ತುಮಕೂರು: ನಗರದ ಸರಸ್ವತಿಪುರಂನಲ್ಲಿರುವ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು,.ಮೊದಲಿಗೆ ಕಾಲೇಜಿನ ಆವರಣದಲ್ಲಿ ಧ್ವಜಾರೋಹಣ ಹಾಗೂ ನಾಡಗೀತೆ ಹಾಡುವುದರ ಮೂಲಕ ಚಾಲನೆಯನ್ನು ನೀಡಲಾಯಿತು. ಕಾರ್ಯಕ್ರಮವನ್ನು ಹಂಪಿ ವಿಶ್ರಾಂತ ಪ್ರಾಧ್ಯಾಪಕರು ಹಾಗೂ ಖ್ಯಾತ ಕಥೆಗಾರರಾದ ಡಾ. ಕರಿಗೌಡ ಬೀಚನಹಳ್ಳಿ ಹಾಗೂ ವೇದಿಕೆಯ ಗಣ್ಯರಿಂದ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು, ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ ಕವಿಗಳು ಹಾಗೂ ಮುಖ್ಯ ಅತಿಥಿಗಳನ್ನು ಪ್ರೊ.ರಮೇಶ್ ಮಣ್ಣೇ ರವರು ಪ್ರಾಸ್ತಾವಿಕ ನುಡಿಗಳ ಮೂಲಕ ಅವರನ್ನು ಸಂಕ್ಷಿಪ್ತವಾಗಿ ಪರಿಚಯಿಸಿದರು. ಡಾ.ಕರಿಗೌಡ ಬೀಚನಹಳ್ಳಿ ಇವರು ಕನ್ನಡ ಭಾಷಾ ಚಳುವಳಿ , ಕನ್ನಡದ ಏಕೀಕರಣ, ಹಾಗೂ ರಾಜ್ಯೋತ್ಸವದ ಹಿನ್ನೆಲೆ ,ಪ್ರಾಮುಖ್ಯತೆ ,ಗ್ರಾಮೀಣ ಬದುಕು ,ಗ್ರಾಮೀಣ ಮಕ್ಕಳಿಂದ ಕನ್ನಡ ಉಳಿದಿದೆ ,”ಕನ್ನಡ ಜೀವಂತ ಭಾಷೆ “ಎಂದು ಭಾಷೆಯ ಒಲವನ್ನು ಹಾಗೂ ಅಖಂಡ ಕರ್ನಾಟಕವನ್ನು ಉಳಿಸಿಕೊಳ್ಳಬೇಕು ಎಂಬುದನ್ನು ಅರ್ಥಪೂರ್ಣವಾಗಿ ಹೇಳಿದರು . ತದನಂತರ ನಾನು ದಿಗ್ಗಜ ಅಲ್ಲ ಕೇವಲ ಗಜ ಎಂಬ…
Author: News Desk Benkiyabale
ತುಮಕೂರು: ವಿಜ್ಞಾನ, ತಂತ್ರಜ್ಞಾನದಲ್ಲಿ ನ್ಯೂಟನ್ ನಿಂದ ಹಿಡಿದು ಇಲ್ಲಿಯವರೆಗೆ ಹಲವಾರು ಹೊಸ ಆವಿಷ್ಕಾರಗಳು ನಡೆದಿದ್ದು, ತಕ್ಷಣದಲ್ಲಿ ಅವರು ಸಮಸ್ಯೆಗಳಿಗೆ ಪರಿಹಾರ ಒದಗಿಸಿದರೂ, ಧೀರ್ಘಕಾಲದಲ್ಲಿ ಜೀವ ವಿರೋಧಿಯಾಗಿ ಪರಿವರ್ತಿತ ವಾಗುವುದನ್ನು ನಾವು ಕಾಣುತಿದ್ದೇವೆ.ಹಾಗಾಗಿ ಕಣ್ಣಿಗೆ ಕಾಣದ ಹಾಗೂ ಕಾಣುವ ಜೀವಿಗಳೆರಡಕ್ಕೂ ಅನುಕೂಲವಾಗುವ ರೀತಿಯ ಸುಸ್ಥಿರ ಸಂಶೋಧನೆಗಳತ್ತ ನಾವೆಲ್ಲರೂ ಗಮನಹರಿಸಬೇಕಾಗಿದೆ ಎಂದು ಕರ್ನಾಟಕ ಸೈನ್ಸ್ ಅಂಡ್ ಟೆಕ್ನಾಲಜಿ ಅಕಾಡೆಮಿ ರಾಜ್ಯಾಧ್ಯಕ್ಷ ಡಾ.