಾಸವಾಗಿ ಕಾಂಗ್ರೆಸ್ ಪಕ್ಷದ ಪರವಾಗಿ ಜನಮತ ವ್ಯಕ್ತವಾಗಲಿದೆ ಎಂದರು. ಶೇ.40 ರಷ್ಟು ಕಮೀಷನ್ ಪಡೆಯುವಲ್ಲಿ ಮಗ್ನವಾದ ರಾಜ್ಯ ಬಿಜೆಪಿ ಸರ್ಕಾರ ಅಭಿವೃದ್ಧಿಯತ್ತ ಗಮನಹರಿಸದೆ ಕೋಮು ದ್ವೇಶ ಬಿತ್ತಿ ಸಮಾಜದ ಶಾಂತಿ, ಸೌಹಾರ್ಧತೆ, ಸ್ವಾಸ್ತ್ಯವನ್ನು ಕೆಡಿಸುವ ಹುನ್ನಾರ ನಡೆಸಿದೆ. ಇದಕ್ಕೆ ಕಾಂಗ್ರೆಸ್ ಪಕ್ಷ ಅವಕಾಶ ನೀಡುವುದಿಲ್ಲ ಎಂದರು. ಕೇಂದ್ರ ಸರ್ಕಾರದಲ್ಲಿ ಗೃಹಮಂತ್ರಿಯಾಗಿರುವ ಅಮಿತ್ ಶಾ ಚುನಾವಣಾ ಪ್ರಚಾರದ ವೇಳೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದಂಗೆ, ಗಲಾಟೆಗಳನ್ನು…
Author: News Desk Benkiyabale
ತುಮಕೂರು ಕ್ಷೇತ್ರದ ಜನರಿಗಷ್ಟೇ ಅಲ್ಲದೇ ಜೆಡಿಎಸ್ ಮುಖಂಡರು, ಕಾರ್ಯಕರ್ತರಿಗೂ ಮೋಸ ಮಾಡಿರುವ ಶಾಸಕ ಗೌರಿಶಂಕರ್ ಅವರನ್ನು ಸೋಲಿಸುವುದೇ ನಮ್ಮ ಗುರಿ ಎಂದು ಜೆಡಿಎಸ್ ನಿಂದ ಹೊರ ಬಂದಿರುವ ಮುಖಂಡರು ಹೇಳಿದರು. ಜೆಡಿಎಸ್ ಮಾಜಿ ಮುಖಂಡರಾದ ಪಂಚೆ ರಾಮಚಂದ್ರಯ್ಯ, ವೈ.ಟಿ.ನಾಗರಾಜ್, ಹೆತ್ತೇನಹಳ್ಳಿ ವೆಂಕಟೇಶ್, ಬೀಮಸಂದ್ರ ಕೃಷ್ಣಪ್ಪ,ಕೆಂಪರಾಜ್, ವೈಟಿ ನಾಗರಾಜ್, ಬೆಳ್ಳಿ ಲೋಕೇಶ್ ಜಯಂತ್ ಗೌಡ, ಮತ್ತಿತರರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಗೌರಿಶಂಕರ್ ನಕಲಿ ಬಾಂಡ್ ಗಳನ್ನು ಹಂಚುವ ಮೂಲಕ ಜನರನ್ನು ವಂಚಿಸಿ ಕಳೆದ ಸಲ ಗೆಲುವು ಸಾಧಿಸಿದರು. ಪ್ರತಿ ಬಡ ಮಕ್ಕಳಿಗೂ ಎರಡು ಲಕ್ಷ ರೂಪಾಯಿ ಬರಲಿದೆ ಎಂದು ಹೇಳಿದ್ದರು. ಆನಂತರ ಅವುಗಳು ನಕಲಿ ಬಾಂಡ್ ಗಳು ಎಂಬುದು ಗೊತ್ತಾಯಿತು. ಇದೇ ವಿಚಾರದಲ್ಲಿ ಹೈ ಕೋರ್ಟ್ ಕೂಡ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದೆ. ಸದ್ಯ , ಸುಪ್ರೀಂ ಕೋರ್ಟ್ ನಲ್ಲಿ ಇನ್ನೂ ವಿಚಾರಣೆ ನಡೆಸಬೇಕಾಗಿದೆ. ಸದ್ಯಕ್ಕೆ ತಡೆಯಾಜ್ಞೆ ಸಿಕ್ಕಿದೆಯಷ್ಟೆ. ಜನರ ಕಣ್ಣಲ್ಲಿ ಏನು ತಪ್ಪಾಗಿಲ್ಲ ಎಂದು ತೋರಿಸಿಕೊಳ್ಳಲಷ್ಟೇ ಸ್ಪರ್ಧೆ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ…
