ತುಮಕೂರು: ನಗರದ ವಿವೇಕಾನಂದ ಸ್ಟೋಟ್ರ್ಸ ಮತ್ತು ಕಲ್ಚರಲ್ ಅಸೋಸಿಯೇಷನ್(ರಿ), ಕರ್ನಾಟಕ ರಾಜ್ಯ ರೈಫಲ್ ಅಸೋಸಿಯೇಷನ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಆಗಸ್ಟ್ 12 ರಿಂದ 15ರವರೆಗೆ ರಾಷ್ಟ್ರಮಟ್ಟದ ಮುಕ್ತ ಆಹ್ವಾನಿತ 10 ಮೀಟರ್ ರೈಫಲ್ ಚಾಂಪಿಯನ್ ಶಿಫ್ ಪಂದ್ಯಾವಳಿಯನ್ನು ಆಯೋಜಿಸಿ ರುವುದಾಗಿ ವಿವೇಕಾನಂದ ಸ್ಪೋಟ್ರ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ನ ಕಾರ್ಯದರ್ಶಿ ಅನಿಲ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರಮಟ್ಟದ ಮುಕ್ತ ಅಹ್ವಾನಿತ ಈ ಪಂದ್ಯಾವಳಿಯಲ್ಲಿ ಒಲಂಪಿಕ್ ಪದಕ ವಿಜೇತ ಪ್ರಕಾಶ್ ನಂಜಪ್ಪ ಸೇರಿದಂತೆ 450ಕ್ಕು ಹೆಚ್ಚು ಜನ ಶೂಟರ್ಸ್ಗಳು ಭಾಗವಹಿಸುತಿದ್ದು, ಸಬ್ ಜೂನಿಯರ್, ಜೂನಿಯರ್, 14 ವರ್ಷದೊಳಗಿನ ಹಾಗೂ ಸಿವಿಲ್ ಈ ನಾಲ್ಕು ವರ್ಗಗಳಲ್ಲಿ,ಓಪನ್ ಸೈಟ್, ಪಿಫ್ಸೈಟ್ ಹಾಗೂ ಪಿಸ್ತೂಲ್ ವಿಭಾಗಗಳಲ್ಲಿ ಶೂಟಿಂಗ್ ಸ್ಪರ್ಧೆ ನಡೆಯಲಿದೆ.ಪದಕ ವಿಜೇತರಿಗೆ ಗರಿಷ್ಠ 30 ಸಾವಿರದಂತೆ ಒಟ್ಟು 5.12 ಲಕ್ಷ ರೂಗಳ ನಗದು ಬಹುಮಾನ ಹಾಗೂ ಮೆಡಲ್ಗಳನ್ನು ನೀಡಲಾಗುತ್ತಿದೆ. ಇದುವರೆಗು ಸುಮಾರು 450 ಜನರು ಪ್ರವೇಶ ಶುಲ್ಕ 900 ರೂ ಪಾವತಿಸಿ…
Author: News Desk Benkiyabale
ತುಮಕೂರು: ಭಾರತದ 75ನೇ ಸ್ವಾತಂತ್ರ್ಯೋತ್ಸವದ ಹಾದಿಯಲ್ಲಿ ಸ್ವಾತಂತ್ರ ರಕ್ಷಣೆ-ನಮ್ಮೆಲ್ಲರ ಹೊಣೆ ಸಂವಾದ ಕಾರ್ಯಕ್ರಮವನ್ನು ಭಾರತ ಕಮ್ಯೂನಿಷ್ಟ ಪಕ್ಷ ಜನಚಳವಳಿಯಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಡಾ. ಹೆಚ್.