ಎ.ಹೆಚ್.ರಾಜಾಸಾಬ್ ಪ್ರತಿಪಾದಿಸಿದ್ದಾರೆ. ನಗರದ ಸರಕಾರಿ ಪ್ರಥಮದರ್ಜೆ ಕಾಲೇಜಿನ ವಿಜ್ಞಾನ ವಿಭಾಗದಿಂದ, ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿದ್ದ ಒಂದು ದಿನ “ಸೈನ್ಸ್ ಅಂಡ್ ಸೊಸೈಟಿ ಫಾರ್ ಸಸ್ಟೇನಬಲ್ ಪ್ಯೂಚರ್” ಎಂಬ ವಿಷಯ ಕುರಿತು ವಿಚಾರ ಸಂಕಿರಣದ ಪರಿಚಯ ಭಾಷಣ ಮಾಡಿದ ಅವರು,ಸ್ವಾತಂತ್ರ ನಂತರದಲ್ಲಿ ದೇಶದ ೩೩ ಕೋಟಿ ಜನರಿಗೆ ಆಹಾರ ಒದಗಿಸಲು ಹಸಿರು ಕ್ರಾಂತಿಯನ್ನು ಅಳವಡಿಸಿಕೊಳ್ಳಲಾಯಿತು.ಇದರ ಪರಿಣಾಮವಾಗಿ ಭಾರತ ಆಹಾರ ಸ್ವಾವಲಂಭನೆ ಸಾಧಿಸಿ ದರೂ,ಅಂತರಜಲ ಬಳಕೆ,ಅತಿಯಾದ ರಸಾ ಯನಿಕ ಬಳಕೆ,ಹೈಬ್ರಿಡ್ ತಳಿಗಳು,ಕೀಟನಾಶಕಗಳ ಪರಿಣಾಮ ಪರಿಸರ ನಾಶವಾಗಿ,ಕುಡಿಯುವ ನೀರು ಸಹ ವಿಷಯುಕ್ತವಾಯಿತು.ಇದರಿಂದ ಹೊರಬರಬೇಕಾದರೆ…
ಕುಣಿಗಲ್: ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಚೌಡನಕುಪ್ಪೆ ಗ್ರಾಮ ಪಂಚಾಯ್ತಿಯಲ್ಲಿ ಅಧ್ಯಕ್ಷ ಮತ್ತು ಪಿಡಿಒ ಕಾರಣದಿಂದ ನರೇಗಾ ಯೋಜನೆಯಡಿ ವಿವಿಧ ಕಾಮಗಾರಿಗಳನ್ನು ಮಾಡಿ ಕಳೆದ ನಾಲ್ಕು ವರ್ಷಗಳಿಂದ ಕಾದುಕುಳಿತಿದ್ದ ಸದಸ್ಯರು ಹಾಗು ರೈತರಿಗೆ ಇತ್ತಿಚೇಗೆ ಸಾಮಗ್ರಿ ವೇಚ್ಚ ಬಿಡುಗಡೆಯಾದರು ಸಹ ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೃಷ್ಣೇಗೌಡ, ಸಾಮಗ್ರಿ ವೇಚ್ಚದ ಬಿಲ್ ಪಾವತಿಸಲು ಬಯೋಮೇಟ್ರಿಕ್ ಮೂಲಕ ಸಹಿ ಮಾಡದ ಕಾರಣ ನರೇಗಾ ಯೋಜನೆಯಡಿ ಬಿಡುಗಡೆಯಾಗಿದ್ದ ೨೪ ಲಕ್ಷ ರೂಪಾಯಿ ಹಣ ಸರ್ಕಾರ ಹಿಂತೆಗೆದುಕೊ0ಡಿದ್ದು, ರಸ್ತೆ,ಚರಂಡಿ,ದನದ ಕೋಟ್ಟಿಗೆ,ಶಾಲಾ ಕಾಂಫೌ0ಡ್ ಸೇರಿ ಇತರೆ ಕಾಮಗಾರಿಗಳನ್ನು ಮಾಡಿ ಕಳೆದ ನಾಲ್ಕುವರ್ಷಗಳಿಂದ ಕಾದು ಕುಳಿತಿದ್ದ ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ರೈತರು ಹಣ ಬಿಡುಗಡೆಯಾದರು ಬಿಲ್ ಮಾಡದ ಕಾರಣ, ಬುಧವಾರ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಕುಳಿತಿದ್ದ ಅಧ್ಯಕ್ಷ ಕಾರ್ಯದರ್ಶಿ ಸಿಬ್ಬಂದಿಗಳನ್ನು ಕೂಡಿ ಬೀಗ ಹಾಕಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೃಷ್ಣೇಗೌಡ ವಿರುದ್ದ ಧಿಕ್ಕಾರ ಕೂಗಿದ ಘಟನೆ ನಡೆಯಿತು ಒಂದು ಗಂಟೆಯ ಕಾಲ ಅಧ್ಯಕ್ಷ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ದಿಗ್ಬಂಧನ…
ಹುಳಿಯಾರು: ರೈತ ಸಂಘ ಒತ್ತಾಯದಿಂದಾಗಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹುಳಿಯಾರು ಗಾಂಧಿ ಪೇಟೆಯಲ್ಲಿ ನಡೆಯುತ್ತಿದ್ದ ವಾರದ ಸಂತೆಯನ್ನು ಎಪಿಎಂಸಿಗೆ ಬದಲಾಯಿಸಲು ನಿರ್ಧರಿಸಿದ್ದರು. ಎಪಿಎಂಸಿಯಲ್ಲಿ ಸಂತೆ ಮೈದಾನದ ಜಾಗ ಫಿಕ್ಸ್ ಮಾಡಿ ನೆಲ ಸಮತಟ್ಟು ಮಾಡಲು ನೂರಾರು ಲೋಡ್ ಮಣ್ಣು ಸಹ ಹೊಡೆಸಲಾಗಿತ್ತು. ಅಲ್ಲದೆ ಪಟ್ಟಣ ಪಂಚಾಯ್ತಿಯಲ್ಲಿ ತುರ್ತು ಸಭೆ ನಡೆಸಿ ನೆಲ ಬಾಡಿಗೆಯನ್ನೂ ಸಹ ನಿರ್ಧರಿಸಿದ್ದರು. ಆದರೆ ಈಗ ಈ ಎಲ್ಲಾ ಕೆಲಸಕ್ಕೆ ತಣ್ಣೀರೆರಚುವಂತೆ ಎಪಿಎಂಸಿ ಹೆಜ್ಜೆ ಇಟ್ಟಿದೆ. ಎಪಿಎಂಸಿಯ ಕಾರ್ಯದರ್ಶಿ ಡಾ.ರಾಜಣ್ಣ ಅವರು ಪಟ್ಟಣ ಪಂಚಾಯ್ತಿಗೆ ಪತ್ರ ಬರೆದು ನೆಲ ಬಾಡಿಗೆ ನಿಗದಿ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎಪಿಎಂಸಿಗಳು ರಾಜ್ಯ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ಅಧಿನಿಯಮ ೧೯೬೬, ನಿಯಮಗಳು ೧೯೬೮ ರಡಿ ಕಾರ್ಯನಿರ್ವಹಿಸುತ್ತಿದ್ದು ಎಪಿಎಂಸಿಯಲ್ಲಿರುವ ಆಸ್ತಿ-ಪಾಸ್ತಿಗಳು