ತುಮಕೂರು ಕೇಂದ್ರದ ಜನತೆ ಮೋಸಗಾರ ಶಾಸಕರನ್ನು ಮನೆಗೆ ಕಳುಹಿಸಿ, ಅಭಿವೃದ್ದಿಯ ಹರಿಕಾರರಾಗಿರುವ ಸುರೇಶಗೌಡ ರನ್ನು ಆಯ್ಕೆ ಮಾಡಲು ತುದಿಗಾಲಲ್ಲಿ ನಿಂತಿದ್ದು, ಮೇ.13ರ ಫಲಿತಾಂಶದಲ್ಲಿ ಅದು ವ್ಯಕ್ತವಾಗಲಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳೀನಕುಮಾರ್ ಕಟೀಲ್ ತಿಳಿಸಿದ್ದಾರೆ. ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಸುರೇಶಗೌಡ ಅವರ ಪರವಾಗಿ ಮತಯಾಚಿಸಲು ಆಗಮಿಸಿ,ಕೈದಾಳದ ಶ್ರೀಚನ್ನಕೇಶವಸ್ವಾಮೀಗೆ ಪೂಜೆ ಸಲ್ಲಿಸಿದ ನಂತರ ತೆರೆದ ಜೀಪಿನಲ್ಲಿ ಮೆರವಣಿಗೆಯ ವೇಳೆ ಮಾತನಾಡಿದ ಅವರು,ಸುರೇಶಗೌಡರ ಕಾಲದಲ್ಲಿ ಜಕಣಚಾರಿ ಹುಟ್ಟಿದ ಈ ಊರಿನಲ್ಲಿ ಅವರ ಹೆಸರಿನಲ್ಲಿಯೇ ಒಂದು ಸಮುದಾಯಭವನವನ್ನು ನಿರ್ಮಿಸಿದರೆ, ಹಾಲಿ ಶಾಸಕರು ಅದರ ಬಾಗಿಲು ತೆಗೆಯುವ ಗೋಜಿಗೂ ಹೋಗದೆ, ಪಾಳು ಬೀಳುವಂತೆ ಮಾಡಿದ್ದಾರೆ. ಈ ಕ್ಷೇತ್ರಕ್ಕೆ ಅಭಿವೃದ್ದಿಯ ಹರಿಕಾರರು ಬೇಕೋ, ಇಲ್ಲ ಜನರಿಗೆ ಮೋಸ ಮಾಡಿ ಗೆದ್ದ ಶಾಸಕರು ಬೇಕೋ ನೀವೇ ತೀರ್ಮಾನ ಮಾಡಿಕೊಂಡು ಮತ ನೀಡಿ ಎಂದರು. ಹಾಲಿ ಶಾಸಕರನ್ನು ಮೋಸಗಾರ ಎಂದು ನಾನು ಹೇಳುತ್ತಿಲ್ಲ.ಈ ರಾಜ್ಯದ ಉಚ್ಚ ನ್ಯಾಯಾಲಯ ಹೇಳುತ್ತಿದೆ.ದೇಶ ಮತ್ತು ರಾಜ್ಯದಲ್ಲಿರುವ ಡಬಲ್ ಇಂಜಿನ್ ಸರಕಾರ ಜನರ…
ತುಮಕೂರು ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಿಂದ 80 ವರ್ಷ ಮೇಲ್ಪಟ್ಟ 6595 ಮತದಾರರು ಹಾಗೂ ವಿಶೇಷ ಚೇತನ ಮತದಾರರು 2845 ಸೇರಿ ಒಟ್ಟು 9,440 ಮತದಾರರು ಅಂಚೆ ಮತದಾನ ಮಾಡಲು ಇಚ್ಛಿಸಿದ್ದು, ಅರ್ಹ ಅಂಚೆ ಮತದಾರರ ಮಾಹಿತಿ ಪಡೆದು ಸೆಕ್ಟರ್ವಾರು ಮಾರ್ಗ ನಕ್ಷೆಗಳನ್ನು ಸಿದ್ಧಪಡಿಸಿಟ್ಟುಕೊಳ್ಳುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್.ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು. ತುಮಕೂರಿನ ಗುಬ್ಬಿ ವೀರಣ್ಣ ಕಲಾ ಮಂದಿರದಲ್ಲಿಂದು ಕರ್ನಾಟಕ ವಿಧಾನಸಭಾ ಚುನಾವಣೆ-2023ರ ಸಂಬಂಧ ಹೋಂ ವೋಟಿಂಗ್ ಕಾರ್ಯಕ್ಕೆ ನಿಯೋಜನೆಗೊಂಡಿರುವ ಪೋಲಿಂಗ್ ಅಧಿಕಾರಿಗಳಿಗಾಗಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 85742 ಮಂದಿ ದಿವ್ಯಾಂಗ ಮತ್ತು 80+ ಮತದಾರರಿಗೆ 12 ಡಿ ಅರ್ಜಿಗಳನ್ನು ವಿತರಿಸಲಾಗಿದ್ದು, ಈ ಪೈಕಿ 9440 ಮತದಾರರು ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ಇಚ್ಛಿಸಿದ್ದು, ಅವರುಗಳ ವಾಸ ಸ್ಥಳಕ್ಕೆ ಮತಗಟ್ಟೆ ಅಧಿಕಾರಿಗಳ ತಂಡ ಭೇಟಿ ನೀಡಿ ಅಂಚೆ ಮತ ಪತ್ರ ಮೂಲಕ ಹೋಂ ವೋಟಿಂಗ್ ಮಾಡಿಸುವ ಸಂಬಂಧ ಮತಗಟ್ಟೆ…
ತುಮಕೂರು ಜನಬಲ,ತೊಳ್ಬಲವಿಲ್ಲದೆ,ನನ್ನ ಸಮಾಜ ಸೇವೆಯನ್ನು ಮುಂದಿಟ್ಟುಕೊಂಡು ಕ್ಷೇತ್ರದ ಜನರ ಮುಂದೆ ಮತ ಕೇಳಲಿದ್ದೇನೆ ಎಂದು ಜೆಡಿಎಸ್ ಬಂಡಾಯ ಅಭ್ಯರ್ಥಿ ನರಸೇಗೌಡ ತಿಳಿಸಿದ್ದಾರೆ. ನಗರದ ಖಾಸಗಿ ಹೊಟೇಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ಕ್ಷೇತ್ರದ ಬಗ್ಗೆ ಹಲವಾರು ಕನಸುಗಳನ್ನು ಕಂಡಿದ್ದು, ಅದನ್ನು ಸಹಕಾರ ಮಾಡಲು ಜನಸಾಮಾನ್ಯರು, ಮತ ನೀಡಿ ಸಹಕರಿಸುವಂತೆ ಮನವಿ ಮಾಡಿದರು. ರಾಜಕೀಯ ಹಿನ್ನೆಲೆಯಿಲ್ಲದ ಕುಟುಂಬದಿಂದ ಬಂದಿರುವ ನನಗೆ, ನಾನು ಮಾಡಿರುವ ಸಮಾಜ ಸೇವೆಯೇ ನನಗೆ ಶ್ರೀರಕ್ಷೆ. ಜೀವನಕ್ಕಾಗಿ ಗುತ್ತಿಗೆದಾರ ವೃತ್ತಿ ನಡೆಸುತ್ತಿದ್ದು, ಅದರಿಂದ ಬಂದ ದುಡಿಮೆಯಲ್ಲಿಯೇ ಕೊಂಚ ಭಾಗವನ್ನು ಸಮಾಜಸೇವೆಗೆ ಮೀಸಲಿಟ್ಟು, ನನ್ನ ಕೈಲಾದ ಸೇವೆಯನ್ನು ಮಾಡುತ್ತಾ ಬಂದಿದ್ದೇನೆ.ಕಳೆದ 20ಕ್ಕೂ ಹೆಚ್ಚು ವರ್ಷಗಳ ಕಾಲ ಜೆಡಿಎಸ್ ಪಕ್ಷಕ್ಕಾಗಿ ದುಡಿದಿದ್ದೇನೆ.