ಎಸ್ ನಿರಂಜನರಾಧ್ಯ ಮಾತನಾಡುತ್ತಾ ಬ್ರಿಟಿಷರು 200 ವರ್ಷಗಲ ಕಾಲ ಆಡಳಿತ ನಡೆಸಿ ನಮ್ಮ ದೇಶದ ಆಸ್ತಿ, ಸಂಪತ್ತು ಮತ್ತು ನೈಸರ್ಗಿಕ ಸಂಪತ್ತುಗಳನ್ನು ಲೂಟಿ ಒಡೆದುಕೊಂಡು ಹೋದರು. ಆದರೆ ಸ್ವಾತಂತ್ರ ಬಂದ 75 ವರ್ಷಗಳಲ್ಲಿ ನಾವು ಆರ್ಥಿಕವಾಗಿ ಸದೃಢವಾಗಲು ಕಾರಣವಾದುದ್ದು ನಮ್ಮ ದೇಶದ ಜನರ ತೆರಿಗೆಯಿಂದ ಕಟ್ಟಿದ ಸಾರ್ವಜನಿಕ ಉದ್ಯಮಗಳು ಅವುಗಳನ್ನು ಈ ಸರ್ಕಾರ ಬಿಕ್ಕಟಿಗೆ ದೂಡಿ ಕಾರ್ಪೋರೇಟ್ ಕಂಪನಿಗಳಿಗೆ ಕಡಿಮೆ ಬೆಲೆಗೆ ಕೇಂದ್ರ ಸರ್ಕಾರ ದಾರೆ ಎರೆಯುತ್ತಿವೆ ಎಂದರು. ಅವರು ಮುಂದುವರೆದು ಮಾತನಾಡುತ್ತಾ ದೇಶದ ಸ್ವಾತಂತ್ರಕ್ಕಾಗಿ ನಿಜವಾಗಿ ಹೋರಾಡಿದವರು ಕಮ್ಯೂನಿಷ್ಟರ ನೇತೃತ್ವದಲ್ಲಿ ಕಾರ್ಮಿಕರು ಮತ್ತು ರೈತರು ಕಾಂಗ್ರೆಸ್ ಕೂಡ ಸ್ವಾತಂತ್ರ ಚಳವಳಿಯಲ್ಲಿ ಕೇವಲ ಡೊಮಿಯನ್ ಸ್ಟೇಟಸ್ ಗಾಗಿ ಬೇಡಿಕೆ ಸಲ್ಲಿಸಿದಾಗ ಮೊದಲಬಾರಿಗೆ ಪೂರ್ಣ ಸ್ವರಾಜ್ಯದ ಬೇಡಿಕೆಯನ್ನು ಕಾಂಗ್ರೆಸ್ ಅಧಿವೇಶನದಲ್ಲಿ ಮಂಡಿಸಿದ ಕೀರ್ತಿ ಕಮ್ಯುನಿಷ್ಟರಿಗೆ ಸಲ್ಲುತ್ತದೆ. ಆದರೂ…
ತುಮಕೂರು: ಸ್ವಾತಂತ್ರ ಚಳವಳಿಯಲ್ಲಿ ಕಾಂಗ್ರೆಸ್ ಪಕ್ಷ ವಹಿಸಿದ್ದ ಪಾತ್ರವನ್ನು ಇಂದಿನ ಯುವಜನರಿಗೆ ತಿಳಿಸುವ ನಿಟ್ಟಿನಲ್ಲಿ ಎಐಸಿಸಿ ಮತ್ತು ಕೆಪಿಸಿಸಿಯ ನಿರ್ದೇಶನದಂತೆ ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರೀಡಂ ಮಾರ್ಚ್ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಡಾ.ರಫೀಕ್ ಅಹಮದ್ ತಿಳಿಸಿದ್ದಾರೆ. ನಗರದ ಬೋರೇಗೌಡನ ಪಾಳ್ಯ ಸರ್ಕಲ್ (ಬಿ.ಜಿ.