ಕೊರಟಗೆರೆ ತಾಲ್ಲೂಕಿನ ಕಸಬಾ ಹೋಬಳಿಯ ಹಂಚಿಹಳ್ಳಿಯ ಸರ್ಕಾರಿ ಶಾಲಾಯ 1ರಿಂದ7ನೆ ತರಗತಿಯ ಮಕ್ಕಳಿಗೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ಉಚಿತ ನೋಟ್ ಪುಸ್ತಕಗಳು ಹಾಗೂ ಸ್ಮಾರ್ಟ್ ಕ್ಲಾಸ್ ಉತ್ತಮ ಶಿಕ್ಷಣಕ್ಕಾಗಿ ಶಾಲೆಗೆ ಲ್ಯಾಪ್ ಟಾಪ್ ನೀಡಿದ ಬೆಂಗಳೂರಿನ ರೋಟರಿ ಕ್ಲಬ್ ಸಂಸ್ಥೆಯ ಮುಖ್ಯಸ್ಥರು. ರೋಟರಿ ಕ್ಲಬ್ ಅಧ್ಯಕ್ಷ ರಾಮು ಮಾತನಾಡಿ ನಾವು ರೋಟರಿ ಕ್ಲಬ್ ಸ್ಥಾಪಿಸಿದಾಗಿನಿಂದಲೂ ಇದುವರೆಗೂ ಅನೇಕ ಸರ್ಕಾರಿ ಶಾಲೆಗಳು ಹಾಗೂ ವೃದ್ಧಾಶ್ರಮಗಳು ಸೇರಿದಂತೆ ಬಡವರ ಪರ ಕೆಲಸ ಮಾಡುತ್ತಿದ್ದೇವೆ ನಮ್ಮ ಈ ಕೆಲಸದಿಂದ ಅನೇಕ ಸರ್ಕಾರಿ ಶಾಲೆಯ ಮಕ್ಕಳಿಗೆ ಅನುಕೂಲವಾಗುತ್ತಿದೆ ದೇವರ ಕೃಪೆಯಿಂದ ಕೋರೋನಾ ಎಂಬ ಮಾಹಾಮಾರಿಯು ದೂರವಾಗಿ ಎಲ್ಲ ಶಾಲೆಗಳು ಪ್ರಾರಂಭವಾಗಿ ಉತ್ತಮ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ನಾನು ಹಾಗೂ ನಮ್ಮ ಸಂಸ್ಥೆಯ ಮುಖ್ಯಸ್ಥರು ಸದಸ್ಯರ ವತಿಯಿಂದ ಈ ಸೇವೆ ಮಾಡುತ್ತಿದ್ದೇವೆ ಎಂದು ತಿಳಿಸಿದರು ಉಚಿತವಾಗಿ ಶಾಲೆಗೆ ಲ್ಯಾಪ್ ಟಾಪ್ ನೀಡಿದ ನಿಕಿತಾ ಮಂಡ್ಯ ಮಾತನಾಡಿ ನನ್ನಿಂದ ಆಗುವ ಅಳಿಲ ಸೇವೆಯನ್ನು ಸರ್ಕಾರಿ ಶಾಲೆಯ ಮಕ್ಕಳು ಕಂಪ್ಯೂಟರ್ ಜ್ಞಾನ…
Author: News Desk Benkiyabale
ತುಮಕೂರು ಭಾರತ ಕಮ್ಯೂನಿಸ್ಟ್ ಪಕ್ಷ(ಮಾಕ್ರ್ಸವಾದಿ) ಮತ್ತು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಜಂಟಿಯಾಗಿ 67 ನೇ ಕರ್ನಾಟಕ ರಾಜ್ಯೋತ್ಸವನ್ನು ನಗರದ ಜನಚಳುವಳಿ ಕೇಂದ್ರದಲ್ಲಿ ಆಚರಿಸಲಾಯಿತು. ಕಾಂ: ಬಿ ಉಮೇಶ್ ರವರು ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡುತ್ತಾ ಆಳುವ ಸರ್ಕಾರಗಳು ಎಕಪ್ರಭತ್ವನ್ನು ಹೇರುವ ಮೂಲಕ ಒಂದು ರೇರ್ಷನ್ ಕಾರ್ಡ,ಒಂದುಡ್ರಸ್ಕೋಡ್ಗಳು, ಹಿಂಬಾಗಿಲಿನಿಂದ ಹಿಂದಿ ಭಾಷೆಯನ್ನು ಹೆರಲು ಮುಂದಾಗಿದೆ. ಭಾಷವಾರು ಪ್ರಾಂತ ಬಂದಿದ್ದೆ ಅಲ್ಲಿಯ ಜನರ ನೆಲಮೂಲ ಬೆಳಸಿ ಅಲ್ಲಿನ ಸೂಗಡನ್ನು ಬೆಳಸಿದಾಗ ಮಾತ್ರ ಅಭಿವೃಧಿಯಾಗುತ್ತದೆ ಎಂದರು. ಭಾóಷೆ ಸ್ಥಾನ ಮಾನಗಳು ನೋಟಿನಲ್ಲಿ ಮಾತ್ರ ಮುದ್ರಣವಾಗಿದೆ. ಅದರೆಭಾಷೆಗಳಿಗೆ ಸಂಬಂದಿದಂತೆ ಕೇಂದ್ರ ಸರ್ಕಾರ ಸ್ಪಷ್ಟ ನಿಲುಮೆಗಳನ್ನು ತೆಗೆದುಕೂಳ್ಳದೆ ಅಕ್ಕ-ಪಕ್ಕ ಕಿತ್ತಾಟಕ್ಕೆ ಹಚ್ಚಿ ರಾಜಕೀಯ ಲಾಬಕ್ಕೆ ಮಾತ್ರ ಉಪಯೋಗಿಸಿಕೂಳ್ಳುತ್ತದೆ.ಇದನ್ನು ಜನತೆ ತಿರಸ್ಕರಿಸಬೇಕು ಜನತೆ ಆಯಾ ಮಾತೃಭಾಷೆಯ ಮೂಲಕ ತಮ್ಮ ಕುಟಂಬ,ಗ್ರಾಮ,ರಾಜ್ಯಗಳ ಅಭಿವೃಧಿಪಡಿಸುವ ನಿಟ್ಟಿನಲ್ಲಿ ಮುಂದೆÉಸಾಗಬೇಕಾಗಿದೆ. ಪ್ರಸಕ್ತ ಸಂರ್ದಬದಲ್ಲಿ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ ಕೇವಲ ಸಾಮಾಜಿಕ ತಾಣಗಳಿಂದ ಆಗುತ್ತವೆ ಎಂದು ಭ್ರಮೆಯಲ್ಲಿದ್ದಾರೆ. ಅದರೆ ಕಣ್ಣಿನ ಸ್ಪರ್ಶದಿಂದ ಮಾತ್ರ ನೆನಪನ್ನು ಉಳಿಸುಕೂಳ್ಳಲು…
ಕೊರಟಗೆರೆ ಲೋಕ ಅದಾಲತ್ ಮೂಲಕ ಕಾನೂನು ಸೇವೆಗಳ ಪ್ರಾಧಿಕಾರಗಳ ಬಗ್ಗೆ ಹಾಗೂ ಹಕ್ಕುಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ಹಿರಿಯ ಸಿವಿಲ್ ನ್ಯಾಯಾಧೀಶರ ನೇತೃತ್ವದಲ್ಲಿ ವಕೀಲರ ತಂಡ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀನಾಥ್ ಜೆ.ಎನ್ ಮಾತನಾಡಿ, ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದು ಹಾಗೂ ಕಾನೂನಿನ ಬಗ್ಗೆ ಜನಸಾಮಾನ್ಯರಿಗೆ ಜಾಗೃತಿ ಮೂಡಿಸಿ ಅವರಲ್ಲಿ ಕಾನೂನಿಗೆ ಬಗ್ಗೆ ತಿಳುವಳಿಕೆ ಮೂಡಿಸುವ ಮೂಲಕ ಕಾನೂನಿನ ಮಹತ್ವವನ್ನು ಎಲ್ಲರೂ ತಿಳಿದುಕೊಳ್ಳಬೇಕೆಂಬುದು ಈ ಜಾಥಾದ ಉದ್ದೇಶವಾಗಿದೆ ಎಂದರು. ವಕೀಲರ ಸಂಘದ ಅಧ್ಯಕ್ಷ ಬಿ.