ಕಳೆದ ಮೂರು ಚುನಾವಣೆಗಳಿಂದ ಜೆಡಿಎಸ್ ಪಕ್ಷದ ಟಿಕೇಟ್ ಬಯಸಿ ಅರ್ಜಿ ಸಲ್ಲಿಸಿದರೂ ಇದುವರೆಗೂ ನೀಡಿಲ್ಲ.ದೇವೇಗೌಡರ ಕೈಯಿಂದ ಬಿ.ಫಾರಂ ಪಡೆಯುವ ಅದೃಷ್ಟ ನನಗಿಲ್ಲ ಎಂದುಕೊಳ್ಳುತ್ತೇನೆ.ಯಾರನ್ನು ದೂಷಿಸುವುದಿಲ್ಲ. ಹಾಗಾಗಿ ಜನರ ಮುಂದೆ ಹೋಗಿ ಮತ ಕೇಳುತ್ತೇನೆ ಎಂದರು. ಜೆಡಿಎಸ್ ಪಕ್ಷಕ್ಕೆ ಬಂಡಾಯವಾಗಿ ಕಣಕ್ಕೆ ಇಳಿದಿದ್ದ ನಾನು…
ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಪಿ.ಕೆ.ಎಸ್ ಕಾಲೋನಿಯ ಸಂಪನ್ಮೂಲ ಕೇಂದ್ರದಲ್ಲಿ 890ನೇ ಬಸವೇಶ್ವರರ ಜಯಂತಿಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾದ ಇಕ್ಬಾಲ್ ಅಹಮದ್ ಸಮಿತಿಯ ಕಛೇರಿಗೆ ಭೇಟಿ ನೀಡಿ ಬಸವಣ್ಣನವರ ಜಯಂತಿಯಲ್ಲಿ ಬಾಗಿಯಾಗಿ ಮತಯಾಚನೆ ಮಾಡಿ ಮಾತನಾಡಿದರು. ನಾನು ನಜರಾಬಾದ್ ಸ್ಲಂನಲ್ಲಿ ಜನಿಸಿ ಸ್ಲಂ ಜನರ ಕಷ್ಟ ಸುಖದ ಅನುಭವವಾಗಿದೆ ಈಗ ಈದ್ಗಾ ಮೊಹಲ್ಲದ್ದಲ್ಲಿದ್ದೇನೆ ಹಾಗಾಗಿ ನಾನು ಸ್ಲಂ ನಿವಾಸಿಯಾಗಿ ಬದುಕಿದ ಅನುಭವವಿದೆ ಕಳೆದ 20 ವರ್ಷಗಳಿಂದ ಸ್ಲಂ ಸಮಿತಿ ಹೋರಾಟವನ್ನು ಹತ್ತಿರದಿಂದ ನೋಡಿದ್ದೇನೆ, ತುಮಕೂರು ನಗರ ಮಾತ್ರವಲ್ಲದೇ ಜಿಲ್ಲೆಯಲ್ಲಿ ಸಾವಿರಾರು ಸ್ಲಂ ಜನರಿಗೆ ಸಂವಿಧಾನದ ಆಶಯದಂತೆ ಹಕ್ಕುಗಳನ್ನು ದೊರಕಿಸುವ ಭೂಮಿ ಮತ್ತು ವಸತಿ ಮೇಲೆ ಕೆಲಸ ಮಾಡಿ ಸ್ಲಂ ನಿವಾಸಿಗಳನ್ನು ಒಕ್ಕಲೆಬ್ಬಿಸದಂತೆ ಸಂಘಟನೆ ತಡೆದಿದೆ, ಹೋರಾಟದಿಂದ ತುಮಕೂರು ನಗರದಲ್ಲಿ ಸಾವಿರಾರು ಸ್ಲಂ ಜನರು, ಬಡವರು ಪ್ರತಿಫಲ ಪಡೆದಿದ್ದಾರೆ ಇದರಲ್ಲಿ ದಿಬ್ಬೂರು ವಸತಿ ಮತ್ತು ಮಾರಿಯಮ್ಮ ವಸತಿ ಸಂಕೀರ್ಣ ಸೇರಿದಂತೆ ನಗರದಲ್ಲಿ 5 ಸಾವಿರಕ್ಕೂ ಹೆಚ್ಚು…