ಪಾಳ್ಯ ಸರ್ಕಲ್)ನಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪಾದಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬ್ರಿಟಿಷರನ್ನು ಭಾರತದಿಂದ ತೊಲಗಿಸಬೇಕು ಎಂಬ ಉದ್ದೇಶದಿಂದ 1885ರಲ್ಲಿ ಉದಯಿಸಿದ ಕಾಂಗ್ರೆಸ್ ಪಕ್ಷ, 1947ರವರೆಗೆ ನಿರಂತರವಾಗಿ ಹಲವಾರು ಹೋರಾಟ, ಸತ್ಯಾಗ್ರಹಗಳಲ್ಲಿ ಪಾಲ್ಗೊಂಡ ಪರಿಣಾಮ ದೇಶ ಬ್ರಿಟಿಷರ ಕಪಿ ಮುಷ್ಠಿಯಿಂದ ಹೊರಬರಲು ಸಾಧ್ಯವಾಯಿತು. ಈ ವಿಚಾರ ಇಂದಿನ ಯುವಜನತೆಗೆ ಅಷ್ಟಾಗಿ ತಿಳಿದಿಲ್ಲ.ಹಾಗಾಗಿ ಬಿಜೆಪಿ ಪಕ್ಷದ ಸುಳ್ಳು ಭರವಸೆಗಳ ಮತ ನೀಡಿ ಪರಿತಪಿಸುತ್ತಿರುವ ಯುವಜನತೆಗೆ ಸ್ವಾತಂತ್ರ ಹೋರಾಟದ ವಿವಿಧ ಮಜುಲುಗಳನ್ನು ಪರಿಚಯಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಜನರ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಈ ಪಾದಯಾತ್ರೆ ಮಹತ್ವ ಪಡೆದುಕೊಂಡಿದೆ ಎಂದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ…
ತುಮಕೂರು: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 78ನೇ ಜನ್ಮದಿನ ನಿಮಿತ್ತ ರಾಜೀವ್ ಗಾಂಧಿ ಜ್ಯೋತಿ ಯಾತ್ರಾ ಸಮಿತಿ ಮತ್ತು ಕೆಪಿಸಿಸಿ ಕಾರ್ಮಿಕ ವಿಭಾಗದಿಂದ ಹಮ್ಮಿಕೊಂಡಿರುವ ರಾಜೀವ್ ಜ್ಯೋತಿ ಸದ್ಭಾವನಾ ಯಾತ್ರೆಗೆ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ ಅದ್ಧೂರಿ ಸ್ವಾಗತ ಕೋರಿದರು. ಪೆರಂಬದೂರಿನಿಂದ ಹೊಸದಿಲ್ಲಿಯ ವೀರಭೂಮಿಯವರೆಗೆ ದೇಶದ ವಿವಿಧ ರಾಜ್ಯಗಳಲ್ಲಿ ಸಂಚರಿಸಲಿರುವ ಈ ಯಾತ್ರೆ ಬುಧವಾರ ಜಿಲ್ಲೆಗೆ ಆಗಮಿಸಿತು. ಪೆರಂಬದೂರ್ನಿಂದ ಬೆಂಗಳೂರಿಗೆ ಆಗಮಿಸಿದ ಈ ಜ್ಯೋತಿಯಾತ್ರೆಗೆ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ನ ಎಲ್ಲಾ ನಾಯಕರು ಚಾಲನೆ ನೀಡಿದ್ದು, ಇಂದು ತುಮಕೂರಿಗೆ ಆಗಮಿಸಿದೆ. ರಾಜೀವ್ ಜ್ಯೋತಿ ಸದ್ಭಾವನಾ ಯಾತ್ರೆಗೆ ಅದ್ದೂರಿ ಸ್ವಾಗತ ಕೋರಿ ಮಾತನಾಡಿದ ಮುರಳೀಧರ ಹಾಲಪ್ಪ ಅವರು, ರಾಜೀವ್ಗಾಂಧಿಯವರ 78ನೇ ಜನ್ಮದಿನದಂದು ನಾವು ನಮ್ಮ ರಾಜೀವ್ ಜ್ಯೋತಿ ಸದ್ಭಾವನಾ ಯಾತ್ರೆಯನ್ನು ನಡೆಸುತ್ತಿದ್ದೇವೆ ಎಂದರು. ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಹರಿಯಾಣ ಮತ್ತು ದೆಹಲಿ…
ತುಮಕೂರು: ದಲಿತರನ್ನು ಕೇವಲ ಮತಬ್ಯಾಂಕುಗಳಾಗಿ ಮಾಡಿಕೊಂಡಿರುವ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಕ್ಕೆ ಪರ್ಯಾಯವಾಗಿ ದಲಿತರು, ಹಿಂದುಳಿದವರ್ಗದವರು, ಮುಸ್ಲಿಂರು ಹಾಗೂ ಬಡವರು ಸೇರಿ ಹೊಸ ರಾಜಕೀಯ ಪಕ್ಷವನ್ನು ಹುಟ್ಟು ಹಾಕುತ್ತಿದ್ದು, 2022ರ ಸೆಪ್ಟಂಬರ್ 14 ರಂದು ಬಡವರ, ಶ್ರಮಿಕರ ಪಕ್ಷ ರಾಷ್ಟ್ರದಲ್ಲಿ ಉದಯವಾಗಲಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಡಾ.ಎನ್.ಮೂರ್ತಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕಳೆದ 75 ವರ್ಷಗಳ ಕಾಲ ಅಧಿಕಾರ ನಡೆಸಿದ ನಡೆಸಿದ ಕಾಂಗ್ರೆಸ್ ಹಾಗೂ ಕಾಂಗ್ರೆಸೇತರ ಪಕ್ಷಗಳು ಈ ದೇಶದ ದಲಿತರನ್ನು ಅತ್ಯಂತ ನಿಕೃಷ್ಟವಾಗಿ ಕಂಡಿದೆ. ಬಡತನ, ನಿರುದ್ಯೋಗ, ಅಸ್ಪøಷ್ಯತೆ, ದಲಿತರ ಮೇಲಿನ ದೌರ್ಜನ್ಯ ಇಂದಿಗೂ ನಿಂತಿಲ್ಲ.ದಲಿತರ ಪಾಲಿಗೆ ಬದಲಾವಣೆ ಎಂಬುದು ಮರೀಚಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಕರ್ನಾಟಕ ದಲಿತ ಸಂಘರ್ಷ ಸಮಿತಿ,ರಾಜ್ಯದ ವಿವಿಧ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರೊಂದಿಗೆ ನಿರಂತರ ಚರ್ಚೆ ನಡೆಸಿ, ಒಂದು ರಾಜಕೀಯ ಪಕ್ಷವನ್ನು ಹುಟ್ಟು ಹಾಕುವ, ಆ ಮೂಲಕ ರಾಜಕಾರಣದಲ್ಲಿ ಬಡವರಿಗೂ ಸ್ಥಾನಮಾನ ದೊರಕಿಸುವ ಪ್ರಯತ್ನ…
ತುರುವೇಕೆರೆ: ತಾಲೂಕಿನ ಬೀಚನಹಳ್ಳಿಯ ಆರ್.ಟಿ.ಐ ಕಾರ್ಯಕರ್ತ ಕಿರಣ್ಕುಮಾರ್ ಕೊಲೆ ಆರೋಪದ ಮೇಲೆ ಶಂಕಿತ ಇಬ್ಬರು ಆರೋಪಿಗಳನ್ನು ಪೋಲಿಸರು ಬಂದಿಸುವಲ್ಲಿ ಯಶ್ವಸ್ವಿಯಾಗಿದ್ಧಾರೆ. ಮೇ 13 ರಂದು ಬೀಚನಹಳ್ಳಿಯ ಕಿರಣ್ ಕುಮಾರ್ (50) ಹೃದಯಾಘಾತದಿಂದ ನಿಧನರಾಗಿದ್ದಾರೆಂದು ಶವವನ್ನು ಸಮಾಧಿ ಮಾಡಲಾಗಿತ್ತು. ಆದರೆ ಕಿರಣ್ ಕುಮಾರ್ ರವರ ಸಾವಿನಲ್ಲಿ ಅನುಮಾನವಿದೆ ಎಂದು ಕಿರಣ್ಕುಮಾರ್ ತಮ್ಮನ ಮಗ ವೈಭವ್ ಅನುಮಾನ ವ್ಯಕ್ತಪಡಿಸಿ ದಲಿತ ಸಂಘರ್ಷ ಸಮಿತಿ ತಾಲೂಕು ಘಟಕದ ಅಧ್ಯಕ್ಷ ಕುಣಿಕೇನಹಳ್ಳಿ ಜಗದೀಶ್ ಬಳಿ ತನ್ನ ನೋವನ್ನು ತೋಡಿಕೊಂಡಿದ್ದ ಅದರಂತೆ ಸಂಘಟನೆಯ ಸಹಾಯ ಪಡೆದು ತಮ್ಮನ ಮಗ ವೈಭವ್ ಜುಲೈ 4 ರಂದು ಪೋಲಿಸರಿಗೆ ದೂರು ನೀಡಿದ್ದರ ಹಿನ್ನೆಲೆಯಲ್ಲಿ ಜುಲೈ 26 ರಂದು ಉಪವಿಭಾಗಾಧಿಕಾರಿ ಸಿ.ಆರ್.ಕಲ್ಪಶ್ರೀ ಸಮ್ಮುಖದಲ್ಲಿ ಕಿರಣ್ಕುಮಾರ್ ಶವವನ್ನು ಸಮಾಧಿಯಿಂದ ಹೊರತೆಗೆದು ಮರಣೊತ್ತರ ಪರೀಕ್ಷೆ ನಡೆಸಿ ಕೆಲವು ದೇಹದ ಅಂಗಾಂಗಗಳನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿತ್ತು. ವೈದ್ಯರ ಮರಣೋತ್ತರ ವರದಿಯನ್ವಯ ಕಿರಣ್ ಕುಮಾರ್ ಸಾವು ಸಹಜವಲ್ಲ. ಅಸಹಜ ಹಾಗೂ ತಲೆಗೆ ಪೆಟ್ಟುಬಿದ್ದು ಸಾಯಿಸಲಾಗಿದೆ ಎಂದು ನೀಡಿದ…
ತುಮಕೂರು: ಕೇಂದ್ರದ ಬೆಲೆ ಹೆಚ್ಚಳ, ನಿರುದ್ಯೋಗ, ಅವೈಜ್ಞಾನಿಕ ಜಿ.ಎಸ್.ಟಿ ಮತ್ತಿತರ ವಿಚಾರಗಳನ್ನು ಮುಂದಿಟ್ಟುಕೊಂಡು ಯುವ ಕಾಂಗ್ರೆಸ್ ತುಮಕೂರು ಜಿಲ್ಲಾ ಘಟಕದ ವತಿಯಿಂದ ನಗರದ ಟೌನ್ಹಾಲ್ ಮುಂಭಾಗದಲ್ಲಿ ಒಂದು ಎರಡು ದಿನಗಳ ಅಹೋರಾತ್ರಿ ಧರಣಿಯನ್ನು ಯುವ ಕಾಂಗ್ರೆಸ್ ಅಧ್ಯಕ್ಷ ಶಶಿ ಹುಲಿಕುಂಟೆ ಮಠ್ ಅವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಧರಣಿ ನಿರತ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶಶಿ ಹುಲಿಕುಂಟೆ ಮಠ್,ಇಂದು ದೇಶದೆಲ್ಲೆಡೆ ಸ್ವಾತಂತ್ರದ 75ನೇ ವರ್ಷದ ಅಮೃತಮಹೋತ್ಸವ ಕಾರ್ಯಕ್ರಮವನ್ನು ನಾವೆಲ್ಲರೂ ಆಚರಿಸಲು ಸಿದ್ದರಾಗಿ ದ್ದೇವೆ.ಆದರೆ ಬಿಜೆಪಿ ಸರಕಾರ ಜನಸಾಮಾನ್ಯರು ದಿನ ನಿತ್ಯ ಬಳಸುವ ವಸ್ತುಗಳ ಮೇಲೆ ಬೆಲೆ ಹೆಚ್ಚಳ ಮಾಡಿ, ಅವರ ಬದುಕನ್ನು ನರಕ ಮಾಡಿದೆ.ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಮೋದಿ ಅವರ ಭರವಸೆ ಹುಸಿಯಾಗಿದೆ. ಬದಲಾಗಿ ಅವೈಜ್ಞಾನಿಕ ಜಿ.ಎಸ್.ಟಿ, ನೋಟ್ ಬ್ಯಾನ್ನಿಂದಾಗಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಸಾವಿರಾರು ಸಣ್ಣ ಮತ್ತು ಮದ್ಯಮ ಕೈಗಾರಿಕೆಗಳು ಬಾಗಿಲು ಮುಚ್ಚಿದ್ದು, ದುಡಿಯುವ ಕೈಗಳಿಗೆ ಉದ್ಯೋಗವಿಲ್ಲದ ಹತಾಶರಾಗಿ ಕಾಲ ಕಳೆಯುವಂತಹ ಸ್ಥಿತಿಯನ್ನು ತಂದಿದೆ…
ತುಮಕೂರು: ಭಾರತ ಸ್ವಾತಂತ್ರ್ಯ ಅಂಗವಾಗಿ 75 ಪಾದಯಾತ್ರಿಗಳ ತಂಡ ಆ.12 ಶುಕ್ರವಾರ ದೊಡ್ಡಬಳ್ಳಾಪುರ ಟಿ.ಬಿ.ಸರ್ಕಲ್ ನಿಂದ ಹೊರಟು 14 ರಂದು ಸಂಜೆ ವಿದುರಾಶ್ವತ್ಥ ತಲುಪಲಿದೆ. 50 ರೋವರ್ಸ್, 15 ಎನ್ಎಸ್ಎಸ್ ವಿದ್ಯಾರ್ಥಿಗಳು, 10 ಹಿರಿಯ ಸರ್ವೋದಯ ಚಿಂತಕರು ಹೆಜ್ಜೆ ಹಾಕಲಿದ್ದಾರೆ ಎಂದು ಸರ್ವೋದಯ ಮಂಡಲ ಜಿಲ್ಲಾಧ್ಯಕ್ಷ ಆರ್.ವಿ.ಪುಟ್ಟಕಾಮಣ್ಣ ತಿಳಿಸಿದ್ದಾರೆ. ಈ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶದ ಹಿರಿಯರ ತ್ಯಾಗ, ಬಲಿದಾನದ ಅರಿವನ್ನು ಯುವಕರಲ್ಲಿ ಮೂಡಿಸುವ ಸಲುವಾಗಿ ಕರ್ನಾಟಕ ಸರ್ವೋದಯ ಮಂಡಲ-ಬೆಂಗಳೂರು ಈ ಪಾದಯಾತ್ರೆ ಆಯೋಜಿಸಿದೆ. ಜೊತೆಗೆ ಮಾರ್ಗ ಮಧ್ಯದಲ್ಲಿ ಬರುವ ಎಲ್ಲಾ ಗ್ರಾಮ, ಜನ ವಸತಿ ಪ್ರದೇಶದಲ್ಲಿ ಮಹಾತ್ಮ ಗಾಂಧೀಜಿ ಅವರ 100 ಭಿತ್ತಿ ಚಿತ್ರ ಪ್ರದರ್ಶನ, ಮಾರಾಟ ನಡೆಯಲಿದೆ. ಆ.14 ರಂದು ಬೆಳಗ್ಗೆ 7-30 ಗಂಟೆಗೆ ತುಮಕೂರು ಸರ್ವೋದಯ ಕಾರ್ಯಕರ್ತರು ಗಾಂಧೀಜಿ ವಾಸ್ತವ್ಯಹೂಡಿದ್ದ ಶಾಲೆಯಿಂದ ತೆರಳಲಿದ್ದು, ಗಾಂಧಿ ಚಿಂತಕರಾದ ಎಂ.ಬಸವಯ್ಯ, ಟಿ.ಆರ್.ರೇವಣ್ಣ, ಜಿ.ವಿ.ವಿ.ಶಾಸ್ತ್ರಿ , ಎಲ್.ನರಸಿಂಹಯ್ಯ ತೊಂಡೋಟಿ, ಎಂ.ವಿ.ನಂಜಪ್ಪ, ಕೆ.ಸಿ.ಬಸಪ್ಪ, ಎಸ್.ನಾಗಣ್ಣ ಇತರರು ಭಾಗವಹಿಸಿ ಪಾದಯಾತ್ರಿಗಳಿಗೆ ಶುಭಕೋರಲಿದ್ದಾರೆ. ತುಮಕೂರಿನ ಸರ್ವೋದಯ…
ತುಮಕೂರು: ಮಧುಗಿರಿ ಬೆ.ವಿ.ಕಂ. ವ್ಯಾಪ್ತಿಯಲ್ಲಿನ ಮಧುಗಿರಿ, ಕೊಡಿಗೇನಹಳ್ಳಿ, ಕೊರಟಗೆರೆ, ಶಿರಾ ನಗರ, ಶಿರಾ ಗ್ರಾಮೀಣ, ಪಾವಗಡ ಉಪವಿಭಾಗಗಳಲ್ಲಿ 438363 ಗ್ರಾಹಕರಿಂದ ಒಟ್ಟು 366 ವಿದ್ಯುತ್ ಮಾರ್ಗಗಳಿಂದ 16520.34 ಕಿ.ಮೀ. ಉದ್ದದ 11ಕೆವಿ ಮಾರ್ಗ ಮತ್ತು 24985.99 ಕಿ.ಮೀ. ಎಲ್.ಟಿ. ಮಾರ್ಗ ಮತ್ತು 31255 ಸಂಖ್ಯೆಯ ವಿವಿಧ ಸಾಮಥ್ರ್ಯದ ಪರಿವರ್ತಕಗಳು ಬರುತ್ತಿರುವುದರಿಂದ ಸಾರ್ವಜನಿಕರು ಈ ಕೆಳಕಂಡ ನಿಯಮಗಳನ್ನು ಪಾಲಿಸಬೇಕು ಎಂದು ಕಾರ್ಯನಿರ್ವಾಹಕ ಇಂಜಿನಿಯರ್ ಸೈಯದ್ ಮಹಮೂದ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ. ಮಳೆಗಾಲ ಪ್ರಾರಂಭವಾಗಿರುವುದರಿಂದ ಭಾರಿ ಗಾಳಿ ಮತ್ತು ಮಳೆಗೆ ಮರಗಿಡಗಳು ಬೆ.ವಿ.ಕಂ.ನ ಮಾರ್ಗಗಳ ಮೇಲೆ ಬಿದ್ದು, ತಂತಿಗಳು ತುಂಡಾಗಿ ಅಪಾಯವಾಗುವ ಸಂಭವವಿದ್ದು, ಮೇಲ್ಕಂಡ ಶಾಖೆಗೆ ಒಳಪಡುವ ಸಾರ್ವಜನಿಕರು ಮಾರ್ಗಗಳ ಕೆಳಗೆ ತೋಟಗಳನ್ನು ನಿರ್ಮಿಸುವುದು, ಕಟ್ಟಡ ನಿರ್ಮಾಣ ಕೆಲಸ, ವಿದ್ಯುತ್ ಕಂಬಗಳಿಗೆ ತಂತಿ/ಹಗ್ಗ ಕಟ್ಟಿ ಬಟ್ಟೆ ಒಣಗಿಸುವುದು, ಸಾಕು ಪ್ರಾಣಿಗಳನ್ನು ಕಟ್ಟುವುದು, ಮನೆಗಳಿಗೆ ಅನಧೀಕೃತ ವಿದ್ಯುತ್ ಸಂಪರ್ಕ ಪಡೆಯಲು ಕೊಕ್ಕೆ ಹಾಕುವುದು. ಹುಲ್ಲಿನ ಬಣವೆ ಹಾಕುವುದು, ವಿದ್ಯುತ್ ಕಂಬಗಳಿಗೆ ಹಾಕಿರುವ ಆಧಾರ ತಂತಿಗಳನ್ನು ತೆಗೆಯುವುದು,…