ಎಲ್ ನಾಗರಾಜು ಮಾತನಾಡಿ, ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ರವರ ಮಾರ್ಗದರ್ಶನಗಳು ನಮ್ಮೆಲ್ಲರಿಗೂ ಸ್ಫೂರ್ತಿ, ಅವರಂತೆ ಮುಂದಿನ ಪೀಳಿಗೆಯೂ ದೇಶಕ್ಕೆ ಮಾದರಿಯಾಗಬೇಕು ಹಾಗೂ ಭಾರತದಲ್ಲಿ ಜಾರಿಯಾಗಿರುವ ಹಲವು ಕಾನೂನು ಕ್ರಮಗಳು ಹಾಗೂ ಕಾನೂನಿಗೆ ಸಂಬಂಧಪಟ್ಟ ವಿಷಯಗಳನ್ನು ಸಾರ್ವಜನಿಕರಿಗೆ ತಿಳಿಸುವುದು ವಕೀಲರಾದ ನಮ್ಮೆಲ್ಲರ ಕರ್ತವ್ಯ, ಅದರಂತೆ ಇಂದು ಪಟ್ಟಣದ ಪ್ರಮುಖ ರಸ್ತೆಗಳ ಅಕ್ಕ ಪಕ್ಕದಲ್ಲಿರುವ ಅಂಗಡಿ…
ತುಮಕೂರು ಪ್ರತಿಯೊಬ್ಬ ಕನ್ನಡಿಗನು ಕನ್ನಡ ಭಾಷೆ ಉಳಿಸಿ ನೆಲ-ಜಲ-ಗಡಿ ರಕ್ಷಣೆ ಮಾಡಬೇಕು. ಕನ್ನಡ ಭಾಷೆ ಉಳಿಸಿ-ಬೆಳಸಲು ಕಟಿಬದ್ದರಾಗಿ, ತಮ್ಮ ದಿನನಿತ್ಯ ಚಟುವಟಿಕೆಗಳಲ್ಲಿ ಕನ್ನಡಕ್ಕೆ ಅಗ್ರಸ್ಥಾನ ನೀಡಿ, ಆಚರಣೆಯಲ್ಲಿ ಅಳವಡಿಸಿಕೊಳ್ಳೋಣ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್ ಕರೆ ನೀಡಿದರು. ಇವರು ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ 67ನೇ ಕನ್ನಡ ರಾಜ್ಯೋತ್ಸವದ ಸಂಭ್ರಮದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಕನ್ನಡ ಭಾಷೆ 5000 ಇತಿಹಾಸ ಉಳ್ಳ ಪ್ರಾಚೀನ ಭಾಷೆಯಾಗಿದೆ. ಹಲವಾರು ಶತಮಾನಗಳಿಂದ ಹಲವಾರು ರಾಜ ಮಹಾರಾಜರು ಪೋತ್ಸಾಹಿಸಿ, ಉಳಿಸಿ-ಬೆಳಸಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲೂ ಬ್ರಿಟಿಷರು ಸೇರಿದಂತೆ ನಂತರ ಮೈಸೂರು ಸಂಸ್ಥಾನ ಮಹಾರಾಜರು ಕನ್ನಡ ನಾಡು-ನುಡಿ-ಸಂಸ್ಕøತಿಯ ಆರಾಧಕರಾಗಿ ಆಡಳಿತದಲ್ಲಿ ಅಗ್ರಸ್ಥಾನ ನೀಡಿದ್ದರು. ಪ್ರಾಚೀನ ಭಾಷೆ ಕನ್ನಡ ಮತ್ತು ಕನ್ನಡ ಭಾಷಿಗರು ತಮ್ಮ ಮೂಲ ಕಲೆ-ಸಂಸ್ಕøತಿ ಸೊಗಡನ್ನು ಅತ್ಯಂತ ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದರು. ಭಾಷಾವಾರು ಪ್ರಾಂತ್ಯಗಳು ರಚನೆಯಾದಾಗ ಮೈಸೂರು ರಾಜ್ಯವಿದ್ದಾಗ 1-11-1956ರಂದು ಅಂದಿನ ರಾಷ್ಟ್ರಪತಿಗಳಾಗಿದ್ದ ಬಾಬುರಾಜೇಂದ್ರಪ್ರಸಾದ್ರವರು ಹಲವಾರು ಜಿಲ್ಲೆಗಳನ್ನು ಒಳಗೊಂಡ 19 ಜಿಲ್ಲೆಗಳ ರಾಜ್ಯವನ್ನು ಮೈಸೂರು ಎಂದೇ…
ತುಮಕೂರು ಚಿಕ್ಕತೊಟ್ಲುಕೆರೆಯ ಶ್ರೀ ಅಟವಿ ಜಂಗಮ ಸುಕ್ಷೇತ್ರದಲ್ಲಿ ನವೆಂಬರ್ 4 ರಿಂದ 6ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಎಂದು ಅಟವಿ ಜಂಗಮ ಸುಕ್ಷೇತ್ರದ ಪೀಠಾಧ್ಯಕ್ಷರಾದ ಶ್ರೀಅಟವಿ ಶಿವಲಿಂಗಸ್ವಾಮೀಜಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ನವೆಂಬರ್ 04 ರಂದು ಕೃಷಿ ಮೇಳ, ನವೆಂಬರ್ 05 ರಂದು ಧರ್ಮಸಮ್ಮೇಳನ ಮತ್ತು ನವೆಂಬರ್ 06 ರಂದು ಗೋಪೂಜಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಈ ಎಲ್ಲಾ ಕಾರ್ಯಕ್ರಮಗಳ ಮಹಾಪೋಷಕರಾಗಿ ಕೊರಟಗೆರೆ ಕ್ಷೇತ್ರದ ಶಾಸಕರಾದ ಡಾ.ಜಿ.ಪರಮೇಶ್ವರ್ ಅವರು ಕಾರ್ಯನಿರ್ವಹಿಸಲಿದ್ದಾರೆ ಎಂದು ಶ್ರೀಅಟವಿ ಶಿವಲಿಂಗಸ್ವಾಮೀಜಿ ನುಡಿದರು. ಧಾರ್ಮಿಕ ಕಾರ್ಯಕ್ರಮಗಳ ಮಹಾಪೋಷಕರಾದ ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ಮಾತನಾಡಿ,ನವೆಂಬರ್ 04 ರಂದು ಶ್ರೀಮಠದ ಆವರಣದಲ್ಲಿ ಕೃಷಿ ಮೇಳ ಮತ್ತು ಕೃಷಿಗೆ ಸಂಬಂಧಿಸಿದ ವಸ್ತುಪ್ರದರ್ಶನ ಏರ್ಪಡಿಸಲಾಗಿದೆ. ಇದರಲ್ಲಿ ಕೃಷಿ,ತೋಟಗಾರಿಕೆ,ರೇಷ್ಮೆ,ಕಂದಾಯ ಹಾಗೂ ಪಶು ಸಂಗೋಪನಾ ಇಲಾಖೆಗಳ ವಸ್ತು ಪ್ರದರ್ಶನದಲ್ಲಿ ಪಾಲ್ಗೊಂಡು,ಆಯಾಯ ಕ್ಷೇತ್ರದಲ್ಲಿ ಆಗಿರುವ ಹೊಸ ಅವಿಷ್ಕಾರಗಳನ್ನು ರೈತರಿಗೆ ಪರಿಚಯ ಮಾಡಿಕೊಡಲಿದ್ದಾರೆ.ಕೃಷಿ ಮೇಳದ ಉದ್ಘಾಟನಾ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀಅಟವಿ ಜಂಗಮ ಸುಕ್ಷೇತ್ರದ ಶ್ರೀಅವಟಿ…