ಸಂಪೂರ್ಣವಾಗಿ ಸ್ಥಳೀಯ ಪ್ರಾಧಿಕಾರಕ್ಕೆ ಸೇರಿರುತ್ತವೆ. ಎಪಿಎಂಸಿಯ ನಿವೇಶನವನ್ನಾಗಲಿ, ಕಟ್ಟಡಗಳನ್ನಾಗಲಿ ಹಂಚಿಕೆ ಮಾಡುವ ಪ್ರಾಧಿಕಾರದ್ದಾಗಿರುತ್ತದೆ. ಹಾಗಾಗಿ ಪಟ್ಟಣ ಪಂಚಾಯ್ತಿ ಯಾವ ಕಾನೂನಿನಡಿ ಎಪಿಎಂಸಿಯ ಖಾಲಿ ಜಾಗಕ್ಕೆ ದರ ನಿಗದಿ ಮಾಡಲಾಗಿರುತ್ತದೆ ಎಂದು ತಿಳಿದು…
ಚಿಕ್ಕನಾಯಕನಹಳ್ಳಿ: ವಿಶೇಷ ಚೇತನರ, ವೃದ್ದರ, ಮಕ್ಕಳ ಸೇವೆ ಮಾಡುವಂತಹ ಮನೋಭಾವ ಬೆಳೆಸಿಕೊಳ್ಳುವ ಮೂಲಕ ಸಮಾಜ ಮುಖಿಯಾಗಿ ಕೆಲಸ ಮಾಡಬೇಕಿದೆ ಈ ನಿಟ್ಟಿನಲ್ಲಿ ಮೊಬಿಲಿಟಿ ಇಂಡಿಯಾ ಸಂಸ್ಥೆಯ ಸೇವಾ ಕಾರ್ಯ ಶ್ಲಾಘನೀಯವಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು. ತಾಲ್ಲೂಕಿನ ಹಂದನಕೆರೆ ಹೋಬಳಿಯ ಗೂಬೆಹಳ್ಳಿಯ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಮೊಬಿಲಿಟಿ ಸಂಸ್ಥೆಯವರು ಏರ್ಪಡಿಸಲಾಗಿದ್ದ ಸಾಧನ ಸಲಕರಣೆಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ಹಲವಾರು ವರ್ಷಗಳಿಂದ ನಮ್ಮ ತಾಲ್ಲೂಕಿನಲ್ಲಿ ಕೆಲಸ ಮಾಡುತ್ತಿರುವ ಈ ಸಂಸ್ಥೆಯ ಕಾರ್ಯ ಉತ್ತಮವಾಗಿದೆ ಪ್ರತಿಯೊ ಬ್ಬರು ಸಮಾಜಮುಖಿಯಾಗಿ ವೃದ್ದರ, ಮಕ್ಕಳ , ವಿಶೇಷ ಚೇತನರ ಸೇವೆ ಮಾಡುವ ಗುಣ ಬೆಳೆಸಿಕೊಳ್ಳಬೇಕಿದೆ ಇಂದು ಕಣ್ಣಿನ ಪೊರೆ ಚಿಕತ್ಸೆ ಆಗಿರುವವರಿಗೆ ಕನ್ನಡಕ, ಊರುಗೋಲು, ವೀಲ್ಚೇರ್, ನೀಡುವಂತಹ ಹಲವಾರು ಕೆಲಸಗ ಳನ್ನು ಮಾಡುತ್ತಿರುವ ಈ ಸಂಸ್ಥೆಯೊAದಿಗೆ ಮುಂದಿನ ದಿನಗಳಲ್ಲಿ ತಾಲ್ಲೂಕಿನ ಸುಮಾರು ೫೦೦ ಜನ ವಿಶೇಷ ಚೇತನರಿಗೆ ಪುನಃಶ್ಚೇತನ ಗೊಳಿಸುವಂತಹ ಒಂದು ವಿಶೇಷ ಕೇಂದ್ರವನ್ನು ೫ ಎಕರೆ ಜಾಗದಲ್ಲಿ ಮಾಡುವ ಮೂಲಕ…