ಕೊರಟಗೆರೆ ಲೋಕಸಭಾ ಚುನಾವಣೆಗೆ ನಾನು ನಿಲ್ಲೋದಿಲ್ಲ ಅಂತಾ ಹೇಳ್ದೆ.. ಆದರೇ ಕಾಂಗ್ರೆಸ್ ಪಕ್ಷದವ್ರು ನನಗೇ ತುಮಕೂರು ಜಿಲ್ಲೆಗೆ ಕರೆತಂದು ಸೋಲಿಸಿ ಅವಮಾನ ಮಾಡಿದ್ರು.. ನನಗೇ ಸೋಲಿಸಿ ಅವಮಾನ ಮಾಡಿದ ನೋವು ಇನ್ನೂ ಕಾಡ್ತೀದೆ.. ನಮ್ಮೇಲ್ಲರ ಆತ್ಮೀಯ ಸುಧಾಕರಲಾಲ್ ಗೆಲ್ಲಿಸಿ ನನ್ನ ಕಣ್ಣೀರು ಒರೆಸಬೇಕಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಕಾರ್ಯಕರ್ತರಿಗೆ ಕರೆ ನೀಡಿದರು. ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಕೇಂದ್ರದ ಗ್ರಾಮದಲ್ಲಿ ಜೆಡಿಎಸ್ ಪಕ್ಷದಿಂದ ಸೋಮವಾರ ಏರ್ಪಡಿಸಲಾಗಿದ್ದ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ನಾನು 1994ರಲ್ಲಿ ಸಿಎಂ ಆಗಿದ್ದಾಗ 11ಕ್ಷೇತ್ರದಲ್ಲಿ 9ಕ್ಷೇತ್ರ ಗೆಲ್ಲಿಸಿದ ತುಮಕೂರು ಜಿಲ್ಲೆಯ ಪುಣ್ಯಾತ್ಮರು ನೀವು. ಕಾಂಗ್ರೆಸ್ ನಾಯಕರು ನನಗೇ ಅವಮಾನ ಮಾಡಿದ ನೋವು ಇನ್ನೂ ನನ್ನನ್ನು ಕಾಡ್ತೀದೆ. ಸುಧಾಕರಲಾಲ್ ಬಡಕುಟಂಬದ ಓಬ್ಬ ಸಾಮಾನ್ಯ ಜೆಡಿಎಸ್ ಕಾರ್ಯಕರ್ತ. 25ವರ್ಷದಿಂದ ಕೊರಟಗೆರೆ ಕ್ಷೇತ್ರದಲ್ಲಿ ಬಡಜನರ ಸೇವೆ ಮಾಡ್ತೀದ್ದಾನೆ. ನೀವು ಸಾಮಾನ್ಯ ಕಾರ್ಯಕರ್ತನನ್ನ ಬೆಳೆಸಿದ್ದಿರಾ 2023ಕ್ಕೆ ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಿ. ಕುಮಾರಸ್ವಾಮಿ ಸರಕಾರ ಸುಧಾಕರಲಾಲ್ಗೆ ವಿಶೇಷ ಸ್ಥಾನಮಾನ ನೀಡ್ತಾರೇ…
ತುಮಕೂರು ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ತತ್ವಜ್ಞಾನಿ ಆದಿ ಶಂಕರಾಚಾರ್ಯರ ದಿನಾಚರಣೆಯನ್ನು ತತ್ವಜ್ಞಾನಿಗಳ ದಿನವಾಗಿ ಆಚರಿಸಲಾಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕಸಾಪ ಜಂಟಿಯಾಗಿ ಆಯೋಜಿಸಿದ್ದ ಶ್ರೀಆದಿ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮವನ್ನು ರಾಜ್ಯದಲ್ಲಿ ವಿಧಾನಸಭೆ ಚುನಾವಣಾ ನೀತಿಸಂಹಿತೆ ಅಗತ್ಯವಿರುವ ಎರಡು ಸಂಪತ್ತುಗಳು. ಇವುಗಳೇ ಮನುಷ್ಯನನ್ನು