ತುಮಕೂರು: ನಗರದ 15ನೇ ವಾರ್ಡಿಗೆ ಸಂಬಂಧಿಸಿದಂತೆ ಪ್ರತಿ ರಸ್ತೆ, ಬಡಾವಣೆಗಳ ಗುರುತಿಗಾಗಿ ನಾಮಫಲಕ ಹಾಕುವ ಕಾರ್ಯಕ್ಕೆ ವಾರ್ಡಿನ ಪಾಲಿಕೆ ಸದಸ್ಯೆ ಗಿರಿಜಾ ಧನಿಯಕುಮಾರ್ ಚಾಲನೆ ನೀಡಿದರು. ನಗರದ ರೈಲ್ವೆ ನಿಲ್ದಾಣದ ಬಳಿ ಗಾಂಧಿನಗರ ಮುಖ್ಯರಸ್ತೆಗೆ ನಾಮಫಲಕ ಅಳವಡಿಸಲು ಪೂಜೆ ನೆರವೇರಿಸಿದ ನಂತರ ಮಾತನಾಡಿದ ಪಾಲಿಕೆಯ ಸದಸ್ಯೆ ಶ್ರೀಮತಿ ಗಿರಿಜಾ ಧನಿಯಕುಮಾರ್,ಸ್ಮಾರ್ಟ್ ಸಿಟಿವತಿಯಿಂದ 15ನೇ ವಾರ್ಡಿನಲ್ಲಿ ಕೈಗೊಂಡಿದ್ದ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿರುವ ಹಿನ್ನೇಲೆಯಲ್ಲಿ ವಾರ್ಡಿನ ರಸ್ತೆಗಳಿಗೆ ನಾಮಫಲಕ ಅಳವಡಿಸುವ ಕಾರ್ಯಕ್ಕೆ ಇಂದು ಚಾಲನೆ ನೀಡಲಾಗಿದೆ.15ನೇ ವಾರ್ಡಿನಲ್ಲಿ ಸುಮಾರು 120 ಕ್ಕೂ ಹೆಚ್ಚು ರಸ್ತೆ ಮತ್ತು ತಿರುವುಗಳಿದ್ದು, ಹಂತ ಹಂತವಾಗಿ ಎಲ್ಲಾ ತಿರುವುಗಳಿಗೂ ಪಾಲಿಕೆಯಿಂದ ನಾಮಫಲಕ ಅಳವಡಿಸಲಾಗುವುದು.ನಾಮಫಲಕಗಳಿಗೆ ಬಡಾವಣೆಯ ಹೆಸರು, ಎಷ್ಟನೇ ತಿರುವು ಎಂದು ನಮೂದಿಸುವುದರ ಜೊತೆಗೆ,ಕನ್ನಡ ಸಾಹಿತಿಗಳ ಹೆಸರನ್ನು ಅಳವಡಿಸುವ ಮೂಲಕ ಅವರುಗಳ ಹೆಸರನ್ನು ಜನಮಾನಸದಲ್ಲಿ ಉಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು. ನಾಮಫಲಕ ಅಳವಡಿಸುವುದರಿಂದ ನಗರಕ್ಕೆ ಹೊರಗಡೆಯಿಂದ ಬರುವವರಿಗೆ ಸುಲಭವಾಗಿ ತಾವು ಹೋಗಬೇಕಾದ ಬಡಾವಣೆ, ತಿರುವುಗಳನ್ನು ಪತ್ತೆ ಹೆಚ್ಚಲು ಸಾಧ್ಯವಾಗುತ್ತದೆ.ಅಲ್ಲದೆ ಕನ್ನಡ ಸಾಹಿತಿಗಳ…