ಮಧುಗಿರಿ: ಸರ್ಕಾರ ಮತ್ತು ಅಧಿಕಾರಿಗಳು ಇರುವುದು ಬಡವರ ಪರ ಕೆಲಸ ಮಾಡಲು ಅದರಲ್ಲೂ ನಮ್ಮ ಸರ್ಕಾರದಲ್ಲಿ ತಂದಿರುವ ಅನೇಕ ಯೋಜನೆಗಳು ಬಡಜನರ ಉದ್ಧಾರಕ್ಕಾಗಿ ಬಡವರ್ಗದವರ ಏಳ್ಗೆಗಾಗಿಯೇ ಶ್ರಮಿಸಲಾಗುವುದು ಎಂದು ಮಾಜಿ ಸಚಿವ ಶಾಸಕ ಕೆ.ಎನ್. ರಾಜಣ್ಣ ತಿಳಿಸಿದರು. ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ಬುಧವಾರ ದೊಡ್ಡೇರಿ ಹೋಬಳಿಯ ಜನಸ್ಪಂದನಾ ಕಾರ್ಯಕ್ರಮ ಮತ್ತು ಕಾರ್ಯಾದೇಶ ಪತ್ರ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಜನತೆ ಅರ್ಜಿ ಹಿಡಿದು ಕಚೇರಿಗಳಿಗೆ ಅಲೆಯಬಾರದು ಎಂಬ ಉದ್ದೇಶ ದಿಂದ ಸರ್ಕಾರದ ವತಿಯಿಂದ ಜನಸ್ಪಂದನಾ ಕಾರ್ಯಕ್ರಮ ಜಾರಿಗೊಳಿಸಲಾಗಿದೆ ಕ್ಷೇತ್ರದ ಪ್ರತಿಯೊಬ್ಬರಿಗೂ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಬದ್ದ. ಈ ಹಿಂದೆ ಅತೀ ಹೆಚ್ಚು ಅರ್ಜಿಗಳು ಮನೆ ಮತ್ತು ನಿವೇಶನಕ್ಕೆ ಬರುತ್ತಿದ್ದವು. ಆದರೆ ನಾನು ಶಾಸಕನಾದ ನಂತರ ಅರ್ಹ ಫಲಾನು ಭವಿಗಳಿಗೆ ನಿವೇಶನ ನೀಡುವ ಯೋಜನೆ ಜಾರಿಗೊ ಳಿಸಿದ್ದರಿಂದ ಈಗ ಕ್ಷೇತ್ರವನ್ನು ಗುಡಿಸಲು ಮುಕ್ತ ಗೊಳಿಸಲಾಗಿದೆ ಎಂದರು. ಅರ್ಹರಿಗೆ ದೊರೆಯುವ ಸೌಲಭ್ಯ ಅನರ್ಹರಿಗೆ ದೊರೆತರೆ ಅದು ಮಹಾಪಾಪ. ಉದ್ಯೋಗದ ಸ್ಕಿಲ್ ಕಲಿತರೆ…
ತುಮಕೂರು: ನಗರದ ಗಾರ್ಡನ್ ರಸ್ತೆಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಈ ತಿಂಗಳ ೧೬ರಿಂದ ಅಯ್ಯಪ್ಪ ಸ್ವಾಮಿ ಮಂಡಲ ಪೂಜೆ, ಮಕರಜ್ಯೋತಿ ಮತ್ತು ಮಕರ ಸಂಕ್ರಾ0ತಿ ಪೂಜೆಗಳು ಆರಂಭವಾಗಲಿವೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷರಾದ ಟಿ.ಬಿ.ಶೇಖರ್ ಹೇಳಿದರು. ಈ ಸಂಬ0ಧ ಗುರುವಾರ ದೇವಸ್ಥಾನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ೧೬ರಂದು ಸಂಜೆ ೫.೩೦ಕ್ಕೆ ಅಯ್ಯಪ್ಪ ಸ್ವಾಮಿಯ ಮಂಡಲ ಪೂಜೆ ಸಂದರ್ಭದಲ್ಲಿ ಕವಿ ರಮೇಶ್ ನಂದಿಕೋಲು ರಚಿಸಿ, ಗಾಯಕ ಪೊಲೀಸ್ ರಮೇಶ್ ಧ್ವನಿ ನೀಡಿರುವ ಅಯ್ಯಪ್ಪ ಸ್ವಾಮಿ ಭಕ್ತಿ ಗೀತೆಗಳ ಶ್ರೀ ಶಾಸ್ತ ಗಾನಾಮೃತ ಎಂಬ ಅಯ್ಯಪ್ಪ ಸ್ವಾಮಿ ಭಕ್ತಿಗೀತೆಗಳ ಧ್ವನಿಸುರುಳಿ ಬಿಡುಗಡೆ ಮಾಡಲಾಗುತ್ತದೆ ಎಂದರು. ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಂಡಲ ಪೂಜಾ ಮಹೋತ್ಸವ ಉದ್ಘಾಟನೆ ನೆರವೇರಿಸಿದರೆ ಬೆಳ್ಳಾವಿ ಕಾರದೇಶ್ವರ ಮಠದ ಕಾರದ ವೀರಬಸವ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಧ್ವನಿಸುರುಳಿ ಬಿಡುಗಡೆ ಮಾಡುವರು. ಹಿಂದೂಸ್ತಾನಿ ಗಾಯಕ ಸಿದ್ಧೇಂದ್ರಕುಮಾರ್ ಹಿರೇಮಠ್, ಅಡಿಷನಲ್ ಎಸ್ಪಿಗಳಾದ ಸಿ.ಗೋಪಾಲ್, ಪುರುಷೋತ್ತಮ್,…
ತುಮಕೂರು: ನಗರದ ವಿದ್ಯಾವಾಹಿನಿ ಪ್ರಥಮದರ್ಜೆ ಕಾಲೇಜಿನಲ್ಲಿ ೭೦ನೇ ಕನ್ನಡ ರಾಜೋತ್ಸವವನ್ನು ಸಡಗರದಿಂದ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಅಧ್ಯಕ್ಷತೆಯನ್ನು ವಹಿಸಿದ್ದ ವಿ-ಟೆಕ್ ಸಲ್ಯೂಷನ್ಸ್ನ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಜೆ ನಾಗಪ್ರಿಯರವರು ಕಾರ್ಯಕ್ರಮ ಕುರಿತು ಮಾತನಾಡಿ, ಕನ್ನಡ ಭಾಷಾಪ್ರೇಮ, ನಾಡಪ್ರೇಮ ಮಾತಿನಲ್ಲಿ ತಿಳಿಸುವಂತದಲ್ಲ. ಅದು ನಮ್ಮ ಮನದಿಂದ ಮೂಡಿಬರುವಂತದಾಗಬೇಕು. ಕನ್ನಡ ನಾಡು, ಕನ್ನಡ ಭಾಷೆಯ ಮೇಲಿನ ಅಭಿಮಾನವನ್ನು ಸದಾಕಾಲ ನಮ್ಮ ಮನದಲ್ಲಿ ಉಳಿಸಿಕೊಂಡಿರಬೇಕು. ನವೆಂಬರ್ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವದ ರಂಗು ಎಲ್ಲೆಡೆ ತುಂಬಿರುವುದನ್ನು ನಾವು ಕಾಣುತ್ತೇವೆ. ಇಂದು ಇಲ್ಲಿ ಆ ರಂಗಿನೊ0ದಿಗೆ ವಿದ್ಯಾರ್ಥಿಗಳ ಶಿಸ್ತು ಒಟ್ಟುಗೂಡಿ ಮತ್ತಷ್ಟು ಸೊಗಸು ತುಂಬಿದೆ. ವಿದ್ಯಾವಾಹಿನಿ ಸಂಸ್ಥೆಯ ವಿದ್ಯಾರ್ಥಿಗಳು ಶಿಸ್ತಿಗೆ ಹೆಸರುವಾಸಿ ಎಂಬ ಮಾತನ್ನು ಮತ್ತೊಮ್ಮೆ ಸಾಭೀತು ಪಡಿಸಿದ್ದೀರಿ, ನಿಮ್ಮ ಬದುಕಿನುದ್ದಕ್ಕು ಶಿಸ್ತು ಬೆಳೆಸಿಕೊಂಡು ನಡೆಯಿರಿ. ಕನ್ನಡ ಭಾಷೆ ಉಳಿಸಿ, ಬೆಳೆಸುವ ಕಾರ್ಯಗಳು ನಿಮ್ಮಿಂದ ಸಾಗಲಿ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ೭೦ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕಾಲೇಜಿನ ಕನ್ನಡ ವಿಭಾಗದ ಕನ್ನಡ ಕೌಸ್ತುಭ ಬಳಗದ ಅಂಗವಾಗಿ ಹಲವು ಸ್ಪರ್ಧೆಗಳನ್ನು…
ಕೊರಟಗೆರೆ: ತಾಲೂಕಿನ ಕಸಬಾ ವಿಎಸ್ಎಸ್ಎನ್ ಅಧ್ಯಕ್ಷ ವಿನಯ್ಕುಮಾರ್ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆದಿದ್ದು ಚುನಾವಣೆಯಲ್ಲಿ ಗುಂಡಿನಪಾಳ್ಯ ಜಿ.ಸಿ ರಮೇಶ್ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ. ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ನಿಗಧಿತ ಸಮಯದಲ್ಲಿ ಪ್ರತಿ ಸ್ಪರ್ಧಿಯಾಗಿ ಯಾರು ಕೂಡ ನಾಮಪತ್ರ ಸಲ್ಲಿಸದ ಕಾರಣ ನೂತನ ಅಧ್ಯಕ್ಷರಾಗಿ ರಮೇಶ್ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ವಿ.ಎಸ್ ಗುರುರಾಜ್ ಅಧಿಕೃತ ಘೋಷಣೆ ಮಾಡಿದರು. ವಿಎಸ್ಎಸ್ನ್ ನೂತನ ಅಧ್ಯಕ್ಷ ಜಿ.ಸಿ ರಮೇಶ್ ಮಾತನಾಡಿ, ಸರ್ವ ಸದಸ್ಯರ ಒಗ್ಗಟ್ಟಿನಿಂದ ನಾನು ನೂತನವಾಗಿ ಕಸಬಾ ವಿಎಸ್ಎಸ್ಎನ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದೇನೆ. ಮಾನ್ಯ ಗೃಹ ಸಚಿವರಾದ ಡಾ.