ಮೋಕ್ಷಕ್ಕೆ ತೆಗೆದುಕೊಂಡು ಹೋಗುವ ಸಾಧನಗಳಾಗಿವೆ ಎಂಬುದನ್ನುಜಾರಿಯಲ್ಲಿರುವುದರಿಂದ ಶ್ರೀ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುμÁ್ಟರ್ಚನೆ ಸಲ್ಲಿಸುವ ಮುಖೇನ ಸರಳ ಹಾಗೂ ಸಾಂಕೇತಿಕವಾಗಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ,ವಿದ್ಯೆ ಮತ್ತು ಜ್ಞಾನ ಈ ಪ್ರಪಂಚದಲ್ಲಿ ಬದುಕಲು ತಮ್ಮ ಅದೈತ ಸಿದ್ದಾಂತದ ಮೂಲಕ ಶ್ರೀಆದಿ ಶಂಕರಾಚಾರ್ಯರು ತೋರಿಸಿಕೊಟ್ಟಿದ್ದಾರೆ.ಎಲ್ಲರನ್ನು ಒಳಗೊಂಡ ಸೌಹಾರ್ಧ, ಸಾಮಾರಸ್ಯ ಸಮಾಜ ನಿರ್ಮಾಣಕ್ಕೆ ಎಲ್ಲರೂ ಒಗ್ಗೂಡುವಂತೆ ಶಂಕರಾಚಾರ್ಯರು ಕರೆ ನೀಡಿದ್ದರು ಎಂದರು. ಎಂ.ವಿ.ನಾಗರಾಜರಾವ್ ಮಾತನಾಡಿ, ಜಗತ್ತಿಗೆ ಶಿವನೇ ತಂದೆಯಾದರೆ, ಪಾವರ್ತಿಯೇ ತಾಯಿ ಎಂದು ಪ್ರತಿಪಾದಿಸಿದ ಆದಿ ಶಂಕರಾಚಾರ್ಯರು, ತಮ್ಮ ಸಿದ್ದಾಂತಗಳ ಬದುಕಿನ ದರ್ಶನ ಮಾಡಿಸಿದರು ಎಂದರು. ವೇದಿಕೆಯಲ್ಲಿ ಟೂಡಾ ಅಧ್ಯಕ್ಷರಾದ ಹೆಚ್…
ತುಮಕೂರು ಕಳೆದ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ ಬಾರಿ ಬದಲಾವಣೆ ಕಾಣುತ್ತಿದ್ದು,ಸ್ಮಾರ್ಟ್ ಸಿಟಿಯ ಮೂಲಕ ತುಮಕೂರು ಸಹ ಪ್ರಗತಿಯ ಹಾದಿಯಲ್ಲಿದೆ ಎಂದು ಮಧ್ಯಪ್ರದೇಶದ ಸಂಸದ ಹಾಗು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಸ್ ವಿಜಯ್ ಬರ್ಜಿಯ ಅಭಿಪ್ರಾಯ ಪಟ್ಟಿದ್ದಾರೆ ನಗರದ ಬಾಜಪ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಸ್ಮಾರ್ಟ್ ಸಿಟಿಗಳ ಜೊತೆಗೆ ಸ್ಮಾರ್ಟ್ ವಿಲೇಜ್ಗಳ ನಿರ್ಮಾಣಕ್ಕು ಬಿಜೆಪಿ ಒತ್ತು ನೀಡಿದ್ದು, ಇದೇ ವೇಗದಲ್ಲಿ ವಿಕಾಸ ಮುಂದುವರೆದರೆ 2047 ಕ್ಕೆ ಅಂದರೆ ಸ್ವಾತಂತ್ರ್ಯ ಬಂದ ನೂರನೇ ವರ್ಷಕ್ಕೆ ಭಾರತ ಪ್ರಪಂಚದ ನಂ.1 ರಾಷ್ಟವಾಗಲಿದೆ ಎಂದರು. ಕೇಂದ್ರ ದಲ್ಲಿ ಮೋದಿ ಅಧಿಕಾರಕ್ಕೆ ದ ನಂತರ ರಾಷ್ಟ್ರೀಯ ಹೆದ್ದಾರಿ ಗಳ ನಿರ್ಮಾಣ ಕಾರ್ಯದಲ್ಲಿ ಸಾಕಷ್ಟು ವೇಗ ಪಡೆದುಕೊಂಡಿದೆ.