ಕೊರಟಗೆರೆ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ 67ನೇ ಕನ್ನಡ ರಾಜ್ಯೋತ್ಸವವನ್ನು ಅಂತ್ಯಂತ ಸಡಗರ, ಸಂಭ್ರಮದಿಂದ ಹಮ್ಮಿಕೊಳ್ಳಲಾಗಿತ್ತು, ಕೊರಟಗೆರೆಯ ಜನಪ್ರಿಯ ತಹಶೀಲ್ದಾರ್ ನಾಹೀದ ಜಮ್ ಜಮ್ ಧ್ವಜಾರೋಹಣ ನೆರವೇರಿಸುವುದರ ಮೂಲಕ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಅದ್ದೂರಿ ಚಾಲನೆ ನೀಡಿದರು. ಇನ್ನೂ, ಕನ್ನಡ ರಾಜ್ಯೋತ್ಸವದ ಅಂಗವಾಗಿ ಪಟ್ಟಣದ ಎಲ್ಲಾ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು, ಸುಮಾರು ಮೂರು ಸಾವಿರ ವಿದ್ಯಾರ್ಥಿಗಳಿಂದ ತಾಯಿ ಭುವನೇಶ್ವರಿಯ ಭಾವಚಿತ್ರದೊಂದಿಗೆ ಕನ್ನಡ ಬಾವುಟ ಹಿಡಿದು ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ಕಾಲೇಜು ಮೈದಾನದವರೆಗೂ ಮೆರವಣಿಗೆ ನಡೆಸಲಾಯಿತು. ಶಾಲಾ ವಿದ್ಯಾರ್ಥಿಗಳಿಂದ ಕನ್ನಡದ ಕಂಪನ್ನು ಮೂಡಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾರ್ವಜನಿಕರ ಕಣ್ಮನ ಸೆಳೆದವು. ಕಾರ್ಯಕ್ರಮದಲ್ಲಿ ತಹಶೀಲ್ದಾರ್ ನಾಹೀದ ಜಮ್ ಜಮ್ ಮಾತನಾಡಿ, ಕನ್ನಡಿಗರ ಏಕೀಕರಣಕ್ಕಾಗಿ ನಡೆಸಿದ ಸಮ್ಮೇಳನಗಳಿಂದ ಕರ್ನಾಟಕ ರಾಜ್ಯ ರಚನೆಗೆ ಪುಷ್ಠಿ ನೀಡಿದವು, ಮಹಾತ್ಮ ಗಾಂಧೀಜಿ ಅವರು ಭಾಗಿಯಾಗಿದ್ದ ಅಧಿವೇಶನದಲ್ಲಿ ಬಲವಾಗಿ ಮೊಳಗಿದ್ದು ಕರ್ನಾಟಕ ಏಕೀಕರಣ ಬೇಡಿಕೆ. ಸ್ವಾತಂತ್ರದ ನಂತರ ಭಾರತ್ ಸಮಿತಿ ರಾಜ್ಯ ವಿಂಗಡಣಾ ಆಯೋಜನೆ ಶಿಫಾರಸ್ಸಿನಂತೆ ಮೈಸೂರು ರಾಜ್ಯ ಉದಯವಾಗಿ,…
ತುಮಕೂರು ಭಾರತೀಯ ಸಂಸ್ಕೃತಿಯಲ್ಲಿ ಅನೇಕ ಕಲೆಗಳು ಧರ್ಮಾಧಾರಿತವಾಗಿದ್ದು ಧರ್ಮವನ್ನು ಉಳಿಸುವಂತಹ ಕೈಂಕರ್ಯಗಳನ್ನ ಮಾಡುತ್ತಾ ಬಂದಿವೆ ಅದೇ ರೀತಿಯಾಗಿ ವೀರಗಾಸೆ ಕಲೆಯು ಕೂಡ ವೀರಶೈವ ಲಿಂಗಾಯಿತ ಧರ್ಮವನ್ನು ಅನುಸಾರ ಮಾಡಿ ವೀರಭದ್ರೇಶ್ವರನ ಅವತಾರವೆನ್ನುವಂತೆ ತನ್ನ ಕಲೆಯನ್ನು ಬಿಂಬಿಸುತ್ತಾ ಬಂದಿದ್ದು ಭಾರತೀಯ ಸಂಸ್ಕೃತಿ ಪರಂಪರೆಯುಳ್ಳ ಈ ವೀರಗಾಸೆ ಕಲೆ ಸೇರಿದಂತೆ ಇತರೆ ಕಲೆಗಳಿಗೆ ಅವಮಾನಿಸುವ ಬದಲು ಪೆÇ್ರೀತ್ಸಾಹಿಸಿ ಬೆಳೆಸಬೇಕು ಎಂದು ಕೊರಟಗೆರೆ ತಾಲೂಕಿನ ಸಿದ್ದರಬೆಟ್ಟದ ಬಾಳೆಹೊನ್ನೂರು ಮಠದ ಶ್ರೀ ಶ್ರೀ ವೀರಭದ್ರ ಶಿವಾಸ್ಚಾರ್ಯ ಸ್ವಾಮೀಜಿ ಅವರು ತಿಳಿಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕರ್ನಾಟಕ ರಾಜ್ಯ ಕಲಾವಿದರ ಒಕ್ಕೂಟವು ಇತ್ತೀಚೆಗೆ ತೆರೆಕಂಡ ಹೆಡ್ ಬುಷ್ ಚಲನಚಿತ್ರದಲ್ಲಿ ವೀರಗಾಸೆ ಕಲೆಯನ್ನು ಅವಮಾನಿಸಲಾಗಿದೆ ಎಂದು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಸ್ವಾಮೀಜಿಗಳು ಭಾರತದಲ್ಲಿ ಸನಾತನ ಧರ್ಮವಾಗಿ ಹಿಂದೂ ಧರ್ಮ ಬೆಳೆಸಿದ್ದು ಧರ್ಮದಲ್ಲಿ ಜನಪದ ಕಲೆ ಸಾಹಿತ್ಯ ಸಂಗೀತ ಸೇರಿದಂತೆ ಇತರೆ ಕಲಾ ಪ್ರಕಾರಗಳು ತಮ್ಮದೇ ಆದ ವೈಶಿಷ್ಟ್ಯದಿಂದ ಧರ್ಮ ಪ್ರಚಾರ ಮಾಡುತ್ತಾ ಬಂದಿವೆ ಇಂತಹ ಕಲೆಗಳನ್ನ ಸಾವಿರಾರು…
ತುಮಕೂರು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ಮದ್ಯಸೇವನೆಯ ವಿರುದ್ದ ಜಿಲ್ಲೆಯಾದ್ಯಂತ ದಂಡ ವಿಧಿಸುವುದು ಹಾಗೂ ತಪಾಸಣೆ ತಂಡಗಳು ಭೇಟಿ ನೀಡುವುದನ್ನು ಹೆಚ್ಚಿಸÀಬೇಕು ಎಂದು ಜಿಲ್ಲಾಧಿಕಾರಿ ವ್ಯೆ.ಎಸ್ ಪಾಟೀಲ ಹೇಳಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ತ್ರ್ಯೆಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಕಠಿಣ ಕ್ರಮಕ್ಕೆ ಸೂಚನೆ ತಂಬಾಕು ಸೇವನೆ ದುಷ್ಪರಿಣಾಮದ ಕುರಿತು ಪ್ರೌಢಶಾಲೆ ಮತ್ತು ಪಿಯುಸಿ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಪ್ರಬಂಧ ಸ್ಪರ್ಧೆ, ವಿದ್ಯಾರ್ಥಿಗಳಿಂದ ಜಾಥಾ, ವಿಚಾರ ಸಂಕಿರಣಗಳನ್ನು ಆಯೋಜಿಸಬೇಕು. ಶಾಲೆ ಕಾಲೇಜುಗಳು ‘ತಂಬಾಕು ಉತ್ಪನ್ನ ಮಾರಾಟ, ಸೇವನೆ ನಿμÉೀಧಿತ ವಲಯ’ಗಳಾಗಿದ್ದು, ಸುತ್ತಮುತ್ತ ತಂಬಾಕು ಉತ್ಪನ್ನಗಳ ಅನಧಿಕೃತ ಮಾರಾಟಕ್ಕೆ ಕಡಿವಾಣ ಹಾಕಿ, ಕಠಿಣ ಕ್ರಮ ಕ್ಯೆಗೊಂಡು ಜಿಲ್ಲೆಯ ಶಾಲೆಗಳನ್ನು ತಂಬಾಕು ಮುಕ್ತ ಶಾಲೆಗಳನ್ನಾಗಿಸಬೇಕು, ತಂಬಾಕು ನಿಯಂತ್ರಣ ಕೋಶದ ತಂಡದೊಂದಿಗೆ ಆಗ್ಗಾಗ್ಗೆ ಶಾಲೆಗಳಿಗೆ ಭೇಟಿ ನೀಡಬೇಕು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು. ಹದಿಹರೆಯದ ಮಕ್ಕಳು ಬಗ್ಗೆ ವಿಶೇಷ ನಿಗಾವಹಿಸಿ: ಸಹವಾಸ, ಸಮಾಜಿಕ ಜಾಲತಾಣ…
ತುಮಕೂರು ಮಾತೃ ಭಾಷೆಯಲ್ಲೇ ವೈದ್ಯಕೀಯ ಶಿಕ್ಷಣ, ಇಂಜಿನಿಯರಿಂಗ್ ಶಿಕ್ಷಣ, ಜ್ಞಾನ-ವಿಜ್ಞಾನಗಳನ್ನು ನೀಡಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಚಿಂತಿಸುತ್ತಿದೆ. ಈ ಮಟ್ಟಕ್ಕೆ ಕನ್ನಡ ಭಾಷೆಯನ್ನು ಬೆಳೆಸುವ, ಪರಿವರ್ತಿಸುವ ಕೆಲಸ ಭಾಷಾ ತಜ್ಞರಿಂದ ಆಗಬೇಕಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಆರಗ ಜ್ಞಾನೇಂದ್ರ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಜಿಲ್ಲಾಡಳಿತದ ವತಿಯಿಂದ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಇಂದು ಏರ್ಪಡಿಸಲಾಗಿದ್ದ 67ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ, ಧ್ವಜಾರೋಹಣ ನೆರವೇರಿಸಿ, ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಕರುನಾಡು ಒಟ್ಟಾಗಿ ‘ಕರ್ನಾಟಕ’ ರಾಜ್ಯ ಆದಂತಹ ಈ ಸಂದರ್ಭವನ್ನು ಕನ್ನಡ ಹಬ್ಬವನ್ನಾಗಿ ನಾಡಿನ ಮೂಲೆ ಮೂಲೆಗಳಲ್ಲಿ ಆಚರಿಸಲಾಗುತ್ತಿದೆ. ಕರ್ನಾಟಕ ರಾಜ್ಯ ಉದಯವಾಗಿ 67 ವರ್ಷಗಳು ಸಂದಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಮದ್ರಾಸ್, ಹೈದರಾಬಾದ್, ಮುಂಬೈ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡ ನಾಡಿನ ನೆಲ, ಜಲ ಒಗ್ಗೂಡಿದಂತಹ ಹೆಮ್ಮೆಯ ದಿನ. ಸುಮಾರು 2000 ವರ್ಷಗಳ ಇತಿಹಾಸವಿರುವ ಕನ್ನಡ ನಾಡಿನಲ್ಲಿ ಇಲ್ಲಿಯ ರಾಜರು ಮಹಾರಾಜರು ಅನೇಕ…