ಜಿ ಪರಮೇಶ್ವರ್ ರವರ ಆದೇಶದಂತೆ ಮಾಜಿ ಸಹಕಾರ ಸಚಿವರು ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್ ರಾಜಣ್ಣ ರವರ ಮಾರ್ಗದರ್ಶನದಲ್ಲಿ ಉತ್ತಮ ಕೆಲಸಗಳನ್ನು ಮಾಡುತ್ತೇನೆ ಎಂದರು. ವಿಎಸ್ಎಸ್ಎನ್ ಮಾಜಿ ಅಧ್ಯಕ್ಷ ವಿನಯ್ಕುಮಾರ್ ಮಾತನಾಡಿ, ಅಡಳಿತ ಮಂಡಳಿಯ ಸರ್ವ ಸದಸ್ಯರ ಒಗ್ಗಟ್ಟಿನಿಂದ ರಮೇಶ್ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ. ಮುಂಬರುವ ದಿನಗಳಲ್ಲಿ ರೈತರಿಗೆ ವಿನೂತನ ಮಾದರಿಯಲ್ಲಿ ಸಾಲ…
ತುಮಕೂರು: ಕರ್ನಾಟಕ ಗಣಿ ಪರಿಸರ ಪುನಃಶ್ಚೇತನ ನಿಗಮದಿಂದ ಪರಿಸರ ಗಣಿಗಾರಿಕೆ ಪ್ರಭಾವ ವಲಯಕ್ಕಾಗಿ ಸಮಗ್ರ ಪರಿಸರ ಯೋಜನೆಯಡಿ ಜಿಲ್ಲೆಯ ಗಣಿಬಾಧಿತ ತಾಲ್ಲೂಕುಗಳಾದ ಚಿಕ್ಕನಾಯಕನಹಳ್ಳಿ, ಗುಬ್ಬಿ ಹಾಗೂ ತಿಪಟೂರು ತಾಲ್ಲೂಕುಗಳಲ್ಲಿ ೧ನೇ ತರಗತಿಯಿಂದ ೧೦ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಠಿಕ ಆಹಾರವನ್ನು ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ. ಜಿಲ್ಲೆಯ ೯೭೭ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಆರೋಗ್ಯದ ಹಿತದೃ ಷ್ಟಿಯಿಂದ ಪೌಷ್ಠಿಕ ಆಹಾರವನ್ನು ವಿತರಿಸಲಾಗುತ್ತಿದೆ. ಮಕ್ಕಳಲ್ಲಿ ಅಪೌಷ್ಠಿಕತೆ, ರಕ್ತಹೀನತೆ ಮತ್ತು ಬಹು ಪೋಷಕಾಂಶಗಳ ನ್ಯೂನತೆಯಿಂದ ಉಂಟಾಗಿರುವ ಅನಾರೋಗ್ಯಕರ ಪರಿಸ್ಥಿತಿಯನ್ನು ಸುಧಾರಿಸಲು ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಯನ್ನು ಸುಧಾರಿಸಲು ಪೌಷ್ಠಿಕ ಆಹಾರ ಒದಗಿಸಲು ಯೋಜಿಸಲಾಗಿದೆ. ಪರಿಸರ ಗಣಿಗಾರಿಕೆ ಪ್ರಭಾವ ವಲಯಕ್ಕಾಗಿ ಸಮಗ್ರ ಪರಿಸರ ಯೋಜನೆಯಡಿ ಜಿಲ್ಲೆಯ ೯೭೭ ಸರ್ಕಾರಿ ಶಾಲೆಗಳ ೩೭೦೪೧ ವಿದ್ಯಾರ್ಥಿಗಳಿಗೆ ವಾರದ ೫ ದಿನಗಳು ಪೂರಕ ಪೌಷ್ಠಿಕ ಆಹಾರ ಒದಗಿಸಲಾಗುತ್ತಿದ್ದು, ಮಕ್ಕಳಿಗೆ ಪ್ರತಿ ಸೋಮವಾರ ಹಾಗೂ ಗುರುವಾರ ಕಡಲೇಕಾಳು ಉಸುಲಿ, ಮಂಗಳವಾರ ಹಾಗೂ ಶುಕ್ರವಾರ ಹೆಸರುಕಾಳು ಉಸುಲಿ,…