ಇದರ ಫಲವಾಗಿ ಜನರಿಗೆ ಸಮಯದ ಜೊತೆಗೆ ಇಂಧನದ ಉಳಿತಾಯ ಸಹ ಆಗುತ್ತಿದೆ.ಅಮೇರಿಕಾದಂತಹ ಅರ್ಥಿಕತೆಯೇ ಕುಸಿದು ಜನರು ತತ್ತರಿಸುತ್ತಿರುವ ಕಾಲದಲ್ಲಿ, ಭಾರತದ ಅರ್ಥಿಕತೆ ಅತ್ಯಂತ ಸ್ಥಿರವಾಗಿದೆ ಎಂದರೆ ಅದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರ ಸಧೃಡ ಅಡಳಿತ.ಡಬಲ್ ಇಂಜಿನ್ ಸರಕಾರ ಎಲ್ಲಾ…
ತುಮಕೂರು: ನಾನು ಶಾಸಕನಾಗಿದ್ದ ಕಾಲದಲ್ಲಿ ರಸ್ತೆ,ಕುಡಿಯುವ ನೀರು, ಚರಂಡಿ, ಶಿಕ್ಷಣ, ಕೈಗಾರಿಕೆ ಎಲ್ಲದರಲ್ಲಿಯೂ ಮುಂದಿದ್ದ ತುಮಕೂರು ಗ್ರಾಮಾಂತರ ಕ್ಷೇತ್ರವನ್ನು 2018ರಲ್ಲಿ ಆಯ್ಕೆಯಾದ ಜೆಡಿಎಸ್ ಶಾಸಕರ ನಿರ್ಲಕ್ಷದಿಂದಾಗಿ ದರಿದ್ರ ಕ್ಷೇತ್ರವಾಗಿ ಮಾರ್ಪಡಿಸಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಬಿ.ಸುರೇಶಗೌಡ ಆರೋಪಿಸಿದ್ದಾರೆ. ಗ್ರಾಮಾಂತರ ಕ್ಷೇತ್ರದ ಕಚೇರಿ ಶಕ್ತಿ ಸೌಧದಲ್ಲಿ ತುಮಕೂರು ಗ್ರಾಮಾಂತರದ ಬೋವಿ ಸಮುದಾಯದ ಮುಖಂಡರ ಸಭೆ ನಡೆಸಿ ಮಾತನಾಡಿದ ಅವರು, ಪ್ರತಿ ಮನೆಗೆ ನಲ್ಲಿ,ಕುಡಿಯುವ ನೀರು, ರಸ್ತೆ, ಚರಂಡಿ,ಶೈಕ್ಷಣಿಕ ಅಭಿವೃದ್ದಿ ಒತ್ತು ನೀಡಿದ್ದರ ಪರವಾಗಿ ಕ್ಷೇತ್ರದಲ್ಲಿ ಸುಮಾರು 20ಕ್ಕು ಹೆಚ್ಚು ಸರಕಾರಿ ಶಾಲೆಗಳು ನವೀಕರಣಗೊಂಡ ಪರಿಣಾಮ ಕ್ಷೇತ್ರದ ಸಾವಿರಾರು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಯಿತು.ಆದರೆ ಇಂದು ಬಹುತೇಕ ಶಾಲೆಗಳಲ್ಲಿ ಬಿಸಿಯೂಟಕ್ಕೆ ನೀರಿಲ್ಲ. ಶೌಚಾಲಯಕ್ಕೆ ನೀರಿಲ್ಲ. ಇಂತಹ ಪರಿಸ್ಥಿತಿಗೆ ಹಾಲಿ ಶಾಸಕರ ನಿರ್ಲಕ್ಷವೇ ಕಾರಣ ಎಂದರು. ಬೋವಿ ಸಮಾಜ ಪರಿಶ್ರಮಕ್ಕೆ ಹೆಸರಾದ ಸಮುದಾಯ. ಮಾನಸಿಕ ಶ್ರಮಕ್ಕಿಂತ ದೈಹಿಕ ಶ್ರಮ ಹೆಚ್ಚು. ಆದರೆ ಇಂದಿಗೂ ಶಿಕ್ಷಣ, ಉದ್ಯೋಗದಲ್ಲಿ ಇಂದಿಗೂ ಅತ್ಯಂತ ಹಿಂದುಳಿದ…