ಗುಬ್ಬಿ ನಾಳೆಯಿಂದ ರಾಜ್ಯದಲ್ಲಿ ಪಂಚರತ್ನ ರಥ ಪ್ರಾರಂಭವಾಗಲಿದ್ದು, ಗುಬ್ಬಿ ತಾಲ್ಲೂಕಿಗೆ 19ರಂದು ಸಾವಿರಾರು ಕಾರ್ಯಕರ್ತರೊಡನೆ ಬರಮಾಡಿಕೊಳ್ಳಲಾಗುತ್ತದೆ ಎಂದು ಜೆ.ಡಿ.ಎಸ್ ಅಭ್ಯರ್ಥಿ ಬಿ.ಎಸ್.ನಾಗರಾಜು ತಿಳಿಸಿದರು. ಪಟ್ಟಣದ ತಮ್ಮ ಗೃಹದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಈಗಾಗಲೇ ಪೂರ್ವಭಾವಿ ಸಭೆಗಳನ್ನು ನಡೆಸಿದ್ದು ಇದರಿಂದ ಪಂಚರತ್ನ ರಥವು ಯಾವ ಯಾವ ಕಡೆ ಸಂಚರಿಸಬೇಕೆಂಬುದನ್ನು ಆಯಾ ಹೋಬಳಿಯ ಕಾರ್ಯಕರ್ತರುಗಳೇ ತೀರ್ಮಾನಿಸಿದ್ದು ಆಗಾಗಿ ಗುಬ್ಬಿಯಿಂದ ಕೆ.ಜೆ.ಟೆಂಪಲ್, ಕಡಬ, ನಿಟ್ಟೂರು, ಎಂ.ಎನ್.ಕೋಟೆ, ಚೇಳೂರು ಈ ಭಾಗದಲ್ಲಿ ಸಂಚರಿಸಿ ಹೊಸಕೆರೆಯಲ್ಲಿ ಬೃಹತ್ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದ್ದು, ಸುಮಾರು 10-12ಸಾವಿರ ಕಾರ್ಯಕರ್ತರುಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ ಅವರು ಹಾಗಲವಾಡಿಯಲ್ಲಿ ವಾಸ್ತವ್ಯ ಹೂಡಲಿದ್ದು ಅಂದಿನ ಸಂಜೆ ರೈತರಿಂದ ಸಂವಾದ ಕಾರ್ಯಕ್ರಮ ಹಾಗೂ ಅತಿವೃಷ್ಠಿ ಮಳೆಯಿಂದಾದ ಪರಿಹಾರ ಹಾಗೂ ರಾತ್ರಿ ಜಾನಪದ ಮತ್ತು ಸ್ಥಳೀಯ ಕಲಾವಿದರಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದ ಅವರು 2023ಕ್ಕೆ ಜನತಾ ಸರ್ಕಾರವು ಬರಲಿದ್ದು ಸಿ.ಎಂ. ಕುಮಾರಸ್ವಾಮಿಯವರೆ ಮುಖ್ಯಮಂತ್ರಿಯಾಗುತ್ತಾರೆ ಎಂದು ತಿಳಿಸಿದ ಅವರು ತಾಲ್ಲೂಕಿನಲ್ಲಿ ಅಭಿವೃದ್ದಿ ಕುಂಠಿತವಾಗಿದ್ದು ಮುಂದಿನ ದಿನಗಳಲ್ಲಿ ನನ್ನನ್ನು…











